Thursday, June 27, 2019

ಬೇಂದ್ರೆಯವರ ಜೇಲುವಾಸ


ಇಪ್ಪತ್ತನೆಯ ಶತಮಾನದ ಪೂರ್ವಾರ್ಧವು ಭಾರತದಲ್ಲಿ ಸ್ವಾತಂತ್ರ್ಯ ಕ್ರಾಂತಿಯು ಪ್ರಾರಂಭವಾದ ಕಾಲ. ಉತ್ತರ ಭಾರತದಲ್ಲಿ ಸಶಸ್ತ್ರ ಕ್ರಾಂತಿಯ ಮೊಳಕೆ ಚಿಗುರಿತ್ತು. ಮಹಾರಾಷ್ಟ್ರದಲ್ಲಿ ಲೋಕಮಾನ್ಯ ತಿಲಕರುಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕುಎಂದು ಗುಡುಗಿದ್ದರು.

ಬೇಂದ್ರೆಯವರಂತಹ ಸಂವೇದನಾಶೀಲ ಕವಿಯು ಸಂದರ್ಭದಲ್ಲಿ ಸುಮ್ಮನಿರಲು ಸಾಧ್ಯವೆ? ಬೇಂದ್ರೆಯವರು ಸಹ ತಮ್ಮ ಕಾವ್ಯದ ಮೂಲಕ ರಣಕಹಳೆಯನ್ನು ಊದಿದರು. ‘ಆಹಹ ಸ್ವಾತಂತ್ರ್ಯದೇವಿ, ತರುಣ ತಪಸ್ವಿ, ಕನಸಿನೊಳಗೊಂದು ಕಣಸು, ೩೩೦೦೦೦೦೦ಮೊದಲಾದ ಕವನಗಳು ಬ್ರಿಟಿಶ್ ಆಳರಸರ ಕಣ್ಣನ್ನು ಕೆಂಪಾಗಿಸಿದವು.

೩೩೦೦೦೦೦೦೦ಯನ್ನು ಬೇಂದ್ರೆಯವರು೩೩ ಕೋಟಿಎಂದು ಬರೆಯಬಹುದಾಗಿತ್ತು. ಆದರೆ ಹಾಗೆ ಬರೆಯದೆ, ೩೩ರ ಮುಂದೆ ಆರು ಸೊನ್ನೆಗಳನ್ನು ಬರೆದದ್ದು, ಭಾರತೀಯರ ನಿರಭಿಮಾನವನ್ನು, ಅಧೈರ್ಯವನ್ನು ತೋರಿಸುವ ಬಗೆಯಾಗಿದೆ. ‘ನರಬಲಿಹಾಗುಕನಸಿನೊಳಗೊಂದು ಕಣಸುಕವನಗಳು ಇಂತಹ ಭಾರತೀಯರನ್ನು ಹೊಡೆದೆಬ್ಬಿಸಲು ಬೇಂದ್ರೆಯವರು ಕೊಟ್ಟ ಆಹ್ವಾನಗಳೇ ಆಗಿವೆ.

ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು  
ನರಬಲಿಯೇ ಬೇಕು
ಇದುವೆ ಕಾಳಿಯ ಪೂಜೆಯು ಶುದ್ಧ,  
ಇದಕ್ಕೆ ಹುಂಬರು ಎಂಬರು ಯುದ್ಧ.’
                        (---ನರಬಲಿ)
ಚಂಡಿ ಚಾಮುಂಡಿ ಪೇಳ್, ಬೇಕಾದುದೇನು?
ಗಂಡಸಾದರೆ ನಿನ್ನ ಬಲಿ ಕೊಡುವಿಯೇನು?’

ಕವನಗಳು ಬ್ರಿಟಿಶ್ ಆಳರಸರ ಕಣ್ಣುಗಳನ್ನು ಕೆಂಪು ಮಾಡಿದವು. ೧೯೩೨ರಲ್ಲಿ ಬೇಂದ್ರೆಯವರ ಮೇಲೆ ರಾಜದ್ರೋಹದ ಆರೋಪ ಹೊರಿಸಲಾಯಿತು. ಧಾರವಾಡದ ಜಿಲ್ಲಾ ಕಲೆಕ್ಟರರ ಎದುರಿಗೆ ಬೇಂದ್ರೆಯವರ ವಿಚಾರಣೆ ನಡೆಯಿತು. ಬೇಂದ್ರೆಯವರಿಗೆ ಎರಡು ವರ್ಷಗಳ ಜೇಲು ಶಿಕ್ಷೆ ವಿಧಿಸಲಾಯಿತು. ಇದರ ಜೊತೆಗೇ ಮತ್ತೊಂದು ಕಟ್ಟಾಣತಿ: ಆನಂತರ ಏಳು ವರುಷಗಳವರೆಗೆ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಕೂಡದು!

ಬೇಂದ್ರೆಯವರ ಶಿಷ್ಯಮಿತ್ರರಾದ ವ್ಹಿ.ಕೆ.ಗೋಕಾಕರು ೧೯೩೧ರಲ್ಲಿ ಪುಣೆಯ ವಿಲ್ಲಿಂಗ್ಡನ್ ಕಾ˘ಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡಿದ್ದರು. ಅವರು ಧಾರವಾಡಕ್ಕೆ ಧಾವಿಸಿ ಕಲೆಕ್ಟರರನ್ನು ಭೆಟ್ಟಿಯಾಗಲು ಅನುಮತಿ ಪಡೆದರು. ಸೂಟು-ಬೂಟು ಹಾಕಿಕೊಳ್ಳುತ್ತಿದ್ದ, ಇಂಗ್ಲೀಶಿನಲ್ಲಿ ಪರಿಣತರಾದ ಪ್ರೊಫೆಸರ್ ಗೋಕಾಕರನ್ನು ಭೆಟ್ಟಿಯಾಗಲು ಕಲೆಕ್ಟರರು ಸಮ್ಮತಿಸಿದರು. ಗೋಕಾಕರು  ಬೇಂದ್ರೆಯವರು ಕನ್ನಡದ ದೊಡ್ಡ ಕವಿಗಳು; ಅವರು ಬರೆದದ್ದು ಕೇವಲ ದೇಶಪ್ರೇಮದ ಕಾವ್ಯವೇ ಹೊರತು, ರಾಜದ್ರೋಹದ ಕಾವ್ಯವಲ್ಲ; ಅವರು ಸಶಸ್ತ್ರ ಕ್ರಾಂತಿಗೆ ಕರೆ ಕೊಟ್ಟಿಲ್ಲ; ಅವರಿಗೆ ತರಹದ ಶಿಕ್ಷೆ ಸಲ್ಲದು ಎಂದು ವಿನಂತಿಸಿಕೊಂಡರು. ಕಲೆಕ್ಟರರು ಒಪ್ಪಲಿಲ್ಲ. ಆದರೆ ಒಂದು ಶರ್ತಿನ ಮೇಲೆ, ಅಂದರೆ ಬೇಂದ್ರೆಯವರು ಮಾಫೀಪತ್ರವನ್ನು ಬರೆದುಕೊಟ್ಟರೆ, ಅವರನ್ನು ಕ್ಷಮಿಸುವದಾಗಿ ಕಲೆಕ್ಟರರು ಹೇಳಿದರು.

ಬದುಕಿದೆಯಾ ಬಡಜೀವವೇಎಂದುಕೊಳ್ಳುತ್ತಾ ಗೋಕಾಕರು ಬೇಂದ್ರೆಯವರ ಮನೆಗೆ ಹೋಗಿ, ಅವರಿಗೆ ವಿಷಯವನ್ನು ತಿಳಿಸಿದರು. ಬೇಂದ್ರೆಯವರು ಅವರಿಗೆನೀವು ನಾಳೆ ಬನ್ನಿಎಂದು ಹೇಳಿ ಕಳುಹಿಸಿದರು. ಮರುದಿನ ಗೋಕಾಕರು ಬೇಂದ್ರೆಯವರ ಮನೆಗೆ ಹೋದಾಗ, ಬೇಂದ್ರೆಯವರು ಅವರಿಗೆ ಹೇಳಿದ್ದು ಹೀಗೆ:
ನೋಡ್ರಿ, ಕವನಗಳನ್ನು ಬರೆದವನು ಅಂಬಿಕಾತನಯದತ್ತ. ಅವನು ಬರೆದ ಕವನಗಳಿಗಾಗಿ ಕ್ಷಮಾಪಣೆಯನ್ನು ಕೋರಲು ಬೇಂದ್ರೇಗೆ ಹೇಗೆ ಸಾಧ್ಯವಾದೀತು? ಆದುದರಿಂದ ನಾನು ಅಂದರೆ ಬೇಂದ್ರೆ ಮಾಫೀಪತ್ರವನ್ನು ಬರೆದು ಕೊಡುವುದಿಲ್ಲ.’

ಬೇಂದ್ರೆಯವರಿಗೆ ಎರಡು ವರ್ಷದ ಕಾರಾವಾಸಕ್ಕಾಗಿ ಬೆಳಗಾವಿಯ ಹಿಂಡಲಗಿ ಜೇಲಿಗೆ ಕಳುಹಿಸಲಾಯಿತು. ಬೇಂದ್ರೆಯವರ ಧರ್ಮಪತ್ನಿ ಪುಣೆಯಲ್ಲಿರುವ ಬೇಂದ್ರೆಯವರ ಕಾಕಾನ ಮನೆಯನ್ನು ಸೇರಿಕೊಳ್ಳಬೇಕಾಯಿತು. ಕೆಲಕಾಲದ ನಂತರ ಬೇಂದ್ರೆಯವರ ಅನಾರೋಗ್ಯಸ್ಥಿತಿಯನ್ನು ಗಮನಿಸಿ, ಬೇಂದ್ರೆಯವರನ್ನು ಮುಗದದಲ್ಲಿ ನಜರಬಂದಿಯಲ್ಲಿ ಇಡಲಾಯಿತು. ಸಮಯದಲ್ಲಿ ಮನೋಹರ ಗ್ರಂಥಮಾಲೆಯ ಸ್ಥಾಪಕರಾದ ಜಿ.ಬಿ.ಜೋಶಿಯವರು ಪ್ರತಿದಿನವೂ ಧಾರವಾಡದಿಂದ ಮುಗದದವರೆಗೆ ಸೈಕಲ್ಲಿನ ಮೇಲೆ ೧೫ ಕಿಲೋಮೀಟರ ದೂರವನ್ನು ಕ್ರಮಿಸಿ, ಬೇಂದ್ರೆಯವರಿಗೆ ಊಟವನ್ನು ತಂದುಕೊಡುತ್ತಿದ್ದರು.

ಒಂದು ದಿನ, ಬೇಂದ್ರೆಯವರು ಅಲ್ಲಿಯ ದೇವಿಯ ಗುಡಿಯೊಂದರಲ್ಲಿ ಜೊಂಪಿಸುತ್ತ ಕುಳಿತಿದ್ದಾಗ ಸುತ್ತಮುತ್ತಲಿನ ಮೆಳೆಗಳಲ್ಲಿ ಒಂದು ಗುಂಗೀ ಹುಳವು ಹೊರಡಿಸುತ್ತಿದ್ದ ಧ್ವನಿಯನ್ನು ಕೇಳಿದರು. ಆ ನಾದದ ಗುಂಗು ಬೇಂದ್ರೆಯವರಿಂದ ಒಂದು ಅದ್ಭುತ ಕವನ ಹೊರಹೊಮ್ಮುವುದಕ್ಕೆ ಕಾರಣವಾಯಿತು. ಆ ಕವನವೇಭಾವಗೀತೆ’!    
ಈ ಗೀತೆಯ ಮೊದಲ ಸಾಲು ಹೀಗಿದೆ
ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’.
ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ಅವರ ಅಗ್ನಿದಿವ್ಯದ ಕಾಲದಲ್ಲಿಯೇ ರಚಿತವಾದವು.

 (ಟಿಪ್ಪಣಿ: ಕಾಲೀದಾಸನ ‘ಶಾಕುಂತಲಮ್’ ನಾಟಕದಲ್ಲಿ ಶಕುಂತಲೆಯು ತನ್ನ ಮುಖದ ಬಳಿಯಲ್ಲಿ ಸುತ್ತುತ್ತಿರುವ ದುಂಬಿಯೊಂದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಬಂದ ದುಷ್ಯಂತನು ಅವಳಿಗೆ ನೆರವಾಗುತ್ತಾನೆ. ಆದುದರಿಂದ ಶಾಕುಂತಲಮ್ ನಾಟಕವು ಭೃಂಗದ ಬೆನ್ನೇರಿ ಬಂದ ಕಲ್ಪನಾವಿಲಾಸವಾಗಿದೆ. ತಮ್ಮ ಕವನದ ಮೊದಲ ಸಾಲಿನ ಮೂಲಕ ಬೇಂದ್ರೆಯವರು ಕಾಲೀದಾಸನಿಗೆ ಗೌರವ ಸಲ್ಲಿಸುತ್ತಿದ್ದಾರೆ.)

Monday, June 10, 2019

ಕಾರ್ನಾಡರ ಗಬ್ಬುನಾತದ ನಾಟಕ: ರಕ್ಕಸ ತಂಗಡಿ!



ಗಿರೀಶ ಕಾರ್ನಾಡರು ಬರೆದ ನಾಟಕ, ‘ರಕ್ಕಸ ತಂಗಡಿ’ಯ ಬಗೆಗೆ ನಾನು ಮೊದಲೇ ಬರೆಯಬೇಕೆಂದುಕೊಂಡಿದ್ದೆ. ಅವರ ನಿಧನದ ನಂತರ ಇದೀಗ ನಾನು ಬರೆಯುತ್ತಿರುವುದು ನನಗೆ ಬೇಸರದ ವಿಷಯವಾಗಿದೆ. ಏಕೆಂದರೆ ಈ ನಾಟಕವು ಕಾರ್ನಾಡರ ಒಂದು ಪೂರ್ವಾಗ್ರಹದ ಗಬ್ಬುನಾತವನ್ನು ಪಸರಿಸುತ್ತಿದೆ! ಅವರು ನಿಧನರಾಗಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಗಬ್ಬುನಾತವನ್ನು ‘ಪರಿಮಳ’ ಎಂದು ಹೊಗಳುವುದು ವಂಚನೆಯಾಗುತ್ತದೆ. 

ಈ ನಾಟಕವು ಇತಿಹಾಸಕ್ಕಿಂತ ಹೆಚ್ಚಾಗಿ ಕಾರ್ನಾಡರ ಮನೋಧರ್ಮವನ್ನು ತಿಳಿಸುವಂಥ ನಾಟಕವಾಗಿದೆ. ಇದರಲ್ಲಿ ವಿಜಯನಗರದ ಕೊನೆಯ ಶಾಸಕ ರಾಮರಾಯನನ್ನು ಒಬ್ಬ ಕುತ್ಸಿತ ಸಂಚುಕಾರ ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ. ಅದಷ್ಟೇ ಆಗಿದ್ದರೆ ಸುಮ್ಮನಿರಬಹುದಾಗಿತ್ತು. ಆದರೆ ರಾಮರಾಯನನ್ನು ಹೀಗಳೆಯುವ ಭರದಲ್ಲಿ, ಕಾರ್ನಾಡರು ತಮ್ಮ ಕಲ್ಪನೆಯ ಒಂದು ಘಟನೆಯನ್ನು ಹೀಗೆ ಬರೆದಿದ್ದಾರೆ. ರಾಮರಾಯನು ದರಬಾರಿನಲ್ಲಿ ಇದ್ದಾಗ ಉಚ್ಚೆ ಹೊಯ್ದುಕೊಂಡನಂತೆ. ಅದು ಹಾಗೆ ಹರಿಯುತ್ತ ಹೋಗಿ, ಗಬ್ಬುನಾತವು ಹರಡಿದರೂ ಸಹ, ಯಾರಿಗೂ ಬಾಯ್ಬಿಡುವ ಧೈರ್ಯವೇ ಆಗಲಿಲ್ಲವಂತೆ! ರಾಮರಾಯನು ಈ ಪ್ರಸಂಗವನ್ನು enjoy ಮಾಡುತ್ತಿದ್ದನಂತೆ ಹಾಗು ಇದನ್ನು ತನ್ನ ಆಪ್ತರೆದುರಿಗೆ ವಿಜೃಂಭಿಸುತ್ತಿದ್ದನಂತೆ.

ಕಾರ್ನಾಡರು ರಾಮರಾಯನ ಬಗೆಗೆ ತಾವು ಮಾಡಿದ ಸಂಶೋಧನೆಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಯಾವ ಸಂಶೋಧನಾಕೃತಿಯಲ್ಲಿ ಈ ಘಟನೆ ವರ್ಣಿತವಾಗಿದೆಯೋ ದೇವರೇ ಬಲ್ಲ. ರಾಮರಾಯನ ಈ ಕುತ್ಸಿತ, ವಂಚಕ, ಕಪಟ ಸಂಚುಗಾರಿಕೆಯ in contrast ದಕ್ಷಿಣದ ಸುಲ್ತಾನರು ಎಷ್ಟು ಒಳ್ಳೆಯವರಾಗಿದ್ದರು, ಆವರು ರಾಮರಾಯನ ಸಂಚಿನಿಂದ ತಮ್ಮನ್ನು ಉಳಿಸಿಕೊಳ್ಳುವ ಸಲುವಾಗಿ ಹೇಗೆ ಪ್ರತಿಸಂಚನ್ನು ಅನಿವಾರ್ಯವಾಗಿ ಹೂಡಿದರು ಎನ್ನುವದನ್ನು ಕಾರ್ನಾಡರು ಈ ನಾಟಕದಲ್ಲಿ ವಿವರಿಸಿದ್ದಾರೆ. ಇದೆಲ್ಲ ಏನನ್ನು ಸೂಚಿಸುತ್ತದೆ? 

ಇದನ್ನು ಅರ್ಥ ಮಾಡಿಕೊಳ್ಳಲು, ಕಾರ್ನಾಡರು ಈ ನಾಟಕಕ್ಕೂ ಮೊದಲು ಬರೆದ ‘ಟಿಪ್ಪೂಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಓದಬೇಕು. ಕಾರ್ನಾಡರು ‘ಬಿ.ಬಿ.ಸಿ’ಯ ಕೋರಿಕೆಯ ಮೇರೆಗೆ ಬರೆದುಕೊಟ್ಟ ನಾಟಕವಿದು. ಹೀಗಾಗಿ ಈ ನಾಟಕದಲ್ಲಿ ಬ್ರಿಟಿಶರನ್ನು ನಿಂದಿಸುವುದು ಅವರಿಂದ ಸಾಧ್ಯವಾಗಿಲ್ಲ. ಆದರೆ ಟಿಪ್ಪೂನನ್ನು ಹೊಗಳುವುದು ಅವರಿಗೆ ಇಷ್ಟದ ವಿಷಯವಲ್ಲವೆ! ಆದುದರಿಂದ ಅವನು ಸರ್ವಧರ್ಮಸಹಿಷ್ಣು ಎನ್ನುವಂತೆ ಅವನನ್ನು ಚಿತ್ರಿಸಿದ್ದಾರೆ. ಮುಖ್ಯವಾಗಿ ಅವನಿಗೆ ಬೀಳುತ್ತಿರುವ ಕನಸುಗಳನ್ನು ಅವನು ದಾಖಲಿಸುತ್ತಿದ್ದನು ಹಾಗು ಅವು ಲಭ್ಯವಿವೆ ಎಂದು ಹೇಳಿದ್ದಾರೆ. ಇದ್ದೀತು; ಆದರೆ ಈ ಕನಸುಗಳಿಗೆ ಕಾರ್ನಾಡರು ತಮ್ಮದೇ ಆದ ಅರ್ಥವನ್ನು ಹೇಳುತ್ತ, ಟಿಪ್ಪೂನನ್ನು ವೈಭವೀಕರಿಸಿದ್ದಾರೆ.

ಕಾರ್ನಾಡರು ಹಿಂದೂವಿರೋಧಿ ಹಾಗು ಮುಸ್ಲಿಮ್ ಪಕ್ಷಪಾತಿಗಳಾಗಿದ್ದರೆ? ಅವರು ಬರೆದ ಎರಡು ಕಥೆಗಳು ಸಹ ಇದೇ ಧಾಟಿಯಲ್ಲಿವೆ. ಒಂದರಲ್ಲಿ ಹೈದರಾಬಾದದಲ್ಲಿ ದಂಗೆ ನಡೆದಾಗ, ಒಬ್ಬ ಮುಸ್ಲಿಮನು ಓರ್ವ ಹಿಂದು ಮಹಿಳೆಯನ್ನು ರಕ್ಷಿಸಿದ ವರ್ಣನೆ ಇದೆ. ಮತ್ತೊಂದು ಕಥೆಯಲ್ಲಿ, ಮುಸ್ಲೀಮರು ತಮ್ಮ ಚಾಳದ ಮೇಲೆ ಏರಿ ಬರುವವರಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ, ಆ ಚಾಳಿನ ಹಿಂದೂ ಜನರೆಲ್ಲ ಒಟ್ಟಾಗಿ ಮನೆಯನ್ನು ಕಾಯುವದನ್ನು ಹಾಸ್ಯಾಸ್ಪದವಾಗಿ ಬಣ್ಣಿಸಿದ್ದಾರೆ.

ಇದೆಲ್ಲವನ್ನು ನೋಡಿದಾಗ ಕಾರ್ನಾಡರಿಗೆ ಬಹುಶಃ Muslim fixation ಇದ್ದಿರಬಹುದು ಎಂದು ಭಾಸವಾಗುತ್ತದೆ. ಅದು ಅವರ ಸಾಹಿತ್ಯದಲ್ಲಿ ತಕ್ಕ ಮಟ್ಟಿಗೆ ಪ್ರತಿಬಿಂಬಿಸಿದೆ. ಏನೇ ಆಗಲಿ, ಕನ್ನಡದ ಓರ್ವ ನಿಶಿತ ಬುದ್ಧಿಯ ವ್ಯಕ್ತಿಯಾದ ಗಿರೀಶ ಕಾರ್ನಾಡರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ.