tag:blogger.com,1999:blog-5939841257923965225.post135639855620787274..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆ: ಅದ್ಭುತ ಪ್ರತಿಭೆಯ ಅನುವಾದಕsunaathhttp://www.blogger.com/profile/13386371953472087631noreply@blogger.comBlogger23125tag:blogger.com,1999:blog-5939841257923965225.post-91881900527648333862016-08-03T12:41:07.374+05:302016-08-03T12:41:07.374+05:30ಪ್ರಿಯ ಸುಬ್ರಹ್ಮಣ್ಯರೆ,
ಬೇಂದ್ರೆಯವರ ಎಲ್ಲ ಕೃತಿಗಳನ್ನು ಮೊ...ಪ್ರಿಯ ಸುಬ್ರಹ್ಮಣ್ಯರೆ,<br />ಬೇಂದ್ರೆಯವರ ಎಲ್ಲ ಕೃತಿಗಳನ್ನು ಮೊದಲು ಸಮಾಜ ಪುಸ್ತಕಾಲಯದವರೆ ಪ್ರಕಟಿಸುತ್ತಿದ್ದರು. ಬೇಂದ್ರೆಯವರ ನಿಧನದ ನಂತರ ಅವರ ಪುತ್ರ ವಾಮನ ಬೇಂದ್ರೆ ಹಾಗು ಅವರ ಪುತ್ರಸಮಾನರಾದ ಶರ್ಮಾ ಇವರು ಒಂದು ಟ್ರಸ್ಟ್ ಮಾಡಿಕೊಂಡು ಕೆಲವೊಂದು ಬದಲಾವಣೆಗಳೊಂದಿಗೆ ಪ್ರಕಟಿಸಲು ಪ್ರಾರಾಂಭಿಸಿದರು. ಮೇಘದೂತವನ್ನು ಸದ್ಯಕ್ಕೆ ಯಾರು ಪ್ರಕಟಿಸುತ್ತಿದ್ದಾರೊ ತಿಳಿಯದು. ಆದುದರಿಂದ ನೀವು ಈ ಮೂವರನ್ನು ಸಂಪರ್ಕಿಸಿದರೆ ನಿಮಗೆ ಖಂಡಿತವಾಗಿಯೂ ಲಭ್ಯತೆಯ ಬಗೆಗೆ ಮಾಹಿತಿ ದೊರೆಯುವುದು:<br />(೧) ಸಮಾಜ ಪುಸ್ತಕಾಲಯ, ಕೆರಿ ಕೆಳಗಿನ ಓಣಿ, ಧಾರವಾಡ<br />(೨) ವಾಮನ ಬೇಂದ್ರೆ, ‘ಶ್ರೀಮಾತಾ’, ಸಾಧನಕೇರಿ, ಕೆಲಗೇರಿ ರಸ್ತೆ, ಧಾರವಾಡ<br />(೩) ಕೆ.ಎಸ್.ಶರ್ಮಾ, ಕಾರ್ಮಿಕ ಮುಖಂಡರು, ವಿಶ್ವಶ್ರಮ ಟ್ರಸ್ಟ, ಏರ್ಪೋರ್ಟ ರಸ್ತೆ, ಹುಬ್ಬಳ್ಳಿ<br /><br />ಒಂದು ವೇಳೆ ಪುಸ್ತಕ ನಿಮಗೆ ಲಭ್ಯವಾಗದಿದ್ದರೆ ತಿಳಿಸಿ. ಬೇರೆ ಉಪಾಯ ಮಾಡೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33128929843193723492016-08-01T02:09:47.326+05:302016-08-01T02:09:47.326+05:30ಬೇಂದ್ರೆಯವರ ಮೆಘದೂತದ ಅನುವಾದ ಪುಸ್ತಕ ಕೊಂಡುಕೊಳ್ಳಲು ಎಲ್ಲ...ಬೇಂದ್ರೆಯವರ ಮೆಘದೂತದ ಅನುವಾದ ಪುಸ್ತಕ ಕೊಂಡುಕೊಳ್ಳಲು ಎಲ್ಲಿ ಸಿಗಬದುದೆಂದು ದಯಮಾಡಿ ತಿಳಿಸಿ. ಓದಲು ಕಾತುರನಾಗಿದ್ದೇನೆ. ಹಾಗೆಯೇ ಮೆಘದುತದ ಬಗೆಗೆ ಶತಾವಧಾನಿ ಅರ್ ಗಣೇಶ್ ಅವರ ಉಪನ್ಯಾಸ ಯೂಟುಬ್ ನಲ್ಲಿ ಲಭ್ಯವಿದ್ದು ಅದ್ಭುತವಾಗಿವೆ ಎಂದು ತಿಳಿಸಲು ಹರ್ಷಿಸುತ್ತೇನೆ. Subramanya Mhttps://www.blogger.com/profile/14608596840529771777noreply@blogger.comtag:blogger.com,1999:blog-5939841257923965225.post-36408911353570647162011-06-15T14:01:19.288+05:302011-06-15T14:01:19.288+05:30ಡಾ|ಕಟ್ಟಿಯವರೆ,
ಲೇಖನವನ್ನು ನೀವು ಮೆಚ್ಚಿಕೊಂಡಿದ್ದು ನನಗೆ ...ಡಾ|ಕಟ್ಟಿಯವರೆ,<br />ಲೇಖನವನ್ನು ನೀವು ಮೆಚ್ಚಿಕೊಂಡಿದ್ದು ನನಗೆ ತುಂಬ ಸಂತಸ ತಂದಿದೆ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65490086568757260692011-06-15T06:22:39.325+05:302011-06-15T06:22:39.325+05:30Krishna katti.
nadu kanda bahu dodda kavi bendre ...Krishna katti.<br /> nadu kanda bahu dodda kavi bendre avru.bendre avr kavy oduvade ondu ananda.blog molaka odugarlli bendre kavya preeti hechisuttidiri adkke vandnegalu.Dr.KRISHNA KATTIhttps://www.blogger.com/profile/13750186787933362260noreply@blogger.comtag:blogger.com,1999:blog-5939841257923965225.post-78128420403138779812008-03-10T13:34:00.000+05:302008-03-10T13:34:00.000+05:30ತೇಜಸ್ವಿನಿ,ನಿಮ್ಮ ಅಭಿಪ್ರಾಯ ಅತ್ಯಂತ ಸರಿಯಾಗಿದೆ. ವಿರಹದಲ್...ತೇಜಸ್ವಿನಿ,<BR/>ನಿಮ್ಮ ಅಭಿಪ್ರಾಯ ಅತ್ಯಂತ ಸರಿಯಾಗಿದೆ. ವಿರಹದಲ್ಲಿ ಬಳಲಿದ ಯಕ್ಷ ಅನ್ನಾಹಾರಗಳನ್ನು ಕಡೆಗಣಿಸಿ, ಸೊರಗಿದ್ದರಿಂದ<BR/>ಮುಂಗೈ ಮೇಲಣ ಕಡಗ ಮೊಳಕೈಗೆ ಬಂದಿತೆನ್ನುವದು ಸುಯೋಗ್ಯ ತರ್ಕ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11194749075793122282008-03-10T12:42:00.000+05:302008-03-10T12:42:00.000+05:30ಸುನಾಥರೆ,ನಿಮ್ಮ ಬ್ಲಾಗ್ ನಲ್ಲಿ ಇಂತಹ ಒಂದು ಅದ್ಭುತ ಬರಹ ಓದ...ಸುನಾಥರೆ,<BR/><BR/>ನಿಮ್ಮ ಬ್ಲಾಗ್ ನಲ್ಲಿ ಇಂತಹ ಒಂದು ಅದ್ಭುತ ಬರಹ ಓದಿ ತುಂಬಾ ಸಂತೋಷವಾಯಿತು. ನನ್ನ ಎಂ.ಎ. ಕೊನೆಯ ವರ್ಷದಲ್ಲಿ ಬೇಂದ್ರೆಯವರ ಕಾವ್ಯ-ಕೃತಿಯಕುರಿಗಳ ಅಧ್ಯಯನವಿತ್ತು. ಅಲ್ಲಿಂದ ನನಗೆ ಬೇಂದ್ರೆಯವರ್ಎ ಆದರ್ಶರೆನಿಸಿಬಿಟ್ಟರು. <BR/>ಅವರ ಮೇಘದೂತವನ್ನೋದಿದ ಮೇಲೆ ಅನ್ನಿಸಿತು.. ಇವರು ಭಾಷೆಗಳ ಎಲ್ಲೆಯನ್ನು ಮೀರಿದ ‘ಕವಿರತ್ನರು’ ಎಂದು.<BR/><BR/><BR/>“ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು<BR/>ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು<BR/>ಕಾರಹುಣ್ಣಿವೆಯ ಮಾರನೆಯ ದಿನವೆ ಮೋಡಕೋಡನಪ್ಪಿ<BR/>ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆಬೆಡಗನೊಪ್ಪಿ”<BR/><BR/><BR/>ಇಲ್ಲಿ "ಕೆಲವೆ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು "- <BR/><BR/>ಇದರರ್ಥ ಕೆಲವೇ ತಿಂಗಳಲ್ಲಿ ದಷ್ಟ-ಪುಷ್ಟವಾಗಿ ಸುಖಲೋಲುಪತೆಯಿಂದ ಮೈ-ಕೈ ತುಂಬಿಕೊಂಡಿದ್ದ ಯಕ್ಷನ ಕೈ, ವಿರಹದ ಬೇಗೆಯಲ್ಲಿ ಅನ್ನ, ನೀರು ಸೇರದೆ ಬಡವಾಗಿ ಸೊರಗಿದ್ದರಿಂದ ಕಡಗ ಜಾರಿ ಬಂತು ಎಂದು ಅರ್ಥೈಸುವುದು ಸೂಕ್ತವೇನೋ ಅಲ್ಲವೇ? ನಾನು ಅಭ್ಯಸಿಸುವಾಗ ಕೆಲವೊಂದು ಅನುವಾದಕರೊಡನೆ ವಿಮರ್ಶಿಸಿದಾಗ, ಹಲವರ ಅಭಿಪ್ರಾಯ ಇದಾಗಿತ್ತು. ಹಾಗಾಗಿ ಹೇಳಿದೆ. <BR/><BR/>ತುಂಬಾ ಉತ್ತಮ ಲೇಖನ. ಮತ್ತಷ್ಟು ಬರಲಿ. ಬರುತ್ತಲೇ ಇರುವೆ ನಿಮ್ಮ ಇನ್ನೊಂದು ಪೋಸ್ಟ್ ಓದಲು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-35223047229814324882008-03-10T11:59:00.000+05:302008-03-10T11:59:00.000+05:30This comment has been removed by the author.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-29194137186980539062008-03-09T20:31:00.000+05:302008-03-09T20:31:00.000+05:30ಅಮರ,ಬೇಂದ್ರೆ ಕಾವ್ಯದ ಸೊಗಸನ್ನು ಜೊತೆಯಾಗಿ ಸವಿಯೋಣ; ರುಚಿ ...ಅಮರ,<BR/>ಬೇಂದ್ರೆ ಕಾವ್ಯದ ಸೊಗಸನ್ನು ಜೊತೆಯಾಗಿ ಸವಿಯೋಣ; ರುಚಿ ಹೆಚ್ಚಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65354954999334334062008-03-09T19:24:00.000+05:302008-03-09T19:24:00.000+05:30ಸುನಾಥರೆ,ಬೇಂದ್ರೆ ಅಜ್ಜನ ಕಾವ್ಯನ ಕಂಪನ ನಮ್ಮ ಮನದಂಗಳಕೆ ಹರ...ಸುನಾಥರೆ,<BR/>ಬೇಂದ್ರೆ ಅಜ್ಜನ ಕಾವ್ಯನ ಕಂಪನ ನಮ್ಮ ಮನದಂಗಳಕೆ ಹರಡಿದಕ್ಕೆ ಧನ್ಯವಾದಗಳು. ಅವರ ಕಾವ್ಯದ ಸವಿಯನ್ನ ಸವಿಯಲು ಒಳ ಅರ್ಥಗಳು ತಿಳಿದರೆ ಚನ್ನ, ನಿಮ್ಮಿಂದ ಇನ್ನು ಹೆಚ್ಚು ಹೆಚ್ಚು ಬೇಂದ್ರೆ ಕಾವ್ಯದ ಬಗ್ಗೆ ತಿಳಿಯಲು ಕಾತುರದಿಂದ ಇದ್ದೆನೆ.<BR/><BR/>-ಅಮರAnonymousnoreply@blogger.comtag:blogger.com,1999:blog-5939841257923965225.post-80610646446561917332008-03-08T14:45:00.000+05:302008-03-08T14:45:00.000+05:30ಮೃಗನಯನಿಯವರೆ,ಬೇಂದ್ರೆ ಸರಳನುಡಿಗಳಲ್ಲಿ ಬರೆಯುವ ಕವಿ. ಆದರೆ...ಮೃಗನಯನಿಯವರೆ,<BR/>ಬೇಂದ್ರೆ ಸರಳನುಡಿಗಳಲ್ಲಿ ಬರೆಯುವ ಕವಿ. ಆದರೆ ಅವರ ಕವನದ ಎಲ್ಲ ಅರ್ಥಗಳನ್ನೂ ಒಮ್ಮೆಲೆ ಗ್ರಹಿಸಿಕೊಳ್ಳುವದು ಕಷ್ಟ. ನಿಮ್ಮ ತಂದೆ ಹೇಳಿದಂತೆ,ಬೇಂದ್ರೆ ಅನುಭಾವ ಕವಿ. ಅವರು ಬರೆದ ಒಂದು ಕವಿತೆ: "ಓ ತಾಯಿ, ಮಾಯಿ, ಶಿವಜಾಯಿ ಕಾಯಿ....." ಕವನದಲ್ಲಿ ಹೀಗೊಂದು ಸಾಲು ಬರುತ್ತದೆ:<BR/>(ತಾಯಿ ಭಕ್ತನಿಗೆ ಹೇಳಿದಂತೆ): "ತೆರಿತಾವ ಹಾದಿ, ಅದಕಂತ ಕಾದಿ..."<BR/>ಹೊರ ಅರ್ಥ ಬಹಳ ಸ್ಪಷ್ಟವಿದೆ. ಆದರೆ, ಇಲ್ಲಿ pun ಕೂಡ ಇದೆ.’ಹಾದಿ’ ಹಾಗು ’ಕಾದಿ’ ಇವು ತಾಂತ್ರಿಕ ವಿದ್ಯೆಯ ಹಾದಿ(=ಹ+ಆದಿ) ಹಾಗು ಕಾದಿ(=ಕ+ಆದಿ) ಎನ್ನುವ ಭೇದಗಳು.<BR/>ಬೇಂದ್ರೆಯವರಿಗೆ ಅನೇಕ ವಿಷಯಗಳಲ್ಲಿ deep knowledge ಇದ್ದುದರಿಂದಲೆ ಇಂತಹ ಅನೇಕಾರ್ಥ ಪದಗಳು ಅವರಿಗೆ ಸಹಜವಾಗಿ ಹೊಳೆಯುತ್ತಿದ್ದವು.<BR/><BR/>ಬೇಂದ್ರೆಯವರ ಬಗೆಗೆ ಚರ್ಚಿಸಲು ನಾನು ಯಾವಾಗಲೂ ಕುತೂಹಲದಿಂದ ಕಾಯುತ್ತಿರುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85756861119335527442008-03-08T14:35:00.000+05:302008-03-08T14:35:00.000+05:30ತ್ರಿವೇಣಿಯವರೆ,ಬೇಂದ್ರೆ ಅಂದರೆ "ರಸ-ಗಂಗಾವತರಣ".ಅವರೇ ಹೇಳಿ...ತ್ರಿವೇಣಿಯವರೆ,<BR/>ಬೇಂದ್ರೆ ಅಂದರೆ "ರಸ-ಗಂಗಾವತರಣ".<BR/>ಅವರೇ ಹೇಳಿಲ್ಲವೆ:<BR/><BR/>"ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ<BR/>ನೀಡುವೆನು ರಸಿಕ ನಿನಗೆ;<BR/>ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ<BR/>ಆ ಸವಿಯ ಹಣಿಸು ನನಗೆ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84902072783991861032008-03-08T11:36:00.000+05:302008-03-08T11:36:00.000+05:30raelly intresting.. 'ಬೇಂದ್ರೆಯವರನ್ನ ಅರ್ಥ ಮಾಡಿಕೊಳ್ಳು...raelly intresting.. 'ಬೇಂದ್ರೆಯವರನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟದ ಮಾತು. ಒಂದೇ ಓದಿಗೆ ಅರ್ಥ ಆಗೋಲ್ಲ ಅವರು ಅವರೊಬ್ಬ ಅನುಭಾವಿ ಕವಿ.' ಅಂತೆಲ್ಲಾ ನನ್ನ ತಂದೆ ಅವರನ್ನು ಹೊಗಳುತ್ತಿರುತ್ತಾರೆ. ನೀವು ಅವರ ಸಾಹಿತ್ಯವನ್ನ ಅರೆದು ಕುಡಿದಂತಿದೆ. ಓದಿ ಖುಷಿಯಾಯಿತು. ಬೇಂದ್ರೆ ಅರ್ಥವಾಗದಿದ್ದರೆ ನಿಮ್ಮ ಬಳಿ ಬರಬಹುದಲ್ಲವಾ?? ಹೇಳಿಕೊಡುತ್ತಿರ?;-)ಮೃಗನಯನೀhttps://www.blogger.com/profile/05798486490706460406noreply@blogger.comtag:blogger.com,1999:blog-5939841257923965225.post-45848696524495398612008-03-08T04:14:00.000+05:302008-03-08T04:14:00.000+05:30ಸುನಾಥರೇ, ಲಕ್ಷ್ಮೀನಾರಾಯಣ ಭಟ್ಟರು ಇಲ್ಲಿಗೆ ಬಂದಿದ್ದಾಗ ಬೇ...ಸುನಾಥರೇ, ಲಕ್ಷ್ಮೀನಾರಾಯಣ ಭಟ್ಟರು ಇಲ್ಲಿಗೆ ಬಂದಿದ್ದಾಗ ಬೇಂದ್ರೆಯವರ ಮೇಘದೂತ ಅನುವಾದದ ಬಗ್ಗೆ ಬಹಳ ಸೊಗಸಾಗಿ ತಿಳಿಸಿಕೊಟ್ಟಿದ್ದರು. ನಿಮ್ಮ ಬ್ಲಾಗ್ ಓದಿ ಅವರ ಭಾಷಣ ಮತ್ತೆ ನೆನಪಾಯಿತು.<BR/><BR/>ನಿಮ್ಮ ಮುಂದಿನ ಪೋಸ್ಟಿಗೆ ಕಾಯುವಂತಾಗಿದೆ. ಬೇಂದ್ರೆಯವರನ್ನು ಬ್ಲಾಗಿಗೆ ಕರೆತಂದಿರುವ ನಿಮಗೆ ಧನ್ಯವಾದ.Anonymousnoreply@blogger.comtag:blogger.com,1999:blog-5939841257923965225.post-62860195701818948132008-03-06T21:06:00.000+05:302008-03-06T21:06:00.000+05:30ವನಮಾಲಾ,ನೀವು ಹೇಳುವಂತೆ ಗಂಡಂದಿರಿಗೆ ಇದು ಸುಲಭದ ರಾಜಮಾರ್ಗ...ವನಮಾಲಾ,<BR/>ನೀವು ಹೇಳುವಂತೆ ಗಂಡಂದಿರಿಗೆ ಇದು ಸುಲಭದ ರಾಜಮಾರ್ಗ. <BR/>ನೀವೂ ಸಹ,"ನಾನು ಕೊಡುವೆ ನಿಮಗೆ ದವನ, ನೀವು ಕೊಡುವಿರೆನಗೆ ಕವನ.....ಬರಿಯ ಮಾತಿನ ಪೋಣಿಕೆ." ಎಂದು return gift ಕೊಟ್ಟು ಬಿಡಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71893253754493541282008-03-06T13:14:00.000+05:302008-03-06T13:14:00.000+05:30ಸುಶ್ರುತ,ಆಮಂತ್ರಣಕ್ಕೆ ಧನ್ಯವಾದಗಳು. It is really a goo...ಸುಶ್ರುತ,<BR/>ಆಮಂತ್ರಣಕ್ಕೆ ಧನ್ಯವಾದಗಳು. It is really a good opportunity.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-43317090857023334092008-03-06T13:10:00.000+05:302008-03-06T13:10:00.000+05:30ಪಾಂಡುರಂಗಾ,’ನಾನು ಬಡವಿ’ ಕವನದ ನಾಯಕಿಗೆ ನಲ್ಲ ಕೊಟ್ಟದ್ದೆಲ...ಪಾಂಡುರಂಗಾ,<BR/>’ನಾನು ಬಡವಿ’ ಕವನದ ನಾಯಕಿಗೆ ನಲ್ಲ ಕೊಟ್ಟದ್ದೆಲ್ಲವೂ ಇಷ್ಟವೇ!ಕೊನೆಗಂತೂ ’ಹೊಟ್ಟೆಗಿತ್ತ ಜೀವಫಲವ!’ ಎಂದು ಹೇಳಿ ಸಮಾಧಾನಗೊಳ್ಳುತ್ತಾಳೆ. ಇಂತಹ ಸಮಾಧಾನದ ಹೆಂಡತಿಯೇ ಎಲ್ಲ ಗಂಡಂದಿರಿಗೂ ಇಷ್ಟವಾಗುವದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60475133880575613752008-03-06T13:05:00.000+05:302008-03-06T13:05:00.000+05:30ರಾ-jeevs,’ಹಸನ್’ ಈ ನೆಲದಲ್ಲಿ ಎಷ್ಟು ಹಸನಾಗಿ ಬೆರತಿದ್ದಾನ...ರಾ-jeevs,<BR/>’ಹಸನ್’ ಈ ನೆಲದಲ್ಲಿ ಎಷ್ಟು ಹಸನಾಗಿ ಬೆರತಿದ್ದಾನೆ ಅಲ್ಲವೆ?<BR/>ತಮ್ಮ ನವಕೋಟಿ ಸಂಪತ್ತನ್ನು ದಾನ ಮಾಡಿ, ಕಾಷಾಯ ತೊಟ್ಟ ದಾಸರು, ”ಲೊಳಲೊಟ್ಟೆ..." ಅಂತ ಹಾಡಿದ್ದು ಆಶ್ಚರ್ಯವಲ್ಲ. ಆದರೆ, "ಭಾಗ್ಯದಾ ಲಕ್ಷ್ಮಿ ಬಾರಮ್ಮಾ..." ಅಂತ ಅವರು ಸಿರಿಯನ್ನು ಕರೆಯುವಾಗ, ಇವಳು ಪಾರಮಾರ್ಥಿಕ ಭಾಗ್ಯಲಕ್ಷ್ಮಿ ಅನ್ನುವ ಅರ್ಥ ಹೊಮ್ಮುವದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80215491959851938502008-03-06T12:52:00.000+05:302008-03-06T12:52:00.000+05:30ಸುನಾಥರೆ,’ಮುತ್ತು,ರತುನ ಹೊನ್ನು ಎಲ್ಲಕಲ್ಲು, ಮಣ್ಣ ವೈಭವಾಎ...ಸುನಾಥರೆ,<BR/>’ಮುತ್ತು,ರತುನ ಹೊನ್ನು ಎಲ್ಲ<BR/>ಕಲ್ಲು, ಮಣ್ಣ ವೈಭವಾ<BR/>ಎಲವೊ ಹುಚ್ಚು ಮಾನವಾ’<BR/>ಈ ಸಾಲುಗಳನ್ನು ನನ್ನ ಮದುವೆಯ ಬಳಿಕ ಕೇಳುತ್ತಲೆ ಬಂದಿದ್ದೇನೆ.ನಾನು ’ಒಡವೆ’ಅಂದಾಗಲೆಲ್ಲ ನನ್ನವರು ಹಾಡುವ ಪದವಿದು.ಬೇಂದ್ರೆಯವರು ಇಂಥವರಿಗೆ ಸರಳ ದಾರಿಯನ್ನು ತೋರಿಸಿದ್ದಾರಲ್ಲವೆ?Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-59957201145676666082008-03-06T10:36:00.000+05:302008-03-06T10:36:00.000+05:30ಸುನಾಥ,ನಮಸ್ಕಾರ. ಹೇಗಿದ್ದೀರಿ?ನಾವೆಲ್ಲ ಎಷ್ಟೋ ಕಾಲದಿಂದ ಅಂ...ಸುನಾಥ,<BR/><BR/>ನಮಸ್ಕಾರ. ಹೇಗಿದ್ದೀರಿ?<BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!<BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/><B>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು </B><BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.<BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ,<BR/>ಇಂತಿ,<BR/><BR/>ಸುಶ್ರುತ ದೊಡ್ಡೇರಿSushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-5939841257923965225.post-75790599102762775062008-03-06T00:14:00.000+05:302008-03-06T00:14:00.000+05:30sunaath ಅವರೆ, ಮುತ್ತು, ರತ್ನ ಕೊಡಲಾಗದ ಗಂಡ ಪೋಣಿಸಿದ ಸಮಾ...sunaath ಅವರೆ,<BR/> ಮುತ್ತು, ರತ್ನ ಕೊಡಲಾಗದ ಗಂಡ ಪೋಣಿಸಿದ ಸಮಾಧಾನದ ಕವನ ಇದಾಗಿದೆಯಂದು ತೋರುತ್ತದೆ."ನನು ಬಡವಿ, ಅತ ಬಡವ" ಕವನದಲ್ಲಿನ ನಾಯಕಿಯ ಚಿತ್ರಣವೇ ತುಂಬ ಇಷ್ಟವಾಗುತ್ತದೆ.Anonymoushttps://www.blogger.com/profile/17479052338040508214noreply@blogger.comtag:blogger.com,1999:blog-5939841257923965225.post-39433670749974935192008-03-05T23:57:00.000+05:302008-03-05T23:57:00.000+05:30sunaath-ji, "ಹಸನುಳದಾssವ" ಎಂಬಲ್ಲಿ ಹಸನ ಶಬ್ದ ಸ್ವಚ್ಛ ಎ...sunaath-ji,<BR/> "ಹಸನುಳದಾssವ" ಎಂಬಲ್ಲಿ ಹಸನ ಶಬ್ದ ಸ್ವಚ್ಛ ಎನ್ನುವದರೊಂದಿಗೆ ಇಸ್ಲಾಮ್ ಇತಿಹಾಸದ ಹಸನ್ ರ ನೆನಪನ್ನು ತರುವದಲ್ಲವೆ?<BR/> ಇದರೊಂದಿಗೆಯೆ, ನೀವೊಂದು ಬಾರಿ, "ಅಷ್ಟು ಪ್ರೀತಿ..." ಕವನವನ್ನು ವಿಶ್ಲೇಷಿಸುವಾಗ ಪುರಂದರದಾಸರ ಕವನದ ಸಾಲರ್ಧವನ್ನು ಹೇಳಿದ್ದಿರಿ. "ಲೊಳಲೊಟ್ಟೆ ... ಆನೆ ಕುದುರೆ ಎಲ್ಲಾ ಲೊಳಲೊಟ್ಟೆ......." ಅಂತೆಯೆ ಮುತ್ತು, ರತನ ಎಲ್ಲಾ ಬರಿಯ ಶೌಕಲ್ಲವೆ?rajeevshttps://www.blogger.com/profile/04328897505663801053noreply@blogger.comtag:blogger.com,1999:blog-5939841257923965225.post-15846988903230091872008-03-05T14:30:00.000+05:302008-03-05T14:30:00.000+05:30ನಿಮ್ಮ ಮಾತು ನಿಜ, ದೀಪ್ತಿ. ಬೇಂದ್ರೆಯವರ ’ಮೇಘದೂತ’ಓದಿದರೆ,...ನಿಮ್ಮ ಮಾತು ನಿಜ, ದೀಪ್ತಿ. ಬೇಂದ್ರೆಯವರ ’ಮೇಘದೂತ’<BR/>ಓದಿದರೆ,ಕಾಳಿದಾಸನ ಮೇಘದೂತವನ್ನು ಓದಬೇಕಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58790373565533939582008-03-05T11:59:00.000+05:302008-03-05T11:59:00.000+05:30ಬೇಂದ್ರೆಯವರ ಮೇಘದೂತ ಬೆಡಗಿನ ಚಿತ್ತಾರ, ಮೋಡಿಯ ಮಾಯಾಗಾರ. ಅ...ಬೇಂದ್ರೆಯವರ ಮೇಘದೂತ ಬೆಡಗಿನ ಚಿತ್ತಾರ, ಮೋಡಿಯ ಮಾಯಾಗಾರ. ಅದರ ಸೌಂದರ್ಯ ಅರಿಯಲು ಸಂಸ್ಕೃತದ ಅರಿವಿರಲೇಬೇಕಿಲ್ಲ. ಅಚ್ಚಗನ್ನಡದಲ್ಲಿ ಸುಲಲಿತವಾಗಿ ಸಾಗುವ ಚಿತ್ರಶಾಲೆಯದು. ಕವಿಯ ಪದ-ಪದಗಳಾಟ "ಅಬ್ಬಾ" ಎನಿಸುವಂಥದ್ದು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com