tag:blogger.com,1999:blog-5939841257923965225.post2717846157228033903..comments2024-02-29T07:14:52.690+05:30Comments on ಸಲ್ಲಾಪ: ಭಾಷೆ ಎನ್ನುವ ಉಪಕರಣsunaathhttp://www.blogger.com/profile/13386371953472087631noreply@blogger.comBlogger62125tag:blogger.com,1999:blog-5939841257923965225.post-85625630454362273532008-07-30T17:15:00.000+05:302008-07-30T17:15:00.000+05:30"ಕನ್ನಡ ನುಡಿ ನಡೆದು ಬಂದ ದಾರಿ" ಹೊತ್ತಗೆಯ ಹಿಂದೆ ಎಲ್ಲ re..."ಕನ್ನಡ ನುಡಿ ನಡೆದು ಬಂದ ದಾರಿ" ಹೊತ್ತಗೆಯ ಹಿಂದೆ ಎಲ್ಲ referenceಗಳನ್ನು ಕೊಟ್ಟಿದ್ದಾರೆ. ನೋಡಿರಿತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-69787378859744820102008-07-29T20:58:00.000+05:302008-07-29T20:58:00.000+05:30>ಬೇರೆಯವರು ಮಾಡಿದ ಸರ್ವೇ ಕಾರ್ಯದ referenc >ಇದ್ದರ...>ಬೇರೆಯವರು ಮಾಡಿದ ಸರ್ವೇ ಕಾರ್ಯದ referenc >ಇದ್ದರೆ,ಆ ಸರ್ವೇದ reference ಕೊಡಬೇಕು. >ಸುಮ್ಮನೆ ಮೋಘಮ್ ಆಗಿ ಬರೆದರೆ ಆಗಲಿಲ್ಲ.<BR/><BR/><BR/>ನೀವು ಹೀಗೆ ಹೇಳಿರುವುದನ್ನ ನೋಡಿದರೆ ನೀವು ಶಂಕರಬಟ್ಟರ 'ಕನ್ನಡ ನುಡಿ ನಡೆದು ಬಂದ ದಾರಿ' ಹೊತ್ತಿಗೆ ಓದಿಲ್ಲ ಅಂತ ನಿಕ್ಕುವ ಹೇಳಬೋದು. ಮೊದಲು ಆ ಹೊತ್ತಿಗೆ ದಯವಿಟ್ಟು ಓದಿ.<BR/>-ಬರತ್Anonymousnoreply@blogger.comtag:blogger.com,1999:blog-5939841257923965225.post-7564092775630650932008-07-26T12:47:00.000+05:302008-07-26T12:47:00.000+05:30md,ಲಿಂಕ್ ತೋರಿಸಿದ್ದಕ್ಕಾಗಿ ಧನ್ಯವಾದಗಳು.md,<BR/>ಲಿಂಕ್ ತೋರಿಸಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1630174169403179732008-07-25T19:14:00.000+05:302008-07-25T19:14:00.000+05:30Sir,Take a look at this article in ThatsKannada.ht...Sir,<BR/>Take a look at this article in ThatsKannada.<BR/><BR/><BR/>http://thatskannada.oneindia.in/column/enguru/2008/0723-learn-kannada-language-shankarbhat.html#cmntTopAnonymousnoreply@blogger.comtag:blogger.com,1999:blog-5939841257923965225.post-77628064945456890312008-07-25T19:02:00.000+05:302008-07-25T19:02:00.000+05:30ಕೊನೆ ಪುಟದಲ್ಲಿದೆ ಅಲ್ವೇ ಆಕಾರಗ್ರಂತಗಳೂ?ನೋಡಿ...ಕೊನೆ ಪುಟದಲ್ಲಿದೆ ಅಲ್ವೇ ಆಕಾರಗ್ರಂತಗಳೂ?<BR/><BR/>ನೋಡಿ...ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-52390314005306362492008-07-25T14:34:00.000+05:302008-07-25T14:34:00.000+05:30ಬೇರೆಯವರು ಮಾಡಿದ ಸರ್ವೇ ಕಾರ್ಯದ referenc ಇದ್ದರೆ,ಆ ಸರ್ವ...ಬೇರೆಯವರು ಮಾಡಿದ ಸರ್ವೇ ಕಾರ್ಯದ referenc ಇದ್ದರೆ,<BR/>ಆ ಸರ್ವೇದ reference ಕೊಡಬೇಕು. ಸುಮ್ಮನೆ ಮೋಘಮ್ ಆಗಿ ಬರೆದರೆ ಆಗಲಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16184486022575644732008-07-25T13:21:00.000+05:302008-07-25T13:21:00.000+05:30ಅವರ ಸರ್ವೆಗೆ ಅವರು ಹೇಳಿರುವ ಹೊತ್ತಗೆಗಳು ಆದಾರ..ಅವರು ಸರ್...ಅವರ ಸರ್ವೆಗೆ ಅವರು ಹೇಳಿರುವ ಹೊತ್ತಗೆಗಳು ಆದಾರ..<BR/><BR/>ಅವರು ಸರ್ವೆ ಮಾಡಬೇಕು ಯಾಕೆ?<BR/><BR/>ಬೇರೆಯವ ಅದ್ಯಯನದ ಹೊತ್ತಗೆಗಳಿವೆಯಲ್ಲ..<BR/><BR/>ನೀವು ಅವರಿಗೆ ಬಾಶಾವಿಜ್ನಾನ ಹೇಗೆ ತಿಳಿಯಬೇಕೆಂದು ಹೇಳಿಕೊಡುತ್ತಿದ್ದೀರ?<BR/><BR/>ನಿಮ್ಮ ಬಾಶಾವಿಜ್ನಾನದ ಅದ್ಯಯನ ಗ್ರಂದಗಳನ್ನು ಪಟ್ಟಿಮಾಡಿರಿ.. !ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-32240898767771179002008-07-25T11:23:00.000+05:302008-07-25T11:23:00.000+05:30ಮಹೇಶರೆ,ಶಂಕರ ಭಟ್ಟರು ತಮ್ಮ ಯಾವುದೇ ಹೊತ್ತಿಗೆಯಲ್ಲಿಯೂ ತಮ್...ಮಹೇಶರೆ,<BR/>ಶಂಕರ ಭಟ್ಟರು ತಮ್ಮ ಯಾವುದೇ ಹೊತ್ತಿಗೆಯಲ್ಲಿಯೂ ತಮ್ಮ ಸರ್ವೇ ವಿಧಾನಗಳನ್ನು ಹಾಗು ವಿವರಗಳನ್ನು ಪ್ರಕಟಿಸಿಲ್ಲ. ಅವಿಲ್ಲದೆ ನೀಡುವ ವಿವರಗಳಿಗೆ subjective, presumptive ಹಾಗು unrealistic ಎಂದೇ ಕರೆಯಬೇಕಾಗುತ್ತದೆ.<BR/><BR/>ಕನ್ನಡ ವರ್ಣಮಾಲೆಯನ್ನು ತುಂಡು ಮಾಡಬೇಕೆನ್ನುವ ವಾದವನ್ನು ಮಂಡಿಸುತ್ತಿರುವವರು ಶಂಕರ ಭಟ್ಟರು. ಆದುದರಿಂದ ಸರ್ವೇ ಮಾಡಬೇಕಾದವರು ಅವರು ; ನಾನಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54272766481509422452008-07-24T17:54:00.000+05:302008-07-24T17:54:00.000+05:30"ಶಂಕರ ಭಟ್ಟರು realistic survey ಮಾಡದೇ, ಕೇವಲ presumpt..."ಶಂಕರ ಭಟ್ಟರು realistic survey ಮಾಡದೇ, ಕೇವಲ presumptive ಆಗಿ ಮಾಡಿದ statement ಇದು."<BR/><BR/>ದಯವಿಟ್ಟು ನಿಮ್ಮ ಸರ್ವೆಯ ಪಲಿತಾಂಶ ಹಾಕಿ..<BR/><BR/>ಏಕೆಂದರೆ ಜೇನುಕುರುಬ, ಬಡಗ, ಗುಲ್ಬರ್ಗಕನ್ನಡ ಮುಂತಾದ ಕನ್ನಡ ಬಗೆಗಳ ಬಗ್ಗೆ ಬಂದಿರುವ ಹೊತ್ತಗೆಗಳನ್ನು ಅವರು ತಮ್ಮ ಹೊತ್ತಗೆಯಲ್ಲಿ ಉಲ್ಲೇಕಿಸಿದ್ದಾರೆ.. ಅದನ್ನೇ "ಕನ್ನಡ ನುಡಿ ನಡೆದು ಬಂದ ದಾರಿ" ಎಂಬ ಹೊತ್ತಗೆಯಲ್ಲಿ ಹೇಳಿದ್ದಾರೆ...<BR/><BR/>ದಯವಿಟ್ಟು ನೀವು ಕಯ್ಗೊಂಡ್ ರಿಯಲಿಸ್ಟಿಕ್ ಸರ್ವೆಯನ್ನು ವಿವರ ನೀಡಿ. <BR/><BR/>ಇಂಗ್ಲೀಶಿನ ಬಗ್ಗೆ ಅವರ ಯಾಕೆ ಸರಿಯಿಲ್ಲ?<BR/><BR/>ದಯವಿಟ್ಟು ಕಾರಣಕೊಟ್ಟು ಹೇಳಿ..ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-51586134918123084062008-07-24T15:53:00.000+05:302008-07-24T15:53:00.000+05:30ಭರತರೆ,ನೀವು ಸೂಚಿಸಿದ site ನೋಡಿದೆ. ಅಲ್ಲಿ ಹೇಳಿದ ಒಂದು ವ...ಭರತರೆ,<BR/>ನೀವು ಸೂಚಿಸಿದ site ನೋಡಿದೆ. ಅಲ್ಲಿ ಹೇಳಿದ ಒಂದು ವಿಷಯವನ್ನು ಒಪ್ಪುತ್ತೇನೆ. ಅಂದರೆ ಕನ್ನಡಿಗರು ಪದವನ್ನು ಹೇಗೆ ಉಚ್ಚರಿಸಿದರೂ ಅದು ಕನ್ನಡವೇ. ಅದಕ್ಕೆ ನನ್ನ ತಕರಾರಿಲ್ಲ. ಆದರೆ ಪಠ್ಯ ಪುಸ್ತಕಗಳಲ್ಲಿ ಹಾವು ಎಂದು ಬರೆಯುವ ಬದಲಾಗಿ ಆವು ಎಂದು ಬರೆಯುವದು ತಪ್ಪಾಗುತ್ತದೆ.<BR/>ಅದೇ ರೀತಿಯಲ್ಲಿ ರೇಲವೆ time-table ಪುಸ್ತಕಗಳಲ್ಲಿ<BR/>ಅರಸಿಕೆರೆ ನಿಲ್ದಾಣವನ್ನು ಹರಸಿಕೆರೆ ಎಂದು ಬರೆಯುವದು ತಪ್ಪಾಗುತ್ತದೆ. <BR/>ಇದು ನಾನು ಲಾಗಾಯ್ತಿನಿಂದಲೂ ಹೇಳುತ್ತಲಿರುವ ವಿಷಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14458863295906756932008-07-24T15:43:00.000+05:302008-07-24T15:43:00.000+05:30ಮಹೇಶರೆ,'ಕನ್ನಡ ಬರಹ ಸರಿಪಡಿಸೋಣ' ಎನ್ನುವ ಪುಸ್ತಕದದ ೬೦ನೆಯ...ಮಹೇಶರೆ,<BR/>'ಕನ್ನಡ ಬರಹ ಸರಿಪಡಿಸೋಣ' ಎನ್ನುವ ಪುಸ್ತಕದದ ೬೦ನೆಯ ಪುಟದಲ್ಲಿ ಶಂಕರ ಭಟ್ಟರು ಈ ರೀತಿಯಾಗಿ ಬರೆದಿದ್ದಾರೆ:<BR/>"..ಸಂಸ್ಕೃತ ಪದಗಳಲ್ಲಿ ಬರುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸ ಶೇಕಡಾ ತೊಂಬತ್ತೊಂಬತ್ತು ಮಂದಿ ಕನ್ನಡಿಗರ ಉಚ್ಚಾರಣೆಯಲ್ಲೂ ಕಾಣಿಸುವದಿಲ್ಲ....".<BR/>ಮುಂದುವರೆದು ಪುಟ ೬೧ರಲ್ಲಿ ಹೀಗೆ ಬರೆದಿದ್ದಾರೆ:<BR/>"ಇನ್ನು ಕೆಲವರು ತಾವು ಮಹಾಪ್ರಾಣಾಕ್ಷರಗಳನ್ನು ಸರಿಯಾಗಿ ಉಚ್ಚರಿಸುತ್ತೇವೆ ಎಂದು ಭಾವಿಸುತ್ತಾರೆ; ಆದರೆ ಅವರು ನಿಜಕ್ಕೂ ಹಾಗೆ ಉಚ್ಚರಿಸುವದಿಲ್ಲ.ಅವರ ಉಚ್ಚಾರಣೆಯಲ್ಲಿ ಅವು ಅಲ್ಪಪ್ರಾಣಾಕ್ಷರಗಳಾಗಿಯೇಉಳಿಯುತ್ತವೆ."<BR/><BR/>ಶಂಕರ ಭಟ್ಟರು realistic survey ಮಾಡದೇ, ಕೇವಲ presumptive ಆಗಿ ಮಾಡಿದ statement ಇದು.<BR/><BR/>ಎರಡನೆಯದಾಗಿ, ಪುಟ ೮೩ರಲ್ಲಿ ಹೀಗೆ ಬರೆದಿದ್ದಾರೆ:<BR/>"ನಿಜಕ್ಕೂ ಮೊದಲಿಗೆ ಇಂಗ್ಲಿಶ್ನಲ್ಲಿ ಪದಗಳನ್ನು ಅವುಗಳ ಉಚ್ಚಾರಣೆ ಹೇಗಿದೆಯೋ ಹಾಗೆಯೇ ಬರೆಯಲಾಗುತ್ತಿತ್ತು....ಆದರೆ ಜಾನ್ಸನ್ ಎಂಬ ಆ ವಿದ್ವಾಂಸನಿಗೆ ನಿಜಕ್ಕೂ ಇಂಗ್ಲಿಶ್ ಪದಗಳ ಇತಿಹಾಸದಲ್ಲಿ ಹೆಚ್ಚಿನ<BR/>ಪಾಂಡಿತ್ಯವಿರಲಿಲ್ಲ.... ಅವುಗಳ ಬಳಕೆ ಈ ಕಾರಣಗಳಿಗಾಗಿ<BR/>ತೀರ ಅನಾವಶ್ಯಕವಾದ ಒಂದು ಗೊಂದಲದ ಗೂಡಾಗಿದೆ."<BR/>ಈ ಹೇಳಿಕೆ ಸರಿಯಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75053229484891754742008-07-23T18:27:00.000+05:302008-07-23T18:27:00.000+05:30ವಸ ಇದನ್ನ ನೋಡಿ, ಶಂಕರಬಟ್ಟರ ಹೊಸ ಹೊತ್ತಿಗೆ ಬಗ್ಗೆhttp://...ವಸ ಇದನ್ನ ನೋಡಿ, ಶಂಕರಬಟ್ಟರ ಹೊಸ ಹೊತ್ತಿಗೆ ಬಗ್ಗೆ<BR/>http://enguru.blogspot.com/2008/07/blog-post_23.html<BR/><BR/>ಈಗಲಾದರೂ ಅರ್ತ ಆಗ್ಬೋದು.<BR/><BR/>ದಿಟವನ್ನ ಯಾರೂ ಮುಚ್ಚಾಕಕ್ಕಾಗಲ್ಲ.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-34489692214427223652008-07-23T15:23:00.000+05:302008-07-23T15:23:00.000+05:30ಸುನಾತರೇpresumptive statements ಯಾವುವು?ಮತ್ತು ನೀವು ಹೇ...ಸುನಾತರೇ<BR/><BR/>presumptive statements ಯಾವುವು?<BR/><BR/>ಮತ್ತು ನೀವು ಹೇಗೆ ಈ ತೀರ್ಮಾನಕ್ಕೆ ಬಂದಿರಿ?<BR/><BR/>ಅವರೆಲ್ಲ ಸಾಲು ಬಾಶಾವಿಜ್ನಾನದಡಿ ಇದೆ....<BR/><BR/>ನೀವು ಬಾಶಾವಿಜ್ನಾನದಡಿ ನೋಡಿಲ್ಲ.!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-16478533292668945352008-07-23T11:30:00.000+05:302008-07-23T11:30:00.000+05:30ಮಹೇಶರೆ,ಕನ್ನಡದ ಬಗೆಗೆ ಕಳಕಳಿ ಇರುವ ಯಾರೂ ಕೊಚ್ಚೆ ಅಲ್ಲ. ಅ...ಮಹೇಶರೆ,<BR/>ಕನ್ನಡದ ಬಗೆಗೆ ಕಳಕಳಿ ಇರುವ ಯಾರೂ ಕೊಚ್ಚೆ ಅಲ್ಲ. ಅದೇ ರೀತಿಯಲ್ಲಿ ಸಂಸ್ಕೃತ ಸಹ ನಮ್ಮ ಕನ್ನಡ ತಾಯಿಯ ಸೋದರಿಯೇ<BR/>ಆದುದರಿಂದ ಎರಡೂ ಭಾಷೆಗಳು ಪರಸ್ಪರ ಪೂರಕವಾಗಿಯೇ ಇವೆ ಎನ್ನುವದನ್ನು ನಾವು ಅರಿತುಕೊಂಡು ಸಂಸ್ಕೃತದ ಪ್ರಯೋಜನ ಪಡೆದುಕೊಳ್ಳಬೇಕು. We should exploit both<BR/>Sanskrit and English.<BR/>ಶಂಕರ ಭಟ್ಟರು ತಮ್ಮ ಹೊತ್ತಿಗೆಯಲ್ಲಿ ಕೆಲವು presumptive statements ಮಾಡಿದ್ದಾರೆ. ಅವು ಸರಿಯಲ್ಲ ಎಂದು ನಾನು ಹೇಳುತ್ತಲೇ ಇದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67006219104577987202008-07-23T09:53:00.000+05:302008-07-23T09:53:00.000+05:30ಸುನಾತರೇ,ಹರೀಶರು ಮೇಲ್ಮೆಯ ಮುಂದೆ ನಾನು ಕೊಚ್ಚೆ ಎಂದೇ ಅವರಿ...ಸುನಾತರೇ,<BR/><BR/>ಹರೀಶರು ಮೇಲ್ಮೆಯ ಮುಂದೆ ನಾನು ಕೊಚ್ಚೆ ಎಂದೇ ಅವರಿಗೆ ಪ್ರತಿಕ್ರಿಯಿಸಿಲ್ಲ.. :) ಎಶ್ಟೇ ಆದರು ಸಂಸ್ಕ್ರುತ ಓದಿದವರಲ್ಲವೇ... :)<BR/><BR/>ಹರೀಶರು ತಮ್ಮ ಸಂಸ್ಕ್ರುತಪಾಂಡಿತ್ರಪ್ರದರ್ಶನ ಹೇತು ಇಲ್ಲಿ ಬಾಯಿಹಾಕಿದ್ದಾರೆ. ಎಂದು ಅನ್ನಿಸಿತು.. <BR/><BR/>ಹರೀಶರೇ ನಿಮ್ಮ ಸಂಸ್ಕ್ರುತಪಾಂಡಿತ್ಯಕ್ಕೆ ನಾನು ಸಮನಲ್ಲ ಬಿಡಿ.. ನಾನು ಕನ್ನಡ ತಾವರೆಯರಳುವ ಕೊಚ್ಚೆಯೇ.. ಅದೇ ಇರಲಿ ನಮ್ಮ ಪಾಡು.! <BR/><BR/>ಹರೀಶರೇ ದಯವಿಟ್ಟು ಸುನಾತರ ಜೊತ ಮಾತಾಡಲು ಅವಕಾಶ ನೀಡಿ.. ನೀವು ದೊಡ್ಡ ಸಂಸ್ಕ್ರುತಪಂಡಿತ ಅಂತ ನಾನು ಒಪ್ಪಿಕೊಂಡಿದ್ದೀನಿ.. <BR/><BR/>ಸುನಾತರೇ,<BR/><BR/>ನಾನು ಶಂಕರಬಟ್ಟರ ಬಗ್ಗೆ ಹೇಳಿದ ಯಾವುದಾದರೂ ಮಾತು ಅವರ ಹೊತ್ತಗೆಯಲ್ಲಿ ಇಲ್ಲದಿದ್ದರೆ ತಿಳಿಸಿರಿ.<BR/><BR/>ನಿಮ್ಮ ಆತಂಕ ಅಕಾರಣವಾದುದು...!<BR/><BR/>ಒಳ್ಳೆಯದಾಗಲಿ.ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-59107844312009121892008-07-21T16:31:00.000+05:302008-07-21T16:31:00.000+05:30ಸಂಪದದಲ್ಲಿ ಮಹೇಶ ಅವರ ಕಮೆಂಟು:>> ಈಗಿರುವ ಕನ್ನಡವೇ ...ಸಂಪದದಲ್ಲಿ ಮಹೇಶ ಅವರ ಕಮೆಂಟು:<BR/>>> ಈಗಿರುವ ಕನ್ನಡವೇ ಸಲೀಸು, ತಮಗೆ ಅದರಿಂದ ಯಾವ ತೊಂದರೆಯಿಲ್ಲ, ಎನ್ನುವವರು ಇದರ ಕುರಿತು ತಲೆಗೆಡಿಕೊಳ್ಳಬೇಕಿಲ್ಲ. ಈ ಬರಹ ಕನ್ನಡದವನ್ನು ಉಲಿಯಲು, ಅರಿಯಲು ಹೆಣಗಾಡುವವರ ಸುತ್ತ ಕೆತ್ತ ಹಂದರ!<BR/><BR/>!!!!<BR/><BR/>****<BR/><BR/>>> ಸಂಸ್ಕೃತದಲ್ಲಿ ಮೀನಿಗೆ ಮೂಲ ಪದ ಮತ್ಸ್ಯ - ಅದರಿಂದ ಹುಟ್ಟುದ ಇತರೆ ಭಾಷೆಗಳಲ್ಲೂ ಅದರಿಂದಲೇ ಬಂದ ಪದಗಳೇ (ಮಾಚೀ, ಮಚ್ಚೀ, ಮಚಲೀ) ಇವೆ. ಇನ್ನು ದಕ್ಷಿಣದ ಭಾಷೆಗಳಲ್ಲೆಲ್ಲ ಇರುವ ಮೀನ್/ಮೀನು ಎಂಬ ಪದವೇ ಸಂಸ್ಕೃತಕ್ಕೆ ಹೋಗಿದೆ ಅಷ್ಟೆ.<BR/>>> ಮೀನು ಎಂಬುದು ಬಳ್ಳಿಯಂತೆ ಅಪ್ಪಟ ಕನ್ನಡ/ದ್ರಾವಿಡ ಪದ...<BR/><BR/>मीन - मीयते - मीञ् (हिंसायाम्) नते ; मीञ् - ಹಿಂಸಿಸಲ್ಪಡು, ಬಂಧಿಸಲ್ಪಡು ; ಮೀನ - ಬಂಧಿಸಲ್ಪಡುವ ಪ್ರಾಣಿ.<BR/><BR/>>> ಋಷಿ ಪದಕ್ಕೆ ನಿಷ್ಪುತ್ತಿ/ಎಟಿಮಾಲಜಿ ಇಲ್ಲವೆಂದು ಕೇಳಿದ್ದೀನಿ.... <BR/><BR/>ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯನ್ನು ನೀವು ತಪ್ಪಾಗಿ ಅರ್ಥೈಸಿಕೊಂದಿರಬೇಕು.<BR/>ऋषि - ऋषते ज्ञानेन संसारपारं ; ಜ್ಞಾನದಿಂದ ಸಂಸಾರಸಾಗರವನ್ನು ದಾಟಿದವನು.<BR/><BR/>>> ನೀವು ಹೇಳಿರುವುದೆಲ್ಲ ತಪ್ಪು ಅಂತ ಕೇಶಿರಾಜನ 'ಶಬ್ದಮಣಿದರ್ಪಣ' ಹೇಳುತ್ತೆ. ಅದರಲ್ಲಿ ಈ ಮಲ್ಲ,ಪಟ್ಟ ಅನ್ನೊ ಪದಗಳನ್ನು ಅವನು 'ತತ್ಸಮ' ಅಂತ ಹೇಳಿಲ್ಲ. ಬದಲಾಗಿ 'ಸಮಸಕ್ಕದ' ಪದಗಳು ಅಂತ ಹೇಳಿದ್ದಾನೆ.<BR/><BR/>पट (ಬದಲಾಗು) ಎಂಬ ಧಾತುವಿನಿಂದ ಪಟ್ಟ ಎಂಬ ಪದ ಬಂದಿದೆ.<BR/><BR/>ಕೇಶಿರಾಜ "ಸಮಸಕ್ಕದ" ಎಂದು ಹೇಳಿದ್ದಾನೆ ಎಂದು ನೀವು ಉದಾಹರಿಸುತ್ತಿರುವ ಎಲ್ಲಾ ಪದಗಳಿಗೂ ಸಂಸ್ಕೃತದಲ್ಲಿ ನಿಷ್ಪತ್ತಿ ಇದೆ. ಹಾಗಾಗಿ ಆ ಪದಗಳು ಕನ್ನಡದಿಂದ/ದ್ರಾವಿಡ ಭಾಷೆಗಳಿಂದ ಸಂಸ್ಕೃತಕ್ಕೆ ಹೋದವುಗಳಲ್ಲ, ಬದಲಾಗಿ ಸಂಸ್ಕೃತದಿಂದ ಬಂದವುಗಳು.<BR/><BR/>ಸತ್ಯವನ್ನು ನಂಬಲು ಇಷ್ಟವಿದ್ದರೆ ನಂಬಬಹುದು. ಇಲ್ಲ, ತಾನು ತಿಳಿದಿದ್ದೆ ಸರಿ ಎನ್ನುವವರು ಹಾಗೇ ತಿಳಿದುಕೊಳ್ಳಬಹುದು.<BR/><BR/>****<BR/><BR/>ಕೊಚ್ಚೆಗೆ ಕಲ್ಲೆಸೆಯುತ್ತಿದ್ದೇನೆ ಎಂಬ ಅರಿವಾಗಿದೆ. ಆದರೂ ಕಡೆಯದಾಗಿ ಕೆಲವು clarifications ಕೊಡಬೇಕೆಂದೆನಿಸಿತು, ಕೊಟ್ಟಿದ್ದೇನೆ... <BR/>(ಊರಿಗೆ ಹೋದಾಗ ಸಂಸ್ಕೃತ ನಿಘಂಟು/ಅಮರಕೋಶ ಮುಂತಾದ ಗ್ರಂಥಗಳನ್ನು ನೋಡಿ ಈ ವಿವರಗಳನ್ನು ಸಂಗ್ರಹಿಸಿದ್ದೇನೆ.)<BR/><BR/>ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ನಮಸ್ಕಾರಗಳು/ಧನ್ಯವಾದಗಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-42019449584814910712008-07-17T14:20:00.000+05:302008-07-17T14:20:00.000+05:30http://sampada.net/blog/mahesha/12/04/2007/3686ಇದನ...http://sampada.net/blog/mahesha/12/04/2007/3686<BR/><BR/>ಇದನ್ನು ಆಸಕ್ತಿಯಿರುವವರು ಓದಿಕೊಳ್ಳಿತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-39711789012792099572008-07-17T11:31:00.000+05:302008-07-17T11:31:00.000+05:30ಹರೀಶ ನಿಮಗೆ ಇನ್ನು ಉತ್ತರ ಬರೆಯುವ ಮುನ್ನ ನೀವು ಶಂಕರಬಟ್ಟರ...ಹರೀಶ <BR/><BR/>ನಿಮಗೆ ಇನ್ನು ಉತ್ತರ ಬರೆಯುವ ಮುನ್ನ ನೀವು ಶಂಕರಬಟ್ಟರ ಯಾವ ಹೊತ್ತಗೆಯ ಮೇಲೆ ಮಾತಾಡುತ್ತಿರುವಿರಿ ಹೇಳಿ..<BR/><BR/>ನಿಮ್ಮ ಕಮೆಂಟಿಗಳಿಗೆ ಸಮಾದಾನಗಳನ್ನು ನಾನು ಹಿಂದಿನ ಕಮೆಂಟುಗಳಲ್ಲೇ ಕೊಟ್ಟಿರುವೆನು..<BR/><BR/>ತೆಲುಗು ಬಾಶೆ ವಿಶಯ ಬಗ್ಗೆ ನಾನು ಹೇಳಲ್ಲ. ಅದರಲ್ಲಿ ಬದಲಾವಣೆ ಆಗಲಿ ಬಿಡಲಿ ಅದು ನಮಗೆ ಬೇಕಾಗಿಲ್ಲ..<BR/><BR/>ಮತ್ತೆ ನೀವು ಹೇಳಿದ್ದನ್ನೇ ಹೇಳುತ್ತಿದ್ದೀರಿ.. ಹಾಗು ಶಂಕರಬಟ್ಟರು ಹೇಳದೇ ಇರುವುದನ್ನು ಕಲ್ಪಿಸಿಕೊಂಡಿದ್ದೀರಿ..<BR/><BR/>ಓದಿರಿ..<BR/><BR/>ಸುನಾತರೇ..<BR/><BR/>ಗಮನಿಸಿ... ನಾನು ಮಹಾಪ್ರಾಣ, ಇಲ್ಲದೇ ಬರೆದರೂ ನಿಮಗೆಲ್ಲ. ಅದರಲ್ಲೂ ಹರೀಶರಿಗೆ ಅರ್ತವಾಗುತ್ತಾ ಇದೆ.. <BR/><BR/>ಅಂದರೆ ಶಂಕರಬಟ್ಟರ ಮಂಡನೆ ಸಾಪಲ್ಯ ತೋರುವುದು.. ಅಶ್ಟು ಸಾಕು.. ಸಂಶೋದನೆ ಅಂದರೆ ಸಂಶೋಧನೆ ಎಂದು ಹರೀಶರಿಗೆ ಅರ್ತ ಆಯಿತು.. ಇದನ್ನೇ ಶಂಕರಬಟ್ಟರೂ ಹೇಳಿರೋದು..<BR/><BR/>ಸಂಶೋದನೆ ಎಂದು ಬರೆದು ಉಚ್ಚಾರದಲ್ಲಿ "ಸಂಶೋದನೆ/ಸಮ್ಸೋದನೆ"(ತದ್ಬವ) ಮತ್ತು ಸಂಶೋಧನೆ(ತತ್ಸಮ) ಎರಡೂ ಸರಿ....<BR/><BR/>ಅವರು ಹೇಳಿರುವ "ಹೊಂದಿಸುವಕೆ" ತಿಳಿಯುವುದು ಮುಕ್ಯ(ಇದನ್ನು ನೀವು ಮುಖ್ಯ ಎಂದು ಉಲಿಯಲ್ಲು ಅಡ್ಡಿಯಿಲ್ಲ.. ಆದರೆ ಅದರ ತದ್ಬವ ಮುಕ್ಯ ಎಂಬ ಉಲಿಕೆಯೂ ಸರಿಯಶ್ಟೇ )<BR/><BR/>ಸುನಾತರಿಗೆ ಒಳ್ಳೆಯದಾಗಲಿ..ಆತಂಕಬೇಡ... ಶಂಕರಬಟ್ಟರ ದ್ರುಶ್ಟಿಕೋನ ಸರಿ ಇದೆ.. ಅವರು ಸುನಾತ/ಹರೀಶರಂತಹ ಸಂಸ್ಕ್ರುತ ಪಂಡಿತರು ಮತ್ತು ತಿಳಿದವರ ಬಗ್ಗೆಯಲ್ಲ ಮಾತಾಡುತ್ತಿರುವುದು.<BR/><BR/>ಕೆಳವರ್ಗ ಅಂದರೆ ಅವರಂತೆ ಮನೆತನದಲ್ಲಿ ಓದುಬರಹಕ್ಕೆ ಹೊಸಬರಾಗಿ, ಮಹಾಪ್ರಾಣ ಮುಂತಾದವು ಅವರ ಉಲಿಕೆಯಲ್ಲೇ ಇರದವರು... ಜೇನುಕುರಬರು ಸೋಲಿಕರು, ಒಕ್ಕಲಿಗರು, ಹಾಲಕ್ಕಿ ಮುಂತಾದ ಕನ್ನಡ ಹೆಚ್ಚಿನ ಬುಡಕಟ್ಟಿನ ಮಂದಿಗೆ ಸಹಜವಾಗೇ ಮಹಾಪ್ರಾಣ ಶ/ಷಕಾರಗಳು ನಾಲಗೆಯಿಂದ ಹೊರಳಲ್ಲ.. ಅವರು ಪ್ರಯತ್ನದಿಂದ ಕಲಿಯು ಕಶ್ಟಪಟ್ಟು ಉಲಿಯಬೇಕು.. ಅದರಲ್ಲಿ ಎಲ್ಲರೂ ಸಪಲರಾಗರು..<BR/><BR/>ನಾನು ಇಲ್ಲಿಗೆ ಮುಗಿಸುವೆನು.. <BR/><BR/>"ಸರ್ವೇ ಬವಂತು ಸುಕಿನಹ" :) ( ಇದು ಅರ್ತ ಆಗಿದೆ ) 'ಸರ್ವರ/ಎಲ್ಲರ’ ಬಗ್ಗೆಯೂ ಯೋಚಿಸಬೇಕಲ್ಲ..ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-61036932685605338932008-07-16T17:00:00.000+05:302008-07-16T17:00:00.000+05:30>> ಶಂಕರಬಟ್ಟರು ತೆಲುಗರಲ್ಲ.. ತೆಲುಗು ಪಂಡಿತರಲ್ಲ.. ಅದಕ್ಕ...>> ಶಂಕರಬಟ್ಟರು ತೆಲುಗರಲ್ಲ.. ತೆಲುಗು ಪಂಡಿತರಲ್ಲ.. ಅದಕ್ಕೆ.<BR/><BR/>ಸರಿ.<BR/><BR/>>> ಅಲ್ಲಿ ಯಾರೂ ಯಾಕೆ ಮಂಡಿಸಿಲ್ಲ ಈ ಪ್ರಶ್ನೆಯನ್ನ ತೆಲುಗು ಪಂಡಿತರು ಹೇಳಬೇಕು..<BR/><BR/>ಅದನ್ನು ಹೇಳಲು ತೆಲುಗು ಪಂಡಿತರು ಬೇಕಾಗಿಲ್ಲ. ನಾವೇ ಊಹಿಸಬಹುದು. ಅವರಿಗೆ ಆ ಅಕ್ಷರಗಳನ್ನು ತೆಗೆದು ಹಾಕುವ ಅಗತ್ಯ ಕಂಡಿಲ್ಲ, ಅದಕ್ಕೆ. ಕನ್ನಡದಲ್ಲಿಯೂ ಆ ಅಗತ್ಯವಿಲ್ಲ. ಕೆಲವರು ಆ ಅಗತ್ಯವನ್ನು ಹುಟ್ಟು ಹಾಕುತ್ತಿದ್ದಾರೆ. ಇಷ್ಟು ದಿನ ನಾವು ಎಲ್ಲಾ ಅಕ್ಷರಗಳನ್ನು ಬಳಸಿಕೊಂಡು ಕನ್ನಡ ಕಲಿತಿಲ್ಲವೇ. ಅಕ್ಷರಗಳು ಹೆಚ್ಚಿವೆ ಎಂಬ ಯೋಚನೆ ಶಾಲೆಯಲ್ಲಿ ಓದುತ್ತಿರುವಾಗ ನನಗಂತೂ ಬಂದಿರಲಿಲ್ಲ.<BR/><BR/>>> ಕನ್ನಡಿಗರು ಮಹಾಪ್ರಾಣಗಳನ್ನು ಉಚ್ಚರಿಸವಶ್ಟು ದಡ್ಡರು ಎಂಬುದು ಮಾತಲ್ಲ.. ಹೇಗೆ ಸಂಸ್ಕೃತದಲ್ಲಿ ಎ. ಒ ಗಳಿಲ್ಲವೋ ಹಾಗೆ ಕನ್ನಡದಲ್ಲಿ ಮಹಾಪ್ರಾಣಗಳಲ್ಲಿ ಇದು ಸಂಶೋದನೆ ಇಂದ ಸಾಬೀತಾದುದು..<BR/><BR/>ನಿಜ. ಸಂಸ್ಕೃತದಲ್ಲಿ ಎ, ಒ ಮೊದಲಿನಿಂದಲೂ ಇಲ್ಲ. ಆ ಅಕ್ಷರಗಳಿರುವ ಪದಗಳನ್ನು ಅದು ಉಪಯೋಗಿಸುವುದಿಲ್ಲ. "ವೇಂಕಟೇಶ" ಎಂದು ಹೇಳುತ್ತಾರೆ ಹೊರತು "ವೆಂಕಟೇಶ" ಎಂದಲ್ಲ. ಆದರೆ ಕನ್ನಡದಲ್ಲಿ ಹಾಗಲ್ಲ. ಮೂಲ ಕನ್ನಡ ಪದಗಳಲ್ಲಿ ಮಹಾಪ್ರಾಣವಿರದಿದ್ದರೂ ಬೇರೆ ಭಾಷೆಗಳಿಂದ ಎರವಲು ಪಡೆದಿರುವ ಪದಗಳಲ್ಲಿ ಮಹಾಪ್ರಾಣಗಳಿವೆ. ಅವುಗಳ ಉಪಯೋಗವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಂತೂ ಸಾಧ್ಯವಿಲ್ಲ. ಅಗತ್ಯಕ್ಕೆ ತಕ್ಕಂತೆ ಭಾಷೆಯನ್ನೂ ಬೆಳೆಯುವಂತೆ ಮಾಡಬೇಕೆ ಹೊರತು ಕುಂಠಿತಗೊಳಿಸಬಾರದು.<BR/><BR/>>> ಕನಿಶ್ಟ ೨೫ ಮಹಾಪ್ರಾಣಗಳಿರುವ ಕನ್ನಡ ಪದಗಳ ಪಟ್ಟಿ ಮಾಡಿ ಎಂದು ಸವಾಲು ಹಾಕಬಹುದು.<BR/><BR/>ಒಂದೂ ಬೇರೆ ಭಾಷೆಯ ಪದಗಳನ್ನು ಬಳಸದ ಕನಿಷ್ಠ ೨೫ ಜನ ಕನ್ನಡಿಗರನ್ನು ತೋರಿಸಿರಿ ಎಂದೂ ಸವಾಲು ಹಾಕಬಹುದು.<BR/><BR/>>> ೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?"<BR/>>> ಪುರಾವೆ ಇಲ್ಲ.. <BR/><BR/>ಏನೂ ಲಾಭವಿಲ್ಲದ ಕೆಲಸ ಮಾಡಿ ಏಕೆ ಕೈ ಸುಟ್ಟುಕೊಳ್ಳಬೇಕು?<BR/><BR/>>> ಆರಯ್ಯು ಬಳಸಬೇಡಿ ಸಂಶೋದನೆಯನ್ನೇ ಬಳಸಿರಿ..!<BR/><BR/>ಅದನ್ನೇ ಹೇಳುತ್ತಿರುವುದು. ಕನ್ನಡ ಪದಗಳನ್ನು ಬಳಸುವಾಗ ಮಹಾಪ್ರಾಣಗಳ ಅಗತ್ಯ ಖಂಡಿತ ಇಲ್ಲ. ಆದರೆ ಇತರ ಭಾಷೆಗಳ ಪದ ಬಳಸುತ್ತೀರಿ ಎಂದಾದರೆ ಸರಿಯಾಗಿ ಬಳಸಿ. "ಸಂಶೋದನೆ" ಬಳಸಬೇಡಿ, "ಸಂಶೋಧನೆ" ಬಳಸಿ. ಉಚ್ಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕೇವಲ "ಸಂಶೋದನೆ" ಎಂದು ಬರೆದ ಮಾತ್ರಕ್ಕೆ ಎಲ್ಲರೂ ಹಾಗೇ ಉಚ್ಚರಿಸುತ್ತಾರೆಯೇ? ಅಲ್ಲೆಲ್ಲೋ ಇನ್ನೊಬ್ಬ "ಸಂಸೋದನೆ" ಎನ್ನುತ್ತಾನೆ. ಅದನ್ನೂ ಸರಿ ಮಾಡಿದರೆ ಮತ್ತೊಬ್ಬ ಮತ್ತಿನ್ನೇನೋ ಹೇಳುತ್ತಾನೆ. ಎಲ್ಲರ ಉಚ್ಚಾರಣೆಯನ್ನೂ ಸರಿ ಮಾಡುವುದು ಸಾಧ್ಯವೇ? ಇಲ್ಲ. ಹಾಗಾಗಿ "ಸಂಶೋಧನೆ" ಎಂಬ ಸರಿಯಾದ ರೀತಿಯನ್ನು ಬಳಸಿ.<BR/><BR/>*******<BR/><BR/>ಇಷ್ಟಾಗಿಯೂ ನಾವು ಕನ್ನಡದಲ್ಲಿ ಮಹಾಪ್ರಾಣ ತೆಗೆದರೆ ಏನಾದೀತು? <BR/><BR/>ಈಗ ನಾವು ಕನ್ನಡಿಗರು ತಮಿಳರ ಉಚ್ಚಾರವನ್ನು ನೋಡಿ ಹೇಗೆ ಹೇಸಿಗೆ ಪಡುತ್ತಿದ್ದೇವೋ, ಹಾಗೆಯೇ ಹಿಂದಿ, ತೆಲುಗು ಮಾತನಾಡುವವರು ಕನ್ನಡ ನೋಡಿ ಹೇಸುವಂತಾಗುತ್ತದೆ. ಇದು ನಮಗೆ ಬೇಕೆ?<BR/><BR/>ಈಗ ಆಂಗ್ಲವನ್ನೇ ನೋಡಿ. ನಿಮ್ಮ ಅಚ್ಚುಮೆಚ್ಚಿನ ಎಮಿನಿನೋ ಬರ್ರೋ ನಿಘಂಟಿನಲ್ಲಿಯೇ ಬಳ್ಳಿ ಎಂಬುದನ್ನು balli ಎಂದು ಬರೆದರೆ ಸರಿಯಾಗದು ಎಂಬ ಕಾರಣಕ್ಕೆ baḷḷi ಎಂದು ಬರೆದಿದ್ದಾರೆ. ಮುಂದೊಂದು ದಿನ ಸಂಸ್ಕೃತ/ಉರ್ದು/ಅರೇಬಿಕ್ ಭಾಷೆಗಳ ಪದಗಳನ್ನು ಬರೆಯುವಾಗ ನಾವೂ ಹೀಗೇ ದ್ರಾವಿಡ ಪ್ರಾಣಾಯಾಮ ಮಾಡಬೇಕಾಗುವುದಿಲ್ಲವೇ? ಇದು ಬೇಕೆ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-17235571351387380642008-07-16T14:01:00.000+05:302008-07-16T14:01:00.000+05:30"ದಯವಿಟ್ಟು ನನ್ನ ಹಿಂದಿ ಕಮೆಂಟನ್ನೂ ಮತ್ತೆ ಓದಿರಿ.."ಇಲ್ಲಿ..."ದಯವಿಟ್ಟು ನನ್ನ ಹಿಂದಿ ಕಮೆಂಟನ್ನೂ ಮತ್ತೆ ಓದಿರಿ.."<BR/><BR/>ಇಲ್ಲಿ ಹಿಂದಿನ ಎಂದು ಓದಿಕೊಳ್ಳಿರಿ..<BR/><BR/>ಅಚ್ಚದೋಶಗಳಿಗೆ ಮನ್ನಿಸರಿ..ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-72243930587828858572008-07-16T13:59:00.000+05:302008-07-16T13:59:00.000+05:30ಹರೀಶರೇನನ್ನ ಹಿಂದಿನ ಕಮೆಂಟುಗಳಲ್ಲಿ ಎಲ್ಲ ಉತ್ತರಗಳಿವೆ..ಆದ...ಹರೀಶರೇ<BR/><BR/>ನನ್ನ ಹಿಂದಿನ ಕಮೆಂಟುಗಳಲ್ಲಿ ಎಲ್ಲ ಉತ್ತರಗಳಿವೆ..<BR/><BR/>ಆದರೂ ಮತ್ತೆ ಹೇಳ್ತೀನಿ.. ದಯವಿಟ್ಟು ನನ್ನ ಹಿಂದಿ ಕಮೆಂಟನ್ನೂ ಮತ್ತೆ ಓದಿರಿ..<BR/><BR/>"ಪದಗಳನ್ನೆಲ್ಲ ಇದ್ದಕ್ಕಿದ್ದಂತೆ ಬಿಟ್ಟುಬಿಡುವುದು ಹೇಗೆ ಸಾಧ್ಯ?"<BR/>ಬಿಡಬೇಕಾಗಿಲ್ಲ... ಬಿಡಿರೆಂದು ಹೇಳಿಲ್ಲ.. ತಪ್ಪುಗ್ರಹಿಕೆ<BR/><BR/>"೧) ತೆಲುಗು-ಕನ್ನಡ ಲಿಪಿಗಳು ಹೋಲುತ್ತವೆ. ಶಂಕರ ಭಟ್ಟರ ಲಿಪಿಕ್ರಾಂತಿಯಂತಹ ವಾದವನ್ನು ಅಲ್ಲಿ ಏಕೆ ಯಾರೂ ಇನ್ನೂ ಮಂಡಿಸಿಲ್ಲ? ಕನ್ನಡಿಗರು ಮಹಾಪ್ರಾಣ ಉಚ್ಚರಿಸಲು ಬಾರದಷ್ಟು ದಡ್ದರೆ? ಅವರು ಹಿಂದಿ, ಮರಾಠಿ, ತೆಲುಗು ಮಾತನಾಡುವವರಿಗಿಂತ ಕೀಳೆ?"<BR/><BR/>ಶಂಕರಬಟ್ಟರು ತೆಲುಗರಲ್ಲ.. ತೆಲುಗು ಪಂಡಿತರಲ್ಲ.. ಅದಕ್ಕೆ.<BR/><BR/>ಅಲ್ಲಿ ಯಾರೂ ಯಾಕೆ ಮಂಡಿಸಿಲ್ಲ ಈ ಪ್ರಶ್ನೆಯನ್ನ ತೆಲುಗು ಪಂಡಿತರು ಹೇಳಬೇಕು..<BR/><BR/>ಮಳಯಾಳಂ ಅಲ್ಲಿ ಮತ್ತು ಪಂಜಾಬಿಯಲ್ಲಿ ಲಿಪಿಬದಲಾವಣೆಗಳಾಗಿವೆ ( ಕೊರಿಯನ್ನಲ್ಲೂ ). ಅಲ್ಲಿ ಶಂಕರಬಟ್ಟರು ಮಂಡಿಸಿಲ್ಲ..<BR/><BR/>ಕನ್ನಡಿಗರು ಮಹಾಪ್ರಾಣಗಳನ್ನು ಉಚ್ಚರಿಸವಶ್ಟು ದಡ್ಡರು ಎಂಬುದು ಮಾತಲ್ಲ.. ಹೇಗೆ ಸಂಸ್ಕೃತದಲ್ಲಿ ಎ. ಒ ಗಳಿಲ್ಲವೋ ಹಾಗೆ ಕನ್ನಡದಲ್ಲಿ ಮಹಾಪ್ರಾಣಗಳಲ್ಲಿ ಇದು ಸಂಶೋದನೆ ಇಂದ ಸಾಬೀತಾದುದು.. ಇದಕ್ಕೆ ಕನಿಶ್ಟ ೨೫ ಮಹಾಪ್ರಾಣಗಳಿರುವ ಕನ್ನಡ ಪದಗಳ ಪಟ್ಟಿ ಮಾಡಿ ಎಂದು ಸವಾಲು ಹಾಕಬಹುದು..<BR/><BR/><BR/>ಸಂಸ್ಕೃತ ಪಂಡಿತರು ಏನು ಎ,ಒ,ಳ ಉಲಿಯದಶ್ಟು ದಡ್ಡರೇ? ಇದು ಮಾತಿಗೆ ಮಾತಶ್ಟೆ..<BR/><BR/>ಬಾಶಾವಿಜ್ನಾನದಡಿ.. ಒಂದು ಬಾಶೆಯ ಸ್ವರೂಪದಲ್ಲಿ ಈ ಈ ಉಲಿಕೆಗಳು/phones ಇವೆ ಎಂದು ಹೇಳುವುದು ಸಹಜ. ಅದನ್ನೇ ಶಂಕರಬಟ್ಟರು ಮಾಡಿರುವುದು..<BR/><BR/>ದಯವಿಟ್ಟು ಪೀನಿಶ್ ಬಾಶೆ phonology ಬಗ್ಗೆ ಓದಿ...<BR/><BR/><BR/>"೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?"<BR/>ಪುರಾವೆ ಇಲ್ಲ.. <BR/>ಆದರೆ ಅಕ್ಶರ ಕಡಮೆ ಇದ್ದರೆ ಬರೆಯಲು ಸುಲಬ ಎಂದು ಸಾಮಾನ್ಯ ಜ್ನಾನ.... ಏಕೆಂದರೆ<BR/>೧) ಹೆಚ್ಚು ಗುರುತುಗಳನ್ನು ನೆನಪಿಟ್ಟುಬೇಕಿಲ್ಲ<BR/>೩) ಅದಕ್ಕೆ ಬರೋದು ಸುಲಬ<BR/><BR/><BR/>"೩) ನಾವು ಕೇವಲ ಅಚ್ಚಕನ್ನಡ ಪದಗಳನ್ನು ಉಪಯೋಗಿಸಿದರೆ ಎಷ್ಟು ಜನಕ್ಕೆ ಅರ್ಥವಾಗುತ್ತದೆ? ಕನ್ನಡ ಮಾತನಾಡುವ ಜನರಲ್ಲಿ ಎಷ್ಟು ಜನಕ್ಕೆ ಒರೆ, ಆರಯ್ಯು ಎಂಬ ಪದಗಳು ತಿಳಿದಿವೆ? (ಪಂಡಿತರ ಬಗ್ಗೆ ನಾನು ಮಾತನಾಡುತ್ತಿಲ್ಲ, ಜನಸಾಮಾನ್ಯರ ಬಗ್ಗೆ ಹೇಳುತ್ತಿದ್ದೇನೆ)"<BR/><BR/>ಶಂಕರಬಟ್ಟರ ಅಚ್ಚಗನ್ನಡ ಪ್ರಯೋಗದ ಬಗ್ಗೆ ಹೇಳಿಲ್ಲ. ಹಾಗೂ ಎರವಲು ಪದ ಬಳಕೆ ಬೇಡವೆಂದೂ ಹೇಳಿಲ್ಲ.. <BR/><BR/>ಆರಯ್ಯ ಹೇಗೆ ಹೆಚ್ಚು ಮಂದಿಗೆ ತಿಳಿದಿಲ್ಲವೋ ಹಾಗೇ ಸಹಸ್ರ, ಅಪೌರುಷೇಯ ಮುಂತಾದವೂ ತಿಳಿದಿಲ್ಲ.. ಇದು ಮಾತಿಗೆ ಮಾತು.. ವಿಶಯವಲ್ಲ.. ಆರಯ್ಯು ಬಳಸಬೇಡಿ ಸಂಶೋದನೆಯನ್ನೇ ಬಳಸಿರಿ..!<BR/><BR/>ದಯವಿಟ್ಟ ನನ್ನ ಹಿಂದಿ ಕಮೆಂಟು ಓದಿರಿ.. ಮತ್ತೆ ಅದೇ ಬರೆಯಲಾರೆ...<BR/><BR/>ಹರೀಶರೇ.. ನಿಮಗೆ ವಾದದಲ್ಲಿ ಹೆಚ್ಚು ಲವಲವಕೆ ಇದೆ ವಿಶಯದಲ್ಲಿ ಇಲ್ಲ..<BR/><BR/>ದಯವಿಟ್ಟು ವಿಶಯವಸ್ತುವಿನ ಸುತ್ತ ಇರಿ. ಹಾಗು ಹಳೆಯ ಕಮೆಂಟುಗಳನ್ನು ಓದಿರಿ. ಮತ್ತೆ ಮತ್ತೆ ಹೇಳಿದ್ದನ್ನೇ ಕೇಳಿದ್ದನ್ನೇ ಕೇಳುತ್ತಿದ್ದೀರಿ..<BR/><BR/>ಶಂಕರಬಟ್ಟರು ಹೇಳದೇ ಇರೋದನ್ನೆಲ್ಲ ಹೇಳಿದ್ದಾರೆ ಅಂತೀರಿ..<BR/><BR/>ನೀವು ಶಂಕರಬಟ್ಟರ ಯಾವ ಹೊತ್ತಗೆ ಇಂದ ಹೇಳ್ತಾ ಇದ್ದೀರಿ ಹೇಳಿ ತುಸು ನಾನು ಮತ್ತೆ ತಿರುವು ಹಾಕ್ತೀನಿ...<BR/><BR/>ಆಸಕ್ತಿಗೆ ಮೆಚ್ಚುಗೆ ಇದೆ.. <BR/><BR/>ನನ್ನಿ..!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-34677713130024486292008-07-16T11:51:00.000+05:302008-07-16T11:51:00.000+05:30ಮಾಯ್ಸ, ಸಂಸ್ಕೃತದ ಪ್ರದರ್ಶನ ನನ್ನ ಉದ್ದೇಶವಲ್ಲ. ಕೆಲವು ಪದ...ಮಾಯ್ಸ, ಸಂಸ್ಕೃತದ ಪ್ರದರ್ಶನ ನನ್ನ ಉದ್ದೇಶವಲ್ಲ. ಕೆಲವು ಪದಗಳು ಸಂಸ್ಕೃತದವೇ ಆಗಿದ್ದರೂ ಅಲ್ಲ ಎಂದು ವಾದಿಸಿದ್ದಕ್ಕೆ ನಿಮಗೆಲ್ಲ ಪುರಾವೆ ನೀಡಬೇಕಾಯಿತು.<BR/><BR/>ಶಂಕರ ಭಟ್ಟರು ಸುಮಾರು ಎಂಟು ಹತ್ತು ಶತಮಾನಗಳ ಹಿಂದೆ ತಮ್ಮ ಪದಕ್ರಾಂತಿ/ಲಿಪಿಕ್ರಾಂತಿಗಳನ್ನು ಹೇಳಿದ್ದರೆ ಅದನ್ನು ಅನುಸರಿಸಬಹುದಿತ್ತೇನೋ. ಆದರೆ ನಾವು ಈಗ ಲೆಕ್ಕಕ್ಕೆ ಸಿಗದಷ್ಟು ಸಂಸ್ಕೃತ/ಉರ್ದು/ಹಿಂದಿ ಪದಗಳನ್ನು ನಮ್ಮವೇ ಎಂಬಂತೆ ಉಪಯೋಗಿಸುತ್ತಿದ್ದೇವೆ. ಅವುಗಳನ್ನೆಲ್ಲ ಇದ್ದಕ್ಕಿದ್ದಂತೆ ಬಿಟ್ಟುಬಿಡುವುದು ಹೇಗೆ ಸಾಧ್ಯ? ಅವುಗಳನ್ನೆಲ್ಲವನ್ನೂ ಕನ್ನಡಕ್ಕೆ ತರುವುದು ಸುಲಭದ ಮಾತಲ್ಲ. ಅಸಾಧ್ಯ ಎಂದರೂ ತಪ್ಪಾಗಲಾರದು. ಹಾಗಾಗಿ ಅವು ಹೇಗೆ ಇವೆಯೋ ಅದೇ ರೀತಿ ಉಪಯೋಗಿಸುವುದು ಯೋಗ್ಯ.<BR/><BR/>ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿರಿ:<BR/>೧) ತೆಲುಗು-ಕನ್ನಡ ಲಿಪಿಗಳು ಹೋಲುತ್ತವೆ. ಶಂಕರ ಭಟ್ಟರ ಲಿಪಿಕ್ರಾಂತಿಯಂತಹ ವಾದವನ್ನು ಅಲ್ಲಿ ಏಕೆ ಯಾರೂ ಇನ್ನೂ ಮಂಡಿಸಿಲ್ಲ? ಕನ್ನಡಿಗರು ಮಹಾಪ್ರಾಣ ಉಚ್ಚರಿಸಲು ಬಾರದಷ್ಟು ದಡ್ದರೆ? ಅವರು ಹಿಂದಿ, ಮರಾಠಿ, ತೆಲುಗು ಮಾತನಾಡುವವರಿಗಿಂತ ಕೀಳೆ? <BR/>೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?<BR/>೩) ನಾವು ಕೇವಲ ಅಚ್ಚಕನ್ನಡ ಪದಗಳನ್ನು ಉಪಯೋಗಿಸಿದರೆ ಎಷ್ಟು ಜನಕ್ಕೆ ಅರ್ಥವಾಗುತ್ತದೆ? ಕನ್ನಡ ಮಾತನಾಡುವ ಜನರಲ್ಲಿ ಎಷ್ಟು ಜನಕ್ಕೆ ಒರೆ, ಆರಯ್ಯು ಎಂಬ ಪದಗಳು ತಿಳಿದಿವೆ? (ಪಂಡಿತರ ಬಗ್ಗೆ ನಾನು ಮಾತನಾಡುತ್ತಿಲ್ಲ, ಜನಸಾಮಾನ್ಯರ ಬಗ್ಗೆ ಹೇಳುತ್ತಿದ್ದೇನೆ)<BR/><BR/>ಇತರ ಭಾಷೆಗಳ ಪದಗಳು ಕನ್ನಡಕ್ಕೆ ಬಂದಿರುವುದು ಇಂದು ನಿನ್ನೆಯಿಂದಲ್ಲ. ಈಗ ನಾವು ಕೇವಲ ಕನ್ನಡ ಪದಗಳನ್ನಷ್ಟೇ ಉಪಯೋಗಿಸುತ್ತೇವೆ ಎಂದು ಪಣ ತೊಟ್ಟು ಅದಕ್ಕೆ ಕ್ರಮ ಕೈಗೊಂಡರೂ ಅದು ಎಲ್ಲೆಡೆ ಬಳಕಗೆ ಬರುವಷ್ಟರಲ್ಲಿ ಶತಮಾನಗಳು ಕಳೆದಿರುತ್ತವೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-85357019157175363872008-07-16T11:36:00.000+05:302008-07-16T11:36:00.000+05:30ಮಹೇಶರೆ,ನನ್ನ ಆತಂಕವನ್ನು ಗುರುತಿಸಿದ್ದಕ್ಕಾಗಿ ವಂದನೆಗಳು.ವ...ಮಹೇಶರೆ,<BR/>ನನ್ನ ಆತಂಕವನ್ನು ಗುರುತಿಸಿದ್ದಕ್ಕಾಗಿ ವಂದನೆಗಳು.<BR/>ವೈಚಾರಿಕ ವಿಕಾಸಕ್ಕೆ ವಾಗ್ವಾದ, ಚರ್ಚೆ ಇವೆಲ್ಲ ಅವಶ್ಯಕ. ನೀವು ಚರ್ಚೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುತ್ತಿದ್ದಕ್ಕಾಗಿ ಧನ್ಯವಾದಗಳು.<BR/>ಈಗ ನೀವು ನೀಡಿದ ಟಿಪ್ಪಣಿಗೆ ಸಂಬಂಧಿಸಿದಂತೆ, ನಾನು ಕೆಲವೊಂದು ಸಂದೇಹಗಳನ್ನು ಪ್ರಸ್ತಾವಿಸುತ್ತೇನೆ:<BR/><BR/>(೧)ಶಂಕರ ಭಟ್ಟರು ಮಹಾಪ್ರಾಣದ ಗುರುತಗಳನ್ನು ಸರಳೀಕರಿಸಿದ್ದಾರೆ.>>><BR/>ಶಂಕರ ಭಟ್ಟರು ಹಾಗು ಬಹುಶಃ ಬಿ.ಎಮ್. ಶ್ರೀಕಂಠಯ್ಯನವರೂ<BR/>ಸಹ ಮಹಾಪ್ರಾಣದ ಅಕ್ಷರಗಳನ್ನು ಈಗಿರುವದಕ್ಕಿಂತ ಬೇರೆಯಾಗಿ<BR/>ಬರೆಯಲು ಪ್ರಸ್ತಾಪ ನೀಡಿರುವರು.<BR/>ಲಿಪಿ ವಿಕಾಸವಾಗುವ ಕಾಲದಲ್ಲಿ, ನಮ್ಮ ಪೂರ್ವಜರು ಈ ಸರಳವಾದ ಗುರುತುಗಳಿಂದಲೇ ಬರೆಯಬಹುದಾಗಿತ್ತಲ್ಲ. ಉದಾಹರಣೆಗೆ, 'ಖ' ಅಕ್ಷರದ ಬದಲಾಗಿ 'ಕ'ದ ಕೆಳಗೆ ಗೆರೆ ಎಳೆದೋ(--ಶಂಕರ ಭಟ್ಟರು ಹೆಳುವ ಹಾಗೆ--) ಅಥವಾ 'ಕ್ಹ' ಎಂದೋ (--ಬಿ.ಎಮ್.ಶ್ರೀಯವರು ಹೇಳುವಂತೆ--)ಬರೆಯಬಹುದಿತ್ತಲ್ಲ. ಅವರು ಮಹಾಪ್ರಾಣಗಳಿಗೆ ಬೇರೆಯದೇ ಗುರುತುಗಳನ್ನು ರೂಪಿಸಲು ಕಾರಣವಿರಬೇಕಲ್ಲವೆ?<BR/>ಈಗಿನ ಮಕ್ಕಳಂತೂ, ಕನ್ನಡವಷ್ಟೇ ಅಲ್ಲದೆ, ಹಿಂದಿ ಹಾಗು ಇಂಗ್ಲಿಶ್ಗಳನ್ನೂ ಸಹ ಸರಾಗವಾಗಿ ಬರೆಯುತ್ತಾರೆ ಮತ್ತು ಮಾತನಾಡುತ್ತಾರೆ. ಅಂದ ಮೇಲೆ ಕನ್ನಡ ಲಿಪಿಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ ತಾನೆ?<BR/><BR/>(೨)ಅವಶ್ಯವಿದ್ದಲ್ಲಿ ತದ್ಭವಗಳು ಬರಲಿ, ಆದರೆ ಅನವಶ್ಯಕವಾಗಿ ಹಾಗು compulsoryಯಾಗಿ ಬೇಡ. ಕನ್ನಡಿಗರು ಬೇರೆ ಭಾಷೆಯ ಪದಗಳನ್ನು ಸ್ಪಷ್ಟವಾಗಿ ಬರೆಯಲು, ಉಚ್ಚರಿಸಲು ಸಮರ್ಥರಿದ್ದೇವೆ. <BR/><BR/>(೩)ವೈಜ್ಞಾನಿಕ, ತಾಂತ್ರಿಕ ಇತ್ಯಾದಿ ಪದಗಳಿಗಾಗಿ ಕ್ಲಿಷ್ಟವಾದ ಸಂಸ್ಕೃತ ಪದಗಳನ್ನು ಬಳಸದೇ, ಕನ್ನಡದ ಅಥವಾ ಇಂಗ್ಲೀಶಿನ<BR/>ಪದಗಳನ್ನೇ ಬಳಸಬೇಕು ಎನ್ನುವದನ್ನು ಎಲ್ಲರೂ ಒಪ್ಪುತ್ತಾರೆ.<BR/>ಅದರಲ್ಲಿ ಯಾವುದೇ ಅಭಿಪ್ರಾಯ ಭೇದವಿಲ್ಲ. ಆದರೆ ಕೆಲವೊಂದು ಸರ್ವಭಾರತೀಯ ಪದಗಳ ಬಳಕೆಯಲ್ಲಿ ನಾವು ಅಚ್ಚಕನ್ನಡ ಪದಗಳನ್ನೇ ಬಳಸಬೇಕೆನ್ನುವ ಹಟ ಹಿಡಿಯುವದು ಸರಿಯಲ್ಲ. ಉದಾಹರಣೆಗೆ 'ಆಕಾಶವಾಣಿ'. ತಮಿಳರು 'ವಾನೊಲಿ'ಎನ್ನುವ ಪದವನ್ನು ಬಳಸುತ್ತಿರಬಹುದು. ಆದರೆ, ಭಾರತದಲ್ಲಿ ಉಳಿದಲ್ಲೆಲ್ಲ 'ಆಕಾಶವಾಣಿ'ಪದ ಬಳಕೆಯಲ್ಲಿದೆ. ಈ ಪದ ಕನ್ನಡಿಗರಿಗೆ ಅಪರಿಚಿತವಾದದ್ದೇನಲ್ಲ. ಅಲ್ಲದೆ ಜಾನಪದ ಹಾಗು ಪೌರಾಣಿಕ ಸಂಪ್ರದಾಯಗಳಿಂದಾಗಿ ಈ ಪದ ಕನ್ನಡಿಗರಿಗೆ ಅತ್ಯಂತ ಪರಿಚಿತವಾದ ಪದ. ಇಂತಹ ಸಂದರ್ಭಗಳಲ್ಲಿ ನಾವು 'ಬಾನುಲಿ'ಪದ ಬಳಸುವ ಅವಶ್ಯಕತೆ ಇಲ್ಲವೆಂದು ನನಗೆ<BR/>ತೋರುತ್ತದೆ.<BR/><BR/>ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77166025160812199412008-07-16T08:30:00.000+05:302008-07-16T08:30:00.000+05:30ಸುನಾಥರೇ,ನೀವು ಆತಂಕಗೊಂಡಿದ್ದೀರಿ ಎಂದು ನನಗೆ ಅನ್ನಿಸಿದೆ.ನ...ಸುನಾಥರೇ,<BR/><BR/>ನೀವು ಆತಂಕಗೊಂಡಿದ್ದೀರಿ ಎಂದು ನನಗೆ ಅನ್ನಿಸಿದೆ.<BR/><BR/>ನಿಮ್ಮ ಇಡೀ ಅತಂಕಶಮನಕ್ಕೇ ಮೂರೇ ಮೂರು ಸಾಲುಗಳ ಸಾಕು...<BR/><BR/>೧) ಶಂಕರಬಟ್ಟರ ಲಿಪಿಕ್ರಾಂತಿಯಲ್ಲಿ ಮಹಾಪ್ರಾಣಗಳಿಗೂ ಜಾಗವಿದೆ.. ಆದರೆ ಮಹಾಪ್ರಾಣಗಳನ್ನು ಬಿಟ್ಟರೂ ಅಡ್ಡಿಯಿಲ್ಲ ಎಂದಶ್ಟೇ ಅವರ ಮಾತು.<BR/>೨) ಕನ್ನಡಕ್ಕೆ ಸಂಸ್ಕ್ರುತ ಮತ್ತು ಬೇರೆ ಯಾವ ಬಾಶೆಯಿಂದ ಪದಗಳನ್ನು ತಂದರೂ ಅದನ್ನ ತದ್ಬವ ಮಾಡಿ ಎಂದು ಅವರ ಸಲಹೆ. ಆಗ ಮಹಾಪ್ರಾಣಗಳು ಬೇಕಾಗಿರುವುದಿಲ್ಲ ಸ್ವಾಬಾವಿಕವಾಗಿ.<BR/>೩)ವಿಜ್ನಾನ ಬರಹಗಳಲ್ಲಿ ಕ್ಲಿಶ್ಟವಾದ ಸಂಸ್ಕ್ರುತದ ಪದಗಳ ಬಳಕೆಯಿಂದ ಕನ್ನಡದಲ್ಲಿ ವಿಜ್ನಾನದ ಕಲಿಕೆಗೆ ತೊಡರು. ಅದಕ್ಕೆ ವಿಜ್ನಾನದಲ್ಲಿ ಹೆಚ್ಚು ಇಂಗ್ಲೀಶಿಂದಲೇ ಪದಗಳನ್ನು ತನ್ನಿರಿ ಇಲ್ಲವೇ ಆಡುಗನ್ನಡದಲ್ಲಿ ಪದಗಳನ್ನು ಹುಟ್ಟಿಸಿರಿ.<BR/><BR/>ಮಾದರಿ - <BR/>ಬಾಹ್ಯಾಕಾಶ = ಹೊರಬಾನು<BR/>ದ್ಯುತಿಸಂಸ್ಲೇಶಣಕ್ರಿಯೇ = ಪೋಟೋಸಿಂತಸಿಸ್ಸು/ಬೆಳಕುಹಸನಿಕೆ<BR/><BR/>ದ್ಯುತಿಸಂಸ್ಲೇಶಣಕ್ರಿಯೆ ಇಂತ ಕನ್ನಡ ಉಲಿಕೆಗೆ ಪೋಟೋಸಿಂತಸಿಸ್ಸು ಹತ್ತಿರವಾಗಿದೆ.<BR/><BR/>ದಯವಿಟ್ಟು ಆತಂಕ ಪಡಬೇಡಿ.. ನಿಮ್ಮ ಅಬಿಮಾನ ಸಂಸ್ಕ್ರುತದ ಬಗ್ಗೆ ಅವರು ಯಾವ ಕೀಳುಮಾತನ್ನು ಆಡಿಲ್ಲ.. ಬದಲಿಗೆ ಅವರ ಹೊತ್ತಗೆಗಳನ್ನು ಓದಿದರೆ ಸಂಸ್ಕ್ರುತದಲ್ಲಿರುವ ಸರ್ವನಾಮ, ಕ್ರಿಯಾಪದಗಳು ಇನ್ನೂ ಚನ್ನಾಗೇ ತಿಳಿಯುವುವು...<BR/><BR/>ನನ್ನ ಅಭ್ಯಂತರವಿರುವುದು ನೀವು ಅವರನ್ನು ಮಾತ್ರುದ್ರೋಹಿ, ವಂಚಕ, ವಂಚನೆಯ ಜಾಲ, ಹಿಪೊಕ್ರಾಟ್ ಅಂತೆಲ್ಲ ಅವಸರದ ತೀರ್ಮಾನದಿಂದ ಕೆರೆದುದಕ್ಕೆ.<BR/><BR/>ಅವರ ಎಲ್ಲಾ ವಾದಗಳು ಬಾಶಾವಿಜ್ನಾನದಡಿ ನಿಲ್ಲುವಂತಹದ್ದು ಮತ್ತು ಒಂದು ತಿಯರಿಟಿಕಲ್ ಬೇಸ್ ಇರುವಂತಹದ್ದು..<BR/><BR/>ನಿಮ್ಮ ಬಾಶಾಆಸಕ್ತಿ ನನಗೆ ಮೆಚ್ಚುಗೆ ಆಯಿತು.. <BR/><BR/>ನನಗೆ ನಿಮಗೆ ರುಚಿಸು ಸಾಹಿತ್ಯದಲ್ಲಿ ಆಸಕ್ತಿ ಕಡಮೆ. ಅದಕ್ಕೆ ನಿಮ್ಮ ಬೇರೆ ಬರಹಗಳನ್ನು ಓದಿಲ್ಲ.. ಅದಕ್ಕೆ ಕಮೆಂಟು ಎಸಗಿಲ್ಲ..<BR/><BR/>ಇಲ್ಲಿಗೆ ಮುಗಿಸುವೆನು.. <BR/><BR/>ನಿಮಗೆ ಇನ್ನೂ ನನ್ನ ಬಳಿ ಮಾತಾಡಲಿದ್ದರೆ.. ಇಲ್ಲೇ ವೆಬ್ಬಲ್ಲಿ ಇರ್ತೀನಿ.. ಬಂದು ಮಾತಾಡಿಸಿರಿ..<BR/><BR/>ನಿಮ್ಮ ಬಾಶಾವಿಜ್ನಾನದ ಮೇಲಿನ ಬರಹಗಳನ್ನು ಓದುವೆನು. ಅದರಲ್ಲಿ ಹಲವು ನನಗೆ ತಪ್ಪುಗಳು ಕಂಡಿದ್ದರೂ, ಕೆಲವನ್ನು ಹೇಳಿಹೆನು.. <BR/><BR/>ನಿಮ್ಮನ್ನು ಕೆಳಗೆ ತೋರಿಸವ ಗುರಿ ಇಲ್ಲ... ಬದಲಿಗೆ ನನ್ನ ನೆಚ್ಚಿನ ಶಂಕರಬಟ್ಟರ ವಕೀಲನಾಗಬೇಕಾಯ್ತು ಅಶ್ಟೇ :)ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-5939841257923965225.post-34027320393625729232008-07-15T18:19:00.000+05:302008-07-15T18:19:00.000+05:30ಸುನಾಥರೇ ಮತ್ತು ಶಂಕರಬಟ್ಟರ ಹೊತ್ತಗೆ ಓದಿದವರಿಗೆ.ನೋಡಿ..#ಲ...ಸುನಾಥರೇ ಮತ್ತು ಶಂಕರಬಟ್ಟರ ಹೊತ್ತಗೆ ಓದಿದವರಿಗೆ.<BR/><BR/><BR/>ನೋಡಿ..<BR/><BR/>#ಲಿಪಿ ಬದಲಾವಣೆ ಮತ್ತು ಪದಗಳ ಎರವಲು ಬೇರೆ ಬೇರೆ ವಿಶಯಗಳು. ಅವನ್ನು ಬೇರೆ ಬೇರೆಯಾಗಿ ನೋಡಣ. ( ದಯವಿಟ್ಟು ವೇದ, ರಾಮಾಯಣ, ಉಪನಿಶತ್ತು ಈ ಚರ್ಚೆಗೆ ಬೇಡ )<BR/><BR/>ಲಿಪಿ ಬದಲಾವಣೆ.<BR/><BR/>ನನ್ನ ಮುಂಚಿನ ಕಮೆಂಟನ್ನು ಗಮನಿಸಿರಿ.. ಅಲ್ಲಿ ಶಂಕರಬಟ್ಟರು(ಬಿ.ಎಂ.ಶ್ರೀ ಅವರಂತೆ) ಕನ್ನಡದ ವರ್ಣಮಾಲೆಯನ್ನು ಕಡಮೆ ಗುರುತುಗಳಲ್ಲಿ ಮಾಡಲು ಒಂದು ಕ್ರಮವನ್ನು ಸೂಚಿಸಿದ್ದಾರೆ...<BR/><BR/>ಅವರ ಸೂಚನೆಯಲ್ಲಿ ಷ ಮತ್ತು ಮಹಾಪ್ರಾಣಗಳಿಗೂ ಜಾಗವಿದೆ(ಅದು ಬೇಕೇ ಎಂಬುದು ಬೇರೆಯ ಪ್ರಶ್ಣೆ). ದಯವಿಟ್ಟು ನೋಡಿರಿ. <BR/><BR/>ಅವರು ದೀರ್ಗ ಸ್ವರಗಳಿಗೆ ಗುರುತನ್ನೂ ಬೇಡ ಎಂದಿದ್ದಾರೆ ಹಾಗು ಒತ್ತಕ್ಷರ ಬದಲು ಅಕ್ಕ ಹೀಗೆ ಪಕ್ಕದ ಅರೆವ್ಯಂಜನ ಬರೆಯುವ ಮಾದರಿಯನ್ನೂ ಹೇಳಿದ್ದಾರೆ( ಇದು ಬಿ.ಎಂ.ಶ್ರೀ ಮಾದರಿ)<BR/><BR/>ಇದೊಂದು ವಿಶಯವಾದರೇ...(ಇದನ್ನೇ ಲಿಪಿಕ್ರಾಂತಿ ಎಂದಿರುವುದು)<BR/><BR/>ಆದರೆ ಕನ್ನಡನ ನೆಲದ ಉಲಿಕೆಯಲ್ಲಿ ಷ,ಶ ಮತ್ತು ಮಹಾಪ್ರಾಣಗಳಿಲ್ಲ.. ಅದಕ್ಕೆ ಕನ್ನಡದ ಉಲಿಕೆಗೆ ಹೊಂದಿಸಿ ಬರೆದರೆ ಅಂದ್ರೆ ತದ್ಬವ ಮಾಡಿ ಬರೆದರೆ ನಮಗೆ ಮಹಾಪ್ರಾಣ ಮುಂತಾದವು ಬೇಡ. ಇಲ್ಲಿ ಅವರು ಹೇಳುವ ಹೊಂದಿಸುವಿಕೆ ಮುಕ್ಯ.<BR/><BR/>ಇನ್ನೊಂದು ಸಂಗತಿ ಪದಕ್ರಾಂತಿ.. ಎರವಲು ಪದಗಳ ಬಗ್ಗೆ..<BR/><BR/>ಇಲ್ಲಿ ಅವರು ಹೇಳೋದು ಇಶ್ಟೇ. .ನಮ್ಮಲ್ಲೇ ಇರುವ ಅಂದರೆ ಕನ್ನಡದಲ್ಲೇ ಇರುವ ಪದಗಳಿಗೆ ಪರ್ಯಾಯವಾಗಿ ಹೊರಗಿಂದ ( ಅದು ಯಾವ ನುಡಿಯೇ ಆಗಿರಲಿ ) ಪದಗಳು ಬೇಡ.. ಅದು ಸುಮ್ನೆ ಗೋಜಲು..<BR/><BR/>ಅಂದರೆ ಕನ್ನಡ ನೀರುನ್ನು ಬಿಟ್ಟು.. ಅದರ ಜಾಗದಲ್ಲಿ ಜಲ, ಸಲಿಲ, ವಾಟರ್, ಪಾನಿ ಇವು ಬೇಡ.. ಸುಮ್ಮನೆ ನಮ್ಮ ಪದಕೋಶ ದೊಡ್ಡದಾಗಿ ಕಶ್ಟವಾಗುವುದು.<BR/><BR/>ಆದರೆ ನಮ್ಮಲ್ಲಿ ಇರದ ಸಂಗತಿಗಳಿ ಪದ ಬೇಕು ಮಾದರಿ ಬಸ್ಸು, ದರ್ಮ(ತದ್ಬವ ಮಾಡಿ), ರಾಮಾಯಣ, ಬಗವದ್ಗೀತೆ ಮುಂತಾದವು.....<BR/><BR/>ಅವರ ವಾದ ಮತ್ತೊಂದು ಆಯಾಮ ಅಂದರೆ ಇಂದು ವಿಜ್ನಾನ ಬರಹಗಳಲ್ಲಿ ಹೊಸಪದಗಳಿಗಾಗಿ ಸಂಪೂರ್ಣ ಸಂಸ್ಕೃತದ ಕನ್ನಡದ ಉಲಿಕೆಗೆ ಹೊಂದದ ಪದಗಳ ಬಳಕೆ...<BR/><BR/>ಅದಕ್ಕೆ ಉದಾಹರಣೆಗಳನ್ನು ಕೊಟ್ಟಿದ್ದಾರೆ...<BR/><BR/>ಲಿಪಿಕ್ರಾಂತಿಯಲ್ಲಿ ಅಕ್ಕರಗುರುತುಗಳು ಕಡಮೆ ಮಾಡಿದರೂ ನಮಗೆ ಬೇಕಾದುದನ್ನು ಬರೆದುಕೊಳ್ಳವ ದಾರಿ ಹೇಳಿದ್ದಾರೆ( ಮಹಾಪ್ರಾಣ, ಷಕ್ಕೂ ಕೂಡ)<BR/>ಹಾಗೆ<BR/>ಪದಕ್ರಾಂತಿಯಲ್ಲಿ ಹೇಗೆ ಎರವಲು ಮತ್ತು ಹೊಸಪದಗಳನ್ನು ರಚಿಸಬೇಕು ಎಂದು ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ..<BR/><BR/>ಎಲ್ಲಿಯೂ ಹೊರನುಡಿಯಿಂದ ಪದಗಳ ಬರಲೇ ಬಾರದು ಎಂದು ಹೇಳಿಲ್ಲ.. <BR/>ನಮ್ಮ ಉಲಿಕೆಗೆ ಹೊರನುಡಿಪದಗಳನ್ನ ತದ್ಬವ ಮಾಡಿ ಬಳಸಿ ಎಂದು ಸಲಹೆ ಇತ್ತಿರುವುದು ದಿಟ.<BR/><BR/>ಅವರ ಕನ್ನಡಕ್ಕೇ ಬೇಕು ಕನ್ನಡದ ವ್ಯಾಕರಣ ಮತ್ತು ಕನ್ನಡ ಬರಹವನ್ನು ಸರಿಪಡಿಸೋಣ ಈ ಎರಡು ಹೊತ್ತಗೆಗಳಲ್ಲಿ ಲಿಪಿ ಮತ್ತು ಪದಕ್ರಾಂತಿಯ ಬಗ್ಗೆ ಅವರ ಮಾತು...<BR/><BR/>ದಯವಿಟ್ಟು ಎಲ್ಲರೂ ಆ ಹೊತ್ತಗೆಗಳನ್ನು ಓದಿರಿ.... ತರುವಾಯ ಅನಿಸಿಕೆಗಳನ್ನು ಹೇಳಿರಿ...<BR/><BR/>ತಮಿಳಿನ ಗ್ರಂಥಲಿಪಿ ಬಗ್ಗೆ ಬೇರೆಡೆ ಬರೆಯೋಣ.. !! ನೀವೇ ಹುಡುಕಿ ಒಳ್ಳೆಯ ವೆಬ್-ಸಯ್ಟುಗಳಿವೆ<BR/><BR/>ನನ್ನಿತಿಳಿಗಣ್ಣhttps://www.blogger.com/profile/14440027140784660165noreply@blogger.com