tag:blogger.com,1999:blog-5939841257923965225.post8206448034422463852..comments2024-02-29T07:14:52.690+05:30Comments on ಸಲ್ಲಾಪ: ಮಾಯಾನಗರಿಯ (ಸ್ಮಾರ್ಟ ಸಿಟಿಯ)ಕನಸುಗಳು ಹಾಗು ಸಮಸ್ಯೆಗಳುsunaathhttp://www.blogger.com/profile/13386371953472087631noreply@blogger.comBlogger7125tag:blogger.com,1999:blog-5939841257923965225.post-42416911378301465162016-01-29T22:46:42.171+05:302016-01-29T22:46:42.171+05:30ಸುಬ್ರಹ್ಮಣ್ಯರೆ,
ಸ್ಮಾರ್ಟ ಸಿಟಿಯಲ್ಲಿ ಸ್ಮಾರ್ಟ ಲಂಚಿಗರು ಹ...ಸುಬ್ರಹ್ಮಣ್ಯರೆ,<br />ಸ್ಮಾರ್ಟ ಸಿಟಿಯಲ್ಲಿ ಸ್ಮಾರ್ಟ ಲಂಚಿಗರು ಹುಟ್ಟಿಕೊಳ್ಳುತ್ತಾರೆ!<br />sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60869604211760748252016-01-29T06:36:04.030+05:302016-01-29T06:36:04.030+05:30ಕಾಕಾ,
ಸ್ಮಾರ್ಟ್ ಸಿಟಿಯ ಆಗುಹೋಗುಗಳ ಬಗ್ಗೆ ವಿಸ್ತಾರವಾಗಿ ತ...ಕಾಕಾ,<br />ಸ್ಮಾರ್ಟ್ ಸಿಟಿಯ ಆಗುಹೋಗುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದಿರಿ. ಇನ್ನು ಸಕಾFರಿ ಕಚೇರಿಗಳಲ್ಲಿ ಶ್ರೀಸಾಮಾನ್ಯ ನೀಡುವ ಅಜಿF ಗಣಕಯಂತ್ರದಲ್ಲಿ ದಾಖಲಾಗುವ ಕಾಲ 'ಸಕಾಲ' ಯೋಜನೆಯೊಂದಿಗೆ ಜಾರಿಗೆ ಬಂದಿದೆ. ಆದರೆ, ಲಂಚ ಕೊಡದಿದ್ದರೆ ಸಕಾಲದ ಅಜಿFಯಲ್ಲೂ ಲೂಪ್ ಹೋಲ್ ಹುಡುಕಿ ಮತ್ತೊಂದು ತಿಂಗಳು ಮುಂದೂಡುವ ಅಧಿಕಾರಿಗಳಿದ್ದಾರೆ. ಇದಕ್ಕೆ ಚುನಾಯಿತ ಜನಪ್ರತಿನಿಧಿಗಳ ಕಮೀಷನ್ ಒತ್ತಡವೂ ಕಾರಣವಾಗಿರುತ್ತದೆ ಎನ್ನುವುದು ನಿಮಗೆ ತಿಳಿದಿರುವ ವಿಷಯ. ನಮ್ಮ ಆಸ್ತಿಯನ್ನು ಇ-ಖಾತೆ ಮಾಡಿಸಿಕೊಳ್ಳಲು ಕೊಡುವ ಅಜಿFಗೆ ೪೫ ದಿನ ಸಮಯವಿರುತ್ತದೆ. ಎಲ್ಲ ಮಾಹಿತಿಯೂ ಗಣಕಯಂತ್ರದಲ್ಲಿ ದಾಖಲಾಗುತ್ತದೆ. ಆದರೂ ಲಂಚ ಕೊಡದೆ ಇ-ಖಾತೆ ಪೇಪರ್ ನಮಗೆ ಸಿಗೋದಿಲ್ಲ. ಎಂಥಾ ಸೋಜಿಗ ನೋಡಿ !.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5939841257923965225.post-22437398270370147092016-01-24T00:48:00.363+05:302016-01-24T00:48:00.363+05:30RJ,
ಸೋಲಾರ್ ಪ್ಯಾನಲ್ cum ಬೆಂಚ್ ಅಥವಾ ಬೇಲಿ ಓದಿ ಆಶ್ಚರ್ಯ...RJ,<br />ಸೋಲಾರ್ ಪ್ಯಾನಲ್ cum ಬೆಂಚ್ ಅಥವಾ ಬೇಲಿ ಓದಿ ಆಶ್ಚರ್ಯವಾಯಿತು. ನಿಮ್ಮ ವಿದೇಶಪ್ರವಾಸದಲ್ಲಿ ನೀವು ಕಂಡ ಇಂತಹ ವಿಶೇಷತೆಗಳ ಬಗೆಗೆ ಮಾಯಾಲಾಂದ್ರದಲ್ಲಿ ಬರೆದರೆ, ಅದು ನಮ್ಮ ಜನಗಳಿಗೆ ಉತ್ತಮ ತಿಳಿವಳಿಕೆಯನ್ನು ಕೊಟ್ಟೀತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90664279737807364272016-01-23T19:03:52.379+05:302016-01-23T19:03:52.379+05:30ಸರ್,
ಸ್ಮಾರ್ಟ್ ಸಿಟಿಯ ಕಲ್ಪನೆಯೇನೋ ಸ್ವಾಗತಾರ್ಹ. ಇದು ಮನು...ಸರ್,<br />ಸ್ಮಾರ್ಟ್ ಸಿಟಿಯ ಕಲ್ಪನೆಯೇನೋ ಸ್ವಾಗತಾರ್ಹ. ಇದು ಮನುಷ್ಯನ ಸಮಯ, ಶಕ್ತಿಯನ್ನು ಉಳಿಸುವದರ ಜೊತೆಗೆ ಒಂದಿಷ್ಟು ಹಿತಾನುಭವ ನೀಡುವ ಕಲ್ಪನೆಯೂ ಹೌದು. ಜೊತೆಗೆ ಆಡಳಿತದಲ್ಲಿ ವೇಗ ಮತ್ತು ಪಾರದರ್ಶಕತೆಯನ್ನು ತರುವಂಥದ್ದೂ ಹೌದು. ಆದರೆ ಸದ್ಯದ ಭಾರತೀಯ ಸಮಾಜದ ಲಕ್ಷಣಗಳು ನೀವು ಹೇಳಿದಂತೆ ಸ್ಮಾರ್ಟ್ ಸಿಟಿಗೆ ಪೂರಕವಾಗಿರುವಂತೆ ಕಾಣಿಸುತ್ತಿಲ್ಲ.<br /><br />ಸ್ಮಾರ್ಟ್ ಸಿಟಿಯನ್ನು ಕಟ್ಟುವದಕ್ಕಿಂತ ಮುಂಚೆ ಜನತೆಯನ್ನು ಅದಕ್ಕೆಂದು ಸಜ್ಜುಗೊಳಿಸಬೇಕಿದೆ. ಅದರ ಮುಂದುವರೆದ ಭಾಗವೆಂದರೆ, ನಾಗರಿಕರ ಮನಸ್ಥಿತಿಯನ್ನು ಬದಲಾಯಿಸುವದು. ಆಡಳಿತವು ಇದನ್ನೆಲ್ಲ ಪ್ರೀತಿಯಿಂದಲೋ, ದಂಡದಿಂದಲೋ, ಸಮಾಧಾನದಿಂದಲೋ ಮಾಡಲೇಬೇಕಿದೆ. "ನನ್ನ ಮನೆ, ಬಿಲ್ ಕಟ್ಟುವವನು ನಾನು, ಹಗಲಾದರೇನು ರಾತ್ರಿಯಾದರೇನು-ದೀಪ ಉರಿಸಿಯೇ ಉರಿಸುತ್ತೇನೆ. ಸೌಂಡ್ ಮಾಡಿಯೇ ಮಾಡುತ್ತೇನೆ.." ಅಂತನ್ನುವ ಧಿಮಾಕಿನ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಎಲ್ಲರ ಅನುಕೂಲಕ್ಕೆಂದು ವಿತರಿಸುವ ವಿದ್ಯುತ್ತನ್ನು ಅನಾವಶ್ಯಕವಾಗಿ ಪೋಲು ಮಾಡಿ, ಇನ್ಯಾವುದೋ ಹಳ್ಳಿಯ ಲೋಡ್ ಶೆಡ್ಡಿಂಗ್ ಗೆ ನಾನು ಕಾರಣವಾಗಬಾರದು ಅಂತನ್ನುವ ಮನಸ್ಥಿತಿಯನ್ನು ಬೆಳೆಸಬೇಕಿದೆ.<br /><br /> ಇಂಥ ಮನಸ್ಥಿತಿಗಳ ಉದಾಹರಣೆ ನೂರಾರಿವೆ. ಹೊಸದಾಗಿ ಅಚ್ಚುಕಟ್ಟಾಗಿ ನಿರ್ಮಿಸಿದ ರಸ್ತೆಯನ್ನು ಅಗೆದು, ಅಲ್ಲೊಂದು ಶಾಮಿಯಾನ ಹಾಕಿ ರಸ್ತೆ ಬಂದ್ ಮಾಡುತ್ತೇವೆ. ಕರ್ಣಪಟಲ ಒಡೆದುಹೋಗುವಂತೆ ಹಾಡು ಹಾಕಿ ರಾಜ್ಯೋತ್ಸವ ಆಚರಿಸುತ್ತೇವೆ. ಅಲಂಕಾರಕ್ಕೆಂದು ನೂರಾರು ಮೀಟರ್ ಅಂತರದಲ್ಲಿ ನೂರಾರು ಬಲ್ಬ್ ಗಳನ್ನು ಝಗಝಗ ಅನಿಸುತ್ತೇವೆ. ವಿದ್ಯುತ್ತನ್ನು ರಸ್ತೆ ಪಕ್ಕದ ಕಂಬದಿಂದಲೇ ಪಡೆಯುತ್ತೇವೆ! <br />ಯಾವ ಪುರುಷಾರ್ಥಕ್ಕಾಗಿ ಇದೆಲ್ಲ?<br /><br />ಕನ್ನಡ ಭಾಷೆಯ ಅಭಿಮಾನ ಒಳ್ಳೆಯದು. ಆದರೆ ನನ್ನ ಪಾಲಿಗೆ ಒಬ್ಬ ಒಳ್ಳೆಯ ನಾಗರಿಕನಾಗುವದು, ಇಂಥ ಒಳ್ಳೆಯ ಕನ್ನಡಾಭಿಮಾನಿಯಾಗುವದಕ್ಕಿಂದ ಒಳ್ಳೆಯದು. ಕಾರ್ಯಕ್ರಮ ಮುಗಿದ ಮೇಲೆ ಅಗೆದ ರಸ್ತೆಯನ್ನು ಅಚ್ಚುಕಟ್ಟಾಗಿ ಮೊದಲಿನಂತೆ ನಿರ್ಮಿಸಲಾಗದಿದ್ದರೆ, ಅಂಥದೊಂದು ಸಂವೇದನೆ ನಮ್ಮಲ್ಲಿ ಹುಟ್ಟದೇ ಹೋದರೆ, ನನ್ನ ಕನ್ನಡಾಭಿಮಾನಕ್ಕೆ ಬೆಲೆ ಬರದು.<br /><br />ಇನ್ನು ನೀವು ಹೇಳಿದಂತೆ, ಎಮ್ಮೆಗಳ ವಿಚಾರ ನಿಜಕ್ಕೂ ಗಂಭೀರವಾದದ್ದು. ನಾವು ಟ್ರಾಫಿಕ್ ಸಿಗ್ನಲ್ಲುಗಳನ್ನು ಬೆರಳುಗಳ ಮೂಲಕ ನಿಯಂತ್ರಿಸಬಹುದು. ಆದರೆ ಹಾಲನ್ನು ಬಟನ್ನುಗಳ ಮೂಲಕ, ತಂತ್ರಾಂಶಗಳ ಮೂಲಕ ಉತ್ಪಾದಿಸುವದು ಸಾಧ್ಯವಿಲ್ಲ ಅಂತ ಅರಿಯಬೇಕಿದೆ. ಪುಕ್ಕಟೆಯಾಗಿ ದೊರೆಯಬಲ್ಲ ಶಕ್ತಿಯನ್ನು ಪೂರ್ತಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮೊದಲು ನಾವು ಯೋಚಿಸಬೇಕಿದೆ. ಉದಾಹರಣೆಗೆ, ಸೋಲಾರ್ ಪ್ಯಾನಲ್ಲುಗಳನ್ನು ಬಳಸುವಂತೆ ಜನರನ್ನು ಉತ್ತೇಜಿಸಬೇಕು. ಅದು ಆಗಬೇಕಾದರೆ, ಸೋಲಾರ್ ಪ್ಯಾನೆಲ್ಲುಗಳ ಟ್ಯಾಕ್ಸ್ ಫ್ರೀ (ಅಥವಾ ಆದಷ್ಟು ಕಡಿಮೆ) ಮಾಡಿ ಅದರ ತಂತ್ರಜ್ಞಾನವನ್ನು ಸುಲಭವಾಗಿ ಜನರ ಕೈಗೆ ಸಿಗುವಂತೆ ಮಾಡಬೇಕು. ಇಲ್ಲವಾದಲ್ಲಿ ಸುಖಾಸುಮ್ಮನೇ ಯಾರು ಯಾಕೆ ಮಾತು ಆಲಿಸುತ್ತಾರೆ?<br /><br />ಸರ್ಕಾರ ಕೂಡ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಸೋಲಾರ್ ಅಳವಡಿಸಬೇಕು. ಯೂರೋಪಿನ ಒಂದು ಪಾರ್ಕಿನಲ್ಲಿ ಸುಮ್ಮನೇ ಕೂತು ಆನಂದಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಕೂತ ಬೆಂಚ್ ನಿಂದ ಎದ್ದು ಹೊರಡುವಾಗ ನಾನು ಗಮನಿಸಿದ್ದು: ನಾನು ಕೂತಿದ್ದು ಸೋಲಾರ್ ಪ್ಯಾನಲ್ಲಿಂದ ಮಾಡಿದ ಬೆಂಚಿನ ಮೇಲೆ! ಹಾಗೊಂದು ವೇಳೆ ಯಾರಾದರೂ ವಿಶ್ರಾಂತಿ ಬಯಸಿದರೆ ಅದು ಬೆಂಚ್ ಆಗಬೇಕು, ಯಾರೂ ಇಲ್ಲವೆಂದ ಸಮಯದಲ್ಲಿ ಅದು ಸೋಲಾರ್ ಪ್ಯಾನಲ್ಲಿನಂತೆ ಬಳಕೆಯಾಗಿ ಪಕ್ಕದಲ್ಲಿದ್ದ ಲೈಟ್ ಕಂಬವನ್ನು ರಾತ್ರಿ ಉರಿಸುವಂತಿರಬೇಕು. ಇದೇ ಥರ ಅಲ್ಲಿನ ಹೈವೇಗಳಲ್ಲಿ ನಮ್ಮಲ್ಲಿ ಇರುವಂತೆಯೇ ರಸ್ತೆ ಇಕ್ಕೆಲಗಳಲ್ಲಿ ಫೆನ್ಸಿಂಗ್ ಕೂಡ ಮಾಡಿದ್ದರು. ಆದರೆ ಕಬ್ಬಿಣದ/ತಂತಿಯ ಫೆನ್ಸಿಂಗ್ ಬದಲಾಗಿ ಹೈವೇಯುದ್ದಕ್ಕೂ ಸೋಲಾರ್ ಪ್ಯಾನಲ್ ಅಳವಡಿಸಲಾಗಿತ್ತು..<br /><br />ಇಲ್ಲಿ, ವಿಧಾನಸೌದದ ಟೆರೇಸ್ಸನ್ನು ಸೋಲಾರ್ ಪ್ಯಾನಲ್ಲಿಗಾಗಿ ಬಳಬೇಕೆಂದರೆ ನೂರಾರು ಟೇಬಲ್ ಸುತ್ತಬೇಕೆನ್ನುವ ಪರಿಸ್ಥಿತಿ. <br />ಇಂಥ ಹತ್ತಾರು ವಿಷಯಗಳಿವೆ. ಆದರೆ ಇಚ್ಛಾಶಕ್ತಿ ಬೇಕು..<br /><br />(ಸಾರಿ ಸರ್, ಹೇಳುತ್ತ ಹೇಳುತ್ತ ಇಷ್ಟು ದೊಡ್ಡದಾಗುತ್ತದೆ ಅಂತ ಗೊತ್ತಿರಲಿಲ್ಲ.)<br />-Rjರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-51942512960308517502016-01-23T11:55:09.909+05:302016-01-23T11:55:09.909+05:30ಹೌದು ಕಾಕಾ...ಹೌದು ಕಾಕಾ...ಶಾನಿnoreply@blogger.comtag:blogger.com,1999:blog-5939841257923965225.post-10956066362888885342016-01-22T21:05:10.275+05:302016-01-22T21:05:10.275+05:30ರಾಜಕಾರಣಿಗಳ ಚರ್ಮದ ಬಗೆಗೆ ಹೇಳುತ್ತಿದ್ದೀರಲ್ಲವೆ, ಶಾನಿ?!ರಾಜಕಾರಣಿಗಳ ಚರ್ಮದ ಬಗೆಗೆ ಹೇಳುತ್ತಿದ್ದೀರಲ್ಲವೆ, ಶಾನಿ?!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91678249148753710662016-01-22T19:23:35.173+05:302016-01-22T19:23:35.173+05:30ಎಷ್ಟು ಚೆನ್ನಾಗಿ ವಿಶ್ಲೇಷಿಸಿದ್ದೀರಿ ಕಾಕ! ಆದರೆ ಇದು ದಪ್ಪ...ಎಷ್ಟು ಚೆನ್ನಾಗಿ ವಿಶ್ಲೇಷಿಸಿದ್ದೀರಿ ಕಾಕ! ಆದರೆ ಇದು ದಪ್ಪಚರ್ಮವನ್ನು ಹಾಯುವುದು ಹೇಗೆ?ಶಾನಿhttp://shaanidesk.blogspot.innoreply@blogger.com