tag:blogger.com,1999:blog-5939841257923965225.post1725158726327609136..comments2024-02-29T07:14:52.690+05:30Comments on ಸಲ್ಲಾಪ: ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪsunaathhttp://www.blogger.com/profile/13386371953472087631noreply@blogger.comBlogger63125tag:blogger.com,1999:blog-5939841257923965225.post-1406598016555519022010-11-13T19:24:40.963+05:302010-11-13T19:24:40.963+05:30"..ಭಾರತೀಯರಲ್ಲಿರುವ ಈ ಲಕ್ಷಣವನ್ನು ಅನುಲಕ್ಷಿಸಿಯೇ, ..."..ಭಾರತೀಯರಲ್ಲಿರುವ ಈ ಲಕ್ಷಣವನ್ನು ಅನುಲಕ್ಷಿಸಿಯೇ, ಅಮರ್ತ್ಯಸೇನರು ‘The Argumentative Indian' ಬರೆದಿದ್ದಾರೆ..."<br /><br />ಇಲ್ಲಿ ಇದರ ಬಗ್ಗೆ ಹೇಳಲೇಬೇಕನಿಸುತ್ತಿದೆ. ಈ ’Argumentative Indian' ಹೊತ್ತಗೆಯಲ್ಲಿ ಒಂದೇ ಒಂದು ವಿಶಯವಾದರೂ ತೆಂಕಣ ಭಾರತದವರ ಬಗ್ಗೆ ಇದಿಯೇ? ನಾನೂ ಓದಿದ್ದೇನೆ. ಕನ್ನಡಿಗರಲ್ಲಿ ಒಬ್ಬರಾದರೂ ’Argumentative Indian' ಸೇನರಿಗೆ ಕಾಣಲಿಲ್ಲವೆ?<br />ಅದನ್ನು ’Argumentative North Indian' ಅನ್ನಬಹುದೇನೊ? <br /><br />-ಹದುಳವಿರಲಿ,<br />ಬರತ್Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-79532290982262578572010-10-26T22:54:58.644+05:302010-10-26T22:54:58.644+05:30ಸೀತಾರಾಮರೆ,
ನಿಮ್ಮ ಸ್ಪಂದನಕ್ಕೆ ಯಾವಾಗಲೂ ಸ್ವಾಗತ. ಅನಂತಮೂ...ಸೀತಾರಾಮರೆ,<br />ನಿಮ್ಮ ಸ್ಪಂದನಕ್ಕೆ ಯಾವಾಗಲೂ ಸ್ವಾಗತ. ಅನಂತಮೂರ್ತಿ ಹಾಗು ಭೈರಪ್ಪನವರ ತುಲನೆಯನ್ನು ಈ ಲೇಖನದಲ್ಲಿ ಮಾಡಿದ್ದು ಅಪ್ರಸ್ತುತವಾಗಿರಬಹುದು. ಆದರೆ, ಅನೇಕ ಕಾರಣಗಳಿಗಾಗಿ ಈ ತುಲನೆ ಅವಶ್ಯಕ. ಅದಕ್ಕಾಗಿಯೇ ಒಂದು ಪ್ರಬಂಧರಚನೆಯ ಅವಶ್ಯಕತೆ ಇದೆ ಎಂದು ಅನ್ನಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16861418515590372812010-10-26T21:22:35.818+05:302010-10-26T21:22:35.818+05:30ತಮ್ಮ ಲೇಖನ ತಡವಾಗಿ ಓದಿದ್ದಕ್ಕೆ ಬೇಜಾರಿಲ್ಲ. ಪ್ರಿಕ್ರಿಯೆಗ...ತಮ್ಮ ಲೇಖನ ತಡವಾಗಿ ಓದಿದ್ದಕ್ಕೆ ಬೇಜಾರಿಲ್ಲ. ಪ್ರಿಕ್ರಿಯೆಗಳು ಮತ್ತು ಅದಕ್ಕೆ ತಮ್ಮ ಮರುಪ್ರತಿಕ್ರಿಯೆಗಳು ನಮ್ಮನ್ನು ತುಂಬಾ ವಿಷಯವನ್ನೂ ತಿಳಿದುಕೊಳ್ಳುವಂತೆ ಮಾಡಿದವು.<br /><br />ಭೈರಪ್ಪನವರು ಒಬ್ಬ ಅಧ್ಯಯನಶೀಲ ಸಾಹಿತಿ ಎನ್ನುವದರಲ್ಲಿ ಸಂದೇಹವಿಲ್ಲ -ಅವರ ಪುಸ್ತಕಗಳು ಮಾರಾಟವಾಗುವ ಪರಿ ಮತ್ತು ವಿಷಯ ಮ೦ಥನಗಳೇ ಅದರ ಮಾನದಂಡ.<br />ವಿಷಯ ಒಪ್ಪುವದು ಬಿಡುವದು ಅದು ಅವರವರ ನ೦ಬಿಕೆಗಳಿಗೆ ಒಳಗಾದ ಕ್ರಿಯೆ.<br /><br />ಅನ೦ತಮೂರ್ತಿಯವರ ಹೋಲಿಕೆ ಇಲ್ಲಿ ಅಪ್ರಸ್ತುತವೆನಿಸಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-49177299329405496932010-10-25T10:29:03.485+05:302010-10-25T10:29:03.485+05:30ಶಿವು,
ಈ ಎರಡೂ ಕಾದಂಬರಿಗಳನ್ನು ತುಲನಾತ್ಮಕವಾಗಿ ಓದುವದು ಒಂ...ಶಿವು,<br />ಈ ಎರಡೂ ಕಾದಂಬರಿಗಳನ್ನು ತುಲನಾತ್ಮಕವಾಗಿ ಓದುವದು ಒಂದು ರೋಚಕ ವಿಷಯವಾಗುತ್ತದೆ. Go ahead!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12755176536705930882010-10-25T08:50:13.493+05:302010-10-25T08:50:13.493+05:30ಸುನಾಥ್ ಸರ್,
ಬೈರಪ್ಪನವರ ಕಾದಂಬರಿ ವಂಶವೃಕ್ಷ ಮತ್ತು ಅನಂತ...ಸುನಾಥ್ ಸರ್,<br /><br />ಬೈರಪ್ಪನವರ ಕಾದಂಬರಿ ವಂಶವೃಕ್ಷ ಮತ್ತು ಅನಂತ ಮೂರ್ತಿಯವರ ಸಂಸ್ಕಾರದ ಬಗ್ಗೆ ಒಂದು ಪುಟ್ಟ ಅವಲೋಕನವನ್ನು ಮಾಡಿದ್ದೀರಿ. ಎರಡನ್ನು ನಾನು ಓದಿಲ್ಲವಾದ್ದರಿಂದ ಅದರ ಬಗ್ಗೆ ನಾನು ಮಾತಾಡುವುದು ಸರಿಯಲ್ಲವೆನಿಸುತ್ತದೆ..ನಿಮ್ಮ ವಿಶ್ಲೇಷಣೆಯಿಂದಾಗಿ ಒಂದಷ್ಟು ವಿಚಾರಗಳು ತಿಳಿಯುತ್ತವೆ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-77042180386352270742010-10-23T09:56:28.477+05:302010-10-23T09:56:28.477+05:30ಅನಾಮಿಕಾ ಅವರೆ,
ವೈಚಾರಿಕ ಕ್ಷೇತ್ರದಲ್ಲಿ ಘರ್ಷಣೆ ಇರುವದೇ ಒ...ಅನಾಮಿಕಾ ಅವರೆ,<br />ವೈಚಾರಿಕ ಕ್ಷೇತ್ರದಲ್ಲಿ ಘರ್ಷಣೆ ಇರುವದೇ ಒಳ್ಳೆಯದಲ್ಲವೆ? ಭಾರತೀಯರಲ್ಲಿರುವ ಈ ಲಕ್ಷಣವನ್ನು ಅನುಲಕ್ಷಿಸಿಯೇ, ಅಮರ್ತ್ಯಸೇನರು ‘The Argumentative Indian' ಬರೆದಿದ್ದಾರೆ. ವೇದಕಾಲದಲ್ಲಿ, ಬುದ್ಧ ಕಾಲದಲ್ಲಿ ಭಾರತದಲ್ಲಿ ಬರೆಯಲಾದ theologic ತಿಕ್ಕಾಟದ ಗ್ರಂಥಗಳ ಪ್ರಮಾಣವನ್ನು ನೋಡಿದರೆ ಆಶ್ಚರ್ಯವಾಗುವಂತಿದೆsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58566476742754783662010-10-23T00:51:53.804+05:302010-10-23T00:51:53.804+05:30ಮಂಜುನಾಥರೆ, ನನ್ನ ಅಭಿಪ್ರಾಯ ನಿಮ್ಮ ಮನಸ್ಸಿಗೆ ನೋವುಂಟು ಮಾ...ಮಂಜುನಾಥರೆ, ನನ್ನ ಅಭಿಪ್ರಾಯ ನಿಮ್ಮ ಮನಸ್ಸಿಗೆ ನೋವುಂಟು ಮಾಡಿತೆಂದು ಭಾಸವಾಗುತ್ತದೆ. ನನ್ನ ನಿಷ್ಟುರತೆಗೆ ಕ್ಷಮೆ ಇರಲಿ. ಆದರೆ, ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲಿ ‘ಮೌಲ್ಯಾಧಾರಿತ ವಿಮರ್ಶೆ’ ಇಲ್ಲವೇ ಇಲ್ಲ ! ಬಹುತೇಕ ವಿಮರ್ಶೆಗಳ ಹಿಂದೆ ರಾಜಕೀಯ, ಸ್ವಯಂಪ್ರತಿಷ್ಠೆ, ಅಹಂಭಾವ ಮುಂತಾದವು ಇವೆ.ಅನಾಮಿಕಾnoreply@blogger.comtag:blogger.com,1999:blog-5939841257923965225.post-85696351702576663802010-10-22T22:02:59.499+05:302010-10-22T22:02:59.499+05:30ಕುಸು ಅವರೆ,
ಒಂಟಿಯಾಗಿ ನಿಂತು ಹೋರಾಡುವ ಈ ಧೋರಣೆಯೇ ಭೈರಪ್ಪ...ಕುಸು ಅವರೆ,<br />ಒಂಟಿಯಾಗಿ ನಿಂತು ಹೋರಾಡುವ ಈ ಧೋರಣೆಯೇ ಭೈರಪ್ಪನವರನ್ನು ಜನಪ್ರಿಯ ಮಾಡಿದೆ ಎನ್ನಬಹುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14104983569789690942010-10-22T18:01:03.223+05:302010-10-22T18:01:03.223+05:30ಒ೦ದು ಒಳ್ಳೆಯ ಬ್ಲಾಗ್ ಗೆ ತಡವಾಗಿ ಬ೦ದದ್ದಕ್ಕೆ ಬೇಸರವಿದೆ.ಓ...ಒ೦ದು ಒಳ್ಳೆಯ ಬ್ಲಾಗ್ ಗೆ ತಡವಾಗಿ ಬ೦ದದ್ದಕ್ಕೆ ಬೇಸರವಿದೆ.ಓದಿದ್ದಕ್ಕೆ ಸ೦ತೋಷವಿದೆ.ನನಗನ್ನಿಸಿದ೦ತೆ ಭೈರಪ್ಪನವರ ಕಾದ೦ಬರಿಗಳು ನಮ್ಮ ಆಶಯ ಮತ್ತು ಮನೋಸ್ತಿತಿಗನುಸಾರವಾಗಿ ಅರ್ಥವನ್ನು ಪಡೆಯುತ್ತದೆ.ಇರುವುದನ್ನು ಹೇಳದೇ ಉಳಿದವರ ಮದ್ಯೆ ಭೈರಪ್ಪನವರು ಹೇಳುವ ಧೈರ್ಯ ಮಾಡುತ್ತಾರೆ.ಅಭಿನ೦ದನೆಗಳು.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-5939841257923965225.post-80997752650190441502010-10-18T02:55:19.087+05:302010-10-18T02:55:19.087+05:30ಅನಾಮಿಕರೇ, ಸಾಹಿತ್ಯವಿಮರ್ಶೆಯ ಈ ಹೊಸ ಮಾನದಂಡ ಸುಲಭವಾಗಿ ಸರ...ಅನಾಮಿಕರೇ, ಸಾಹಿತ್ಯವಿಮರ್ಶೆಯ ಈ ಹೊಸ ಮಾನದಂಡ ಸುಲಭವಾಗಿ ಸರಳವಾಗಿದ್ದು ಎದೆ ಮುಟ್ಟುವಂತಿದೆ. ಇಷ್ಟಕ್ಕೂ ಹೃದಯ ಕೆಲಸಮಾಡುವ ಕಡೆ ಬುದ್ಧಿಗೇನು ಕೆಲಸ.<br /><br />ತಾವು ತಿಳಿಸಿಕೊಟ್ಟ ಪದ್ಯವನ್ನು ಹುಡುಕಿ ಓದುತ್ತೇನೆ. ಧನ್ಯವಾದಗಳು.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-5428282253900316102010-10-17T22:36:56.294+05:302010-10-17T22:36:56.294+05:30ಶ್ರೀ ಮಂಜುನಾಥರಿಗೆ ವಂದನೆಗಳು.
ನನ್ನ ಅಭಿಪ್ರಾಯದಲ್ಲಿ, ಬು...ಶ್ರೀ ಮಂಜುನಾಥರಿಗೆ ವಂದನೆಗಳು.<br /><br />ನನ್ನ ಅಭಿಪ್ರಾಯದಲ್ಲಿ, ಬುದ್ಧಿವಂತ್ರೆನಿಸಿಕೊಂಡ ಅಥವಾ ತಮ್ಮನ್ನು ತಾವೇ ಬುದ್ಧಿಜೀವಿ ಎಂದುಕೊಂಡ ೬-೮ ಜನ ಕಾದಂಬರಿಯನ್ನು ಓದಿ, ತಮ್ಮ-ತಮ್ಮ ಯೋಗ್ಯತೆಗನುಸಾರವಾಗಿ ಬರೆದ ವಿಮರ್ಶೆಗಿಂತ, ಲಕ್ಷಾಂತರ ಜನ, ಬೆವರಿಳಿಸಿ ಗಳಿಸಿದ ಹಣ ಕೊಟ್ಟು ಕಾದಂಬರಿಯನ್ನು ಕೊಂಡು, ಅಪ್ರತ್ಯಕ್ಷವಾಗಿ ಕಾದಂಅರಿಯ ಬಗ್ಗೆ ತೋರಿದ ಮೆಚ್ಚಿಕೆ ಹೆಚ್ಚಿನ ಮಹತ್ವದ್ದು. ಅದೇ ನಿಜವಾದ ವಿಮರ್ಶೆ ! ನೀವು ನನ್ನ ಅಭಿಪ್ರಾಯವನ್ನು ಒಪ್ಪದೇ ಇರಬಹುದು. ಆದರೆ, ಅದರಿಂದ ಭೈರಪ್ಪನವರಿಗಾಗಲಿ, ಅವರ ಕಾದಂಬರಿಗಳಿಗಾಗಲೀ ಯಾವದೇ ಏನೂ ವ್ಯತ್ಯಾಸವಾಗುವದಿಲ್ಲ. "ಚೋರ ನಿಂದಿಸಿ ಶಶಿಯ ಬೈದರೆ..." ಎಂಬ ಕುಮಾರವ್ಯಾಸನ ಪ್ರಸಿದ್ಧ ಪದ್ಯವನ್ನು ನೀವು ಓದಿರಬಹುದು ಎಂದುಕೊಳ್ಳುತ್ತೇನೆ.ಅನಾಮಿಕಾnoreply@blogger.comtag:blogger.com,1999:blog-5939841257923965225.post-10817527290164900182010-10-17T22:15:20.024+05:302010-10-17T22:15:20.024+05:30ಭೈರಪ್ಪನವರು ಸ್ತ್ರೀ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದ ಸ್ತ್...ಭೈರಪ್ಪನವರು ಸ್ತ್ರೀ ವಿರೋಧಿ ಎಂದು ಹಣೆಪಟ್ಟಿ ಕಟ್ಟಿದ ಸ್ತ್ರೀಯರ ಕೌಟುಂಬಿಕ, ಸಾಮಾಜಿಕ ಮತ್ತು ವೈಯುಕ್ತಿಕ ಪೂರ್ವಾಪರಗಳನ್ನು ಕುಲಂಕೂಷವಾಗಿ ನೋಡಿದರೆ ಅವರ ಅಭಿಪ್ರಾಯದ ಸತ್ಯಾಸತ್ಯತೆ ಅರ್ಥವಾಗುವದು ! ಬೇರೆ ವಿವರ್ನೇ ಅನಗತ್ಯವೆಂದು ನನ್ನ ಅಭಿಪ್ರಾಯ.ಶ್ರೀನಿವಾಸ ಮ. ಕಟ್ಟಿ, ಡಬ್ಲಿನ್, ಓಹೈಒ, ಅಮೆರಿಕnoreply@blogger.comtag:blogger.com,1999:blog-5939841257923965225.post-26771707250099692862010-10-17T21:39:37.338+05:302010-10-17T21:39:37.338+05:30ಮಂಜುನಾಥ,
ನಿಮ್ಮ blogನಲ್ಲಿ ನಿಮ್ಮ ವಿಮರ್ಶೆಯನ್ನು ಓದಿದೆ....ಮಂಜುನಾಥ,<br />ನಿಮ್ಮ blogನಲ್ಲಿ ನಿಮ್ಮ ವಿಮರ್ಶೆಯನ್ನು ಓದಿದೆ. ತುಂಬ ಉತ್ತಮವಾದ ಲೇಖನ. ನಾನು ಬಿಟ್ಟ ಅನೇಕ ಅಂಶಗಳನ್ನು ಅಲ್ಲಿ ಪರಿಗಣಿಸಿದ್ದೀರಿ. ಧನ್ಯವಾದಗಳು. ಕೆಲವೊಂದು ಅಂಶಗಳ ಬಗೆಗೆ ನನ್ನ ಸ್ಪಷ್ಟೀಕರಣವನ್ನು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-22638953821523068402010-10-17T21:36:23.716+05:302010-10-17T21:36:23.716+05:30ಮಂಜುನಾಥ,
‘ಪೂರ್ವಾಗ್ರಹ’ ಎಂದರೆ ವಿಷಯಕ್ಕೆ ಸಂಬಂಧಿಸಿರದ ಬಾ...ಮಂಜುನಾಥ,<br />‘ಪೂರ್ವಾಗ್ರಹ’ ಎಂದರೆ ವಿಷಯಕ್ಕೆ ಸಂಬಂಧಿಸಿರದ ಬಾಹ್ಯ ಕಾರಣಗಳಿಂದಾಗಿ, ಮೊದಲೇ ರೂಪಿಸಿಕೊಂಡ ಅಭಿಪ್ರಾಯ. ಸರಿ ತಾನೇ? ಅನಂತಮೂರ್ತಿಯವರ ಬಗೆಗಿನ ನನ್ನ ಅಭಿಪ್ರಾಯವು ಅವರ ಸಾಹಿತ್ಯದ contentನಿಂದಾಗಿ ರೂಪಿತವಾಗಿಲ್ಲ, ಆದರೆ ಸಾಹಿತ್ಯದ styleನಿಂದ ರೂಪಿತವಾಗಿದೆ. ಭೈರಪ್ಪನವರ ಬಗೆಗೂ ಇದೇ ಮಾತನ್ನು ಹೇಳುತ್ತೇನೆ.<br />ಇನ್ನು ಮತ್ತೊಂದು ಸಂಗತಿ ಇದೆ. ನಾವು ಯಾರನ್ನಾದರೂ ತೆಗಳಿದಾಗ, ಅದು ಪೂರ್ವಾಗ್ರಹವೆನಿಸುವ ಸಾಧ್ಯತೆ. ನಾನು ಅನಂತಮೂರ್ತಿಯವರನ್ನು, ಭೈರಪ್ಪನವರನ್ನು ಹಾಗು ಕುವೆಂಪುರವರನ್ನು ಸಹ ಕಟುವಾಗಿ ಟೀಕಿಸಿದ್ದೇನೆ. ಬೇಂದ್ರೆಯವರನ್ನು ಇಲ್ಲಿಯವರೆಗೂ ಟೀಕಿಸಿಲ್ಲ. ಆದರೆ ಯಾವತ್ತಾದರೂ ಅವರ ಸಾಹಿತ್ಯದ ಅವಗುಣಗಗಳನ್ನೂ ಟೀಕಿಸಬಹುದು.<br />ಸಮಸ್ಯೆ ಎಂದರೆ, blogನಲ್ಲಿ ಸಮಗ್ರ ವಿಮರ್ಶೆಗೆ ಸ್ಥಳಾನುಕೂಲತೆ ಆಗಲಾರದು. ಕೆಲವೇ ಅಂಶಗಳನ್ನು ಬರೆಯವದರಿಂದ ‘ಪೂರ್ವಾಗ್ರಹ’ದ ಭಾಸವಾಗುವದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11108416809181510772010-10-17T16:34:37.507+05:302010-10-17T16:34:37.507+05:30ಸುನಾಥ ಕಾಕಾ,
ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತ...ಸುನಾಥ ಕಾಕಾ,<br /><br />ಭೈರಪ್ಪನವರ ಬಗೆಗಿನ ಚರ್ಚೆಯಲ್ಲಿ ಅನಂತಮೂರ್ತಿಯ ಪ್ರಸ್ತಾಪ ಬರಬೇಕಾದ ಯಾವುದೇ ಸಾಹಿತ್ಯಕ ಕಾರಣಗಳೂ ನನಗಂತೂ ಕಾಣುವುದಿಲ್ಲ. ಇಬ್ಬರ ಬರಹಗಳ ದಿಕ್ಕು ದೆಸೆಗಳು ನೀತಿ-ನಿಲುವುಗಳು, ಸೊಗಸುಗಳು ಬೇರೆಯೇ. <br /><br />ಇನ್ನು specific ಆಗಿ "ಸಂಸ್ಕಾರ"ದ ಬಗ್ಗೆ ಮಾತಾಡುವುದಾದರೆ, ಸಂಸ್ಕಾರದ ಕತೆ ಅಥವ ಅದರ "ಒಳಕತೆ"ಯಲ್ಲಿ, ಹಾಗೆ ಅದನ್ನು ಬಳಸುವ ತಂತ್ರಗಾರಿಕೆಯಲ್ಲಿ ತಾವು ಹೇಳುವ ದೂರ್ತತನವಾಗಲೀ ಅಥವ ಆ ದೂರ್ತತನ ಮಾಡುವ ಅಗತ್ಯವಾಗಲೀ ಕಾಣಬರುವುದಿಲ್ಲ. ಕತೆಯ ರೀತಿಯೇ ಅದಲ್ಲವೇ? ಹೇಳುವುದನ್ನು ಸಾಫ ಸೀದಾ ಹೇಳಿಬಿಟ್ಟರೆ ಅದು ಕತೆಯಾಗುವುದಿಲ್ಲ, ಬದಲಿಗೆ ಲೇಖನವೋ ಭಾಷಣವೋ ಇನ್ನೇನೋ ಆಗುವುದು, ಅಲ್ಲವೇ? ಆದರೆ ಇಲ್ಲಿ ಕತೆಗಾರನ ಉದ್ದೇಶ ಇದನ್ನು ಲೇಖನವೋ ಭಾಷಣವೋ ಆಗಿಸುವುದಲ್ಲ, ಬದಲಿಗೆ ಕತೆಯಾಗಿಯೇ ಉಳಿಸಿಕೊಳ್ಳುವುದು. ಮತ್ತು ಇದರಲ್ಲಿ ದೂರ್ತತನವನ್ನು ಆರೋಪಿಸುವ ಮೊದಲು ಸಂಸ್ಕಾರದ ಕತೆ ಬಂದ ಕಾಲಘಟ್ಟವನ್ನು ಗಮನಿಸಬೇಕು. ಅವತ್ತಿನ ಸಮಾಜ ಇವತ್ತಿನಷ್ಟು ಲಿಬರಲ್ ಆಗಿರಲಿಲ್ಲ. ಸಂಸ್ಕಾರದ "ಪ್ರತಿಭಟನೆ" ಅವತ್ತಿನ ಕಾಲಘಟ್ಟಕ್ಕಂತೂ ಖಂಡಿತಾ ಪ್ರಸ್ತುತವಾಗಿತ್ತು. ವ್ಯವಸ್ಥೆಯೇ ಬಲವಾಗಿದ್ದಾಗ ಅದರ ಬಗೆಗಿನ ಪ್ರತಿಭಟನೆ "ಲೇವಡಿ"ಯೆನ್ನಿಸಿಕೊಳ್ಳುವುದೇ? ಆದರೆ ಇವತ್ತು ಕಾಲ ಬದಲಾಗಿದೆ. ಸಮಾಜ ಹೆಚ್ಚು ಲಿಬರಲ್ ಆಗಿದೆ, ವ್ಯವಸ್ಥೆ ಮೊದಲಿನಷ್ಟು ಬಲವಾಗಿಲ್ಲ. ಆದ್ದರಿಂದ ಅದೇ ಕತೆ ಇವತ್ತಿನ ಕಾಲಘಟ್ಟದಲ್ಲಿ ಬಂದರೆ, ಬದಲಾದ ಬ್ರಾಹ್ಮಣ ಸಮಾಜದ ಹಿನ್ನೆಯಲ್ಲಿ ಅನಂತಮೂರ್ತಿಯವರ ಅಂಥ ಪ್ರಯತ್ನ ದೂರ್ತತನವೂ ಬ್ರಾಹ್ಮಣ ಸಮಾಜದ ಲೇವಡಿಯೂ ಖಂಡಿತ ಆಗುತ್ತಿತ್ತು, ಆದರೆ ಸಂಸ್ಕಾರದ ಅವತ್ತಿನ ಕಾಲಘಟ್ಟದಲ್ಲಿ ಅಲ್ಲ.<br /><br />ಇದರ ಅರ್ಥ ಅನಂತಮೂರ್ತಿಯವರ ಇಂದಿನ ಅನೇಕ ಸಾಹಿತ್ಯೇತರ ಸಾಮಾಜಿಕ ನಿಲುವುಗಳಲ್ಲಿ ದೂರ್ತತನವಿಲ್ಲವೆಂದಲ್ಲ, ಅದನ್ನು ನಾನು ಸಮರ್ಥಿಸುತ್ತೇನೆಂದೂ ಅಲ್ಲ. ಅವರ "ಅಲ್ಪಸಂಖ್ಯಾತ" ಧ್ವನಿಯನ್ನು ತಾತ್ವಿಕವಾಗಿ ನಾನು ಸಮರ್ಥಿಸಿದರೂ ಅದು ಅತಿರೇಕಕ್ಕೆ ಹೋದಾಗೆಲ್ಲಾ ಕಟುವಾಗಿ ವಿರೋಧಿಸಿದವರಲ್ಲಿ ನಾನೂ ಒಬ್ಬ. ಆದರೂ ವ್ಯಕ್ತಿಯೊಬ್ಬನಿಗೆ ಸಾರಾಸಗಟಾಗಿ ದೂರ್ತ/ಸರಳ ಎಂಬ ಹಣೆಪಟ್ಟಿ ಹಚ್ಚುವುದಾಗಲೀ ಆ "ದೂರ್ತತನ/ಸರಳತೆ"ಗಳನ್ನು ಅವನ ಎಲ್ಲಾ (ಕಾಲಘಟ್ಟಗಳ) ಬರವಣಿಗೆಗೂ ಸಾರಾಸಗಟಾಗಿ ಅನ್ವಯಿಸುವುದು ಸಾಹಿತ್ಯಕ್ಕೆ, ಸೃಜನಶೀಲತೆಗೆ ಅಪಚಾರವಲ್ಲವೇ?<br /><br />ತಮ್ಮದು ವಿಚಾರಪ್ರಚೋದಕ ಲೇಖನ. ಇದಕ್ಕೆ ನಾನು ಹಾಕಹೊರಟ ಕಾಮೆಂಟು ತೀರ ಉದ್ದವಾಗಿ, ಅದೊಂದು ಲೇಖನವೇ ಆದದ್ದರಿಂದ ಅದನ್ನು ಇಲ್ಲಿ ಹಾಕಲು ಆಗದೇ ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಅದು ಇಲ್ಲಿದೆ: http://nannabaraha.blogspot.com/2010/10/blog-post.htmlManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-40444313068448982702010-10-17T16:22:30.725+05:302010-10-17T16:22:30.725+05:30@ ಅನಾಮಿಕಾ,
ಜನಪ್ರಿಯತೆಯ ಆಧಾರದ ಮೇಲೆ ಕೃತಿಯೊಂದರ ಮೌಲ್ಯಮ...@ ಅನಾಮಿಕಾ,<br /><br />ಜನಪ್ರಿಯತೆಯ ಆಧಾರದ ಮೇಲೆ ಕೃತಿಯೊಂದರ ಮೌಲ್ಯಮಾಪನ ಮಾಡುವುದೇ! ಕೃತಿಯೊಂದನ್ನು ಸ್ವತಃ ಓದಿನೋಡಿ ಗುಣಾವಗುಣಗಳನ್ನು ತೂಗಿ ನೋಡುವ ಬೌದ್ಧಿಕ ಕ್ರಿಯೆಗೆ ಅರ್ಥವೇ ಇಲ್ಲವೇ? ಅಂಥದ್ದೊಂದು ಕ್ರಿಯೆಯ ಫಲ ಕೇವಲ ಜನಾಭಿಪ್ರಾಯದೊಂದಿಗೆ ಹೊಂದುವುದಿಲ್ಲವೆಂದ ಮಾತ್ರಕ್ಕೆ ಅದಕ್ಕೆ ಪೂರ್ವಾಗ್ರಹವೆಂದು ಹೆಸರಿಟ್ಟುಬಿಡಬೇಕೇ? ಪೂರ್ವಾಗ್ರಹವಿಲ್ಲದ ವಿಮರ್ಶೆ ಸಾಧ್ಯವೇ ಆಗುವುದಾದರೆ ಭೈರಪ್ಪನವರ ಬಗ್ಗೆ ಅದನ್ನು ಸುನಾಥರು ಸಾಕಷ್ಟು ಸಮರ್ಥವಾಗಿಯೇ ಮಾಡಿದ್ದಾರೆಂದೇ ನನ್ನ ಅನಿಸಿಕೆ. ಇನ್ನು ಪೂರ್ವಾಗ್ರಹದ ವಿಷಯಕ್ಕೆ ಬಂದರೆ ಅದು ಅವರಿಗೆ ಭೈರಪ್ಪನವರ ಬಗೆಗಿಂತಾ ಅನಂತಮೂರ್ತಿಯವರ ಬಗೆಗೆ ತುಸು ಮಟ್ಟಿಗೆ ಇದೆಯೆಂದು ನನ್ನ ಅನಿಸಿಕೆ. ಇದರ ಬಗ್ಗೆ ಬೇರೆಯೇ ಪ್ರತಿಕ್ರಿಯೆ ಕಾಣಿಸುತ್ತೇನೆ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-18340084419574708852010-10-17T15:45:58.980+05:302010-10-17T15:45:58.980+05:30ಪ್ರಭಾಮಣಿಯವರೆ,
ಲೇಖಕನು ತಾನು ಕಂಡ ಸತ್ಯವನ್ನು ಪ್ರಾಮಾಣಿಕವ...ಪ್ರಭಾಮಣಿಯವರೆ,<br />ಲೇಖಕನು ತಾನು ಕಂಡ ಸತ್ಯವನ್ನು ಪ್ರಾಮಾಣಿಕವಾಗಿ ಬರೆಯಬೇಕೆನ್ನುವದು ಅತ್ಯಂತ ಸತ್ಯವಾದ ಮಾತಾಗಿದೆ. ಭೈರಪ್ಪನವರು ಈ ವಿಷಯದಲ್ಲಿ ಹದಿನಾರಾಣೆ ಪ್ರಾಮಾಣಿಕರು. ಅವರು ಬರೆದಿದ್ದನ್ನು ಕೆಲವರು ಒಪ್ಪಬಹುದು, ಕೆಲವರು ಒಪ್ಪಲಿಕ್ಕಿಲ್ಲ.ಆದರೆ ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75226826184226592862010-10-17T15:41:39.870+05:302010-10-17T15:41:39.870+05:30ಅನಾಮಿಕಾ ನಿಮ್ಮ ಸಲಹೆಗೆ ಧನ್ಯವಾದಗಳು. ಭೈರಪ್ಪನವರ ಬಗೆಗೆ ನ...ಅನಾಮಿಕಾ ನಿಮ್ಮ ಸಲಹೆಗೆ ಧನ್ಯವಾದಗಳು. ಭೈರಪ್ಪನವರ ಬಗೆಗೆ ನನಗೆ ಯಾವ ಪೂರ್ವಾಗ್ರಹವೂ ಇಲ್ಲ. ಭೈರಪ್ಪನವರು ಅನಂತಮೂರ್ತಿಗಿಂತ ಹೆಚ್ಚಿಗೆ ಪ್ರಾಮಾಣಿಕರು ಎನ್ನುವ ನನ್ನ ಅಭಿಪ್ರಾಯವನ್ನು ಇದೇ ಲೇಖನದಲ್ಲಿ ನಾನು ಹೇಳಿದ್ದೇನೆ. ಭೈರಪ್ಪನವರು ಸಾಂಪ್ರದಾಯಕ ಸಂಸ್ಕೃತಿಯ ಪ್ರತಿಪಾದಕರು. ಅದು ಅವರವರ ವಿಚಾರ. ಆದರೆ ಅವರ ಕಾದಂಬರಿಗಳಲ್ಲಿ ‘ಅತಿಗಂಡಸ್ತನ ಭ್ರಮಾವಿಲಾಸ’ ಇದೆ ಎಂದು ನಾನು ಇದೇ ಬ್ಲಾಗಿನಲ್ಲಿ ಉದಾಹರಣೆ ಸಹಿತವಾಗಿ ಬರೆದಿದ್ದೇನೆ. ದಯವಿಟ್ಟು ನೋಡಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-53937414340048393552010-10-17T15:33:21.595+05:302010-10-17T15:33:21.595+05:30ಸತ್ಯಪ್ಪನವರೆ,
ಭೈರಪ್ಪನವರನ್ನು ಪ್ರತಿಗಾಮಿ ಎಂದು ನಾನು ಕರೆ...ಸತ್ಯಪ್ಪನವರೆ,<br />ಭೈರಪ್ಪನವರನ್ನು ಪ್ರತಿಗಾಮಿ ಎಂದು ನಾನು ಕರೆದಿಲ್ಲ. ಹಾಗೆ ಹೆಸರಿಸುವವರು so called ಬುದ್ಧಿಜೀವಿಗಳು. ಭೈರಪ್ಪನವರು ಜನಪ್ರಿಯ ಲೇಖಕರೆಂದು ನಾನು ಅರಿತಿದ್ದೇನೆ. ಅವರ ಜನಪ್ರಿಯತೆಯ ಕಾರಣಗಳನ್ನು ನಾನು ಊಹಿಸಿದಂತೆ, ಈ ಲೇಖನದಲ್ಲಿ ಸೂಚಿಸಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37195571336773553752010-10-17T15:29:44.491+05:302010-10-17T15:29:44.491+05:30ಕಟ್ಟಿಯವರೆ,
ಭೈರಪ್ಪನವರು ಸ್ತ್ರೀವಿರೋಧಿ ಅಲ್ಲ ಎಂದು ನೀವು ...ಕಟ್ಟಿಯವರೆ,<br />ಭೈರಪ್ಪನವರು ಸ್ತ್ರೀವಿರೋಧಿ ಅಲ್ಲ ಎಂದು ನೀವು ಹೇಳುತ್ತೀರಿ. ಆದರೆ ಸ್ತ್ರೀಯರನೇಕರು ಅವರನ್ನು ಸ್ತ್ರೀವಿರೋಧಿ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಸ್ತ್ರೀಯರ ಅಭಿಪ್ರಾಯಕ್ಕೆ ನಾವು weightage ಕೊಡಬೇಕಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9519357641548467442010-10-17T15:26:36.570+05:302010-10-17T15:26:36.570+05:30ವೆಂಕಟಕೃಷ್ಣ,
ಲೋಕೋ ಭಿನ್ನರುಚಿ:. ಒಬ್ಬರಿಗೆ ಒಳ್ಳೆಯದಾಗಿ ಕ...ವೆಂಕಟಕೃಷ್ಣ,<br />ಲೋಕೋ ಭಿನ್ನರುಚಿ:. ಒಬ್ಬರಿಗೆ ಒಳ್ಳೆಯದಾಗಿ ಕಾಣುವದು ಮತ್ತೊಬ್ಬರಿಗೆ ಕೆಟ್ಟದಾಗಿ ಕಾಣಬಹುದು. ಏನೇ ಆದರೂ, ಭೈರಪ್ಪನವರು ಜನಪ್ರಿಯ ಕಾದಂಬರಿಕಾರರು ಎನ್ನುವದರಲ್ಲಿ ಸಂದೇಹವಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-39245877524181673262010-10-17T13:18:02.290+05:302010-10-17T13:18:02.290+05:30ಭೈರಪ್ಪನವರ ಕಾದ೦ಬರಿಗಳ ಒಳ ಸತ್ವದ ಬಗ್ಗೆ ಉತ್ತಮ ನೋಟವನ್ನು ...ಭೈರಪ್ಪನವರ ಕಾದ೦ಬರಿಗಳ ಒಳ ಸತ್ವದ ಬಗ್ಗೆ ಉತ್ತಮ ನೋಟವನ್ನು ನೀಡಿದ್ದೀರಿ ಸರ್,ಧನ್ಯವಾದಗಳು. ಭೈರಪ್ಪನವರು ನಮಗೆ ತತ್ವಸಾಸ್ತ್ರದ ಉಪನ್ಯಾಸಕರಾಗಿದ್ದರು. ಆಳವಾದ ಅಧ್ಯಯನ ಮಾಡಿಯೇ ಅವರು ಕಾದ೦ಬರಿಗಳನ್ನು ಬರೆಯುತ್ತಾರೆ ಎ೦ದು ತಿಳಿದಿದ್ದೀನೆ. ಲೇಖಕ ತಾನು ಕ೦ಡ ಸತ್ಯವನ್ನು ಪ್ರಾಮಾಣಿಕವಾಗಿ ಮೂಡಿಸಿದರೆ ಅದು ಉತ್ತಮ ಲೇಖನವಾಗುವುದರಲ್ಲಿ ಸ೦ಶಯವಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾದರೆ ಓದುಗರಿಗೆ ಮೊಸಮಾಡಿದ೦ತೆ. ಅವರವರ ಭಾವಕ್ಕೆ!prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-26563505617641513802010-10-17T05:52:33.483+05:302010-10-17T05:52:33.483+05:30ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ಈ ವರೆಗೆ ಭೈರಪ್ಪನಂತಹ ಜನಪ...ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ಈ ವರೆಗೆ ಭೈರಪ್ಪನಂತಹ ಜನಪ್ರೀಯ ಕಾದಂಬರಿಕಾರರು ಯಾರಾದರೂ ಆಗಿದ್ದಾರೆಯೆ ? ಯಾರದಾದರೂ ಕಾದಂಬರಿ ಪ್ರಕಟವಾಗಿ ೨-೩ ತಿಂಗಳುಗಳಲ್ಲಿ ೪-೫ ಮರುಮುದ್ರಣ ಕಂಡ ಉದಾಹರಣೆಗಳಿವೆಯೆ ? ಕನ್ನಡದ ಯಾವ ಪುಸ್ತಕ ೨೩ ಮರುಮುದ್ರಣ ಕಂಡಿದೆ ? ಮರು ಮುದ್ರಣವೇ ಕಾದಂಬರಿಯ ಗುಣಾವಗುಣಗಳ ಅಳತೆಗೋಲು ಅಲ್ಲವಾದರೂ, ಜನಪ್ರೀಯತೆಯ ಅಳತೆಗೋಲಂತೂ ನಿಜ. ಜನಪ್ರೀಯತೆಗೆ ಕಾರಣವೇನು ? ಕನ್ನಡದ ಕೋಟಿ-ಕೋಟಿ ಜನ ಭೈರಪ್ಪನವರ ಕಾದಂಬರಿಗಳನ್ನು ಕೊಂಡು ಓದುವದು ಸುಮ್ಮನೆಯೆ ? ಅವರ ಕಾದಂಬರಿಗಳ ಪಾತ್ರಗಳು ಅತ್ಯಂತ ಸ್ಫುಟ ಮತ್ತು ನಿರ್ದಿಷ್ಟ. ಯಾವ ಪಾತ್ರವೂ ವಿನಾಕಾರಣವಲ್ಲ. ನಿಮಗೆ ಭೈರಪ್ಪನವರ್ ಕುರಿತು ಏನೋ ಒಂದು ‘ಪೂರ್ವಗ್ರಹ’ ಇದೆ. ಅದನ್ನು ಪ್ರಾಮಾಣಿಕವಾಗಿ ನಿವಾರಿಸಿಕೊಂಡು ಅವರನ್ನು ಅಭ್ಯಸಿಸಬೇಕೆಂದು ನನ್ನ ಸಲಹೆ.ಅನಾಮಿಕಾnoreply@blogger.comtag:blogger.com,1999:blog-5939841257923965225.post-38492711091968703252010-10-17T05:41:14.402+05:302010-10-17T05:41:14.402+05:30ಭೈರಪ್ಪನವರ ಕಾದಂಬರಿಗಳು ಜನರನ್ನಿ ಇಷ್ಟೊಂದು ಏಕೆ ಮತ್ತು ಹೇ...ಭೈರಪ್ಪನವರ ಕಾದಂಬರಿಗಳು ಜನರನ್ನಿ ಇಷ್ಟೊಂದು ಏಕೆ ಮತ್ತು ಹೇಗೆ ಆಕರ್ಷಿಸುತ್ತವೆ ? ಅವುಗಳಲ್ಲಿ ಎನೋ ಒಂದು ಅಂತಃಸತ್ವ ಇರಲೇಬೇಕಲ್ಲವೆ ? ಆವರನ್ನು ಪ್ರತಿಗಾಮಿ ಎಂದು ಜರೆಯುವದಕ್ಕಿಂತ, ಆ ಅಂತಃಸತ್ವವನ್ನು ಹುಡುಕಿ ಇನ್ನೊಂದು ಲೇಖನ ಬರೆಯಿರಿ. ಅದು ಹೆಚ್ಚು ಸಮಂಜಸವಾದೀತು !ಪ್ರ. ಭೀ. ಸತ್ಯಪ್ಪವರ, ಬೆಂಗಳೂರು.noreply@blogger.comtag:blogger.com,1999:blog-5939841257923965225.post-82895496452983506732010-10-17T05:33:55.196+05:302010-10-17T05:33:55.196+05:30ಭೈರಪ್ಪನವರು ಸ್ತ್ರೀವಿರೋಧಿ ಎಂಬುದು ಬರಿ ಬಯಲಿನಪವಾದ. ಅದರಲ...ಭೈರಪ್ಪನವರು ಸ್ತ್ರೀವಿರೋಧಿ ಎಂಬುದು ಬರಿ ಬಯಲಿನಪವಾದ. ಅದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ ! ಆದರೆ ಆಧುನಿಕತೆಯ ಹೆಸರಿನಲ್ಲಿ, ಸ್ತ್ರೀ ಸ್ವಾತಂತ್ರ ಅಥವಾ ಸ್ತ್ರೀ ವಿಮೋಚನೆಯ ಸೋಗಿನಲ್ಲಿ, ಸಮಾಜದ ಸಮತೋಲನವನ್ನು ಹಾಳುಮಾಡುವದರ ವಿರೋಧವನ್ನು ಭೈರಪ್ಪನವರು ಖಂಡಿತವಾಗಿಯೂ ತಮ್ಮ ಕಾದಂಬರಿಗಳ ಮೂಲಕ ಮಾಡಿದ್ದಾರೆ. ವಿಶಾಲ ದೃಷ್ಟಿಯಿಂದ ನೋಡಿದರೆ, ಸ್ತ್ರೀ ಅಥವಾ ಪುರುಷ ಇಬ್ಬರಿಗೂ ಸಮಾಜ ವ್ಯವ್ಯಸ್ಥೆಯಲ್ಲಿ ಪೂರ್ಣ ಸ್ವಾತಂತ್ರವೆಂಬುದು ಇಲ್ಲ. ಇಬ್ಬರಿಗೂ ಸಮಾಜದ ಕಟ್ಟುಪಾಡುಗಳಿವೆ. ಈ ಕಟ್ಟುಪಾಡುಗಳನ್ನು ಸ್ತ್ರೀ-ಪುರುಷರಲ್ಲಿ ಯಾರೊಬ್ಬರು ಮೀರಿದರೂ, ಸಮಾಜದ ಮತ್ತು ಕುಟುಂಬದ ಸಮತೋಲನ ತಪ್ಪುವದು ಖಂದಿತ. ಇದನ್ನೇ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ವ್ಯಕ್ತ ಮಾಡಿದ್ದಾರೆ.<br /><br />ಸ್ವಯಂ ಘೋಷಿತ ಬುದ್ಧಿಜೀವಿ ಯು.ಆರ್.ಎ.ಮೂರ್ತಿಯವರ ಬಗ್ಗೆ ಬರೆಯುವದು ಗುಡ್ಡಕ್ಕೆ ಕಲ್ಲು ಹೊತ್ತಂತೆ ! ಅವರ ’ಸಂಸ್ಕಾರ’ ಕನ್ನಡದ ಅತ್ಯಂತ ಕಳಪೆ ಕಾದಂಬರಿ. ಅವರಿಂದ ಕನ್ನಡ ಸಾಹಿತ್ಯ ಲೋಕವನ್ನು ದೇವರೇ ಕಾಯಬೇಕು.ಶ್ರೀನಿವಾಸ ಮ. ಕಟ್ಟಿ, Dublin.OH,USAnoreply@blogger.com