tag:blogger.com,1999:blog-5939841257923965225.post4500635882070862948..comments2024-03-30T01:01:49.143+05:30Comments on ಸಲ್ಲಾಪ: ಭೈರಪ್ಪನವರು ಹಾಗು super-male-fantasysunaathhttp://www.blogger.com/profile/13386371953472087631noreply@blogger.comBlogger51125tag:blogger.com,1999:blog-5939841257923965225.post-31860077370783655672019-01-18T02:28:50.877+05:302019-01-18T02:28:50.877+05:30Mandra hopeless novel Anthe😂😁 saraswathi samman ...Mandra hopeless novel Anthe😂😁 saraswathi samman bandirodhu adhe novel ge thane..adesto sahithigalu bariyodhello Bari vikruthigale avrge compare maddhre S l byrappa is the best..Anonymousnoreply@blogger.comtag:blogger.com,1999:blog-5939841257923965225.post-72967881110571807672013-01-05T17:40:56.487+05:302013-01-05T17:40:56.487+05:30ಕನಸು,
ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ನಾಯಕಿ seconda...ಕನಸು,<br />ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ನಾಯಕಿ secondary roleಅನ್ನು ಮಾಡುತ್ತಾಳೆ. ನನಗೆ ಅನ್ನಿಸುವಂತೆ ‘ಸಾರ್ಥ’ ಕಾದಂಬರಿ ಮಾತ್ರ ಒಂದು ಅಪವಾದವಾಗಿದೆ. ಇಲ್ಲಿಯ ನಾಯಕಿಗೆ ಭೈರಪ್ಪನವರು ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅಲ್ಲದೆ ಅವಳು ಏನೆಲ್ಲ ಸಂಕಷ್ಟಗಳನ್ನು ಎದುರಿಸಿದರೂ, ಅವಳ ಮನೋಬಲ ಕುಂದುವುದಿಲ್ಲ. ಆದುದರಿಂದ ಈ ಕಾದಂಬರಿಯನ್ನು ನಾನು ಮೆಚ್ಚಿಕೊಂಡಿದ್ದೇನೆ. ಆದರೆ ಉಳಿದ ಕಾದಂಬರಿಗಳಲ್ಲಿ ಭೈರಪ್ಪನವರು ಹೆಣ್ಣನ್ನು ಚಿತ್ರಿಸುವ ರೀತಿ ನನಗೆ ಮೆಚ್ಚಿಕೆಯಾಗಿಲ್ಲ. ‘ದಾಟು’ ಕಾದಂಬರಿಯಲ್ಲಿ ಸತ್ಯಭಾಮಾಳಿಗೆ ವಿಶೇಷತೆ ಇದ್ದರೂ ಸಹ, ಅದು ಭಾರತೀಯ ಸಂಸ್ಕೃತಿಯನ್ನು ಮೆರಗುಗೊಳಿಸುವದಕ್ಕೆ ಸೀಮಿತವಾಗಿದೆ!<br />ನಿಮ್ಮ ಪ್ರತಿಕ್ರಿಯಾತ್ಮಕ ಚರ್ಚೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75477805604080282512013-01-05T15:18:18.244+05:302013-01-05T15:18:18.244+05:30ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.ಆದರೆ,ಈ ಲೇಖನ ಓ...ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.ಆದರೆ,ಈ ಲೇಖನ ಓದಿದ್ದೇ ಈಗ. <br />ನೀವು ಬೈರಪ್ಪನವರ ಕೆಲವು ಕಾದಂಬರಿಗಳನ್ನು ಮಾತ್ರ ಇಲ್ಲಿ ವಿಮರ್ಶೆಗಾಗಿ ಬಳಸಿದ್ದೀರಿ. ನಿಮ್ಮ ಈ ವಿಮರ್ಶೆ ಎರಡು ಅಥವಾ ಮೂರು ಕಾದಂಬರಿಗಳ ಮಟ್ಟಿಗೆ ಸರಿ ಎನ್ನಿಸಬಹುದು. ಆದರೆ,ಅವರ ಬಹುತೇಕ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ನಾಯಕಿಯರ ಗಟ್ಟಿತನ ಮತ್ಯಾವ ಲೇಖಕರ ಕಾದಂಬರಿಗಳಲ್ಲೂ ನನಗೆ ಕಂಡು ಬಂದಿಲ್ಲ. ಇಲ್ಲಿ ಯಾಕೋ ಅವರ ದಾಟು ಕೃತಿ ಬಗ್ಗೆ ಮಾತನಾಡಿಲ್ಲ. ನನ್ನ ಮಟ್ಟಿಗಂತೂ ದಾಟುವಿನ ಸತ್ಯಭಾಮ ಕನ್ನಡ ಸಾಹಿತ್ಯ ಲೋಕ ಕಂಡ ಅತ್ಯಂತ ಶಕ್ತಿಶಾಲಿ ಪಾತ್ರಗಳಲ್ಲಿ ಒಂದು. ನಿಮ್ಮ ದೃಷ್ಟಿಕೋನವನ್ನು ಸಂಪೂರ್ಣವಾಗಿ ನಾನು ಅಲ್ಲಗೆಳೆಯದಿದ್ದರೂ,ಅತ್ಯಂತ ಗಟ್ಟಿ ಮಹಿಳಾ ಪಾತ್ರಗಳನ್ನು ನೀಡಿದ ಅವರ ಕಾದಂಬರಿಗಳು ಅಂತರ್ಯದಲ್ಲಿ Soft porn ಎಂಬ ನಿಮ್ಮ ಮಾತು ನಾನು ಒಪ್ಪಲಾರೆ. Having said that, I would like to confess one thing, his recent novels have disappointed me a lot in all aspects.ಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-5939841257923965225.post-66779708453027575652012-03-04T16:47:57.144+05:302012-03-04T16:47:57.144+05:30http://simhasn.blogspot.in/2011/05/article-on-byra...http://simhasn.blogspot.in/2011/05/article-on-byrappas-novels.html<br /><br />-- shree karAnonymousnoreply@blogger.comtag:blogger.com,1999:blog-5939841257923965225.post-91383504506923521902010-12-17T02:10:26.920+05:302010-12-17T02:10:26.920+05:30sunathravare ,
nimma comapritive study mattu analy...sunathravare ,<br />nimma comapritive study mattu analysis tumbane interesting aagide.ಸೋಮಶೇಖರ ಹುಲ್ಮನಿhttps://www.blogger.com/profile/17183236807830950880noreply@blogger.comtag:blogger.com,1999:blog-5939841257923965225.post-68998782444394754952009-02-18T16:01:00.000+05:302009-02-18T16:01:00.000+05:30ನಿಮ್ಮ ವಿಮರ್ಶೆ ಚೆನ್ನಾಗಿದೆ."ಜಲಪಾತ" ಒಂದರಿಂದಲೇ ನಿಮ್ಮ "...ನಿಮ್ಮ ವಿಮರ್ಶೆ ಚೆನ್ನಾಗಿದೆ.<BR/>"ಜಲಪಾತ" ಒಂದರಿಂದಲೇ ನಿಮ್ಮ "ಅಗಭ್ರಾ ವಾದ" ವನ್ನು ಸಮರ್ಥಿಸಲು ಸಾಧ್ಯ. ಹೆಚ್ಚುವರಿಯಾಗಿ ಪಶುವೈದ್ಯನೊಬ್ಬನ ಪಾತ್ರ ಇದನ್ನು ಅಡ್ವೋಕೇಟ್ ಮಾಡುವಂತೆಯೂ ಚಿತ್ರಣವಿದೆ.<BR/>ಒಂದು ಉತ್ತಮ ಬರಹ ಕೊಟ್ಟಿದ್ದಕ್ಕೆ ವಂದನೆಗಳು.<BR/><BR/>ಗುರು ಬಾಳಿಗAnonymoushttps://www.blogger.com/profile/17044049940582979575noreply@blogger.comtag:blogger.com,1999:blog-5939841257923965225.post-27081092532234639222009-01-14T22:46:00.000+05:302009-01-14T22:46:00.000+05:30ನಾನು ಭೈರಪ್ಪನವರ ಬಹುಪಾಲು ಕಾದಂಬರಿಗಳನ್ನೂ, ಪ್ರಬಂಧಗಳನ್ನೂ...ನಾನು ಭೈರಪ್ಪನವರ ಬಹುಪಾಲು ಕಾದಂಬರಿಗಳನ್ನೂ, ಪ್ರಬಂಧಗಳನ್ನೂ ಓದಿದ್ದೇನೆ. <BR/><BR/>ನಿಮ್ಮ ಲೇಖನ ಓದಿ ನಗು ಬಂತು. ನಿಮ್ಮ ವಿಶ್ಲೇಷಣೆ ತುಂಬಾ ತಮಾಷೆಯಾಗಿದೆ. ಸಾರ್ವತ್ರಿಕ - ಭಾರತೀಯ ಎನ್ನುವ ನಿಮ್ಮ ಎರಡು "category" ಗಳು ಹಾಸ್ಯಾಸ್ಪದವಾಗಿದೆ. ಭಾರತೀಯ - ಭಾರತೇತರ ಎಂದು ಹೇಳಿ ಅಥವಾ ಸಾರ್ವತ್ರಿಕವಾಗಿ ಹೇಳಿ ಭಾರತೀಯರ ವಿಶೇಷತೆಯನ್ನು ತಿಳಿಸಿ. ನಿಮ್ಮ "super- male- fantasy" ಪ್ರಮೇಯಕ್ಕೆ ಏನಾದರೂ ವೈಜ್ಞಾನಿಕ ಆಧಾರವಿದೆಯೆ? ಇದು ಯಾವ ಅಂತರಾಷ್ಟೀಯ ಜರ್ನಲ್ನಲ್ಲಿ ಪ್ರಕಟವಾಗಿದೆ? ಇಲ್ಲವಾದರೆ ನೀವೇಕೆ ಪ್ರಕಟಿಸಬಾರದು?<BR/><BR/>"ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು." - ಹೀಗೆ ನಮ್ಮ ಧರ್ಮದಲ್ಲಿ ಎಲ್ಲಿ ಹೇಳಿದೆ? ನಮ್ಮ ಧರ್ಮವು ಗೃಹಸ್ಥಾಶ್ರಮಕ್ಕೆ ಹೆಚ್ಚು ಪ್ರಾಶಸ್ತ್ಯಕೊಟ್ಟಿದೆ. ಮಹಾಭಾರತದ "super hero" ಯಾರು? ಆಜೀವ ಬ್ರಹ್ಮಚಾರಿಯಾಗಿದ್ದ ಭೀಷ್ಮನೋ ಅಥವಾ ಹದಿನೆಂಟು ಸಾವಿರದ ನೂರೆಂಟು ಜನರನ್ನು ಮದುವೆಯಾದ ಕೃಷ್ಣನೋ? (ಮತ್ತೆ ನೀವು ಅಷ್ಟೊಂದು ಜನರನ್ನು ಮದುವೆಯಾಗುವುದು "super- male- fantasy" ಪ್ರಮೇಯವನ್ನು ಸಮರ್ಥಿಸುತ್ತದೆ ಎಂದು ಹೇಳಬೇಕಾಗಿಲ್ಲಾ :P). ಸಾವಿರಾರು ವರ್ಷಗಳಿಂದ ಲಿಂಗ ಪೂಜೆ ಮಾಡುತ್ತಿರುವ ಈ ದೇಶದಲ್ಲಿ ಕಾಮವೆಂದರೆ ಮಹಾಪಾಪ ಎಂಬ ಭಾವನೆ ಇದೆ ಎಂಬಂತೆ ಚಿತ್ರಿಸಿದ್ದೀರಿ. ವಾಸ್ತವದಲ್ಲಿ ಕಾಮವೂ ಪುರುಷಾರ್ಥವೆಂದು ಧರ್ಮವು ಸಾರಿ ಹೇಳಿದೆ. ಈ ಪಾಪ ಭಾವನೆಯು ಬಹುಶ ಇತ್ತೀಚಿಗೆ ಇಂಗ್ಲೀಷರ (ಕ್ರೈಸ್ತಮತದ) ಸಂಪರ್ಕದಿಂದ ಬಂದದ್ದು. ಇಲ್ಲವಾದರೆ ವಾತ್ಸಾಯನ, ಚಾರ್ವಾಕರಂತಹವರು ಎಲ್ಲಿರುತ್ತಿದ್ದರು?:P<BR/><BR/>ನಿಮ್ಮ ಪ್ರಮೇಯದಲ್ಲೇ ಇಷ್ಟೊಂದು ಸಂದೇಹಗಳಿರುವಾಗ ಇನ್ನು ನೀವು ಭೈರಪ್ಪನವರ ಬಗ್ಗೆ ಹೇಳಿರುವುದನ್ನು ಪ್ರಶ್ನಿಸ ಹೊರಟರೆ ದೊಡ್ಡ ಲೇಖನವಾಗುತ್ತದೆ. ಆದರೂ ಒಂದೇ ಒಂದು ಪ್ರಶ್ನೆ :P<BR/><BR/>ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.<BR/>(ತಂತ್ರ = ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ + super-male-fantasyಯ ತೃಪ್ತಿ)<BR/><BR/>ನನ್ನ ಪ್ರಶ್ನೆ ಏನೆಂದರೆ - ಈ ತಂತ್ರವನ್ನೇ ಆಧರಿಸಿ ಎಷ್ಟೊಂದು ಟಿವಿ ಚಾನಲ್ಗಳು ಇರುವಾಗ, ಎಷ್ಟೊಂದು ಜಾಲತಾಣಗಳು ಇರುವಾಗ, ನೂರಾರು ರೂಪಾಯಿ ದುಡ್ಡು ತೆತ್ತು ನನ್ನಂತಹ ಎಷ್ಟೋ ಜನ ಭೈರಪ್ಪನವರ ಕಾದಂಬರಿಗಳನ್ನೇ ಏಕೆ ಓದುತ್ತಾರೆ? ಅದೂ ಕೆಲವೊಮ್ಮೆ "depressive" ಮೂಡ್ ಉಂಟುಮಾಡುವಾಗ? :P<BR/><BR/>ಮೊದಲು ನಿಮ್ಮ ಪ್ರಮೇಯವನ್ನು, ಅದರ ಹೊಸತನವನ್ನು, ಅದರ ವೈಜ್ಞಾನಿಕ ಹಿನ್ನಲೆಯನ್ನು ಸ್ಪಷ್ಟವಾಗಿ ನಿರೂಪಿಸಿ. ಆನಂತರ ಸಾಹಿತ್ಯದಲ್ಲಿ ನಿಮ್ಮ ಪ್ರಮೇಯದ ಇರುವಿಕೆಯನ್ನು ಚರ್ಚಿಸಿ. ಆನಂತರ ಬೇಕಿದ್ದರೆ ಭಾರತೀಯ ದೃಷ್ಟಿಕೋನದಿಂದ ನೋಡಿ. ಆಮೇಲೆ ಕನ್ನಡ ಸಾಹಿತ್ಯ, ನಂತರ ಭೈರಪ್ಪ! ಅದು ಭೈರಪ್ಪನವರ ಜನಪ್ರಿಯತೆ ಮೇಲೆ ಬೆಳಕು ಚೆಲ್ಲಿದರೆ ಅದು ಉಪೋತ್ಪನ್ನವಷ್ಟೆ (by-product).<BR/><BR/>ಇಲ್ಲವಾದರೆ ವಿಶ್ಲೇಷಣೆಯ ಭ್ರಮೆಯಲ್ಲಿ ನಿಮ್ಮ ಪೂರ್ವಾಗ್ರಹವನ್ನು ತೋರ್ಪಡಿಸಿಕೊಳ್ಳುತ್ತಿದ್ದೀರೆಂದು ಸ್ಪಷ್ಟವಾಗುತ್ತದೆ!! <BR/><BR/>(ನೀವು ಇದನ್ನು ಅಳಿಸಿಹಾಕಿದರೆ ಏನೂ ಬೇಜಾರಿಲ್ಲ. ಬರೆಯ ಬೇಕೆನಿಸಿತು, ಬರೆದೆ ಅಷ್ಟೆ.)<BR/><BR/>-ಕಲ್ಯಾಣ್Anonymousnoreply@blogger.comtag:blogger.com,1999:blog-5939841257923965225.post-50405712537454845652009-01-12T21:18:00.000+05:302009-01-12T21:18:00.000+05:30ಹೌದು, ಹಂಸಾನಂದಿ,ಮಂದ್ರ ಹೋಪ್ಲೆಸ್ ಕಾದಂಬರಿ; ಅಂಚು depres...ಹೌದು, ಹಂಸಾನಂದಿ,<BR/>ಮಂದ್ರ ಹೋಪ್ಲೆಸ್ ಕಾದಂಬರಿ; ಅಂಚು depressive.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26274404054025242232009-01-08T00:51:00.000+05:302009-01-08T00:51:00.000+05:30ನಾನು ಸಾಕ್ಷಿ ಓದಿಲ್ಲ. ಅನ್ವೇಷಣ ಓದಿದ ನೆನಪಿಲ್ಲ. ಆದ್ರೆ ಮ...ನಾನು ಸಾಕ್ಷಿ ಓದಿಲ್ಲ. ಅನ್ವೇಷಣ ಓದಿದ ನೆನಪಿಲ್ಲ. ಆದ್ರೆ ಮಂದ್ರ ಮತ್ತೆ ಅಂಚು ಅಂತೂ ಹೋಪ್ಲೆಸ್ ಅನ್ನಿಸಿತು. ’ಅಂಚು’ವನ್ನು ಓದಿದ ಮೇಲೆ ಮನಸ್ಸಿಗಾಗುವ ಡಿಪ್ರೆಸಿವ್ ಮೂಡ್ ಅಂತೂ ನಿಜವೇ. ನನ್ನ ಕೇಳಿದರೆ ಕಾದಂಬರಿ ಹೇಗಿರಬಾರದು ಅನ್ನೋದಕ್ಕೊಂದು ಉದಾಹರಣೆ ಅದು.hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-3013084249635343322009-01-05T13:36:00.000+05:302009-01-05T13:36:00.000+05:30ಅರುಣ,ನಿಮ್ಮದು ನಿಜವಾಗಿಯೂ ಉತ್ತಮ ಉಪಾಯ!ಅರುಣ,<BR/>ನಿಮ್ಮದು ನಿಜವಾಗಿಯೂ ಉತ್ತಮ ಉಪಾಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57558934164059729462009-01-01T21:41:00.000+05:302009-01-01T21:41:00.000+05:30ಅಬ್ಬಾಹ್, ನಾನು ಯಾವ ಕೃತಿಯನ್ನೂ ವಿಮರ್ಶಾತ್ಮಕವಾಗಿ ಓದೇ ಇಲ...ಅಬ್ಬಾಹ್, ನಾನು ಯಾವ ಕೃತಿಯನ್ನೂ ವಿಮರ್ಶಾತ್ಮಕವಾಗಿ ಓದೇ ಇಲ್ಲ ನೋಡಿ, ನನಗೆ "ಮುಜುಗರ" ಅಥವಾ ಇನ್ಯಾವುದೇ ಅನ್ಇಂಟರೆಸ್ಟಿಂಗ್ ಪ್ರಸಂಗಗಳು ಬಂದರೆ ಸುಮ್ಮನೆ ಒಂದೆರಡು ಪ್ಯಾರಾಗಳನ್ನು ಹಾರಿಸಿಬಿಡುವ ದುಶ್ಚಟವನ್ನು ರೂಢಿಸಿಕೊಂಡುಬಿಟ್ಟಿದ್ದೇನೆ...<BR/><BR/>ಒಳ್ಳೇ ವಿಮರ್ಶೆ! :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-5939841257923965225.post-55244706265651822632008-12-31T16:09:00.000+05:302008-12-31T16:09:00.000+05:30ಜ್ಯೋತಿ,ಲೇಖಕನ ಮನೋವೈಜ್ಞಾನಿಕ ವಿಶ್ಲೇಷಣೆ ನಮಗೇಕೆ ಎನ್ನುವದ...ಜ್ಯೋತಿ,<BR/>ಲೇಖಕನ ಮನೋವೈಜ್ಞಾನಿಕ ವಿಶ್ಲೇಷಣೆ ನಮಗೇಕೆ ಎನ್ನುವದು ಸರಿಯಾದ ಮಾತು. ಆ ಸಾಹಿತ್ಯದಿಂದ ಮನಸ್ಸು ತಿಳಿಯಾದರೆ ಸಾಕು.<BR/>ಭೈರಪ್ಪನವರ ಕೆಲವು ಕಾದಂಬರಿಗಳು ಹೊಸ ಬೆಳಕನ್ನು ತೋರಿಸುತ್ತವೆ. ಮತ್ತೆ ಕೆಲವು ಕಾದಂಬರಿಗಳು ನಮ್ಮನ್ನು depressionಗೆ ನೂಕುತ್ತವೆ.<BR/><BR/>ಪುರಾಣಕಾಲದಲ್ಲಿ, ಮಾತೃಪ್ರಧಾನ ಕುಟುಂಬಗಳಿದ್ದ ಕಾಲದಲ್ಲಿ ಬಹುಶಃ 'ಅಗಂಭ್ರಾ'ಇದ್ದಿರಲಿಕ್ಕಿಲ್ಲ!<BR/>ಕಾಲ ಬದಲಾದಂತೆ ಅದು ಹೋದರೂ ಹೋದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-86141596534744506172008-12-31T04:06:00.000+05:302008-12-31T04:06:00.000+05:30ಕಾಕಾ, ನಿಮ್ಮ ಪರಿಮಿತ ಕೋನದ ಸಮಗ್ರ ವಿಶ್ಲೇಷಣೆಗೆ ಶರಣು. ಭೈ...ಕಾಕಾ, ನಿಮ್ಮ ಪರಿಮಿತ ಕೋನದ ಸಮಗ್ರ ವಿಶ್ಲೇಷಣೆಗೆ ಶರಣು. <BR/><BR/>ಭೈರಪ್ಪನವರು ನನಗೂ ಇಷ್ಟದ ಲೇಖಕ. ಹಾಗಂತ ಅವರು ಬರೆದದ್ದೆಲ್ಲವೂ ವೇದವಲ್ಲ. ನೀವು ತಿಳಿಸಿದಂತೆ- ಸಾಕ್ಷಿ, ಅಂಚು, ಅನ್ವೇಷಣ, (ಜೊತೆಗೆ ಮಂದ್ರ ಕೂಡಾ) ಹೇಸಿಗೆ ತರಿಸುವಷ್ಟು ಕಾಮಭರಿತವಾಗಿವೆ. ಅವನ್ನೆಲ್ಲ ಓದಿದಾಗ "ಇಷ್ಟೊಂದು explicit and indulging ಆಗಿಲ್ಲದೆಯೂ ಬರೆಯಬಹುದಿತ್ತಲ್ಲ ಈ ಕಥೆಯನ್ನು" ಎಂದು ಅನಿಸಿದ್ದಿದೆ. ಆದರೆ, ಪರ್ವದಲ್ಲೂ ಇಂಥ ಸನ್ನಿವೇಶಗಳು ಸ್ವಲ್ಪ ಮಟ್ಟಿಗೆ ಬಂದಿದ್ದರೂ ಅಲ್ಲಿ ಅದು ಯಾಕೋ ಅತಿ ಅನಿಸುವುದಿಲ್ಲ; ನನಗದು ಅಚ್ಚರಿ ಮೂಡಿಸಿದ್ದೂ ಇದೆ. ಅದೇ ಕಥೆಯನ್ನು ಪುರಾಣವಾಗಿ ಓದುವುದಕ್ಕೂ, ಸಾಮಾಜಿಕ ಚೌಕಟ್ಟಿನಲ್ಲಿ ಓದುವುದಕ್ಕೂ ಅದೇ ವ್ಯತ್ಯಾಸವೇನೋ!<BR/><BR/>"ಅಂಚು ಓದುತ್ತಿದ್ದಾಗ, ಓದಿ ಮುಗಿಸಿದಾಗ ನಮ್ಮೊಳಗೇ ಒಂಥರಾ suicidal tendency ಆವರಿಸಿಕೊಂಡು ಬಿಡತ್ತೆ" ಅಂತ ನನ್ನದೊಂದು ಸ್ನೇಹಿತೆ ಹೇಳಿದ್ದರು. ನನಗೂ ಸಣ್ಣ ಮಟ್ಟಿನ ಡಿಪ್ರೆಶನ್ ಮೂಡ್ ಹಬ್ಬಿಕೊಂಡಿದ್ದು ನಿಜ. ಆ ಥರದ ಮೂಡ್ ಅಂಚು, ಸಾಕ್ಷಿ, ಅನ್ವೇಷಣ, ತಂತು, ಮಂದ್ರ- ಎಲ್ಲದರ ಓದಿನ ನಂತರವೂ ಅಮರಿಕೊಂಡದ್ದು ಆ ರೀತಿಯ ವಸ್ತುವಿನಿಂದಾಗಿಯೇ ಅನ್ನುವುದು ನನ್ನ ಊಹೆ. ಯಾಕಂದ್ರೆ, ಪರ್ವ, ಆವರಣ, ಭಿತ್ತಿ ಓದಿದಾಗ ಮಂಕುತನ ಬರೋದಿಲ್ಲ. ಒಳ್ಳೆಯ ಸಾಹಿತ್ಯ ಖುಷಿ ಕೊಡಬೇಕೇ ಹೊರತು ಮಂಕುತನವನ್ನಲ್ಲ.<BR/><BR/>ಆದರೆ... ಭೈರಪ್ಪ ಇಂಥ ಕಥಾಹಂದರ ಹೆಣೆದ ಮಾತ್ರಕ್ಕೆ ಅವರೊಳಗೇ ಅಂಥ ವಿಕೃತತೆ ಇದೆ, ಅಥವಾ ಅವರ ವಿಚಿತ್ರ ಮನಃಸ್ಥಿತಿಯ by products ಇಂಥ ಕಾದಂಬರಿಗಳು ಅನ್ನುವ ವಾದ (ಇದ್ದರೆ) ನಾನು ಒಪ್ಪುವುದಿಲ್ಲ. ಒಬ್ಬ ಒಳ್ಳೆಯ ಲೇಖಕ, ಸಮಾಜದಲ್ಲಿ ಅಲ್ಲಿ-ಇಲ್ಲಿ ತಾನು ಕಂಡ ಕೇಳಿದ ಘಟನೆಗಳನ್ನು, ನಡೆವ/ ನಡೆಯಬಹುದಾದ ಪ್ರಸಂಗಗಳನ್ನು ಸಮರ್ಥವಾಗಿ ತನ್ನ ಕಥಾನಕದಲ್ಲಿ ಹೆಣೆದುಕೊಳ್ಳಬಲ್ಲ. ಅದು ಅತಿಯಾದಾಗ ಮಾತ್ರ ವಾಕರಿಕೆ ತರಿಸುತ್ತದೆ. ಆ ಬಗ್ಗೆ ಭೈರಪ್ಪನವರು ಜಾಗ್ರತೆ ವಹಿಸಿಲ್ಲ; ಅಥವಾ ತಲೆಕೆಡಿಸಿಕೊಂಡಿಲ್ಲ ಅಂತ ಕಾಣುತ್ತೆ.<BR/><BR/>ಇನ್ನು "ಅಗಂಭ್ರಾ" ಮಾನವ ಸಮಾಜವನ್ನು ಎಂದಿಗೂ ಬಿಡದ ಭ್ರಮೆ. ಅದನ್ನು ನೀವು ಈ ವಿಶ್ಲೇಷಣೆಗೆ ಬಳಸಿಕೊಂಡ ರೀತಿ ಮತ್ತು ಅದರದ್ದೇ ವಿವರಣೆಗಳು ಸಿಂಪ್ಲೀ ಸುಪರ್ಬ್.<BR/>ಮತ್ತೆ ಧನ್ಯವಾದಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-51341031712395159792008-12-29T20:12:00.000+05:302008-12-29T20:12:00.000+05:30rj,ಪ್ರಕಾಶ,anonymus,ನಿಮ್ಮ ಟಿಪ್ಪಣಿಗಳ ಮೂಲಕ ಒಂದು ಉತ್ತಮ...rj,ಪ್ರಕಾಶ,anonymus,<BR/>ನಿಮ್ಮ ಟಿಪ್ಪಣಿಗಳ ಮೂಲಕ ಒಂದು ಉತ್ತಮವಾದ ಚರ್ಚೆಯನ್ನು<BR/>ಹುಟ್ಟುಹಾಕಿರುವಿರಿ;ಧನ್ಯವಾದಗಳು.<BR/>ರಾಮಾಯಣದಲ್ಲಿ ರಾಮಚಂದ್ರನ ನಡವಳಿಕೆ ಕೆಲವೊಂದು ಕಡೆಗೆ<BR/>ತಪ್ಪು ಅಥವಾ ಅಧಾರ್ಮಿಕ ಎನ್ನಿಸಬಹುದು. ಆದರೆ ಆತ ಪ್ರತಿನಿಧಿಸುತ್ತಿರುವದು ತ್ಯಾಗಧರ್ಮವನ್ನು whereas ರಾವಣ<BR/>ಪ್ರತಿನಿಧಿಸುವದು ಭೋಗಧರ್ಮವನ್ನು.<BR/>ಭಾರತೀಯ ಧರ್ಮಸಾಸ್ತ್ರಗಳೆಲ್ಲ ತ್ಯಾಗವನ್ನೇ ವೈಭವೀಕರಿಸಿ, ಭೋಗಜೀವನವನ್ನು ತುಚ್ಛೀಕರಿಸುತ್ತವೆ. ಆದುದರಿಂದಲೇ ರಾಮಚಂದ್ರ ಭಾರತೀಯರಿಗೆ Idol.<BR/>ಮಹಾಭಾರತದ ಕಾಲದಲ್ಲಿ ಆರ್ಯರ ವಿಜಯಘಟ್ಟ ಮುಗಿದುಹೋಗಿತ್ತು. ಅನಾರ್ಯಕುಲಗಳು ಆರ್ಯಕುಲಗಳೊಡನೆ ಸಮ್ಮಿಲತವಾಗತೊಡಗಿದ್ದವು. ಅನಾರ್ಯ ಶಾಸ್ತ್ರಗಳ ಪ್ರಮುಖ ವಕ್ತಾರನೆಂದರೆ ಕೃಷ್ಣ.<BR/>ಹೀಗಾಗಿ ಮಹಾಭಾರತದಲ್ಲಿ ಧರ್ಮಜಿಜ್ಞಾಸೆ ಮುಖ್ಯ ವಿಷಯವಾಗಿದೆ. ಭೀಷ್ಮನು ಶರಪಂಜರದ ಮೇಲೆ ಮಲಗಿಕೊಂಡಾಗಲೂ ಸಹ ಧರ್ಮರಾಜನು ಆತನನ್ನು ಸುಮ್ಮನೆ ಬಿಡದೆ, ರಾಜಧರ್ಮವನ್ನು ಕೇಳಿದ್ದಾನೆ. ’ವಿಷ್ಣುಸಹಸ್ರನಾಮ’ವನ್ನು ಭೀಷ್ಮನು ತನ್ನ ಮರಣಶಯ್ಯೆಯಲ್ಲಿ ಧರ್ಮನಿಗೆ ಹೇಳಿದ್ದಾನೆ.<BR/>ಆದುದರಿಂದ,ಅನೇಕ ಆರ್ಯ ಹಾಗೂ ಅನಾರ್ಯಕುಲಗಳ ಸಂಪ್ರದಾಯಗಳು, ವಿವಾಹಪದ್ಧತಿ ಇವೆಲ್ಲ ಮಹಾಭಾರತದಲ್ಲಿ ವರ್ಣಿತವಾಗಿವೆ. ಈ ವರ್ಣನೆಗಳಲ್ಲಿ ’ಆರ್ಯ ಅಗಭ್ರಾ’ ಸೇರಿದೆ.<BR/>ಆದರೆ, ಭೈರಪ್ಪನವರ ಕಾದಂಬರಿಗಳಲ್ಲಿ ತತ್ವಜಿಜ್ಞಾಸೆ ಮೇಲ್ನೋಟಕ್ಕೆ ಹಾಗೂ ಕಾಮಜಿಜ್ಞಾಸೆ(ಅಗಭ್ರಾ) ಆಂತರ್ಯದಲ್ಲಿ ಸೇರಿಕೊಂಡಿವೆ.<BR/>ಇನ್ನು ಇಂಗ್ಲಿಶ್ ಕಾದಂಬರಿಗಳಲ್ಲಿ ಅಗಭ್ರಾ ಇದೆಯೆಂದು ನಾನೂ ಸಹ ಹೇಳಿದ್ದೇನೆ. ಇದಕ್ಕೆ ಉದಾಹರಣೆಯೆಂದು<BR/>ಹಳೆಯ ಇಂಗ್ಲಿಶ್ ಲೇಖಕಿ Daphne du Maurier ಬರೆದ Frenchman's Creek ಅನ್ನು ಉಲ್ಲೇಖಿಸಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-44188042197164367392008-12-29T19:23:00.000+05:302008-12-29T19:23:00.000+05:30'ಅಗಂಭ್ರಾ' ಪುರುಷರ ಕಾದಂಬರಿಗಳಲ್ಲಿ ಮಾತ್ರವಲ್ಲ ; ಮಹಿಳೆಯರ...'ಅಗಂಭ್ರಾ' ಪುರುಷರ ಕಾದಂಬರಿಗಳಲ್ಲಿ ಮಾತ್ರವಲ್ಲ ; ಮಹಿಳೆಯರು ಬರೆದ ಕಾದಂಬರಿಗಳಲ್ಲಿಯೂ ಅತಿಯಾಗಿರದಿದ್ದರೂ, ಸಾಕಷ್ಟಿದೆ. ಅಯಾನ್ ರ್ಯಾಂಡ ಇದಕ್ಕೆ ಉದಾಹರಣೆ. ಅಮೇರಿಕ, ಯುರೋಪ್, ಆಸ್ಟ್ರೇಲಿಯ, ಫ್ರೆಂಚ್ ಮತ್ತು ರಶ್ಯನ್ ಮಹಿಳಾ ಲೇಖಕರ ಕಾದಂಬರಿಗಳಲ್ಲಿ ಯಾವದೇ ಮಡಿವಂತಿಕೆ ಇಲ್ಲದೇ ಲೈಂಗಿಕ ಕ್ರಿಯೆಯನ್ನಯ, ಅದರಲ್ಲಿಯೂ 'ಅಗಂಭ್ರಾ'ವನ್ನು ವರ್ಣಿಸಿರುವರು. ಭೈರಪ್ಪನವರು ಸನ್ನಿವೇಶದ ಉತ್ಕಟಯೆಯನ್ನು ಯಥಾವತ್ತಾಗಿ ವರ್ಣಿಸಿದ್ದರೆ ತಪ್ಪೇನು ? ಇದೇನು ಅವಗುಣವಲ್ಲ ! ಅವಗುಣ ನೋಡುವ ದೃಷ್ಟಿಯಲ್ಲಿದೆಯೇ ಹೊರತು, ಭೈರಪ್ಪನವರ ಲೇಖನಿಯಲ್ಲಿಲ್ಲ.Anonymousnoreply@blogger.comtag:blogger.com,1999:blog-5939841257923965225.post-10976851204639537472008-12-29T17:04:00.000+05:302008-12-29T17:04:00.000+05:30ಸಾರ್,ಒಟ್ಟಿನಲ್ಲಿ ಇಂಥದೊಂದು ಲೇಖನ ಬರೆದ ನೀವು ಕೊಂಚ ಮಟ್ಟಿ...ಸಾರ್,<BR/>ಒಟ್ಟಿನಲ್ಲಿ ಇಂಥದೊಂದು ಲೇಖನ ಬರೆದ ನೀವು ಕೊಂಚ ಮಟ್ಟಿಗಾದರೂ<BR/>ಸಂಚಲನ ಮಾಡಿದ್ದಂತೂ ನಿಜ.<BR/>ನನಗೆ ತೋಚಿದಂತೆ ಒಂದು ಮಾತು ಹೇಳಬಯಸುತ್ತೇನೆ.<BR/>ಇಷ್ಟಕ್ಕೂ ಯಾವುದೇ ಕಥೆ/ಕಾದಂಬರಿಗಳಲ್ಲಿ ಕಾಮದ ವಿಜೃಂಭಣೆಗೆ ಆಯಾ<BR/>ಕಥೆಯಲ್ಲಿನ ವಸ್ತು ಮತ್ತು ಸದರಿ ಕಥೆ ರೂಪಗೊಂಡ ಕಾಲಘಟ್ಟಗಳೂ<BR/>ಅದಕ್ಕೆ ಸಾಥ್ ಕೊಡುತ್ತವೆ.<BR/>ಕಾಮದ ವಿವರಣೆ ಇಷ್ಟಿರಬೇಕಾಗಿತ್ತಾ ಅಥವಾ ಇಷ್ಟೇ <BR/>ಇರಬೇಕಾಗಿತ್ತಾ?ಅನ್ನೋದು ಉತ್ತರವಿಲ್ಲದ ಪ್ರಶ್ನೆಯೇನೋ..<BR/>ಉದಾಹರಣೆಗೆ ರಾಮಾಯಣ ಮತ್ತು ಮಹಾಭಾರತವನ್ನೇ ನೋಡಿ:<BR/>ಇವೆರಡೂ ನಮ್ಮ ಪಾಲಿಗೆ ಇವತ್ತಿಗೂ ಸರ್ವೋತ್ತಮ ಕಥೆಗಳು.<BR/>ಒಂದರಲ್ಲಿ ಆದರ್ಶ ತುಂಬಿ ತುಳುಕಾಡುತ್ತಿದೆ;ಇನ್ನೊಂದಲ್ಲಿ ಕಾಮ ಹೊತ್ತಿ ಉರಿದಿದೆ..<BR/>ರಾಮ ಎಷ್ಟೇ ಅಗೋಚರ ತಪ್ಪುಗಳನ್ನು ಮಾಡಿದ್ದರೂ ಕೂಡ ಆತ ನಮಗೆ ಆದರ್ಶ ಪುರುಷೋತ್ತಮನೇ!<BR/>"ರಾಮರಾಜ್ಯ"ದ ವಿಜೃಂಭಿಸುವ ಹುಮ್ಮಸ್ಸಿನಲ್ಲಿ ಕಥೆಗಾರರು ಬೇಕೆಂದೇ ರಾಮನ ಅವಗುಣವನ್ನು<BR/>blur ಮಾಡಿದರೆ..?<BR/>ಗರ್ಭಿಣಿ ಹೆಂಡತಿಯನ್ನೇ ಕಾಡಿಗೆ ಅಟ್ಟಿದವನನ್ನು ಹ್ಯಾಗೆ role model ಆಗಿ ನೋಡೋಣ?<BR/>ಕೇವಲ ತನಗೆ ಸುಗ್ರೀವ ಶರಣಾಗತನಾದ ಅಂದ ಮಾತ್ರಕ್ಕೆ ವಾಲಿಯನ್ನು ಮೋಸದಿಂದ ಕೊಲ್ಲಬಹುದಾ?<BR/>ಮಹಾಭಾರತದ ಸ್ವಚ್ಛಂದ ಕಾಮವನ್ನ ಕಲಿಯುಗದ ಕಲ್ಪನೆಗೆ ಅನುಗುಣವಾಗಿ ಹೆಣೆಯಲಾಯಿತೆ?<BR/>ಆಯಾ ಕಾಲಘಟ್ಟಗಳಲ್ಲಿನ ಜನತೆಯ ಪ್ರತಿಬಿಂಬಗಳನ್ನೇ ಈ ಎಲ್ಲ ಕಥೆಗಳಲ್ಲಿ ಬಿಂಬಿಸಲಾಯಿತೇನೋ..<BR/><BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-62717235574405457742008-12-29T14:41:00.000+05:302008-12-29T14:41:00.000+05:30ಸುನಾಥ...ಸರ್...ಮತ್ತೊಮ್ಮೆ ಬರುತ್ತಿರುವೆ ಅನ್ಯಥಾ..ಭಾವಿಸಬ...ಸುನಾಥ...ಸರ್...<BR/><BR/>ಮತ್ತೊಮ್ಮೆ ಬರುತ್ತಿರುವೆ ಅನ್ಯಥಾ..ಭಾವಿಸಬೇಡಿ...<BR/><BR/> ಕಾದಂಬರಿ, ಒಬ್ಬಲೇಖಕನ ಕಲ್ಪನಾ ಕೂಸು...<BR/>ಅದಕ್ಕೆ ಬೇಕಾದ ಸನ್ನಿವೇಷ, ಸಂದರ್ಭಗಳಿಗುಣವಾಗಿ "ಅದರ" ವರ್ಣನೆ ಇರಬಹುದು..<BR/>ಯಾವುದೇ ಜ್ನಾನ ಪೀಠ ಪ್ರಶಸ್ತಿಯವರಿರಲಿ.., ಶ್ರೇಷ್ಠ ಲೇಖಕರಿರಲಿ..<BR/>ಸಹಜ ದೌರ್ಬಲ್ಯ ಇರಬಾರದೆನ್ನುವದಿಲ್ಲವಲ್ಲ...<BR/>ಅವರೂ ಮನುಷ್ಯರು..<BR/>ಈ ನೆಲೆಗಟ್ಟಿನಲ್ಲಿ ನೋಡಿದಾಗ..<BR/>ಭೈರಪ್ಪನವರ ಒಂದೆರಡು ಕಾದಂಬರಿಗಳಲ್ಲಿ "ಅತೀಯಾದ" ವರ್ಣನೆ ಇದೆ..<BR/>ಇದು ತಾವು ಸಮರ್ಥವಾಗಿ ಸಾದರ ಪಡಿಸಿದ್ದೀರಿ..<BR/><BR/>ನನಗೆ ಭೈರಪ್ಪನವರು ತುಂಬಾ ಇಷ್ಟ..ಅವರ ಕಾದಂಬರಿಗಳ ಮೂಲಕ..<BR/>ನನ್ನ ಜೀವನದಲ್ಲಿ,ನನ್ನ ವಿಚಾರ ಧಾರೆಯಲ್ಲಿ, ನನ್ನ ವ್ಯಕ್ತಿತ್ವದಲ್ಲಿ ಅವರ ಹಾಗೂ ಕಾರಂತಜ್ಜನ ಪ್ರಭಾವ ಬಹಳ...<BR/><BR/>ಹಾಗಂತ ಸಂಕುಚಿತ ಮನೋಭವದಿಂದ ಸಮರ್ಥನೆಮಾಡಲಾರೆ...<BR/><BR/>ನಿಮ್ಮ ಲೇಖನ ನನ್ನ ತಲೆಯಂತೂ ಕೆಡಿಸಿದ್ದು ನಿಜ..<BR/>ಅದು ಧನಾತ್ಮಕವಾಗಿ..<BR/><BR/>ಬಾಲ್ಯದಿಂದ ಪ್ರಭಾವ ಬೀರಿದ ಕಾದಂಬರಿಕಾರ ಅವರು.. <BR/>ಆ ಮೆಧಾವಿಯವರ...<BR/> ಕಾದಂಬರಿಗಳ ಇನ್ನೂ ವಿಶ್ಲೇಷಣೆ ಮಾಡಿ...<BR/><BR/>ಇದು ನನ್ನ ಸವಿನಯ ವಿನಂತಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-11317881512675609532008-12-29T12:14:00.000+05:302008-12-29T12:14:00.000+05:30ಕೇಶವ,ಈ ’ಅಗಭ್ರಾ’ ಎಲ್ಲ ಗಂಡಸರಲ್ಲಿಯೂ ತಕ್ಕ ಮಟ್ಟಿಗೆ ಇದ್ದ...ಕೇಶವ,<BR/>ಈ ’ಅಗಭ್ರಾ’ ಎಲ್ಲ ಗಂಡಸರಲ್ಲಿಯೂ ತಕ್ಕ ಮಟ್ಟಿಗೆ ಇದ್ದೇ ಇರುತ್ತದೆ. ವಿವಿಧ ಲೇಖಕರಲ್ಲಿ ಇದು ವಿವಿಧ ಶೈಲಿಗಳಲ್ಲಿ ಹಾಗೂ ವಿವಿಧ ಪ್ರಮಾಣಗಳಲ್ಲಿ ವ್ಯಕ್ತವಾಗುತ್ತದೆ.<BR/>ಖುಶವಂತ ಸಿಂಗ ಬಗೆಗೆ ನೀವು ಹೇಳುವದು ನೂರಕ್ಕೆ ನೂರು ಸತ್ಯ.<BR/>ಖುಶವಂತ ಸಿಂಗ ಹಾಗೂ ನಮ್ಮವರೇ ಆದ ಇಬ್ಬರು ಬುದ್ಧಿಜೀವಿ ಜ್ಞಾನಪೀಠಸ್ಥ ಸಾಹಿತಿಗಳಲ್ಲೂ ಸಹ ಸಾಕಷ್ಟು sexual obsession ಕಂಡುಬರುತ್ತದೆ.<BR/>ಖುಶವಂತ ಸಿಂಗರು ತಾವು ಆಧುನಿಕ ಕಾಲದವರೆಂದು ತೋರಿಸಿಕೊಳ್ಳುವ ಏಕಮೇವ ಉದ್ದೇಶದಿಂದ ಸತ್ವವಿಲ್ಲದ ಕೀಳು jokesಗಳನ್ನು ಬರೆಯುತ್ತ ಹೋದರು.<BR/>ಇನ್ನು ನಮ್ಮವರೇ ಆದ ಬುದ್ಧಿಜೀವಿ ಜ್ಞಾನಪೀಠಸ್ಥ ಮೂರ್ತಿಗಳು ಸಾಂಪ್ರದಾಯಕ ಮನೋವೃತ್ತಿಯ ಮೇಲೆ ಕಾಮದ ವಿಜಯವೇ ಆಧುನಿಕ ಮನೋವೃತ್ತಿಯ ಪ್ರಮಾಣವೆಂದು ಬಗೆದು, ಅದರಲ್ಲಿಯೇ ಮುಳುಗೇಳಲು ಪ್ರಾರಂಭಿಸಿದರು. ಇವರ ಅನುಯಾಯಿಯಾದ ಮತ್ತೊಬ್ಬ ಜ್ಞಾನಪೀಠಿ ಬುದ್ಧಿಜೀವಿಗಳಂತೂ ತಮ್ಮ ಕೆಲವೊಂದು ಬರಹದಲ್ಲಿ ಅಶ್ಲೀಲ ಶಬ್ದಗಳನ್ನು ಮುಕ್ತವಾಗಿ ಬಳಸುತ್ತಿದ್ದಾರೆ.<BR/><BR/>ಒಟ್ಟಿನಲ್ಲಿ ’ಅಗಭ್ರಾ’ ಯಾವ ಲೇಖಕನನ್ನೂ ಬಿಟ್ಟಿಲ್ಲ, ಅಲ್ಲವೆ! ಯಾಕೆಂದರೆ, ಇದು ನಮ್ಮ ಸಮಾಜದ ಭಾಗವೇ ಆಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30623409380673151092008-12-29T02:47:00.000+05:302008-12-29T02:47:00.000+05:30ಸುನಾಥ,ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿಲ್ಲ. ನಿ...ಸುನಾಥ,<BR/>ನಾನು ಭೈರಪ್ಪನವರ ಎಲ್ಲ ಕಾದಂಬರಿಗಳನ್ನೂ ಓದಿಲ್ಲ. ನಿಮ್ಮ ಈ ಅತಿ-ಗಂಡಸುತನ-ಭ್ರಾಂತಿ(ಅಗಭ್ರಾ)ಯ ಕಲ್ಪನೆಯೇ ನನಗೆ ಹೊಸತು. ನಾನಂತೂ ಯಾವ ಕನ್ನಡ ವಿಮರ್ಶಕರೂ ಈ ಪದ ಉಪಯೋಗಿಸಿದ್ದನ್ನು ಓದಿಲ್ಲ, ಇಂಗ್ಲೀಷಿನಲ್ಲೂ ನಾನು ಓದಿಲ್ಲ. <BR/><BR/>ಬಹುಷಃ ಯಾವ ಪುರುಷ ಕಾದಂಬರಿಕಾರನೂ ಈ ಅಗಭ್ರಾ ಸಿಂಡ್ರೋಮಿನಿಂದ ಹೊರತಲ್ಲ ಎನಿಸುತ್ತದೆ. ಗೇಬ್ರಿಯಲ್ ಮಾರ್ಕ್ವೇಜನ "ಕಾಲರಾ ಕಾಲದ ಪ್ರೇಮ"ದ ನಾಯಕನೂ, ಖುಷ್ವಂತ್ಸಿಂಗನ "ಹೆಂಗಸರ ಸಂಗ"ದ ನಾಯಕನೂ, ನೀವು ವಿವರಿಸಿದ ಭೈರಪ್ಪನವರ ಪಾತ್ರಗಳೂ ಈ ಅಗಭ್ರಾ ಸಿಂಡ್ರೋಮಿನಿಂದ ಬಳಲುವಂಥವುಗಳೇ!<BR/><BR/>ಇದೇ ಮಾಪನದಿಂದ ಕನ್ನಡದ ಇತರ ಪುರುಷ ಕಾದಂಬರಿಕಾರರನ್ನೂ ವಿಶ್ಲೇಸಿಸಿದರೆ ಹೆಚ್ಚಿನ ವ್ಯತ್ಯಾಸವೇನೂ ಸಿಗದೇನೋ ಎಂದು ನನ್ನ ಊಹೆ!<BR/><BR/>- ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5939841257923965225.post-42638463947996188982008-12-28T19:37:00.000+05:302008-12-28T19:37:00.000+05:30ಕೊಡಸರರೆ,ಧನ್ಯವಾದಗಳು.ಕೊಡಸರರೆ,<BR/>ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-88085947352566740322008-12-28T12:40:00.000+05:302008-12-28T12:40:00.000+05:30sunaatare,nimma maataannu oppiddene.kodsarasunaatare,<BR/>nimma maataannu oppiddene.<BR/>kodsaraAnonymousnoreply@blogger.comtag:blogger.com,1999:blog-5939841257923965225.post-47471787063030947712008-12-27T19:58:00.000+05:302008-12-27T19:58:00.000+05:30ನಿಮ್ಮ ಮುಂದಿನ ಲೇಖನವು ಭೈರಪ್ಪನವರ ಕೆಲವು ಕಾದಂಬರಿಗಳ, ಕೆಲ...ನಿಮ್ಮ ಮುಂದಿನ ಲೇಖನವು ಭೈರಪ್ಪನವರ ಕೆಲವು ಕಾದಂಬರಿಗಳ, ಕೆಲವು ಪಾತ್ರ ಅಥವಾ ಕೆಲವು ಘಟನೆಗಳ ವಿಮರ್ಶೆಯಾಗಿರದೆ, ಸಮಗ್ರವಾಗಿದ್ದರೆ, ಅರ್ಥಪೂರ್ಣವಾಗುವದು. 'ಮಲ್ಲಿನಾಥ' ಎಂಬುವವರು ನೂರಾರು ವರ್ಷಗಳ ಹಿಂದೆ ಕಾಳಿದಾಸನ ಕಾವ್ಯ ಮತ್ತು ನಾಟಕಗಳ ವಿಮರ್ಶೆಯನ್ನು ಸಂಸ್ಕೃತದಲ್ಲಿ ಮಾಡಿರುವರು. ಅದರಂತೆ ಮಹಾಮಹೋಪಾಧ್ಯಾಯ ಪಿ. ವಿ. ಕಾಣೆಯವರು ಕಾಳಿದಾಸ ಮತ್ತು ಮಲ್ಲಿನಾಥರ ವಿಮರ್ಶೆಯನ್ನು ಇಂಗ್ಲಿಷದಲ್ಲಿ ಮಾಡಿರುವರು. ವಿಮರ್ಶೆಗಳು ಅತ್ಯಂತ ವಸ್ತುನಿಷ್ಠ ಹಾಗೂ ಸುಂದರವಾಗಿವೆ. ನಿವೂ ಒಮ್ಮೆ ಓದಬೇಕು !Anonymousnoreply@blogger.comtag:blogger.com,1999:blog-5939841257923965225.post-32254351281480040112008-12-27T11:47:00.000+05:302008-12-27T11:47:00.000+05:30ವನಮಾಲಾ,ಭೈರಪ್ಪನವರ ಐತಿಹಾಸಿಕ ಸಂಶೋಧನಾ ಸಾಮರ್ಥ್ಯವನ್ನು ಅವ...ವನಮಾಲಾ,<BR/>ಭೈರಪ್ಪನವರ ಐತಿಹಾಸಿಕ ಸಂಶೋಧನಾ ಸಾಮರ್ಥ್ಯವನ್ನು ಅವರ ’ಆವರಣ’ ಹಾಗೂ ’ಸಾರ್ಥ’ ಕಾದಂಬರಿಗಳಲ್ಲಿ ನೋಡಬಹುದು. ಅಲ್ಲದೆ, ಪೌರಾಣಿಕ ಕಥನಗಳನ್ನು ಅವರು ಎಷ್ಟು ಸತ್ಯನಿಷ್ಠವಾಗಿ ಬಳಸುವರು ಎನ್ನುವದಕ್ಕೆ ’ಪರ್ವ’ವೇ ಸಾಕ್ಷಿ.<BR/>ಆದರೆ, ಉತ್ತಮ ಕಾದಂಬರಿಯ ರಚನೆಗೆ ಇವಿಷ್ಟೇ ಸಾಲವು.<BR/>ಭೈರಪ್ಪನವರ ಒಂದು prime ಅವಗುಣವು ಹೇಗೆ ಅವರ ಸಾಹಿತ್ಯವನ್ನು ಮೇಲ್ಮಟ್ಟಕ್ಕೇರಲು ಅಡ್ಡಿಗೊಳಿಸುತ್ತದೆ ಎನ್ನುವದನ್ನು ಇನ್ನೊಂದು ಲೇಖನದಲ್ಲಿ ಬರೆಯುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85168179966205018552008-12-27T11:43:00.000+05:302008-12-27T11:43:00.000+05:30ಕಟ್ಟಿಯವರೆ,ಬೇಂದ್ರೆ ಹಾಗೂ ಶರೀಫರೂ ಸಹ ಕೆಲವೊಂದು ಸಾಮಾನ್ಯ ...ಕಟ್ಟಿಯವರೆ,<BR/>ಬೇಂದ್ರೆ ಹಾಗೂ ಶರೀಫರೂ ಸಹ ಕೆಲವೊಂದು ಸಾಮಾನ್ಯ ಗೀತೆಗಳನ್ನು ರಚಿಸಿದ್ದಾರೆ. ಅಂದ ಮೇಲೆ ಭೈರಪ್ಪನವರಿಂದ perfectionಅನ್ನು expect ಮಾಡಲು ಹೇಗೆ ಸಾಧ್ಯ?<BR/>ಭೈರಪ್ಪನವರು ಒಬ್ಬ ಉತ್ತಮ ಲೇಖಕರು ಎನ್ನುವದು ನಿಜ. ಆದರೆ ಅವರಲ್ಲಿಯ ಒಂದು ಅವಗುಣದಿಂದಾಗಿ, ಅವರ ಅನೇಕ ಕಾದಂಬರಿಗಳು ಸಾಮಾನ್ಯ ದರ್ಜೆಗೆ ಇಳಿದು ಬಿಡುತ್ತವೆ. ಆ ಅವಗುಣವನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59829856532421319762008-12-27T10:49:00.000+05:302008-12-27T10:49:00.000+05:30ಸುನಾಥರೆ,ಭೈರಪ್ಪನವರ ಕಾದಂಬರಿಗಳ ಬಗೆಗಿನ ನಿಮ್ಮ ವಿಮರ್ಶೆ ಏ...ಸುನಾಥರೆ,<BR/>ಭೈರಪ್ಪನವರ ಕಾದಂಬರಿಗಳ ಬಗೆಗಿನ ನಿಮ್ಮ ವಿಮರ್ಶೆ ಏನೇ ಇರಲಿ, ’ಆವರಣ’ ಕಾದಂಬರಿಯಲ್ಲಿ ಕಂಡು ಬರುವ ಅವರ<BR/>ಐತಿಹಾಸಿಕ ಸಂಶೋಧನಾ ಸಾಮರ್ಥ್ಯವನ್ನು ಯಾರೇ ಆದರೂ ಮೆಚ್ಚತಕ್ಕದ್ದು. ಅವರ ಸತ್ಯನಿಷ್ಠೆಗೆ ಹಾಗೂ ನೇರನುಡಿಗೆ ಓದುಗರು ಮಾರು ಹೋಗುವರು.<BR/>ಅವರ ಅನೇಕ ಕಾದಂಬರಿಗಳನ್ನು ವಿಶ್ಲೇಷಿಸಿ, ನೀವು ತೋರಿಸಿದ ಸಾಮಾನ್ಯ ಲಕ್ಷಣವು ಮನವರಿಕೆಯಾಗುತ್ತದೆ.Unknownhttps://www.blogger.com/profile/17562392452625100328noreply@blogger.com