Showing posts with label ಸಾಹಿತ್ಯ/ಕವನ. Show all posts
Showing posts with label ಸಾಹಿತ್ಯ/ಕವನ. Show all posts

Saturday, July 7, 2012

ಅಶ್ವವೃತ್ತಾಂತ


--೧--
ಕಾಡೆದೆಯಲ್ಲಿ ಕುದುರೆಯ ಹೇಂಕಾರ,
ನರನರಗಳಲಿ ಅದರ ಮಾರ್ದನಿ ಸಿಡಿತ,
ಕಾಡುಕುದುರೆಯ ಸೆಣೆಸಿ ಸವಾರಿ ಮಾಡುವ
ಬಯಕೆ ಭೂತಾಕಾರ
ಚಿಮ್ಮಿ ನನ್ನನು ಕುದುರೆಯ ಬೆನ್ನ ಮೇಲೆ,
ದಿಕ್ಕು ದೆಸೆ ನೋಡದೆ ಓಡುತಿರೆ ಅಮಲಿನಲಿ,
ನಾನೆ ವಿಕ್ರಮರಾಯನೆಂಬ ಠೇಂಕಿನಲಿ,
ಎದೆಯನ್ನು ಬೀಗಿಸುತ ಝೀಂಗುಟ್ಟೆ ಗಾಳಿಯಲಿ,
. . . . . . . . . . . . . . . . . . . . . . . . . . .
ಕಣ್ಣು ಕತ್ತಲೆ, ತೊಡೆಯಲ್ಲಿ ನೋವಿನ ಸೆಳಕು,
‘ರಾಮಾ!’ ಎಂದೆನುತ ಕಣ್ಣಗಲಿಸಿರಲಿಲ್ಲ ಇನ್ನೂ
. . .. ಕಾಡೆದೆಯೊಳಗಿಂದ ಕುದುರೆಯ ಹೇಂಕಾರ,
                         ನರನರಗಳಲಿ ಮಾರ್ದನಿ!

--೨
ಏನೆಲ್ಲ ಕಸರತ್ತು ಮಾಡಿದರೂ
ಏಳದೀ ಘೋಡಾ!
ಹಾಗೆಲ್ಲ ತೀರದು ಸವಾರಿಯ ಚಟ,
ಮುದಿ ಕುದುರೆಯನ್ನೇ ಏರುವ ಹಟ,
ಮುಗ್ಗುರಿಸಿ ಬೀಳಲು ಅಕಟಕಟಾ!

ನಗುತಿಹಳು ಬಾಳಸಂಗಾತಿ:
‘ಜೊತೆಜೊತೆಗೆ ನಡೆದರೆ ಸಾಲದೆ? ಸವಾರಿಯೇ ಬೇಕೆ?’

--೩--
ಈಲಿಯಟ್ ಹೇಳಿದ್ದು ಖರೆ:
This is the way the world ends
This is the way the world ends
This is the way the world ends
Not with a bang but a whimper.

-೪-
ಕೊಟ್ಟ ಕುದುರೆಯನೇರಬೇಕು, ಅಲ್ಲಮಪ್ರಭುಗಳಂತೆ.
ಪ್ರಾಯದಲಿ ಅದು ರೇಸ್ ಗೆಲ್ಲುವ ಚದುರೆ,
ಇಳಿವಯಸಿನಲಿ ಜಟಕಾ ಕುದುರೆ!

Saturday, March 1, 2008

The Rainbow

Once a scientist in the darkest room of his lab
Experimented on light with his spectroscope.
He had hit upon the myth of light and colors;
He may get the Nobel prize, he did rightly hope.
All fancies of Nature are merely the play of
The vibrations of energy; nothing is true that
We see, hear and sense; just an impression
On the unsuspecting brain cells, he brooding sat.

When screaming came his little granddaughter,
“Gran’pa, come out and see! There is a beautiful
Rainbow in the sky!” The scientist smiled
At the ignorant child, but pulled by her came out
And “ Believe me”, he swears “I truly saw
A thousand rainbows in her eyes!”

Wednesday, February 27, 2008

ಕರಗಿದ ಕನಸಲ್ಲಿ . .

ಶ್ರೀಮತಿ ಎಸ್. ಅರುಂಧತಿ ಇವರು ಉತ್ತರ ಕನ್ನಡ ಜಿಲ್ಲೆಯ ನವ್ಯೋತ್ತರ ಕವಯಿತ್ರಿ. ’ಉಳಿದ ತಂತು’ ಹಾಗು ’ಹರಿಯುತ್ತಿರಲಿ ನದಿ’ ಇವು ಇವರ ಪ್ರಕಟಿತ ಕವನ ಸಂಕಲನಗಳು. ’ಹರಿಯುತಿರಲಿ ನದಿ’ ಸಂಕಲನದಿಂದ ಒಂದು ಕವನವನ್ನು ಆಯ್ದು ಇಲ್ಲಿ ಕೊಡಲಾಗಿದೆ.



ಕರಗಿದ ಕನಸಲ್ಲಿ . .

ಎದುರಲ್ಲಿ ಸುಳಿದ ಚಲುವ
ಕನಸಲ್ಲಿ ಬಂದೇ ಬಿಟ್ಟ
ಚಂದ್ರ ನಕ್ಷತ್ರಗಳ ದಿಬ್ಬಣ ತಂದೇ ಬಿಟ್ಟ
ಮೈ ತುಂಬ ಹುಣ್ಣಿಮೆಯ ಹರಿಸಿದ
ತಂಗಾಳಿಯಾಗಿ ತೀಡಿ
ನೈದಿಲೆಯ ಕೆನ್ನೆಗೆ ಸವರಿ
ಸಾಕೆ? ಇನ್ನೂ ಬೇಕೆ? ಎಂದ
ಬೇಕೆನಲು ಬಿಗಿದಪ್ಪಿ ಮುತ್ತಿಟ್ಟ
ಬೆಳಕು ಹರಿಯಲು ಚಲುವ
ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ

Saturday, February 2, 2008

Had you made me...........

Had you made me a tiger
Instead of a deer
Lord, I would not know
What is fear!

Had you made me a ruler
Instead of a fakir
Lord, I would not know
How to be sober!

Had you made me a hunter
Instead of a prey
Lord, I would not know
How to pray!