ಈ ಲೇಖನದ ಹಿಂದಿನ ಲೇಖನದ ಬಗೆಗೆ ಶ್ರೀ ಹರೀಶರು ತಮ್ಮ commentನಲ್ಲಿ ನೀಡಿದ ಅಭಿಪ್ರಾಯದ ಜೊತೆಗೆ ಒಂದು ಕೊಂಡಿಯನ್ನು ಕೊಟ್ಟಿದ್ದಾರೆ. ಈ ಕೊಂಡಿಗೆ ಹೋದಾಗ, ಶ್ರೀ ಕಿ.ರಂ.ನಾಗರಾಜರು ಕನ್ನಡವನ್ನು ಮಾರ್ಪಡಿಸಲು ನೀಡಿದ ಅಮೂಲ್ಯ ಸಲಹೆಗಳನ್ನು ಓದಿ ನನ್ನ ಕಣ್ಣಾಲಿಗಳು ತುಂಬಿ ಬಂದವು. ಆ ಲೇಖನದಲ್ಲಿ ದೊರೆತ ಕೊಂಡಿಯ ಮೂಲಕ ‘ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ ಶ್ರೀ ಡಿ.ಎನ್.ಶಂಕರ ಭಟ್ಟರ ಪುಸ್ತಕದ ಭಾಗವನ್ನು ಓದಿದೆ. ಈ ಪುಸ್ತಕವನ್ನು ಈಗಾಗಲೇ ನಾನು ಓದಿದ್ದೆ. ಓದಿ ಹೈರಾಣಾಗಿದ್ದೆ. ಶ್ರೀ ಡಿ.ಎನ್. ಶಂಕರಭಟ್ಟರು ಬಯಸಿದಂತೆ ನಡೆದರೆ, ಕನ್ನಡ ನುಡಿಯು ಕುಲಗೆಟ್ಟು ಹೋಗುವದರಲ್ಲಿ ಸಂಶಯವಿಲ್ಲ.
ಭಾಷೆ ನಿಂತ ನೀರಲ್ಲ; ಬದಲಾಗುತ್ತಲೇ ಇರಬೇಕು. ಬದಲಾವಣೆ ಎಂದರೆ ವಿಕಾಸಗೊಳ್ಳಬೇಕೆ ಹೊರತು, ಕುಂಠಿತವಾಗುತ್ತ ಹೋಗುವದಲ್ಲ. ಯಾವ ಭಾಷೆಯೂ ತನ್ನಷ್ಟಕ್ಕೇ ವಿಕಾಸಗೊಳ್ಳುವದಿಲ್ಲ. ಪರಭಾಷೆ ಹಾಗು ಪರಕೀಯ ಸಂಸ್ಕೃತಿಗಳ ಸಂಪರ್ಕದಿಂದಲೇ ಭಾಷೆಯ ವಿಕಾಸ ಸಾಧ್ಯವಾಗುವದು.
ಸಂಸ್ಕೃತ ಭಾಷೆಯ ಸಂಪರ್ಕದಿಂದ ಕನ್ನಡಕ್ಕೆ ಲಾಭವಾದಂತೆ, ಸಂಸ್ಕೃತಕ್ಕೂ ಆಗಿದೆ. ಭಾರತೀಯ ಭಾಷೆಗಳ ಸಂಪರ್ಕದಿಂದ, ಹಾಗೂ ತನ್ನ ಕೊಲೊನಿಯ ಭಾಷೆಗಳ ಸಂಪರ್ಕದಿಂದ ಇಂಗ್ಲೀಶಿಗೂ ಲಾಭವಾಗಿದೆ. ಆದುದರಿಂದ ಸಂಕುಚಿತ ಮನಸ್ಸನ್ನು, ಸಂಕುಚಿತ ಬುದ್ಧಿಯನ್ನು ತೊರೆದು, ಸಂಸ್ಕೃತ, ಇಂಗ್ಲಿಶ್ ಹಾಗು ಇತರ ಭಾಷೆಗಳ ಸಂಪರ್ಕದಿಂದ ಕನ್ನಡ ವಿಶಾಲವಾಗುವಂತೆ, ಕನ್ನಡಕ್ಕೆ ಲಾಭವಾಗುವಂತೆ ಪ್ರಯತ್ನಿಸುವದರಲ್ಲಿಯೇ ಜಾಣತನವಿದೆ.
ಕನ್ನಡದಲ್ಲಿ ಶಂಕರಭಟ್ಟರು ತರಬಯಸುವ ಕ್ರಾಂತಿಯಲ್ಲಿ ಎರಡು ಹೆಜ್ಜೆಗಳಿವೆ:
೧) ಲಿಪಿಕ್ರಾಂತಿ
೨) ಪದಕ್ರಾಂತಿ
ಶಂಕರಭಟ್ಟರು ವಿವರಿಸುವ ಪ್ರಕಾರ ಕನ್ನಡದಲ್ಲಿ ೫೨ ಅಕ್ಷರಗಳು ಇದ್ದದ್ದು ಹೆಚ್ಚಾಯಿತು; ೩೨ ಅಕ್ಷರಗಳೇ ಸಾಕು; ಬಾಕಿ ೨೦ ಅಕ್ಷರಗಳು ಅನವಶ್ಯಕ ಎಂದು ಅವರ ಅಭಿಪ್ರಾಯ. ಈ ವಿಷಯದಲ್ಲಿ ಅವರಿಗೆ role model ಅಂತ ಇರುವದು ತಮಿಳು ಲಿಪಿ. ತಮಿಳು ಲಿಪಿಯು inadequate ಇದ್ದದ್ದು ಅವರಿಗೆ ಶ್ರೇಷ್ಠತೆಯಾಗಿ ಕಾಣುತ್ತಿರುವದು, ಕನ್ನಡದ ದುರ್ದೈವ. ಕಡಿಮೆ ಧ್ವನಿಸಂಕೇತಗಳು ಇರುವದರಿಂದ ತಮಿಳು ಭಾಷೆಗೆ ಆದ ಹಾನಿಯ ಬಗೆಗೆ ಅವರ ಗಮನವಿಲ್ಲ.
ಈಗ ನೋಡಿ, ಕನ್ನಡದಲ್ಲಿ ಗೆಳತಿ ಹಾಗು ಕೆಳದಿ ಎನ್ನುವ ಎರಡು ಪದಗಳಿವೆ. ಗೆಳತಿ ಎಂದರೆ friend, ಕೆಳದಿ ಎಂದರೆ ಮಡದಿ. ತಮಿಳಿನಲ್ಲಿ ಗೆಳತಿ ಹಾಗು ಕೆಳದಿ ಪದಗಳನ್ನು ಒಂದೇ ರೀತಿಯಾಗಿ ಬರೆಯುತ್ತಾರೆ. (---I believe). ಶಂಕರಭಟ್ಟರ ಸಮರ್ಥನೆ ಏನೆಂದರೆ, ಸಂದರ್ಭದ ಪ್ರಕಾರ ಅರ್ಥ ಮಾಡಿಕೊಳ್ಳಲು ತಮಿಳು ಬುದ್ಧಿಗೆ ಸಾಧ್ಯವಿದೆ ಎನ್ನುವದು. OK,ಕೆಳಗಿನ ಪ್ಯಾರಾ ಓದಿರಿ:
“ರಮಾ ರಾಜನ ಕೆ(ಗೆ)ಳದಿ(ತಿ). ಇಬ್ಬರೂ ಜೊತೆಯಾಗಿ ಹೊಟೆಲ್ಲಿನಲ್ಲಿ ಮಸಾಲೆ ದೋಸೆ ತಿಂದು, ಪಾರ್ಕಿನಲ್ಲಿ ಸರಸವಾಡಿದರು…….”.
ಇದೇ ರೀತಿಯಾಗಿ ಒಂದು ಇಡೀ ಅಧ್ಯಾಯವನ್ನೇ ಬರೆಯಬಹುದು. ಓದುಗರಿಗೆ ರಮಾ ಹಾಗು ರಾಜನ ಸಂಬಂಧ ಏನೆಂಬುದು ಗೊತ್ತಾಗುವದೇ ಇಲ್ಲ,….ಸಂದರ್ಭ ಬರುವವರೆಗೂ. ಆದುದರಿಂದ ತಮಿಳು ಭಾಷೆ suspense novels ಬರೆಯಲು ಯೋಗ್ಯವಾದೀತೆ ಹೊರತು, ಸರಾಗ ಓದಿಗಲ್ಲ.
ಆದರೆ ನನ್ನ point ಇದಲ್ಲ. ಧ್ವನಿಸಂಕೇತಗಳು ಕಡಿಮೆಯಾಗಿದ್ದರಿಂದ ಪದಗಳ ಸಂಖ್ಯೆ ಕಡಿಮೆಯಾಗುವದು ಎನ್ನುವದು ಗಣಿತದಲ್ಲಿಯ permutations and combinations ಬಲ್ಲ ಯಾರಿಗಾದರೂ ಗೊತ್ತಾಗುವದು.
ಇಂಗ್ಲಿಶ್ ಲಿಪಿ non-phonetic ಇರುವದರಿಂದ ಅದೇ ಆ ಭಾಷೆಗೆ ಒಂದು advantage ಆಗಿಬಿಟ್ಟಿದೆ. ಬೇಕಾಬಿಟ್ಟಿಯಾಗಿ ಅಕ್ಷರ ಜೋಡಣೆ ಮಾಡುವದರಿಂದ ಅವರು ಯಾವ ಧ್ವನಿಯನ್ನಾದರೂ ಪದವನ್ನಾಗಿ ಬರೆಯಬಲ್ಲರು. ಆದರೆ phonetic script ಹೊಂದಿರುವ ತಮಿಳಿನಲ್ಲಿ, ಕಡಿಮೆ ಅಕ್ಷರಗಳಿರುವದರಿಂದ ಅದರ ಪದಸಂಪತ್ತೂ ಸಹ ಕಡಿಮೆಯಾಗುತ್ತದೆ ಎನ್ನುವದು just a mathematical understanding.
ಇಂತಹ ಅನಾಗರಿಕ ಲಿಪಿಯನ್ನು ಅನುಸರಿಸಲು, ಶಂಕರಭಟ್ಟರು ಕನ್ನಡಿಗರಿಗೆ ಯಾಕೆ ಸಲಹೆ ನೀಡುತ್ತಿದ್ದಾರೆ? ಕನ್ನಡದ ಮೇಲಿನ ದ್ವೇಷದಿಂದಲೆ? ಸಂಸ್ಕೃತದ ಮೇಲಿನ ದ್ವೇಷದಿಂದಲೆ? ಅಥವಾ ಲಿಪಿ ಅನಾಗರಿಕವಾದಾಗ, ಆ ಭಾಷೆಗೆ Classical Status ಸಿಗುವದು ಎನ್ನುವ ಕಲ್ಪನೆಯಿಂದಲೆ?
ಊಂ.. ಹೂಂ…. ಅಲ್ಲ. ತಮಗೆ ‘ಕೆಳವರ್ಗ’ದ ಬಗೆಗೆ ಇರುವ ಕಳಕಳಿಯಿಂದ ಎಂದು ಶಂಕರ ಭಟ್ಟರು ತಮ್ಮ ಪುಸ್ತಕದಲ್ಲಿ ಘೋಷಿಸಿದ್ದಾರೆ. ಅದರ ಸತ್ಯಾಸತ್ಯತೆಯನ್ನು ಮುಂದಿನ ಲೇಖನದಲ್ಲಿ ಪರಿಶೀಲಿಸೋಣ.
Tuesday, June 17, 2008
Sunday, June 15, 2008
ಅಲ್ಪಪ್ರಾಣ--ಮಹಾಪ್ರಾಣ
ಬಂಗಾಲಿಗಳು ‘ಪಂಚವಟಿ’ ಎನ್ನುವ ಪದವನ್ನು ‘ಪೊಂಚೊಬೊಟಿ’ ಎಂದು ಉಚ್ಚರಿಸುತ್ತಾರೆ. ‘ಕಂಕಣಾ’ ಪದವನ್ನು
‘ಕೊಂಕಣಾ’ ಎಂದು ಉಚ್ಚರಿಸುತ್ತಾರೆ. ಅವರ ಉಚ್ಚಾರಣಾ ಶೈಲಿಯೇ ಹಾಗಿದೆ. ಇಂಗ್ಲಿಶ್ ಜನಗಳಿಗೆ ‘ಬೆಂಗಳೂರು’ ಎನ್ನಲು ಬಾರದೆ, ‘ಬ್ಯಾಂಗ್ಲೋರ್’ ಎಂದೂ ‘ಶಿಂಧೆ’ ಎನ್ನಲು ಬಾರದೇ, ‘ಸಿಂದ್ಯಾ’ ಎಂದೂ ಅಂದಿರಬಹುದು.
ಕನ್ನಡಿಗರಿಗೆ ಉಚ್ಚಾರಣಾ ಸಮಸ್ಯೆ ಇಲ್ಲವೇ ಇಲ್ಲ. ಕನ್ನಡಿಗರು ಸಂಸ್ಕೃತ ಪದಗಳನ್ನು ಶುದ್ಧವಾಗಿ ಉಚ್ಚರಿಸಬಲ್ಲರು, ಅಮೇರಿಕನ್ನರು ನಾಚುವಂತೆ ಅಮೇರಿಕನ್-ಇಂಗ್ಲಿಶ್ ಮಾತನಾಡಬಲ್ಲರು. ಇದೆಲ್ಲ ಸರಿಯೇ. ಆದರೆ, ಕನ್ನಡದಲ್ಲಿಯೇ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಅದಲು ಬದಲು ಮಾಡುವದರಲ್ಲಿ ಕನ್ನಡಿಗರು ವಿಶೇಷ ಆಸಕ್ತಿಯನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಸಿನೆಮಾದ ‘ಮಧ್ಯಾಂತರವು’ ಕೆಲವು ಕನ್ನಡಿಗರಿಗೆ ‘ಮದ್ಯಾಂತರ’ವಾಗಿ ಬಿಡುವದು. ಉಚ್ಚಾರಣೆ ಹೋಗಲಿ ಬಿಡಿ, ಬರೆಯುವದೂ ಹೀಗೆ ಆದರೆ ತಪ್ಪಲ್ಲವೆ?
ಮಹಾತ್ಮಾ ಗಾಂಧಿಯವರು ಖಾನ ಸಹೋದರರ ಜೊತೆಗೆ ‘ ಖುದಾಯೀ ಖಿದ್ಮತ್ಗಾರ ’ ಚಳುವಳಿಯಲ್ಲಿ ಭಾಗವಹಿಸಿದ್ದರು. ಚಳುವಳಿಯ ಪ್ರವರ್ತಕರು ಯಾವ ರೀತಿಯಲ್ಲಿ ಈ ಪದಪುಂಜವನ್ನು ಬರೆಯುತ್ತಾರೊ ಹಾಗು ಉಚ್ಚರಿಸುತ್ತಾರೊ, ಅದೇ ರೀತಿಯಲ್ಲಿ ತನ್ನ ಭಾಷೆಯಲ್ಲಿ ಬರೆಯುವದು ಹಾಗು ಉಚ್ಚರಿಸುವದು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯ ಹೊಣೆಗಾರಿಕೆ.
ಆದರೆ, ಕನ್ನಡ ವಿಕಿಪೀಡಿಯಾದಲ್ಲಿ ‘ಖುದಾಯೀ ಖಿದ್ಮತ್ಗಾರ’ ಪದವು ‘ಕುದಾಯಿ ಕಿದ್ಮತ್ಗಾರ್’ ಆಗಿದೆ. ಅದರಂತೆ ‘ಝಾರಖಂಡ’ ಪದವು ‘ಜಾರ್ಕಂಡ್’ ಅಗಿತ್ತು. ಇದರ ಬರಹಗಾರರು, “ಮಹಾಪ್ರಾಣ ಉಚ್ಚಾರವು ಕನ್ನಡಕ್ಕೆ ಸಹಜವಲ್ಲವೆಂದು”, justify ಮಾಡುವರೇನೊ?
ಯಾರು ನಿಮಗೆ ಈ ತಪ್ಪು ಗ್ರಹಿಕೆಯನ್ನು ಕೊಟ್ಟವರು ಎಂದು ಕೇಳುತ್ತೇನೆ. ಇದು ನಿಜವಲ್ಲ. ಒಂದು ವೇಳೆ, ಮಹಾಪ್ರಾಣ ಪದಗಳು ಸಂಸ್ಕೃತ ಭಾಷೆಯಿಂದಲೇ ಕನ್ನಡಕ್ಕೆ ಬಂದಿದ್ದರೂ ಸಹ, ಈಗ ಅವು ಕನ್ನಡದಲ್ಲಿ ಒಂದಾಗಿ ಬೆರೆತುಕೊಂಡಿವೆ. ದೈನಂದಿನ ವ್ಯಾಪಾರದಲ್ಲಿ ಅವುಗಳನ್ನು ಬಿಡುವದು ಸಾಧ್ಯವೇ ಆಗದು. ಈ ಲೇಖನದಲ್ಲಿ ಇಲ್ಲಿಯವರೆಗೆ ೧೫೦ ಪದಗಳು ಬಂದಿವೆ. ಅವುಗಳಲ್ಲಿ ೧೨ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳಿವೆ. ಅಂದರೆ ಶೇಕಡಾ ೮ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳು ಬಂದಿವೆ.
ಈಗ ಒಂದು ಉದಾಹರಣೆ ಗಮನಿಸಿರಿ:
‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಘೋರ್ಪಡೆಯವರು ಶ್ರೀ ಭೀಮಣ್ಣ ಖಂಡ್ರೆಯವರ ಜೊತೆಗೆ, ಮಧ್ಯದಲ್ಲಿ ಆಸೀನರಾಗಿದ್ದಾರೆ.’
ಈ ವಾಕ್ಯವನ್ನು ‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಜೊತೆಗೆ, ಮದ್ಯದಲ್ಲಿ ಆಸೀನರಾಗಿದ್ದಾರೆ. ’ ಎಂದು ಬರೆದರೆ ಹಾಗೂ ಉಚ್ಚರಿಸಿದರೆ ಸರಿಯಾಗಿರುತ್ತದೆಯೆ?
ಕನ್ನಡದಲ್ಲಿ ಮಹಾಪ್ರಾಣ ಪದಗಳೇ ಇಲ್ಲವೆಂದು ಹೇಳುವ ಕೆಲವು ಅಲ್ಪಪ್ರಾಣಿಗಳಿಗೆ ನಾವು “ ಛೀ, ಥೂ!” ಎನ್ನದೆ ಗತ್ಯಂತರವಿಲ್ಲ. ಇವೆಲ್ಲ ಸಂಸ್ಕೃತ ಪದಗಳು ಎನ್ನುವ ಇವರಿಗೆ ಸಂಸ್ಕೃತ ಹಾಗು ಕನ್ನಡ ಭಾಷೆಗಳ ಅನ್ಯೋನ್ಯ ಸಂಬಂಧವೇ ಗೊತ್ತಿಲ್ಲ. ಖಂಡಿತವಾಗಿಯೂ ಸಂಸ್ಕೃತವು ಕನ್ನಡದ ತಾಯಿಯಲ್ಲ. ಅದರೆ, ಅವುಗಳ ಸಂಬಂಧ ಸಾವಿರಾರು ವರ್ಷಗಳ ಪ್ರೇಮಿಗಳ ಸಂಬಂಧ.
ಮಹಾಪ್ರಾಣಗಳ ವಿರುದ್ಧ ಕತ್ತಿ ಮಸೆಯುತ್ತಿರುವವರಲ್ಲಿ, ಶ್ರೀ ಶಂಕರ ಭಟ್ಟರು ಮುಖ್ಯರು. “ಕನ್ನಡ ಬರಹವನ್ನು ಸರಿಪಡಿಸೋಣ” ಎನ್ನುವ ಅವರ ಪುಸ್ತಕದಲ್ಲಿ ಕನ್ನಡಿಗರು ಮಹಾಪ್ರಾಣವನ್ನು ನಿಜವಾಗಿಯೂ ಉಚ್ಚರಿಸುವದೇ ಇಲ್ಲ; ಆದರೆ ಹಾಗೆ ತಿಳಿದುಕೊಂಡಿರುತ್ತಾರೆ ಎಂದು ಬರೆದಿದ್ದಾರೆ. (ಪುಟ ೬೦ ) “ಮುಖ್ಯ ಮಂತ್ರಿ” ಎಂದು ಉಚ್ಚರಿಸುತ್ತಿದ್ದೇವೆಂದು ನಾವು ಅಂದುಕೊಂಡರೂ ಸಹ, ನಿಜವಾಗಲೂ ನಾವು ಉಚ್ಚರಿಸುತ್ತಿರುವದು “ಮುಕ್ಯ ಮಂತ್ರಿ” ಎಂದು ಇವರು ತಿಳುವಳಿಕೆ ಕೊಟ್ಟಿದ್ದಾರೆ. (ಪುಟ ೬೦ ).
ಈ ಮಾತು ಕನ್ನಡಿಗರಿಗೆ ಅವಮಾನವಲ್ಲವೆ? ಕನ್ನಡಿಗರು ಅಷ್ಟು ದಡ್ಡರೆ?
ಇದು ಒಂದು Theoryಯಾದರೆ, ಉತ್ತರ ಕರ್ನಾಟಕದ ಜನರು ಮರಾಠಿ ಭಾಷೆಯ ಪ್ರಭಾವದಿಂದಾಗಿ, ಅಲ್ಪಪ್ರಾಣಗಳನ್ನು ಮಹಾಪ್ರಾಣವಾಗಿ ಬದಲಾಯಿಸುತ್ತಾರೆ ಎನ್ನುವದು ಮತ್ತೊಂದು theory.
ಧಾರವಾಡ ಜಿಲ್ಲೆಯ ಕುಂದಗೋಳ ಊರಿನಲ್ಲಿಯೇ ಬೆಳೆದು ಈಗ ಮೈಸೂರು ಸೇರಿದ ಶ್ರೀ ರಾಜಪುರೋಹಿತ ಎನ್ನುವ ಭಾಷಾಶಾಸ್ತ್ರಜ್ಞರ ಘೋಷಣೆಯನ್ನಷ್ಟು ಗಮನಿಸಿರಿ. ಇವರ ಲೇಖನ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಘೋಷಣೆಯ implication ಹೀಗಿದೆ:
‘ಗಡಿಯಾರ’ ಅನ್ನುವ ಪದವನ್ನು ಉತ್ತರ ಕರ್ನಾಟಕದವರು ತಪ್ಪಾಗಿ ‘ಘಡಿಯಾರ’ ಎಂದು ಗರ್ಜಿಸಿ ಉಚ್ಚರಿಸುತ್ತಾರೆ!
ವಾಹ್ ವಾ!! ರಾಜಪುರೋಹಿತರೆ, ನಿಮ್ಮ ಭಾಷಾಪಾಂಡಿತ್ಯಕ್ಕೆ ನನ್ನ ದೀಡ ನಮಸ್ಕಾರ!
ಸಂಸ್ಕೃತದಲ್ಲಿ ‘ಘಟೀ’ ಎಂದರೆ ಸಮಯದ ಒಂದು unit. ಈ ಪದದಿಂದ ಹಿಂದಿಯಲ್ಲಿ ‘ಘಡೀ’ ಎನ್ನುವ ಪದವು ಬಂದಿದೆ. ಹಿಂದಿಯಲ್ಲಿ ‘ಯಾರ’ ಅಂದರೆ ‘ಮಿತ್ರ’ ಅನ್ನುವ ಅರ್ಥವಿದೆ. ಆದುದರಿಂದ ‘ಘಡೀಯಾರ’ ಅಂದರೆ ‘ಸಮಯ ಮಿತ್ರ’; ನಿಮಗೆ ವೇಳೆಯನ್ನು ತಿಳಿಸುವವನು. ‘ಘಡಿಯಾರ’ ಎಂದು ಸರಿಯಾಗಿ ಉಚ್ಚರಿಸುವ ಉತ್ತರ ಕರ್ನಾಟಕದವರಿಗೇ ನೀವು ತಪ್ಪಿತಸ್ಥರ ಪಟ್ಟ ಕಟ್ಟಿದಿರಲ್ಲ , ಸ್ವತಃ ಉತ್ತರ ಕರ್ನಾಟಕದ ಕುಂದಗೋಳದಲ್ಲಿ ಶಾಲೆಯನ್ನು ಕಲಿತವರಾಗಿ! ಇದಕ್ಕೆ ಅಜ್ಞಾನವೆನ್ನೋಣವೆ ಅಥವಾ ಭಾಷಾದ್ರೋಹವೆನ್ನೋಣವೆ?
ನಿಜ ಹೇಳಬೇಕೆಂದರೆ, ಮೈಸೂರು ಸಂಸ್ಥಾನವು ಅನೇಕ ವರ್ಷಗಳವರೆಗೆ ತಮಿಳು ದಿವಾನರ ಆಳಿಕೆಯಲ್ಲಿ ಇದ್ದುದರಿಂದ ಹಾಗೂ ತಮಿಳು ನಾಡಿಗೆ ಹತ್ತಿರವಾಗಿ ಇದ್ದುದರಿಂದ, ಆ ಪ್ರದೇಶದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವದು ರೂಢಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನು? Very simple. ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರಸಂಕೇತ ಇರುವದರಿಂದ, ತಮಿಳಿನಲ್ಲಿ ಮಹಾಪ್ರಾಣವೇ ಇಲ್ಲ. (ಜಗಳಕ್ಕೆ ಬಂದರೆ ಮಾತ್ರ ತಮಿಳರಂತಹ ಮಹಾಪ್ರಾಣಿಗಳೇ ಇಲ್ಲವೆನ್ನಿ).
ತಮಿಳಿನಲ್ಲಿ ಕ, ಖ, ಗ, ಘ ಈ ಧ್ವನಿಗಳಿಗೆ ಒಂದೇ ಸಂಕೇತಾಕ್ಷರ. ಅದರಂತೆ ಟ, ಠ ಇತ್ಯಾದಿಗಳಿಗೆ. ಹೀಗಾಗಿ ತಮಿಳಿನಲ್ಲಿ ‘ಘೋರ್ಪಡೆ’ ‘ಕೋರ್ಪತೆ’ ಅಥವಾ ‘ಖೋರ್ಫಠೆ’ ಆಗಬಹುದು. ‘ಭಟ್ಟ’ರು ‘ಬಟ್ಟ’ರಾಗುತ್ತಾರೆ , ‘ಬತ್ತ’ರೂ ಆಗಬಹುದು. ಈ ಪ್ರಭಾವದಲ್ಲಿ ಬೆಳೆದ ಹಳೆ ಮೈಸೂರಿನಲ್ಲಿ ಸಹ ಅಲ್ಪಪ್ರಾಣದ ರೂಢಿ ಬಲವತ್ತರವಾಯಿತು. ಹಳೆ ಮೈಸೂರಿಗರು ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೂ ಹೀಗಳೆಯುವದು ಈ ಲೇಖನದ ಉದ್ದೇಶವಲ್ಲ. ಕನ್ನಡವನ್ನು ಸರಿಯಾಗಿ ಬರಿಯುವ ಹಾಗು ಉಚ್ಚರಿಸುವ ಉದ್ದೇಶದಿಂದ ಇದನ್ನೆಲ್ಲ ಬರೆಯುತ್ತಿದ್ದು, ಯಾರಿಗಾದರೂ ನೋವೆನಿಸುತ್ತಿದ್ದರೆ, ಈ ದಡ್ಡನನ್ನು ದಯವಿಟ್ಟು ಕ್ಷಮಿಸಿರಿ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ತಪ್ಪುಗಳನ್ನು ನೋಡೋಣ, ತಿದ್ದಿಕೊಳ್ಳಲು ಮನಸ್ಸು ಮಾಡೋಣ.
“ಸರಿಗನ್ನಡಮ್ ಗೆಲ್ಗೆ!”
‘ಕೊಂಕಣಾ’ ಎಂದು ಉಚ್ಚರಿಸುತ್ತಾರೆ. ಅವರ ಉಚ್ಚಾರಣಾ ಶೈಲಿಯೇ ಹಾಗಿದೆ. ಇಂಗ್ಲಿಶ್ ಜನಗಳಿಗೆ ‘ಬೆಂಗಳೂರು’ ಎನ್ನಲು ಬಾರದೆ, ‘ಬ್ಯಾಂಗ್ಲೋರ್’ ಎಂದೂ ‘ಶಿಂಧೆ’ ಎನ್ನಲು ಬಾರದೇ, ‘ಸಿಂದ್ಯಾ’ ಎಂದೂ ಅಂದಿರಬಹುದು.
ಕನ್ನಡಿಗರಿಗೆ ಉಚ್ಚಾರಣಾ ಸಮಸ್ಯೆ ಇಲ್ಲವೇ ಇಲ್ಲ. ಕನ್ನಡಿಗರು ಸಂಸ್ಕೃತ ಪದಗಳನ್ನು ಶುದ್ಧವಾಗಿ ಉಚ್ಚರಿಸಬಲ್ಲರು, ಅಮೇರಿಕನ್ನರು ನಾಚುವಂತೆ ಅಮೇರಿಕನ್-ಇಂಗ್ಲಿಶ್ ಮಾತನಾಡಬಲ್ಲರು. ಇದೆಲ್ಲ ಸರಿಯೇ. ಆದರೆ, ಕನ್ನಡದಲ್ಲಿಯೇ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಅದಲು ಬದಲು ಮಾಡುವದರಲ್ಲಿ ಕನ್ನಡಿಗರು ವಿಶೇಷ ಆಸಕ್ತಿಯನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಸಿನೆಮಾದ ‘ಮಧ್ಯಾಂತರವು’ ಕೆಲವು ಕನ್ನಡಿಗರಿಗೆ ‘ಮದ್ಯಾಂತರ’ವಾಗಿ ಬಿಡುವದು. ಉಚ್ಚಾರಣೆ ಹೋಗಲಿ ಬಿಡಿ, ಬರೆಯುವದೂ ಹೀಗೆ ಆದರೆ ತಪ್ಪಲ್ಲವೆ?
ಮಹಾತ್ಮಾ ಗಾಂಧಿಯವರು ಖಾನ ಸಹೋದರರ ಜೊತೆಗೆ ‘ ಖುದಾಯೀ ಖಿದ್ಮತ್ಗಾರ ’ ಚಳುವಳಿಯಲ್ಲಿ ಭಾಗವಹಿಸಿದ್ದರು. ಚಳುವಳಿಯ ಪ್ರವರ್ತಕರು ಯಾವ ರೀತಿಯಲ್ಲಿ ಈ ಪದಪುಂಜವನ್ನು ಬರೆಯುತ್ತಾರೊ ಹಾಗು ಉಚ್ಚರಿಸುತ್ತಾರೊ, ಅದೇ ರೀತಿಯಲ್ಲಿ ತನ್ನ ಭಾಷೆಯಲ್ಲಿ ಬರೆಯುವದು ಹಾಗು ಉಚ್ಚರಿಸುವದು ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯ ಹೊಣೆಗಾರಿಕೆ.
ಆದರೆ, ಕನ್ನಡ ವಿಕಿಪೀಡಿಯಾದಲ್ಲಿ ‘ಖುದಾಯೀ ಖಿದ್ಮತ್ಗಾರ’ ಪದವು ‘ಕುದಾಯಿ ಕಿದ್ಮತ್ಗಾರ್’ ಆಗಿದೆ. ಅದರಂತೆ ‘ಝಾರಖಂಡ’ ಪದವು ‘ಜಾರ್ಕಂಡ್’ ಅಗಿತ್ತು. ಇದರ ಬರಹಗಾರರು, “ಮಹಾಪ್ರಾಣ ಉಚ್ಚಾರವು ಕನ್ನಡಕ್ಕೆ ಸಹಜವಲ್ಲವೆಂದು”, justify ಮಾಡುವರೇನೊ?
ಯಾರು ನಿಮಗೆ ಈ ತಪ್ಪು ಗ್ರಹಿಕೆಯನ್ನು ಕೊಟ್ಟವರು ಎಂದು ಕೇಳುತ್ತೇನೆ. ಇದು ನಿಜವಲ್ಲ. ಒಂದು ವೇಳೆ, ಮಹಾಪ್ರಾಣ ಪದಗಳು ಸಂಸ್ಕೃತ ಭಾಷೆಯಿಂದಲೇ ಕನ್ನಡಕ್ಕೆ ಬಂದಿದ್ದರೂ ಸಹ, ಈಗ ಅವು ಕನ್ನಡದಲ್ಲಿ ಒಂದಾಗಿ ಬೆರೆತುಕೊಂಡಿವೆ. ದೈನಂದಿನ ವ್ಯಾಪಾರದಲ್ಲಿ ಅವುಗಳನ್ನು ಬಿಡುವದು ಸಾಧ್ಯವೇ ಆಗದು. ಈ ಲೇಖನದಲ್ಲಿ ಇಲ್ಲಿಯವರೆಗೆ ೧೫೦ ಪದಗಳು ಬಂದಿವೆ. ಅವುಗಳಲ್ಲಿ ೧೨ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳಿವೆ. ಅಂದರೆ ಶೇಕಡಾ ೮ ಪದಗಳಲ್ಲಿ ಮಹಾಪ್ರಾಣ ಅಕ್ಷರಗಳು ಬಂದಿವೆ.
ಈಗ ಒಂದು ಉದಾಹರಣೆ ಗಮನಿಸಿರಿ:
‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಘೋರ್ಪಡೆಯವರು ಶ್ರೀ ಭೀಮಣ್ಣ ಖಂಡ್ರೆಯವರ ಜೊತೆಗೆ, ಮಧ್ಯದಲ್ಲಿ ಆಸೀನರಾಗಿದ್ದಾರೆ.’
ಈ ವಾಕ್ಯವನ್ನು ‘ಕರ್ನಾಟಕ ರಾಜ್ಯದ ಸಚಿವರಾದ ಶ್ರೀ ಗೋರ್ಪಡೆಯವರು ಶ್ರೀ ಬೀಮಣ್ಣ ಕಂಡ್ರೆಯವರ ಜೊತೆಗೆ, ಮದ್ಯದಲ್ಲಿ ಆಸೀನರಾಗಿದ್ದಾರೆ. ’ ಎಂದು ಬರೆದರೆ ಹಾಗೂ ಉಚ್ಚರಿಸಿದರೆ ಸರಿಯಾಗಿರುತ್ತದೆಯೆ?
ಕನ್ನಡದಲ್ಲಿ ಮಹಾಪ್ರಾಣ ಪದಗಳೇ ಇಲ್ಲವೆಂದು ಹೇಳುವ ಕೆಲವು ಅಲ್ಪಪ್ರಾಣಿಗಳಿಗೆ ನಾವು “ ಛೀ, ಥೂ!” ಎನ್ನದೆ ಗತ್ಯಂತರವಿಲ್ಲ. ಇವೆಲ್ಲ ಸಂಸ್ಕೃತ ಪದಗಳು ಎನ್ನುವ ಇವರಿಗೆ ಸಂಸ್ಕೃತ ಹಾಗು ಕನ್ನಡ ಭಾಷೆಗಳ ಅನ್ಯೋನ್ಯ ಸಂಬಂಧವೇ ಗೊತ್ತಿಲ್ಲ. ಖಂಡಿತವಾಗಿಯೂ ಸಂಸ್ಕೃತವು ಕನ್ನಡದ ತಾಯಿಯಲ್ಲ. ಅದರೆ, ಅವುಗಳ ಸಂಬಂಧ ಸಾವಿರಾರು ವರ್ಷಗಳ ಪ್ರೇಮಿಗಳ ಸಂಬಂಧ.
ಮಹಾಪ್ರಾಣಗಳ ವಿರುದ್ಧ ಕತ್ತಿ ಮಸೆಯುತ್ತಿರುವವರಲ್ಲಿ, ಶ್ರೀ ಶಂಕರ ಭಟ್ಟರು ಮುಖ್ಯರು. “ಕನ್ನಡ ಬರಹವನ್ನು ಸರಿಪಡಿಸೋಣ” ಎನ್ನುವ ಅವರ ಪುಸ್ತಕದಲ್ಲಿ ಕನ್ನಡಿಗರು ಮಹಾಪ್ರಾಣವನ್ನು ನಿಜವಾಗಿಯೂ ಉಚ್ಚರಿಸುವದೇ ಇಲ್ಲ; ಆದರೆ ಹಾಗೆ ತಿಳಿದುಕೊಂಡಿರುತ್ತಾರೆ ಎಂದು ಬರೆದಿದ್ದಾರೆ. (ಪುಟ ೬೦ ) “ಮುಖ್ಯ ಮಂತ್ರಿ” ಎಂದು ಉಚ್ಚರಿಸುತ್ತಿದ್ದೇವೆಂದು ನಾವು ಅಂದುಕೊಂಡರೂ ಸಹ, ನಿಜವಾಗಲೂ ನಾವು ಉಚ್ಚರಿಸುತ್ತಿರುವದು “ಮುಕ್ಯ ಮಂತ್ರಿ” ಎಂದು ಇವರು ತಿಳುವಳಿಕೆ ಕೊಟ್ಟಿದ್ದಾರೆ. (ಪುಟ ೬೦ ).
ಈ ಮಾತು ಕನ್ನಡಿಗರಿಗೆ ಅವಮಾನವಲ್ಲವೆ? ಕನ್ನಡಿಗರು ಅಷ್ಟು ದಡ್ಡರೆ?
ಇದು ಒಂದು Theoryಯಾದರೆ, ಉತ್ತರ ಕರ್ನಾಟಕದ ಜನರು ಮರಾಠಿ ಭಾಷೆಯ ಪ್ರಭಾವದಿಂದಾಗಿ, ಅಲ್ಪಪ್ರಾಣಗಳನ್ನು ಮಹಾಪ್ರಾಣವಾಗಿ ಬದಲಾಯಿಸುತ್ತಾರೆ ಎನ್ನುವದು ಮತ್ತೊಂದು theory.
ಧಾರವಾಡ ಜಿಲ್ಲೆಯ ಕುಂದಗೋಳ ಊರಿನಲ್ಲಿಯೇ ಬೆಳೆದು ಈಗ ಮೈಸೂರು ಸೇರಿದ ಶ್ರೀ ರಾಜಪುರೋಹಿತ ಎನ್ನುವ ಭಾಷಾಶಾಸ್ತ್ರಜ್ಞರ ಘೋಷಣೆಯನ್ನಷ್ಟು ಗಮನಿಸಿರಿ. ಇವರ ಲೇಖನ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಘೋಷಣೆಯ implication ಹೀಗಿದೆ:
‘ಗಡಿಯಾರ’ ಅನ್ನುವ ಪದವನ್ನು ಉತ್ತರ ಕರ್ನಾಟಕದವರು ತಪ್ಪಾಗಿ ‘ಘಡಿಯಾರ’ ಎಂದು ಗರ್ಜಿಸಿ ಉಚ್ಚರಿಸುತ್ತಾರೆ!
ವಾಹ್ ವಾ!! ರಾಜಪುರೋಹಿತರೆ, ನಿಮ್ಮ ಭಾಷಾಪಾಂಡಿತ್ಯಕ್ಕೆ ನನ್ನ ದೀಡ ನಮಸ್ಕಾರ!
ಸಂಸ್ಕೃತದಲ್ಲಿ ‘ಘಟೀ’ ಎಂದರೆ ಸಮಯದ ಒಂದು unit. ಈ ಪದದಿಂದ ಹಿಂದಿಯಲ್ಲಿ ‘ಘಡೀ’ ಎನ್ನುವ ಪದವು ಬಂದಿದೆ. ಹಿಂದಿಯಲ್ಲಿ ‘ಯಾರ’ ಅಂದರೆ ‘ಮಿತ್ರ’ ಅನ್ನುವ ಅರ್ಥವಿದೆ. ಆದುದರಿಂದ ‘ಘಡೀಯಾರ’ ಅಂದರೆ ‘ಸಮಯ ಮಿತ್ರ’; ನಿಮಗೆ ವೇಳೆಯನ್ನು ತಿಳಿಸುವವನು. ‘ಘಡಿಯಾರ’ ಎಂದು ಸರಿಯಾಗಿ ಉಚ್ಚರಿಸುವ ಉತ್ತರ ಕರ್ನಾಟಕದವರಿಗೇ ನೀವು ತಪ್ಪಿತಸ್ಥರ ಪಟ್ಟ ಕಟ್ಟಿದಿರಲ್ಲ , ಸ್ವತಃ ಉತ್ತರ ಕರ್ನಾಟಕದ ಕುಂದಗೋಳದಲ್ಲಿ ಶಾಲೆಯನ್ನು ಕಲಿತವರಾಗಿ! ಇದಕ್ಕೆ ಅಜ್ಞಾನವೆನ್ನೋಣವೆ ಅಥವಾ ಭಾಷಾದ್ರೋಹವೆನ್ನೋಣವೆ?
ನಿಜ ಹೇಳಬೇಕೆಂದರೆ, ಮೈಸೂರು ಸಂಸ್ಥಾನವು ಅನೇಕ ವರ್ಷಗಳವರೆಗೆ ತಮಿಳು ದಿವಾನರ ಆಳಿಕೆಯಲ್ಲಿ ಇದ್ದುದರಿಂದ ಹಾಗೂ ತಮಿಳು ನಾಡಿಗೆ ಹತ್ತಿರವಾಗಿ ಇದ್ದುದರಿಂದ, ಆ ಪ್ರದೇಶದಲ್ಲಿ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಉಪಯೋಗಿಸುವದು ರೂಢಿಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನು? Very simple. ತಮಿಳಿನಲ್ಲಿ ಒಂದು ವರ್ಗದ ವ್ಯಂಜನಗಳಿಗೆ ಒಂದೇ ಅಕ್ಷರಸಂಕೇತ ಇರುವದರಿಂದ, ತಮಿಳಿನಲ್ಲಿ ಮಹಾಪ್ರಾಣವೇ ಇಲ್ಲ. (ಜಗಳಕ್ಕೆ ಬಂದರೆ ಮಾತ್ರ ತಮಿಳರಂತಹ ಮಹಾಪ್ರಾಣಿಗಳೇ ಇಲ್ಲವೆನ್ನಿ).
ತಮಿಳಿನಲ್ಲಿ ಕ, ಖ, ಗ, ಘ ಈ ಧ್ವನಿಗಳಿಗೆ ಒಂದೇ ಸಂಕೇತಾಕ್ಷರ. ಅದರಂತೆ ಟ, ಠ ಇತ್ಯಾದಿಗಳಿಗೆ. ಹೀಗಾಗಿ ತಮಿಳಿನಲ್ಲಿ ‘ಘೋರ್ಪಡೆ’ ‘ಕೋರ್ಪತೆ’ ಅಥವಾ ‘ಖೋರ್ಫಠೆ’ ಆಗಬಹುದು. ‘ಭಟ್ಟ’ರು ‘ಬಟ್ಟ’ರಾಗುತ್ತಾರೆ , ‘ಬತ್ತ’ರೂ ಆಗಬಹುದು. ಈ ಪ್ರಭಾವದಲ್ಲಿ ಬೆಳೆದ ಹಳೆ ಮೈಸೂರಿನಲ್ಲಿ ಸಹ ಅಲ್ಪಪ್ರಾಣದ ರೂಢಿ ಬಲವತ್ತರವಾಯಿತು. ಹಳೆ ಮೈಸೂರಿಗರು ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರನ್ನೂ ಹೀಗಳೆಯುವದು ಈ ಲೇಖನದ ಉದ್ದೇಶವಲ್ಲ. ಕನ್ನಡವನ್ನು ಸರಿಯಾಗಿ ಬರಿಯುವ ಹಾಗು ಉಚ್ಚರಿಸುವ ಉದ್ದೇಶದಿಂದ ಇದನ್ನೆಲ್ಲ ಬರೆಯುತ್ತಿದ್ದು, ಯಾರಿಗಾದರೂ ನೋವೆನಿಸುತ್ತಿದ್ದರೆ, ಈ ದಡ್ಡನನ್ನು ದಯವಿಟ್ಟು ಕ್ಷಮಿಸಿರಿ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ತಪ್ಪುಗಳನ್ನು ನೋಡೋಣ, ತಿದ್ದಿಕೊಳ್ಳಲು ಮನಸ್ಸು ಮಾಡೋಣ.
“ಸರಿಗನ್ನಡಮ್ ಗೆಲ್ಗೆ!”
Thursday, June 12, 2008
ಭಾಷಾದೋಷ: ‘ಆ’ಕಾರಾಂತ ಪದಗಳು
ಭಾಷಾದೋಷವು ವ್ಯಾಕರಣದೋಷಕ್ಕಿಂತ ಘೋರವಾದಂತಹ ಸ್ಥಿತಿ. ವ್ಯಾಕರಣದೋಷವು ಓರ್ವ ವ್ಯಕ್ತಿಯ ಅಜ್ಞಾನದಿಂದಾಗಿ ಘಟಿಸಬಹುದು. ಆದರೆ, ಭಾಷಾದೋಷವು ಒಂದು ಪ್ರದೇಶದಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಗಳಿಂದಾಗಿ ಉದ್ಭವಿಸುತ್ತದೆ. ಈ ಉದಾಹರಣೆಯನ್ನು ನೋಡಿರಿ:
ಇತ್ತೀಚೆಗೆ ಟೀವಿಯಲ್ಲಿ ಪ್ರಸಾರವಾದ ಕನ್ನಡದ ಒಂದು ಪ್ರಸಿದ್ಧ ಧಾರಾವಾಹಿ: “ ಮುಕ್ತ”. ಇದು “ ಮುಕ್ತಾ” ಎಂದಿರಬೇಕು. ಯಾಕೆಂದರೆ “ ಮುಕ್ತ” ಎನ್ನುವದು ಪುಲ್ಲಿಂಗವಾಚಕ ವಿಶೇಷಣ. ಉದಾಹರಣೆಗೆ ಜೀವನ್-ಮುಕ್ತ ಪುರುಷ ಇತ್ಯಾದಿ. ಹೃಸ್ವಾಂತವಾಗಿ ಕೊನೆಗೊಳ್ಳುವ ಪದವನ್ನು ದೀರ್ಘಾಂತವಾಗಿ ಉಚ್ಚರಿಸುವದು ಸರಿಯಲ್ಲ. ಒಂದು ವೇಳೆ ಮುಕ್ತ ಎಂದು ಹೃಸ್ವಾಂತವಾಗಿ ಬರೆದು ಮುಕ್ತಾ ಎಂದು ದೀರ್ಘಾಂತವಾಗಿಯೇ ಉಚ್ಚರಿಸುವದಾದರೆ, ಹೃಸ್ವಾಂತವಾಗಿ ಉಚ್ಚರಿಸಲು, ಯಾವ ರೀತಿಯಿಂದ ಬರೆಯಬೇಕು?.... ‘ ಮುಕ್ತ್ ’ ಎಂದೆ?
ದೀರ್ಘಾಂತ, ಹೃಸ್ವಾಂತ ಹಾಗು ವ್ಯಂಜನಾಂತ ಪದಗಳನ್ನು ಬರೆಯುವಾಗ, ಈ ರೂಢಿಯು ಸೃಷ್ಟಿಸುವ ಗೋಜಲನ್ನು ಪರಿಶೀಲಿಸಲು ಕೆಳಗಿನ ಉದಾಹರಣೆಯನ್ನು ಗಮನಿಸಿರಿ:
‘ರಮಾ’ ಎನ್ನುವ ದೀರ್ಘಾಂತ ಪದವನ್ನು ‘ರಮ’ ಎಂದು ಬರೆದರೆ, ‘ರಮ’ ಎನ್ನುವ ಹೃಸ್ವಾಂತ ಪದವನ್ನು ಹೇಗೆ ಬರೆಯಬೇಕು?....’ರಮ್’ ಎಂದೆ? ಹಾಗಾದಾಗ, ರಮ್ (Rum)ಅನ್ನು ಹೇಗೆ ಬರೆಯಬೇಕು?
ಕನ್ನಡ ವಿಕಿಪೀಡಿಯಾದಲ್ಲಿಯ ಒಂದು ಲೇಖನದಲ್ಲಿ Madam Cama ಇವರ ಹೆಸರನ್ನು ಮೇಡಂ ಕಾಮ ಎಂದು ಬರೆಯಲಾಗಿದೆ. ಅಯ್ಯೋ ರಾಮ! ಕಾಮದೇವನ ಪಟ್ಟವನ್ನು ಕಾಮಾಳಿಗೆ ಕೊಟ್ಟರೆ, ‘ಕಾಮ’ನನ್ನು ‘ಕಾಮ್’ ಎಂದು ಬರೆಯಬಹುದೆ? ಆದರೆ ಕಾಮನು ಕಾಮ್ (calm) ಆಗಿರಲು ಒಪ್ಪುವನೆ?
ಇದೇ ರೀತಿಯಾಗಿ ‘ಗಂಗಾ’ ನದಿಯನ್ನು ‘ಗಂಗ’ ಎಂದು ಬರೆದರೆ, ತಲಕಾಡು ರಾಜ್ಯವನ್ನಾಳಿದ ‘ಗಂಗ’ ರಾಜಕುಲವನ್ನು ಹೇಗೆ ಬರೆಯಬೇಕು?—‘ಗಂಗ್’ ರಾಜಕುಲವೆಂದೆ?
ಕನ್ನಡ ವಿಕಿಪೀಡಿಯಾದಲ್ಲಿ ನಾನು ಹಳಗನ್ನಡದ ಪ್ರಸಿದ್ಧ ಲೇಖಕ ‘ನೇಮಿಚಂದ್ರ’ನ ಬಗೆಗೆ ಒಂದು ಲೇಖನ post ಮಾಡಿದ್ದೆ. ಆಬಳಿಕ ಹೊಸ ಪೀಳಿಗೆಯ ಲೇಖಕಿಯಾದ ‘ನೇಮಿಚಂದ್ರ’ಳ ಬಗೆಗೆ ಲೇಖನ post ಮಾಡಲು ಹೊರಟಾಗ ಗಣಕ ಯಂತ್ರವು ಈ ಹೊಸ ಲೇಖನವನ್ನು ಅದೇ ಹೆಸರಿನಲ್ಲಿ ಒಪ್ಪಿಕೊಳ್ಳಲಿಲ್ಲ. ಆ ಬಳಿಕ ನಾನು ‘ನೇಮಿಚಂದ್ರ (ಲೇಖಕಿ)’ ಎಂದು ತಿದ್ದುಪಡಿ ಮಾಡಬೇಕಾಯಿತು. ‘ನೇಮಿಚಂದ್ರಾ’ ಇವರು ತಮ್ಮ ಹೆಸರಿನ ಕೊನೆಯನ್ನು ದೀರ್ಘೀಕರಿಸದೇ, ಹೃಸ್ವೀಕರಿಸಿದ್ದರಿಂದ, ಅವರು ಪುಲ್ಲಿಂಗವಾದರು!
ಸಂತೋಷಕುಮಾರ ಗುಲವಾಡಿಯವರು ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ಈ ವಿಷಯದ ಬಗೆಗೇ ಒಂದು ಸಂಪಾದಕೀಯ ಬರೆದಿದ್ದರು. ಆ ಸಂದರ್ಭದಲ್ಲಿ ಅವರು ನೀಡಿದ ಉದಾಹರಣೆ: ‘ದುರ್ಗಾ’ ಪದವನ್ನು ‘ದುರ್ಗ’ ಎಂದು ಬರೆದರೆ, ಆ ಪದವು ಹುಡುಗಿಯ ಹೆಸರಾಗುವ ಬದಲು ‘ಕೋಟೆ’ ಎನ್ನುವ ಅರ್ಥವನ್ನು ಕೊಡುತ್ತದೆ.
ಇದರಂತೆ, ಅನೇಕ ಪದಗಳ ಉದಾಹರಣೆಗಳನ್ನು ಕೊಡಬಹುದು: ಬಾಲವಿಹಾರದಲ್ಲಿ ಕಲಿಸಲಾಗುವ ಹಾಡನ್ನು ಮುದ್ರಿಸಿದ ಈ ಅವತರಣಿಕೆಯನ್ನು ನೋಡಿರಿ:
“ ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವದು,
ಎತ್ತಿಕೊಳ್ಳದಿರಲು ಅದಕೆ ಕೋಪ ಬರುವದು”.
‘ಪಾಪ’ ಪದದ ಅರ್ಥವೇನು? –SIN ಎಂದಲ್ಲವೇ?
ಕೂಸು ಎಂದು ಹೇಳಲು ‘ಪಾಪಾ’ ಎಂದು ಬರೆಯಬೇಕಲ್ಲವೆ?
ಕೂಸು ಪದಕ್ಕೆ ‘ಪಾಪ’ ಎಂದೇ ಬರೆಯುವದು ಸರಿ ಎಂದು ನೀವು ಹೇಳುವದಾದರೆ, SIN ಅರ್ಥದ ‘ಪಾಪ’ ಪದಕ್ಕೆ ‘ಪಾಪ್’ ಎಂದು ಬರೆಯಬೇಕೆ? ಹಾಗಾದಾಗ POP ಅರ್ಥದ ಪಾಪ್ ಪದವನ್ನು ಬರೆಯುವದು ಹೇಗೆ?
ಕೇವಲ ‘ಆ’ ಸ್ವರಾಂತ ನಾಮಸೂಚಕ ಪದಗಳಿಗಷ್ಟೇ ಈ ತಪ್ಪು ಪ್ರಯೋಗ ಸೀಮಿತವಾಗಿಲ್ಲ. ಸರಕಾರಿ ಕಚೇರಿಯೊಂದರ ಮೇಲೆ ಹಾಕಿದ ಈ ಫಲಕವನ್ನು ನೋಡಿರಿ:
“ಶಿಶುಪಾಲನ ಕೇಂದ್ರ”
ಈ ಫಲಕವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವೇ ಆಗಲಿಲ್ಲ. ಕೃಷ್ಣನ ವಿರೋಧಿಯಾದ ‘ಶಿಶುಪಾಲ’ ಎನ್ನುವ ದೈತ್ಯನ ಸಲುವಾಗಿ ಯಾರು ಯಾಕೆ ಕೇಂದ್ರ ಸ್ಥಾಪಿಸುತ್ತಾರೆ ಎಂದೇ ಗೊತ್ತಾಗಲಿಲ್ಲ. ಕಚೇರಿಯ ಒಳಹೊಕ್ಕು ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ತಿಳಿದದ್ದು: ಇದು ‘ಶಿಶುಪಾಲನಾ ಕೇಂದ್ರ’ವೆಂದು!
ಈ ತಪ್ಪು ಪ್ರಯೋಗವು ಸಂಯುಕ್ತ ಪದಗಳ ಮಧ್ಯಭಾಗವನ್ನೂ ಸಹ ಆಕ್ರಮಿಸಿರುವದು ಹೆಚ್ಚಿನ ದುರ್ದೈವ. ಉದಾಹರಣೆಗೆ, “ಶುಭಾಕಾಂಕ್ಷೆ” ಎನ್ನುವ ಪದವನ್ನು “ಶುಭಕಾಂಕ್ಷೆ” ಎಂದು ವಿಕಿಪೀಡಿಯಾದ ಓದುಗರೊಬ್ಬರು ಬರೆದಿದ್ದರು.
ಅಷ್ಟೇ ಏಕೆ, ನಮ್ಮ ಕರ್ನಾಟಕ ಸರಕಾರದ ಸಂಪುಟ ದರ್ಜೆ ಸಚಿವರಾದ ಶ್ರೀ ಮುಮತಾಜ ಅಲಿಯವರು ಪತ್ರಿಕೆಗೆ ಬರೆದ ಪತ್ರ ಒಂದರಲ್ಲಿ, “ಶಿಲಾನ್ಯಾಸ” ಪದದ ಬದಲಾಗಿ “ಶಿಲನ್ಯಾಸ” ಎಂದು ಬರೆದಿದ್ದರು. ಈ ಅಪಪ್ರಯೋಗದ ತಪ್ಪು ಅವರದಲ್ಲ. “ಶಿಲಾ” ಪದ ಬರೆಯುವದನ್ನು “ಶಿಲ” ಎಂದೇ ಬರೆಯಲು ಅವರು ರೂಢಿಸಿಕೊಂಡಿದ್ದರಿಂದ ಇಂತಹ ಅಪಪ್ರಯೋಗವಾಗಿದೆ.
ಇದರಂತೆಯೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಸಿನಿಮಾ ವಿಭಾಗದಲ್ಲಿ ಬರೆಯುವ ಎಚ್. ಕೆ. ಸಾವಿತ್ರಿಯವರು ನಟಿಯೊಬ್ಬಳನ್ನು ವರ್ಣಿಸುತ್ತ, ‘ಬೆಳಗಾವಿಯ ಕುಂದದಂತಹ’ ಎಂದು ಬರೆದಿದ್ದಾರೆ. ‘ಕುಂದ’ ಎಂದರೆ ಒಂದು ಜಾತಿಯ ಹೂವು. ಬೆಳಗಾವಿ ಕುಂದಪುಷ್ಪಕ್ಕಂತೂ ಹೆಸರು ಪಡೆದಿಲ್ಲ. ‘ಹೀಗೇಕೆ?’ ಎಂದು ನಾನು ವಿಸ್ಮಯಪಡುತ್ತಿದ್ದಾಗ ಹೊಳೆದದ್ದು: ಓಹೋ ಇವರು ಹೇಳುತ್ತಿರುವದು ಬೆಳಗಾವಿಯ ‘ಕುಂದಾ’, ಒಂದು ಬಗೆಯ sweet, ‘ಕುಂದ’ಪುಷ್ಪವಲ್ಲ ಎನ್ನುವದು.
ಈ ತರಹದ ಬರೆವಣಿಗೆಯನ್ನು ಕೆಲವರು ಸಮರ್ಥಿಸಿಕೊಳ್ಳಬಹುದು. ಅವರ ಸಮರ್ಥನೆ ಈ ರೀತಿಯಾಗಿದೆ:
ಇ, ಈ ಎನ್ನುವ ಸ್ವರಜೋಡಿ ಇದ್ದಂತೆಯೆ, ಅ, ಆ ಎನ್ನುವ ಸ್ವರಜೋಡಿ ಇದೆ. ಅಂದರೆ, ಅ ಸ್ವರವನ್ನು ಹೃಸ್ವ ಆ ಎಂದು ಉಚ್ಚರಿಸಬೇಕು. ಇವರ ಪ್ರಕಾರ, ‘ರಮ’ ಎಂದು ಬರೆದು ‘ರಮಾ’ ಎಂದು ಉಚ್ಚರಿಸಬೇಕು. ‘ದಸರ’ ಎಂದು ಬರೆದು ‘ದಸರಾ’ ಎಂದು ಉಚ್ಚರಿಸಬೇಕು. ಇವರಿಗೆ ನನ್ನ ಪ್ರಶ್ನೆ : ಮ ಅನ್ನು ಮಾ ಅನ್ನುವದಾದರೆ, ರ ಅನ್ನು ರಾ ಎಂದೇಕೆ ಅನ್ನಬಾರದು? ಅರ್ಥಾತ್ ‘ರಮ’ ಪದವನ್ನು ‘ರಾಮಾ’ ಎಂದು ಏಕೆ ಉಚ್ಚರಿಸಬಾರದು? ‘ದಸರ’ ಪದವನ್ನು ‘ದಾಸಾರಾ’ ಎಂದೇಕೆ ಉಚ್ಚರಿಸಬಾರದು?
ಇದಕ್ಕೆ ಅವರು ಕೊಡುವ ಸಮಾಧಾನ ಈ ರೀತಿಯಾಗಿದೆ. ಪದಾಂತದಲ್ಲಿ ಬರುವ ಹೃಸ್ವ ‘ಅ’ ಕಾರವನ್ನು ಮಾತ್ರ ದೀರ್ಘವಾಗಿ ಉಚ್ಚರಿಸಬೇಕು.
ಹಾಗೆ ಮಾಡಿದರೆ, ಕನ್ನಡ ಬರಹವು purely phonetic script ಆಗುವದಿಲ್ಲ ; selectively phonetic script ಆಗುತ್ತದೆ. ಇದು ಸರಿಯಲ್ಲ.
‘ಅ’ಕಾರವನ್ನು ‘ಆ’ಕಾರ ಮಾಡುವ ಅಪಪ್ರಯೋಗದಂತೆಯೇ, ವ್ಯಂಜನೀಕರಣದ ಮತ್ತೊಂದು ಅಪಪ್ರಯೋಗವೂ ಚಾಲ್ತಿಗೆ ಬಂದಿದೆ.
ಸಂಯುಕ್ತ ಕರ್ನಾಟಕದ suplimentನಲ್ಲಿ ಒಮ್ಮೆ ಎಚ್ಚೆಸ್ಕೆಯವರ ಲೇಖನ ಬಂದಿತ್ತು. ಆ ಲೇಖನದಲ್ಲಿ ಅವರು, ‘ರಾಯಚೂರಕರ’ ಎನ್ನುವ ವ್ಯಕ್ತಿಯನ್ನು ‘ರಾಯ್ಚೂರ್ಕರ್’ ಎಂದು ನಿರ್ದಯೆಯಿಂದ ಚೂರು ಚೂರು ಮಾಡಿ ಒಗೆದಿದ್ದರು. ಈ ವ್ಯಂಜನಾಘಾತವನ್ನು ‘ಭೀಮಸೇನ ಜೋಶಿ’ಯವರೂ ಅನುಭವಿಸಿದ್ದಾರೆ. ಅವರು ‘ಭೀಮಸೇನ್ ಜೋಷಿ’ ಅಗಿದ್ದಾರೆ.(ಕನ್ನಡ ವಿಕಿಪೀಡಿಯಾ ನೋಡಿರಿ). ಅವರ ಪುಣ್ಯಬಲವು ದೊಡ್ಡದು. ‘ಭೀಮ್ಸೇನ್ ಜೋಷಿ’ ಆಗಿಲ್ಲ! ಇದರಂತೆ, ಕನ್ನಡ ವಿಕಿಪೀಡಿಯಾದಲ್ಲಿ ‘ಗಿರೀಶ ಕಾರ್ನಾಡ’ರು ‘ಗಿರೀಶ್ ಕಾರ್ನಾಡ್’ ಆಗಿದ್ದಾರೆ. 'ಜ್ಯೋತ್ಸ್ನಾ ಕಾಮತ'ರು 'ಜ್ಯೋತ್ಸ್ನ ಕಾಮತ'ರಾಗಿದ್ದರು. ಕೆಲವು ಓದುಗರು ಈ ತಪ್ಪನ್ನು ಎತ್ತಿ ತೋರಿಸಿದರು. ಜ್ಯೋತ್ಸ್ನಾ ತಮ್ಮ ಹೆಸರನ್ನು ಜ್ಯೋತ್ಸ್ನ ಎಂದು ಬರೆದುಕೊಳ್ಳುವದಿಲ್ಲ, ಜ್ಯೋತ್ಸ್ನಾ ಎಂದು ಬರೆದುಕೊಳ್ಳುತ್ತಾರೆ ಎಂದು ನಾನೂ ಸಹ ಆಧಾರಸಹಿತ ತೋರಿಸಿದ ನಂತರವೇ, ಅವರು ಮರಳಿ ಜ್ಯೋತ್ಸ್ನಾ ಆದರು. ಇದೇ ಸಂದರ್ಭದಲ್ಲಿ ಮತ್ತೂ ಒಂದು ಅಪಪ್ರಯೋಗವನ್ನು ಹೇಳಿಬಿಡಬಹುದು: ‘ಜೋಶಿ’ ಎನ್ನುವ ಹೆಸರನ್ನು ಎಲ್ಲಾ ಸಂಸ್ಕೃತಜನ್ಯ ಭಾಷೆಯ ಲಿಪಿಗಳಲ್ಲಿ ‘ಜೋಶಿ’ ಎಂದೇ ಬರೆಯಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಸಹ ಅದೇ ಪ್ರಯೋಗವಿದೆ. ಹೀಗಿರುವಾಗ, ದಕ್ಷಿಣ ಕರ್ನಾಟಕದಲ್ಲಿ ‘ಜೋಷಿ’ ಎಂದು ಬರೆಯುವದು ಸರಿಯಲ್ಲ. ವಿಕಿಪೀಡಿಯಾದಲ್ಲಿ ನಾನು ಶಂ.ಬಾ. ಜೋಶಿಯವರ ಬಗೆಗೆ ಒಂದು ಲೇಖನ post ಮಾಡಿದ್ದೆ. ಅದನ್ನು ಆಗಲೇ ಇರುವ ‘ಶಂ.ಬಾ. ಜೋಷಿ’ ಲೇಖನದಲ್ಲಿ merge ಮಾಡಲಾಯಿತು. ಶಂ.ಬಾ. ಜೋಶಿಯವರು ತಮ್ಮ ಹೆಸರನ್ನು ‘ಜೋಶಿ’ ಎಂದು ಸರಿಯಾಗಿ ಬರೆದುಕೊಳ್ಳುವಾಗ, ಅದನ್ನು ತಪ್ಪಾಗಿ ‘ಜೋಷಿ’ಗೆ ಬದಲಾಯಿಸುವದರ ಔಚಿತ್ಯವೇನು?
ಇರಲಿ, ಈಗ ವ್ಯಂಜನೀಕರಣಕ್ಕೆ ಮತ್ತೆ ಮರಳೋಣ. ‘ಗದುಗು’ ಅಥವಾ ‘ಗದಗ’ ಎನ್ನುವ ಊರಿನ ಹೆಸರನ್ನು ಬೆಂಗಳೂರಿನ ಕಾರಕೂನರು ‘ಗದಗ್’ ಮಾಡಿಟ್ಟಿದ್ದಾರೆ. ಬಹುಶಃ, ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಇವರ ಪೆನ್ನಿನಲ್ಲಿ ‘ ಕುಮಾರ್ವ್ಯಾಸ್ ಬರೆದ ಗದಗ್ನ ಭಾರತ್’ ಆಗಬಹುದು. ಅಷ್ಟೇಕೆ, ‘ಬಸವೇಶ್ವರ’ರು ‘ಬಸ್ವೇಶ್ವರ್’ ಆಗಬಹುದಲ್ಲವೆ?
ಆದುದರಿಂದ, ಕನ್ನಡವನ್ನು ಪ್ರೀತಿಸುವ ಗೆಳೆಯರೆ,
ಯಾವುದೇ regional sentimentsಗಳಿಗೆ ಒಳಗಾಗದೆ, ಈ ವಿಷಯವನ್ನು ಪರಾಮರ್ಶಿಸಿ, ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. ಎಲ್ಲಿ ತಪ್ಪಿದೆಯೊ, ಅಲ್ಲಿ ತಿದ್ದಿಕೊಳ್ಳೋಣ.
ಮುಂದಿನ ಸಂಚಿಕೆಯಲ್ಲಿ ಅಲ್ಪಪ್ರಾಣ/ಮಹಾಪ್ರಾಣಗಳ ಬಗೆಗೆ ಪರಿಶೀಲಿಸೋಣ.
“ಸರಿಗನ್ನಡಮ್ ಗೆಲ್ಗೆ!”
ಇತ್ತೀಚೆಗೆ ಟೀವಿಯಲ್ಲಿ ಪ್ರಸಾರವಾದ ಕನ್ನಡದ ಒಂದು ಪ್ರಸಿದ್ಧ ಧಾರಾವಾಹಿ: “ ಮುಕ್ತ”. ಇದು “ ಮುಕ್ತಾ” ಎಂದಿರಬೇಕು. ಯಾಕೆಂದರೆ “ ಮುಕ್ತ” ಎನ್ನುವದು ಪುಲ್ಲಿಂಗವಾಚಕ ವಿಶೇಷಣ. ಉದಾಹರಣೆಗೆ ಜೀವನ್-ಮುಕ್ತ ಪುರುಷ ಇತ್ಯಾದಿ. ಹೃಸ್ವಾಂತವಾಗಿ ಕೊನೆಗೊಳ್ಳುವ ಪದವನ್ನು ದೀರ್ಘಾಂತವಾಗಿ ಉಚ್ಚರಿಸುವದು ಸರಿಯಲ್ಲ. ಒಂದು ವೇಳೆ ಮುಕ್ತ ಎಂದು ಹೃಸ್ವಾಂತವಾಗಿ ಬರೆದು ಮುಕ್ತಾ ಎಂದು ದೀರ್ಘಾಂತವಾಗಿಯೇ ಉಚ್ಚರಿಸುವದಾದರೆ, ಹೃಸ್ವಾಂತವಾಗಿ ಉಚ್ಚರಿಸಲು, ಯಾವ ರೀತಿಯಿಂದ ಬರೆಯಬೇಕು?.... ‘ ಮುಕ್ತ್ ’ ಎಂದೆ?
ದೀರ್ಘಾಂತ, ಹೃಸ್ವಾಂತ ಹಾಗು ವ್ಯಂಜನಾಂತ ಪದಗಳನ್ನು ಬರೆಯುವಾಗ, ಈ ರೂಢಿಯು ಸೃಷ್ಟಿಸುವ ಗೋಜಲನ್ನು ಪರಿಶೀಲಿಸಲು ಕೆಳಗಿನ ಉದಾಹರಣೆಯನ್ನು ಗಮನಿಸಿರಿ:
‘ರಮಾ’ ಎನ್ನುವ ದೀರ್ಘಾಂತ ಪದವನ್ನು ‘ರಮ’ ಎಂದು ಬರೆದರೆ, ‘ರಮ’ ಎನ್ನುವ ಹೃಸ್ವಾಂತ ಪದವನ್ನು ಹೇಗೆ ಬರೆಯಬೇಕು?....’ರಮ್’ ಎಂದೆ? ಹಾಗಾದಾಗ, ರಮ್ (Rum)ಅನ್ನು ಹೇಗೆ ಬರೆಯಬೇಕು?
ಕನ್ನಡ ವಿಕಿಪೀಡಿಯಾದಲ್ಲಿಯ ಒಂದು ಲೇಖನದಲ್ಲಿ Madam Cama ಇವರ ಹೆಸರನ್ನು ಮೇಡಂ ಕಾಮ ಎಂದು ಬರೆಯಲಾಗಿದೆ. ಅಯ್ಯೋ ರಾಮ! ಕಾಮದೇವನ ಪಟ್ಟವನ್ನು ಕಾಮಾಳಿಗೆ ಕೊಟ್ಟರೆ, ‘ಕಾಮ’ನನ್ನು ‘ಕಾಮ್’ ಎಂದು ಬರೆಯಬಹುದೆ? ಆದರೆ ಕಾಮನು ಕಾಮ್ (calm) ಆಗಿರಲು ಒಪ್ಪುವನೆ?
ಇದೇ ರೀತಿಯಾಗಿ ‘ಗಂಗಾ’ ನದಿಯನ್ನು ‘ಗಂಗ’ ಎಂದು ಬರೆದರೆ, ತಲಕಾಡು ರಾಜ್ಯವನ್ನಾಳಿದ ‘ಗಂಗ’ ರಾಜಕುಲವನ್ನು ಹೇಗೆ ಬರೆಯಬೇಕು?—‘ಗಂಗ್’ ರಾಜಕುಲವೆಂದೆ?
ಕನ್ನಡ ವಿಕಿಪೀಡಿಯಾದಲ್ಲಿ ನಾನು ಹಳಗನ್ನಡದ ಪ್ರಸಿದ್ಧ ಲೇಖಕ ‘ನೇಮಿಚಂದ್ರ’ನ ಬಗೆಗೆ ಒಂದು ಲೇಖನ post ಮಾಡಿದ್ದೆ. ಆಬಳಿಕ ಹೊಸ ಪೀಳಿಗೆಯ ಲೇಖಕಿಯಾದ ‘ನೇಮಿಚಂದ್ರ’ಳ ಬಗೆಗೆ ಲೇಖನ post ಮಾಡಲು ಹೊರಟಾಗ ಗಣಕ ಯಂತ್ರವು ಈ ಹೊಸ ಲೇಖನವನ್ನು ಅದೇ ಹೆಸರಿನಲ್ಲಿ ಒಪ್ಪಿಕೊಳ್ಳಲಿಲ್ಲ. ಆ ಬಳಿಕ ನಾನು ‘ನೇಮಿಚಂದ್ರ (ಲೇಖಕಿ)’ ಎಂದು ತಿದ್ದುಪಡಿ ಮಾಡಬೇಕಾಯಿತು. ‘ನೇಮಿಚಂದ್ರಾ’ ಇವರು ತಮ್ಮ ಹೆಸರಿನ ಕೊನೆಯನ್ನು ದೀರ್ಘೀಕರಿಸದೇ, ಹೃಸ್ವೀಕರಿಸಿದ್ದರಿಂದ, ಅವರು ಪುಲ್ಲಿಂಗವಾದರು!
ಸಂತೋಷಕುಮಾರ ಗುಲವಾಡಿಯವರು ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದಾಗ ಈ ವಿಷಯದ ಬಗೆಗೇ ಒಂದು ಸಂಪಾದಕೀಯ ಬರೆದಿದ್ದರು. ಆ ಸಂದರ್ಭದಲ್ಲಿ ಅವರು ನೀಡಿದ ಉದಾಹರಣೆ: ‘ದುರ್ಗಾ’ ಪದವನ್ನು ‘ದುರ್ಗ’ ಎಂದು ಬರೆದರೆ, ಆ ಪದವು ಹುಡುಗಿಯ ಹೆಸರಾಗುವ ಬದಲು ‘ಕೋಟೆ’ ಎನ್ನುವ ಅರ್ಥವನ್ನು ಕೊಡುತ್ತದೆ.
ಇದರಂತೆ, ಅನೇಕ ಪದಗಳ ಉದಾಹರಣೆಗಳನ್ನು ಕೊಡಬಹುದು: ಬಾಲವಿಹಾರದಲ್ಲಿ ಕಲಿಸಲಾಗುವ ಹಾಡನ್ನು ಮುದ್ರಿಸಿದ ಈ ಅವತರಣಿಕೆಯನ್ನು ನೋಡಿರಿ:
“ ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವದು,
ಎತ್ತಿಕೊಳ್ಳದಿರಲು ಅದಕೆ ಕೋಪ ಬರುವದು”.
‘ಪಾಪ’ ಪದದ ಅರ್ಥವೇನು? –SIN ಎಂದಲ್ಲವೇ?
ಕೂಸು ಎಂದು ಹೇಳಲು ‘ಪಾಪಾ’ ಎಂದು ಬರೆಯಬೇಕಲ್ಲವೆ?
ಕೂಸು ಪದಕ್ಕೆ ‘ಪಾಪ’ ಎಂದೇ ಬರೆಯುವದು ಸರಿ ಎಂದು ನೀವು ಹೇಳುವದಾದರೆ, SIN ಅರ್ಥದ ‘ಪಾಪ’ ಪದಕ್ಕೆ ‘ಪಾಪ್’ ಎಂದು ಬರೆಯಬೇಕೆ? ಹಾಗಾದಾಗ POP ಅರ್ಥದ ಪಾಪ್ ಪದವನ್ನು ಬರೆಯುವದು ಹೇಗೆ?
ಕೇವಲ ‘ಆ’ ಸ್ವರಾಂತ ನಾಮಸೂಚಕ ಪದಗಳಿಗಷ್ಟೇ ಈ ತಪ್ಪು ಪ್ರಯೋಗ ಸೀಮಿತವಾಗಿಲ್ಲ. ಸರಕಾರಿ ಕಚೇರಿಯೊಂದರ ಮೇಲೆ ಹಾಕಿದ ಈ ಫಲಕವನ್ನು ನೋಡಿರಿ:
“ಶಿಶುಪಾಲನ ಕೇಂದ್ರ”
ಈ ಫಲಕವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವೇ ಆಗಲಿಲ್ಲ. ಕೃಷ್ಣನ ವಿರೋಧಿಯಾದ ‘ಶಿಶುಪಾಲ’ ಎನ್ನುವ ದೈತ್ಯನ ಸಲುವಾಗಿ ಯಾರು ಯಾಕೆ ಕೇಂದ್ರ ಸ್ಥಾಪಿಸುತ್ತಾರೆ ಎಂದೇ ಗೊತ್ತಾಗಲಿಲ್ಲ. ಕಚೇರಿಯ ಒಳಹೊಕ್ಕು ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ತಿಳಿದದ್ದು: ಇದು ‘ಶಿಶುಪಾಲನಾ ಕೇಂದ್ರ’ವೆಂದು!
ಈ ತಪ್ಪು ಪ್ರಯೋಗವು ಸಂಯುಕ್ತ ಪದಗಳ ಮಧ್ಯಭಾಗವನ್ನೂ ಸಹ ಆಕ್ರಮಿಸಿರುವದು ಹೆಚ್ಚಿನ ದುರ್ದೈವ. ಉದಾಹರಣೆಗೆ, “ಶುಭಾಕಾಂಕ್ಷೆ” ಎನ್ನುವ ಪದವನ್ನು “ಶುಭಕಾಂಕ್ಷೆ” ಎಂದು ವಿಕಿಪೀಡಿಯಾದ ಓದುಗರೊಬ್ಬರು ಬರೆದಿದ್ದರು.
ಅಷ್ಟೇ ಏಕೆ, ನಮ್ಮ ಕರ್ನಾಟಕ ಸರಕಾರದ ಸಂಪುಟ ದರ್ಜೆ ಸಚಿವರಾದ ಶ್ರೀ ಮುಮತಾಜ ಅಲಿಯವರು ಪತ್ರಿಕೆಗೆ ಬರೆದ ಪತ್ರ ಒಂದರಲ್ಲಿ, “ಶಿಲಾನ್ಯಾಸ” ಪದದ ಬದಲಾಗಿ “ಶಿಲನ್ಯಾಸ” ಎಂದು ಬರೆದಿದ್ದರು. ಈ ಅಪಪ್ರಯೋಗದ ತಪ್ಪು ಅವರದಲ್ಲ. “ಶಿಲಾ” ಪದ ಬರೆಯುವದನ್ನು “ಶಿಲ” ಎಂದೇ ಬರೆಯಲು ಅವರು ರೂಢಿಸಿಕೊಂಡಿದ್ದರಿಂದ ಇಂತಹ ಅಪಪ್ರಯೋಗವಾಗಿದೆ.
ಇದರಂತೆಯೆ, ‘ಸಂಯುಕ್ತ ಕರ್ನಾಟಕ’ದಲ್ಲಿ ಸಿನಿಮಾ ವಿಭಾಗದಲ್ಲಿ ಬರೆಯುವ ಎಚ್. ಕೆ. ಸಾವಿತ್ರಿಯವರು ನಟಿಯೊಬ್ಬಳನ್ನು ವರ್ಣಿಸುತ್ತ, ‘ಬೆಳಗಾವಿಯ ಕುಂದದಂತಹ’ ಎಂದು ಬರೆದಿದ್ದಾರೆ. ‘ಕುಂದ’ ಎಂದರೆ ಒಂದು ಜಾತಿಯ ಹೂವು. ಬೆಳಗಾವಿ ಕುಂದಪುಷ್ಪಕ್ಕಂತೂ ಹೆಸರು ಪಡೆದಿಲ್ಲ. ‘ಹೀಗೇಕೆ?’ ಎಂದು ನಾನು ವಿಸ್ಮಯಪಡುತ್ತಿದ್ದಾಗ ಹೊಳೆದದ್ದು: ಓಹೋ ಇವರು ಹೇಳುತ್ತಿರುವದು ಬೆಳಗಾವಿಯ ‘ಕುಂದಾ’, ಒಂದು ಬಗೆಯ sweet, ‘ಕುಂದ’ಪುಷ್ಪವಲ್ಲ ಎನ್ನುವದು.
ಈ ತರಹದ ಬರೆವಣಿಗೆಯನ್ನು ಕೆಲವರು ಸಮರ್ಥಿಸಿಕೊಳ್ಳಬಹುದು. ಅವರ ಸಮರ್ಥನೆ ಈ ರೀತಿಯಾಗಿದೆ:
ಇ, ಈ ಎನ್ನುವ ಸ್ವರಜೋಡಿ ಇದ್ದಂತೆಯೆ, ಅ, ಆ ಎನ್ನುವ ಸ್ವರಜೋಡಿ ಇದೆ. ಅಂದರೆ, ಅ ಸ್ವರವನ್ನು ಹೃಸ್ವ ಆ ಎಂದು ಉಚ್ಚರಿಸಬೇಕು. ಇವರ ಪ್ರಕಾರ, ‘ರಮ’ ಎಂದು ಬರೆದು ‘ರಮಾ’ ಎಂದು ಉಚ್ಚರಿಸಬೇಕು. ‘ದಸರ’ ಎಂದು ಬರೆದು ‘ದಸರಾ’ ಎಂದು ಉಚ್ಚರಿಸಬೇಕು. ಇವರಿಗೆ ನನ್ನ ಪ್ರಶ್ನೆ : ಮ ಅನ್ನು ಮಾ ಅನ್ನುವದಾದರೆ, ರ ಅನ್ನು ರಾ ಎಂದೇಕೆ ಅನ್ನಬಾರದು? ಅರ್ಥಾತ್ ‘ರಮ’ ಪದವನ್ನು ‘ರಾಮಾ’ ಎಂದು ಏಕೆ ಉಚ್ಚರಿಸಬಾರದು? ‘ದಸರ’ ಪದವನ್ನು ‘ದಾಸಾರಾ’ ಎಂದೇಕೆ ಉಚ್ಚರಿಸಬಾರದು?
ಇದಕ್ಕೆ ಅವರು ಕೊಡುವ ಸಮಾಧಾನ ಈ ರೀತಿಯಾಗಿದೆ. ಪದಾಂತದಲ್ಲಿ ಬರುವ ಹೃಸ್ವ ‘ಅ’ ಕಾರವನ್ನು ಮಾತ್ರ ದೀರ್ಘವಾಗಿ ಉಚ್ಚರಿಸಬೇಕು.
ಹಾಗೆ ಮಾಡಿದರೆ, ಕನ್ನಡ ಬರಹವು purely phonetic script ಆಗುವದಿಲ್ಲ ; selectively phonetic script ಆಗುತ್ತದೆ. ಇದು ಸರಿಯಲ್ಲ.
‘ಅ’ಕಾರವನ್ನು ‘ಆ’ಕಾರ ಮಾಡುವ ಅಪಪ್ರಯೋಗದಂತೆಯೇ, ವ್ಯಂಜನೀಕರಣದ ಮತ್ತೊಂದು ಅಪಪ್ರಯೋಗವೂ ಚಾಲ್ತಿಗೆ ಬಂದಿದೆ.
ಸಂಯುಕ್ತ ಕರ್ನಾಟಕದ suplimentನಲ್ಲಿ ಒಮ್ಮೆ ಎಚ್ಚೆಸ್ಕೆಯವರ ಲೇಖನ ಬಂದಿತ್ತು. ಆ ಲೇಖನದಲ್ಲಿ ಅವರು, ‘ರಾಯಚೂರಕರ’ ಎನ್ನುವ ವ್ಯಕ್ತಿಯನ್ನು ‘ರಾಯ್ಚೂರ್ಕರ್’ ಎಂದು ನಿರ್ದಯೆಯಿಂದ ಚೂರು ಚೂರು ಮಾಡಿ ಒಗೆದಿದ್ದರು. ಈ ವ್ಯಂಜನಾಘಾತವನ್ನು ‘ಭೀಮಸೇನ ಜೋಶಿ’ಯವರೂ ಅನುಭವಿಸಿದ್ದಾರೆ. ಅವರು ‘ಭೀಮಸೇನ್ ಜೋಷಿ’ ಅಗಿದ್ದಾರೆ.(ಕನ್ನಡ ವಿಕಿಪೀಡಿಯಾ ನೋಡಿರಿ). ಅವರ ಪುಣ್ಯಬಲವು ದೊಡ್ಡದು. ‘ಭೀಮ್ಸೇನ್ ಜೋಷಿ’ ಆಗಿಲ್ಲ! ಇದರಂತೆ, ಕನ್ನಡ ವಿಕಿಪೀಡಿಯಾದಲ್ಲಿ ‘ಗಿರೀಶ ಕಾರ್ನಾಡ’ರು ‘ಗಿರೀಶ್ ಕಾರ್ನಾಡ್’ ಆಗಿದ್ದಾರೆ. 'ಜ್ಯೋತ್ಸ್ನಾ ಕಾಮತ'ರು 'ಜ್ಯೋತ್ಸ್ನ ಕಾಮತ'ರಾಗಿದ್ದರು. ಕೆಲವು ಓದುಗರು ಈ ತಪ್ಪನ್ನು ಎತ್ತಿ ತೋರಿಸಿದರು. ಜ್ಯೋತ್ಸ್ನಾ ತಮ್ಮ ಹೆಸರನ್ನು ಜ್ಯೋತ್ಸ್ನ ಎಂದು ಬರೆದುಕೊಳ್ಳುವದಿಲ್ಲ, ಜ್ಯೋತ್ಸ್ನಾ ಎಂದು ಬರೆದುಕೊಳ್ಳುತ್ತಾರೆ ಎಂದು ನಾನೂ ಸಹ ಆಧಾರಸಹಿತ ತೋರಿಸಿದ ನಂತರವೇ, ಅವರು ಮರಳಿ ಜ್ಯೋತ್ಸ್ನಾ ಆದರು. ಇದೇ ಸಂದರ್ಭದಲ್ಲಿ ಮತ್ತೂ ಒಂದು ಅಪಪ್ರಯೋಗವನ್ನು ಹೇಳಿಬಿಡಬಹುದು: ‘ಜೋಶಿ’ ಎನ್ನುವ ಹೆಸರನ್ನು ಎಲ್ಲಾ ಸಂಸ್ಕೃತಜನ್ಯ ಭಾಷೆಯ ಲಿಪಿಗಳಲ್ಲಿ ‘ಜೋಶಿ’ ಎಂದೇ ಬರೆಯಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೂ ಸಹ ಅದೇ ಪ್ರಯೋಗವಿದೆ. ಹೀಗಿರುವಾಗ, ದಕ್ಷಿಣ ಕರ್ನಾಟಕದಲ್ಲಿ ‘ಜೋಷಿ’ ಎಂದು ಬರೆಯುವದು ಸರಿಯಲ್ಲ. ವಿಕಿಪೀಡಿಯಾದಲ್ಲಿ ನಾನು ಶಂ.ಬಾ. ಜೋಶಿಯವರ ಬಗೆಗೆ ಒಂದು ಲೇಖನ post ಮಾಡಿದ್ದೆ. ಅದನ್ನು ಆಗಲೇ ಇರುವ ‘ಶಂ.ಬಾ. ಜೋಷಿ’ ಲೇಖನದಲ್ಲಿ merge ಮಾಡಲಾಯಿತು. ಶಂ.ಬಾ. ಜೋಶಿಯವರು ತಮ್ಮ ಹೆಸರನ್ನು ‘ಜೋಶಿ’ ಎಂದು ಸರಿಯಾಗಿ ಬರೆದುಕೊಳ್ಳುವಾಗ, ಅದನ್ನು ತಪ್ಪಾಗಿ ‘ಜೋಷಿ’ಗೆ ಬದಲಾಯಿಸುವದರ ಔಚಿತ್ಯವೇನು?
ಇರಲಿ, ಈಗ ವ್ಯಂಜನೀಕರಣಕ್ಕೆ ಮತ್ತೆ ಮರಳೋಣ. ‘ಗದುಗು’ ಅಥವಾ ‘ಗದಗ’ ಎನ್ನುವ ಊರಿನ ಹೆಸರನ್ನು ಬೆಂಗಳೂರಿನ ಕಾರಕೂನರು ‘ಗದಗ್’ ಮಾಡಿಟ್ಟಿದ್ದಾರೆ. ಬಹುಶಃ, ಕುಮಾರವ್ಯಾಸ ವಿರಚಿತ ‘ಗದುಗಿನ ಭಾರತ’ ಇವರ ಪೆನ್ನಿನಲ್ಲಿ ‘ ಕುಮಾರ್ವ್ಯಾಸ್ ಬರೆದ ಗದಗ್ನ ಭಾರತ್’ ಆಗಬಹುದು. ಅಷ್ಟೇಕೆ, ‘ಬಸವೇಶ್ವರ’ರು ‘ಬಸ್ವೇಶ್ವರ್’ ಆಗಬಹುದಲ್ಲವೆ?
ಆದುದರಿಂದ, ಕನ್ನಡವನ್ನು ಪ್ರೀತಿಸುವ ಗೆಳೆಯರೆ,
ಯಾವುದೇ regional sentimentsಗಳಿಗೆ ಒಳಗಾಗದೆ, ಈ ವಿಷಯವನ್ನು ಪರಾಮರ್ಶಿಸಿ, ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. ಎಲ್ಲಿ ತಪ್ಪಿದೆಯೊ, ಅಲ್ಲಿ ತಿದ್ದಿಕೊಳ್ಳೋಣ.
ಮುಂದಿನ ಸಂಚಿಕೆಯಲ್ಲಿ ಅಲ್ಪಪ್ರಾಣ/ಮಹಾಪ್ರಾಣಗಳ ಬಗೆಗೆ ಪರಿಶೀಲಿಸೋಣ.
“ಸರಿಗನ್ನಡಮ್ ಗೆಲ್ಗೆ!”
Monday, June 9, 2008
ವ್ಯಾಕರಣದೋಷ--ಭಾಷಾದೋಷ
ವ್ಯಾಕರಣದೋಷಗಳು ಬರವಣಿಗೆಯಲ್ಲಿ ಘಟಿಸುವದು ಸರ್ವೆಸಾಮಾನ್ಯ. ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳಲ್ಲಿ ಕಲಿಯುತ್ತಿರುವಾಗ, ನಮ್ಮ ಮನದಲ್ಲಿ ಮೂಡಿದ ತಪ್ಪು ತಿಳುವಳಿಕೆಯಿಂದಾಗಿ ಇಂತಹ ವ್ಯಾಕರಣದೋಷಗಳು ಸಂಭವಿಸುತ್ತವೆ. ಇಂತಹ ದೋಷಗಳು ಅನೇಕ ಸಲ ಅಲ್ಪಪ್ರಾಣ ಹಾಗು ಮಹಾಪ್ರಾಣ ಉಚ್ಚಾರಗಳನ್ನು ಅದಲು ಬದಲಾಗಿ ಭಾವಿಸುವದರಿಂದ ಉಂಟಾಗಿರುತ್ತವೆ.
ಉದಾಹರಣೆಗೆ ‘ಶಾಕಾಹಾರ’ವೆಂದು ಬರೆಯುವ ಬದಲಾಗಿ ‘ಶಾಖಾಹಾರ’ವೆಂದು ಬರೆಯುವದು; ‘ಕಾಷ್ಠ’ ಎಂದು ಬರೆಯುವ ಬದಲಾಗಿ ‘ಕಾಷ್ಟ’ ಎಂದು ಬರೆಯುವದು ಇತ್ಯಾದಿ. ಇವು ಕ್ಷಮ್ಯ ದೋಷಗಳು. ಶಬ್ದಕೋಶವನ್ನು ಪರಿಶೀಲಿಸಿ ನಮ್ಮ ಸಂಶಯನಿವಾರಣೆ ಮಾಡಿಕೊಳ್ಳಬಹುದು.
ಇಂತಹ ದೋಷಗಳು ಸಾರ್ವಜನೀಕರಣಗೊಂಡಾಗ, ಅಪರಾಧಿಗಳನ್ನು ಕ್ಷಮಿಸುವದು ಕಷ್ಟವಾಗುತ್ತದೆ. ಆದರೂ ಸಹ, ಅಪರಾಧಿಯ ವ್ಯಾಕರಣಜ್ಞಾನವನ್ನು ಲೆಕ್ಕಿಸಿ, ಕ್ಷಮಾದಾನ ಮಾಡಬಹುದು. ಉದಾಹರಣೆಗೆ ‘ಗಿರಿಜಾ’ ಎನ್ನುವ ಯುವತಿಗೆ ದ್ವಾರಕೀಶರು ‘ಶೃತಿ’ ಎಂದು ನಾಮಕರಣ ಮಾಡಿ, ಚಿತ್ರರಂಗಕ್ಕೆ ಪ್ರವೇಶ ನೀಡಿದಾಗ, ಆದಂತಹ ವ್ಯಾಕರಣ ದೋಷಕ್ಕಾಗಿ, ದ್ವಾರಕೀಶರನ್ನು ಕ್ಷಮಿಸಬಹುದು. ‘ಶ್ರುತಿ’ ಎನ್ನುವದು ಸರಿಯಾದ ಪದವೆನ್ನುವದು ದ್ವಾರಕೀಶರಿಗೆ ಗೊತ್ತಿಲ್ಲ. ಬಹುಶಃ ಆ ಪದದ ಅರ್ಥವೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಸಂಸ್ಕೃತ ಪದವೆಂದ ಮೇಲೆ ‘ರು’ಕಾರ ತಪ್ಪು, ‘ಋ’ಕಾರವೇ ಸರಿ ಎಂದು ಅವರು ಭಾವಿಸಿರಬಹುದು. ಇದೀಗ ಈ ವ್ಯಾಕರಣದೋಷವು ಸಾರ್ವಜನೀಕರಣಗೊಂಡು ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಸಹ ‘ಶೃತಿ’ ಎನ್ನುವ ಬರವಣಿಗೆ ಅಂಗೀಕೃತವಾಗಿಬಿಟ್ಟಿದೆ. [ಕೆಲವೊಂದು ವರ್ಷಗಳ ಹಿಂದೆ ರಾಯಚೂರಿನಲ್ಲಿ (ಅಥವಾ ಕಲಬುರ್ಗಿಯಲ್ಲಿ?) ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ ಸಮಾರಂಭವೊಂದರಲ್ಲಿ, ನೇಪಥ್ಯದಲ್ಲಿ ತೂಗಾಡುತ್ತಿದ್ದ ತೆರೆಯ ಮೇಲೆ ‘ಶೃತಿ’ ಎನ್ನುವ ಪದವಿದ್ದಿತು.] ಬನ್ನಂಜೆ ಗೋವಿಂದಾಚಾರ್ಯರು ಆ ವ್ಯಾಕರಣದೋಷವನ್ನು ಗಮನಿಸಿ ಸಂಘಟಕರ ಗಮನಕ್ಕೆ ತಂದರೋ, ಇಲ್ಲವೋ ಎನ್ನುವದು ತಿಳಿಯದು.
ಜೈ ದ್ವಾರಕೀಶ!
ಆದರೆ, ಹುಬ್ಬಳ್ಳಿಯ ಪ್ರಮುಖ ವಾರ್ತಾಪತ್ರಿಕೆಯಾದ ‘ಸಂಯುಕ್ತ ಕರ್ನಾಟಕ’ವು ಎಸಗುತ್ತಿರುವ ವ್ಯಾಕರಣ ದೋಷಗಳನ್ನು ಕ್ಷಮಿಸುವದು ಅಸಾಧ್ಯ. ‘ಉಚ್ಚ’ ನ್ಯಾಯಾಲಯ ಅಥವಾ ‘ಸರ್ವೋಚ್ಚ’ ನ್ಯಾಯಾಲಯ ಎಂದು ಬರೆಯಬೇಕಾದ ಸಂದರ್ಭಗಳಲ್ಲಿ, ಈ ಪತ್ರಿಕೆಯು (ಇತ್ತೀಚಿನ ವರ್ಷಗಳಲ್ಲಿ) ‘ಉಚ್ಛ’ ಮತ್ತು ‘ಸರ್ವೋಚ್ಛ’ ಎಂದೇ ಬರೆಯುತ್ತ ಬಂದಿದೆ. ಪತ್ರಿಕೆಯ ಈ ವ್ಯಾಕರಣದೋಷವು ಅಕ್ಷಮ್ಯ. ಶಾಲಾಹಂತದ ಬಾಲಕರು ಇವೇ ಸರಿಯಾದ ಪದಗಳು ಎಂದು ತಿಳಿದು ಇವನ್ನೇ ನಕಲು ಮಾಡಿದರೆ ಆಶ್ಚರ್ಯವಿಲ್ಲ. ಸಾರ್ವಜನಿಕರಿಂದ ಪ್ರಮಾಣ ಎಂದು ಭಾವಿಸಲ್ಪಟ್ಟಿರುವ ಸಂಸ್ಥೆಗಳು, ಪತ್ರಿಕೆಗಳು ಹಾಗು ವ್ಯಕ್ತಿಗಳು ವ್ಯಾಕರಣದೋಷಗಳ ಬಗೆಗೆ ಬಲು ಎಚ್ಚರವಹಿಸಬೇಕು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಓದಲಾದ ಇಂತಹ ಕೆಲವು ಅಲ್ಪ/ಮಹಾ ಪ್ರಾಣಘಾತಕ ಪದಗಳನ್ನು ಇಲ್ಲಿ ಕೊಟ್ಟಿದೆ:
ತಪ್ಪು ………..ಒಪ್ಪು
ನಿಚ್ಛಳ ……ನಿಚ್ಚಳ
ಸಮುಚ್ಛಯ ….ಸಮುಚ್ಚಯ
ಅಲ್ ಖೈದಾ…….ಅಲ್ ಕೈದಾ
ಧೃವ……………ಧ್ರುವ
ಧೃವೀಕರಣ……..ಧ್ರುವೀಕರಣ
ಅನುಗೃಹ………ಅನುಗ್ರಹ
ಶಿಲನ್ಯಾಸ……...ಶಿಲಾನ್ಯಾಸ
ಕಳ್ಳಬಟ್ಟಿ……...ಕಳ್ಳಭಟ್ಟಿ
ಭೋಗಸ್………ಬೋಗಸ್
ಖೂಟ………….ಕೂಟ
ಥಳಕು ಹಾಕಿದ……ತಳಕು ಹಾಕಿದ
ಸೌಹಾರ್ದೃ………ಸೌಹಾರ್ದ
ಪ್ರಾಂಥ……… .ಪ್ರಾಂತ
ಛಾಳಿ…………. ಚಾಳಿ
ಉಮ್ಮಸ್ಸು…… ಹುಮ್ಮಸ್ಸು
ಸೋಲ್ಲು……… ಸೊಲ್ಲು
ನೈರುತ್ಯ....ನೈಋತ್ಯ
ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಶ್ ಪದಗಳ ಬರವಣಿಗೆಯಲ್ಲಿಯೂ ಸಹ ಈ ಪತ್ರಿಕೆಯು ಘೋರ ಅಪರಾಧವನ್ನು ಮಾಡಿದೆ. ಕಳೆದ ವರ್ಷದಲ್ಲಿ(೨೦೦೭ರಲ್ಲಿ), CET ‘ಕೌನ್ಸೆಲಿಂಗ್ ’ ಅನ್ನುವ ಪದವನ್ನು ಈ ಪತ್ರಿಕೆ ‘ಕೌನ್ಸಿಲಿಂಗ್’ ಎಂದು ಸತತವಾಗಿ ಬರೆಯುತ್ತ ನಡೆದಿದೆ. COUNSEL ಹಾಗು COUNCIL ಎನ್ನುವ ಪದಗಳ ನಡುವಿನ ಅಂತರ ತಿಳಿಯದ ಪತ್ರಿಕೆ, ಅದೆಂತಹ ಪತ್ರಿಕೆ?
ನನ್ನ ತಾಯಿ ನನಗೆ ಚಿಕ್ಕಂದಿನಲ್ಲಿ ಅಕ್ಷರ ಕಲಿಸುವಾಗ, ‘ಸಂಯುಕ್ತ ಕರ್ನಾಟಕ’ ದಲ್ಲಿಯ ಪದಗಳನ್ನು ತೋರಿಸಿ ಅಕ್ಷರ ಕಲಿಸಿದಳು. Thank God, ಆ ಸಮಯದಲ್ಲಿ ವ್ಯಾಕರಣ ಬಲ್ಲ ಸಂಪಾದಕರು ಅಲ್ಲಿದ್ದರು. ಹೀಗಾಗಿ ‘ಸಂಯುಕ್ತ ಕರ್ನಾಟಕ’ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ನಾನು ನನ್ನ ಮಕ್ಕಳಿಂದ ಈ ಪತ್ರಿಕೆಯನ್ನು ಅಡಗಿಸಿ ಇಡುವ ಪ್ರಸಂಗ ಬಂದಿದೆ (ತಪ್ಪು ಪದಪ್ರಯೋಗಗಳಿಂದ ಅವರನ್ನು ರಕ್ಷಿಸಲು).
ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ವ್ಯಾಕರಣ ದೋಷಗಳನ್ನು ಏಕೆ ಮಾಡುತ್ತಿದೆ? ಇದಕ್ಕೆ ಮೂರು ಕಾರಣಗಳಿರಬಹುದು:
೧) ಸಂಪಾದಕ ಮಂಡಲಿಯಲ್ಲಿ ಕನ್ನಡ ಬಾರದ ಪಂಡಿತರಿದ್ದಾರೆ.
೨) ಅಖಿಲ ಕರ್ನಾಟಕ ಪತ್ರಿಕೆಯಾಗುವ ಹುಮ್ಮಸ್ಸಿನಲ್ಲಿ, ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಳನ್ನು ಈ ಪತ್ರಿಕೆ ರೂಢಿಸಿಕೊಳ್ಳುತ್ತಿದೆ.
೩) ತನ್ನ ಪ್ರತಿದ್ವಂದ್ವಿ ಪತ್ರಿಕೆಯ specailityಗಳನ್ನು (ತಪ್ಪಾಗಿ) ನಕಲು ಮಾಡಲು ಪ್ರಯತ್ನಿಸುತ್ತಿದೆ.
ಸ್ವಾತಂತ್ರ್ಯಪೂರ್ವದಿಂದಲೇ, ಉಚ್ಚ ಧ್ಯೇಯಗಳನ್ನಿಟ್ಟುಕೊಂಡು ಈ ಪತ್ರಿಕೆಯು ಹೋರಾಡಿದೆ. ‘ಪ್ರಮಾಣ ಕನ್ನಡ’ದ ನಿರ್ಮಾಣಕ್ಕಾಗಿ ಈ ಪತ್ರಿಕೆಯು ಪರಿಶ್ರಮಪಟ್ಟಿದೆ. ಇಂತಹ ಉಜ್ವಲ ಇತಿಹಾಸವುಳ್ಳ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಪದಪ್ರಯೋಗದಲ್ಲಿ ಸುಧಾರಿಸುವದೆಂದು ಹಾರೈಸೋಣ.
ಇದಿಷ್ಟು ವ್ಯಾಕರಣದೋಷದ ಬಗೆಗೆ. ಆದರೆ, ಭಾಷಾದೋಷದ ಬಗೆಗೆ ಬರೆಯುವದು ಕತ್ತಿಯ ಮೇಲೆ ನಡೆದಂತೆ. Regional sentimentsಗಳಿಂದಾಗಿ ನಮ್ಮ ಮನಸ್ಸು ಪ್ರಭಾವಿತವಾಗಬಹುದು.
ಈ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಉದಾಹರಣೆಗೆ ‘ಶಾಕಾಹಾರ’ವೆಂದು ಬರೆಯುವ ಬದಲಾಗಿ ‘ಶಾಖಾಹಾರ’ವೆಂದು ಬರೆಯುವದು; ‘ಕಾಷ್ಠ’ ಎಂದು ಬರೆಯುವ ಬದಲಾಗಿ ‘ಕಾಷ್ಟ’ ಎಂದು ಬರೆಯುವದು ಇತ್ಯಾದಿ. ಇವು ಕ್ಷಮ್ಯ ದೋಷಗಳು. ಶಬ್ದಕೋಶವನ್ನು ಪರಿಶೀಲಿಸಿ ನಮ್ಮ ಸಂಶಯನಿವಾರಣೆ ಮಾಡಿಕೊಳ್ಳಬಹುದು.
ಇಂತಹ ದೋಷಗಳು ಸಾರ್ವಜನೀಕರಣಗೊಂಡಾಗ, ಅಪರಾಧಿಗಳನ್ನು ಕ್ಷಮಿಸುವದು ಕಷ್ಟವಾಗುತ್ತದೆ. ಆದರೂ ಸಹ, ಅಪರಾಧಿಯ ವ್ಯಾಕರಣಜ್ಞಾನವನ್ನು ಲೆಕ್ಕಿಸಿ, ಕ್ಷಮಾದಾನ ಮಾಡಬಹುದು. ಉದಾಹರಣೆಗೆ ‘ಗಿರಿಜಾ’ ಎನ್ನುವ ಯುವತಿಗೆ ದ್ವಾರಕೀಶರು ‘ಶೃತಿ’ ಎಂದು ನಾಮಕರಣ ಮಾಡಿ, ಚಿತ್ರರಂಗಕ್ಕೆ ಪ್ರವೇಶ ನೀಡಿದಾಗ, ಆದಂತಹ ವ್ಯಾಕರಣ ದೋಷಕ್ಕಾಗಿ, ದ್ವಾರಕೀಶರನ್ನು ಕ್ಷಮಿಸಬಹುದು. ‘ಶ್ರುತಿ’ ಎನ್ನುವದು ಸರಿಯಾದ ಪದವೆನ್ನುವದು ದ್ವಾರಕೀಶರಿಗೆ ಗೊತ್ತಿಲ್ಲ. ಬಹುಶಃ ಆ ಪದದ ಅರ್ಥವೂ ಅವರಿಗೆ ಗೊತ್ತಿರಲಿಕ್ಕಿಲ್ಲ. ಸಂಸ್ಕೃತ ಪದವೆಂದ ಮೇಲೆ ‘ರು’ಕಾರ ತಪ್ಪು, ‘ಋ’ಕಾರವೇ ಸರಿ ಎಂದು ಅವರು ಭಾವಿಸಿರಬಹುದು. ಇದೀಗ ಈ ವ್ಯಾಕರಣದೋಷವು ಸಾರ್ವಜನೀಕರಣಗೊಂಡು ಬಿಟ್ಟಿದೆ. ಎಷ್ಟರ ಮಟ್ಟಿಗೆ ಎಂದರೆ, ಸಾಂಸ್ಕೃತಿಕ ಸಮಾರಂಭಗಳಲ್ಲಿ ಸಹ ‘ಶೃತಿ’ ಎನ್ನುವ ಬರವಣಿಗೆ ಅಂಗೀಕೃತವಾಗಿಬಿಟ್ಟಿದೆ. [ಕೆಲವೊಂದು ವರ್ಷಗಳ ಹಿಂದೆ ರಾಯಚೂರಿನಲ್ಲಿ (ಅಥವಾ ಕಲಬುರ್ಗಿಯಲ್ಲಿ?) ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ ಸಮಾರಂಭವೊಂದರಲ್ಲಿ, ನೇಪಥ್ಯದಲ್ಲಿ ತೂಗಾಡುತ್ತಿದ್ದ ತೆರೆಯ ಮೇಲೆ ‘ಶೃತಿ’ ಎನ್ನುವ ಪದವಿದ್ದಿತು.] ಬನ್ನಂಜೆ ಗೋವಿಂದಾಚಾರ್ಯರು ಆ ವ್ಯಾಕರಣದೋಷವನ್ನು ಗಮನಿಸಿ ಸಂಘಟಕರ ಗಮನಕ್ಕೆ ತಂದರೋ, ಇಲ್ಲವೋ ಎನ್ನುವದು ತಿಳಿಯದು.
ಜೈ ದ್ವಾರಕೀಶ!
ಆದರೆ, ಹುಬ್ಬಳ್ಳಿಯ ಪ್ರಮುಖ ವಾರ್ತಾಪತ್ರಿಕೆಯಾದ ‘ಸಂಯುಕ್ತ ಕರ್ನಾಟಕ’ವು ಎಸಗುತ್ತಿರುವ ವ್ಯಾಕರಣ ದೋಷಗಳನ್ನು ಕ್ಷಮಿಸುವದು ಅಸಾಧ್ಯ. ‘ಉಚ್ಚ’ ನ್ಯಾಯಾಲಯ ಅಥವಾ ‘ಸರ್ವೋಚ್ಚ’ ನ್ಯಾಯಾಲಯ ಎಂದು ಬರೆಯಬೇಕಾದ ಸಂದರ್ಭಗಳಲ್ಲಿ, ಈ ಪತ್ರಿಕೆಯು (ಇತ್ತೀಚಿನ ವರ್ಷಗಳಲ್ಲಿ) ‘ಉಚ್ಛ’ ಮತ್ತು ‘ಸರ್ವೋಚ್ಛ’ ಎಂದೇ ಬರೆಯುತ್ತ ಬಂದಿದೆ. ಪತ್ರಿಕೆಯ ಈ ವ್ಯಾಕರಣದೋಷವು ಅಕ್ಷಮ್ಯ. ಶಾಲಾಹಂತದ ಬಾಲಕರು ಇವೇ ಸರಿಯಾದ ಪದಗಳು ಎಂದು ತಿಳಿದು ಇವನ್ನೇ ನಕಲು ಮಾಡಿದರೆ ಆಶ್ಚರ್ಯವಿಲ್ಲ. ಸಾರ್ವಜನಿಕರಿಂದ ಪ್ರಮಾಣ ಎಂದು ಭಾವಿಸಲ್ಪಟ್ಟಿರುವ ಸಂಸ್ಥೆಗಳು, ಪತ್ರಿಕೆಗಳು ಹಾಗು ವ್ಯಕ್ತಿಗಳು ವ್ಯಾಕರಣದೋಷಗಳ ಬಗೆಗೆ ಬಲು ಎಚ್ಚರವಹಿಸಬೇಕು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಓದಲಾದ ಇಂತಹ ಕೆಲವು ಅಲ್ಪ/ಮಹಾ ಪ್ರಾಣಘಾತಕ ಪದಗಳನ್ನು ಇಲ್ಲಿ ಕೊಟ್ಟಿದೆ:
ತಪ್ಪು ………..ಒಪ್ಪು
ನಿಚ್ಛಳ ……ನಿಚ್ಚಳ
ಸಮುಚ್ಛಯ ….ಸಮುಚ್ಚಯ
ಅಲ್ ಖೈದಾ…….ಅಲ್ ಕೈದಾ
ಧೃವ……………ಧ್ರುವ
ಧೃವೀಕರಣ……..ಧ್ರುವೀಕರಣ
ಅನುಗೃಹ………ಅನುಗ್ರಹ
ಶಿಲನ್ಯಾಸ……...ಶಿಲಾನ್ಯಾಸ
ಕಳ್ಳಬಟ್ಟಿ……...ಕಳ್ಳಭಟ್ಟಿ
ಭೋಗಸ್………ಬೋಗಸ್
ಖೂಟ………….ಕೂಟ
ಥಳಕು ಹಾಕಿದ……ತಳಕು ಹಾಕಿದ
ಸೌಹಾರ್ದೃ………ಸೌಹಾರ್ದ
ಪ್ರಾಂಥ……… .ಪ್ರಾಂತ
ಛಾಳಿ…………. ಚಾಳಿ
ಉಮ್ಮಸ್ಸು…… ಹುಮ್ಮಸ್ಸು
ಸೋಲ್ಲು……… ಸೊಲ್ಲು
ನೈರುತ್ಯ....ನೈಋತ್ಯ
ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಶ್ ಪದಗಳ ಬರವಣಿಗೆಯಲ್ಲಿಯೂ ಸಹ ಈ ಪತ್ರಿಕೆಯು ಘೋರ ಅಪರಾಧವನ್ನು ಮಾಡಿದೆ. ಕಳೆದ ವರ್ಷದಲ್ಲಿ(೨೦೦೭ರಲ್ಲಿ), CET ‘ಕೌನ್ಸೆಲಿಂಗ್ ’ ಅನ್ನುವ ಪದವನ್ನು ಈ ಪತ್ರಿಕೆ ‘ಕೌನ್ಸಿಲಿಂಗ್’ ಎಂದು ಸತತವಾಗಿ ಬರೆಯುತ್ತ ನಡೆದಿದೆ. COUNSEL ಹಾಗು COUNCIL ಎನ್ನುವ ಪದಗಳ ನಡುವಿನ ಅಂತರ ತಿಳಿಯದ ಪತ್ರಿಕೆ, ಅದೆಂತಹ ಪತ್ರಿಕೆ?
ನನ್ನ ತಾಯಿ ನನಗೆ ಚಿಕ್ಕಂದಿನಲ್ಲಿ ಅಕ್ಷರ ಕಲಿಸುವಾಗ, ‘ಸಂಯುಕ್ತ ಕರ್ನಾಟಕ’ ದಲ್ಲಿಯ ಪದಗಳನ್ನು ತೋರಿಸಿ ಅಕ್ಷರ ಕಲಿಸಿದಳು. Thank God, ಆ ಸಮಯದಲ್ಲಿ ವ್ಯಾಕರಣ ಬಲ್ಲ ಸಂಪಾದಕರು ಅಲ್ಲಿದ್ದರು. ಹೀಗಾಗಿ ‘ಸಂಯುಕ್ತ ಕರ್ನಾಟಕ’ ನನ್ನ ನೆಚ್ಚಿನ ಪತ್ರಿಕೆಯಾಗಿತ್ತು. ಈಗ ನಾನು ನನ್ನ ಮಕ್ಕಳಿಂದ ಈ ಪತ್ರಿಕೆಯನ್ನು ಅಡಗಿಸಿ ಇಡುವ ಪ್ರಸಂಗ ಬಂದಿದೆ (ತಪ್ಪು ಪದಪ್ರಯೋಗಗಳಿಂದ ಅವರನ್ನು ರಕ್ಷಿಸಲು).
ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ವ್ಯಾಕರಣ ದೋಷಗಳನ್ನು ಏಕೆ ಮಾಡುತ್ತಿದೆ? ಇದಕ್ಕೆ ಮೂರು ಕಾರಣಗಳಿರಬಹುದು:
೧) ಸಂಪಾದಕ ಮಂಡಲಿಯಲ್ಲಿ ಕನ್ನಡ ಬಾರದ ಪಂಡಿತರಿದ್ದಾರೆ.
೨) ಅಖಿಲ ಕರ್ನಾಟಕ ಪತ್ರಿಕೆಯಾಗುವ ಹುಮ್ಮಸ್ಸಿನಲ್ಲಿ, ಕೆಲವು ಪ್ರದೇಶಗಳಲ್ಲಿ ರೂಢಿಯಲ್ಲಿರುವ ಕೆಲವೊಂದು ತಪ್ಪು ಪ್ರಯೋಗಳನ್ನು ಈ ಪತ್ರಿಕೆ ರೂಢಿಸಿಕೊಳ್ಳುತ್ತಿದೆ.
೩) ತನ್ನ ಪ್ರತಿದ್ವಂದ್ವಿ ಪತ್ರಿಕೆಯ specailityಗಳನ್ನು (ತಪ್ಪಾಗಿ) ನಕಲು ಮಾಡಲು ಪ್ರಯತ್ನಿಸುತ್ತಿದೆ.
ಸ್ವಾತಂತ್ರ್ಯಪೂರ್ವದಿಂದಲೇ, ಉಚ್ಚ ಧ್ಯೇಯಗಳನ್ನಿಟ್ಟುಕೊಂಡು ಈ ಪತ್ರಿಕೆಯು ಹೋರಾಡಿದೆ. ‘ಪ್ರಮಾಣ ಕನ್ನಡ’ದ ನಿರ್ಮಾಣಕ್ಕಾಗಿ ಈ ಪತ್ರಿಕೆಯು ಪರಿಶ್ರಮಪಟ್ಟಿದೆ. ಇಂತಹ ಉಜ್ವಲ ಇತಿಹಾಸವುಳ್ಳ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಪದಪ್ರಯೋಗದಲ್ಲಿ ಸುಧಾರಿಸುವದೆಂದು ಹಾರೈಸೋಣ.
ಇದಿಷ್ಟು ವ್ಯಾಕರಣದೋಷದ ಬಗೆಗೆ. ಆದರೆ, ಭಾಷಾದೋಷದ ಬಗೆಗೆ ಬರೆಯುವದು ಕತ್ತಿಯ ಮೇಲೆ ನಡೆದಂತೆ. Regional sentimentsಗಳಿಂದಾಗಿ ನಮ್ಮ ಮನಸ್ಸು ಪ್ರಭಾವಿತವಾಗಬಹುದು.
ಈ ವಿಷಯವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
Friday, June 6, 2008
ಸ್ಥಳನಾಮ ಮಾರ್ಪಾಟುಗಳು
ಭಾರತ ದೇಶದಲ್ಲಿ ಆರ್ಯರು ಪ್ರವೇಶಿಸಿದ ಸಂದರ್ಭದಲ್ಲಿ ಅವರು ನುಡಿಯುತ್ತಿದ್ದ ಭಾಷೆಗೆ ಆರ್ಯಭಾಷೆ ಎಂದು ಕರೆಯೋಣ. ವ್ಯಾಕರಣದ ಕಟ್ಟುಪಾಡು ಇಲ್ಲದಿರುವ ಕಾಲದ ಈ ಭಾಷೆ ಪ್ರಾಕೃತ ಭಾಷೆ (=ಪ್ರಕೃತಿಸಹಜವಾದದ್ದು=natural). ಈ ಭಾಷೆಯನ್ನು ವ್ಯಾಕರಣದ ಶಿಸ್ತಿಗೆ ಒಳಪಡಿಸಿ, ಸಂಸ್ಕರಿಸಿದಾಗ ಇದು ಸಂಸ್ಕರಣಗೊಂಡ ಭಾಷೆ ಆಯಿತು (=ಸಂಸ್ಕರಿತ, ಸಂಸ್ಕೃತ, processed, refined). ‘ಸಂಸ್ಕೃತ’ವೆನ್ನುವದು ಭಾಷೆಯ ಹೆಸರಲ್ಲ, ಭಾಷೆಯ ಸ್ಥಿತಿ. ಪ್ರಾಕೃತ ಅಂದರೆ natural tongue; ಸಂಸ್ಕೃತ ಅಂದರೆ grammered tongue.
ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.
ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.
ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)
ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ
ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.
ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!
ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.
ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.
ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)
ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ
ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.
ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!
Wednesday, June 4, 2008
ಬೆಂಗಳೂರು ಹಾಗು ವೆಂಗಿಮಂಡಲ
ಬೆಂಗಳೂರು ಈ ಪದದ ಮೂಲ ‘ಬೆಂದಕಾಳೂರು’ ಎಂದು ಹೇಳಲಾಗುತ್ತಿದೆ. ಈ ನಿರುಕ್ತಿಗಾಗಿ ಒಂದು ಕತೆಯನ್ನೇ ಕಟ್ಟಲಾಗಿದೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:
ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)
ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!
ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.
ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.
ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.
ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:
ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.
ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.
ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.
‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.
ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:
ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)
ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!
ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.
ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.
ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.
ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:
ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.
ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.
ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.
‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.
ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.
Sunday, June 1, 2008
ಮೂಗ, ಪಣಬ, ಮನ್ನ, ಕಿನ್ನ, ಹಂಗ, ನಲ್ಲ, ಗಂಗ, ಮುಂಬ, ಸಿಂಗ, ಕಂಬ, ಲಾಟ, ಮುರ
ಮೂಗರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೆಲೆಸಿದ್ದ ದೊಡ್ಡ ಮೂಲನಿವಾಸಿ ಸಮುದಾಯ. ಆಂಧ್ರಪ್ರದೇಶದಲ್ಲಿ ಇರುವ ಮುಖ ಹೆಸರಿನ ಆದಿವಾಸಿಗಳು ಇವರೇ ಆಗಿರಬಹುದು. ಮೂಗ ಅಥವಾ ಮೂಕ ಎನ್ನುವ ಪದದಿಂದ ಪ್ರಾರಂಭವಾಗುವ ೩೫ ಹಳ್ಳಿಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಮುಖೇರ ಎನ್ನುವ ಊರಿದೆ. ಈ ಹೆಸರು ‘ಮುಖ+ಹಾರ’ ಎನ್ನುವ ದ್ರಾವಿಡ ಪದದ ಮಹಾರಾಷ್ಟ್ರೀಕರಣವಿರಬಹುದು. ಕರ್ನಾಟಕದ ಕೊಲ್ಲೂರಿನಲ್ಲಿರುವ ಮೂಕಾಂಬಿಕೆ ಸುಪ್ರಸಿದ್ಧ ದೇವಿಯಾಗಿದ್ದಾಳೆ. ಇವಳು ಮೂಕಾಸುರನನ್ನು ಸಂಹರಿಸಿದಳು ಎಂದು ಸ್ಥಳಪುರಾಣಗಳು ಹೇಳುತ್ತವೆ. ಕೋಲ, ಮುಂಡ, ಮಹಿಷ ಮೊದಲಾದ ಮೂಲನಿವಾಸಿ ಸಮುದಾಯಗಳನ್ನು ಸೋಲಿಸಿದ ಮಾತೃಪ್ರಧಾನ ಸೈನ್ಯವೇ, ಈ ಮೂಕಸಮುದಾಯವನ್ನೂ ಸಹ ಸೋಲಿಸಿರಬಹುದು. ಕರ್ನಾಟಕದಲ್ಲಿ ಮೂಕ ಅಥವಾ ಮೂಗ ಹೆಸರಿನಿಂದ ಪ್ರಾರಂಭವಾಗುವ ಕೆಲವು ಸ್ಥಳನಾಮಗಳು ಈ ರೀತಿಯಾಗಿವೆ:
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.
ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.
ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.
ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.
‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.
ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.
ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.
ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.
ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.
ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.
ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?
ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.
ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.
ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.
ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.
ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.
ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.
ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.
‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.
ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.
ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.
ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.
ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.
ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.
ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?
ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.
ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.
ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.
ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).
Subscribe to:
Posts (Atom)