tag:blogger.com,1999:blog-5939841257923965225.post5996660703820778588..comments2024-02-29T07:14:52.690+05:30Comments on ಸಲ್ಲಾಪ: ಶಂಕರ ಭಟ್ಟರ ವಾದದಲ್ಲಿಯ ದೋಷಗಳುsunaathhttp://www.blogger.com/profile/13386371953472087631noreply@blogger.comBlogger77125tag:blogger.com,1999:blog-5939841257923965225.post-74394762475018893772022-06-11T21:24:56.694+05:302022-06-11T21:24:56.694+05:30KANNADIGA JAI, ಧನ್ಯವಾದಗಳು.KANNADIGA JAI, ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-41848822375562286302022-06-09T20:44:51.541+05:302022-06-09T20:44:51.541+05:30KANNADAKKE BEKIRODU SARALA GANNADA SAMSKRUTHA KANN...KANNADAKKE BEKIRODU SARALA GANNADA SAMSKRUTHA KANNADA BEDA, NIVU THILISIRUVA PADAGALU KANNADADINDA TAMILIGE HODA PADAGALIKANNADIGA JAIhttps://www.blogger.com/profile/10018175025986271497noreply@blogger.comtag:blogger.com,1999:blog-5939841257923965225.post-75227519771358012162011-05-04T08:35:40.656+05:302011-05-04T08:35:40.656+05:30ಶಂಕರ ಭಟ್ಟರು ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಬಗ್...ಶಂಕರ ಭಟ್ಟರು ಕನ್ನಡ ಭಾಷೆಯ ರಚನೆ ಮತ್ತು ಬಳಕೆಯ ಬಗ್ಗೆ ಹೇಳುತ್ತಿರುವ ವಿಚಾರಗಳನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ , ಆಡು ಭಾಷೆ ಮತ್ತು ಬರಹದ ಭಾಷೆಯ ರಾಚನಿಕ ಲಕ್ಷಣಗಳ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿಯನ್ನಾದರೂ ತಿಳಿದಿರಲೇಬೇಕು . ಏಕೆಂದರೆ ಭಾಷೆಯ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಒಂದು ಬಗೆಯಾದರೆ , ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವುದು ಮತ್ತೊಂದು ಬಗೆಯಾಗುತ್ತದೆ . ಇಲ್ಲಿ ಬಂದಿರುವ ಬಹುತೇಕ ಪ್ರತಿಕ್ರಿಯೆಗಳು ಭಾವನಾತ್ಮಕ ನೆಲೆಯಲ್ಲಿವೆ . ಭಾಷಾವಿಜ್ಞಾನದಲ್ಲಿ ನುಡಿ ಸಾಮಗ್ರಿಗಳಾದ " ಮಾತಿನ ಧ್ವನಿ- ಪದ -ಪ್ರತ್ಯಯ - ವಾಕ್ಯ - ಅರ್ಥ "ಗಳ ಬಗ್ಗೆ ಇರುವ ವಿಚಾರಗಳನ್ನು ನಾವೆಲ್ಲರೂ ಮೊದಲು ಚೆನ್ನಾಗಿ ತಿಳಿದುಕೊಳ್ಳಬೇಕಾದ ಅಗತ್ಯವಿದೆ . ಸಿ.ಪಿ .ನಾಗರಾಜ , ಬೆಂಗಳೂರು.Chekkere Bloghttps://www.blogger.com/profile/02604958502992190157noreply@blogger.comtag:blogger.com,1999:blog-5939841257923965225.post-83641061965567445112008-10-04T16:58:00.000+05:302008-10-04T16:58:00.000+05:30ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ರ ಮತ್ತು ಱಕಾರದ ಶಬ್ದಗಳಲ...ಹೞಗನ್ನಡದಲ್ಲಿ ಬೞಕೆಯಾಗುತ್ತಿದ್ದ ರ ಮತ್ತು ಱಕಾರದ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಬಹಳವೇ ಇವೆ.<BR/>ಉದಾಹರಣೆಗೆ ಮುರಿ=ಬಗ್ಗು, ಬಾಗು, ಬಗ್ಗಿಸು<BR/>ಮೈಮುರಿದು ದುಡಿಯಬೇಕು<BR/>ಮುಱಿ=ತುಂಡಾಗು, ಬಿಲ್ಲು ಮುರಿಯುವಾಗ(ಬಗ್ಗಿಸುವಾಗ) ಮುಱಿದುಹೋಯ್ತು=ತುಂಡಾಯ್ತು (ಮುಱಿ=ತುಂಡಾಗು)<BR/>ರಸವನ್ನು ಅರಿದು(ಅರೆದು) ಕುಡಿ. ಅರಿ=ಚಚ್ಚು, ಒತ್ತು, ಹೊಡೆ<BR/>ಚೆನ್ನಾಗಿ ಅಱಿತು ಮಾತಾಡು ಅಱಿ=ತಿಳಿ<BR/>ಹಾಗೆಯೆ ಹೊೞೆಯಲ್ಲಿ ಬಾಳೆ ಸಿಗುತ್ತದೆ. (ಬಾಳೆ=ಒಂದು ಜಾತಿ ಮೀನು)<BR/>ಬಾೞೆಹಣ್ಣು ಸಿಹಿಯಾಗಿರುತ್ತದೆ.<BR/>ಬಾೞು=ಬದುಕು, ಬಾಳ್=ಕತ್ತಿ.Anantha Krishnahttps://www.blogger.com/profile/12306203231597614093noreply@blogger.comtag:blogger.com,1999:blog-5939841257923965225.post-26906481223204331682008-09-06T09:34:00.000+05:302008-09-06T09:34:00.000+05:30@@@@@ ಸುನಾತ ಮಾಸ್ತರೇ,ದಾರವಾಡದ ಜನಕ್ಕೆ "ಮೇಷ್ಟ್ರೇ" ಅನ್ನ...@@@@@ ಸುನಾತ ಮಾಸ್ತರೇ,<BR/><BR/>ದಾರವಾಡದ ಜನಕ್ಕೆ "ಮೇಷ್ಟ್ರೇ" ಅನ್ನೋಕೆ ಬರದಿದದ್ದಕ್ಕನೆ "ಮಾಸ್ತರೇ" ಅನ್ನೋದು. "ಸಾರ್" ಅನ್ನೋದಕ್ಕೆ ಬದಲು "ಸರೇ" ಇಲ್ಲ "ಸಾರು" ಅನ್ನೋದು. "ಹೊರಳಿ(ಮರಳಿ) ಬರೋ ನೀನು" ಅನ್ನೋ ಮಾತು "ಹೊಳ್ಳಿ ಬಾ ನೀ" ಆಗಿರೋದು. ಅದೇ ನುಡಿಯು ಬದುಕಿ ಬಾಳುತ್ತಿರುವುದನ್ನು, ಬೆಳೆಯುತ್ತಿರುವುದನ್ನು ತೋರಿಸುತ್ತೆ. ಈ ಬದಲಾವಣೆ ಕನ್ನಡಕ್ಕೆ ಸೀಮಿತವಾಗಿರಬೇಕನ್ರಿ ಸಾರೇ.. ಎರಡು ಸಾವಿರ ಏಡಿ(ವರ್ಷ)ಗಿಂತಲೂ ವಯಸ್ಸಾಗಿರೋ ಸಕ್ಕವನ್ನು ಇನ್ನೂ ಬದಲಾಗಲಿಕ್ಕೆ ಬಿಡಲ್ಲ ಅಂತಿರಲ್ಲ ನಿಮ್ಮ ನಿಲುವು ತಪ್ಪಿಲ್ಲೇದ್ರಿ? ಇಂತ ಕೆಟ್ ಗೊಡ್ಡುತನಕ್ಕೆ ಸಿಕ್ಕೇ ನೋಡು ಸಕ್ಕ, ಜನರ ಬಾಯಿಂದ ದೂರಾಗಿದ್ದು. ಕಣ್ಣು ಬಿಟ್ಟು ಲೋಕಾನ ನೋಡ್ರಿ. ಬಾವಿಯಲ್ಲಿ ಬಿದ್ದು ಒದ್ದಾಡಬೇಡ್ರಿ. ಅದನ್ನೇ ಸಂಕ್ರಣ್ಣ ತಮ್ಮ "ಕನ್ನಡ ಬರಹ ಬದಲಾಹಿಸೋಣ" ಹೊತ್ತಿಗೆಯಲ್ಲಿ ಬಿಡಿಸಿ ಬಿಡಿಸಿ ಹೇಳ್ಯಾರೆ ನೋಡ್ರಿ. ಮಾತಿಗೂ ಬರಹಕ್ಕೂ ಬಾಳ ಯತ್ಯಾಸ ಇರಬಾರದು ಅಂತ. ಅಂಗೇನಾದ್ರು ಆತಂದ್ರೆ ಸಕ್ಕದ ಗನೀನೂ ಕನ್ನಡಕ್ಕೆ ಆಗುತ್ತೆ ಅಂತ. ನೊಡಿ ಇನ್ನೋಮ್ಮೆ ಹೊತ್ತಿಗೆ ಓದಿ ಇಚಾರ ಮಾಡಿ. ಓದಕೇ ಆಗಲ್ಲ ಇಚಾರನೇ ಮಾಡಲ್ಲ ಅಂದ್ರೆ ಸಕ್ಕದ ಚರಣ ಸೇವೆ ಮಾಡುತ್ತ ಕೂತಿರ್ರಿ. ಅಟೊತ್ತಿಗೆ ಕನ್ನಡ ಆಟು ಕುಡಿದೋಗಿರುತ್ತೆ.ನಿಂತ ನೀರುಗೀರು ಅಂತ ಮಾತಾಡಿರಿ ಅಲ್ಲ ಸಕ್ಕದ ಒರೆ ಮಾತಿಗೆ ತಕ್ಕಹಾಗೆ ಬದಲಾಹಿಸೋ ಮಾತಾಡಿದ್ರೆ ಇಟೊಂದು ರಣ ರಂಪ ಯಾಕೆ ಮಡ್ತಿರಿ? ನಿಮ್ಮ ಮಾತಲ್ಲಿ ನಿಯತ್ತು ಐತೇನು? ಸಕ್ಕದ ನುಡಿ ಬದಲಾಗದೇ ಇರಲಿ ಈ ಮಾತೇ ನಿಂತ ನೀರನ್ನು ತೋರಿಸುತ್ತೆ. ಮತ್ತೆ ಸಿಗೋಣ ಮಾಸ್ತರೇ. "ಸರ್ವೇ ಜನೋ ಸುಕಿನೋ ಭವಂತು" ಸಕ್ಕ ಕಿವಿಗೆ ಬಿತ್ತಲ್ಲ ನಲಿವಾತೇನ್ ನಿಮಗೆ ಈಗ..ಓಂ.. ಶಾಂತಿ ಶಾಂತಿ ಶಾಂತಿ.... ಸಕ್ಕ ನಮಗೂ ಬರುತ್ತೆ ಹೂಂ....."ಎಲ್ಲರಿಗೂ ಲೇಸಾಗಲಿ" ಇದು ನೋಡು ಕನ್ನಡ.ಸರ್ವೇ ಜನೋ ಸುಕಿನೋ ಭವಂತು".."ಎಲ್ಲರಿಗೂ ಲೇಸಾಗಲಿ" ಎರಡು ಮಾತಿಗೂ ಇರುವ ತಿಳಿವು ಒಂದೇ ನೊಡ್ರಿಯಪ್ಪ......"ಎಲ್ಲರಿಗೂ ಲೇಸಾಗಲಿ" ಇದನ್ನ ನಮ್ಮ ಕನ್ನಡ ಜನ ಸಲೀಸಾಗಿ ಉಲಿತಾರೆ ಈ ಮಾತು ದಿಟ ಐತಿಲ್ಲ ಮಾಸ್ತರೇ.....ನನ್ನಿ<BR/>ಕನ್ನಡವೇ ಎನ್ನ ಬದುಕು.Anonymousnoreply@blogger.comtag:blogger.com,1999:blog-5939841257923965225.post-1368602085741967772008-09-06T08:58:00.000+05:302008-09-06T08:58:00.000+05:30@ ಹರೀಶ.........."ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾ...@ ಹರೀಶ..........<BR/>"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.<BR/><BR/>ಒಂದು ದಿಟ ಮಾತು ಹೇಳುತ್ತೇನೆ ಕೇಳು. ಒಪ್ಪಿಕೊಳ್ಳುವ ಎದೆಗಾರಿಕೆ ಇರಲಿ. ಕನ್ನಾಡು ಎಶ್ಟುಮಂದಿ "ಭಾಷೆ" ಎಂದು ಉಲಿಯುತ್ತಾರೆ ಲೆಕ್ಕಹಾಕು. ಸಕ್ಕ ಬಲ್ಲವರು ಅಂದರೆ ತತಾಕತಿತ ಪುರೋಹಿತರು, ಅರ್ಚಕರು, ಮತ್ತು ಅವರ ಒಡನಾಟಕ್ಕೆ ಬಂದ ಕೆಲವೇ ಜನ ಮಾತ್ರ "ಭಾಷೆ" ಎಂದು ಉಲಿಯುತ್ತಾರೆ ಅದೂ ಕೂಡ ಸರಿಯಾಗಿ ಅಲ್ಲ ಅನ್ನುವುದು ನೆನಪಿರಲಿ. ಮಿಕ್ಕಿದವರು ಅಂದರೆ ಕನ್ನಾಡಿನ ನೂರಕ್ಕೆ 90ಕ್ಕಿಂತ ಹೆಚ್ಚು ಜನ "ಬಾಸೆ", ಇಲ್ಲ "ಬಾಶೆ" ಅಂತನೇ ಉಲಿಯುವುದು.<BR/>ನಿನಗೆ ಕೇಳಬೇಕೆಂದರೆ ಕನ್ನಾಡಿನ ಯಾವುದೇ ಹಳ್ಳಿಗೆ ಹೋಗಿ ಸಕ್ಕದ ಒಡನಾಟ ಇಲ್ಲದವರತ್ತಿರ ಮಾತಡಿ ನೋಡಿ. ಮಾತು ಹೇಗೆ ಉಲಿಯುತ್ತಾರೋ ಹಾಗೆ ಬರಹ ಬದಲಾಗ ಬೇಕು. ಬರಹಕ್ಕೆ ತಕ್ಕಂತೆ ಮಾತಿರಬೇಕೆನ್ನುವುದು ಗೊಡ್ಡುತನ ಅಶ್ಟೆ. ಹಾಗೇನಾದರು ಆದರೆ ಆ ಬಾಸೆ ಚಟ್ಟ ಏರಿದಂತೆ. ಇದಕ್ಕೆ ಸಾಕ್ಶಿ ಸಕ್ಕ. ನಮ್ಮ ಬಾಶೆ ಒಳನೆಗಳ್ಚು (ರಚನೆ) ಹೇಗಿದೆಯೋ ಹಾಗೆ ನಮ್ಮ ಪದಗಳು ಇರಬೇಕು. ಆ ಒಳನೆಗಳ್ಚು ಆಡುವ ಮಾತಿನಿಂದ ಬಂದಿರುತ್ತದೆ. ಅಂತ ನುಡಿಯಲ್ಲಿ ಗೊಂದಲಗಳುಂಟಾಗದೆ ಆ ನುಡಿ ಬದುಕಿರುತ್ತವೆ. ಯಾವ ನುಡಿಯು ಮೇಲಲ್ಲ ಯಾವುದು ಕೀಳಲ್ಲ. ಸಕ್ಕ ಹೆಚ್ಚು ಎಂಬ ನಿಮ್ಮ ಕೀಳರಿಮೆ, ಇಲ್ಲ ಸಕ್ಕದ ಮೇಲಿರುವ ಕುರುಡುಒಲವು ನಿಮ್ಮ ಈ ನಿಲುವಿಗೆ ಕಾರಣ.Anonymousnoreply@blogger.comtag:blogger.com,1999:blog-5939841257923965225.post-77883522107433510882008-09-06T08:53:00.000+05:302008-09-06T08:53:00.000+05:30This comment has been removed by the author.Anonymoushttps://www.blogger.com/profile/04792037459603467067noreply@blogger.comtag:blogger.com,1999:blog-5939841257923965225.post-9230694933566510002008-09-05T14:39:00.000+05:302008-09-05T14:39:00.000+05:30ದಿಟವಾಗಿ ಹೇಳಿ ಶಂಕರಣ್ಣನ ಹೊತ್ತಿಗೆ 'ಕನ್ನಡ ಬರಹವನ್ನು ಸರಿ...ದಿಟವಾಗಿ ಹೇಳಿ ಶಂಕರಣ್ಣನ ಹೊತ್ತಿಗೆ 'ಕನ್ನಡ ಬರಹವನ್ನು ಸರಿಪಡಿಸೋಣ' ನೀವು ಓದಿದ್ದೀರ? ಓದಿದ್ದರೆ ನೀವು ಈ ರೀತಿ ಆಡ್ತಿರಲಿಲ್ಲ. ಇಲ್ಲವೆ ಓದಿದ್ದರೂ ನಿಮ್ಮ ತಲೆಯಲ್ಲಿ ಸೇರಿರೋ ಸಕ್ಕದ ಬೂತ ಅವರ ಕನ್ನಡ ಪರವಾದವನ್ನು ತಿಳಿಯದಂತೆ ಮಾಡಿದೆ. ನೀವು ಇಲ್ಲಿ ವಾದಕ್ಕೆ ತೆಗೆದುಕೊಂಡಿರೋ ಎಲ್ಲಾ ವಿಚಾರವನ್ನೂ ಅವರು ತರ್ಕಬದ್ದವಾಗಿ ವಿವರಿಸಿದ್ದಾರೆ. ಜೊತೆಗೆ ನಿಮ್ಮಂತ ಬಾಸಾ ಪಂಡಿತರ ಬಾಯಿಬಡುಕುತನದ ಬಗ್ಗೆ ಮೊದಲೇ ಹೇಳಿಬಿಟ್ಟಿದ್ದಾರೆ. ಅವರು ತಮ್ಮ ಹೊತ್ತಿಗೆಯಲ್ಲಿ ಕನ್ನಡದ ಪರವಾಗಿ ಬರೆದಿರುವುದಲ್ಲಿ ಎಲ್ಲಿಯೂ ತೊಡರಿಲ್ಲ. ಪುಂಕಾನು ಪುಂಕವಾಗಿ ಎಲ್ಲವನ್ನೂ ಬಿಡಿಸಿ ಬಿಡಿಸಿ ಹೇಳಿದ್ದಾರೆ. ಕುರುಡುಒಲವು ಈಗೆ ಇರುತ್ತೆ ಬಿಡಿ. ಒಡೆದ ಸೋರೆ ಈಗೆ ಬೊಕ್, ಬೊಕ್ ಅಂತ ಹೊಡ್ಕೊಂತಿರುತ್ತೆ. <BR/>ಕನ್ನಾಡ ಕನ್ನಡಿಗರೆ ಶಂಕರ ಬಟ್ಟರ " ಕನ್ನಡ ಬರಹ ಸರಿಪಡಿಸೋಣ" ಹೊತ್ತಿಗೆಯನ್ನು ತಪ್ಪದೇ ಓದಿ. ಕನ್ನಡವನ್ನು ಸಕ್ಕದ ಬಲೆಯಿಂದ ಬಿಡಿಸೋಣ ಬನ್ನಿ.Anonymoushttps://www.blogger.com/profile/04792037459603467067noreply@blogger.comtag:blogger.com,1999:blog-5939841257923965225.post-36933161209549677862008-09-04T10:00:00.000+05:302008-09-04T10:00:00.000+05:30ಉಪಯೋಗಿಸಿದ "ಭ್ರಮೆ" ಪದದ ಬದಲು ಬೆಮೆ, ಮೆಳ್ಪಡೆ...ಉಪಯೋಗಿಸಿದ "ಭ್ರಮೆ" ಪದದ ಬದಲು ಬೆಮೆ, ಮೆಳ್ಪಡೆ ಎಂದೆಲ್ಲಾ ಉಪಯೋಗಿಸಿದರೆ "ಮೇಲ್ವರ್ಗ" "ಕೆಳವರ್ಗ" ಎರಡಕ್ಕೂ ತಿಳಿಯದೆ ಅನರ್ಥವಾಗುತ್ತದೆ.....<BR/>ಅಯ್ಯೋ ಅರೀಶಪ್ಪ ಒಸಿ ಅಚ್ಚಕನ್ನಡದ ಒಳಹೊಕ್ಕು ನೋಡಪ್ಪ. ನಿನಗೆ ಗೊತ್ತಿರುವುದು ಸಕ್ಕದ ಭ್ರಮೆಗೆ ಬೆಮೆ ಅಂತ ಅಷ್ಟೆಯ.<BR/>ಇಲ್ನೋಡಪ ಒಸಿ ಸುಮ್ಮನೆ ಸಕ್ಕವೇ ದೊಡ್ಡದು ಅನ್ನೋ ತಳವೆಳಗಿನಲ್ಲಿ ಕೊಳೆವ ಜೊಂಡಾಗಿ ಬಾವಿ ಕಪ್ಪೆ ಆಗ್ತಿಯಲ್ಲ. ಏಸೊಂದು ಒರೆ ಕನ್ನಡದಲ್ಲಿ ಇದ್ದಾವೆ ರೆಪ್ಪೆ ಅರಳಿಸಿ ನೋಡಪ್ಪ.<BR/>ಭ್ರಮೆ---> ತಳವೆಳಗು, ವಿಡಾಯ, ವಿಕಳ, ಮೆಳ್ಪಡೆ, ಮರವೆ, ಬೊಂಕು, ಬಿಸಿಲುಗುದುರೆ, ಪೊರೆ. ಈಸು ಸಾಕಲ್ಲವೆ? <BR/>ಇವೆಲ್ಲ ಭ್ರಮೆಗೆ ಬದಲಾಗಿ ನಮ್ಮ ಕನ್ನಡದ ಒಡಲಲ್ಲಿ ಅಡಗಿರೋ ಒರೆ ನೋಡಪ್ಪ.<BR/>ಇವನ್ನು ಬಳಸಿದರೆ ಈ ಒರೆಗಳು ಕೊಡುವ ತಿಳುವಳಿಕೆ ಭ್ರಮೆ ಅಂತನೇ ಕಣೋ. ಬಳಸಿ ನೋಡಪ್ಪ. ಬಳಸದಲೇ ಅದಾಗುತ್ತೆ ಇದಾಗುತ್ತೆ ಆಗಾಗುತ್ತೆ ಈಗಾಗುತ್ತೆ ಅಂದರೆ ಯ್ಯಾಂಗಪ್ಪ. ಕೊನೆಯಗೆ ಅಚ್ಚ ಕನ್ನಡ ಅನ್ನೋ ನನ್ನಂತರಿಗೆ, ಶಂಕ್ರಣ್ಣನಿಗೆ ತಿಳಿದೇ ತಿಳಿಯುತ್ತೆ. ನಿಮ್ಮ "ಮೇಲ್ವರ್ಗ" "ಕೆಳವರ್ಗ" ಎರಡಕ್ಕೂ ತಿಳಿಯದೆ ಅನರ್ಥವಾಗುತ್ತದೆ. ಈ ಮಾತು ಸರಿ ಐತೇನಪ್ಪ? ಸಂಕ್ರಣ್ಣನ ಮೇಲ್ವರ್ಗ ಅಂದ್ರೆ ಎರ್ರಾಬಿರಿ ಸಕ್ಕದ ಒರೆ ಬಳಸೋರೋಪ್ಪ. ನೀನು ತಿಳಿಕೊಂಡಿರೊ ಮೇಲ್ವರ್ಗ ಕೆಳವರ್ಗ ಜಾತಿದೇನೋ ಅನಿಸುತ್ತೆ ನನಗ್ಯಾಕೋ. ಅಂಗಿಲ್ಲ ಅಂದ್ರೆ ಬಿಡು ವೈನಾತು..ತಪ್ಪು ತಿಳಿಬ್ಯಾಡಪ ಇಸಾರ ಮಾಡು... ಅಚ್ಚ ಕನ್ನಡ ಬಳಸಿದರೆ "ಮೇಲ್ವರ್ಗ" "ಕೆಳವರ್ಗ"ಕ್ಕೆ ಯಾಕೆ ಅನರ್ಥವಾಗುತ್ತೋ ನನಗಂತು ತಿಳಿವಲ್ದಪ್ಪ. <BR/>ನೀನು ಕನ್ನಡದ ಕಂದ ಅಲ್ಲೇನು? ಮತ್ತೇ ಕನ್ನಡ ಬಳಸೋಕೆ ಯಾಕೆ ನಿಕ್ಕಾರದಲ್ಲಿ ಉಚ್ಚೆ ಒಯ್ಯಕೊಂಡೋರ್ತರ ಆಡ್ತಿಯ? ಕನ್ನಡದ ಕಂದರಾಗಿ ಕನ್ನಡನ ಉಳಿಸಿಕೊಳ್ಳ ಬೇಕುತಾನೆ? ನಾವು ಉಳಿಸಿಕೊಳ್ಲಿಲ್ಲ ಅಂದ್ರೆ ಮರಾಟಿ, ತಮಿಳು, ತೆಲಿಗಿನೋರು ಬಂದು ಉಳ್ತಾರೇನು? ಸಕ್ಕದ "ಭ್ರಮೆ" ಒರೆಯ ಬದಲು -----> ತಳವೆಳಗು, ವಿಡಾಯ, ವಿಕಳ, ಮೆಳ್ಪಡೆ, ಮರವೆ, ಬೊಂಕು, ಬಿಸಿಲುಗುದುರೆ, ಪೊರೆ ಬಳಸುತ ನೀನು ಹಿಗ್ಗಿ ಈರೆಕಾಯಿಯಾಗಿ ನಲಿಬೇಕೋ.<BR/>ಕೀಳರಿಮೆ ಇರಬಾರ್ದಪ್ಪ. ನಮ್ಮಲ್ಲಿ ಸರಿಯಾದ ಒರೆ ಇಲ್ಲ ಅಂದರೆ ಯ್ಯಾಂಗಪ್ಪ ಸಂದ ಇರುತ್ತೆ. ನಮ್ಮಲ್ಲಿ ಈಗ ಬಳಸೋ ಎಲ್ಲಾ ಸಕ್ಕದ ಪದಕ್ಕೂ ಕನ್ನಡದ ಒರೆ ಇದಾವೊ. ಇಲ್ಲಾಂದ್ರೆ ಅರ್ರಿಂದ ಇಸ್ಕೋಳೋಣ. ನಮ್ಮದು ಮೊದಲು ಉಳಿಸ್ಕೋಳ್ಳೋಣ ಆಮೇಲೆ ಬೇರೇರ್ ಬಗ್ಗೆ ನೋಡೋಣಪ್ಪ. ಅದು ಬಿಟ್ಟು ದೆವ್ವ ಮೈಮೇಲೆ ಬಂದೋರ ತರ ಏನೇನೋ ಮಾತಾಡ್ತಿಯಲ್ಲಪ್ಪ. ಜಪಾನಿನ ಅಕ್ಕರಗಳ ಬಗ್ಗೆ ಸುಮ್ಸುಮ್ನೆ ಏನೇನೋ ಮಾತಾಡ್ತಿಯಲ್ಲ. ತಿಳ್ಕೋಂಡು ಮಾತಾಡಕಪ್ಪ. ಬಾಯಿಗೆ ಬಂದಂತೆ ಮಾತಾಡಿದ್ರೆ ನಿನ್ನಂಗೂ ಬೇರೇರು ಮಾತ್ನಾಡ್ ಬೇಕಾಗುತ್ತೆ ನೋಡು.<BR/><BR/>"ಅಚ್ಚಕನ್ನಡ" ನನಗೆ ಅದೊಂದೇ ದಿಟ..Anonymoushttps://www.blogger.com/profile/04792037459603467067noreply@blogger.comtag:blogger.com,1999:blog-5939841257923965225.post-14336668867354606772008-07-17T14:06:00.000+05:302008-07-17T14:06:00.000+05:30joey,ಸಭ್ಯತೆಯ ಮಿತಿಯೊಳಗೆ ಚರ್ಚಿಸೋಣ ಎನ್ನುವ ನಿಮ್ಮ ಸಲಹೆಗ...joey,<BR/>ಸಭ್ಯತೆಯ ಮಿತಿಯೊಳಗೆ ಚರ್ಚಿಸೋಣ ಎನ್ನುವ ನಿಮ್ಮ ಸಲಹೆಗೆ ಧನ್ಯವಾದಗಳು.<BR/><BR/>ಈಗ ನಮ್ಮ ಚರ್ಚೆ ಮಹಾಪ್ರಾಣಗಳನ್ನು ಕನ್ನಡದ ಅಕ್ಷರಮಾಲೆಯಲ್ಲಿ ಇಟ್ಟುಕೊಳ್ಳಬೇಕೊ ಅಥವಾ ತೆಗೆದುಹಾಕಬೇಕೊ ಎನ್ನುವ ಅಂಶದ ಮೇಲೆ ಕೇಂದ್ರಿತವಾಗಿದೆ.<BR/><BR/> ಮಾಯ್ಸ ಅವರು ಮಹಾಪ್ರಾಣಗಳನ್ನು ತೆಗೆದು ಹಾಕಲು ಕೊಡುವ<BR/>ಕಾರಣವೆಂದರೆ, ಮಹಾಪ್ರಾಣಗಳು ಮೂಲಕನ್ನಡದಲ್ಲಿ ಇಲ್ಲ ಹಾಗು ಸೋಲಿಗರು, ಜೇನುಕುರುಬರು ಮೊದಲಾದ ಮೂಲವರ್ಗದವರ ಸೊಲ್ಲಿನಲ್ಲಿ ಮಹಾಪ್ರಾಣಗಳು ಇಲ್ಲ etc.<BR/><BR/>ಮೂಲಕನ್ನಡದಲ್ಲಿ ಇರಲಿಕ್ಕಿಲ್ಲ, ಆದರೆ ಕನ್ನಡ ಬೆಳೆದಿದೆ, ಬೆಳೆಯುತ್ತಲೆ ಇದೆ; ಮಹಾಪ್ರಾಣಗಳನ್ನು ಅಕ್ಷರಮಾಲೆಯಿಂದ ಕಿತ್ತೆಸೆಯುವದರಿಂದ ನಾವು ತಪ್ಪು ಮಾಡುತ್ತೇವೆ; ನಮ್ಮ ಈ ಹುಚ್ಚು ಕೃತ್ಯಕ್ಕಾಗಿ ನಮ್ಮ ಮುಂದಿನ ಪೀಳಿಗೆಯವರುsuffer<BR/>ಆಗುತ್ತಾರೆ. ಹಾಗೆ ಮಾಡುವ ಹಕ್ಕು ನಮಗಿಲ್ಲ ಎಂದು ನನ್ನ ಅನಿಸಿಕೆ. ಎರಡನೆಯದಾಗಿ ಒಂದು ಕಾಲದಲ್ಲಿ ಮೂಲಕನ್ನಡಿಗರು ಮೈಗೆ ತೊಪ್ಪಲನ್ನು ಸುತ್ತಿಕೊಳ್ಳುತ್ತಿದ್ದರು ಅಥವಾ ಹತ್ತಿ ಬಟ್ಟೆಯೆ ನಮಗೆ ಸಹಜವಾದದ್ದು ಎನ್ನುವ ತರ್ಕದ ಮೂಲಕ ಈಗ ನಾವು ಧರಿಸುತ್ತಿರುವ ಪಾಲಿಸ್ಟರ ಬಟ್ಟೆಗಳನ್ನು ಕಿತ್ತೆಸೆಯಬಹುದೆ? ಈಗಲೂ ಸಹ ಸೋಲಿಗರು ಅಥವಾ ಜೇನುಕುರುಬರು ಸಾದಾ ಬಟ್ಟೆಯನ್ನೇ ಧರಿಸುತ್ತಿರಬಹುದು? ಹಾಗಂತ ಎಲ್ಲರೂ ಹಾಗೆ ಮಾಡಬಹುದೆ?<BR/><BR/>ಅಲ್ಲದೆ, ಅನೇಕ ಕನ್ನಡಿಗರು ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುತ್ತಾರೆ. ಅದು ಕೇವಲ ಅವರ ಕಲ್ಪನೆ ಎಂದು ಶಂಕರ ಭಟ್ಟರು ತಮ್ಮ ಪುಸ್ತಕ (ಕನ್ನಡ ಬರಹವನ್ನು ಸರಿಪಡಿಸೋಣ)ದಲ್ಲಿ ಬರೆದಿದ್ದಾರೆ. ಇದು absolutely presumptive ಹೇಳಿಕೆ. ಹಳೆಯ ಮೈಸೂರು ಪ್ರದೇಶದಲ್ಲಿ ಹೇಗೊ ನನಗೆ ಗೊತ್ತಿಲ್ಲ, ಅದರೆ ಉತ್ತರ ಕರ್ನಾಟಕದಲ್ಲಿ ಮಹಾಪ್ರಾಣವು very much in force. ನಮ್ಮ ಮಾಜಿ ಮಂತ್ರಿ ಖರ್ಗೆ ಸಾಹೇಬರ ಬಳಿಗೆ ಹೋಗಿ<BR/>ಅವರನ್ನು 'ಕರ್ರಗೆ ಸಾಹೆಬರೆ'ಎಂದು ಕರೆದು ನೋಡಿರಿ. ಅಥವಾ<BR/>ರಾಠೋಡ ಸಾಹೇಬರಿಗೆ ರಾಟೋಡ ಎಂದು ಕರೆದು ನೋಡಿರಿ. ಅವರ ಪ್ರತಿಕ್ರಿಯೆಯು ಮಹಾಪ್ರಾಣಾತ್ಮಕವಾಗಿ ಇರುವದರಲ್ಲಿ ಸಂಶಯವಿಲ್ಲ.<BR/><BR/>ಒಟ್ಟಿನಲ್ಲಿ ಏನು? ಮಹಾಪ್ರಾಣವು ಕರ್ನಾಟಕದಲ್ಲಿ ಇದೆ. ಅದರ ಸಂಜ್ಞೆಗಳನ್ನು ತೆಗೆಯುವ ಮೊದಲು ಅದರ ಇರುವಿಕೆಯ ಬಗೆಗೆ realistic statistical study ಮಾಡಿರಿ.<BR/><BR/>ಶಂಕರ ಭಟ್ಟರು ದೊಡ್ಡ ವಿದ್ವಾಂಸರು ಸರಿ, ಆದರೆ verify<BR/>ಮಾಡದೆ presumptive ನಿರ್ಣಯಗಳನ್ನು ಬರೆಯಬಾರದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48752668779861419122008-07-17T11:12:00.000+05:302008-07-17T11:12:00.000+05:30joey, ಒಳ್ಳೆ ವಿಷಯ ಹೇಳಿದ್ದೀರಿ. ಕುರ್ಚಿ ಎಂಬುದಕ್ಕೆ ಅಚ್ಚ...joey, ಒಳ್ಳೆ ವಿಷಯ ಹೇಳಿದ್ದೀರಿ. ಕುರ್ಚಿ ಎಂಬುದಕ್ಕೆ ಅಚ್ಚ ಕನ್ನಡ ಪದ ಯಾವುದೂ ಇಲ್ಲ. ಹಾಗಾಗಿ ಅದನ್ನು ಕನ್ನಡಕ್ಕೆ ಇಳಿಸಲಾಗಿದೆ. ಆದರೆ ಭಾಷೆ ಎಂಬ ವಿಷಯದಲ್ಲಿ ಹೀಗಲ್ಲ, ನುಡಿ ಎನ್ನಬಹುದು.<BR/><BR/>ಹಾಗೆಯೇ, ಧನ ಎಂಬುದಕ್ಕೆ ಹಣ ಎಂದು ಸಮಾನಾರ್ಥಕ ಪದಗಳನ್ನು ಉಪಯೋಗಿಸೋಣ, ಬೇಡ ಎಂದವರಾರು? ಅದನ್ನು ಬಿಟ್ಟು "ಧನ"ವನ್ನು "ದನ" ಮಾಡಬಾರದು ಎಂಬುದು ನನ್ನ ಮಾತಿನ ತಿರುಳು.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-71673427784304246622008-07-16T17:53:00.000+05:302008-07-16T17:53:00.000+05:30ಹರೀಶರು ಹೇಳಿದ್ದು,>>"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "...ಹರೀಶರು ಹೇಳಿದ್ದು,<BR/>>>"ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.<BR/><BR/>ನೋಡಿ, ನೀವು ಮತ್ತೆ ಬೇಗ ತೀರ್ಮಾನ ತೊಗೊಳ್ತಾ ಇದ್ದೀರಾ. ನಾನು ನಿಮ್ಮ ಬತ್ತಳಿಕೆಯ ಒಂದು ಬಳಕೆಯನ್ನೇ ಉದಾಹರಣೆಯಾಗಿ ತೊಗೊಂಡು ಮೂರು ಪ್ರಶ್ನೆಯನ್ನು ಕೇಳ್ತೀನಿ. ಇದಕ್ಕೆ <B>ಪ್ರಾಮಾಣಿಕ ಉತ್ತರ ಕೊಡಿ. ಭಾವುಕವಾಗಿ, ಕನ್ನಡದಿಂದ ಏನೋ ಕಳ್ದೋಯ್ತು ಎಂಬ ಉದ್ವೇಗದಿಂದ ಉತ್ತರಿಸಬೇಡಿ, ದಯವಿಟ್ಟು.</B><BR/><BR/>೧. ಈಗ ನೋಡಿ ನೀವು, ಕುರ್ಚಿಯನ್ನು "ಖುರ್ಸಿ" ಅಂತೀರೋ "ಕುರ್ಚಿ" ಅಂತೀರೋ ? Maza ಎನ್ನುವುದನ್ನು "ಮಜ" ಅಂತ ನಾವು ಬಳಸಲ್ವೇ ? ಇಂತಿರುವಾಗ, ಭಾಷೆಯನ್ನು "ಬಾಶೆ" ಅಂತ ಬರೆಯಬೇಡಿ, ಅಂತ ಹೇಳೋಕ್ಕೆ ನಾವು ನೀವು ಯಾರು ? ಭಾಷೆಯನ್ನು ಭಾಷೆಯಾಗಿಯೇ ಹೇಳುಬೇಕು ಅಂತ ಇದ್ದರೆ, ಕುರ್ಚಿಯನ್ನು ಖುರ್ಸಿಯಂತಲೇ ಹೇಳೋಕ್ಕೆ ನೀವು ತಯಾರಾ ?. ಮತ್ತೊಮ್ಮೆ, ಉದ್ವೇಗ ಬೇಡ. ಯೋಚಿಸಿ ಉತ್ತರ ಕೊಡಿ.<BR/>೨. ನಿಮಗೆ "ಭಾಷೆ"ಯನ್ನು ಭಾಷೆ ಅಂತಲೇ ಬರೆಯಬೇಕು ಎನ್ನುವ ಮನಸ್ಥಿತಿಯಿದ್ದರೆ, ನಿಜವಾಗಿ ನೋಡಿದರೆ, "ಭಾಷಾ" ಎಂದು ಬರೆಯಿರಿ. ಸಂಸ್ಕೃತದ "ಭಾಷಾ"ವನ್ನು ಕನ್ನಡದಲ್ಲಿ "ಭಾಷೆ" ಅಂತ ಬರೆದು ಸಂಸ್ಕೃತವನ್ನು ಯಾಕೆ ಹಾಳುಮಾಡ್ತೀರಿ ಅಂತ ನಾನು ಕೇಳಿದರೆ ನಿಮ್ಮ ಉತ್ತರ ಏನು ?<BR/>೩. ಅಷ್ಟಕ್ಕೂ ಮಹಾಪ್ರಾಣಗಳು ಬೇಕು ಎನ್ನುವವರೂ ಕೂಡ "ಭಾಷೆ"ಯನ್ನು "ಭಾಷೆ" ಅಂತ ಉಚ್ಚರಿಸಲ್ಲ, ಬದಲಾಗಿ "ಭಾಶೆ" ಅಂತಾರೆ. ನಿಮಗೆ ಶ, ಷಗಳ ನಡುವೆ ವ್ಯತ್ಯಾಸ ತಿಳಿದಿರಬಹುದು. ನಿಮಗೆ "ಭಾಷೆ" ಬೇಕು ಎಂದಾದರೆ, ಕಷ್ಟಪಟ್ಟಾದರೂ, "ಭಾಷೆ" ಅಂತ ನಾಲಗೆ ಹೊರಳಿಸಿ ಹೇಳಿ, ಮುಖ್ಯವಾಗಿ ನಿಮ್ಮ ಹತ್ತಿರದವರಿಂದ ಹೇಳಿಸಿ ನೋಡೋಣ. ಉದ್ವೇಗದಲ್ಲಿ "ನಾನು ಭಾಷೆ ಅಂತಾನೇ ಹೇಳ್ತೀನಿ, ಅದಕ್ಕೇನೀಗ" ಎನ್ನಬಹುದು. ಆದರೆ ಪ್ರಯತ್ನವಿಲ್ಲದೆ, ದಿನಗಟ್ಟಲೆಯಲ್ಲಿ ನಾವು, ನೀವು ಎಲ್ರೂ "ಶ"ವನ್ನೇ ಬಳಸೋದು.<BR/><BR/>ಕನ್ನಡದ ಸೊಗಡಿಗೆ ಹೊಂದುವಂತೆ ನಾವು (ಹಿಂದಿನ ಕನ್ನಡ ಕವಿಗಳು, ಈಗಿನ ಪಂಡಿತರೂ, ಎಲ್ಲರೂ) ಎಷ್ಟೋ ಸಂಸ್ಕೃತ ಪದಗಳನ್ನು, ಉರ್ದು ಪದಗಳನ್ನು ಒಗ್ಗಿಸಿಕೊಂಡಿದ್ದೇವೆ ? ಇಂತಿರುವಾಗ ನಮ್ಮದಲ್ಲದ ಪದಗಳನ್ನು ನಮ್ಮ ಸೊಗಡಿಗೆ ಹೊಂದಿಸಿಕೊಂಡು ಬರೆದವರನ್ನು ಕೀಳುಗಣ್ಣಿನಿಂದ ಏಕೆ ನೋಡಬೇಕು ? ಕನ್ನಡ ಪಂಡಿತರು ಕೂಡ ಬೇರೆ ಬೇರೆ ಕಡೆ ಎಷ್ಟೋ ಮಹಾಪ್ರಾಣಗಳನ್ನು ಉಲಿಯುತ್ತಿಲ್ಲ (ಖುರ್ಸಿ->ಕುರ್ಚಿ, ಒಂದು ಸಣ್ಣ ಉದಾಹರಣೆ)<BR/><BR/>"ದೇವೇಗೌಡರ ಆಸನ ..." ಮುಂತಾದ ಕುಹಕಗಳು ಶಾಸ್ತ್ರೀಯ ವಿಷಯದಲ್ಲಿ ಚರ್ಚಿತವಾಗುವುದು ಈ ಒಂದು ಚರ್ಚೆಯ ಘನತೆಗೆ ಅಪಮಾನ.ಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.comtag:blogger.com,1999:blog-5939841257923965225.post-30133949637763140252008-07-16T16:25:00.000+05:302008-07-16T16:25:00.000+05:30joey, ಸರಿಯಾಗಿ ಹೇಳಿದ್ದೀರಿ. "ನುಡಿ" ಎಂದು ಬಳಸಲಿ, ಬೇಡ ಅ...joey, ಸರಿಯಾಗಿ ಹೇಳಿದ್ದೀರಿ. "ನುಡಿ" ಎಂದು ಬಳಸಲಿ, ಬೇಡ ಅಂದವರಾರು? ಆದರೆ ಅವರಿಗೆ ನುಡಿ ಎಂಬ ಪದ ಹೊಳೆಯಲಿಲ್ಲ ಎಂದ ಮೇಲೆ "ಭಾಷೆ" ಎಂದು ಸರಿಯಾಗಿ ಉಪಯೋಗಿಸಲಿ. "ಬಾಶೆ" ಎಂದು ಹೇಳಿ ಅದನ್ನು ಹಾಳುಗೆಡಹುವುದು ಬೇಡ.<BR/><BR/>ಶಂಕರ ಭಟ್ಟರ ಮೇಲೆ ನನಗೆ ಯಾವ ದ್ವೇಷವೂ ಇಲ್ಲ. ಇದನ್ನು ನಾನು ಮೇಲೆಯೇ ಹೇಳಿದ್ದೇನೆ.Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-83020127445701364192008-07-16T14:36:00.000+05:302008-07-16T14:36:00.000+05:30@ಎಲ್ಲರಿಗೂ (ಮುಖ್ಯವಾಗಿ ಹರೀಶ್),>> ಶಂಕರ ಭಟ್ಟರನ್ನ ಕೇಳ್ಕ...@ಎಲ್ಲರಿಗೂ (ಮುಖ್ಯವಾಗಿ ಹರೀಶ್),<BR/><BR/>>> ಶಂಕರ ಭಟ್ಟರನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ.<BR/><BR/>ಶಾಸ್ತ್ರೀಯವಾದ ಈ ವಿಷಯ ಮಾತುಕತೆಯಲ್ಲಿ, ಶಂಕರ ಭಟ್ಟರನ್ನು ಹೀಗೆ ವೈಯಕ್ತಿಕ ಮಟ್ಟಕ್ಕೆ ಇಳಿಸಿಕೊಂಡು ಚರ್ಚಿಸುತ್ತಿರುವುದು ಒಂಚೂರೂ ಸರಿಯಿಲ್ಲ. ಇದು ನನ್ನ ಪ್ರಾಮಾಣಿಕೆ ಅನಿಸಿಕೆ.ಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.comtag:blogger.com,1999:blog-5939841257923965225.post-71300598566351540932008-07-16T14:31:00.000+05:302008-07-16T14:31:00.000+05:30ಈ ಚರ್ಚೆಗೆ ನೇರವಾಗಿ ನಂಟಾಗದಿದ್ದರೂ, ಯಾವ ನೆಲೆಯಲ್ಲಿ ಮಹಾಪ...ಈ ಚರ್ಚೆಗೆ ನೇರವಾಗಿ ನಂಟಾಗದಿದ್ದರೂ, ಯಾವ ನೆಲೆಯಲ್ಲಿ ಮಹಾಪ್ರಾಣಗಳ ಬಗ್ಗೆ ಕನ್ನಡ ಸಾರಸ್ವತ ಲೋಕದಲ್ಲಿ ಈ ಹೊತ್ತಿನಲ್ಲಿ ಚರ್ಚೆಯಾಗುತ್ತಿದೆ ಎಂಬುದನ್ನು ಈ ಕೆಳಗಿನ ಎಳೆಯನ್ನು ನೋಡಬಹುದು.<BR/><A HREF="http://sampada.net/blog/shreekantmishrikoti/15/07/2008/10031" REL="nofollow">ಸರಳಗನ್ನಡ</A><BR/><BR/>@ಎಲ್ಲರಿಗೂ, (ಮುಖ್ಯವಾಗಿ ಭಾವುಕವಾಗಿಯೇ ಇಲ್ಲಿಯ ತನಕ ಪ್ರತಿಕ್ರಿಯಿಸಿರುವವರಿಗೆ),<BR/>ಗೆಳೆಯರೆ, ನೋಡಿ, ಮಹಾಪ್ರಾಣಗಳು ಬೇಡ, ಅಂದ್ರೆ, ಇನ್ನುಮುಂದೆ "ಭಾಷೆ"ಯನ್ನು "ಬಾಶೆ"ಯಾಗಿ ಹೇಳಿ ಅಂತಲ್ಲ. ಆದರೆ ಮಹಾಪ್ರಾಣಗಳಿರುವ "ಭಾಷೆ"ಗೆ ಬದಲಾಗಿ ಬೇರೆ ಆಲ್ಟರ್ನೇಟೀವ್ ಇದ್ಯಾ ಅಂತ ಹುಡುಕುವುದು(ಅನ್ವೇಷಿಸುವುದಲ್ಲ). ಹಾಗೆ ನೋಡಿದರೆ, "ಭಾಷೆ" ಎನ್ನುವುದಕ್ಕೆ ಬದಲಾಗಿ "ನುಡಿ" ಎಂಬ ಸರಳ ಕನ್ನಡ ಪದ ಇದೆ. ಇದನ್ನು ಶಿಷ್ಟರಾದ ನಾವು ನೀವು ಅರ್ಥಮಾಡಿಕೊಳ್ಳಬೇಕು. ಸುಮ್ಮನೆ ಮಹಾಪ್ರಾಣ ಹೊರಟುಹೋಗತ್ತೆ, "ಅಯ್ಯೋ, ಏನಪ್ಪಾ, ಆ ಶಂಕರ ಭಟ್ಟನಿಗೆ ತಲೆನೆಟ್ಟಗಿಲ್ಲ" ಅಂತ ಭಾವುಕವಾಗಿ ಚರ್ಚಿಸುವುದಲ್ಲ.<BR/>@ಹರೀಶ್,<BR/>ನೋಡಿ, ಈಗ ಸುನಾಥರು, ಶಂಕರ ಭಟ್ಟರ ಪುಸ್ತಕಗಳನ್ನು ಓದಿ ಅವರಿಗೆ ಇಷ್ಟವಾಗದ ವಿಷಯವನ್ನು ಚರ್ಚಿಸುತ್ತಿದ್ದಾರೆ. ಆದರೆ ಹರೀಶರೇ, ನೀವು, ಶಂಕರ ಭಟ್ಟರ ಪುಸ್ತಕಗಳನ್ನೂ ಓದಿಲ್ಲ, ಹೋಗಲಿ, ಶಂಕರ ಭಟ್ಟರು ಯಾರು ಎಂಬುದೂ ನಿಮಗೆ ತಿಳಿದಿಲ್ಲ. ಸುನಾಥರು ಪ್ರಸ್ತಾಪಿಸಿದ ಅಂಶಗಳನ್ನಷ್ಟೇ ಇಟ್ಟುಕೊಂಡು ನೀವು ಚರ್ಚಿಸುತ್ತಿದ್ದೀರಾ. ನೀವೂ ಏಕೆ ಸುನಾಥರಂತೆ, ಮೊದಲು ಶಂಕರ ಭಟ್ಟರ ಪುಸ್ತಕಗಳನ್ನು ಓದಿ, ನಂತರ ಅವರು ಮಂಡಿಸಿರುವ ವಿಷಯಗಳ ಅಧಿಕಾರಯುತ ಚರ್ಚೆಯನ್ನು ಮಂಡಿಸಬಾರದು. ಸುನಾಥರಿಗೆ ಒಪ್ಪಿಗೆಯಾಗದ ವಿಷಯಗಳ ಹಾಗೆ, ಒಪ್ಪಿಗೆಯಾದ ವಿಷಯಗಳೂ, ಅತ್ವಾ ಸುನಾಥರಿಗೆ ಅರ್ಥವಾಗದ ವಿಷಯಗಳೂ ಆ ಪುಸ್ತಕದಲ್ಲಿ ಇರಬಹುದು ಎಂಬುದರ ಬಗ್ಗೆ ನೀವು ಏಕೆ ಯೋಚಿಸಿಲ್ಲ.<BR/><BR/>@ಎಲ್ಲರಿಗೂ, ಅದೆಲ್ಲ ಇರಲಿ, ಶಂಕರ ಭಟ್ಟರು ಎಲ್ಲಿಯೂ ಕನ್ನಡ ಹೀಗೆಯೇ ಇರಬೇಕು ಅಂತ ಹೇಳಿಲ್ಲ. "ಹೀಗೆ ಇದ್ದರೂ ಚೆನ್ನ" ಎಂದು ಆಧಾರಸಮೇತ ತೋರಿಸಿಕೊಡಲು ಪ್ರಯತ್ನಿಸಿದ್ದಾರೆ. ತೋರಿಸಿಕೊಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಕೂಡ. (ಮೇಲೆ ನಾನು ನೀಡಿದ ಕೊಂಡಿ ನೋಡಿ, ತಿಳಿಯತ್ತೆ, ಆಮೇಲೆ ಇದಕ್ಕೆ ಪ್ರತಿಕ್ರಿಯಿಸಿ).<BR/><BR/>ಅವರ ಪುಸ್ತಕಗಳನ್ನು ಓದದಿದ್ದರೂ, ಒಮ್ಮೆ ಇಂಗ್ಲೀಷಿನಲ್ಲಿಯೇ ಗೂಗಲ್ ಮಾಡಿ ನೋಡಿ, ಶಂಕರ ಭಟ್ಟರು ಯಾರು, ಅವರು ಯಾವ ಯಾವ ಭಾಷೆಗಳಲ್ಲಿ, ಪ್ರಬುದ್ಧ ಪ್ರಬಂಧಗಳನ್ನು ಮಂಡಿಸಿದ್ದಾರೆ ಎಂಬುದು ತಿಳಿಯುತ್ತದೆ. books.google.comಸುನಿಲ್ ಜಯಪ್ರಕಾಶ್https://www.blogger.com/profile/06600868283790086691noreply@blogger.comtag:blogger.com,1999:blog-5939841257923965225.post-11618890880826421692008-07-16T13:41:00.000+05:302008-07-16T13:41:00.000+05:30>> ನಾವು 'ಇವನು/ಇಂವ" ಅನ್ನುತ್ತೇವೆ ಹೊರತು 'ಯಿವನು' ಅನ್ನಲ...>> ನಾವು 'ಇವನು/ಇಂವ" ಅನ್ನುತ್ತೇವೆ ಹೊರತು 'ಯಿವನು' ಅನ್ನಲ್ಲ. <BR/><BR/>ನಾವು ಕೂಡ, "ಭಾಷೆ" ಅಂತೀವೆ ಹೊರತು "ಬಾಶೆ" ಅನ್ನಲ್ಲ. "ಸುನಾಥ" ಅಂತೀವೆ ಹೊರತು "ಸುನಾತ" ಅನ್ನಲ್ಲ. "ಮರಾಠಿ" ಅಂತೀವೆ ಹೊರತು "ಮರಾಟಿ" ಅನ್ನಲ್ಲ.<BR/><BR/>ಇಷ್ಟು ದಿನ ಏನೋ ಗೊತ್ತಿದ್ದೋ/ಗೊತ್ತಿಲ್ಲದೆಯೋ ತಪ್ಪು ಮಾತನಾಡಿದ್ದೀರಿ. ಇನ್ನಾದರೂ ಸರಿಯಾಗಿ ಉಚ್ಚರಿಸಲು ಕಲಿಯಿರಿ.<BR/><BR/>>> ಎಲ್ಲರೂ ನಿಮ್ಮನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ<BR/><BR/>ಎಲ್ಲರೂ ನಿಮ್ಮನ್ನ/ಶಂಕರ ಭಟ್ಟರನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-54978079339514780332008-07-16T12:31:00.000+05:302008-07-16T12:31:00.000+05:30ಅನಾಮಿಕರೆ, ನಾನು ಇಲ್ಲಿ ಬರೆದಿರುವುದು ಕಲ್ಪನೆ ಮಾಡಿ ಅಲ್ಲ:...ಅನಾಮಿಕರೆ, ನಾನು ಇಲ್ಲಿ ಬರೆದಿರುವುದು ಕಲ್ಪನೆ ಮಾಡಿ ಅಲ್ಲ:<BR/><BR/><A HREF="http://baala-doni.blogspot.com/2008/04/blog-post.html" REL="nofollow">http://baala-doni.blogspot.com/2008/04/blog-post.html</A><BR/><BR/>ಕಟು ಸತ್ಯ ಅರಗಿಸಿಕೊಲ್ಲಕ್ಕೆ ಆಗಲ್ಲ ಅಂದ್ರೆ ಬಿಡಿ, ಸುಮ್ಮನೆ ಹಾಗಿಲ್ಲ ಹೀಗಿಲ್ಲ ಅಂತ ಯಾಕೆ ಹೇಳ್ತೀರಿ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-61721534703511297312008-07-15T21:36:00.000+05:302008-07-15T21:36:00.000+05:30>>ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬೀಳಬೇಕು ...>>ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬೀಳಬೇಕು >>ಎನ್ನುವದಾದರೆ, 'ಅರಸಿಕೆರೆ' >>ರೇಲುನಿಲ್ದಾಣಕ್ಕೆ 'ಹರಸಿಕೆರೆ' ಎಂದು .<BR/><BR/>ಇದು ಸುಳ್ಳು . ತೆಂಕು-ಕನ್ನಡ ನಾಡಿನಲ್ಲಿ 'ಹ'ಕಾರ ಬಿದ್ದುವೋಗಿದೆ. (ಶಂಕರಬಟ್ಟರು 'ಕನ್ನಡ ನುಡಿ ನಡೆದು ಬಂದ ದಾರಿ' ಹೊತ್ತಿಗೆ ನೋಡಿ).<BR/>ಅರಸಿಕೆರೆನಾ 'ಹರಸಿಕೆರೆ' ಅಂತ ಯಾರು ಯೋಳಲ್ಲ.<BR/><BR/>'ಹ್' ಕಾರ ಇಲ್ದೆ enguru.blogspot.com ಬರೆಪುಗಳನ್ನ ಬರೀತಾ ಇದ್ದಾರೆ ನೋಡಿ. ಅವ್ರ ಬರೆಪು ನೋಡಿ.Anonymousnoreply@blogger.comtag:blogger.com,1999:blog-5939841257923965225.post-25667981997174915332008-07-15T17:50:00.000+05:302008-07-15T17:50:00.000+05:30ಅನಾಮಿಕರೆ,ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬ...ಅನಾಮಿಕರೆ,<BR/>ನೀವು ಹೇಳುವಂತೆ, ಕಿವಿಗೆ ಬಿದ್ದದ್ದೆ ಕಣ್ಣಿಗೂ ಬೀಳಬೇಕು ಎನ್ನುವದಾದರೆ, 'ಅರಸಿಕೆರೆ' ರೇಲುನಿಲ್ದಾಣಕ್ಕೆ 'ಹರಸಿಕೆರೆ' ಎಂದು ಬೋರ್ಡ ಹಾಕಬೇಕಾಗುತ್ತದೆ. ಅದರಂತೆ 'ಹಾಸನ' ನಿಲ್ದಾಣಕ್ಕೆ 'ಆಸನ' ಎನ್ನುವ ಬೋರ್ಡು ಹಾಕಬೇಕಾಗುತ್ತದೆ.<BR/>-PatramaAnonymousnoreply@blogger.comtag:blogger.com,1999:blog-5939841257923965225.post-82792171116171956492008-07-15T16:45:00.000+05:302008-07-15T16:45:00.000+05:30ಮೊದಲೇ ಹೇಳಿದಂತೆ ನಿಮಗೆ ಕನ್ನಡ ಗೊತ್ತಿಲ್ಲ.ನಾವು 'ಅಮ್ಮ' ಅ...ಮೊದಲೇ ಹೇಳಿದಂತೆ ನಿಮಗೆ ಕನ್ನಡ ಗೊತ್ತಿಲ್ಲ.<BR/><BR/>ನಾವು 'ಅಮ್ಮ' ಅನ್ನುತ್ತೇವ್ ಹೊರತು 'ಹಮ್ಮ' ಅನ್ನಲ್ಲ. ಹಾಗೆ ಉಲಿಯುವವರ್ ಅಮೆರಿಕದಲ್ಲಿರಬೋದು. ಕನ್ನಡ ನಾಡಿನಲ್ಲಿಲ್ಲ.<BR/><BR/>ನಾವು 'ಇವನು/ಇಂವ" ಅನ್ನುತ್ತೇವೆ ಹೊರತು 'ಯಿವನು' ಅನ್ನಲ್ಲ. <BR/><BR/>ಎಲ್ಲರೂ ನಿಮ್ಮನ್ನ ಕೇಳ್ಕಂಡ್ ಹೆಂಗೆ ಮಾತಾಡಬೇಕು ಅನ್ನುವುದನ್ನ ಕಲಿಯಲ್ಲ<BR/><BR/>ಆಡುನುಡಿ ಅಂತ ಇದೆ ನೀವು ಒಪ್ಕೋತೀರ ಅಲ್ವ. ಅಂದರೆ ಈ ಆಡುನುಡಿ ನಮ್ಮ 'ಕಿವಿ'ಗೆ ಯಾವ ತೊಂದರೆಯನ್ನು, ಗೊಂದಲವನ್ನು ಉಂಟುಮಾಡುವುದಿಲ್ಲ. ಹಾಗಾದರೆ 'ಕಣ್ಣಿ'ಗೆ ಯಾಕೆ ತೊಂದರೆ, ಗೊಂದಲ?<BR/><BR/>ಇದು ನನ್ನ basic ಕೇಳ್ಮೆ. ಕಣ್ಣಿಗೆ ಒಂತರ, ಕಿವಿಗೆ ಒಂತರ ಯಾಕೆ? ಕಿವಿಗೆ ಬೀಳುವುದನ್ನ ಕಣ್ಣಿಗೆ ಕಾಣಿಸಿ <BR/><BR/>ಅಶ್ಟೆ, ಸಿಗೋಣAnonymousnoreply@blogger.comtag:blogger.com,1999:blog-5939841257923965225.post-65466178239672357212008-07-12T23:55:00.000+05:302008-07-12T23:55:00.000+05:30ಹರೀಶ,ತುಂಬಾ ಚೆನ್ನಾಗಿ ಹೇಳಿದ್ದೀರಿ.ಖಂಡಿತವಾಗಿಯೂ ’ಕನ್ನಡ ...ಹರೀಶ,<BR/>ತುಂಬಾ ಚೆನ್ನಾಗಿ ಹೇಳಿದ್ದೀರಿ.<BR/>ಖಂಡಿತವಾಗಿಯೂ ’ಕನ್ನಡ ಬರಹ-೨’ ಬರಲೇ ಬೇಕು.<BR/>ಕನ್ನಡಕ್ಕೆ ಕೇವಲ ಹದಿನೆಂಟೇ ಅಕ್ಷರಗಳು ಸಾಕು. ಕನ್ನಡವನ್ನು ಸರಳ ಮಾಡಿದಷ್ಟೂ ಜನಪ್ರಿಯವಾಗುವದು!<BR/><BR/>ನಿಮ್ಮ linkಗೆ ಹೋಗಿ, ಅಲ್ಲಿಯ ಸಂಭಾಷಣೆಯನ್ನು ಹಾಗು ಟೀಕೆ, ಟಿಪ್ಪಣಿಗಳನ್ನು ಓದಿದೆ. ಒಟ್ಟೆ ಉಣ್ಣಾಗುವಸ್ಟು ನಗೆ ಬಂದಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-27725657930936205062008-07-09T15:09:00.000+05:302008-07-09T15:09:00.000+05:30ಅನಾಮಿಕರೆ, ಸುನಾಥರು ಸರಿಯಾಗಿ ಹೇಳಿದ್ದಾರೆ. ಬಹುತೇಕ ಜನರ ಬ...ಅನಾಮಿಕರೆ, ಸುನಾಥರು ಸರಿಯಾಗಿ ಹೇಳಿದ್ದಾರೆ. ಬಹುತೇಕ ಜನರ ಬಾಯಿಯಲ್ಲಿ ಉಚ್ಚಾರ ಈ ರೀತಿ ಇರುತ್ತದೆ:<BR/><BR/>ಅ ಆ - ಹ ಹಾ<BR/>ಇ ಈ - ಯಿ ಯೀ<BR/>ಉ ಊ - ವು ವೂ <BR/>ಎ ಏ - ಯೆ ಯೇ<BR/>ಒ ಓ - ವೊ ವೋ<BR/>ಅಂ - ಅಮ್<BR/><BR/>ಹಾಗಾಗಿ ಸ್ವರಾಕ್ಷರಗಳಿಗೆ ಸಂಜ್ಞೆಗಳೇ ಬೇಡ ಎನ್ನುವ ಹೊಸ ವಾದವನ್ನೂ ನೀವು ಮುಂದಿಡಬಹುದಲ್ಲ? ನಿಮಗೂ, ಶಂಕರ ಭಟ್ಟರಿಗೂ ಇದು ಹೊಳೆದಿಲ್ಲ ಎನಿಸುತ್ತದೆ. "ಕನ್ನಡವನ್ನು ಮತ್ತೆ/ಇನ್ನಷ್ಟು ಸರಿಪಡಿಸೋಣ" ಎನ್ನುವ ಪುಸ್ತಕ ಬರೆದು ಕನ್ನಡ ೨.೦ ಎಂದು ಹೊಸ ಆವೃತ್ತಿ ಬಿಡಲಡ್ಡಿಯಿಲ್ಲ.<BR/><BR/>ಇದು ಹೇಗೆ ನಿಮಗೆ ಅಸಂಬದ್ಧ (ನಿಮ್ಮ/ಶಂಕರ ಭಟ್ಟರ "ಸರಿಪಡಿಸಿದ" ಕನ್ನಡದಲ್ಲೂ ಈ ಸ್ವರಾಕ್ಷರಗಳು ಸ್ಥಾನ ಪಡೆದಿವೆ, ಆದ್ದರಿಂದ ಹಾಗೆಂದು ಅಂದುಕೊಂಡಿದ್ದೇನೆ) ಎನಿಸುತ್ತದೆಯೋ, ಹಾಗೆಯೇ ನನಗೂ, ನಿಮ್ಮ ವಾದವನ್ನು ವಿರೋಧಿಸುತ್ತಿರುವ ಎಲ್ಲರಿಗೂ ಋ ಬದಲು ರು, ಐ ಬದಲು ಅಯ್, ಆ ಬದಲು ಅವ್ ಎಂದು ಬರೆಯುವುದೂ, ಉಚ್ಚಾರಣೆ ಸರಿಯಿಲ್ಲದ ಮಾತ್ರಕ್ಕೆ ಮಹಾಪ್ರಾಣಗಳನ್ನು ಬಿಡುವುದೂ ಅಸಂಬದ್ಧ ಎಂದು ಕಾಣುತ್ತದೆ.<BR/><BR/>ಇನ್ನೂ ನಿಮಗೆ ಉಚ್ಚಾರದ ಅವಾಂತರ ಗೊತ್ತಾಗಬೇಕೆಂದರೆ <A HREF="http://baala-doni.blogspot.com/2008/04/blog-post.html" REL="nofollow">ಇಲ್ಲಿ ನೋಡಿ</A>.<BR/><BR/>ನಮ್ಮ ಗುರುಗಳು ಉಚ್ಚಾರಣೆಯ ಮಹತ್ವ ತಿಳಿಸುವಾಗ ಹೇಳುತ್ತಿದ್ದ ಮಾತು ನೆನಪಾಗುತ್ತದೆ... ಭರತ ಖಂಡ ಭಾರತ ಭೂಮಿ ನಿಮ್ಮ ಪ್ರಕಾರ ಬರತ ಕಂಡ ಬಾರತ ಬೂಮಿ! ಕರ್ಮಕಾಂಡ!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-76378298953285753442008-07-07T13:08:00.000+05:302008-07-07T13:08:00.000+05:30ನಮ್ಮ ಮಾತಿನಂತೆಯೇ ನಾವು ಬರಿಯಬೇಕೆಂದರೆ:- ಕೆಲವರು ಅರಸಿಕೆರ...ನಮ್ಮ ಮಾತಿನಂತೆಯೇ ನಾವು ಬರಿಯಬೇಕೆಂದರೆ:- <BR/>ಕೆಲವರು ಅರಸಿಕೆರೆಗೆ ಹರಸಿಕೆರೆ ಎಂದೂ, ಹಾಸನಕ್ಕೆ ಆಸನ ಎಂದೂ ಹೇಳುತ್ತಾರೆ. ಕತೆ,ಕಾದಂಬರಿಗಳಲ್ಲಿ ಇಂತಹ ಆಡು ಮಾತನ್ನು ಬಳಸುವದು ಸರಿಯಾದೀತು. ಆದರೆ ಬಸ್ ಅಥವಾ ರೇಲವೆ ನಿಲ್ದಾಣಗಳಲ್ಲಿ, ಪಠ್ಯಪುಸ್ತಕಗಳಲ್ಲಿ ಈ ತರಹ ಬರೆಯುವವರನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57485193001684598882008-07-07T12:07:00.000+05:302008-07-07T12:07:00.000+05:30ನೀವು ಭಾಷೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರೋ, ...ನೀವು ಭಾಷೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರೋ, ಬೆಳೆಸಲು ಪ್ರಯತ್ನಿಸುತ್ತಿದ್ದೀರೋ ತಿಳಿಯುತ್ತಿಲ್ಲ.<BR/><BR/>ನನ್ನ ಕಲ್ಕತ್ತಾದ ಗೆಳೆಯನೊಬ್ಬನಿಗೆ ಕನ್ನಡ ಹೇಳಿಕೊಡುತ್ತೇನೆ ಎಂದು ಕೆಲವು ಪದಗಳನ್ನು ಹೇಳಿಕೊಟ್ಟೆ. ಅವನು ಬೆಂಗಳೂರಿನಲ್ಲೇ ಓದಿದವನಾದ್ದರಿಂದ ಕೆಲವು ಮೂಲಭೂತ ಪದಗಳನ್ನು ಬಲ್ಲವನಾಗಿದ್ದ. ನಾನು "ಹೋಗುತ್ತೇನೆ" ಎಂದು ಹೇಳಿಕೊಟ್ಟರೆ "ಹೋಗ್ತೀನಿ" ಎಂದು ಹೇಳುತ್ತಿದ್ದ. ಇಂಥವರಿಗೆ ಭಾಷೆ ಕಲಿಸಲು ನೀವು ಒಂದೊಂದು ದಿನ ಒಂದೊಂದು ಕನ್ನಡವನ್ನು ಹೇಳಿಕೊಟ್ಟರೆ (ಹೋಗ್ತೀನಿ, ಹೋಯ್ತೆ, ಹೋಗ್ತೆ, ಪೋತೆ, ಹೋಕೀನಿ...) ಕಲಿಯುತ್ತಾರೆಯೇ? ಹಾಗಾಗಿ ಮಾತೇ ಮೊದಲು ಬಂದಿದ್ದು ನಿಜವಾದರೂ ಒಂದು ರೀತಿಯ ಮಾನಕ ಬರವಣಿಗೆಯಲ್ಲಿ ಬೇಕು. ಅದನ್ನು ಕನ್ನಡ ಬಲ್ಲವರು ಹೇಗೆ ಬಳಸುತ್ತಾರೋ ಅದು ಅವರಿಗೆ ಬಿಟ್ಟಿದ್ದು. <BR/><BR/>ಇದೇ ಹಣೆಬರಹ ಮಲಯಾಳಂನದ್ದು ಕೂಡ. ದಕ್ಷಿಣ ಕೇರಳದ ಜನರು ಮಾತನಾಡುವ ಎಷ್ಟೋ ಪದಗಳು ಅರ್ಥವಾಗದ ಉತ್ತರ ಕೇರಳದ ಜನರಿದ್ದಾರೆ ಎಂದು ಕೇಳಿದ್ದೇನೆ. ಆದರೆ ಈ ರೀತಿಯ ಪ್ರಾಂತ್ಯವಾರು ಬದಲಾವಣೆಗಳು ಹಿಂದಿ, ತೆಲುಗು, ತಮಿಳಿನಲ್ಲಿ ಕಡಿಮೆ. ಹಾಗಾಗಿ ಅವು ಬಹು ಬೇಗ ಹಬ್ಬುತ್ತಿವೆ.<BR/><BR/>ಅತಿ ಕಡಿಮೆ ಅಕ್ಷರಗಲಿದ್ದರೆ ಲಾಭ ಎನ್ನುವುದಾದರೆ ದ್ವಿಮಾನ ಪದ್ಧತಿಯ ಲಿಪಿ (binary system) ಉಪಯೋಗಿಸಬಹುದಿತ್ತಲ್ಲ? ಹಾಗಾದರೆ ಮನುಷ್ಯರಿಗೂ ಯಂತ್ರಗಳಿಗೂ ವ್ಯತ್ಯಾಸವೇನು ಉಳಿಯಿತು?<BR/><BR/>ನಮ್ಮನ್ನು ನಾವೇ ಬುದ್ಧಿ ಹೆಚ್ಚು ಇರುವ ಪ್ರಾಣಿಗಳು ಎಂದು ಕರೆದುಕೊಳ್ಳುತ್ತೇವೆ. ೧೭ ಅಕ್ಷರ ಕಲಿಯುವುದು ಕಬ್ಬಿಣದ ಕಡಲೆಯೇ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-2506419353642929882008-07-07T09:21:00.000+05:302008-07-07T09:21:00.000+05:30ಮೊದಲು ಬಂದಿದ್ದು ಮಾತು. ಬರವಣಿಗೆ ತೀರ ಇತ್ತೀಚಿನದು ಮಾತಿಗೆ...ಮೊದಲು ಬಂದಿದ್ದು ಮಾತು. ಬರವಣಿಗೆ ತೀರ ಇತ್ತೀಚಿನದು ಮಾತಿಗೆ ಹೋಲಿಸಿದರೆ,<BR/><BR/>ಆದ್ದರಿಂದ ಮಾತಿನಂತೆ ಬರಹ, ಬರಹದಂತೆ ಮಾತಲ್ಲ. ನಮ್ಮ ಮಾತಿಗೆ ಬರಹವನ್ನು ನಾವು ಕಂಡುಕೊಂಡಿದ್ದು. ಬರಹ ಬರೆದು ಆಮೇಲೆ ಮಾತಲ್ಲ. ಇದು ತುಂಬ ತಳಪಾಯದ ತಿಳುವಳಿಕೆ.<BR/><BR/>ನೀವು ಹೆಂಗೆ ಮಾತನಾಡುವಿರೊ (ಹದಿನೆಂಟ್ ತರ ಇರಲಿ) ಹಾಗೆ ಬರೆಯಿರಿ. ಬೇರೆಯವರಿಗೆ ಅರಿತ ಆಗುತ್ತೆ. ಕವಿರಾಜಮಾರ್ಗದ ಸಿರಿವಿಜಯನೇ ಅದಕ್ಕೆ 'ಕನ್ನಡಂಗಳ್' ಅಂತ ಹೇಳಿದ್ದಾನೆ. ಸಕ್ಕದ ತುಂಬಿದ ಈಗಿನ ಬರಹಗನ್ನಡವೇ ಕನ್ನಡ ಅಲ್ಲ. ನಾವು ನಮ್ಮ ಸೊಗಡಿರುವ ಹಲವು ಕನ್ನಡಂಗಳನ್ನ ಉಳಿಸಿ ಬೆಳೆಸಬೇಕಾಗಿದೆ. ಬರಹಕ್ಕೆ ಹೆಚ್ಚು ಒತ್ತು ಸಿಗುತ್ತಿರುವ ಈ ಕಾಲದಲ್ಲಿ ನಾವು ನಮ್ಮ ಕನ್ನಡಂಗಳನ್ನ ಉಳಿಸದಿದ್ದರೆ ಅವುಗಳು ಮುಂದೆ ಇಲ್ಲವಾಗಬಹುದು.<BR/><BR/>ಹೋಗ್ತೇನೆ, ವೊಯ್ತಿನಿ ಅಂತ ಬರಹಗನ್ನಡದಲ್ಲಿ ಬರೆಯಕ್ಕಾಗಲ್ಲ. ಆವಾಗ ಕೀಳಾಗಿ ಕಾಣ್ತಾರೆ. 'ಹೋಗುತ್ತೇನೆ' ಅಂತ ಬರೆದರೆ ಈಗ ಬರಹಗನ್ನಡದಲ್ಲಿ ಬೆಲೆ. ಇದು ತೊಲಗಬೇಕು.Anonymousnoreply@blogger.com