ಭಾರತ ದೇಶದಲ್ಲಿ ಆರ್ಯರು ಪ್ರವೇಶಿಸಿದ ಸಂದರ್ಭದಲ್ಲಿ ಅವರು ನುಡಿಯುತ್ತಿದ್ದ ಭಾಷೆಗೆ ಆರ್ಯಭಾಷೆ ಎಂದು ಕರೆಯೋಣ. ವ್ಯಾಕರಣದ ಕಟ್ಟುಪಾಡು ಇಲ್ಲದಿರುವ ಕಾಲದ ಈ ಭಾಷೆ ಪ್ರಾಕೃತ ಭಾಷೆ (=ಪ್ರಕೃತಿಸಹಜವಾದದ್ದು=natural). ಈ ಭಾಷೆಯನ್ನು ವ್ಯಾಕರಣದ ಶಿಸ್ತಿಗೆ ಒಳಪಡಿಸಿ, ಸಂಸ್ಕರಿಸಿದಾಗ ಇದು ಸಂಸ್ಕರಣಗೊಂಡ ಭಾಷೆ ಆಯಿತು (=ಸಂಸ್ಕರಿತ, ಸಂಸ್ಕೃತ, processed, refined). ‘ಸಂಸ್ಕೃತ’ವೆನ್ನುವದು ಭಾಷೆಯ ಹೆಸರಲ್ಲ, ಭಾಷೆಯ ಸ್ಥಿತಿ. ಪ್ರಾಕೃತ ಅಂದರೆ natural tongue; ಸಂಸ್ಕೃತ ಅಂದರೆ grammered tongue.
ಆರ್ಯರು ಅನಾರ್ಯ ಭಾಷೆಗಳನ್ನು ಪೈಶಾಚಿ ಭಾಷೆ ಎಂದು ಕರೆದರು. ಪೂರ್ವದ್ರಾವಿಡ ಭಾಷೆಗಳೇ ಈ ಪೈಶಾಚಿ ಭಾಷೆಗಳು. ಆರ್ಯರು ಅನಾರ್ಯದೇಶಗಳಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸತೊಡಗಿದಂತೆ, ಆರ್ಯಭಾಷೆ (ಅಥವಾ ದೇವಭಾಷೆ) ಹಾಗೂ ಪೈಶಾಚಿ ಭಾಷೆಗಳಲ್ಲಿ ಕೊಡುಕೊಳ್ಳುವಿಕೆ ಪ್ರಾರಂಭವಾಯಿತು. ಹೀಗಾಗಿ ಆರ್ಯಭಾಷೆಯಲ್ಲಿ ಹಾಗು ಆರ್ಯಭಾಷೆಯಿಂದ ಉದ್ಭವಿಸಿದ ಭಾಷೆಗಳಲ್ಲಿ ಪೂರ್ವದ್ರಾವಿಡ ಭಾಷೆಯ ಪದಗಳನ್ನು ಕಾಣಬಹುದು. ಗುಜರಾತಿ ಭಾಷೆಗೆ ದ್ರಾವಿಡ ತಳಹದಿ ಇದೆ ಎಂದು ಹೇಳಲಾಗುತ್ತಿದೆ. ಸ್ವತಃ ಸಂಸ್ಕೃತದಲ್ಲಿಯೇ ಅನೇಕ ದ್ರಾವಿಡ ಪದಗಳನ್ನು ಗುರುತಿಸಲಾಗುತ್ತಿದೆ. ಇದರಂತೆಯೇ ಅನಾರ್ಯ ಭಾಷೆಗಳಲ್ಲೂ ಸಹ ಅನೇಕ ಬದಲಾವಣೆಗಳಾದವು.
ಅನಾರ್ಯ ಪ್ರದೇಶಗಳಲ್ಲಿ ನೆಲೆಸಿದ ಆರ್ಯರಿಂದಾಗಿ ಇಲ್ಲಿಯ ಸ್ಥಳನಾಮಗಳು ಅವರ ಉಚ್ಚಾರಣೆಗೆ ತಕ್ಕಂತೆ ಬದಲಾದವು. ಆಂಗ್ಲ ಉಚ್ಚಾರಣೆಯಲ್ಲಿ ‘ಬೆಂಗಳೂರು’ ‘ಬ್ಯಾಂಗ್ಲೋರ್’ ಆದಂತೆ, ‘ಕಡೇವಾಡ’ವು ‘ಕಾರ್ವಾರ್’ ಆದಂತೆ, ಅನೇಕ ಅನಾರ್ಯ ಸ್ಥಳನಾಮಗಳೂ ಸಹ ಗುರುತು ಹತ್ತದಂತೆ ಬದಲಾದವು.
ಕೆಲವು ಉದಾಹರಣೆಗಳು:
೧) ಕಾಳಿ ನದಿಯ ದಂಡೆಯ ಮೇಲಿರುವ ‘ದಂಡಿಹಳ್ಳಿ’ >>>>ದಾಂಡೇಲಿ
೨) ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಚಾಪಿಹಳ್ಳಿ>>>>ಚಾಪೋಲಿ
೩) -----------“”------------------- ಮೀರಹಳ್ಳಿ >>>>>ಮಿರ್ಲೆ
೪) -------------“”---------------- ನಾರುವಳ್ಳಿ >>>>>ನಾರ್ವೆ
೫) ಚೋರಹಳ್ಳಿ >>>>ಚೋರ್ಲೆ
೬) ಸಂಗೊಳ್ಳಿ >>>>ಸಾಂಗ್ಲಿ (ಮಹಾರಾಷ್ಟ್ರ)
೭) ಕಂದವಳ್ಳಿ >>>>>ಕಾಂದೀವ್ಲಿ (ಮುಂಬಯಿ ನಗರದ ಭಾಗ)
೮) ಕಂದಹಾಳ >>>>ಖಂಡಾಲಾ (ಮುಂಬಯಿ ನಗರದ ಹತ್ತಿರ)
೯) ಕಂದಹಾರ >>>ಗಾಂಧಾರ (ಸಂಸ್ಕೃತೀಕರಣ, ಅಫಘಾನಿಸ್ತಾನದಲ್ಲಿ)
೧೦) ಡೊಂಬವಳ್ಳಿ >>>>ಡೊಂಬೀವಲಿ (ಮುಂಬಯಿ ನಗರದ ಭಾಗ)
೧೧) ಡೊಂಬಹಾಳ >>>>ಡಂಬಳ (ಗದಗ ಶಹರದ ಹತ್ತಿರ)
೧೨) ಹೊಂಬಹಾಳ >>> ಹೊಂಬಳ (ಗದಗ ಶಹರದ ಹತ್ತಿರ)
೧೩) ಮೀರಜಿ >>>> ಮಿರಜ (ಮಹಾರಾಷ್ಟ್ರ)
೧೪) ಕೋಲಪುರ >>>ಕೊಲ್ಹಾಪುರ (ಮಹಾರಾಷ್ಟ್ರ)
೧೫) ಕೋಲಕಟ್ಟೆ >>>ಕೊಲ್ಕತ್ತಾ (ಪ.ಬಂಗಾಲ)
೧೬) ಕನ್ನದೇಶ >>> ಖಾನದೇಶ (ಗುಜರಾತ-ರಾಜಸ್ಥಾನ)
೧೭) ಕಾಟವಾಡ >>>ಕಾಠೇವಾಡ ( ಗುಜರಾತ)
ಕನ್ನಡ ಸ್ಥಳನಾಮಗಳಷ್ಟೇ ಅಲ್ಲ, ಕನ್ನಡ ವ್ಯಕ್ತಿನಾಮಗಳೂ ಸಹ ಮಾರ್ಪಾಡಾದವು.
ಉದಾಹರಣೆಗಳು:
ಕರಗ >>>ಖಾರಗೆ, ಘಾರಗಿ
ಕನ್ನ >>>ಖನ್ನಾ
ಕಾತ,ಕಾಟ >>> ಕಾಠೆ, ಕಾಟವೆ
ಕನ್ನಡ >>> ಕಾನಡೆ
ಲಾತ, ಲಾಟ >>> ಲಾಢ, ಲದ್ವಾ
ಬದಲಾಗಲಿ ಬಿಡಿ, ತಪ್ಪೇನೂ ಇಲ್ಲ. ಆದರೆ, ಈ ಮಾರ್ಪಾಡಿಗೆ ಒಳಗಾದವರು ತಮ್ಮ ಪೂರ್ವಸ್ಮೃತಿಯನ್ನು ಪೂರ್ಣವಾಗಿ ಮರೆತಿರುವದು ದುರ್ದೈವದ ಸಂಗತಿ. ಇದು unfortunate racial amnesia!
ಕನ್ನರು ಖನ್ನಾ ಆಗಿ, ತಾವು ಪಂಜಾಬಿಗಳು ಎಂದು ಹೆಮ್ಮೆಪಡುತ್ತಾರೆ. ಕಾನಡೆ ಎನ್ನುವ ಹೆಸರೇ ಸೂಚಿಸುವಂತೆ, ಈ ಜನರು ಕನ್ನಡಿಗರು ಎಂದು (ಮರಾಠಿಗರಿಂದ) ಗುರುತಿಸಲ್ಪಡುತ್ತಿದ್ದರು. ಇವರಲ್ಲೇಕರು ಈಗ ಮರಾಠಿ ಭಾಷಿಕರೇ ಆಗಿ ಬಿಟ್ಟಿದ್ದಾರೆ.
ಸೋತ ಜನಾಂಗಗಳಿಗೆ ಇತಿಹಾಸವಿರುವದಿಲ್ಲ!
Showing posts with label ಸ್ಥಳನಾಮ. Show all posts
Showing posts with label ಸ್ಥಳನಾಮ. Show all posts
Friday, June 6, 2008
Wednesday, June 4, 2008
ಬೆಂಗಳೂರು ಹಾಗು ವೆಂಗಿಮಂಡಲ
ಬೆಂಗಳೂರು ಈ ಪದದ ಮೂಲ ‘ಬೆಂದಕಾಳೂರು’ ಎಂದು ಹೇಳಲಾಗುತ್ತಿದೆ. ಈ ನಿರುಕ್ತಿಗಾಗಿ ಒಂದು ಕತೆಯನ್ನೇ ಕಟ್ಟಲಾಗಿದೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:
ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)
ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!
ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.
ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.
ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.
ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:
ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.
ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.
ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.
‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.
ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.
ಆದರೆ, ಕೆಳಗೆ ಕೊಟ್ಟ ಅಂಶಗಳನ್ನು ಗಮನಿಸಿರಿ:
ವೆಂಗ ಅಥವಾ ಬೆಂಗ ಪದದಿಂದ ಪ್ರಾರಂಭವಾಗುವ ೧೩ ಗ್ರಾಮಗಳು ಕರ್ನಾಟಕದಲ್ಲಿವೆ:
೧. ಬೆಂಗಳೂರು (ಬೆಂಗಳೂರು ತಾಲೂಕು/ ಬೆಂಗಳೂರು ಜಿಲ್ಲೆ)
೨. ಬೆಂಗನೂರು (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೩. ಬೆಂಗಳೆ (ಶಿರಸಿ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೪. ಬೆಂಗೂರು (ಮಡಿಕೇರಿ ತಾಲೂಕು/ ಕೊಡಗು ಜಿಲ್ಲೆ)
೫. ಬೆಂಗೇರಿ (ಹುಬ್ಬಳ್ಳಿ ತಾಲೂಕು/ ಧಾರವಾಡ ಜಿಲ್ಲೆ)
೬. ಬೆಂಗ್ರೆ (ಭಟಕಳ್ ತಾಲೂಕು/ ಉತ್ತರ ಕನ್ನಡ ಜಿಲ್ಲೆ)
೭. ವೆಂಗಲಪ್ಪನ ಹಳ್ಳಿ (ಮಾಗಡಿ ತಾಲೂಕು/ ಬೆಂಗಳೂರು ಜಿಲ್ಲೆ)
೮. ವೆಂಗಲಮ್ಮನ ಹಳ್ಳಿ (ಮಧುಗಿರಿ ತಾಲೂಕು/ ತುಮಕೂರು ಜಿಲ್ಲೆ)
೯. ವೆಂಗಲಮ್ಮನ ಹಳ್ಳಿ (ಕೊರಟಗೆರೆ ತಾಲೂಕು/ ತುಮಕೂರು ಜಿಲ್ಲೆ)
೧೦. ವೆಂಗಲಾಪುರ (ಹೊಸದುರ್ಗ ತಾಲೂಕು/ ಬಳ್ಳಾರಿ ಜಿಲ್ಲೆ)
೧೧. ವೆಂಗಸಂದ್ರ (ಬಂಗಾರಪೇಟೆ ತಾಲೂಕು/ ಕೋಲಾರ ಜಿಲ್ಲೆ)
೧೨. ವೆಂಗಳಾಪುರ (ದೇವದುರ್ಗ ತಾಲೂಕು/ ರಾಯಚೂರು ಜಿಲ್ಲೆ)
೧೩. ವೆಂಗಳಾಪುರ(ಡಿ) (ಸಿಂಧನೂರು ತಾಲೂಕು/ ರಾಯಚೂರು ಜಿಲ್ಲೆ)
ಈ ಸ್ಥಳನಾಮಗಳನ್ನು ಪರಿಶೀಲಿಸಿದಾಗ, ಇವೆಲ್ಲವುಗಳ ಪೂರ್ವಪದ ‘ವೆಂಗ’ ಅಥವಾ ‘ಬೆಂಗ’ ಇದ್ದದ್ದು ಕಂಡು ಬರುವದು. ಕನ್ನಡ, ತಮಿಳು, ತೆಲುಗು,ತುಳು ಹಾಗು ಮಲೆಯಾಳಮ್ ಎನ್ನುವ ಪಂಚದ್ರಾವಿಡ ಭಾಷೆಗಳು ಪ್ರತ್ಯೇಕವಾಗುವ ಸಮಯದಲ್ಲಿ ‘ವೆಂಕ’ ಎನ್ನುವ ಮೂಲಪದವು ‘ವೆಂಗ’ ಹಾಗೂ ‘ಬೆಂಗ’ ವಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಅರ್ಥಾತ್, ಈ ಎಲ್ಲ ಸ್ಥಳನಾಮಗಳ ಅರ್ಥವೆಂದರೆ ಈ ಸ್ಥಳಗಳು ವೆಂಕನ ಊರುಗಳು.
ಈ ವೆಂಕನು ಯಾರು?
ಅನೇಕ ದಾಕ್ಷಿಣಾತ್ಯರ ಕುಲದೈವವಾದ ವೆಂಕಪ್ಪನೇ ಈ ವೆಂಕನು!
ವೆಂಕ, ವೆಂಗ ಹಾಗೂ ಬೆಂಗ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಕರ್ನಾಟಕದ ಹೊರಗೂ ದೊರೆಯುತ್ತವೆ. ಭಾರತದ ಮಾಜಿ ಪ್ರಧಾನಿಯಾದ ಪಿ.ವಿ. ನರಸಿಂಹರಾಯರು ‘ವೆಂಗಲ್’ ಊರಿನವರು. ವೆಂಗಲ್ ಅಂದರೆ ‘ವೆಂಕ+ಕಲ್’. (ಕಲ್ ಪದದಿಂದ ಅಂತ್ಯವಾಗುವ ಅನೇಕ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ನಿಜಗಲ್, ಹಾನಗಲ್, ಭಟಕಳ್ ಇ.) ಆಂಧ್ರಪ್ರದೇಶದಲ್ಲಿರುವ ಮತ್ತೊಂದು ದೊಡ್ಡ ಊರೆಂದರೆ ವೆಂಗನ್ನಪಲೇಮ್. ತಿರುಪತಿ ಗಿರಿಯೊಡೆಯ ವೆಂಕಪ್ಪನ ಹೆಸರು ‘ವೆಂಕಟೇಶ’ ಎನ್ನುವದನ್ನು ಗಮನಿಸಿ. ಇದು ವೆಂಕಟ+ಈಶ ಎನ್ನುವ ಎರಡು ಪದಗಳಿಂದಾಗಿದೆ. ಹಾಗಿದ್ದರೆ ವೆಂಕಟ ಅಂದರೆ ಯಾರು? ವೆಂಕಟ ಇದು ವೆಂಕ ಅಥವಾ ವೆಂಗ ಹೆಸರುಗಳ ಮತ್ತೊಂದು ರೂಪವಷ್ಟೆ. ಈ ವೆಂಕ, ವೆಂಗ ಹೆಸರಿನ ಮೂಲನಿವಾಸಿಗಳ ಸಮುದಾಯವು ‘ವೆಂಗಿಮಂಡಲ’ ಎನ್ನುವ ಪ್ರದೇಶದ ನಿವಾಸಿಯಾಗಿರಲೇಬೇಕು.
ಕರ್ನಾಟಕದ ಹೆಸರಾಂತ ಸಾಹಿತಿಗಳಾದ ಮುಳಿಯ ತಿಮ್ಮಪ್ಪಯ್ಯನವರ ಅಭಿಪ್ರಾಯದಲ್ಲಿ ಈ ವೆಂಗಿಮಂಡಲವು ವಿಂಧ್ಯಪರ್ವತದ ತಪ್ಪಲಿನಲ್ಲಿತ್ತು. ಅವರ “ಕನ್ನಡ ನಾಡೂ ದೇಸಿ ಸಾಹಿತ್ಯವೂ” ಕೃತಿಯಲ್ಲಿ ತಮ್ಮ ಅನುಮಾನಕ್ಕೆ ಅನೇಕ supportಗಳನ್ನು ನೀಡಿದ್ದಾರೆ. ಆ ಪ್ರದೇಶದಲ್ಲಿರುವ ಕೆಲವು ಹೆಸರುಗಳನ್ನು ಗಮನಿಸಿದಾಗ (ಉದಾಹರಣೆಗೆ: ಭಾರತದ ಮಾಜಿ ಕ್ರಿಕೆಟ್ ನಾಯಕರಾದ ‘ವೆಂಗಸರಕಾರ’), ತಿಮ್ಮಪ್ಪಯ್ಯನವರ ಊಹೆಗೆ ಬಲ ಬರುತ್ತದೆ.
ಈ ಅಂಶಗಳನ್ನು ಗಮನಿಸಿದಾಗ, ‘ಬೆಂಗಳೂರು’ ಇದು ‘ವೆಂಗಳೂರು’(=ವೆಂಕನ ಊರು) ಎನ್ನುವದು ಸ್ಪಷ್ಟವಾಗುತ್ತದೆ ಹಾಗು ‘ಬೆಂದಕಾಳೂರು’ ಎಂದು ಅರ್ಥೈಸುವದು ಹಾಸ್ಯಾಸ್ಪದ ದಂತಕತೆ ಎಂದು ಭಾಸವಾಗುವದು.
ಮುಳಿಯ ತಿಮ್ಮಪ್ಪಯ್ಯನವರು ತಮ್ಮ ಲೇಖನದಲ್ಲಿ ‘ವೆಳ್’ ಪದವು ವೇಕ (ಬೇಕ) ಪದವಾಗಿ ಮಾರ್ಪಟ್ಟು, ಅದರಿಂದ ‘ವೆಂಗಿ’ ಪದದ ಉತ್ಪನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ‘ವೆಳ್’ ,‘ಬೆಳ್’ ಹಾಗೂ ವೇಕ (ಬೇಕ) ಪದದಿಂದ ಪ್ರಾರಂಭವಾಗುವ ೨೨೦ ಊರುಗಳು ಕರ್ನಾಟಕದಲ್ಲಿವೆ. ಕೆಲವು ಉದಾಹರಣೆಗಳು:
ಬೇಲಕುಡ, ಬೇಲಕುಣಿ, ಬೇಲುರಾ, ಬೇಲೂರು, ಬೆಳ್ಳಟ್ಟಿ, ಬೇಲಕೆರೆ, ಬೇಲಧಾರಾ, ಬೇಲಾತೂರು, ಬೇಲನಾಯಕನಹಳ್ಳಿ. ಬೇಲುಂಡಗಿ, ಬೇಲೆಕೇರಿ, ಬೇಲೆಗೇರಿ, ಬೇಲೇರಿ, ಬೆಳಂದೂರು, ಬೆಳಂಬರ, ಬೆಳಕಂದ, ಬೆಳಕವಾಡಿ, ಬೆಳಕುಪ್ಪೆ, ಬೆಳಕೆ, ಬೆಳಕೆರೆ, ಬೆಳಕೊಟ್ಟಾ, ಬೆಳಗರಹಳ್ಳಿ, ಬೆಳಗಲಿ, ಬೆಳಗಲ್, ಬೆಳಗಾಲ, ಬೆಳಗಾವಿ, ಬೆಳಗುಂಡಾ, ಬೆಳಮಾ, ಬೆಳವಟಗಿ, ಬೆಳವಡಿ, ಬೆಳಹಾರ, ಬೆಳವಲಕೊಪ್ಪ, ಬೆಳ್ಳಹಳ್ಳಿ, ಬೆಳ್ಳಾವಿ, ಬೆಳ್ಳೂರು, ಬೇಕವಾಡ, ಬೇಗೂರು, ಬೇಗೋಡಿ , ವೇಲಾಪಿ ಇತ್ಯಾದಿ.
ತಮಿಳುನಾಡಿನಲ್ಲಿರುವ ವೆಲ್ಲೂರು, ಕೋಲ್ಕತ್ತಾದ ಹತ್ತಿರವಿರುವ ಬೇಲೂರು ಇವೆಲ್ಲ ವೇಳರ (=ವೆಂಗಿಗಳ) ಹರಡುವಿಕೆಗೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದಲ್ಲಿರುವ ‘ವೇರೂಳ’ ಇದು ವೇಳೂರಿನ ಅಪಭ್ರಂಶವಾಗಿರಬೇಕು.
ಶ್ರೀಕೃಷ್ಣನ ಅಣ್ಣನಾದ ಬಲರಾಮನಿಗೆ ತಮಿಳರು ‘ವೇಲಾಯುಧನ್’ ಎಂದು ಕರೆಯುತ್ತಾರೆ. ಈ ಬಲರಾಮನ ಹೆಂಡತಿಯು ರೇವತಿಯು; ಅರ್ಥಾತ್ ‘ರೇವಾ’ ಪಟ್ಟಣದಿಂದ ಬಂದವಳು. ರೇವಾ ಪಟ್ಟಣವು ವೆಂಗಿಮಂಡಲದ ರಾಜಧಾನಿಯಾಗಿತ್ತು. ಅಂದರೆ, ವೇಲನಾಡಿನಲ್ಲಿರುವ(=ವೆಂಗಿನಾಡಿನಲ್ಲಿರುವ) ಬಲರಾಮನು, ವೆಂಗಿಮಂಡಲದ ರಾಜಧಾನಿಯಾದ ರೇವತಿಯನ್ನು ಮದುವೆಯಾಗಿದ್ದನು ಎಂದರ್ಥವಾಯಿತು. ಬಲರಾಮನ ತಮ್ಮನಾದ ಶ್ರೀಕೃಷ್ಣನು ‘ಕನ್ನಯ್ಯ’ನು, ಅಂದರೆ ಕನ್ನ ಕುಲಜನು(=ಕನ್ನಡಿಗನು). ಅರ್ಥಾತ್, ವೆಂಗಿಮಂಡಲದ ನಿವಾಸಿಗಳು ಕನ್ನಡಿಗರು ಎನ್ನುವದಕ್ಕೆ ಅಪ್ರತ್ಯಕ್ಷ ಪುರಾವೆ.
ಬಲರಾಮನಿಗೆ ಹಲಾಯುಧ ಎನ್ನುವ ಹೆಸರೂ ಇದೆ. ಕರ್ನಾಟಕದಲ್ಲಿ ‘ಹಲ’ ಪದದಿಂದ ಪ್ರಾರಂಭವಾಗುವ ೧೦೩ ಸ್ಥಳಗಳಿವೆ.
ಉದಾಹರಣೆಗಳು: ಹಲಗಣಿ, ಹಲಗತ್ತಿ, ಹಲಗೇರಿ, ಹಲಕೂರು, ಹಲಕೋಡಾ, ಹಲಗನಹಳ್ಳಿ, ಹಲಗಾ, ಹಲಗೊರ್ಟಾ, ಹಲಘಟ್ಟ, ಹಲಚೇರ,, ಹಲಗಡ್ಲಾ, ಹಲಕುಂಡಿ, ಹಲವರ್ತಿ, ಹಲವಳ್ಳಿ, ಹಲಸುಲಿಗೆ, ಹಲಸೂರು, ಹಲಸೆ, ಹಲಹಳ್ಳಿ, ಹಲಿಕೆ,ಹಲಿಯಾಳ ಇತ್ಯಾದಿ.
‘ಹಲ’ ವಂಶದ ರಾಜರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಬಸರೂರಿನ ಪ್ರಸಿದ್ಧ ರಾಜರಾಗಿದ್ದರು.
ಕನ್ನಡಿಗರು ವಿಂಧ್ಯ ಪರ್ವತದ ತಪ್ಪಲಿನಿಂದ ಕಾವೇರಿಯವರೆಗೂ ವ್ಯಾಪಕವಾಗಿ ವಾಸಿಸುತ್ತಿದ್ದದು ಈ ಸ್ಥಳನಾಮಗಳಿಂದ ಸಿದ್ಧವಾಗುತ್ತದೆ.
ಟಿಪ್ಪಣಿ: ವೇಲಾಯುಧನ್ ಈತನು ‘ಮುರುಗ’ನೇ ಹೊರತು ‘ಬಲರಾಮ’ ಅಲ್ಲ ಎಂದು ಹಂಸಾನಂದಿಯವರು ತಿಳಿಸಿದ್ದಾರೆ. ಈ ಸೂಚನೆಯು ಸರಿಯಾಗಿದೆ. ಒಪ್ಪಿಕೊಳ್ಳುತ್ತೇನೆ.
Sunday, June 1, 2008
ಮೂಗ, ಪಣಬ, ಮನ್ನ, ಕಿನ್ನ, ಹಂಗ, ನಲ್ಲ, ಗಂಗ, ಮುಂಬ, ಸಿಂಗ, ಕಂಬ, ಲಾಟ, ಮುರ
ಮೂಗರು ಒಂದು ಕಾಲದಲ್ಲಿ ಕರ್ನಾಟಕದಲ್ಲಿ ನೆಲೆಸಿದ್ದ ದೊಡ್ಡ ಮೂಲನಿವಾಸಿ ಸಮುದಾಯ. ಆಂಧ್ರಪ್ರದೇಶದಲ್ಲಿ ಇರುವ ಮುಖ ಹೆಸರಿನ ಆದಿವಾಸಿಗಳು ಇವರೇ ಆಗಿರಬಹುದು. ಮೂಗ ಅಥವಾ ಮೂಕ ಎನ್ನುವ ಪದದಿಂದ ಪ್ರಾರಂಭವಾಗುವ ೩೫ ಹಳ್ಳಿಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಮುಖೇರ ಎನ್ನುವ ಊರಿದೆ. ಈ ಹೆಸರು ‘ಮುಖ+ಹಾರ’ ಎನ್ನುವ ದ್ರಾವಿಡ ಪದದ ಮಹಾರಾಷ್ಟ್ರೀಕರಣವಿರಬಹುದು. ಕರ್ನಾಟಕದ ಕೊಲ್ಲೂರಿನಲ್ಲಿರುವ ಮೂಕಾಂಬಿಕೆ ಸುಪ್ರಸಿದ್ಧ ದೇವಿಯಾಗಿದ್ದಾಳೆ. ಇವಳು ಮೂಕಾಸುರನನ್ನು ಸಂಹರಿಸಿದಳು ಎಂದು ಸ್ಥಳಪುರಾಣಗಳು ಹೇಳುತ್ತವೆ. ಕೋಲ, ಮುಂಡ, ಮಹಿಷ ಮೊದಲಾದ ಮೂಲನಿವಾಸಿ ಸಮುದಾಯಗಳನ್ನು ಸೋಲಿಸಿದ ಮಾತೃಪ್ರಧಾನ ಸೈನ್ಯವೇ, ಈ ಮೂಕಸಮುದಾಯವನ್ನೂ ಸಹ ಸೋಲಿಸಿರಬಹುದು. ಕರ್ನಾಟಕದಲ್ಲಿ ಮೂಕ ಅಥವಾ ಮೂಗ ಹೆಸರಿನಿಂದ ಪ್ರಾರಂಭವಾಗುವ ಕೆಲವು ಸ್ಥಳನಾಮಗಳು ಈ ರೀತಿಯಾಗಿವೆ:
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.
ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.
ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.
ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.
‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.
ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.
ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.
ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.
ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.
ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.
ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?
ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.
ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.
ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.
ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).
ಮೂಕನಹಾಳ, ಮೂಕನಪಾಳ್ಯ, ಮೂಕಹಳ್ಳಿ, ಮೂಗನಪುರ, ಮೂಗನೂರು, ಮೂಗಬಾಳ, ಮೂಗವಳ್ಳಿ, ಮೂಗವಾಡೆ, ಮೂಗಾಲಿ, ಮೂಗೂರು, ಮುಗಳಿ ಇತ್ಯಾದಿ.
ಕರ್ನಾಟಕದ ಮೂಲನಿವಾಸಿ ಸಮುದಾಯಗಳಲ್ಲಿ ‘ಪಣಬ’ ಜನಾಂಗವು ಮಹತ್ವದ್ದಾಗಿದೆ. ಏಕೆಂದರೆ, ಮೂಗ, ಗೊಂಡ, ಕೋಲ,ಶಿರ ಮೊದಲಾದ ಸಮುದಾಯಗಳು ಕರ್ನಾಟಕದಲ್ಲಿ ಈಗ ಕಾಣಲಾರವು. ಆದರೆ, ಪಣಬ ಅಥವಾ ಹಣಬ ಹೆಸರಿನ ಸಮುದಾಯವು “ಬೀದರ” ಜಿಲ್ಲೆಯನ್ನು ನೆಲೆಯಾಗಿಸಿಕೊಂಡ ಸಮುದಾಯವಾಗಿದೆ. ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಲ್ಲಿ ”ಪಣಿಯನ್” ಎನ್ನುವ ಪರಿಶಿಷ್ಟ ಜನಾಂಗವಿದೆ. ಮಧ್ಯಪ್ರದೇಶದಲ್ಲಿ “ಪಣಿಕ” ಎನ್ನುವ ಪರಿಶಿಷ್ಟ ಜನಾಂಗವಿದೆ. ಇವರೆಲ್ಲರೂ ಪಣಬ(=ಹಣಬ)ರು ಎನ್ನುವದು ನಿಸ್ಸಂಶಯ. ಕರ್ನಾಟಕದಲ್ಲಿ ‘ಪಣ’ ಹಾಗು ‘ಹನ’ದಿಂದ ಪ್ರಾರಂಭವಾಗುವ ೩೪ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ‘ಪಣಂಬೂರು’ ಪ್ರಸಿದ್ಧವೇ ಇದೆ. ಅದೇ ಜಿಲ್ಲೆಯಲ್ಲಿ ಪಣಜೆ ಹಾಗೂ ಪಣಜೆಕಲ್ ಎನ್ನುವ ಇನ್ನೂ ಎರಡು ಊರುಗಳಿವೆ. ಗೋವಾದ ರಾಜಧಾನಿಯಾದ ಪಣಜಿಯೂ ಸಹ ಈ ಪಣಬರ ಪ್ರಾಚೀನ ಗ್ರಾಮವೇ ಸರಿ. ಕನ್ನಡದ ಕರಾವಳಿ ಜಿಲ್ಲೆಗಳಲ್ಲಿ ಹಾಗು ಘಟ್ಟಪ್ರದೇಶಗಳಲ್ಲಿ ‘ಜಿ’ ಅಥವಾ ‘ಜೆ’ ಎನ್ನುವದು ದೇಶವಾಚಕ ಪ್ರತ್ಯಯ. ಹೀಗಾಗಿ ಗೋವಾ ಸಹ ಒಂದು ಕಾಲದಲ್ಲಿ ಕನ್ನಡ ಕರಾವಳಿಯೇ ಆಗಿತ್ತು ಎನ್ನುವದು ‘ಪಣಜಿ’ ಎನ್ನುವ ಈ ಸ್ಥಳನಾಮದಿಂದ ಸಿದ್ಧವಾಗುತ್ತದೆ.
ಬೆಂಗಳೂರು ಜಿಲ್ಲೆಯಲ್ಲಿ ಪಣತೂರು ಎನ್ನುವ ಊರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಣಪಿಳ ಎನ್ನುವ ಊರಿದೆ. ಕೋಲಾರ ಜಿಲ್ಲೆಯಲ್ಲಿ ಪಣಸಮಕ್ಕಳಪಳ್ಳಿ ಹಾಗೂ ಮೈಸೂರು ಜಿಲ್ಲೆಯಲ್ಲಿ ಹನಸೋಗೆ ಎನ್ನುವ ಊರುಗಳಿವೆ. ಕರ್ನಾಟಕದ ತುಂಬೆಲ್ಲ ಹರಡಿದ ಈ ಗ್ರಾಮಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:
ಹನವಾಡಿ, ಹನವಾಳ, ಹನಸೂರು, ಹನಾಪುರ, ಹನಕುಂಟೆ, ಹನಕುಣಿ, ಹನಕೋಡು, ಹನಕೋಣ, ಹನಜೋಗ, ಹನಕೋಲ, ಹನಗಂಡಿ, ಹನಗೆರೆ ಇತ್ಯಾದಿ.
ಕರ್ನಾಟಕದಲ್ಲಿ ಮನ್ನ ಅಥವಾ ಮನ ಪದದಿಂದ ಪ್ರಾರಂಭವಾಗುವ ೮೪ ಸ್ಥಳಗಳಿವೆ. ಕೆಲವು ಉದಾಹರಣೆಗಳು: ಮನಗುಂಡಿ, ಮನಜೋಗ, ಮನಂಗಿ, ಮನಕಟ್ಟಿ, ಮನಖೇಡ, ಮನಗಡಿ, ಮನಚೇರ್ಲಾ, ಮನದೂರು, ಮನಗೂಳಿ, ಮನಜೂರು, ಮನಬೂರು, ಮನಿಲಾ, ಮನ್ನಾಪುರ, ಮನ್ನಿಕಟ್ಟಿ, ಮನ್ನಿಕೇರಿ, ಮನ್ನೆ, ಮನ್ನೇರಹಾಳ, ಮನ್ನೇರಿ ಇತ್ಯಾದಿ. ಕರ್ನಾಟಕದ ಹೊರಗೆ ಇರುವ ಸ್ಥಳಗಳಲ್ಲಿ ದೊಡ್ಡ ಸ್ಥಳವೆಂದರೆ ತಮಿಳುನಾಡಿನಲ್ಲಿರುವ ಮನ್ನಾರಗುಡಿ ಹಾಗು ಕೇರಳದಲ್ಲಿರುವ ಮನ್ನಾರಕ್ಕಾಡ. ಮಹಾರಾಷ್ಟ್ರದಲ್ಲಿ ಮನೋರ ಎನ್ನುವ ಊರಿದೆ.
ಆಂಧ್ರದಲ್ಲಿ ಮನ್ನೇರವರ್ಲು ಹಾಗು ಮನ್ನ ಧೋರ್ಲಾ ಎನ್ನುವ ಪರಿಶಿಷ್ಟ ಪಂಗಡಗಳಿವೆ. ಕೇರಳದಲ್ಲಿ ಮನ್ನನ್ ಎನ್ನುವ ಪರಿಶಿಷ್ಟ ಪಂಗಡವಿದೆ. ಈ ಸಮುದಾಯಗಳು ಕೇರಳ, ತಮಿಳುನಾಡು ಹಾಗು ಆಂಧ್ರಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿವೆ.
‘ಕಿನ್ನ’ ಪದದಿಂದ ಪ್ರಾರಂಭವಾಗುವ ಕೇವಲ ೯ ಸ್ಥಳಗಳು ಕರ್ನಾಟಕದಲ್ಲಿವೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ಹಾಳವು ವೈಶಿಷ್ಟ್ಯಪೂರ್ಣವಾದದ್ದು. ಇಲ್ಲಿಯ ಹಸ್ತಕುಶಲ ಗೊಂಬೆಗಳು “ ಕಿನ್ನಾಳದ ಗೊಂಬೆಗಳು” ಎಂದು ತುಂಬ ಪ್ರಸಿದ್ಧವಾದವು. ಇತರ ಕೆಲವು ಗ್ರಾಮಗಳೆಂದರೆ ಕಿನ್ನಿ, ಕಿನಕನಹಳ್ಳಿ, ಕಿನ್ನಾರ, ಕಿನ್ನರಹಳ್ಳಿ, ಕಿನ್ನಿಗೋಳಿ ಇತ್ಯಾದಿ.
ಕಿನ್ನರ ಇದು ಹಿಮಾಚಲಪ್ರದೇಶದಲ್ಲಿರುವ ಪರಿಶಿಷ್ಟ ಜನಾಂಗ. ಮಹಾಭಾರತದಲ್ಲಿ ಕಿನ್ನರರ ಉಲ್ಲೇಖವಿದೆ. ಆರ್ಯರು ಈ ಸಮುದಾಯವನ್ನು ಮೊದಲ ಬಾರಿಗೆ ನೋಡಿದಾಗ ಇವರಿಗೆ “ ಕಿಮ್? ನರ?” ಇವರು ಮನುಷ್ಯರೋ ಎಂದು ಚಕಿತಗೊಂಡು ಕರೆದಿರಬಹುದು. (ಇದರಂತೆ ವಾ+ನರ=ವಾನರ). ಕಿನ್ನರರು ತಮ್ಮ ಹಾಡುಗಾರಿಕೆಗಾಗಿ ಪ್ರಸಿದ್ಧರಾಗಿದ್ದರು. ಇವರ ವಾದ್ಯವಿಶೇಷಕ್ಕೆ ‘ಕಿನ್ನರಿ’ ಎಂದು ಕರೆಯಲಾಗುತ್ತಿದೆ. ಇವರು ಯಾವ ಕಾಲದಲ್ಲಿ ಕರ್ನಾಟಕಕ್ಕೆ ಬಂದರು ತಿಳಿಯದು. ಭಾರತದ ಇತರ ರಾಜ್ಯಗಳಲ್ಲಿಯೂ ಸಹ ಕಿನ್ನ ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ಇದ್ದಿರಬಹುದು.
ಗಂಗ ಪದದಿಂದ ಪ್ರಾರಂಭವಾಗುವ ೧೦೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾಹರಣೆ: ಗಂಗಾವತಿ, ಗಂಗೂರ ಇತ್ಯಾದಿ. ‘ಗಂಗ’ ಕುಲವು ಕರ್ನಾಟಕವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಒಂದು.
ನಲ್ಲ ಪದದಿಂದ ಪ್ರಾರಂಭವಾಗುವ ೮೦ ಸ್ಥಳನಾಮಗಳು ಕರ್ನಾಟಕದಲ್ಲಿವೆ. ನಲ್ಲಮ್ಮದೇವಿ ಈ ಸಮುದಾಯದ ಕುಲದೇವತೆ.
ಹಂಗ ಪದದಿಂದ ಪ್ರಾರಂಭವಾಗುವ ೨೬ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಉದಾ: ಹಂಗರಕಿ.
ಮುಂಬ ಪದದಿಂದ ಪ್ರಾರಂಭವಾಗುವ ಕೇವಲ ೩ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಮೊದಲನೆಯದು ಮಂಡ್ಯ ಜಿಲ್ಲೆಯಲ್ಲಿರುವ ಮುಂಬಹಳ್ಳಿ, ಎರಡನೆಯದು ಚಾಮರಾಜನಗರ ಜಿಲ್ಲೆಯಲ್ಲಿರುವ ಮುಂಬಳ್ಳಿ ಹಾಗು ಮೂರನೆಯದು ಕಲಬುರ್ಗಿ ಜಿಲ್ಲೆಯಲ್ಲಿರುವ ಮುಂಬಾಪುರ. ಕರ್ನಾಟಕದ ಹೊರಗಿರುವ ಪ್ರಸಿದ್ಧ ಊರೆಂದರೆ, ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬಯಿ. ಇದೀಗ ,“ಆಮಚೀ ಮುಂಬಯಿ ” ಎಂದು ಹೇಳುತ್ತ ಬಾಳ ಠಾಕರೆ ಅನುಯಾಯಿಗಳು ಗಲಾಟೆ ಮಾಡುತ್ತಿದ್ದರೂ ಸಹ, ಆ ಮುಂಬಯಿಯು ಮುಂಬ ಸಮುದಾಯಕ್ಕೆ ಸೇರಿದ ಒಂದು ಹಳ್ಳಿಯಾಗಿತ್ತು. Red Indianರ ಆವಾಸಗಳನ್ನು ಬಿಳಿಯರು ಒತ್ತುವರಿ ಮಾಡಿಕೊಂಡ ಹಾಗೆ, ಮುಂಬರ ಆವಾಸಗಳನ್ನು ಇತರರು (--ಇವರಲ್ಲಿ ಆರ್ಯರು ಹಾಗು ಇತರ ಅನಾರ್ಯರು ಸಹ ಸೇರಿದ್ದಾರೆ--) ಒತ್ತುವರಿ ಮಾಡಿಕೊಂಡರು. ಈ ಮುಂಬ ಸಮುದಾಯದವರೊಡನೆ ಕರ್ನಾಟಕಕ್ಕೆ ಇರುವ ಸಂಬಂಧವು , ಕರ್ನಾಟಕದಲ್ಲಿರುವ ಮೂರು ಸ್ಥಳನಾಮಗಳಿಂದ ಸ್ಪಷ್ಟವಾಗುತ್ತದೆ.
ಬೆಂಗಳೂರನ್ನು ‘ಸಿಂಗಾಪುರ’ವನ್ನಾಗಿ ಪರಿವರ್ತಿಸುತ್ತೇನೆಂದು, ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳೊಬ್ಬರು (--ಅವರು ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರೂ ಹೌದು--) ಹೇಳಿಕೊಂಡಿದ್ದರು. ಅದರ ಅವಶ್ಯಕತೆಯೇ ಇಲ್ಲ. ಏಕೆಂದರೆ ಕರ್ನಾಟಕದಲ್ಲಿ ಈಗಾಗಲೇ, ‘ಸಿಂಗಾಪುರ’ ಹೆಸರಿನ ೯ ಊರುಗಳಿವೆ. ಅಲ್ಲದೆ, ‘ಸಿಂಗ’ ಪದದಿಂದ ಪ್ರಾರಂಭವಾಗುವ ೮೮ ಊರುಗಳಿವೆ.
ಉದಾಹರಣೆಗಳು: ಸಿಂಗಾಪುರ, ಸಿಂಗನಕುಪ್ಪೆ, ಸಿಂಗನಹಳ್ಳಿ, ಸಿಂಗಟಾಲೂರ, ಸಿಂಗನಪಾಳ್ಯ, ಸಿಂಗನಹಾಳ, ಸಿಂಗನಳ್ಳಿ, ಸಿಂಗನೋಡಿ, ಸಿಂಗಪಟ್ಣ, ಸಿಂಗದದಿನ್ನಿ, ಸಿಂಗನಕೆರೆ, ಸಿಂಗತೂರು, ಸಿಂಗನಗುತ್ತಿ, ಸಿಂಗನಗುಂಡ, ಸಿಂಗನಕುಪ್ಪೆ,, ಸಿಂಗಸಂದ್ರ ಇತ್ಯಾದಿ.
ಸಿಂಗ ಎನ್ನುವ ಪದ ಉತ್ತರ ಭಾರತದಲ್ಲಿ ವ್ಯಕ್ತಿನಾಮದ ಎದುರಿಗೆ ಜೋಡಿಸಿಕೊಳ್ಳುವ ಪದ, especially ಸಿಖ್ ಸಮುದಾಯದ ಪುರುಷರ ಉತ್ತರಪದ. ಉದಾಹರಣೆ: ಮಿಲ್ಕಾಸಿಂಗ. ಅಸಾಮ ಹಾಗೂ ಮಣಿಪುರ ರಾಜ್ಯಗಳಲ್ಲಿ ಸಿಂಗ ಎನ್ನುವ ಪರಿಶಿಷ್ಟ ಜನಾಂಗವಿದೆ. ಹೀಗಾಗಿ ಈ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ ಇರುವದು ಸಹಜ. ಪಶ್ಚಿಮ ಬಂಗಾಲದಲ್ಲಿ ಸಿಂಗೂರು ಹಾಗು ಸಿಂಗರೇಣಿ ಎನ್ನುವ ಊರುಗಳಿವೆ. ಆದರೆ ಕರ್ನಾಟಕದಲ್ಲಿ ಈ alien(?) ಪದದಿಂದ ಪ್ರಾರಂಭವಾಗುವ ಸ್ಥಳನಾಮಗಳು ದೊರೆಯುವ ಕಾರಣವೇನು? ಸಿಂಗ ಎನ್ನುವ ಸಮುದಾಯ ಇಲ್ಲಿಯೂ ಇದ್ದಿತೆ?
ಮಹಾಭಾರತದಲ್ಲಿ ಅರ್ಜುನನ ದಿಗ್ವಿಜಯದ ಸಮಯದಲ್ಲಿ, ‘ಸಿಂಹಪುರ’ದ ವರ್ಣನೆ ಬರುತ್ತದೆ. ಈ ಸಿಂಹಪುರವು ಈಗಿನ ಕಾಶ್ಮೀರದಲ್ಲಿರುವ ಹಝಾರ ಎನ್ನುವ ಊರಿಗೆ ಹತ್ತಿರವಾಗಿತ್ತು ಎನ್ನಲಾಗುತ್ತಿದೆ. ಬೌದ್ಧರ ಧರ್ಮಗ್ರಂಥ ‘ಮಹಾವಂಶ’ದಲ್ಲಿ ವರ್ಣಿಸಲಾದಂತೆ, ಈ ಸಿಂಹಪುರದ ರಾಜನಾದ ವಿಜಯಸಿಂಹನು ತನ್ನ ೭೦೦ ಜನ ಸಹಚರರೊಡನೆ ತಾಮ್ರಪರ್ಣಿ ಎನ್ನುವ ದ್ವೀಪಕ್ಕೆ ಧರ್ಮಪ್ರಚಾರಕ್ಕಾಗಿ ತೆರಳಿದನು. (ಕ್ರಿ.ಪೂ. ೫೪೩). ಇವನಿಂದಾಗಿಯೆ ಆ ದ್ವೀಪಕ್ಕೆ ಸಿಂಹಳ ದ್ವೀಪವೆನ್ನುವ ಹೆಸರು ಪ್ರಾಪ್ತವಾಯಿತು. ಇವನಂತೆಯೆ ಪೂರ್ವ ಏಶಿಯಾಕ್ಕೆ ತೆರಳಿದ ತಂಡವೊಂದು ಅಲ್ಲಿ ಈಗ ಪ್ರಸಿದ್ಧವಾದ ‘ ಸಿಂಗಾಪುರ ’ವನ್ನು ಸ್ಥಾಪಿಸಿತು. ಅದರಂತೆಯೆ, ಕರ್ನಾಟಕ ಹಾಗು ಭಾರತದ ಇತರತ್ರ ಸಂಚರಿಸಿದ ತಂಡಗಳು ಅಲ್ಲೆಲ್ಲ ಸಿಂಗಾಪುರಗಳನ್ನು ಕಟ್ಟಿರಬಹುದು.
ಕಂಬ ಹೆಸರಿನಿಂದ ಪ್ರಾರಂಭವಾಗುವ ೪೬ ಗ್ರಾಮಗಳು ಕರ್ನಾಟಕದಲ್ಲಿವೆ. (ಉದಾ: ಕಂಬಾಳ, ಕಂಬಂದಿನ್ನೆ, ಕಂಬಗಿ, ಕಂಬದೂರು, ಕಂಬತನಹಳ್ಳಿ, ಕಂಬಳಾಪುರ, ಕಂಬಿಗರ ಇತ್ಯಾದಿ). ಕಂಬ ಎನ್ನುವ ತಮಿಳು ಕವಿಯಿಂದ ಬರೆಯಲಾದ ತಮಿಳು ರಾಮಾಯಣವು ‘ಕಂಬ ರಾಮಾಯಣ’ವೆಂದೇ ಪ್ರಸಿದ್ಧವಿದೆ. ಕಂಬರು ಮೂಲತಃ ಮಧ್ಯ ಏಶಿಯಾದವರು. ವಾಲ್ಮೀಕಿ ರಾಮಾಯಣದಲ್ಲಿ ಶಕ, ಯವನ, ಕಾಂಭೋಜ ಮೊದಲಾದ ಆಕ್ರಮಣಕಾರರ ಬಗೆಗೆ ಉಲ್ಲೇಖವಿದೆ. ಮಹಾಭಾರತ ಮತ್ತು ಗರುಡಪುರಾಣಗಳಲ್ಲಿಯೂ ಸಹ ಇವರ ಬಗೆಗೆ ಉಲ್ಲೇಖವಿದೆ. ಕ್ರಿ.ಪೂ.೬೦ರಲ್ಲಿ ಉಜ್ಜಯನಿಯ ವಿಕ್ರಮಾದಿತ್ಯನು ಈ ಬಾಹ್ಯ ಆಕ್ರಮಣಕಾರರನ್ನು ಪರಾಭವಗೊಳಿಸಿದ ಬಳಿಕ ವಿಕ್ರಮ ಶಕೆಯನ್ನು ಪ್ರಾರಂಭಿಸಿದನು. ಕ್ರಿಸ್ತ ಶಕೆಯ ಆರಂಭದಲ್ಲಿ ಮಥುರೆಯಲ್ಲಿ ತಳವೂರಿದ ಕಂಬ(ಕಾಂಭೋಜ)ರು ದಕ್ಷಿಣಕ್ಕೆ ಚಲಿಸಿದಾಗ ಈಗಿನ ಆಂಧ್ರಪ್ರದೇಶದಲ್ಲಿಯ ‘ಕಮ್ಮ ನಾಡಿನಲ್ಲಿ’ ನೆಲೆಸಿದರೆನ್ನಲಾಗಿದೆ. ಗರುಡ ಪುರಾಣದಲ್ಲಿ ಲಾಟ ಹಾಗು ಕರ್ನಾಟ ದೇಶಗಳಿಗೆ ಹತ್ತಿರವಾಗಿ ‘ಕಾಂಭೋಜ’ ದೇಶವಿದೆ ಎಂದು ವರ್ಣಿಸಲಾಗಿದೆ. ಈ ಜನಾಂಗವೇ ಸಾಗರ ದಾಟಿ ‘ಕಾಂಭೋಜ’ವನ್ನು (ಈಗಿನ ಕಾಂಪೂಚಿಯಾವನ್ನು) ನಿರ್ಮಿಸಿರಬಹುದು.
ಪುರಾಣ ಹಾಗು ಮಹಾಭಾರತಗಳಲ್ಲಿ ವರ್ಣಿತವಾಗಿರುವ ಲಾಟ ದೇಶವು ಈಗಿನ ಗುಜರಾತವನ್ನು ಸೂಚಿಸುತ್ತದೆ. ಆದರೆ, ಈಗಿನ ರಾಜಕೀಯ ಪ್ರದೇಶಗಳಿಗೂ ಪೌರಾಣಿಕ ಕಾಲದ ಸಾಂಸ್ಕೃತಿಕ ಪ್ರದೇಶಗಳಿಗೂ ಸಂಬಂಧವಿಲ್ಲವೆನ್ನುವದನ್ನು ಲಕ್ಷದಲ್ಲಿಡಬೇಕು. ಗುಜರಾತಿ ಭಾಷೆಯು ದ್ರಾವಿಡ ತಳಹದಿಯನ್ನು ಹೊಂದಿದೆ ಎಂದು ಭಾಷಾವಿಜ್ಞಾನಿಗಳು ಹೇಳುತ್ತಾರೆ. ಅಂದ ಮೇಲೆ, ಈಗಿನ ಗುಜರಾತಿಗಳಲ್ಲಿ ಸ್ವಲ್ಪ ಮಟ್ಟಿಗಾದರೂ ಕನ್ನಡ ರಕ್ತವಿರಬಹುದೆಂದು ತೋರುತ್ತದೆ.
ಲಾಟ ಅಥವಾ ಲಾತ ಪದದಿಂದ ಪ್ರಾರಂಭವಾಗುವ ೬ ಗ್ರಾಮಗಳು ಕರ್ನಾಟಕದಲ್ಲಿವೆ. ಮಹಾರಾಷ್ಟ್ರದಲ್ಲಿ ಲಾಢಾ ಲಾತೂರು ಮೊದಲಾದ ಗ್ರಾಮಗಳಿವೆ. ‘ಲಾಡ’ ಎನ್ನುವದು ಕೆಲವು ಕುಟುಂಬಗಳ ಅಡ್ಡ ಹೆಸರೆನ್ನುವದು ಗಮನಾರ್ಹವಾಗಿದೆ.
ಕರ್ನಾಟಕದಲ್ಲಿ ಮುರ ಪದದಿಂದ ಪ್ರಾರಂಭವಾಗುವ ೪೭ ಸ್ಥಳಗಳಿವೆ. ಭಾಗವತದಲ್ಲಿ ಶ್ರೀಕೃಷ್ಣನು ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಿ ‘ಮುರಾರಿ’ ಎನ್ನುವ ಬಿರುದನ್ನು ಪಡೆದನೆಂದು ಹೇಳಲಾಗಿದೆ. ಕುಲಸಂಘರ್ಷದಲ್ಲಿ ಸೋತು ದಕ್ಷಿಣಕ್ಕೆ ಪಲಾಯನಗೈದ ಈ ಸಮುದಾಯವು ಕರ್ನಾಟಕದಲ್ಲಿಯೂ ಸಹ ಬೀಡು ಬಿಟ್ಟಿರಬಹುದು.
(ಉದಾಹರಣೆಗಳು: ಮುರಕಟ್ಟಿ, ಮುರಕಣಿ, ಮುರಕನಾಳ, ಮುರಕುಂಬಿ, ಮುರಕೋಡಿ, ಮುರಡಿ, ಮುರಕಿ, ಮುರನಾಳ, ಮುರಾಳ, ಮುರ್ಕಿ, ಮುರ್ಗ ಇತ್ಯಾದಿ).
Friday, May 30, 2008
ಕನ್ನರು, ಕರರು, ಶಿರರು, ಬಂಕರು, ಅಂಕರು
ಕನ್ನ ಜನಾಂಗದಿಂದಲೇ, ಈ ನಾಡಿಗೆ ಕಂನಾಡು (=ಕರ್ನಾಟಕ) ಎನ್ನುವ ಹೆಸರು ಬಂದಿತು; ಇವರ ನುಡಿಯೇ ಕಂನುಡಿ ಎಂದು ಕೀರ್ತಿಶೇಷ ಶಂ. ಬಾ. ಜೋಶಿಯವರು ಸಿದ್ಧ ಮಾಡಿದ್ದಾರೆ. ‘ಕನ್ನ’ ಪದದಿಂದ ಪ್ರಾರಂಭವಾಗುವ ೧೬೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಥಟ್ಟನೆ ನೆನಪಾಗುವದು ‘ಕನ್ನಂಬಾಡಿ’. ಇತರ ಕೆಲವು ಉದಾಹರಣೆಗಳೆಂದರೆ: ಕಣಕುಂಬಿ, ಕಣಗಲಿ, ಕಣಸೋಗಿ, ಕಣ್ಣಾಟ, ಕನ್ನೂರು, ಕನವಳ್ಳಿ, ಕನಮಡಿ, ಕನ್ನಡಗಿ, ಕನ್ನಸಂದ್ರ, ಖನಗಾವಿ, ಖನ್ನೂರು, ಖನಟ್ಟಿ, ಖನಪೇಠ ಇತ್ಯಾದಿ. ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿಯೂ ಸಹ ಕನ್ನಡ, ಕಾನ್ಹೇರಿ ಮೊದಲಾದ ಊರುಗಳಿವೆ.
ಶ್ರೀ ಶ್ರೀನಿವಾಸ ಕಟ್ಟಿಯವರು ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕನ್ನಡ ಎನ್ನುವ ಊರಿದೆ. ಇಲ್ಲಿಯ ಮೂಲನಿವಾಸಿಗಳು ಕನ್ನಡವನ್ನು ಮಾತನಾಡುತ್ತಾರೆ. ಆದರೆ, ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಈ ಸಮುದಾಯಕ್ಕೆ, ತಾವಾಡುವ ಕನ್ನಡ ಭಾಷೆಯು ಒಂದು ರಾಜ್ಯಭಾಷೆ ಎನ್ನುವದೇ ತಿಳಿಯದು!
ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ
“ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ,
ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು refer ಮಾಡಿದ್ದಾರೆ.
ಉತ್ತರ ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನವನ್ನು ಒಳಗೊಂಡ ಒಂದು ಪ್ರದೇಶಕ್ಕೆ ಒಂದು ಕಾಲದಲ್ಲಿ
“ ಖಾನದೇಶ “ ಎಂದು ಕರೆಯಲಾಗುತ್ತಿತ್ತು. ಈ ಹೆಸರು ಯಾವದೇ “ಖಾನ್” ನಿಂದಾಗಿ ಬಂದಿದ್ದಲ್ಲ.
‘ಕನ್ನದೇಶ’ ವೇ, ‘ಆರೇ’ರ ಬಾಯಿಯಲ್ಲಿ ‘ಖಾನದೇಶ’ವಾಯಿತು. “ಕನ್ನ”ರು “ಖನ್ನಾ” ಆದರು. ಆದುದರಿಂದ, ಕೆಲವು ವರ್ಷಗಳ ಹಿಂದಿನ superstar ‘ರಾಜೇಶ ಖನ್ನಾ’ ನಿಜವಾಗಿಯೂ ‘ರಾಜೇಶ ಕನ್ನ’, ಅಂದರೆ ಕನ್ನಡಿಗ! ಕನ್ನಡಿಗರೆಲ್ಲರೂ ಇದಕ್ಕಾಗಿ ಹೆಮ್ಮೆಪಟ್ಟುಕೊಳ್ಳಬೇಕೊ ಅಥವಾ ಕನ್ನಡಿಗರ metamorphosisಗಾಗಿ ಮರಗಬೇಕೊ?—ಕನ್ನೇಶ್ವರನೇ ಹೇಳಬೇಕು!
ಅಷ್ಟೇಕೆ, ಯಾವ ದೇವನಿಗೆ ಭಾರತೀಯರೆಲ್ಲರೂ “ತಮ್ ವಂದೇ ಜಗದ್ಗುರುಮ್ ” ಎಂದು ಪೂಜಿಸುತ್ತಾರೊ, ಆ ಕೃಷ್ಣನೇ ‘ಕನ್ಹೈಯಾ(=ಕನ್ನಯ್ಯಾ)’ ಅಂದರೆ ಕನ್ನಡಿಗನಲ್ಲವೇ!
(ಮಲೆನಾಡಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳ ಹೆಸರು ‘ಕನ್ನೇಗೌಡ’ ಇತ್ಯಾದಿಯಾಗಿ ಇರುವದನ್ನು ಗಮನಿಸಿ.)
ಅನೇಕ ಆರ್ಯಭಾಷೆಗಳಲ್ಲಿ ಕನ್ನಡ ಪದಗಳು ಸಿಗುತ್ತವೆ. ಉದಾಹರಣೆಗೆ ಮರಾಠಿಯಲ್ಲಿ ಇರುವ ‘ಚಾಂಗಲಾ(=ಒಳ್ಳೆಯವನು)’ ಈ ಪದದ ಮೂಲವಾದ ಚಾಂಗು ಪದವು ಕನ್ನಡ ಪದ. ಇಂದಿಗೂ ಚಾಂಗದೇವನು ಮಹಾರಾಷ್ಟ್ರದಲ್ಲಿ ಆರಾಧಿಸಲ್ಪಡುತ್ತಿರುವ ಒಬ್ಬ ಯೋಗಿಯಾಗಿದ್ದಾನೆ. ಆದರೆ ಸದ್ಯಕ್ಕೆ ಕನ್ನಡದಿಂದಲೇ ಈ ಶಬ್ದ ಮರೆಯಾಗಿದ್ದರಿಂದ, ಚಾಂಗು ಇದು ಮರಾಠಿ ಪದವೆನ್ನುವ ಭ್ರಮೆಯಲ್ಲಿ ಕನ್ನಡಿಗರಿದ್ದಾರೆ.
ಕನ್ನ ಸಮುದಾಯದಂತೆ, ಐತಿಹಾಸಿಕವಾದ ಮತ್ತೊಂದು ಸಮುದಾಯವೆಂದರೆ ‘ಕರ’ ಎನ್ನುವ ಸಮುದಾಯ. ರಾಮಾಯಣದಲ್ಲಿ ಶ್ರೀರಾಮಚಂದ್ರನಿಂದ ಹತರಾದ ರಾಕ್ಷಸರು ಖರ ಹಾಗು ದೂಷಣರು. ಇಲ್ಲಿ ಖರ ಎಂದರೆ ‘ಕರ’ ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಶ್ಚಿಮ ಬಂಗಾಲದಲ್ಲಿರುವ ಪ್ರಸಿದ್ಧ ಪಟ್ಟಣ ಖರಗಪುರವು ಈ ಕರ ಸಮುದಾಯದ ಒಂದು ಕಾಲದ ವಾಸಸ್ಥಾನ.
ಕರ ಪದದಿಂದ ಪ್ರಾರಂಭವಾಗುವ ೭೭ ಗ್ರಾಮಗಳು ಹಾಗು ಗರ ಪದದಿಂದ ಪ್ರಾರಂಭವಾಗುವ ೨೮ ಗ್ರಾಮಗಳು, ಒಟ್ಟಿನಲ್ಲಿ ೧೦೫ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕರಗುಪ್ಪಿ, ಕರಜಗಿ, ಕರಮಡಿ, ಕರಹರಿ, ಕರಬೈಲು, ಕರಗೂರು, ಕರಗೋಡು, ಕರಸುಳ್ಳಿ, ಕರಚಖೇಡ, ಕರಂಬಾಳ, ಕರಗಾವಿ, ಗರಗ,ಗರಗದಕಟ್ಟೆ, ಗರಗದಪಲ್ಲಿ ಇತ್ಯಾದಿ.
ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿ ಕರ್ಹಾಡ(=ಕರಹಾಡ), ಕರ್ಜತ್ತ(=ಕರಜತ್ತ) ಮೊದಲಾದ ಪಟ್ಟಣಗಳಿವೆ.
ಅಷ್ಟೇಕೆ, ಕೊಲ್ಲಾಪುರದ(=ಕೋಲಾಪುರದ), ದೇವಿ ಮಹಾಲಕ್ಷ್ಮಿಗೆ “ ಕರವೀರ ನಿವಾಸಿನಿ” ಎಂದೇ ಕರೆಯಲಾಗುತ್ತಿದೆ.
ಕರ್ನಾಟಕದಲ್ಲಿಯೂ ಸಹ ಕರ ಹಾಗೂ ಕರಕ ಈ ಪದಗಳ ಸಂಬಂಧಿಪದಗಳು ಸಿಗುತ್ತವೆ. ಉದಾಹರಣೆಗೆ: ಕರಕರೆಡ್ಡಿ, ಕರಕಗೋಳ ಇತ್ಯಾದಿ. ಕರಕ ಪದವೇ ಮಾರ್ಪಟ್ಟು ಖರಗವಾಗಿ, ತನ್ನಂತರ “ ಖರ್ಗೆ ” ಆಗಿದೆ. ಕರ್ನಾಟಕದ ಮಾಜಿ ಮಂತ್ರಿ ಖರ್ಗೆಯವರು ಮೂಲತಃ “ಕರಕ”ರು. ಆರೇರ ಬಾಯಿಯಲ್ಲಿ ಅವರು ಖರ್ಗೆ ಆದರು. ಅದರಂತೆ ಈ ಕರಕರು “ಗರಗ” ಸಹ ಆಗಿ ಮಾರ್ಪಟ್ಟಿದ್ದಾರೆ. ಧಾರವಾಡದ ಹತ್ತಿರ ಗರಗ ಎನ್ನುವ ಹಳ್ಳಿಯಿದ್ದು ಅದು ಮೂಲತಃ ಕರಕವೇ ಆಗಿದೆ. ತನ್ನಂತರ ಈ ಗರಗ ಪದದಿಂದ ಘಾರಗಿ ಎನ್ನುವ ಪದ ಉತ್ಪನ್ನವಾಯಿತು. ಘಾರಗಿ ಎನ್ನುವ ಅಡ್ಡ ಹೆಸರಿನ ಅನೇಕರು ಕರ್ನಾಟಕದಲ್ಲಿದ್ದಾರೆ.
ಕರ್ನಾಟಕದ ಹೊರಗೂ ಸಹ ಇಂತಹ ಅನೇಕ ಸ್ಥಳಗಳಿದ್ದು, ಆ ಸ್ಥಳಗಳು ಈ ಆದಿವಾಸಿಗಳ ಒಂದು ಕಾಲದ ನಿವಾಸಗಳೇ ಆಗಿದ್ದವು. ಆರೇರ(=ಆರ್ಯರ) ವಿರುದ್ಧ ನಡೆದ ಹೋರಾಟದಲ್ಲಿ ಸೋತು ಹೋದ ಈ ಸಮುದಾಯಗಳು, ಆರ್ಯಭಾಷೆಯನ್ನು , ಆರ್ಯಸಂಸ್ಕೃತಿಯನ್ನು ಅನುಸರಿಸುವದು, ನಕಲು ಮಾಡುವದು ಅನಿವಾರ್ಯವಾಗಿತ್ತು. ಆದರೆ, ಆರ್ಯರೂ ಸಹ ಅನಾರ್ಯ ಸಂಸ್ಕೃತಿಯ philosophyಯನ್ನು, ಅನೇಕ ರೂಢಿಗಳನ್ನು assimilate ಮಾಡಿಕೊಂಡರು. (ಇದನ್ನೇ ಶಂ.ಬಾ. ಜೋಶಿಯವರು ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ). ಅನೇಕ ಕನ್ನಡ ಪದಗಳನ್ನು ಸಂಸ್ಕೃತವು ಸ್ವೀಕರಿಸಿದೆ. (ಶಂ. ಬಾ. ಜೋಶಿಯವರು ಇಂತಹ ಅನೇಕ ಪದಗಳನ್ನು ತೋರಿಸಿದ್ದಾರೆ. ಉದಾಹರಣೆಗೆ ಕರ ಎನ್ನುವ ಸಂಸ್ಕೃತ ಪದ ಹಾಗು ಪಟ ಎನ್ನುವ ಕನ್ನಡ ಪದಗಳ ಜೋಡಣೆಯಿಂದ ಕರ್ಪಟ(=ಹತ್ತಿ) ಎನ್ನುವ ಪದ ರೂಪಿತವಾಗಿದೆ. ಕರ್ಪಟ=ಕಪಡಾ=ಅರಿವೆ).
ಅರ್ಯ ಸಮುದಾಯಗಳ ಒತ್ತಡ ಹೆಚ್ಚಿದಂತೆ, ಕನ್ನ, ಕರ ಮೊದಲಾದ ಅನೇಕ ಮೂಲ ಸಮುದಾಯಗಳು ದಕ್ಷಿಣಕ್ಕೆ ಗುಳೇ ಹೋದವು. ಭಾಷೆಯಲ್ಲಿ , ಹೆಸರಿನಲ್ಲಿ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡವು. ಚಲಿಸದೇ ಅಲ್ಲಿಯೇ ಉಳಿದಂತಹ ಜನಭಾಗಗಳು, ಶರಣಾಗತರಾದ ಸಮುದಾಯಗಳು ಆರ್ಯೀಕರಣವನ್ನು ಒಪ್ಪಿಕೊಂಡವು.
ಭಾರತದ ತುಂಬೆಲ್ಲ ದೊರೆಯುವ ಇಂತಹ ಮತ್ತೊಂದು ಜನಾಂಗ ಸೂಚಕ ಸ್ಥಳನಾಮವೆಂದರೆ “ ಶಿರ ”. ಕರ್ನಾಟಕದಲ್ಲಿ ಇಂತಹ ೯೯ ಊರುಗಳಿವೆ. ಉದಾಹರಣೆಗಳು: ಶಿರಸಿ, ಶಿರಾಳ, ಶಿರೋಳ, ಶಿರಹಟ್ಟಿ, ಶಿರಸಂಗಿ, ಶಿರಗುಪ್ಪಿ, ಶಿರಕೋಳ, ಶಿರಗುಂಜಿ, ಶಿರಗೋಡ, ಶಿರಡಾ, ಶಿರಡಿ, ಶಿರಡೋಣ, ಶಿರನಾಳ, ಶಿರಪಟ್ಣ, ಶಿರಬಡಗಿ, ಶಿರಡನಹಳ್ಳಿ, ಶಿರಗೂರ, ಶಿರಾ ಇತ್ಯಾದಿ.
ಉತ್ತರ ಪ್ರದೇಶದಲ್ಲಿ ಚಂಡೌಲ ಜಿಲ್ಲೆಯಲ್ಲಿ ಸಹ ಸಿರಸಿ ಎನ್ನುವ ಒಂದು ಊರಿದೆ. ಆಂಧ್ರಪ್ರದೇಶದಲ್ಲಿ ಸಿರಸಿಲ್ಲ ಎನ್ನುವ ಗ್ರಾಮವಿದೆ. ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಗ್ರಾಮವಂತೂ ಅಲ್ಲಿ ಆಗಿ ಹೋದ ಸಾಯಿಬಾಬಾರಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಶಿರಪುಂಜಿ ಎನ್ನುವ ಊರಿದೆ. ಆಸಾಮಿನಲ್ಲಿರುವ ಚಿರಾಪುಂಜಿಯು ಮೂಲತಃ ಶಿರಾಪುಂಜಿಯೆ?—ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಚಿರಾಪುಂಜಿಯ ಮೂಲ ಹೆಸರು ಬೇರೆಯೇ ಆಗಿದ್ದು, ಬ್ರಿಟಿಶ್ ಆಡಳಿತದ ಕಾಲದಲ್ಲಿ ಆ ಗ್ರಾಮಕ್ಕೆ ಚಿರಾಪುಂಜಿ ಎನ್ನುವ ಹೆಸರು ಬಂದಿರುವದರಿಂದ, ಈ ವಿಷಯದಲ್ಲಿ, ಹೆಚ್ಚಿನ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗುವದಿಲ್ಲ.
ಕರ್ನಾಟಕದಲ್ಲಿ ಇರುವ ೯೯ ಗ್ರಾಮಗಳಲ್ಲಿ ಅತಿ ಹೆಚ್ಚಿನ ಶಿರಸೂಚಕ ಗ್ರಾಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. (೧೬). ಅನಂತರದ ಸ್ಥಾನ ದೊರೆಯುವದು ಬೆಳಗಾವಿ ಜಿಲ್ಲೆಗೆ. (೧೫).
ಬಂಕ ಸೂಚಕ ೧೭ ಸ್ಥಳನಾಮಗಳು ಮಾತ್ರ ಕರ್ನಾಟಕದಲ್ಲಿವೆ. ಉದಾಹರಣೆಗಳು: ಬಂಕನಕಟ್ಟೆ, ಬಂಕನಹಳ್ಳಿ, ಬಂಕನಾಳ, ಬಂಕನೇರಿ, ಬಂಕಸಾನ, ಬಂಕಾಪುರ, ಬಂಗಣೆ, ಬಂಗವಾಡಿ ಇತ್ಯಾದಿ. ಅದಾಗ್ಯೂ ಈ ಜನಾಂಗಕ್ಕೆ ಬಹಳ ಮಹತ್ವವಿದೆ. ಪಶ್ಚಿಮ ಬಂಗಾಲದಲ್ಲಿ ಮಲ್ಲರ ರಾಜಧಾನಿಯಾದ ಬಿಷ್ಣುಪುರ ಇರುವದು ಬಂಕೂರು ಎನ್ನುವ ಜಿಲ್ಲೆಯಲ್ಲಿ. ಬಂಕೂರು ಎಂದರೆ ಬಂಕರ ಊರು. ಅಂದ ಮೇಲೆ ಬಂಗಾಲ ಎನ್ನುವದು ಬಂಕಾಲ ಅರ್ಥಾತ್ ಬಂಕರ ಹಾಳ ಎನ್ನುವ ಪದದಿಂದ ಬಂದಿರುವದು ಸಹಜವಾಗಿದೆ. ಪೌರಾಣಿಕ ಕಾಲದಲ್ಲಿ ಇಡೀ ಬಂಗಾಲವೇ(=ಪಶ್ಚಿಮ ಬಂಗಾಲ+ಬಂಗ್ಲಾ ದೇಶ) ಈ ಬಂಕರ ಪ್ರದೇಶವಾಗಿದ್ದು, ಆರ್ಯರ ಆಕ್ರಮಣದ ನಂತರ ಅರ್ಯೀಕರಣಗೊಂಡಿತು. ಹೀಗಾಗಿ ಬಂಗ ದೇಶವು ವಂಗ ದೇಶವಾಗಿ ಮಾರ್ಪಾಡುಗೊಂಡಿತು.
ಬಂಕ ಪದದಿಂದ ವಂಗ ಪದ ಬಂದಂತೆಯೇ, ಅಂಕ ಪದದಿಂದ ಅಂಗ ಪದ ಹುಟ್ಟಿಕೊಂಡಿತು. ಮಹಾಭಾರತದಲ್ಲಿ ಬರುವ ಅಂಗದೇಶಕ್ಕೆ ಕರ್ಣನು ರಾಜನಾಗಿದ್ದನು. ಅಂಕ ಪದದಿಂದ ಪ್ರಾರಂಭವಾಗುವ ೬೯ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ: ಅಂಕೋಲಾ, ಅಂಕಲಗಿ, ಅಂಕನಳ್ಳಿ, ಅಂಕನಾಥಪುರ, ಅಂಕಲಿ, ಅಂಕಾಪುರ, ಅಂಕತಟ್ಟಿ ಇತ್ಯಾದಿ. ಓಡಿಸಾ ರಾಜ್ಯದಲ್ಲಿ ಅಂಗುಲ ಎನ್ನುವ ಪಟ್ಟಣವಿದೆ. ಅಂಗಜನ ಹೆಸರಿನ ಮೂರು ಹಳ್ಳಿಗಳು ಕರ್ನಾಟಕದಲ್ಲಿವೆ. ಅಂಗಜನೆಂದರೆ ವಾನರ ರಾಜನಾದ ವಾಲಿಯ ಮಗನು ಎನ್ನುವದನ್ನು ಗಮನಿಸಬೇಕು.
ಈ ರೀತಿಯಾಗಿ ಭಾರತದ ತುಂಬೆಲ್ಲ ಹರಡಿದ ಅಥವಾ ಚಲಿಸಿದ ಮೂಲಜನಾಂಗಗಳ ಮಾಹಿತಿಯು ಈ ಸ್ಥಳನಾಮಗಳ ಮೂಲಕ ಲಭ್ಯವಾಗುತ್ತದೆ.
ಶ್ರೀ ಶ್ರೀನಿವಾಸ ಕಟ್ಟಿಯವರು ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕನ್ನಡ ಎನ್ನುವ ಊರಿದೆ. ಇಲ್ಲಿಯ ಮೂಲನಿವಾಸಿಗಳು ಕನ್ನಡವನ್ನು ಮಾತನಾಡುತ್ತಾರೆ. ಆದರೆ, ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಈ ಸಮುದಾಯಕ್ಕೆ, ತಾವಾಡುವ ಕನ್ನಡ ಭಾಷೆಯು ಒಂದು ರಾಜ್ಯಭಾಷೆ ಎನ್ನುವದೇ ತಿಳಿಯದು!
ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ
“ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ,
ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು refer ಮಾಡಿದ್ದಾರೆ.
ಉತ್ತರ ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನವನ್ನು ಒಳಗೊಂಡ ಒಂದು ಪ್ರದೇಶಕ್ಕೆ ಒಂದು ಕಾಲದಲ್ಲಿ
“ ಖಾನದೇಶ “ ಎಂದು ಕರೆಯಲಾಗುತ್ತಿತ್ತು. ಈ ಹೆಸರು ಯಾವದೇ “ಖಾನ್” ನಿಂದಾಗಿ ಬಂದಿದ್ದಲ್ಲ.
‘ಕನ್ನದೇಶ’ ವೇ, ‘ಆರೇ’ರ ಬಾಯಿಯಲ್ಲಿ ‘ಖಾನದೇಶ’ವಾಯಿತು. “ಕನ್ನ”ರು “ಖನ್ನಾ” ಆದರು. ಆದುದರಿಂದ, ಕೆಲವು ವರ್ಷಗಳ ಹಿಂದಿನ superstar ‘ರಾಜೇಶ ಖನ್ನಾ’ ನಿಜವಾಗಿಯೂ ‘ರಾಜೇಶ ಕನ್ನ’, ಅಂದರೆ ಕನ್ನಡಿಗ! ಕನ್ನಡಿಗರೆಲ್ಲರೂ ಇದಕ್ಕಾಗಿ ಹೆಮ್ಮೆಪಟ್ಟುಕೊಳ್ಳಬೇಕೊ ಅಥವಾ ಕನ್ನಡಿಗರ metamorphosisಗಾಗಿ ಮರಗಬೇಕೊ?—ಕನ್ನೇಶ್ವರನೇ ಹೇಳಬೇಕು!
ಅಷ್ಟೇಕೆ, ಯಾವ ದೇವನಿಗೆ ಭಾರತೀಯರೆಲ್ಲರೂ “ತಮ್ ವಂದೇ ಜಗದ್ಗುರುಮ್ ” ಎಂದು ಪೂಜಿಸುತ್ತಾರೊ, ಆ ಕೃಷ್ಣನೇ ‘ಕನ್ಹೈಯಾ(=ಕನ್ನಯ್ಯಾ)’ ಅಂದರೆ ಕನ್ನಡಿಗನಲ್ಲವೇ!
(ಮಲೆನಾಡಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳ ಹೆಸರು ‘ಕನ್ನೇಗೌಡ’ ಇತ್ಯಾದಿಯಾಗಿ ಇರುವದನ್ನು ಗಮನಿಸಿ.)
ಅನೇಕ ಆರ್ಯಭಾಷೆಗಳಲ್ಲಿ ಕನ್ನಡ ಪದಗಳು ಸಿಗುತ್ತವೆ. ಉದಾಹರಣೆಗೆ ಮರಾಠಿಯಲ್ಲಿ ಇರುವ ‘ಚಾಂಗಲಾ(=ಒಳ್ಳೆಯವನು)’ ಈ ಪದದ ಮೂಲವಾದ ಚಾಂಗು ಪದವು ಕನ್ನಡ ಪದ. ಇಂದಿಗೂ ಚಾಂಗದೇವನು ಮಹಾರಾಷ್ಟ್ರದಲ್ಲಿ ಆರಾಧಿಸಲ್ಪಡುತ್ತಿರುವ ಒಬ್ಬ ಯೋಗಿಯಾಗಿದ್ದಾನೆ. ಆದರೆ ಸದ್ಯಕ್ಕೆ ಕನ್ನಡದಿಂದಲೇ ಈ ಶಬ್ದ ಮರೆಯಾಗಿದ್ದರಿಂದ, ಚಾಂಗು ಇದು ಮರಾಠಿ ಪದವೆನ್ನುವ ಭ್ರಮೆಯಲ್ಲಿ ಕನ್ನಡಿಗರಿದ್ದಾರೆ.
ಕನ್ನ ಸಮುದಾಯದಂತೆ, ಐತಿಹಾಸಿಕವಾದ ಮತ್ತೊಂದು ಸಮುದಾಯವೆಂದರೆ ‘ಕರ’ ಎನ್ನುವ ಸಮುದಾಯ. ರಾಮಾಯಣದಲ್ಲಿ ಶ್ರೀರಾಮಚಂದ್ರನಿಂದ ಹತರಾದ ರಾಕ್ಷಸರು ಖರ ಹಾಗು ದೂಷಣರು. ಇಲ್ಲಿ ಖರ ಎಂದರೆ ‘ಕರ’ ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಶ್ಚಿಮ ಬಂಗಾಲದಲ್ಲಿರುವ ಪ್ರಸಿದ್ಧ ಪಟ್ಟಣ ಖರಗಪುರವು ಈ ಕರ ಸಮುದಾಯದ ಒಂದು ಕಾಲದ ವಾಸಸ್ಥಾನ.
ಕರ ಪದದಿಂದ ಪ್ರಾರಂಭವಾಗುವ ೭೭ ಗ್ರಾಮಗಳು ಹಾಗು ಗರ ಪದದಿಂದ ಪ್ರಾರಂಭವಾಗುವ ೨೮ ಗ್ರಾಮಗಳು, ಒಟ್ಟಿನಲ್ಲಿ ೧೦೫ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕರಗುಪ್ಪಿ, ಕರಜಗಿ, ಕರಮಡಿ, ಕರಹರಿ, ಕರಬೈಲು, ಕರಗೂರು, ಕರಗೋಡು, ಕರಸುಳ್ಳಿ, ಕರಚಖೇಡ, ಕರಂಬಾಳ, ಕರಗಾವಿ, ಗರಗ,ಗರಗದಕಟ್ಟೆ, ಗರಗದಪಲ್ಲಿ ಇತ್ಯಾದಿ.
ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿ ಕರ್ಹಾಡ(=ಕರಹಾಡ), ಕರ್ಜತ್ತ(=ಕರಜತ್ತ) ಮೊದಲಾದ ಪಟ್ಟಣಗಳಿವೆ.
ಅಷ್ಟೇಕೆ, ಕೊಲ್ಲಾಪುರದ(=ಕೋಲಾಪುರದ), ದೇವಿ ಮಹಾಲಕ್ಷ್ಮಿಗೆ “ ಕರವೀರ ನಿವಾಸಿನಿ” ಎಂದೇ ಕರೆಯಲಾಗುತ್ತಿದೆ.
ಕರ್ನಾಟಕದಲ್ಲಿಯೂ ಸಹ ಕರ ಹಾಗೂ ಕರಕ ಈ ಪದಗಳ ಸಂಬಂಧಿಪದಗಳು ಸಿಗುತ್ತವೆ. ಉದಾಹರಣೆಗೆ: ಕರಕರೆಡ್ಡಿ, ಕರಕಗೋಳ ಇತ್ಯಾದಿ. ಕರಕ ಪದವೇ ಮಾರ್ಪಟ್ಟು ಖರಗವಾಗಿ, ತನ್ನಂತರ “ ಖರ್ಗೆ ” ಆಗಿದೆ. ಕರ್ನಾಟಕದ ಮಾಜಿ ಮಂತ್ರಿ ಖರ್ಗೆಯವರು ಮೂಲತಃ “ಕರಕ”ರು. ಆರೇರ ಬಾಯಿಯಲ್ಲಿ ಅವರು ಖರ್ಗೆ ಆದರು. ಅದರಂತೆ ಈ ಕರಕರು “ಗರಗ” ಸಹ ಆಗಿ ಮಾರ್ಪಟ್ಟಿದ್ದಾರೆ. ಧಾರವಾಡದ ಹತ್ತಿರ ಗರಗ ಎನ್ನುವ ಹಳ್ಳಿಯಿದ್ದು ಅದು ಮೂಲತಃ ಕರಕವೇ ಆಗಿದೆ. ತನ್ನಂತರ ಈ ಗರಗ ಪದದಿಂದ ಘಾರಗಿ ಎನ್ನುವ ಪದ ಉತ್ಪನ್ನವಾಯಿತು. ಘಾರಗಿ ಎನ್ನುವ ಅಡ್ಡ ಹೆಸರಿನ ಅನೇಕರು ಕರ್ನಾಟಕದಲ್ಲಿದ್ದಾರೆ.
ಕರ್ನಾಟಕದ ಹೊರಗೂ ಸಹ ಇಂತಹ ಅನೇಕ ಸ್ಥಳಗಳಿದ್ದು, ಆ ಸ್ಥಳಗಳು ಈ ಆದಿವಾಸಿಗಳ ಒಂದು ಕಾಲದ ನಿವಾಸಗಳೇ ಆಗಿದ್ದವು. ಆರೇರ(=ಆರ್ಯರ) ವಿರುದ್ಧ ನಡೆದ ಹೋರಾಟದಲ್ಲಿ ಸೋತು ಹೋದ ಈ ಸಮುದಾಯಗಳು, ಆರ್ಯಭಾಷೆಯನ್ನು , ಆರ್ಯಸಂಸ್ಕೃತಿಯನ್ನು ಅನುಸರಿಸುವದು, ನಕಲು ಮಾಡುವದು ಅನಿವಾರ್ಯವಾಗಿತ್ತು. ಆದರೆ, ಆರ್ಯರೂ ಸಹ ಅನಾರ್ಯ ಸಂಸ್ಕೃತಿಯ philosophyಯನ್ನು, ಅನೇಕ ರೂಢಿಗಳನ್ನು assimilate ಮಾಡಿಕೊಂಡರು. (ಇದನ್ನೇ ಶಂ.ಬಾ. ಜೋಶಿಯವರು ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ). ಅನೇಕ ಕನ್ನಡ ಪದಗಳನ್ನು ಸಂಸ್ಕೃತವು ಸ್ವೀಕರಿಸಿದೆ. (ಶಂ. ಬಾ. ಜೋಶಿಯವರು ಇಂತಹ ಅನೇಕ ಪದಗಳನ್ನು ತೋರಿಸಿದ್ದಾರೆ. ಉದಾಹರಣೆಗೆ ಕರ ಎನ್ನುವ ಸಂಸ್ಕೃತ ಪದ ಹಾಗು ಪಟ ಎನ್ನುವ ಕನ್ನಡ ಪದಗಳ ಜೋಡಣೆಯಿಂದ ಕರ್ಪಟ(=ಹತ್ತಿ) ಎನ್ನುವ ಪದ ರೂಪಿತವಾಗಿದೆ. ಕರ್ಪಟ=ಕಪಡಾ=ಅರಿವೆ).
ಅರ್ಯ ಸಮುದಾಯಗಳ ಒತ್ತಡ ಹೆಚ್ಚಿದಂತೆ, ಕನ್ನ, ಕರ ಮೊದಲಾದ ಅನೇಕ ಮೂಲ ಸಮುದಾಯಗಳು ದಕ್ಷಿಣಕ್ಕೆ ಗುಳೇ ಹೋದವು. ಭಾಷೆಯಲ್ಲಿ , ಹೆಸರಿನಲ್ಲಿ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡವು. ಚಲಿಸದೇ ಅಲ್ಲಿಯೇ ಉಳಿದಂತಹ ಜನಭಾಗಗಳು, ಶರಣಾಗತರಾದ ಸಮುದಾಯಗಳು ಆರ್ಯೀಕರಣವನ್ನು ಒಪ್ಪಿಕೊಂಡವು.
ಭಾರತದ ತುಂಬೆಲ್ಲ ದೊರೆಯುವ ಇಂತಹ ಮತ್ತೊಂದು ಜನಾಂಗ ಸೂಚಕ ಸ್ಥಳನಾಮವೆಂದರೆ “ ಶಿರ ”. ಕರ್ನಾಟಕದಲ್ಲಿ ಇಂತಹ ೯೯ ಊರುಗಳಿವೆ. ಉದಾಹರಣೆಗಳು: ಶಿರಸಿ, ಶಿರಾಳ, ಶಿರೋಳ, ಶಿರಹಟ್ಟಿ, ಶಿರಸಂಗಿ, ಶಿರಗುಪ್ಪಿ, ಶಿರಕೋಳ, ಶಿರಗುಂಜಿ, ಶಿರಗೋಡ, ಶಿರಡಾ, ಶಿರಡಿ, ಶಿರಡೋಣ, ಶಿರನಾಳ, ಶಿರಪಟ್ಣ, ಶಿರಬಡಗಿ, ಶಿರಡನಹಳ್ಳಿ, ಶಿರಗೂರ, ಶಿರಾ ಇತ್ಯಾದಿ.
ಉತ್ತರ ಪ್ರದೇಶದಲ್ಲಿ ಚಂಡೌಲ ಜಿಲ್ಲೆಯಲ್ಲಿ ಸಹ ಸಿರಸಿ ಎನ್ನುವ ಒಂದು ಊರಿದೆ. ಆಂಧ್ರಪ್ರದೇಶದಲ್ಲಿ ಸಿರಸಿಲ್ಲ ಎನ್ನುವ ಗ್ರಾಮವಿದೆ. ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಗ್ರಾಮವಂತೂ ಅಲ್ಲಿ ಆಗಿ ಹೋದ ಸಾಯಿಬಾಬಾರಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಶಿರಪುಂಜಿ ಎನ್ನುವ ಊರಿದೆ. ಆಸಾಮಿನಲ್ಲಿರುವ ಚಿರಾಪುಂಜಿಯು ಮೂಲತಃ ಶಿರಾಪುಂಜಿಯೆ?—ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಚಿರಾಪುಂಜಿಯ ಮೂಲ ಹೆಸರು ಬೇರೆಯೇ ಆಗಿದ್ದು, ಬ್ರಿಟಿಶ್ ಆಡಳಿತದ ಕಾಲದಲ್ಲಿ ಆ ಗ್ರಾಮಕ್ಕೆ ಚಿರಾಪುಂಜಿ ಎನ್ನುವ ಹೆಸರು ಬಂದಿರುವದರಿಂದ, ಈ ವಿಷಯದಲ್ಲಿ, ಹೆಚ್ಚಿನ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗುವದಿಲ್ಲ.
ಕರ್ನಾಟಕದಲ್ಲಿ ಇರುವ ೯೯ ಗ್ರಾಮಗಳಲ್ಲಿ ಅತಿ ಹೆಚ್ಚಿನ ಶಿರಸೂಚಕ ಗ್ರಾಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. (೧೬). ಅನಂತರದ ಸ್ಥಾನ ದೊರೆಯುವದು ಬೆಳಗಾವಿ ಜಿಲ್ಲೆಗೆ. (೧೫).
ಬಂಕ ಸೂಚಕ ೧೭ ಸ್ಥಳನಾಮಗಳು ಮಾತ್ರ ಕರ್ನಾಟಕದಲ್ಲಿವೆ. ಉದಾಹರಣೆಗಳು: ಬಂಕನಕಟ್ಟೆ, ಬಂಕನಹಳ್ಳಿ, ಬಂಕನಾಳ, ಬಂಕನೇರಿ, ಬಂಕಸಾನ, ಬಂಕಾಪುರ, ಬಂಗಣೆ, ಬಂಗವಾಡಿ ಇತ್ಯಾದಿ. ಅದಾಗ್ಯೂ ಈ ಜನಾಂಗಕ್ಕೆ ಬಹಳ ಮಹತ್ವವಿದೆ. ಪಶ್ಚಿಮ ಬಂಗಾಲದಲ್ಲಿ ಮಲ್ಲರ ರಾಜಧಾನಿಯಾದ ಬಿಷ್ಣುಪುರ ಇರುವದು ಬಂಕೂರು ಎನ್ನುವ ಜಿಲ್ಲೆಯಲ್ಲಿ. ಬಂಕೂರು ಎಂದರೆ ಬಂಕರ ಊರು. ಅಂದ ಮೇಲೆ ಬಂಗಾಲ ಎನ್ನುವದು ಬಂಕಾಲ ಅರ್ಥಾತ್ ಬಂಕರ ಹಾಳ ಎನ್ನುವ ಪದದಿಂದ ಬಂದಿರುವದು ಸಹಜವಾಗಿದೆ. ಪೌರಾಣಿಕ ಕಾಲದಲ್ಲಿ ಇಡೀ ಬಂಗಾಲವೇ(=ಪಶ್ಚಿಮ ಬಂಗಾಲ+ಬಂಗ್ಲಾ ದೇಶ) ಈ ಬಂಕರ ಪ್ರದೇಶವಾಗಿದ್ದು, ಆರ್ಯರ ಆಕ್ರಮಣದ ನಂತರ ಅರ್ಯೀಕರಣಗೊಂಡಿತು. ಹೀಗಾಗಿ ಬಂಗ ದೇಶವು ವಂಗ ದೇಶವಾಗಿ ಮಾರ್ಪಾಡುಗೊಂಡಿತು.
ಬಂಕ ಪದದಿಂದ ವಂಗ ಪದ ಬಂದಂತೆಯೇ, ಅಂಕ ಪದದಿಂದ ಅಂಗ ಪದ ಹುಟ್ಟಿಕೊಂಡಿತು. ಮಹಾಭಾರತದಲ್ಲಿ ಬರುವ ಅಂಗದೇಶಕ್ಕೆ ಕರ್ಣನು ರಾಜನಾಗಿದ್ದನು. ಅಂಕ ಪದದಿಂದ ಪ್ರಾರಂಭವಾಗುವ ೬೯ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ: ಅಂಕೋಲಾ, ಅಂಕಲಗಿ, ಅಂಕನಳ್ಳಿ, ಅಂಕನಾಥಪುರ, ಅಂಕಲಿ, ಅಂಕಾಪುರ, ಅಂಕತಟ್ಟಿ ಇತ್ಯಾದಿ. ಓಡಿಸಾ ರಾಜ್ಯದಲ್ಲಿ ಅಂಗುಲ ಎನ್ನುವ ಪಟ್ಟಣವಿದೆ. ಅಂಗಜನ ಹೆಸರಿನ ಮೂರು ಹಳ್ಳಿಗಳು ಕರ್ನಾಟಕದಲ್ಲಿವೆ. ಅಂಗಜನೆಂದರೆ ವಾನರ ರಾಜನಾದ ವಾಲಿಯ ಮಗನು ಎನ್ನುವದನ್ನು ಗಮನಿಸಬೇಕು.
ಈ ರೀತಿಯಾಗಿ ಭಾರತದ ತುಂಬೆಲ್ಲ ಹರಡಿದ ಅಥವಾ ಚಲಿಸಿದ ಮೂಲಜನಾಂಗಗಳ ಮಾಹಿತಿಯು ಈ ಸ್ಥಳನಾಮಗಳ ಮೂಲಕ ಲಭ್ಯವಾಗುತ್ತದೆ.
Tuesday, May 27, 2008
ಗೊಂಡರು, ಮಂಡರು
ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಗೊಂಡ ಜನಾಂಗವು ಭಾರತದಲ್ಲಿ ಅತ್ಯಂತ ದೊಡ್ಡ ಆದಿವಾಸಿ ಜನಾಂಗವಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಓಡಿಸಾ, ಛತ್ತೀಸಗಡ, ಬಿಹಾರ, ಝಾರಖಂಡ, ಬಂಗಾಲ, ಗುಜರಾತ ಈ ಎಲ್ಲ ರಾಜ್ಯಗಳಲ್ಲಿ ಗೊಂಡ ಜನಾಂಗವು ಹರಡಿಕೊಂಡಿದೆ.
ಗೊಂಡ ಅಥವಾ ಕೊಂಡ ಪದದಿಂದ ಪ್ರಾರಂಭವಾಗುವ ೨೬೮ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕೊಂಡಗುಲಾ, ಕೊಂಡಜ್ಜಿ, ಕೊಂಡರಹಳ್ಳಿ, ಕೊಂಡಲಗಿ, ಕೊಂಡವಾಡಿ, ಕೊಂಡಸಕೊಪ್ಪ, ಕೊಂಡಸಂದ್ರ, ಗೊಂಡನಹಳ್ಳಿ, ಗೊಂಡಗಾವಿ, ಗೊಂಡೇನೂರು ಇತ್ಯಾದಿ.
ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಸಿದ್ಧ ಸಂತ ಬ್ರಹ್ಮಚೈತನ್ಯ ಮಹಾರಾಜರ ಊರ ಹೆಸರು ‘ಗೋಂದಾವಲಿ’. ಇದು ‘ಗೊಂಡಾವಳಿ’ಯ ರೂಪಾಂತರ. ಯಾವ ರೀತಿಯಲ್ಲಿ ‘ಮಲ್ಲಪ್ರಭೆ’ಯು ‘ಮಲಪ್ರಭೆ’ಯಾಯಿತೊ, ಅದೇ ರೀತಿಯಲ್ಲಿ ‘ಗೊಂಡಾವರಿ’ ನದಿ ಸಹ ‘ಗೋದಾವರಿ’ ನದಿಯಾಗಿದೆ. ಅತ್ಯಂತ ದಟ್ಟವಾದ ಅಡವಿಯಲ್ಲಿ ಈ ಗೊಂಡರು ವಾಸಿಸುತ್ತಿದ್ದರಿಂದಲೇ, ದಟ್ಟಡವಿಗೆ ‘ಗೊಂಡಾರಣ್ಯ’ವೆಂದು ಕರೆಯುವ ಪರಿಪಾಠವಾಯಿತು. ಇವರು ಯಾವ ನದಿಯ ಎಡಬಲದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡಿದ್ದರೊ, ಆ ನದಿ ಗೊಂಡಾವರಿ ನದಿಯಾಗಿ, ಬಳಿಕ ಗೋದಾವರಿ ಎಂದು ಆರ್ಯೀಕರಣಗೊಂಡಿತು. ಈ ವಿಶಾಲ ದೇಶಭಾಗವು ‘ಗೊಂಡವನ’ವೆಂದೇ ನಿರ್ದೇಶಿಸಲ್ಪಟ್ಟಿದೆ. ಒಂದು ಕಾಲದಲ್ಲಿ, ಎಲ್ಲ ಖಂಡಗಳೂ ಒಂದೇ ಭೂಪ್ರದೇಶವಾಗಿದ್ದು, ಬಳಿಕ ಒಡೆದು ಹೋಗಿ ಬೇರೆ ಬೇರೆ ಖಂಡಗಳಾದವಷ್ಟೆ. ಈ ಮೂಲಭೂಪ್ರದೇಶಕ್ಕೆ ವಿಜ್ಞಾನಿಗಳು ಕೊಟ್ಟ ಹೆಸರು ‘ಗೊಂಡವನಖಂಡ’.
ನಾಗರು, ಮಲ್ಲರು ಹಾಗು ಕಂದರು ಆರ್ಯರೊಡನೆ ಹೋರಾಡಿ ಸೋತು ಹೋದ ಸಮುದಾಯಗಳಾಗಿವೆ. ಆದರೆ, ಗೊಂಡರು ಮಾತ್ರ ಇಂತಹ ಹೋರಾಟಗಳಿಗೆ ಒಳಗಾಗಿಲ್ಲ. ಇದರ ಕಾರಣ ಹೀಗಿರಬಹುದು. ಆರ್ಯರು ಭಾರತ-ಪ್ರವೇಶವನ್ನು ಮಾಡಿದಾಗ ನಾಗರು, ಮಲ್ಲರು ಹಾಗು ಕಂದರು ಹಿಮಾಲಯದ ಅಡಿಭಾಗದಲ್ಲಿ ಹಾಗು ಗಂಗಾ ನದಿಯ ದಂಡೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಘರ್ಷಣೆ ನಡೆದದ್ದು ಸಹಜ. ನಾಗರು, ಮಲ್ಲರು ಹಾಗು ಕಂದರು ಇವರೆಲ್ಲ ಕೇವಲ ಶಸ್ತ್ರಧಾರಿಗಳು. (ಕೈಯಲ್ಲಿ ಹಿಡಿದು ಹೋರಾಡುವ ಉಪಕರಣಕ್ಕೆ ಶಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಖಡ್ಗ, ಬರ್ಚಿ, ಗದೆ; ಕೈಯಿಂದ ಬಿಡಬಹುದಾದ ಉಪಕರಣಗಳಿಗೆ ಅಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಬಿಲ್ಲು-ಬಾಣ, ಚಕ್ರ.) ಆರ್ಯರು ಅಸ್ತ್ರಧಾರಿಗಳು ಹಾಗು ಅಶ್ವಾರೋಹಿಗಳು. ಹೀಗಾಗಿ ಭಾರತದ ಮೂಲಜನಾಂಗಗಳು ಈ ಘರ್ಷಣೆಯಲ್ಲಿ ಸೋತುಹೋದವು.
(ಭಾರತೀಯರು ಯಾವಾಗಲೂ ಸೋಲುತ್ತಿರುವದಕ್ಕೆ ಇದೊಂದು ಮಹತ್ವದ ಕಾರಣ. ಇವರಲ್ಲಿ ಶೌರ್ಯದ ಕೊರತೆ ಇಲ್ಲ; ಅತ್ಯಾಧುನಿಕ ಆಯುಧಗಳ ಕೊರತೆಯೆ ಇವರ ದೌರ್ಬಲ್ಯ. ಇದನ್ನು ಅರಿತೇ, ಭಾರತದ ಪ್ರಥಮ ಪ್ರಧಾನಿ ನೆಹರೂರವರು ಅಣುಶಕ್ತಿಯ ಉತ್ಪಾದನೆಗೆ—ತನ್ಮೂಲಕ ಅತ್ಯಂತ ರಹಸ್ಯಮಯ ವಾತಾವರಣದಲ್ಲಿ ಅಣ್ವಸ್ತ್ರಗಳ ಉತ್ಪಾದನೆಗೆ—ಚಾಲನೆ ಕೊಟ್ಟರು.)
ಗೊಂಡರು ಗೊಂಡಾರಣ್ಯದಲ್ಲಿ ವಾಸಿಸುತ್ತಿದ್ದರಿಂದ ಆರ್ಯರೊಡನೆ ಇವರಿಗೆ ಹೋರಾಡುವ ಸಂದರ್ಭ ಬರಲಿಲ್ಲ. ರಾಮಚಂದ್ರನ ವನವಾಸದಲ್ಲಿ ಹಾಗು ತನ್ನಂತರ ಸೀತೆಯನ್ನು ಹುಡುಕುತ್ತ ಅಲೆಯುವಾಗ, ಗೊಂಡರ ಜೊತೆಗೆ ರಾಮಚಂದ್ರನ ಗೆಳೆತನವಾಯಿತು. ಶಬರ(=ಭಿಲ್ಲ) ಜನಾಂಗದವರಂತೂ ರಾಮಚಂದ್ರನನ್ನು ಆರಾಧಿಸತೊಡಗಿದರು.
ಗೊಂಡಾರಣ್ಯವನ್ನು ದಾಟಿದ ರಾಮಚಂದ್ರನಿಗೆ ಸಿಕ್ಕವರು ಕಿಷ್ಕಿಂಧೆಯ ವಾನರರು. ಇವರು ಬಹುಶಃ ಕೃತಕ ಬಾಲವನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸುತ್ತಿದ್ದರೆ? ವಾಲಿ ಎನ್ನುವ ಹೆಸರಿನ ಅರ್ಥ ವಾಲ (= ಬಾಲ) ಉಳ್ಳವನು ಎಂದು. ಈ ವಾನರರೂ ಸಹ ಕೇವಲ (ಕಟ್ಟಿಗೆಯ) ಗದಾಧಾರಿಗಳು. ಇವರಲ್ಲಿ (ಕಬ್ಬಿಣದ) ಖಡ್ಗ ಸಹ ಇರಲಿಲ್ಲ. ಹೀಗಾಗಿ ಬಿಲ್ಲು-ಬಾಣ ಉಳ್ಳ ರಾಮಚಂದ್ರನ ಜೊತೆಗೆ ಸುಗ್ರೀವನು ಸಖ್ಯ ಸಾಧಿಸಿ, ದಾಯಾದಿ ವಾಲಿಯನ್ನು ಕೊಲ್ಲಿಸಿದನು.
ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಆದಿವಾಸಿಗಳೆಂದರೆ ಜಾಂಬವರು. ಕರಡಿಯನ್ನು ಪ್ರಾಣಿ-ಲಾಂಛನ (=totem)ವಾಗುಳ್ಳ ಸಮುದಾಯದವರು. ಕರ್ನಾಟಕದಲ್ಲಿ ಆದಿಜಾಂಬವ ಸಮುದಾಯವು ಇನ್ನೂ ಇದೆ.
ರಾವಣನ ಹೆಂಡತಿ ಮಂಡೋದರಿ ‘ಮಂಡ’ ಕುಲದವಳು. ಕರ್ನಾಟಕದಲ್ಲಿ ‘ಮಂಡ’ ಹಾಗು ‘ಮಂಟ’ ಪದದಿಂದ ಪ್ರಾರಂಭವಾಗುವ ೫೮ ಗ್ರಾಮಗಳಿವೆ. ಉದಾಹರಣೆಗಳು: ಮಂಟೂರು, ಮಂಟ್ಯ, ಮಂಡರವಳ್ಳಿ, ಮಂಡ್ಯ, ಮಂಡ್ಯಾಲ ಇತ್ಯಾದಿ. ಕರ್ನಾಟಕದ ಹೊರಗೆ ಮಹಾರಾಷ್ಟ್ರದಲ್ಲಿ ಮಾಂಡವಿ ಎನ್ನುವ ಊರಿದೆ. ಗೋವಾದಲ್ಲಿ ಹರಿಯುವ ಮಾಂಡವಿ ನದಿಯು ಮಂಡ ಮುನಿಯ ಮಗಳೆಂದು ಹೇಳಲಾಗುತ್ತದೆ. ದಮನದಲ್ಲಿಯೂ ಸಹ ಮಾಂಡವಿ ಎನ್ನುವ ನದಿಯಿದೆ. ಭಾರತದ ಹೊರಗಿದ್ದ ಪ್ರಸಿದ್ಧ ಸ್ಥಳವೆಂದರೆ, ಮೈನ್ಮಾರದಲ್ಲಿದ್ದ ‘ಮಂಡಾಲೆ.’ ಬ್ರಿಟಿಶ್ ಸರಕಾರವು ಮಂಡಾಲೆಯ ಸೆರೆಮನೆಯಲ್ಲಿ ಲೋಕಮಾನ್ಯ ತಿಲಕರನ್ನು ೬ವರ್ಷಗಳ ಕಾಲ ಇಟ್ಟಿದ್ದಿತು. ಮಂಡಾಲೆ ಎಂದರೆ ಮಂಡಹಾಳ , ಅರ್ಥಾತ್ ಮಂಡ ಸಮುದಾಯ ವಾಸಿಸುವ ಗ್ರಾಮ. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಮೈನ್ಮಾರದ ಪಶ್ಚಿಮ ಭಾಗದಲ್ಲಿ ಮಂಡ ಸಮುದಾಯವು ಇದ್ದಿರಬೇಕು. ಆರ್ಯರ ಆಕ್ರಮಣದ ಕಾಲದಲ್ಲಿ, ಅಲ್ಲಿಂದ ದಕ್ಷಿಣಕ್ಕೆ ಓಡಿರಬಹುದು.
‘ಲಕ್’ ಈ ದ್ರಾವಿಡ ಪದದ ಅರ್ಥವೇ ದ್ವೀಪ. (ಉದಾಹರಣೆಗೆ ಲಖದೀವ ಎನ್ನುವದು ಲಕ್ ಎನ್ನುವ ದ್ರಾವಿಡ ಪದ ಹಾಗು ದ್ವೀಪ ಎನ್ನುವ ಸಂಸ್ಕೃತ ಪದದ ಕೂಡುಪದ. ಅದೀಗ ಲಕ್ಷದ್ವೀಪ ಎಂದು ನಾಮಕರಣಗೊಂಡಿದೆ.) ಕೆಲವೊಂದು ಸಂಶೋಧಕರು ರಾವಣನು ಇದ್ದದ್ದು ಲಂಕಾದಲ್ಲಿ ಅಲ್ಲ--(ಲಂಕಾ=ಲಕ್=ದ್ವೀಪ); ಆದರೆ ಗೋದಾವರಿ ನದಿಯಲ್ಲಿರುವ ದ್ವೀಪವೊಂದರಲ್ಲಿ ಎಂದು ಹೇಳುತ್ತಾರೆ. ಆದರೆ ರಾಮನು ಕಿಷ್ಕಿಂಧೆಯನ್ನು ಪ್ರವೇಶಿಸಿದ್ದು ಹಾಗು ರಾಮಸೇತುವಿನ ಮೂಲಕ ಸಮುದ್ರವನ್ನು ದಾಟಿದ್ದು, ಇವುಗಳನ್ನು ಪರಿಗಣಿಸಿದರೆ ರಾವಣನ ಲಂಕೆ ಈಗಿನ ಶ್ರೀಲಂಕೆಯೇ ಎಂದು ಭಾಸವಾಗುತ್ತದೆ.
ಗೊಂಡ ಅಥವಾ ಕೊಂಡ ಪದದಿಂದ ಪ್ರಾರಂಭವಾಗುವ ೨೬೮ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕೊಂಡಗುಲಾ, ಕೊಂಡಜ್ಜಿ, ಕೊಂಡರಹಳ್ಳಿ, ಕೊಂಡಲಗಿ, ಕೊಂಡವಾಡಿ, ಕೊಂಡಸಕೊಪ್ಪ, ಕೊಂಡಸಂದ್ರ, ಗೊಂಡನಹಳ್ಳಿ, ಗೊಂಡಗಾವಿ, ಗೊಂಡೇನೂರು ಇತ್ಯಾದಿ.
ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಸಿದ್ಧ ಸಂತ ಬ್ರಹ್ಮಚೈತನ್ಯ ಮಹಾರಾಜರ ಊರ ಹೆಸರು ‘ಗೋಂದಾವಲಿ’. ಇದು ‘ಗೊಂಡಾವಳಿ’ಯ ರೂಪಾಂತರ. ಯಾವ ರೀತಿಯಲ್ಲಿ ‘ಮಲ್ಲಪ್ರಭೆ’ಯು ‘ಮಲಪ್ರಭೆ’ಯಾಯಿತೊ, ಅದೇ ರೀತಿಯಲ್ಲಿ ‘ಗೊಂಡಾವರಿ’ ನದಿ ಸಹ ‘ಗೋದಾವರಿ’ ನದಿಯಾಗಿದೆ. ಅತ್ಯಂತ ದಟ್ಟವಾದ ಅಡವಿಯಲ್ಲಿ ಈ ಗೊಂಡರು ವಾಸಿಸುತ್ತಿದ್ದರಿಂದಲೇ, ದಟ್ಟಡವಿಗೆ ‘ಗೊಂಡಾರಣ್ಯ’ವೆಂದು ಕರೆಯುವ ಪರಿಪಾಠವಾಯಿತು. ಇವರು ಯಾವ ನದಿಯ ಎಡಬಲದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡಿದ್ದರೊ, ಆ ನದಿ ಗೊಂಡಾವರಿ ನದಿಯಾಗಿ, ಬಳಿಕ ಗೋದಾವರಿ ಎಂದು ಆರ್ಯೀಕರಣಗೊಂಡಿತು. ಈ ವಿಶಾಲ ದೇಶಭಾಗವು ‘ಗೊಂಡವನ’ವೆಂದೇ ನಿರ್ದೇಶಿಸಲ್ಪಟ್ಟಿದೆ. ಒಂದು ಕಾಲದಲ್ಲಿ, ಎಲ್ಲ ಖಂಡಗಳೂ ಒಂದೇ ಭೂಪ್ರದೇಶವಾಗಿದ್ದು, ಬಳಿಕ ಒಡೆದು ಹೋಗಿ ಬೇರೆ ಬೇರೆ ಖಂಡಗಳಾದವಷ್ಟೆ. ಈ ಮೂಲಭೂಪ್ರದೇಶಕ್ಕೆ ವಿಜ್ಞಾನಿಗಳು ಕೊಟ್ಟ ಹೆಸರು ‘ಗೊಂಡವನಖಂಡ’.
ನಾಗರು, ಮಲ್ಲರು ಹಾಗು ಕಂದರು ಆರ್ಯರೊಡನೆ ಹೋರಾಡಿ ಸೋತು ಹೋದ ಸಮುದಾಯಗಳಾಗಿವೆ. ಆದರೆ, ಗೊಂಡರು ಮಾತ್ರ ಇಂತಹ ಹೋರಾಟಗಳಿಗೆ ಒಳಗಾಗಿಲ್ಲ. ಇದರ ಕಾರಣ ಹೀಗಿರಬಹುದು. ಆರ್ಯರು ಭಾರತ-ಪ್ರವೇಶವನ್ನು ಮಾಡಿದಾಗ ನಾಗರು, ಮಲ್ಲರು ಹಾಗು ಕಂದರು ಹಿಮಾಲಯದ ಅಡಿಭಾಗದಲ್ಲಿ ಹಾಗು ಗಂಗಾ ನದಿಯ ದಂಡೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಘರ್ಷಣೆ ನಡೆದದ್ದು ಸಹಜ. ನಾಗರು, ಮಲ್ಲರು ಹಾಗು ಕಂದರು ಇವರೆಲ್ಲ ಕೇವಲ ಶಸ್ತ್ರಧಾರಿಗಳು. (ಕೈಯಲ್ಲಿ ಹಿಡಿದು ಹೋರಾಡುವ ಉಪಕರಣಕ್ಕೆ ಶಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಖಡ್ಗ, ಬರ್ಚಿ, ಗದೆ; ಕೈಯಿಂದ ಬಿಡಬಹುದಾದ ಉಪಕರಣಗಳಿಗೆ ಅಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಬಿಲ್ಲು-ಬಾಣ, ಚಕ್ರ.) ಆರ್ಯರು ಅಸ್ತ್ರಧಾರಿಗಳು ಹಾಗು ಅಶ್ವಾರೋಹಿಗಳು. ಹೀಗಾಗಿ ಭಾರತದ ಮೂಲಜನಾಂಗಗಳು ಈ ಘರ್ಷಣೆಯಲ್ಲಿ ಸೋತುಹೋದವು.
(ಭಾರತೀಯರು ಯಾವಾಗಲೂ ಸೋಲುತ್ತಿರುವದಕ್ಕೆ ಇದೊಂದು ಮಹತ್ವದ ಕಾರಣ. ಇವರಲ್ಲಿ ಶೌರ್ಯದ ಕೊರತೆ ಇಲ್ಲ; ಅತ್ಯಾಧುನಿಕ ಆಯುಧಗಳ ಕೊರತೆಯೆ ಇವರ ದೌರ್ಬಲ್ಯ. ಇದನ್ನು ಅರಿತೇ, ಭಾರತದ ಪ್ರಥಮ ಪ್ರಧಾನಿ ನೆಹರೂರವರು ಅಣುಶಕ್ತಿಯ ಉತ್ಪಾದನೆಗೆ—ತನ್ಮೂಲಕ ಅತ್ಯಂತ ರಹಸ್ಯಮಯ ವಾತಾವರಣದಲ್ಲಿ ಅಣ್ವಸ್ತ್ರಗಳ ಉತ್ಪಾದನೆಗೆ—ಚಾಲನೆ ಕೊಟ್ಟರು.)
ಗೊಂಡರು ಗೊಂಡಾರಣ್ಯದಲ್ಲಿ ವಾಸಿಸುತ್ತಿದ್ದರಿಂದ ಆರ್ಯರೊಡನೆ ಇವರಿಗೆ ಹೋರಾಡುವ ಸಂದರ್ಭ ಬರಲಿಲ್ಲ. ರಾಮಚಂದ್ರನ ವನವಾಸದಲ್ಲಿ ಹಾಗು ತನ್ನಂತರ ಸೀತೆಯನ್ನು ಹುಡುಕುತ್ತ ಅಲೆಯುವಾಗ, ಗೊಂಡರ ಜೊತೆಗೆ ರಾಮಚಂದ್ರನ ಗೆಳೆತನವಾಯಿತು. ಶಬರ(=ಭಿಲ್ಲ) ಜನಾಂಗದವರಂತೂ ರಾಮಚಂದ್ರನನ್ನು ಆರಾಧಿಸತೊಡಗಿದರು.
ಗೊಂಡಾರಣ್ಯವನ್ನು ದಾಟಿದ ರಾಮಚಂದ್ರನಿಗೆ ಸಿಕ್ಕವರು ಕಿಷ್ಕಿಂಧೆಯ ವಾನರರು. ಇವರು ಬಹುಶಃ ಕೃತಕ ಬಾಲವನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸುತ್ತಿದ್ದರೆ? ವಾಲಿ ಎನ್ನುವ ಹೆಸರಿನ ಅರ್ಥ ವಾಲ (= ಬಾಲ) ಉಳ್ಳವನು ಎಂದು. ಈ ವಾನರರೂ ಸಹ ಕೇವಲ (ಕಟ್ಟಿಗೆಯ) ಗದಾಧಾರಿಗಳು. ಇವರಲ್ಲಿ (ಕಬ್ಬಿಣದ) ಖಡ್ಗ ಸಹ ಇರಲಿಲ್ಲ. ಹೀಗಾಗಿ ಬಿಲ್ಲು-ಬಾಣ ಉಳ್ಳ ರಾಮಚಂದ್ರನ ಜೊತೆಗೆ ಸುಗ್ರೀವನು ಸಖ್ಯ ಸಾಧಿಸಿ, ದಾಯಾದಿ ವಾಲಿಯನ್ನು ಕೊಲ್ಲಿಸಿದನು.
ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಆದಿವಾಸಿಗಳೆಂದರೆ ಜಾಂಬವರು. ಕರಡಿಯನ್ನು ಪ್ರಾಣಿ-ಲಾಂಛನ (=totem)ವಾಗುಳ್ಳ ಸಮುದಾಯದವರು. ಕರ್ನಾಟಕದಲ್ಲಿ ಆದಿಜಾಂಬವ ಸಮುದಾಯವು ಇನ್ನೂ ಇದೆ.
ರಾವಣನ ಹೆಂಡತಿ ಮಂಡೋದರಿ ‘ಮಂಡ’ ಕುಲದವಳು. ಕರ್ನಾಟಕದಲ್ಲಿ ‘ಮಂಡ’ ಹಾಗು ‘ಮಂಟ’ ಪದದಿಂದ ಪ್ರಾರಂಭವಾಗುವ ೫೮ ಗ್ರಾಮಗಳಿವೆ. ಉದಾಹರಣೆಗಳು: ಮಂಟೂರು, ಮಂಟ್ಯ, ಮಂಡರವಳ್ಳಿ, ಮಂಡ್ಯ, ಮಂಡ್ಯಾಲ ಇತ್ಯಾದಿ. ಕರ್ನಾಟಕದ ಹೊರಗೆ ಮಹಾರಾಷ್ಟ್ರದಲ್ಲಿ ಮಾಂಡವಿ ಎನ್ನುವ ಊರಿದೆ. ಗೋವಾದಲ್ಲಿ ಹರಿಯುವ ಮಾಂಡವಿ ನದಿಯು ಮಂಡ ಮುನಿಯ ಮಗಳೆಂದು ಹೇಳಲಾಗುತ್ತದೆ. ದಮನದಲ್ಲಿಯೂ ಸಹ ಮಾಂಡವಿ ಎನ್ನುವ ನದಿಯಿದೆ. ಭಾರತದ ಹೊರಗಿದ್ದ ಪ್ರಸಿದ್ಧ ಸ್ಥಳವೆಂದರೆ, ಮೈನ್ಮಾರದಲ್ಲಿದ್ದ ‘ಮಂಡಾಲೆ.’ ಬ್ರಿಟಿಶ್ ಸರಕಾರವು ಮಂಡಾಲೆಯ ಸೆರೆಮನೆಯಲ್ಲಿ ಲೋಕಮಾನ್ಯ ತಿಲಕರನ್ನು ೬ವರ್ಷಗಳ ಕಾಲ ಇಟ್ಟಿದ್ದಿತು. ಮಂಡಾಲೆ ಎಂದರೆ ಮಂಡಹಾಳ , ಅರ್ಥಾತ್ ಮಂಡ ಸಮುದಾಯ ವಾಸಿಸುವ ಗ್ರಾಮ. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಮೈನ್ಮಾರದ ಪಶ್ಚಿಮ ಭಾಗದಲ್ಲಿ ಮಂಡ ಸಮುದಾಯವು ಇದ್ದಿರಬೇಕು. ಆರ್ಯರ ಆಕ್ರಮಣದ ಕಾಲದಲ್ಲಿ, ಅಲ್ಲಿಂದ ದಕ್ಷಿಣಕ್ಕೆ ಓಡಿರಬಹುದು.
‘ಲಕ್’ ಈ ದ್ರಾವಿಡ ಪದದ ಅರ್ಥವೇ ದ್ವೀಪ. (ಉದಾಹರಣೆಗೆ ಲಖದೀವ ಎನ್ನುವದು ಲಕ್ ಎನ್ನುವ ದ್ರಾವಿಡ ಪದ ಹಾಗು ದ್ವೀಪ ಎನ್ನುವ ಸಂಸ್ಕೃತ ಪದದ ಕೂಡುಪದ. ಅದೀಗ ಲಕ್ಷದ್ವೀಪ ಎಂದು ನಾಮಕರಣಗೊಂಡಿದೆ.) ಕೆಲವೊಂದು ಸಂಶೋಧಕರು ರಾವಣನು ಇದ್ದದ್ದು ಲಂಕಾದಲ್ಲಿ ಅಲ್ಲ--(ಲಂಕಾ=ಲಕ್=ದ್ವೀಪ); ಆದರೆ ಗೋದಾವರಿ ನದಿಯಲ್ಲಿರುವ ದ್ವೀಪವೊಂದರಲ್ಲಿ ಎಂದು ಹೇಳುತ್ತಾರೆ. ಆದರೆ ರಾಮನು ಕಿಷ್ಕಿಂಧೆಯನ್ನು ಪ್ರವೇಶಿಸಿದ್ದು ಹಾಗು ರಾಮಸೇತುವಿನ ಮೂಲಕ ಸಮುದ್ರವನ್ನು ದಾಟಿದ್ದು, ಇವುಗಳನ್ನು ಪರಿಗಣಿಸಿದರೆ ರಾವಣನ ಲಂಕೆ ಈಗಿನ ಶ್ರೀಲಂಕೆಯೇ ಎಂದು ಭಾಸವಾಗುತ್ತದೆ.
Sunday, May 25, 2008
ಕೋಲರು, ಮುಂಡರು, ನಾಗರು, ಮಹಿಷರು
ದೇವಿಪುರಾಣದಲ್ಲಿ ಕಾಣಸಿಗುವ ಎರಡು ಮಹತ್ವದ ಸಮುದಾಯಗಳೆಂದರೆ ಕೋಲರು ಹಾಗು ಮುಂಡರು. ಕೋಲರು ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಾಡುವ ಭಾಷೆ ತಮಿಳು ಹಾಗು ಕನ್ನಡ ಕೂಡಿದ ಭಾಷೆ. ಓಡಿಸಾದಲ್ಲಿರುವ ಒಂದು ಸಮುದಾಯಕ್ಕೂ ಕೋಲ ಎನ್ನುವ ಹೆಸರಿದೆ. ಈ ಸಮುದಾಯದ ಇತರ ಹೆಸರುಗಳು: ಕುಂಟಮ್, ಕುಡ, ಕೋರ, ಮಿರ್ಧ, ಮೊರ್ಭ, ಬಿರ್ಹೋರ ಮತ್ತು ನಾಗೇಸಿಯ. ಇವರ ಭಾಷೆ ದ್ರಾವಿಡ. ಕರ್ನಾಟಕದಲ್ಲಿಯ ಒಂದು ಸಮುದಾಯಕ್ಕೆ ಕುಡಒಕ್ಕಲಿಗರು ಎಂದು ಕರೆಯಲಾಗುತ್ತಿದೆ. ಇದರಂತೆ ಕೋಲರ ಮತ್ತೊಂದು ಹೆಸರಾದ ನಾಗೇಸಿಯ ಎನ್ನುವದು ದ್ರಾವಿಡ ಸಮುದಾಯಗಳಿಗೂ ನಾಗ ಸಮುದಾಯಕ್ಕೂ ಇರುವ ಸಂಬಂಧವನ್ನು ತೋರಿಸುತ್ತದೆ.
ವೈದಿಕ ದೇವತೆಯಾದ ಇಂದ್ರನು ರಚಿಸಿದ ದೇವಿಸ್ತುತಿಯಲ್ಲಿ ಈ ರೀತಿಯ ವರ್ಣನೆ ಇದೆ:
“ ನಮಸ್ತೇ ಗರುಡಾರೂಢೆ, ಕೋಲಾಸುರ ಭಯಂಕರೀ|
ಸರ್ವದುಃಖಹರೇ ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
ವೈದಿಕ ದೇವತೆಯಾದ ಇಂದ್ರನು ಪಿತೃಪ್ರಧಾನ ಜನಾಂಗದ ದೇವತೆ. ದೇವಿಯು ಮಾತೃಪ್ರಧಾನ ಜನಾಂಗದ ದೇವತೆಯಾಗಿದ್ದಾಳೆ. ಯಾವ ಕಾರಣಕ್ಕಾಗಿ ವೈದಿಕ ಧರ್ಮಾನುಯಾಯಿಗಳಾದ, ಪಿತೃಪ್ರಧಾನ ಆರ್ಯರು, ಅವೈದಿಕ ಸಂಪ್ರದಾಯದ, ಮಾತೃಪ್ರಧಾನ, ಆರ್ಯೇತರ ಜನಾಂಗದ ನೆರವನ್ನು ಪಡೆದರು ಎನ್ನುವದು ನಿಗೂಢವಾಗಿದೆ. ಈ ದೇವಿಯು ಕೋಲ ಸಮುದಾಯವನ್ನಲ್ಲದೆ, ಮುಂಡ ಸಮುದಾಯವನ್ನೂ ಸಹ ಸಂಹರಿಸಿದಳು.
“ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|”
…………………(ಲಲಿತಾ ಸಹಸ್ರನಾಮ)
ಕರ್ನಾಟಕದಲ್ಲಿ ಕೋಲ ಪದದಿಂದ ಪ್ರಾರಂಭವಾಗುವ ೪೫ ಹಾಗು ಕೋರ ಪದದಿಂದ ಪ್ರಾರಂಭವಾಗುವ ೨೨, ಅಂದರೆ ಒಟ್ಟಿನಲ್ಲಿ ೬೭ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಕೋಲಾರ, ಕೋರಮಂಗಲ. ಕರ್ನಾಟಕದ ಹೊರಗೂ ಸಹ ಕೋಲ/ಕೋರ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧ ಹೆಸರೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿಯ ಕೊಲ್ಲಾಪುರ ಹಾಗೂ ಕೋರೆಗಾವ.
ಮುಂಡ ಸಮುದಾಯವು ಸದ್ಯಕ್ಕೆ ಝಾರಖಂಡ, ಛತ್ತೀಸಘಡ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಇವರ ಜನಸಂಖ್ಯೆ ಸುಮಾರು ೨೦ ಲಕ್ಷದಷ್ಟಿದೆ. ಇವರ ಭಾಷೆ ಮುಂಡಾರಿ. ಇದು ಆಸ್ಟ್ರೋ-ಏಶಿಯಾಟಿಕ್ ಭಾಷೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಭಾರತೀಯರಲ್ಲಿ ಮುಂಡ ಜನಾಂಗದ ‘ ಕರಿಯ ಮುಂಡ ’ ಎನ್ನುವವನೇ ಮೊದಲಿಗನು. ಈತ ಮಧ್ಯಪ್ರದೇಶದವನು. ಕರಿಯ ಎನ್ನುವ ಈತನ ಹೆಸರನ್ನು ಗಮನಿಸಿರಿ. ಇದು ದ್ರಾವಿಡ ಹೆಸರು. ಕರ್ನಾಟಕದಲ್ಲಿ ಮುಂಡ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾಹರಣೆಗಳು: ಮುಂಡರಗಿ, ಮುಂಡಗೋಡ, ಮುಂಡರಟ್ಟಿ ಇತ್ಯಾದಿ. ಆದರೆ ಸದ್ಯದಲ್ಲಿ ಮುಂಡ ಜನಾಂಗವು ಕರ್ನಾಟಕದಲ್ಲಿ ಉಳಿದಿಲ್ಲ.
ಜನಾಂಗಸೂಚಕ ಸ್ಥಳನಾಮಗಳಲ್ಲಿ ಮಲ್ಲರ ನಂತರದ ಸ್ಥಾನ ಸಿಗುವದು ನಾಗ ಪದಕ್ಕೆ. ಕರ್ನಾಟಕದಲ್ಲಿ ನಾಗ ಪದದಿಂದ ಪ್ರಾರಂಭವಾಗುವ ೩೧೩ ಗ್ರಾಮಗಳಿವೆ. ಪುರಾಣಗಳ ಪ್ರಕಾರ ನಾಗರೂ ಸಹ ಹಿಮಾಲಯದ ಅಡಿಯಲ್ಲಿದ್ದವರು. ಇಂದ್ರನು ದೇವಿಸ್ತುತಿಯಲ್ಲಿ ದೇವಿಯನ್ನು ‘ಗರುಡಾರೂಢೇ’ ಎಂದು ಬಣ್ಣಿಸುತ್ತಾನೆ. ಗರುಡಪಕ್ಷಿಯು ನಾಗರ ವೈರಿ ಎನ್ನುವದು ಸರ್ವವಿದಿತವಿದೆ. ಈಗಲೂ ಸಹ ಭಾರತದ ಈಶಾನ್ಯ ಭಾಗದಲ್ಲಿ ನಾಗ ಜನಾಂಗದವರಿದ್ದಾರೆ. ಶಂ. ಬಾ. ಜೋಶಿಯವರು ಋಗ್ವೇದಲ್ಲಿ ದೊರೆಯುವ ನಾಗಪ್ರತಿಮೆಗಳ ಬಗೆಗೆ ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಆದರೆ ನಾಗರಿಗೂ ಕರ್ನಾಟಕಕ್ಕೂ ಏನಾದರೂ ಸಂಬಂಧವಿದೆಯೆ? ಕರ್ನಾಟಕದ ಎಲ್ಲ ಭಾಗದಲ್ಲಿಯೂ ನಾಗ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಕೆಲವು ಉದಾಹರಣೆಗಳು: ನಾಗನೂರು, ನಾಗರಭಾವಿ, ನಾಗರಾಳ, ನಾಗಮಂಗಲ ಇತ್ಯಾದಿ.
ಅರ್ಜುನನು ಖಾಂಡವವನದಿಂದ ಉತ್ಪಾಟಿಸಿದ್ದು ನಾಗಕುಲವನ್ನು. ಈ ನಾಗರು ಕರ್ನಾಟಕಕ್ಕೆ ಬಂದು ನೆಲಸಿದರೆ?
ಕರ್ನಾಟಕದಲ್ಲಿ ನಾಗರಖಂಡವೆನ್ನುವ ಪ್ರದೇಶವಿದೆ. ಕರ್ನಾಟಕದ ಕರಾವಳಿ ಹಾಗು ಘಟ್ಟ ಪ್ರದೇಶದಲ್ಲಿ ನಾಗಪೂಜೆಯ ಬಲವಾದ ಸಂಪ್ರದಾಯವಿದೆ. ಇದು ನಾಗ ಜನಾಂಗದ ಕೊಡುಗೆಯೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೆ ನಾಗಪೂಜೆಯನ್ನು ಪುತ್ರಲಾಭಕ್ಕಾಗಿ ಮಾಡುವದನ್ನು ಗಮನಿಸಿರಿ. ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಕಂದ ಶಬ್ದದಿಂದ ಸ್ಕಂದ ಶಬ್ದ ಬಂದಿರುವ ಶಕ್ಯತೆ ಇದೆ. ಕಂದ ಜನಾಂಗದ ನಿವಾಸವೇ ಖಾಂಡವವನವಾಗಿರುವದರಿಂದ, ಕಂದರು ಹಾಗು ನಾಗರು ಪರ್ಯಾಯ ಪದಗಳಾಗಿರುವ ಸಂಭಾವ್ಯತೆ ಕಂಡು ಬರುತ್ತದೆ. ಅಥವಾ ಸೋದರ ಸಮುದಾಯದವರಾಗಿರಬಹುದು. ಆದುದರಿಂದ ನಾಗರು ಕರ್ನಾಟಕಕ್ಕೆ ಬಂದು ನೆಲಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.
ಮಾತೃಸೈನ್ಯದಿಂದ ಸೋಲಿಸಲ್ಪಟ್ಟ ಮತ್ತೊಂದು ಅಸುರಕುಲದವರೆಂದರೆ ಮಹಿಷಕುಲ. ಇವರು ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು. ಕರ್ನಾಟಕದಲ್ಲಿ ಮಹಿಷಿ, ಮಹಿಷವಾಡಗಿ, ಮೈಸಾವಿ(=ಮ್ಹೈಸಾವಿ), ಮೈಸಾಳಗಾ(=ಮ್ಹೈಸಾಳಗಾ), ಮೈಸವಳ್ಳಿ(=ಮ್ಹೈಸವಳ್ಳಿ), ಮೈಸೂರು(=ಮ್ಹೈಸೂರು) ಮೊದಲಾದ ಸ್ಥಳನಾಮಗಳು, ಈ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಸಿದ್ದ ಮಹಿಷ ಸಮುದಾಯವನ್ನು ತೋರಿಸುತ್ತವೆ. ಇದರಂತೆ ಎಮ್ಮೆ ಅಥವಾ ಕೋಣ ಪದದಿಂದ ಪ್ರಾರಂಭವಾಗುವ ೫೮ ಸ್ಥಳಗಳು (ಉದಾಹರಣೆಗೆ ಎಮ್ಮಿಗನೂರು, ಕೋಣಾಜೆ, ಕೋಣಂದೂರು ಇತ್ಯಾದಿ) ಕರ್ನಾಟಕದಲ್ಲಿವೆ.
ಈ ಮಹಿಷ ಕುಲದವರು ಹಾಗು ಆಕಳ ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲರು ಬೇರೆ ಬೇರೆ ಸಮುದಾಯದವರು. ಆಕಳ ಹೈನುಗಾರಿಕೆಯನ್ನು ಸೂಚಿಸುವ ೧೭೧ ಗ್ರಾಮಗಳು ಕರ್ನಾಟಕದಲ್ಲಿವೆ.
(ಉದಾ: ಗೋನಾಳ, ಗೋಹಟ್ಟಿ, ಗೋಕಾವಿ ಇತ್ಯಾದಿ.
ಟಿಪ್ಪಣಿ: ಗೋಗಾವ ಇದು ಗೋಕಾವಿಯಾಗಿ ಮಾರ್ಪಟ್ಟು, ತನ್ನಂತರ ಬ್ರಿಟಿಶ್ ಕಾಲದಲ್ಲಿ ಗೋಕಾಕ ಎಂದು ಬದಲಾವಣೆಯಾಗಿದೆ).
ಕರ್ನಾಟಕದ ಹೊರಗೂ ಸಹ, ಈ ಸ್ಥಳನಾಮಗಳು ದೊರೆಯುತ್ತಿದ್ದು, ‘ಗೋವಾ’ ಇದಕ್ಕೆ ಉತ್ತಮ ಉದಾಹರಣೆ.
ಮಹಿಷ ಕುಲದ ಗ್ರಾಮಗಳು ಮಹಾರಾಷ್ಟ್ರ, ಕರ್ನಾಟಕ ಹಾಗು ಆಂಧ್ರಪ್ರದೇಶದ ದೊಡ್ಡ ಭಾಗವನ್ನು ವ್ಯಾಪಿಸಿಕೊಂಡಿವೆ. ಆಂಧ್ರಪ್ರದೇಶದಲ್ಲಿಯ ‘ಎಮ್ಮಿಗನೂರು’ ಪ್ರಸಿದ್ಧ ಸ್ಥಳ. ಅದರಂತೆ, ಮಹಾರಾಷ್ಟ್ರದಲ್ಲಿಯೂ ಸಹ ‘ಮ್ಹೈಸಾಳ’ ಮೊದಲಾದ ಹೆಸರಿನ ಗ್ರಾಮಗಳಿವೆ. ಕರ್ನಾಟಕದ ಪಶ್ಚಿಮೋತ್ತರ ಭಾಗವನ್ನು ಹಾಗು ಮಹಾರಾಷ್ಟ್ರದ ದಕ್ಷಿಣ ಭಾಗವನ್ನು ಮಹಿಷಮಂಡಲ ಎಂದು ಕರೆಯಲಾಗುತ್ತದೆ.
ಮಾತೃಸೈನ್ಯವು ಆಕಳ ಹೈನುಗಾರಿಕೆಯ ಗೊಲ್ಲ ಕುಲದವರಿಗೆ ಹಾನಿ ಮಾಡದೆ, ಎಮ್ಮೆಯ ಹೈನುಗಾರಿಕೆಯಲ್ಲಿ ತೊಡಗಿಕೊಂಡ ಮಹಿಷ ಕುಲದವರನ್ನು ಸಂಹರಿಸಲು ಕಾರಣವೇನು? ಬಹುಶಃ, ಆರ್ಯ ಜನಾಂಗದವರಿಗೂ, ಮಾತೃಪ್ರಧಾನ ಆರ್ಯೇತರ ಜನಾಂಗದವರಿಗೂ ಒಪ್ಪಂದವಾಗಿರುವ ಸಾಧ್ಯತೆಗಳಿವೆ!
ವೈದಿಕ ದೇವತೆಯಾದ ಇಂದ್ರನು ರಚಿಸಿದ ದೇವಿಸ್ತುತಿಯಲ್ಲಿ ಈ ರೀತಿಯ ವರ್ಣನೆ ಇದೆ:
“ ನಮಸ್ತೇ ಗರುಡಾರೂಢೆ, ಕೋಲಾಸುರ ಭಯಂಕರೀ|
ಸರ್ವದುಃಖಹರೇ ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
ವೈದಿಕ ದೇವತೆಯಾದ ಇಂದ್ರನು ಪಿತೃಪ್ರಧಾನ ಜನಾಂಗದ ದೇವತೆ. ದೇವಿಯು ಮಾತೃಪ್ರಧಾನ ಜನಾಂಗದ ದೇವತೆಯಾಗಿದ್ದಾಳೆ. ಯಾವ ಕಾರಣಕ್ಕಾಗಿ ವೈದಿಕ ಧರ್ಮಾನುಯಾಯಿಗಳಾದ, ಪಿತೃಪ್ರಧಾನ ಆರ್ಯರು, ಅವೈದಿಕ ಸಂಪ್ರದಾಯದ, ಮಾತೃಪ್ರಧಾನ, ಆರ್ಯೇತರ ಜನಾಂಗದ ನೆರವನ್ನು ಪಡೆದರು ಎನ್ನುವದು ನಿಗೂಢವಾಗಿದೆ. ಈ ದೇವಿಯು ಕೋಲ ಸಮುದಾಯವನ್ನಲ್ಲದೆ, ಮುಂಡ ಸಮುದಾಯವನ್ನೂ ಸಹ ಸಂಹರಿಸಿದಳು.
“ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|”
…………………(ಲಲಿತಾ ಸಹಸ್ರನಾಮ)
ಕರ್ನಾಟಕದಲ್ಲಿ ಕೋಲ ಪದದಿಂದ ಪ್ರಾರಂಭವಾಗುವ ೪೫ ಹಾಗು ಕೋರ ಪದದಿಂದ ಪ್ರಾರಂಭವಾಗುವ ೨೨, ಅಂದರೆ ಒಟ್ಟಿನಲ್ಲಿ ೬೭ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಕೋಲಾರ, ಕೋರಮಂಗಲ. ಕರ್ನಾಟಕದ ಹೊರಗೂ ಸಹ ಕೋಲ/ಕೋರ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧ ಹೆಸರೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿಯ ಕೊಲ್ಲಾಪುರ ಹಾಗೂ ಕೋರೆಗಾವ.
ಮುಂಡ ಸಮುದಾಯವು ಸದ್ಯಕ್ಕೆ ಝಾರಖಂಡ, ಛತ್ತೀಸಘಡ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಇವರ ಜನಸಂಖ್ಯೆ ಸುಮಾರು ೨೦ ಲಕ್ಷದಷ್ಟಿದೆ. ಇವರ ಭಾಷೆ ಮುಂಡಾರಿ. ಇದು ಆಸ್ಟ್ರೋ-ಏಶಿಯಾಟಿಕ್ ಭಾಷೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಭಾರತೀಯರಲ್ಲಿ ಮುಂಡ ಜನಾಂಗದ ‘ ಕರಿಯ ಮುಂಡ ’ ಎನ್ನುವವನೇ ಮೊದಲಿಗನು. ಈತ ಮಧ್ಯಪ್ರದೇಶದವನು. ಕರಿಯ ಎನ್ನುವ ಈತನ ಹೆಸರನ್ನು ಗಮನಿಸಿರಿ. ಇದು ದ್ರಾವಿಡ ಹೆಸರು. ಕರ್ನಾಟಕದಲ್ಲಿ ಮುಂಡ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾಹರಣೆಗಳು: ಮುಂಡರಗಿ, ಮುಂಡಗೋಡ, ಮುಂಡರಟ್ಟಿ ಇತ್ಯಾದಿ. ಆದರೆ ಸದ್ಯದಲ್ಲಿ ಮುಂಡ ಜನಾಂಗವು ಕರ್ನಾಟಕದಲ್ಲಿ ಉಳಿದಿಲ್ಲ.
ಜನಾಂಗಸೂಚಕ ಸ್ಥಳನಾಮಗಳಲ್ಲಿ ಮಲ್ಲರ ನಂತರದ ಸ್ಥಾನ ಸಿಗುವದು ನಾಗ ಪದಕ್ಕೆ. ಕರ್ನಾಟಕದಲ್ಲಿ ನಾಗ ಪದದಿಂದ ಪ್ರಾರಂಭವಾಗುವ ೩೧೩ ಗ್ರಾಮಗಳಿವೆ. ಪುರಾಣಗಳ ಪ್ರಕಾರ ನಾಗರೂ ಸಹ ಹಿಮಾಲಯದ ಅಡಿಯಲ್ಲಿದ್ದವರು. ಇಂದ್ರನು ದೇವಿಸ್ತುತಿಯಲ್ಲಿ ದೇವಿಯನ್ನು ‘ಗರುಡಾರೂಢೇ’ ಎಂದು ಬಣ್ಣಿಸುತ್ತಾನೆ. ಗರುಡಪಕ್ಷಿಯು ನಾಗರ ವೈರಿ ಎನ್ನುವದು ಸರ್ವವಿದಿತವಿದೆ. ಈಗಲೂ ಸಹ ಭಾರತದ ಈಶಾನ್ಯ ಭಾಗದಲ್ಲಿ ನಾಗ ಜನಾಂಗದವರಿದ್ದಾರೆ. ಶಂ. ಬಾ. ಜೋಶಿಯವರು ಋಗ್ವೇದಲ್ಲಿ ದೊರೆಯುವ ನಾಗಪ್ರತಿಮೆಗಳ ಬಗೆಗೆ ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಆದರೆ ನಾಗರಿಗೂ ಕರ್ನಾಟಕಕ್ಕೂ ಏನಾದರೂ ಸಂಬಂಧವಿದೆಯೆ? ಕರ್ನಾಟಕದ ಎಲ್ಲ ಭಾಗದಲ್ಲಿಯೂ ನಾಗ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಕೆಲವು ಉದಾಹರಣೆಗಳು: ನಾಗನೂರು, ನಾಗರಭಾವಿ, ನಾಗರಾಳ, ನಾಗಮಂಗಲ ಇತ್ಯಾದಿ.
ಅರ್ಜುನನು ಖಾಂಡವವನದಿಂದ ಉತ್ಪಾಟಿಸಿದ್ದು ನಾಗಕುಲವನ್ನು. ಈ ನಾಗರು ಕರ್ನಾಟಕಕ್ಕೆ ಬಂದು ನೆಲಸಿದರೆ?
ಕರ್ನಾಟಕದಲ್ಲಿ ನಾಗರಖಂಡವೆನ್ನುವ ಪ್ರದೇಶವಿದೆ. ಕರ್ನಾಟಕದ ಕರಾವಳಿ ಹಾಗು ಘಟ್ಟ ಪ್ರದೇಶದಲ್ಲಿ ನಾಗಪೂಜೆಯ ಬಲವಾದ ಸಂಪ್ರದಾಯವಿದೆ. ಇದು ನಾಗ ಜನಾಂಗದ ಕೊಡುಗೆಯೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೆ ನಾಗಪೂಜೆಯನ್ನು ಪುತ್ರಲಾಭಕ್ಕಾಗಿ ಮಾಡುವದನ್ನು ಗಮನಿಸಿರಿ. ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಕಂದ ಶಬ್ದದಿಂದ ಸ್ಕಂದ ಶಬ್ದ ಬಂದಿರುವ ಶಕ್ಯತೆ ಇದೆ. ಕಂದ ಜನಾಂಗದ ನಿವಾಸವೇ ಖಾಂಡವವನವಾಗಿರುವದರಿಂದ, ಕಂದರು ಹಾಗು ನಾಗರು ಪರ್ಯಾಯ ಪದಗಳಾಗಿರುವ ಸಂಭಾವ್ಯತೆ ಕಂಡು ಬರುತ್ತದೆ. ಅಥವಾ ಸೋದರ ಸಮುದಾಯದವರಾಗಿರಬಹುದು. ಆದುದರಿಂದ ನಾಗರು ಕರ್ನಾಟಕಕ್ಕೆ ಬಂದು ನೆಲಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.
ಮಾತೃಸೈನ್ಯದಿಂದ ಸೋಲಿಸಲ್ಪಟ್ಟ ಮತ್ತೊಂದು ಅಸುರಕುಲದವರೆಂದರೆ ಮಹಿಷಕುಲ. ಇವರು ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು. ಕರ್ನಾಟಕದಲ್ಲಿ ಮಹಿಷಿ, ಮಹಿಷವಾಡಗಿ, ಮೈಸಾವಿ(=ಮ್ಹೈಸಾವಿ), ಮೈಸಾಳಗಾ(=ಮ್ಹೈಸಾಳಗಾ), ಮೈಸವಳ್ಳಿ(=ಮ್ಹೈಸವಳ್ಳಿ), ಮೈಸೂರು(=ಮ್ಹೈಸೂರು) ಮೊದಲಾದ ಸ್ಥಳನಾಮಗಳು, ಈ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಸಿದ್ದ ಮಹಿಷ ಸಮುದಾಯವನ್ನು ತೋರಿಸುತ್ತವೆ. ಇದರಂತೆ ಎಮ್ಮೆ ಅಥವಾ ಕೋಣ ಪದದಿಂದ ಪ್ರಾರಂಭವಾಗುವ ೫೮ ಸ್ಥಳಗಳು (ಉದಾಹರಣೆಗೆ ಎಮ್ಮಿಗನೂರು, ಕೋಣಾಜೆ, ಕೋಣಂದೂರು ಇತ್ಯಾದಿ) ಕರ್ನಾಟಕದಲ್ಲಿವೆ.
ಈ ಮಹಿಷ ಕುಲದವರು ಹಾಗು ಆಕಳ ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲರು ಬೇರೆ ಬೇರೆ ಸಮುದಾಯದವರು. ಆಕಳ ಹೈನುಗಾರಿಕೆಯನ್ನು ಸೂಚಿಸುವ ೧೭೧ ಗ್ರಾಮಗಳು ಕರ್ನಾಟಕದಲ್ಲಿವೆ.
(ಉದಾ: ಗೋನಾಳ, ಗೋಹಟ್ಟಿ, ಗೋಕಾವಿ ಇತ್ಯಾದಿ.
ಟಿಪ್ಪಣಿ: ಗೋಗಾವ ಇದು ಗೋಕಾವಿಯಾಗಿ ಮಾರ್ಪಟ್ಟು, ತನ್ನಂತರ ಬ್ರಿಟಿಶ್ ಕಾಲದಲ್ಲಿ ಗೋಕಾಕ ಎಂದು ಬದಲಾವಣೆಯಾಗಿದೆ).
ಕರ್ನಾಟಕದ ಹೊರಗೂ ಸಹ, ಈ ಸ್ಥಳನಾಮಗಳು ದೊರೆಯುತ್ತಿದ್ದು, ‘ಗೋವಾ’ ಇದಕ್ಕೆ ಉತ್ತಮ ಉದಾಹರಣೆ.
ಮಹಿಷ ಕುಲದ ಗ್ರಾಮಗಳು ಮಹಾರಾಷ್ಟ್ರ, ಕರ್ನಾಟಕ ಹಾಗು ಆಂಧ್ರಪ್ರದೇಶದ ದೊಡ್ಡ ಭಾಗವನ್ನು ವ್ಯಾಪಿಸಿಕೊಂಡಿವೆ. ಆಂಧ್ರಪ್ರದೇಶದಲ್ಲಿಯ ‘ಎಮ್ಮಿಗನೂರು’ ಪ್ರಸಿದ್ಧ ಸ್ಥಳ. ಅದರಂತೆ, ಮಹಾರಾಷ್ಟ್ರದಲ್ಲಿಯೂ ಸಹ ‘ಮ್ಹೈಸಾಳ’ ಮೊದಲಾದ ಹೆಸರಿನ ಗ್ರಾಮಗಳಿವೆ. ಕರ್ನಾಟಕದ ಪಶ್ಚಿಮೋತ್ತರ ಭಾಗವನ್ನು ಹಾಗು ಮಹಾರಾಷ್ಟ್ರದ ದಕ್ಷಿಣ ಭಾಗವನ್ನು ಮಹಿಷಮಂಡಲ ಎಂದು ಕರೆಯಲಾಗುತ್ತದೆ.
ಮಾತೃಸೈನ್ಯವು ಆಕಳ ಹೈನುಗಾರಿಕೆಯ ಗೊಲ್ಲ ಕುಲದವರಿಗೆ ಹಾನಿ ಮಾಡದೆ, ಎಮ್ಮೆಯ ಹೈನುಗಾರಿಕೆಯಲ್ಲಿ ತೊಡಗಿಕೊಂಡ ಮಹಿಷ ಕುಲದವರನ್ನು ಸಂಹರಿಸಲು ಕಾರಣವೇನು? ಬಹುಶಃ, ಆರ್ಯ ಜನಾಂಗದವರಿಗೂ, ಮಾತೃಪ್ರಧಾನ ಆರ್ಯೇತರ ಜನಾಂಗದವರಿಗೂ ಒಪ್ಪಂದವಾಗಿರುವ ಸಾಧ್ಯತೆಗಳಿವೆ!
Tuesday, May 20, 2008
ಮಲ್ಲರು ಹಾಗು ಕಂದರು
ಕರ್ನಾಟಕದಲ್ಲಿ ಮಲ್ಲ ಹೆಸರನ್ನು ಸೂಚಿಸುವ ೩೮೦ ಗ್ರಾಮಗಳಿವೆ.
ಕೆಲವು ಉದಾಹರಣೆಗಳು:
ಮಲಂದೂರು, ಮಲಂಬಾ, ಮಲಗಾಳಿ, ಮಲಗೆರೆ, ಮಲಗೋಣ, ಮಲಘಾಣ, ಮಲ್ಲಸಂದ್ರ, ಮಲ್ಲೇಶ್ವರಮ್, ಮಲ್ಲಹಳ್ಳಿ, ಮಲ್ಲಾಪುರ, ಮಲ್ಲೂರು ಇತ್ಯಾದಿ. ‘ಮಲಪ್ರಭಾ’ ಎಂದು ಕರೆಯಲಾಗುವ ನದಿಯು ವಾಸ್ತವಿಕವಾಗಿ ‘ಮಲ್ಲಪ್ರಭಾ’ ನದಿಯೇ ಸೈ. ಮಲ್ಲ ಜನಾಂಗವು ಈ ನದಿಯ ಆಸುಪಾಸಿನಲ್ಲಿ ನೆಲೆಸಿದ್ದರಿಂದಲೇ ಈ ನದಿಗೆ ಮಲ್ಲಪ್ರಭಾ ಎನ್ನುವ ಹೆಸರು ಬಂದಿರಬೇಕು.
ಕರ್ನಾಟಕದಲ್ಲಿ ಮಲ್ಲ ಈ ಪದದ ಅರ್ಥ ಶೂರ, ಜಟ್ಟಿ ಎಂದಾಗುತ್ತದೆ. ಮಲ್ಲಪ್ಪ, ಮಲ್ಲವ್ವ ಇವು ಕರ್ನಾಟಕದಲ್ಲಿ ಜನಪ್ರಿಯ ಹೆಸರುಗಳು. ಮಲ್ಲಯ್ಯನೆನ್ನುವದು ಶಿವನ ಹೆಸರೂ ಹೌದು. ಅಡಗೂಲಜ್ಜಿಯ ಕತೆಗಳಲ್ಲಿ ‘ಮಲಪೂರಿ’ ಎನ್ನುವ ಯಕ್ಷಿಣಿ ಬರುತ್ತಾಳೆ. ಸ್ಕಂದಪುರಾಣದಲ್ಲಿ, ಮಾರ್ಕಂಡೇಯ ಮುನಿಯು ಮಾರ್ತಾಂಡಭೈರವನಿಗೆ, “ಸ್ವಾಮಿನ್, ಮಲ್ಲನಿಷೂದನ!” ಎಂದೇ ಸಂಬೋಧಿಸುತ್ತಾನೆ. ಈ ಮಾರ್ತಾಂಡಭೈರವ ಪದವಿಯನ್ನು ಮಲ್ಲರ ವೈರಿಯಾದ ‘ಖಂಡೋಬಾ’ನಿಗೆ ಕೊಡಲಾಗಿದೆ. ಈತನೇ ‘ಮಲ್ಲಾರಿ ಮಾರ್ತಾಂಡ’. ಈ ಖಂಡೋಬಾ ಅಥವಾ ಖಂಡೇರಾಯನ ಭಕ್ತರು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ವ್ಯಾಪಿಸಿದ್ದಾರೆ.
ಮಲ್ಲ ಪದವು ಸಮುದಾಯಸೂಚಕವಾಗಿದ್ದಂತೆಯೆ, ‘ಖಂಡ’ ಪದವೂ ಸಹ ಸಮುದಾಯಸೂಚಕವಾಗಿದೆ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನ ಸಹಾಯದಿಂದ ‘ಖಾಂಡವ ವನ’ದಲ್ಲಿ ಸರ್ಪದಹನ ಮಾಡಿದ್ದನ್ನು ಗಮನಿಸಿರಿ. ‘ಖಾಂಡವ’ ಪದವು ‘ಖಂಡು ’ ಪದದಿಂದ ಉತ್ಪತ್ತಿಯಾಗಿದೆ. (ಉದಾ: ಪಾಂಡುವಿನಿಂದ ಪಾಂಡವರು ಬಂದಂತೆ). ಕ್ಷತ್ರಿಯರನ್ನೆಲ್ಲ ನಿರ್ನಾಮ ಮಾಡಲು ಹೊರಟ ಪರಶುರಾಮನು ಹಿಡಿದ ಆಯುಧವು ‘ಖಂಡ ಪರಶು’. ಇಲ್ಲಿ ಖಂಡ ಇದಕ್ಕೆ ತುಂಡು ಎನ್ನುವ ಅರ್ಥ ಮಾಡಬಹುದಾದರೂ, ಖಂಡ ಸಮುದಾಯದ specific weapon ಎಂದೂ ಅರ್ಥೈಸಬಹುದು. ಪರಶುರಾಮನ ಜನ್ಮಸ್ಥಳವೂ ಈಗಿನ ಕರ್ನಾಟಕವೇ. ಈತನ ತಾಯಿ ರೇಣುಕೆಯ ದೇವಸ್ಥಾನವಿರುವದು ಮಲಪ್ರಭಾ (=ಮಲ್ಲಪ್ರಭಾ) ನದಿಯ ಬದಿಯಲ್ಲಿರುವ ಸವದತ್ತಿಯಲ್ಲಿ. ಈ ರೀತಿಯಾಗಿ ಈ ಎರಡು ಸಮುದಾಯಗಳು, (ಮಲ್ಲರು ಹಾಗು ಖಂಡರು) ‘ಬೃಹತ್ ಕಂನಾಡಿನ’ ನಿವಾಸಿಗಳು, ಹೋರಾಡುತ್ತಲೇ ಬದುಕಿದ ದಾಯಾದಿಗಳಾಗಿರಬಹುದು.
ಮಹಾಭಾರತದಲ್ಲಿ ಅಂಗ, ವಂಗ ಹಾಗು ಕಳಿಂಗರ ಜೊತೆಗೆ ಮಲ್ಲರ ಬಗೆಗೂ ಸಹ ದಾಖಲಿಸಲಾಗಿದೆ.. ಭೀಮಸೇನ ಹಾಗು ಅರ್ಜುನರು ಉತ್ತರಮಲ್ಲರನ್ನು ಹಾಗು ದಕ್ಷಿಣಮಲ್ಲರನ್ನು ಯುದ್ಧದಲ್ಲಿ ಸೋಲಿಸಿದ ವರ್ಣನೆಯಿದೆ. ಮನುಸ್ಮೃತಿಯಲ್ಲಿ ಮಲ್ಲರನ್ನು ವ್ರಾತ್ಯ (heterodox) ಕ್ಷತ್ರಿಯರೆಂದು ಕರೆಯಲಾಗಿದೆ.
ಕ್ರಿ.ಪೂ. ೬ನೆಯ ಶತಮಾನದಿಂದ ಕ್ರಿ.ಪೂ. ೪ನೆಯ ಶತಮಾನದವರೆಗೆ, ‘ಪಾವಾ’ ಮತ್ತು ‘ಕುಶೀನಗರ’ಗಳಲ್ಲಿ ಮಲ್ಲರ ಗಣರಾಜ್ಯಗಳು ಇದ್ದ ಬಗೆಗೆ ಉಲ್ಲೇಖಗಳಿವೆ. ೧೨ನೆಯ ಶತಮಾನದಲ್ಲಿ ಖಾಸಮಲ್ಲರು ನೇಪಾಳದಲ್ಲಿ ರಾಜರಾಗಿದ್ದರು. ಈ ಖಾಸ ಎನ್ನುವವರು ಕೃಷ್ಣನ ಅನುಯಾಯಿಗಳಾಗಿದ್ದರೆಂದು ಭಾಗವತದಲ್ಲಿ ಹೇಳಲಾಗಿದೆ. (ಕೃಷ್ಣನು ‘ಕನ್ಹೈಯಾ’ ಅಂದರೆ ‘ಕನ್ನಯ್ಯ’ (=ಕನ್ನ ಜನಾಂಗದವ) ಹಾಗು ಗೋಕುಲದಲ್ಲಿದ್ದ ‘ಹಟ್ಟಿಕಾರ’ ಸಮುದಾಯದಲ್ಲಿ ಬೆಳೆದವ ಎನ್ನುದನ್ನು ಗಮನಿಸಬೇಕು). ಮನುಸ್ಮೃತಿಯಲ್ಲಿ ಖಾಸರ ಉಲ್ಲೇಖವಿದೆ. ಇವರು ವ್ರಾತ್ಯ ಕ್ಷತ್ರಿಯರೆಂದು ಅಲ್ಲಿ ಹೇಳಲಾಗಿದೆ.
೧೭ನೆಯ ಹಾಗು ೧೮ನೆಯ ಶತಮಾನದಲ್ಲಿ ಬಂಗಾಲದ ಭಾಗವನ್ನು ಆಳಿದ ಮಲ್ಲರಾಜರ ರಾಜಧಾನಿಯಾದ ವಿಷ್ಣುಪುರವು ಬಂಕೂರು ಎನ್ನುವ ಜಿಲ್ಲೆಯಲ್ಲಿದೆ. (ಕೋಲಕತ್ತಾದಿಂದ ೧೩೨ ಕಿ.ಮಿ. ದೂರದಲ್ಲಿದೆ). ಅಲ್ಲಿ ಮಲ್ಲೇಶ್ವರವೆನ್ನುವ ಗುಡಿ ಸಹ ಇದೆ. (ಬಂಕೂರು ಇದು ಕನ್ನಡ ಪದ).
ಉತ್ತರ ಪ್ರದೇಶದಲ್ಲಿ ಇರುವ ಮಲ್ಲರು ಶೂದ್ರರ ಗುಂಪಿಗೆ ಸೇರಿದವರು. ಇವರನ್ನು ಅಲ್ಲಿ ಜಲಗಾರರು (=ಮೀನುಗಾರರು, ಅಂಬಿಗರು) ಎಂದೂ ಕರೆಯುತ್ತಾರೆ. ಡಕಾಯತರ ರಾಣಿ ಫೂಲನ್ ದೇವಿ ಮಲ್ಲ ಸಮುದಾಯಕ್ಕೆ ಸೇರಿದವಳು. ದಾರ್ಜೀಲಿಂಗದ ಹತ್ತಿರವಿರುವ ಗುಡ್ಡಗಾಡಿನಲ್ಲಿ ಖಾಸೀ ಜನಾಂಗವಿದೆ.
ಇವೆಲ್ಲ ದಾಖಲೆಗಳು ಮಲ್ಲ ಜನಾಂಗದ ಪ್ರಾಚೀನತೆಯನ್ನು ತೋರಿಸುತ್ತವೆ. ರಾಜಕೀಯ ಪ್ರಾಬಲ್ಯವಿದ್ದಾಗ ಕ್ಷತ್ರಿಯರಾಗುತ್ತಿದ್ದ ಈ ಸಮುದಾಯವು, ರಾಜಕೀಯವಾಗಿ ನಿರ್ಬಲರಾದಾಗ ಶೂದ್ರರ ಗುಂಪಿಗೆ ಜಮೆಯಾಗುತ್ತಿತ್ತು.
ಹಿಮಾಲಯದ ಅಡಿಭಾಗದಲ್ಲಿ ಹಾಗು ಬಂಗಾಲದಲ್ಲಿ ರಾಜ್ಯವಾಳಿದ ಈ ಸಮುದಾಯವು , ಅಲ್ಲಿ ರಾಜಕೀಯ ವೈರವನ್ನೆದುರಿಸಲಾಗದೆ, ದಕ್ಷಿಣಕ್ಕೆ ಬಂದಿತೆ? ಹಾಗು ಕರ್ನಾಟಕದಲ್ಲಿ ನೆಲೆ ನಿಂದಿತೆ?
ಉತ್ತರ ಭಾರತದಲ್ಲಿಯೇ ಉಳಿದುಕೊಂಡ ಕನ್ನಡ ಜನಾಂಗಗಳು ಕಾಲಕ್ರಮೇಣ ಕನ್ನಡವನ್ನು ಬಿಟ್ಟುಬಿಟ್ಟು , ಆರ್ಯಭಾಷೆಯನ್ನು ಅಂಗೀಕರಿಸಿದಂತೆಯೆ, ಅಲ್ಲಿಯ ಮಲ್ಲರೂ ಸಹ ಕನ್ನಡವನ್ನು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ನೆಲೆಸಿದ ಮಲ್ಲರು ಮಾತ್ರ ಕನ್ನಡವನ್ನು ಇಟ್ಟುಕೊಂಡಿರಬೇಕು.
‘ಖಂಡ’ ಅಥವಾ ಕಂದ ಪದವನ್ನು ಸೂಚಿಸುವ ೫೪ ಗ್ರಾಮಗಳು ಕರ್ನಾಟಕದಲ್ಲಿವೆ.
ಕೆಲವು ಉದಾಹರಣೆಗಳು:
ಕಂದಕೂರು, ಕಂದಗಲ್, ಕಂದಗೋಳ, ಕಂದಾವರ, ಕಂದೂರು, ಕಂದ್ರಾಜಿ, ಖಂಡಾಲಾ, ಖಂದೋಡಿ, ಖಂಡೇರಾಯನಪಳ್ಳಿ ಇತ್ಯಾದಿ. ಇದಕ್ಕಿಂತ ಮುಖ್ಯವಾಗಿ, ಕರ್ನಾಟಕದ ಹೊರಗೂ ಇಂತಹ ಅನೇಕ ಸ್ಥಳಗಳಿವೆ. ಅಫಘಾನಿಸ್ತಾನದಲ್ಲಿರುವ ‘ಕಂದಹಾರ’ವಂತೂ ಜಗತ್ಪ್ರಸಿದ್ಧವಿದೆ. ಈ ಪದವು ಕಂದ ಹಾಗು ಹಾರ ಎನ್ನುವ ಎರಡು ಪದಗಳಿಂದ ಕೂಡಿದ ಸಂಯುಕ್ತ ಪದವಾಗಿದ್ದು, ಹಾರ (=ಹಳ್ಳಿ) ಇದು ಕನ್ನಡ ಪದ ಎನ್ನುವದನ್ನು ಲಕ್ಷಿಸಬೇಕು. ಕಂದಹಾರವೆನ್ನುವ ಒಂದು ಪಟ್ಟಣವೂ ಸಹ ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿದೆ. ಮುಂಬಯಿ ನಗರದ ಭಾಗವಾದ ‘ಕಾಂದೀವ್ಲಿ’ ಇದು ‘ಕಂದವಳ್ಳಿ’ಯ ಹಾಗು ‘ಖಂಡಾಲಾ’ ಇದು ‘ಖಂಡಹಾಳ’ದ ಮರಾಠೀಕರಣವೆನ್ನುವದು ಸ್ಪಷ್ಟವಿದೆ. ಈ ರೀತಿಯಾಗಿ ಅಫಘಾನಿಸ್ತಾನ ಹಾಗು ಮಧ್ಯಭಾರತದಲ್ಲಿ ನೆಲೆಸಿದ್ದ ಈ ಸಮುದಾಯವು , ಆರ್ಯರ ಆಕ್ರಮಣದಿಂದಾಗಿ, ಗುಳೆ ಹೊರಟು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ನೆಲೆಸಿದರು. ಅಲ್ಲಿಯೂ ಸಹ ಕಂದರಿಗೆ ಹಾಗು ಮಲ್ಲರಿಗೆ ಪರಸ್ಪರ ಹೊಡೆದಾಟಗಳು ನಡದೇ ಇದ್ದವು.
ಈ ಕಂದರ ದೇವತೆಯು ‘ಕಂದಸ್ವಾಮಿ’. ಈತನು ಕಾಲಾಂತರದಲ್ಲಿ ಸಂಸ್ಕೃತೀಕರಣದಿಂದ ‘ಸ್ಕಂದ’ನಾಗಿರಬಹುದು. ಈತನ ವಾಹನ ನವಿಲು, ಅಂದರೆ ಹಾವಿನ ವೈರಿ. ಖಾಂಡವ ವನವನ್ನು ಅರ್ಜುನನು ಸುಟ್ಟಾಗ ಸತ್ತವರೆಲ್ಲರೂ ನಾಗರು. (=ಸರ್ಪಗಳು). ಅಂದರೆ, ಕಂದರ ನೆಲೆಯಾದ ಖಾಂಡವವನವನ್ನು ಅತಿಕ್ರಮಿಸಿದ ನಾಗರನ್ನು ಹೊರದೂಡಲಿಕ್ಕಾಗಿ, ಖಂಡರು ಅರ್ಜುನನ ಸಹಾಯವನ್ನು ಕೋರಿರಬಹುದು.
ಕಂದ ಎನ್ನುವ ಹೆಸರನ್ನು ಹೊಂದಿದ ಆದಿವಾಸಿ ಸಮುದಾಯವು ಈಗ ಕೇವಲ ಆಂಧ್ರಪ್ರದೇಶ ಹಾಗು ಓಡಿಸಾ ರಾಜ್ಯಗಳಲ್ಲಿ ಮಾತ್ರ ಸಿಗುತ್ತದೆ. ಈ ಕಂದರ ಭಾಷೆ ತೆಲಗು ಹಾಗು ಗೊಂಡಿ ಭಾಷೆಯನ್ನು ಹೋಲುತ್ತದೆ.
ಇದಿಷ್ಟು ಮಲ್ಲ ಹಾಗು ಕಂದ ಸಮುದಾಯಗಳ ಕತೆ. ಪೂರ್ವ-ದ್ರವಿಡ ಭಾಷೆಯನ್ನಾಡುತ್ತಿದ್ದ ಈ ಸಮುದಾಯಗಳು, ಕಾಲಕ್ರಮದಲ್ಲಿ ಹಿಮಾಲಯದ ಅಡಿಭಾಗದಿಂದ ದಕ್ಷಿಣಕ್ಕೆ ಸರಿಯುತ್ತ, ಕರ್ನಾಟಕದಲ್ಲಿ ಅಂತಿಮವಾಗಿ ತಳವೂರಿದ ಕತೆ. ಭಾರತೀಯ ಪುರಾಣಗಳು ವಾಸ್ತವದಲ್ಲಿ ಇಲ್ಲಿಯ ಮೂಲ ಜನಾಂಗಗಳ ಇತಿಹಾಸವೇ ಆಗಿವೆ. ಪುರಾಣ ಈ ಪದದ ಅರ್ಥವೇ ಹಳೆಯ ಎಂದಾಗುತ್ತದೆ. ಈ ಪುರಾಣಗಳನ್ನು ಸೋಸಿದಾಗ ಐತಿಹಾಸಿಕ ಸತ್ಯದ ಹೊಳಹು ಗೋಚರಿಸುತ್ತದೆ.
ಕೆಲವು ಉದಾಹರಣೆಗಳು:
ಮಲಂದೂರು, ಮಲಂಬಾ, ಮಲಗಾಳಿ, ಮಲಗೆರೆ, ಮಲಗೋಣ, ಮಲಘಾಣ, ಮಲ್ಲಸಂದ್ರ, ಮಲ್ಲೇಶ್ವರಮ್, ಮಲ್ಲಹಳ್ಳಿ, ಮಲ್ಲಾಪುರ, ಮಲ್ಲೂರು ಇತ್ಯಾದಿ. ‘ಮಲಪ್ರಭಾ’ ಎಂದು ಕರೆಯಲಾಗುವ ನದಿಯು ವಾಸ್ತವಿಕವಾಗಿ ‘ಮಲ್ಲಪ್ರಭಾ’ ನದಿಯೇ ಸೈ. ಮಲ್ಲ ಜನಾಂಗವು ಈ ನದಿಯ ಆಸುಪಾಸಿನಲ್ಲಿ ನೆಲೆಸಿದ್ದರಿಂದಲೇ ಈ ನದಿಗೆ ಮಲ್ಲಪ್ರಭಾ ಎನ್ನುವ ಹೆಸರು ಬಂದಿರಬೇಕು.
ಕರ್ನಾಟಕದಲ್ಲಿ ಮಲ್ಲ ಈ ಪದದ ಅರ್ಥ ಶೂರ, ಜಟ್ಟಿ ಎಂದಾಗುತ್ತದೆ. ಮಲ್ಲಪ್ಪ, ಮಲ್ಲವ್ವ ಇವು ಕರ್ನಾಟಕದಲ್ಲಿ ಜನಪ್ರಿಯ ಹೆಸರುಗಳು. ಮಲ್ಲಯ್ಯನೆನ್ನುವದು ಶಿವನ ಹೆಸರೂ ಹೌದು. ಅಡಗೂಲಜ್ಜಿಯ ಕತೆಗಳಲ್ಲಿ ‘ಮಲಪೂರಿ’ ಎನ್ನುವ ಯಕ್ಷಿಣಿ ಬರುತ್ತಾಳೆ. ಸ್ಕಂದಪುರಾಣದಲ್ಲಿ, ಮಾರ್ಕಂಡೇಯ ಮುನಿಯು ಮಾರ್ತಾಂಡಭೈರವನಿಗೆ, “ಸ್ವಾಮಿನ್, ಮಲ್ಲನಿಷೂದನ!” ಎಂದೇ ಸಂಬೋಧಿಸುತ್ತಾನೆ. ಈ ಮಾರ್ತಾಂಡಭೈರವ ಪದವಿಯನ್ನು ಮಲ್ಲರ ವೈರಿಯಾದ ‘ಖಂಡೋಬಾ’ನಿಗೆ ಕೊಡಲಾಗಿದೆ. ಈತನೇ ‘ಮಲ್ಲಾರಿ ಮಾರ್ತಾಂಡ’. ಈ ಖಂಡೋಬಾ ಅಥವಾ ಖಂಡೇರಾಯನ ಭಕ್ತರು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ವ್ಯಾಪಿಸಿದ್ದಾರೆ.
ಮಲ್ಲ ಪದವು ಸಮುದಾಯಸೂಚಕವಾಗಿದ್ದಂತೆಯೆ, ‘ಖಂಡ’ ಪದವೂ ಸಹ ಸಮುದಾಯಸೂಚಕವಾಗಿದೆ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನ ಸಹಾಯದಿಂದ ‘ಖಾಂಡವ ವನ’ದಲ್ಲಿ ಸರ್ಪದಹನ ಮಾಡಿದ್ದನ್ನು ಗಮನಿಸಿರಿ. ‘ಖಾಂಡವ’ ಪದವು ‘ಖಂಡು ’ ಪದದಿಂದ ಉತ್ಪತ್ತಿಯಾಗಿದೆ. (ಉದಾ: ಪಾಂಡುವಿನಿಂದ ಪಾಂಡವರು ಬಂದಂತೆ). ಕ್ಷತ್ರಿಯರನ್ನೆಲ್ಲ ನಿರ್ನಾಮ ಮಾಡಲು ಹೊರಟ ಪರಶುರಾಮನು ಹಿಡಿದ ಆಯುಧವು ‘ಖಂಡ ಪರಶು’. ಇಲ್ಲಿ ಖಂಡ ಇದಕ್ಕೆ ತುಂಡು ಎನ್ನುವ ಅರ್ಥ ಮಾಡಬಹುದಾದರೂ, ಖಂಡ ಸಮುದಾಯದ specific weapon ಎಂದೂ ಅರ್ಥೈಸಬಹುದು. ಪರಶುರಾಮನ ಜನ್ಮಸ್ಥಳವೂ ಈಗಿನ ಕರ್ನಾಟಕವೇ. ಈತನ ತಾಯಿ ರೇಣುಕೆಯ ದೇವಸ್ಥಾನವಿರುವದು ಮಲಪ್ರಭಾ (=ಮಲ್ಲಪ್ರಭಾ) ನದಿಯ ಬದಿಯಲ್ಲಿರುವ ಸವದತ್ತಿಯಲ್ಲಿ. ಈ ರೀತಿಯಾಗಿ ಈ ಎರಡು ಸಮುದಾಯಗಳು, (ಮಲ್ಲರು ಹಾಗು ಖಂಡರು) ‘ಬೃಹತ್ ಕಂನಾಡಿನ’ ನಿವಾಸಿಗಳು, ಹೋರಾಡುತ್ತಲೇ ಬದುಕಿದ ದಾಯಾದಿಗಳಾಗಿರಬಹುದು.
ಮಹಾಭಾರತದಲ್ಲಿ ಅಂಗ, ವಂಗ ಹಾಗು ಕಳಿಂಗರ ಜೊತೆಗೆ ಮಲ್ಲರ ಬಗೆಗೂ ಸಹ ದಾಖಲಿಸಲಾಗಿದೆ.. ಭೀಮಸೇನ ಹಾಗು ಅರ್ಜುನರು ಉತ್ತರಮಲ್ಲರನ್ನು ಹಾಗು ದಕ್ಷಿಣಮಲ್ಲರನ್ನು ಯುದ್ಧದಲ್ಲಿ ಸೋಲಿಸಿದ ವರ್ಣನೆಯಿದೆ. ಮನುಸ್ಮೃತಿಯಲ್ಲಿ ಮಲ್ಲರನ್ನು ವ್ರಾತ್ಯ (heterodox) ಕ್ಷತ್ರಿಯರೆಂದು ಕರೆಯಲಾಗಿದೆ.
ಕ್ರಿ.ಪೂ. ೬ನೆಯ ಶತಮಾನದಿಂದ ಕ್ರಿ.ಪೂ. ೪ನೆಯ ಶತಮಾನದವರೆಗೆ, ‘ಪಾವಾ’ ಮತ್ತು ‘ಕುಶೀನಗರ’ಗಳಲ್ಲಿ ಮಲ್ಲರ ಗಣರಾಜ್ಯಗಳು ಇದ್ದ ಬಗೆಗೆ ಉಲ್ಲೇಖಗಳಿವೆ. ೧೨ನೆಯ ಶತಮಾನದಲ್ಲಿ ಖಾಸಮಲ್ಲರು ನೇಪಾಳದಲ್ಲಿ ರಾಜರಾಗಿದ್ದರು. ಈ ಖಾಸ ಎನ್ನುವವರು ಕೃಷ್ಣನ ಅನುಯಾಯಿಗಳಾಗಿದ್ದರೆಂದು ಭಾಗವತದಲ್ಲಿ ಹೇಳಲಾಗಿದೆ. (ಕೃಷ್ಣನು ‘ಕನ್ಹೈಯಾ’ ಅಂದರೆ ‘ಕನ್ನಯ್ಯ’ (=ಕನ್ನ ಜನಾಂಗದವ) ಹಾಗು ಗೋಕುಲದಲ್ಲಿದ್ದ ‘ಹಟ್ಟಿಕಾರ’ ಸಮುದಾಯದಲ್ಲಿ ಬೆಳೆದವ ಎನ್ನುದನ್ನು ಗಮನಿಸಬೇಕು). ಮನುಸ್ಮೃತಿಯಲ್ಲಿ ಖಾಸರ ಉಲ್ಲೇಖವಿದೆ. ಇವರು ವ್ರಾತ್ಯ ಕ್ಷತ್ರಿಯರೆಂದು ಅಲ್ಲಿ ಹೇಳಲಾಗಿದೆ.
೧೭ನೆಯ ಹಾಗು ೧೮ನೆಯ ಶತಮಾನದಲ್ಲಿ ಬಂಗಾಲದ ಭಾಗವನ್ನು ಆಳಿದ ಮಲ್ಲರಾಜರ ರಾಜಧಾನಿಯಾದ ವಿಷ್ಣುಪುರವು ಬಂಕೂರು ಎನ್ನುವ ಜಿಲ್ಲೆಯಲ್ಲಿದೆ. (ಕೋಲಕತ್ತಾದಿಂದ ೧೩೨ ಕಿ.ಮಿ. ದೂರದಲ್ಲಿದೆ). ಅಲ್ಲಿ ಮಲ್ಲೇಶ್ವರವೆನ್ನುವ ಗುಡಿ ಸಹ ಇದೆ. (ಬಂಕೂರು ಇದು ಕನ್ನಡ ಪದ).
ಉತ್ತರ ಪ್ರದೇಶದಲ್ಲಿ ಇರುವ ಮಲ್ಲರು ಶೂದ್ರರ ಗುಂಪಿಗೆ ಸೇರಿದವರು. ಇವರನ್ನು ಅಲ್ಲಿ ಜಲಗಾರರು (=ಮೀನುಗಾರರು, ಅಂಬಿಗರು) ಎಂದೂ ಕರೆಯುತ್ತಾರೆ. ಡಕಾಯತರ ರಾಣಿ ಫೂಲನ್ ದೇವಿ ಮಲ್ಲ ಸಮುದಾಯಕ್ಕೆ ಸೇರಿದವಳು. ದಾರ್ಜೀಲಿಂಗದ ಹತ್ತಿರವಿರುವ ಗುಡ್ಡಗಾಡಿನಲ್ಲಿ ಖಾಸೀ ಜನಾಂಗವಿದೆ.
ಇವೆಲ್ಲ ದಾಖಲೆಗಳು ಮಲ್ಲ ಜನಾಂಗದ ಪ್ರಾಚೀನತೆಯನ್ನು ತೋರಿಸುತ್ತವೆ. ರಾಜಕೀಯ ಪ್ರಾಬಲ್ಯವಿದ್ದಾಗ ಕ್ಷತ್ರಿಯರಾಗುತ್ತಿದ್ದ ಈ ಸಮುದಾಯವು, ರಾಜಕೀಯವಾಗಿ ನಿರ್ಬಲರಾದಾಗ ಶೂದ್ರರ ಗುಂಪಿಗೆ ಜಮೆಯಾಗುತ್ತಿತ್ತು.
ಹಿಮಾಲಯದ ಅಡಿಭಾಗದಲ್ಲಿ ಹಾಗು ಬಂಗಾಲದಲ್ಲಿ ರಾಜ್ಯವಾಳಿದ ಈ ಸಮುದಾಯವು , ಅಲ್ಲಿ ರಾಜಕೀಯ ವೈರವನ್ನೆದುರಿಸಲಾಗದೆ, ದಕ್ಷಿಣಕ್ಕೆ ಬಂದಿತೆ? ಹಾಗು ಕರ್ನಾಟಕದಲ್ಲಿ ನೆಲೆ ನಿಂದಿತೆ?
ಉತ್ತರ ಭಾರತದಲ್ಲಿಯೇ ಉಳಿದುಕೊಂಡ ಕನ್ನಡ ಜನಾಂಗಗಳು ಕಾಲಕ್ರಮೇಣ ಕನ್ನಡವನ್ನು ಬಿಟ್ಟುಬಿಟ್ಟು , ಆರ್ಯಭಾಷೆಯನ್ನು ಅಂಗೀಕರಿಸಿದಂತೆಯೆ, ಅಲ್ಲಿಯ ಮಲ್ಲರೂ ಸಹ ಕನ್ನಡವನ್ನು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ನೆಲೆಸಿದ ಮಲ್ಲರು ಮಾತ್ರ ಕನ್ನಡವನ್ನು ಇಟ್ಟುಕೊಂಡಿರಬೇಕು.
‘ಖಂಡ’ ಅಥವಾ ಕಂದ ಪದವನ್ನು ಸೂಚಿಸುವ ೫೪ ಗ್ರಾಮಗಳು ಕರ್ನಾಟಕದಲ್ಲಿವೆ.
ಕೆಲವು ಉದಾಹರಣೆಗಳು:
ಕಂದಕೂರು, ಕಂದಗಲ್, ಕಂದಗೋಳ, ಕಂದಾವರ, ಕಂದೂರು, ಕಂದ್ರಾಜಿ, ಖಂಡಾಲಾ, ಖಂದೋಡಿ, ಖಂಡೇರಾಯನಪಳ್ಳಿ ಇತ್ಯಾದಿ. ಇದಕ್ಕಿಂತ ಮುಖ್ಯವಾಗಿ, ಕರ್ನಾಟಕದ ಹೊರಗೂ ಇಂತಹ ಅನೇಕ ಸ್ಥಳಗಳಿವೆ. ಅಫಘಾನಿಸ್ತಾನದಲ್ಲಿರುವ ‘ಕಂದಹಾರ’ವಂತೂ ಜಗತ್ಪ್ರಸಿದ್ಧವಿದೆ. ಈ ಪದವು ಕಂದ ಹಾಗು ಹಾರ ಎನ್ನುವ ಎರಡು ಪದಗಳಿಂದ ಕೂಡಿದ ಸಂಯುಕ್ತ ಪದವಾಗಿದ್ದು, ಹಾರ (=ಹಳ್ಳಿ) ಇದು ಕನ್ನಡ ಪದ ಎನ್ನುವದನ್ನು ಲಕ್ಷಿಸಬೇಕು. ಕಂದಹಾರವೆನ್ನುವ ಒಂದು ಪಟ್ಟಣವೂ ಸಹ ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿದೆ. ಮುಂಬಯಿ ನಗರದ ಭಾಗವಾದ ‘ಕಾಂದೀವ್ಲಿ’ ಇದು ‘ಕಂದವಳ್ಳಿ’ಯ ಹಾಗು ‘ಖಂಡಾಲಾ’ ಇದು ‘ಖಂಡಹಾಳ’ದ ಮರಾಠೀಕರಣವೆನ್ನುವದು ಸ್ಪಷ್ಟವಿದೆ. ಈ ರೀತಿಯಾಗಿ ಅಫಘಾನಿಸ್ತಾನ ಹಾಗು ಮಧ್ಯಭಾರತದಲ್ಲಿ ನೆಲೆಸಿದ್ದ ಈ ಸಮುದಾಯವು , ಆರ್ಯರ ಆಕ್ರಮಣದಿಂದಾಗಿ, ಗುಳೆ ಹೊರಟು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ನೆಲೆಸಿದರು. ಅಲ್ಲಿಯೂ ಸಹ ಕಂದರಿಗೆ ಹಾಗು ಮಲ್ಲರಿಗೆ ಪರಸ್ಪರ ಹೊಡೆದಾಟಗಳು ನಡದೇ ಇದ್ದವು.
ಈ ಕಂದರ ದೇವತೆಯು ‘ಕಂದಸ್ವಾಮಿ’. ಈತನು ಕಾಲಾಂತರದಲ್ಲಿ ಸಂಸ್ಕೃತೀಕರಣದಿಂದ ‘ಸ್ಕಂದ’ನಾಗಿರಬಹುದು. ಈತನ ವಾಹನ ನವಿಲು, ಅಂದರೆ ಹಾವಿನ ವೈರಿ. ಖಾಂಡವ ವನವನ್ನು ಅರ್ಜುನನು ಸುಟ್ಟಾಗ ಸತ್ತವರೆಲ್ಲರೂ ನಾಗರು. (=ಸರ್ಪಗಳು). ಅಂದರೆ, ಕಂದರ ನೆಲೆಯಾದ ಖಾಂಡವವನವನ್ನು ಅತಿಕ್ರಮಿಸಿದ ನಾಗರನ್ನು ಹೊರದೂಡಲಿಕ್ಕಾಗಿ, ಖಂಡರು ಅರ್ಜುನನ ಸಹಾಯವನ್ನು ಕೋರಿರಬಹುದು.
ಕಂದ ಎನ್ನುವ ಹೆಸರನ್ನು ಹೊಂದಿದ ಆದಿವಾಸಿ ಸಮುದಾಯವು ಈಗ ಕೇವಲ ಆಂಧ್ರಪ್ರದೇಶ ಹಾಗು ಓಡಿಸಾ ರಾಜ್ಯಗಳಲ್ಲಿ ಮಾತ್ರ ಸಿಗುತ್ತದೆ. ಈ ಕಂದರ ಭಾಷೆ ತೆಲಗು ಹಾಗು ಗೊಂಡಿ ಭಾಷೆಯನ್ನು ಹೋಲುತ್ತದೆ.
ಇದಿಷ್ಟು ಮಲ್ಲ ಹಾಗು ಕಂದ ಸಮುದಾಯಗಳ ಕತೆ. ಪೂರ್ವ-ದ್ರವಿಡ ಭಾಷೆಯನ್ನಾಡುತ್ತಿದ್ದ ಈ ಸಮುದಾಯಗಳು, ಕಾಲಕ್ರಮದಲ್ಲಿ ಹಿಮಾಲಯದ ಅಡಿಭಾಗದಿಂದ ದಕ್ಷಿಣಕ್ಕೆ ಸರಿಯುತ್ತ, ಕರ್ನಾಟಕದಲ್ಲಿ ಅಂತಿಮವಾಗಿ ತಳವೂರಿದ ಕತೆ. ಭಾರತೀಯ ಪುರಾಣಗಳು ವಾಸ್ತವದಲ್ಲಿ ಇಲ್ಲಿಯ ಮೂಲ ಜನಾಂಗಗಳ ಇತಿಹಾಸವೇ ಆಗಿವೆ. ಪುರಾಣ ಈ ಪದದ ಅರ್ಥವೇ ಹಳೆಯ ಎಂದಾಗುತ್ತದೆ. ಈ ಪುರಾಣಗಳನ್ನು ಸೋಸಿದಾಗ ಐತಿಹಾಸಿಕ ಸತ್ಯದ ಹೊಳಹು ಗೋಚರಿಸುತ್ತದೆ.
Thursday, May 15, 2008
ಕರ್ನಾಟಕದ ಸ್ಥಳನಾಮಗಳು
‘ಕಂನಾಡು’ ಎನ್ನುವದು ‘ಕರ್ನಾಟಕ’ದ ಮೂಲರೂಪ. ಈ ಹೆಸರು ‘ಕನ್ನ’ ಜನಾಂಗದ ಮೂಲಕ ಬಂದಿದೆ ಎನ್ನುವದನ್ನು ಕೀರ್ತಿಶೇಷ ಶ್ರೀ ಶಂ.ಬಾ.ಜೋಶಿ ತೋರಿಸಿದರು. ಇದರಂತೆ ಕನ್ನರ ವಾಸಸ್ಥಾನಗಳನ್ನು ತೋರಿಸುವ ಅನೇಕ ಊರುಗಳು ಕರ್ನಾಟಕದಲ್ಲಿವೆ. ಈ ಸ್ಥಳನಾಮಗಳು ಕೇವಲ ವಾಸಸ್ಥಾನಗಳನ್ನಷ್ಟೇ ಅಲ್ಲ, ಆ ಜನಾಂಗದ ಸಾಂಸ್ಕೃತಿಕ ಅವಸ್ಥೆಯನ್ನೂ ಸಹ ತೋರಿಸುತ್ತವೆ ಎನ್ನುವದು ಶ್ರೀ ಶಂ.ಬಾ.ಜೋಶಿಯವರ ಮತ್ತೊಂದು ಪ್ರಮೇಯ. ಉದಾಹರಣೆಗೆ ‘ಕನ್ನಟ್ಟಿ’ (=ಕನ್ನ+ಹಟ್ಟಿ) ಎನ್ನುವದು ಕನ್ನ ಜನಾಂಗದ ಹಟ್ಟಿಕಾರ ಅವಸ್ಥೆಯನ್ನು ತೋರಿಸಿದರೆ ‘ಕನಕೂರು’ ಎನ್ನುವದು ಒಕ್ಕಲಿಗ ಅವಸ್ಥೆಯನ್ನು ತೋರಿಸುತ್ತದೆ ಎನ್ನುವದು ಅವರ ಸಿದ್ಧಾಂತ. ಇದಲ್ಲದೆ, ಸ್ಥಳನಾಮಗಳು ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಹ ಸೂಚಿಸಬಹುದು. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಭಟಕಳ ತಾಲೂಕಿನಲ್ಲಿಯ ‘ಕಗ್ಗುಂಡಿ’ ಎನ್ನುವ ಸ್ಥಳನಾಮದಲ್ಲಿಯ ‘ಗುಂಡಿ’ ಇದು ಕೆಳಮಟ್ಟದ ಪ್ರದೇಶವನ್ನು ಸೂಚಿಸುತ್ತಿದ್ದರೆ, ವಿಜಾಪುರ ತಾಲೂಕಿನಲ್ಲಿರುವ ‘ಕಗ್ಗೋಡು’ ಎನ್ನುವ ಊರು ಎತ್ತರದ ಪ್ರದೇಶವನ್ನು (=ಕೋಡು) ಸೂಚಿಸುತ್ತದೆ.
ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಸಮಗ್ರ ಭಾರತದಲ್ಲಿ ದೊರೆಯುತ್ತವೆ. ಇದರರ್ಥವೇನೆಂದರೆ, ಕನ್ನ ಜನಾಂಗವು ಅಂದರೆ ಕನ್ನಡಿಗರು ಒಂದು ಕಾಲದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಅನೇಕ ಐತಿಹಾಸಿಕ ಕಾರಣಗಳಿಂದಾಗಿ, ಸದ್ಯಕ್ಕೆ ಕರ್ನಾಟಕಕ್ಕೆ ಸೀಮಿತರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ಯಾವ ಪ್ರಕಾರವಾಗಿ ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಇರುವವೋ, ಅದೇ ರೀತಿಯಾಗಿ ಬೇರೆ ಜನಾಂಗಗಳನ್ನು ಸೂಚಿಸುವ ಸ್ಥಳನಾಮಗಳೂ ಸಹ ಹೇರಳವಾಗಿ ಲಭ್ಯವಿವೆ. ಆ ಜನಾಂಗಗಳಲ್ಲಿ ಕೆಲವು ಜನಾಂಗಗಳು ಕನ್ನುಡಿಯನ್ನು(=ಕನ್ನಡವನ್ನು) ಅಥವಾ ಪೂರ್ವದ್ರಾವಿಡ ನುಡಿಯನ್ನು ಮಾತನಾಡುತ್ತಿದ್ದ ಜನಾಂಗಗಳಾಗಿರಬಹುದು.
ಇಂತಹ ಜನಾಂಗಸೂಚಕ ಸ್ಥಳನಾಮಗಳ ಅಧ್ಯಯನ ಮಾಡುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದಾಗ, ನನ್ನ ತರುಣ ಮಿತ್ರ ಶ್ರೀ ವ್ಹಿ.ಆರ್.ಹೆಗಡೆಯವರು ಕರ್ನಾಟಕ ರಾಜ್ಯದಲ್ಲಿಯ ೨೯,೦೦೦ಕ್ಕೂ ಮಿಕ್ಕಿದ ಹಳ್ಳಿ ಹಾಗು ಪಟ್ಟಣಗಳ ಹೆಸರುಗಳನ್ನು ಸಂಗ್ರಹಿಸಿ ಕೊಟ್ಟರು. ಅವರ ಈ ಉಪಕಾರಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಆ ಎಲ್ಲ ಸ್ಥಳನಾಮಗಳನ್ನು ಸಂಶೋಧಿಸಿದಾಗ, ೨೩೮೧ ಸ್ಥಳನಾಮಗಳು ಸೂಚಿಸುವ ೨೮ ಜನಾಂಗಗಳನ್ನು ಗುರುತಿಸಲು ಸಾಧ್ಯವಾಯಿತು. ಇವೆಲ್ಲ ವಿಭಿನ್ನ Races ಎಂದೇನಲ್ಲ. ಇವುಗಳನ್ನು communities ಹಾಗೂ sub-communities ಎಂದೂ ಕರೆಯಬಹುದು. ಯಾವುದೋ ಕಾರಣಗಳಿಗಾಗಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದ ಅಥವಾ ಗುರುತಿಸಲ್ಪಡುತ್ತಿದ್ದ ಇಂತಹ ಜನಾಂಗಗಳನ್ನು ಹಾಗು ಆ ಗ್ರಾಮಗಳ ಸಂಖ್ಯೆಯನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಮಲ್ಲ (೩೮೦)
೨. ನಾಗ (೩೧೩)
೩. ಗೊಂಡ, ಕೊಂಡ (೨೫೬)
೪. ಕನ್ನ (೧೭೦)
೫. ಕಡ, ಕಡಬ (೧೨೫)
೬. ಗಂಗ (೧೦೯)
೭. ಹಲ (೧೦೩)
೮. ಸಿರ, ಶಿರ (೯೯)
೯. ಸಿಂಗ (೮೯)
೧೦. ಮನ್ನ (೮೪)
೧೧. ನಲ್ಲ (೮೦)
೧೨. ಬಳ್ಳ (೭೮)
೧೩. ಅಂಕ (೭೪)
೧೪. ಕೋಲ, ಕೋರ (೬೭)
೧೫. ಮಂಡ, ಮಂಟ (೫೮)
೧೬. ಕಂದ (೫೪)
೧೭. ಮುರ (೪೭)
೧೮. ಕಂಬ (೪೬)
೧೯. ಕುಪ (೪೪)
೨೦. ಕರ (೩೬)
೨೧. ಮೂಗ (೩೫)
೨೨. ಪಣ, ಹನ (೩೧)
೨೩. ಕಿರ, ಕಿರಗ (೨೭)
೨೪. ಕುರು (೨೭)
೨೫. ಹಂಗ (೨೬)
೨೬. ಮುಂಡ (೨೫)
೨೭. ಬಂಕ (೧೭)
೨೮. ಕಿನ್ನ (೬)
ನಮ್ಮ ಪುರಾಣಗಳಲ್ಲಿ ಹಾಗು ಧಾರ್ಮಿಕ ಗ್ರಂಥಗಳಲ್ಲಿ ಈ ಜನಾಂಗಳ ಸಂಘರ್ಷಗಳು ವರ್ಣಿಸಲ್ಪಟ್ಟಿವೆ. ಕೆಲವು ಉದಾಹರಣೆಗಳು:
೧. ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ|
ಸರ್ವದುಃಖ ಹರೇ, ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
--------------ಇಂದ್ರಕೃತ ಮಹಾಲಕ್ಷ್ಮೀ ಸ್ತೋತ್ರ
೨. ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|
ಜ್ಯೋತಿರೂಪಾ, ಜಗನ್ನಾಥಾ, ಜಯಿನೀ,ಜಯವರ್ಧಿನೀ||
…………………………ಲಲಿತಾ ಸಹಸ್ರನಾಮ
೩. ನ್ಯಗ್ರೋಧೋದುಂಬರೋsಶ್ವತ್ಥಶ್ಚಾಣೂರಾಂಧ್ರನಿಷೂದನ:|
…………………………….ವಿಷ್ಣು ಸಹಸ್ರನಾಮ
ತಮ್ಮ ವೈರಿಗಳನ್ನು ನಾಶಪಡಿಸಿದ್ದಕ್ಕಾಗಿ, ಈ ಸ್ತೋತ್ರಗಳಲ್ಲಿ ಆಯಾ ದೇವತೆಗಳನ್ನು ಸ್ತುತಿಸಲಾಗಿದೆ. ಈ ವೈರಿಗಳು , ಅಂದರೆ ಕೋಲಾಸುರ, ಮುಂಡಾಸುರ, ಮಹಿಷಾಸುರ ಇವರೆಲ್ಲ ಓರ್ವ ರಾಕ್ಷಸನಾಗಿರದೆ, ಜನಾಂಗಸೂಚಕ ಪದಗಳಾಗಿವೆ. ಕೋಲ, ಮುಂಡ ಹಾಗು ಮಹಿಷರನ್ನು ಸೋಲಿಸಿದವಳು ಮಾತೃದೇವತೆಯಾಗಿದ್ದರೆ, ಆಂಧ್ರರನ್ನು(---ಇಲ್ಲಿ ಅದರರ್ಥ ದ್ರಾವಿಡರನ್ನು----) ಸೋಲಿಸಿದವನು ಪಿತೃದೇವತೆಯಾಗಿದ್ದಾನೆ.
ಈ ಜನಾಂಗಗಳ ಹಾಗು ಸ್ಥಳನಾಮಗಳ ಅಧ್ಯಯನವನ್ನು ಮುಂದಿನ ಭಾಗದಲ್ಲಿ ಎತ್ತಿಕೊಳ್ಳೋಣ.
ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಸಮಗ್ರ ಭಾರತದಲ್ಲಿ ದೊರೆಯುತ್ತವೆ. ಇದರರ್ಥವೇನೆಂದರೆ, ಕನ್ನ ಜನಾಂಗವು ಅಂದರೆ ಕನ್ನಡಿಗರು ಒಂದು ಕಾಲದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಅನೇಕ ಐತಿಹಾಸಿಕ ಕಾರಣಗಳಿಂದಾಗಿ, ಸದ್ಯಕ್ಕೆ ಕರ್ನಾಟಕಕ್ಕೆ ಸೀಮಿತರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ಯಾವ ಪ್ರಕಾರವಾಗಿ ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಇರುವವೋ, ಅದೇ ರೀತಿಯಾಗಿ ಬೇರೆ ಜನಾಂಗಗಳನ್ನು ಸೂಚಿಸುವ ಸ್ಥಳನಾಮಗಳೂ ಸಹ ಹೇರಳವಾಗಿ ಲಭ್ಯವಿವೆ. ಆ ಜನಾಂಗಗಳಲ್ಲಿ ಕೆಲವು ಜನಾಂಗಗಳು ಕನ್ನುಡಿಯನ್ನು(=ಕನ್ನಡವನ್ನು) ಅಥವಾ ಪೂರ್ವದ್ರಾವಿಡ ನುಡಿಯನ್ನು ಮಾತನಾಡುತ್ತಿದ್ದ ಜನಾಂಗಗಳಾಗಿರಬಹುದು.
ಇಂತಹ ಜನಾಂಗಸೂಚಕ ಸ್ಥಳನಾಮಗಳ ಅಧ್ಯಯನ ಮಾಡುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದಾಗ, ನನ್ನ ತರುಣ ಮಿತ್ರ ಶ್ರೀ ವ್ಹಿ.ಆರ್.ಹೆಗಡೆಯವರು ಕರ್ನಾಟಕ ರಾಜ್ಯದಲ್ಲಿಯ ೨೯,೦೦೦ಕ್ಕೂ ಮಿಕ್ಕಿದ ಹಳ್ಳಿ ಹಾಗು ಪಟ್ಟಣಗಳ ಹೆಸರುಗಳನ್ನು ಸಂಗ್ರಹಿಸಿ ಕೊಟ್ಟರು. ಅವರ ಈ ಉಪಕಾರಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಆ ಎಲ್ಲ ಸ್ಥಳನಾಮಗಳನ್ನು ಸಂಶೋಧಿಸಿದಾಗ, ೨೩೮೧ ಸ್ಥಳನಾಮಗಳು ಸೂಚಿಸುವ ೨೮ ಜನಾಂಗಗಳನ್ನು ಗುರುತಿಸಲು ಸಾಧ್ಯವಾಯಿತು. ಇವೆಲ್ಲ ವಿಭಿನ್ನ Races ಎಂದೇನಲ್ಲ. ಇವುಗಳನ್ನು communities ಹಾಗೂ sub-communities ಎಂದೂ ಕರೆಯಬಹುದು. ಯಾವುದೋ ಕಾರಣಗಳಿಗಾಗಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದ ಅಥವಾ ಗುರುತಿಸಲ್ಪಡುತ್ತಿದ್ದ ಇಂತಹ ಜನಾಂಗಗಳನ್ನು ಹಾಗು ಆ ಗ್ರಾಮಗಳ ಸಂಖ್ಯೆಯನ್ನು ಇಲ್ಲಿ ಕೊಡುತ್ತಿದ್ದೇನೆ.
೧. ಮಲ್ಲ (೩೮೦)
೨. ನಾಗ (೩೧೩)
೩. ಗೊಂಡ, ಕೊಂಡ (೨೫೬)
೪. ಕನ್ನ (೧೭೦)
೫. ಕಡ, ಕಡಬ (೧೨೫)
೬. ಗಂಗ (೧೦೯)
೭. ಹಲ (೧೦೩)
೮. ಸಿರ, ಶಿರ (೯೯)
೯. ಸಿಂಗ (೮೯)
೧೦. ಮನ್ನ (೮೪)
೧೧. ನಲ್ಲ (೮೦)
೧೨. ಬಳ್ಳ (೭೮)
೧೩. ಅಂಕ (೭೪)
೧೪. ಕೋಲ, ಕೋರ (೬೭)
೧೫. ಮಂಡ, ಮಂಟ (೫೮)
೧೬. ಕಂದ (೫೪)
೧೭. ಮುರ (೪೭)
೧೮. ಕಂಬ (೪೬)
೧೯. ಕುಪ (೪೪)
೨೦. ಕರ (೩೬)
೨೧. ಮೂಗ (೩೫)
೨೨. ಪಣ, ಹನ (೩೧)
೨೩. ಕಿರ, ಕಿರಗ (೨೭)
೨೪. ಕುರು (೨೭)
೨೫. ಹಂಗ (೨೬)
೨೬. ಮುಂಡ (೨೫)
೨೭. ಬಂಕ (೧೭)
೨೮. ಕಿನ್ನ (೬)
ನಮ್ಮ ಪುರಾಣಗಳಲ್ಲಿ ಹಾಗು ಧಾರ್ಮಿಕ ಗ್ರಂಥಗಳಲ್ಲಿ ಈ ಜನಾಂಗಳ ಸಂಘರ್ಷಗಳು ವರ್ಣಿಸಲ್ಪಟ್ಟಿವೆ. ಕೆಲವು ಉದಾಹರಣೆಗಳು:
೧. ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ|
ಸರ್ವದುಃಖ ಹರೇ, ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
--------------ಇಂದ್ರಕೃತ ಮಹಾಲಕ್ಷ್ಮೀ ಸ್ತೋತ್ರ
೨. ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|
ಜ್ಯೋತಿರೂಪಾ, ಜಗನ್ನಾಥಾ, ಜಯಿನೀ,ಜಯವರ್ಧಿನೀ||
…………………………ಲಲಿತಾ ಸಹಸ್ರನಾಮ
೩. ನ್ಯಗ್ರೋಧೋದುಂಬರೋsಶ್ವತ್ಥಶ್ಚಾಣೂರಾಂಧ್ರನಿಷೂದನ:|
…………………………….ವಿಷ್ಣು ಸಹಸ್ರನಾಮ
ತಮ್ಮ ವೈರಿಗಳನ್ನು ನಾಶಪಡಿಸಿದ್ದಕ್ಕಾಗಿ, ಈ ಸ್ತೋತ್ರಗಳಲ್ಲಿ ಆಯಾ ದೇವತೆಗಳನ್ನು ಸ್ತುತಿಸಲಾಗಿದೆ. ಈ ವೈರಿಗಳು , ಅಂದರೆ ಕೋಲಾಸುರ, ಮುಂಡಾಸುರ, ಮಹಿಷಾಸುರ ಇವರೆಲ್ಲ ಓರ್ವ ರಾಕ್ಷಸನಾಗಿರದೆ, ಜನಾಂಗಸೂಚಕ ಪದಗಳಾಗಿವೆ. ಕೋಲ, ಮುಂಡ ಹಾಗು ಮಹಿಷರನ್ನು ಸೋಲಿಸಿದವಳು ಮಾತೃದೇವತೆಯಾಗಿದ್ದರೆ, ಆಂಧ್ರರನ್ನು(---ಇಲ್ಲಿ ಅದರರ್ಥ ದ್ರಾವಿಡರನ್ನು----) ಸೋಲಿಸಿದವನು ಪಿತೃದೇವತೆಯಾಗಿದ್ದಾನೆ.
ಈ ಜನಾಂಗಗಳ ಹಾಗು ಸ್ಥಳನಾಮಗಳ ಅಧ್ಯಯನವನ್ನು ಮುಂದಿನ ಭಾಗದಲ್ಲಿ ಎತ್ತಿಕೊಳ್ಳೋಣ.
Subscribe to:
Posts (Atom)