tag:blogger.com,1999:blog-5939841257923965225.post7056942182226461232..comments2024-02-29T07:14:52.690+05:30Comments on ಸಲ್ಲಾಪ: ಗಾಯತ್ರೀ ಸೂಕ್ತ……………….ಬೇಂದ್ರೆ sunaathhttp://www.blogger.com/profile/13386371953472087631noreply@blogger.comBlogger18125tag:blogger.com,1999:blog-5939841257923965225.post-61456121611841521912022-01-22T22:43:57.934+05:302022-01-22T22:43:57.934+05:30ಧನ್ಯವಾದಗಳು, ಪೂರ್ಣಿಮಾ!ಧನ್ಯವಾದಗಳು, ಪೂರ್ಣಿಮಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25567426392545507342022-01-20T10:49:19.636+05:302022-01-20T10:49:19.636+05:30ಇಂದು ಸಿಕ್ಕಿದ ಈ ಭಾವಾರ್ಥ ನಿಜಕ್ಕೂ ರತ್ನದಷ್ಟೇ ಅಮೂಲ್ಯ.. ...ಇಂದು ಸಿಕ್ಕಿದ ಈ ಭಾವಾರ್ಥ ನಿಜಕ್ಕೂ ರತ್ನದಷ್ಟೇ ಅಮೂಲ್ಯ.. ಇದನ್ನು ನಮ್ಮೆಲ್ಲರಿಗೆ ತಲುಪಿಸಿದ ನಿಮಗೆ ಅನಂತಾನಂತ ಧನ್ಯವಾದಗಳು.. ಕವಿ ದ.ರಾ.ಬೇಂದ್ರೆಯವರ ಅಧ್ಯಾತ್ಮದ ಒಲವು, ಹರಿವು ಎಷ್ಟಿತ್ತೆಂದು ಈ ಒಂದು ಸೂಕ್ತವೇ ತಿಳಿಸುತ್ತದೆ.. ಮನಸ್ಸೆಲ್ಲಾ ಆ ತಾಯಿಯ ಪದತಲದಲ್ಲಿರಲಿ ಸದಾ.. ಧನ್ಯವಾದಗಳು 🙏🙏🙏ಪೂರ್ಣಿಮಾ ಗಿರೀಶ್https://www.blogger.com/profile/09056389112714673296noreply@blogger.comtag:blogger.com,1999:blog-5939841257923965225.post-41504349416317821642016-03-04T22:29:07.708+05:302016-03-04T22:29:07.708+05:30ತಮ್ಮ ಅಕ್ಕರೆಗಾಗಿ ಧನ್ಯವಾದಗಳು.ತಮ್ಮ ಅಕ್ಕರೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21550796056063561012016-03-04T03:02:38.751+05:302016-03-04T03:02:38.751+05:30ಇದು ನಮ್ಮ ಅಭಿಪ್ರಾಯವಲ್ಲ ಸರ್.ತಮ್ಮ ಲೇಖನಗಳಲ್ಲಿ ಸಾಕ್ಷೀಕೃ...ಇದು ನಮ್ಮ ಅಭಿಪ್ರಾಯವಲ್ಲ ಸರ್.ತಮ್ಮ ಲೇಖನಗಳಲ್ಲಿ ಸಾಕ್ಷೀಕೃತವಾದದ್ದು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-35383443039382943222016-03-03T16:16:09.929+05:302016-03-03T16:16:09.929+05:30ಕಲಾವತಿ ಮೇಡಮ್,
ದೇವಿ ಬೇಂದ್ರೆಯವರಿಗೆ ಒಲಿದಿದ್ದಾಳೆ ಎನ್ನು...ಕಲಾವತಿ ಮೇಡಮ್,<br />ದೇವಿ ಬೇಂದ್ರೆಯವರಿಗೆ ಒಲಿದಿದ್ದಾಳೆ ಎನ್ನುವುದು ಸರಿ. ನನಗೆ ಒಲಿದಿದ್ದಾಳೆ ಎಂದರೆ ಸರಿಯಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-39625054430451421102016-03-02T06:44:06.327+05:302016-03-02T06:44:06.327+05:30ಸುನಾಥ್ ಸರ್ ದೇವಿ ಬೇಂದ್ರೆ ಯವರಿಗೆ ಒಲಿದಂತೆಯೇ ತಮಗೂ ಒಲಿದ...ಸುನಾಥ್ ಸರ್ ದೇವಿ ಬೇಂದ್ರೆ ಯವರಿಗೆ ಒಲಿದಂತೆಯೇ ತಮಗೂ ಒಲಿದಿದ್ದಾಳೆ ಎನುವುದಕ್ಕೇ ನಿಮ್ಮ ವಿಮರ್ಶಾ ಲೇಖನಗಳೇ ಸಾಕ್ಷೀ.ನಿಮ್ಮ ಜ್ಞಾನಭಂಡಾರವನ್ನು ನಮ್ಮೆಲ್ಲರಿಗೂ ಹಂಚುತ್ತಿರುವುದಕ್ಕಾಗಿ ಅನಂತಾನಂತ ಧನ್ಯವಾದಗಳು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-79054025810474111442016-02-19T20:36:11.341+05:302016-02-19T20:36:11.341+05:30ಧನ್ಯವಾದಗಳು, ಅಪ್ಪ-ಅಮ್ಮ!ಧನ್ಯವಾದಗಳು, ಅಪ್ಪ-ಅಮ್ಮ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-217185516966226882016-02-19T01:37:37.502+05:302016-02-19T01:37:37.502+05:30ಸುನಾಥ ಕಾಕಾ,
ಇಂತಹ ಅದ್ಭುತ ವಿವರಣೆಗೆ ನಿಮಗೊಂದು ಶರಣು.
...ಸುನಾಥ ಕಾಕಾ,<br /><br />ಇಂತಹ ಅದ್ಭುತ ವಿವರಣೆಗೆ ನಿಮಗೊಂದು ಶರಣು. <br /><br />ಬೇಂದ್ರೆಯವರ ಪದ ರಚನೆಯ ಆಟಕ್ಕೆ ಅವರೇ ಸಾಟಿ. <br />Pataragitti (ಪಾತರಗಿತ್ತಿ)https://www.blogger.com/profile/17383975062746113366noreply@blogger.comtag:blogger.com,1999:blog-5939841257923965225.post-25242625856011921002016-02-16T16:44:03.782+05:302016-02-16T16:44:03.782+05:30RJ,
ಬೇಂದ್ರೆಯವರ ಹಾಗು ಕನ್ನಡದ ಪೂರ್ವಸೂರಿಗಳು ಟಂಕಿಸಿದ ವೈ...RJ,<br />ಬೇಂದ್ರೆಯವರ ಹಾಗು ಕನ್ನಡದ ಪೂರ್ವಸೂರಿಗಳು ಟಂಕಿಸಿದ ವೈಶಿಷ್ಟ್ಯಪೂರ್ಣ ಪದಗಳನ್ನು ನಾವೆಲ್ಲರೂ ಬಳಸಿಕೊಳ್ಳಬಹುದಷ್ಟೆ. ನಿಜ ಹೇಳಬೇಕೆಂದರೆ, ಬೇಂದ್ರೆಯವರು ತಮ್ಮ ಪೂರ್ವಸೂರಿಗಳ ಪದಗಳನ್ನು ತಮ್ಮದೇ ರೀತಿಯಲ್ಲಿ ಮರುಬಳಸಿ, ಆ ಮಹನೀಯರಿಗೆ ಒಂದು ರೀತಿಯ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು. ಇದು ನಮ್ಮ ರೂಢಿಯೇ ಆಗಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68293214538478167772016-02-16T13:25:43.979+05:302016-02-16T13:25:43.979+05:30ಸುನಾಥ ಸರ್,
ನಿನ್ನೆಯಷ್ಟೇ ಪದಾರ್ಥ ಚಿಂತಾಮಣಿಯ 'ಪದಸಂಸ...ಸುನಾಥ ಸರ್,<br />ನಿನ್ನೆಯಷ್ಟೇ ಪದಾರ್ಥ ಚಿಂತಾಮಣಿಯ 'ಪದಸಂಸ್ಮರಣ' ಸಂಚಿಕೆಯಲ್ಲಿ ಬೇಂದ್ರೆಯವರ ಪದಸಂಪತ್ತು ಕುರಿತಂತೆ ನಿಮ್ಮದೊಂದು ಲೇಖನ ಓದಿದೆ. ಬೇಂದ್ರೆಯವರ ಕವಿತೆಯಲ್ಲಿನ ಸಾಲುಗಳ ಬಗ್ಗೆ, ಅಲ್ಲಿರುವ ಅಪರೂಪದ ಪದಗಳ ಬಗ್ಗೆ ಎಷ್ಟೊಂದು ವಿದ್ವತ್ ಪೂರ್ಣ ವಿವರಣೆ ನೀಡಿದ್ದೀರಿ! ನಿಜಕ್ಕೂ ಇದು ಅಧ್ಯಯನಪೂರ್ಣ ಬರಹ. <br /><br />ಅದು ಏನೋ ಇತ್ತು<br />ನೋ, ನೋ, ನೋ ಎನುತಿತ್ತು<br />ಎನುತಲೇ ಇತ್ತು.<br /><br />ಇಲ್ಲಿರುವ know ಮತ್ತು No ಎಂಬ ಅರ್ಥಗಳನ್ನು ನೀವು ವಿವರಿಸದೇ ಹೋಗಿದ್ದರೆ, ಕವಿತೆಯಲ್ಲಿದ್ದ ಅದ್ಭುತ ಅರ್ಥವೊಂದು ನನಗೆ ದೊರಕದೇ ಹೋಗಿಬಿಡುವ ಎಲ್ಲ ಸಾಧ್ಯತೆಗಳೂ ಇದ್ದವು. ಇಡೀ ಲೇಖನದಲ್ಲಿ ನನ್ನನ್ನು ಅಪರಿಮಿತವಾಗಿ ಹಿಡಿದಿಟ್ಟುಕೊಂಡ, ಬೇಂದ್ರೆಯವರು ಟಂಕಿಸಿದ ಪದವೆಂದರೆ- ಗಂಧಬಾಂಧವ. <br /><br />ಮೇಲಿನ ಕವಿತೆಯೂ ಸೇರಿದಂತೆ, 'ಗಂಧಬಾಂಧವ'ವನ್ನು ಮುಂದೆಲ್ಲಿಯಾದರೂ ಬಳಸಿಕೊಳ್ಳಲೇಬೇಕೆನಿಸುವಷ್ಟು ತುಡಿತ ಉಂಟಾಗುತ್ತಲಿದೆ. ಹಾಗಾಗಿ ಇವತ್ತೇ ನಿಮ್ಮೆದುರಿಗೆ ನನ್ನ ಇಂಡೆಂಟಿದೆ! :-)<br />-Rjರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-91438633533803962482016-02-15T16:49:17.212+05:302016-02-15T16:49:17.212+05:30ಜಲನಯನ,
ಎಲ್ಲವನ್ನೂ ತನ್ನ ಗರ್ಭದಲ್ಲಿ ಇಟ್ಟುಕೊಂಡ ಈ ಶೂನ್ಯಸ...ಜಲನಯನ,<br />ಎಲ್ಲವನ್ನೂ ತನ್ನ ಗರ್ಭದಲ್ಲಿ ಇಟ್ಟುಕೊಂಡ ಈ ಶೂನ್ಯಸ್ಥಿತಿಗೆ(!)‘ಉಪರತಿ’ ಎಂದು ಕರೆಯುತ್ತಾರೆ. ಈ ‘ಮಹಾಸಂಹಾರ’ದ (Complete devastation)ಕಾಲದಲ್ಲಿ ಶಿವ ಮತ್ತು ಶಕ್ತಿ ಮಾತ್ರ ಇರುತ್ತಾರೆ. ದೇವದೇವತೆಗಳು, ಇತರ ಜೀವಿಗಳು ಯಾರೂ ಇರುವುದಿಲ್ಲ. ಆದರೆ, ಆ ಭಾವಗಳು ದೇವಿಯ ಒಡಲಲ್ಲಿ ಇರುತ್ತವೆ. ದೇವಿಯ ‘ಅನುಗ್ರಹ’ದಿಂದ ಅವು ಮತ್ತೆ ಸೃಷ್ಟಿಯಾಗುತ್ತವೆ. ಇದು ಶಕ್ತಿಪ್ರಧಾನ ತತ್ವದ ಲಕ್ಷಣವಾಗಿದೆ.<br />sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63218781802930744142016-02-15T00:43:25.376+05:302016-02-15T00:43:25.376+05:30ಸುನಾಥಣ್ಣ
ಸೃಷ್ಟಿಯೆಲ್ಲ ಲಯವಾದ ಬಳಿಕ ಉಳಿಯುವುದು ಏನು?.......ಸುನಾಥಣ್ಣ<br />ಸೃಷ್ಟಿಯೆಲ್ಲ ಲಯವಾದ ಬಳಿಕ ಉಳಿಯುವುದು ಏನು?.........ಬಯಲು! ಆದರೆ ಇದು ಶೂನ್ಯವಲ್ಲ. ಏನೂ ಇಲ್ಲದ ಈ ಸ್ಥಿತಿಯಲ್ಲಿ ಮುಂದಿನ ಸೃಷ್ಟಿಯ ಗರ್ಭವಿದೆ. ಅಲ್ಲಮ ಪ್ರಭುಗಳು ಇದನ್ನು ‘ನಿರ್ಬಯಲು’ ಎಂದು ಹೇಳುತ್ತಾರೆ.<br />Its a state of complete devastation, ಎನ್ನುವಂತೆ ಬಹುಶಃ ಇದು ಐಸ್ ಏಜ್ ನ ಪಾರ್ಶ್ವ ಲಯವಲ್ಲ ಎಂದುಕೊಂಡಿದ್ದೇನೆ. ಎಲ್ಲವೂ ಅಳಿಯುವ ಬದಲು ಭುವಿಯಲ್ಲಿ ಆ ಸಮಯದ ನೆಲೆನಿಂತ ಬಹುಸಂಖ್ಯೆಯ ಜೀವಿಗಳ ನಾಶ ಎನಿಸುತ್ತದೆ, ಏಕೆಂದರೆ ಇದರಿಂದ ನಿಸರ್ಗ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಪ್ರಳಯದ ಅರ್ಥವೂ ಬಹುಶಃ ಇದೇ ಅರ್ಥದ್ದೇ..?<br />ಪೂರ್ಣ ಬರಹ ಓದುವುದು, ಅರ್ಥೈಸಿಕೊಳ್ಳುವುದು ನಿಜಕ್ಕೂ ಕಷ್ಟವೇ...<br />ಸಮಯ ಸಿಕ್ಕಾಗ ಓದುತ್ತೇನೆ.<br />ನನ್ನ ವಿನಂತಿ ಇಷ್ಟೇ...ಪುಟ್ಟ ಪುಟ್ಟ ಲೇಖನ ಹಾಕಿ ಬಹುಶಃ ನಮ್ಮಂತಹ ನಿಧಾನಿಗಳಿಗೆ ಅನುಕೂಲವಾಗುತ್ತದೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-10686421154674975732016-02-11T21:00:25.661+05:302016-02-11T21:00:25.661+05:30ಸ್ವರ್ಣಾ,
ಸೂಕ್ತ ಹಾಗು ಅರಿವು ಎರಡೂ ನಿಮ್ಮಲ್ಲೇ ಇವೆ,ತಾಯಿ!...ಸ್ವರ್ಣಾ,<br />ಸೂಕ್ತ ಹಾಗು ಅರಿವು ಎರಡೂ ನಿಮ್ಮಲ್ಲೇ ಇವೆ,ತಾಯಿ! ಆ ಋಷಿ ಹಾಗು ಈ ವರಕವಿ ನಿಮ್ಮ ದಿಟ್ಟಿಯನ್ನು ಅತ್ತ ಎಳೆಯುವ ನಿಮಿತ್ತಗಳೇನೊ? sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72989681053910042032016-02-10T15:22:46.606+05:302016-02-10T15:22:46.606+05:30ನಮಸ್ತೆ ಕಾಕಾ ,
ಸಕಲ ಚರಾಚರವನ್ನು ಪೊರೆವ ಶಕ್ತಿ, ನಮ್ಮೊಳಗ...ನಮಸ್ತೆ ಕಾಕಾ ,<br />ಸಕಲ ಚರಾಚರವನ್ನು ಪೊರೆವ ಶಕ್ತಿ, ನಮ್ಮೊಳಗೆ ಅಡಗಿ ಕುಳಿತಿರುವ ಶಕ್ತಿಗೆ 'ತಾಯಿ' ಎಂದಲ್ಲದೆ ಬೇರಾವ ಹೆಸರಿನಿಂದ ಕರೆಯಲು ಸಾಧ್ಯ ? ಋಷಿಯ ಕಾಣ್ಕೆಗೆ ಯುಗದ ಕವಿಯ ಸೂಕ್ತ ಅದಕ್ಕೆ ನಿಮ್ಮ ವ್ಯಾಖ್ಯಾನ , ಆಭರಣಕ್ಕದೆಷ್ಟು ಕುಂದಣಗಳು !<br />ಈಗಾಗಲೇ ಹೇಳಿದಂತೆ ನಿಮ್ಮ ಬರಹವಿಲ್ಲದಿದ್ದರೆ ಸೂಕ್ತದ ಒಂದು ಪದವೂ ನಮ್ಮದಾಗುವುದು ಕಷ್ಟವಿತ್ತು .<br /><br />ಬರಹವನ್ನು ಮತ್ತೊಮ್ಮೆ ಓದಿದಾಗ ತೋಳ್ಪಾಡಿಯವರ 'ಚರಣಗಳಿಂದ ಕಾರ್ಯವಾಗುತಿರೆ ಕರಗಳೇಕೆ ಬೇಕು ' ಎಂಬ ಸಾಲು ನೆನಪಾಯ್ತು .(ಬಹುಶಃ ಅದೂ ಕೂಡ ಅಜ್ಜ ಅನುವಾದಿಸಿದ ಸೌಂದರ್ಯ ಲಹರಿಯ ಸಾಲು)<br /><br />ಪ್ರತೀ ಬಾರಿಯೂ ಅರಿವಿನ ದೀಪ ಹಚ್ಚುವ ನಿಮಗೆ ವಂದನೆಗಳು ಕಾಕಾ Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-42905630281102194962016-02-04T22:58:34.317+05:302016-02-04T22:58:34.317+05:30ಅನಿಲರೆ,
ವರಕವಿ ಅಂಬಿಕಾತನಯದತ್ತರಿಗೆ ಈ ಸಾಮರ್ಥ್ಯವು ಗಾಯತ್...ಅನಿಲರೆ,<br />ವರಕವಿ ಅಂಬಿಕಾತನಯದತ್ತರಿಗೆ ಈ ಸಾಮರ್ಥ್ಯವು ಗಾಯತ್ರೀದೇವಿಯ ಅನುಗ್ರಹದಿಂದಲೇ ಪ್ರಾಪ್ತವಾಗಿರಬಹುದು. ಸಾಹಿತ್ಯದ ಚೆಲುವನ್ನು ಆಸ್ವಾದಿಸುವ ಮನೋಧರ್ಮವು ನಿಮಗಿದೆ; ಆದುದರಿಂದಲೇ ನೀವು ಈ ಸೂಕ್ತದಲ್ಲಿ ಒಂದಾಗಿ ಹೋಗಿದ್ದೀರಿ! sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9668646882728487512016-02-04T22:03:16.963+05:302016-02-04T22:03:16.963+05:30ಇಪ್ಪತ್ತನಾಲ್ಕು ಸಾಲುಗಳಲ್ಲಿ ಬ್ರಹ್ಮಾಂಡದ ಉಗಮ ಅರುಹಿ ಪಿಂಡ...ಇಪ್ಪತ್ತನಾಲ್ಕು ಸಾಲುಗಳಲ್ಲಿ ಬ್ರಹ್ಮಾಂಡದ ಉಗಮ ಅರುಹಿ ಪಿಂಡಾಂಡಕ್ಕೆ ಅದರ ಪತ್ತುಗೆ ತಿಳಿಸುವದು ಬೇಂದ್ರೆಗೆ ಮಾತ್ರ ಸಾಧ್ಯ. ಅದನ್ನು ಹೇಳಲು ಅವರು ಆಯ್ದುಕೊಳ್ಳುವ ಮಾರ್ಗ ನಾದಮಯವಾದ ಲಯ. ನಿಮ್ಮ ವ್ಯಾಖ್ಯಾನವಿಲ್ಲದಿದ್ದರೆ ಇದು ಏನೇನೂ ಅರ್ಥವಾಗುತ್ತಿರಲಿಲ್ಲ -ಯಾವುದೋ ಚಿತ್ರ ಗೀತೆಯಂತೆ ಚೆನ್ನಾಗಿದೆ ಎಂದು ಮರುಕ್ಷಣ ಇನ್ನೇನಕ್ಕೋ ಮನಸ್ಸು ಹೊರಳಿ ಬಿಡುತ್ತಿತ್ತು. ಈ ಸೂಕ್ತದ ಚೆಲುವಿಗೆ ಸೋತು ಹೋಗಿದ್ದೇನೆ -ಅಥವಾ ಅದರಲ್ಲೇ ಒಂದಾಗಿ ಹೋಗಿದ್ದೇನೆ.<br />~ಅನಿಲAnil Talikotihttps://www.blogger.com/profile/08555510641701557566noreply@blogger.comtag:blogger.com,1999:blog-5939841257923965225.post-12540699988046434082016-01-31T19:52:45.103+05:302016-01-31T19:52:45.103+05:30ಬದರಿನಾಥರೆ,
‘ತಮವು ಹಬ್ಬಿದತ್ತತ್ತ’ ಎನ್ನುವಲ್ಲಿರುವ ಕವಿಯ ...ಬದರಿನಾಥರೆ,<br />‘ತಮವು ಹಬ್ಬಿದತ್ತತ್ತ’ ಎನ್ನುವಲ್ಲಿರುವ ಕವಿಯ ಭಾವವನ್ನು ತಾವು ಸರಿಯಾಗಿ ಊಹಿಸಿ ಸೂಚನೆ ಕೊಟ್ಟಿದ್ದೀರಿ. ಬೇಂದ್ರೆಯವರ ಕವನವನ್ನು ಓದಿದಷ್ಟು ಸಲ ಹೊಸ ಹೊಸ ಅರ್ಥಗಳು ಹೊಳೆಯುವವು ಎನ್ನುವುದು ಸುಳ್ಳಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23064418763108542582016-01-31T19:08:39.178+05:302016-01-31T19:08:39.178+05:30ಇಡೀ ಕವನವನ್ನು ಒಂದು ಹತ್ತು ಬಾರಿಯಾದರೂ ಹಿಂದೆ ಓದಿದ್ದೆ. ತ...ಇಡೀ ಕವನವನ್ನು ಒಂದು ಹತ್ತು ಬಾರಿಯಾದರೂ ಹಿಂದೆ ಓದಿದ್ದೆ. ತುಸು ಅರ್ಥವಾದರೂ, ಅಗಾಧ ಅಂತರಂಗವು ತೆರೆದುಕೊಂಡಿರಲಿಲ್ಲ. ಇದೀಗ ತಮ್ಮ ಬರಹವು ನನಗೆ ಜೀರಿಗೆ ನೀರಿನಂತೆ ಕವಿತೆಯನ್ನು ಜೀರ್ಣಿಸಿಕೊಳ್ಳಲು ಸಹಕಾರಿಯಾಯಿತು.<br /><br />ಕವಿಯು 'ತಮವು ಹಬ್ಬಿದತ್ತತ್ತ' ಎನ್ನುವಲ್ಲಿ 'ದತ್ತ'ನನ್ನೂ ಸೇರಿಸಿಕೊಂಡು ನಮ್ಮನ್ನೂ ಸೇರಿಸಿ ಬಿಟ್ಟಿದ್ದಾರೋ ಎನಿಸುವಂತಿದೆ ಅಲ್ಲವೇ?<br /><br />ಇನ್ನೂ ಐವತ್ತು ಬಾರಿ ಈ ನಿಮ್ಮ ಬರಹ ಓದಬೇಕಿದೆ.<br />ಇದಲ್ಲವೇ ಅಸಲೀ ಕವಿಯ ಅಂತಃಸತ್ವ.Badarinath Palavallihttps://www.blogger.com/profile/06134535730447920619noreply@blogger.com