Tuesday, January 28, 2020

`Things fall apart, the center cannot hold’.

`Things fall apart, the center cannot hold’.
ಇದು ಆಂಗ್ಲ ಕವಿ ಯೇಟ್ಸನ ಕವನವೊಂದರ ಸಾಲು.
ಸಾಲನ್ನು ಈಗ ಹೀಗೂ ಹಾಡಬಹುದು:
`ಭಾರತಕೋ ತುಕಡೇ ತುಕಡೇ ಕರೇಂಗೆ!
Let India fall apart!’

ಬಂಗಾಲ ಸರಕಾರವು  ಭಾರತ ದೇಶದ ಲೋಕಸಭೆಯು ಅನುಮೋದಿಸಿದ ಹಾಗು ಇದೀಗ ಶಾಸನವೆಂದು ಅಂಗೀಕೃತವಾದ ನಾಗರಿಕತೆ ಬದಲಾವಣೆ ಶಾಸನವನ್ನು ಒಪ್ಪುವದಿಲ್ಲವೆಂದೂ, ತಮ್ಮ ರಾಜ್ಯದಲ್ಲಿ ಇದನ್ನು ಚಲಾಯಿಸುವದಿಲ್ಲವೆಂದೂ ಹೇಳಿಕೆ ಕೊಟ್ಟಿದೆ. ಬಂಗಾಲವನ್ನು ಅನುಕರಿಸಿ ಇತರ ಭಾಜಪೇತರ ರಾಜ್ಯಗಳೂ ಸಹ ಇಂತಹದೇ ಹೇಳಿಕೆ ಕೊಟ್ಟಿವೆ.

ಕೇರಳದ ಮುಖ್ಯ ಮಂತ್ರಿ ಪಿಣರಾಯಿಯವರು ಭಾರತದ ಹನ್ನೊಂದು ರಾಜ್ಯಗಳಿಗೆ ಈ ಶಾಸನವನ್ನು ಧಿಕ್ಕರಿಸಲು ಕರೆ ಕೊಟ್ಟಿದ್ದಾರೆ! ಹಾಗು ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ಬಡೆದಿದ್ದಾರೆ. ಈ ಶಾಸನದ ವಿರೋಧಿಗಳು ಕೊಡುವ ಕಾರಣವೇನೆಂದರೆ, ಈ ಶಾಸನವು ಅಲ್ಪಸಂಖ್ಯಾಕರ ವಿರೋಧಿಯಾಗಿದೆ ಎನ್ನುವುದು. ಆದರೆ ಭಾರತದ ನೆರೆಹೊರೆಯ ದೇಶಗಳಲ್ಲಿ ಇದ್ದಂತಹ ಹಾಗು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದಂತಹ, ಈ ದೇಶದಲ್ಲಿ ಈಗಾಗಲೇ ಐದು ವರ್ಷಗಳ ವರೆಗೆ ಇದ್ದಂತಹ ಪರದೇಶೀ ಅಲ್ಪಸಂಖ್ಯಾಕರಿಗೆ ಮಾತ್ರ ಭಾರತದಲ್ಲಿ ಆಶ್ರಯ ಕೊಡುವುದು ಈ ಕಾನೂನಿನ ಉದ್ದೇಶವಾಗಿದೆ. ಭಾರತದಲ್ಲಿ ಇರುವ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಹಾಗು ಬಹುಸಂಖ್ಯಾಕರಿಗೆ  ಇದು ಸಂಬಂಧವೇ ಇಲ್ಲದ ವಿಷಯ! ಹಾಗಿದ್ದರೆ ಭಾರತಿಯ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಕಣ್ಕಟ್ಟು ಮಾಡುವ ಈ ಹೋರಾಟಗಳು ಏತಕ್ಕಾಗಿ? ಬಹುಶ: ಈ ತಪ್ಪು ಪ್ರಚಾರದಿಂದ ಮರುಳಾದ ಭಾರತೀಯ ಅಲ್ಪಸಂಖ್ಯಾತರು ಮುಂದಿನ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೇ ಮತ ಹಾಕಬಹುದು ಎನ್ನುವ ತರ್ಕ ಇಲ್ಲಿದೆಯೆ?

ಭಾರತದ ಆಧುನಿಕ ಸಂವಿಧಾನವು ಧರ್ಮನಿರಪೇಕ್ಷವಾಗಿದೆ ಹಾಗು ಕೇವಲ ಆ ಕಾರಣಕ್ಕಾಗಿಯೇ ಆಧುನಿಕ ಭಾರತವು ಧರ್ಮನಿರಪೇಕ್ಷವಾಗಿರತಕ್ಕದ್ದು ಎಂದು ಕೆಲವರು ಹೇಳುತ್ತಿದ್ದಾರೆ. ಬಂಧುಗಳೆ, ಆಧುನಿಕ ಸಂವಿಧಾನವು ಬರುವ ಸಾವಿರಾರು ವರ್ಷಗಳ ಪೂರ್ವದಿಂದಲೂ ಭಾರತವು ಧರ್ಮನಿರಪೇಕ್ಷವಾಗಿಯೇ ಇದೆ. (ಅದೇ ತಪ್ಪಾಯಿತು, ಎನ್ನುತ್ತೀರಾ!) ಭಾರತದ ಮೇಲೆ ತುರ್ಕಸ್ತಾನ, ಅರಬಸ್ತಾನ ಮೊದಲಾದ ಪಶ್ಚಿಮೋತ್ತರ ಹಾಗು ನಿಕಟಪಶ್ಚಿಮದ ಕಾಡುಜನರು ದಾಳಿ ಮಾಡಿ, ಭಾರತವನ್ನು ಆಕ್ರಮಿಸಿ, ತಮ್ಮ ಆಡಳಿತವನ್ನು ಸ್ಥಾಪಿಸಿದ ಬಳಿಕವೇ ಇಲ್ಲಿ ಹಿಂಸಾತ್ಮಕ ಧರ್ಮಾಂತರ ಹಾಗು ಧಾರ್ಮಿಕ ಕ್ರೌರ್ಯ ಪ್ರಾರಂಭವಾಯಿತು. ಹಾಗಿದ್ದರೂ ನಮ್ಮ ಬುದ್ಧಿಜೀವಿಗಳು ಪ್ರಚುರಿಸುತ್ತಿರುವ ಕೆಲವು ಜಾಣಸುಳ್ಳುಗಳನ್ನು ನೋಡಿರಿ. ನಮ್ಮ ಜ್ಞಾನಪೀಠಿ ಕಾರ್ನಾಡರು ಟೀಪೂಸುಲ್ತಾನನನ್ನು ವೈಭವೀಕರಿಸಿ ಒಂದು ನಾಟಕವನ್ನು ಬರೆದಿದ್ದಾರೆ. ಓರ್ವ ಪತ್ರಕರ್ತರು  ‘ಟೀಪೂಸುಲ್ತಾನನು ಮತಾಂಧನಾಗಿದ್ದನಲ್ಲವೆ’ ಎಂದು ಪ್ರಶ್ನಿಸಿದಾಗ, ಕಾರ್ನಾಡರು ಹೇಳಿದ್ದು ಹೀಗಿದೆ: ‘There was no concept of secularism at that time!’

ವಾಹ್! ಜ್ಞಾನಪೀಠಿಗಳೇ! ಟೀಪೂಸುಲ್ತಾನನಿಗಿಂತಲೂ ಸುಮಾರು ಎರಡುನೂರು ವರ್ಷಗಳಷ್ಟು ಮೊದಲೇ ವಿಶಾಲ ಕರ್ನಾಟಕದ ಸಾಮ್ರಾಟನಾಗಿದ್ದ ಕೃಷ್ಣದೇವರಾಯನು ವಿಜಯನಗರದಲ್ಲಿ ಮುಸಲ್ಮಾನರಿಗಾಗಿ ಮಸೀದಿಗಳನ್ನು ಕಟ್ಟಿಸಿಕೊಟ್ಟಿದ್ದನು ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲವೆ ಅಥವಾ ಇದು ಜಾಣ ವಿಸ್ಮರಣೆಯೆ? ಅಥವಾ ಟೀಪೂನ ಹಾಗು ಅವನಂಥವರ ಕಾಲಖಂಡದಲ್ಲಿ secularism concept ಅಳಿಸಿ ಹೋಯಿತೆ?
 
ಭಾರತದ ಸರ್ವಾಂಗೀಣ ಬೆಳವಣಿಗೆಗೆ ವಿವಿಧ ರಾಜ್ಯಗಳ ಕನಸುಗಳು ಹಾಗು ಆಲೋಚನೆಗಳು ಏನಿವೆ ಎನ್ನುವುದನ್ನು ಅರಿತುಕೊಂಡು ಅವುಗಳನ್ನು ಅಭಿವೃದ್ಧಿನೀತಿಯಲ್ಲಿ ಅಳವಡಿಸಿಕೊಳ್ಳೋಣ ಎನ್ನುವ ಕಾರಣಕ್ಕಾಗಿಯೇ ಪ್ರಧಾನಮಂತ್ರಿಯವರುನೀತಿ ಆಯೋಗವನ್ನು ಸ್ಥಾಪಿಸಿದರು. ನೀತಿ ಆಯೋಗ ಮೊದಲ ಸಭೆಯನ್ನು ಪ್ರಧಾನಿಯವರು ಫೆಬ್ರುವರಿ ೨೦೧೫ರಲ್ಲಿ ಕರೆದಿದ್ದರು.   ಸಭೆಗೆ ಕೆಲವು ರಾಜ್ಯಗಳ ಮುಖ್ಯ ಮಂತ್ರಿಗಳು ಉಪಸ್ಥಿತರಾಗಲಿಲ್ಲ.

ದೇಶದ ಪ್ರಗತಿಗಾಗಿ ವಿಚಾರವಿನಿಮಯ ಮಾಡಬಯಸುವ ಒಂದು ಸಭೆಯ ಮೊದಲ ಕಾರ್ಯಕ್ರಮಕ್ಕೆ ತರಹದ ಪ್ರತಿರೋಧ ಏಕೆ? ಭಾರತವುಸಹಕಾರಿ ಒಕ್ಕೂಟಎಂದು ತೆರಪಿಲ್ಲದೆ ಸಾರುತ್ತಿರುವವರು ಕೇಂದ್ರ ಸರಕಾರಕ್ಕೆ ಅಸಹಕಾರ ತೋರುತ್ತಿರುವ ಕಾರಣವೇನು?  ಸಮಗ್ರ ಭಾರತದ ಪ್ರಧಾನಿಯವರನ್ನು ತಿರಸ್ಕರಿಸುವ ಮೂಲಕ ಇವರು ಯಾವ ಸಂದೇಶವನ್ನು ಭಾರತೀಯರಿಗೆ ಕೊಡಲು ಬಯಸುತ್ತಿದ್ದಾರೆ? `ಭಾರತಕೋ ತುಕಡೇ ತುಕಡೇ ಕರೇಂಗೆ! Let India fall apart!’ ಎನ್ನುವುದು ಇವರ ಆಶಯವಾಗಿರಬಹುದೆ?

ಪ್ರಧಾನಿಯವರು ಬಾಂಗ್ಲಾ ದೇಶದ ಜೊತೆಗೆ ನದೀನೀರಿನ ಒಪ್ಪಂದ ಮಾಡಿಕೊಳ್ಳಲು ಕೋಲಕತ್ತೆಗೆ ಹೋಗಿದ್ದರು. ಸಂದರ್ಭದಲ್ಲಿ ಒಪ್ಪಂದವು ಸುಲಭವಾಗಲಿಲ್ಲ ; ಬಂಗಾಲದ ಮುಖ್ಯ ಮಂತ್ರಿಗಳು ಒಪ್ಪಂದಕ್ಕೆ ಅನುಕೂಲರಿರಲಿಲ್ಲ ಎಂದು ಹೇಳಲಾಗುತ್ತದೆ. ತಮ್ಮ ರಾಜ್ಯದ ಹಿತವು ಬೇರೆಯಾಗಿದೆ ಎಂದು ಅವರು ಭಾವಿಸಿದ್ದರೆಂದು ಹೇಳಲಾಗುತ್ತದೆ. ಅಥವಾ ಬಂಗಾಲದ ಮುಖ್ಯ ಮಂತ್ರಿಗಳು ಭಾರತದ ಪ್ರಧಾನಿಗೆ,  ‘ನನ್ನೆದುರಿಗೆ ನೀನ್ಯಾವ ಬಾಜೀರಾಯ!’ ಎಂದು ಸವಾಲು ಹಾಕಿದರು ಎಂದೂ ಕೆಲವರು ಹೇಳುತ್ತಾರೆ . ಏತಕ್ಕಾಗಿ ಸವಾಲು? ಪ್ರಧಾನ ಮಂತ್ರಿಗಳನ್ನು ಧಿಕ್ಕರಿಸುವುದರಿಂದ ತಮ್ಮ ರಾಜ್ಯದಲ್ಲಿ ತಮಗೊಂದು ರಾಜಕೀಯ ಪ್ರಭಾವಳಿ ಸಿಗುತ್ತದೆ ಎನ್ನುವ ತರ್ಕ ಇಲ್ಲಿರಬಹುದೆ? ಅಥವಾ ಇದು Let India fall apart ಎನ್ನುವುದರ ಪೂರ್ವಭಾವೀ ಪ್ರಯತ್ನವಾಗಿರಬಹುದೆ?!

ಕೇಂದ್ರ ಸರಕಾರದ ವಿಚಕ್ಷಣಾ ಪಡೆಯು (ಸಿ.ಬಿ.ಬಂಗಾಲದ ಓರ್ವ ಪೋಲೀಸ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಬಂದಾಗ, ಬಂಗಾಲ ಸರಕಾರವು ಕಾರ್ಯಕ್ಕೆ ಎನಿತೂ ಸಹಕಾರ ನೀಡಲಿಲ್ಲ. ಸರ್ವೋಚ್ಚ ನ್ಯಾಯಾಲಕ್ಕೆ ಕೇಂದ್ರ ಸರಕಾರವೂ ಹೆದರುತ್ತದೆ. ಅಂತಹದರಲ್ಲಿ ಬಂಗಾಲ ಸರಕಾರವು ಸರ್ವೋಚ್ಚ ನ್ಯಾಯಾಲಕ್ಕೆ ಸ್ವಲ್ಪವೂ ಬೆದರದೆ, ರಾಜಕುಮಾರನನ್ನು ತಮ್ಮ ಕಣ್ಣು ರೆಪ್ಪೆಯ ಕೆಳಗೆ ಕಾಯ್ದರು. ಏತಕ್ಕಾಗಿ ಅಸಹಕಾರ? ಇದರ ಅರ್ಥ ಹೀಗಿರಬಹುದೆ: ಬಂಗಾಲಿಗಳೇ, ನೀವು ಭಾರತದ ಪ್ರಜೆಗಳಲ್ಲ; ನೀವು ಬಂಗಾಲದ ಪ್ರಜೆಗಳು ಹಾಗು ಬಂಗಾಲವನ್ನು `ನಾವು ಆಳುತ್ತಿದ್ದೇವೆ!

JNUದಲ್ಲಿ ‘ಭಾರತದ ತುಕಡೆ ತುಕಡೆ’ ಆಂದೋಲನ; ಇದೀಗ ಅಲ್ಲಿಯೇ CAAದ ವಿರುದ್ಧ ಘರ್ಷಣೆ! ‘ನಾವೂ ಇಂಡಿಯನ್ಸ; ನಮಗೆ ರಾಷ್ಟ್ರಭಕ್ತಿಯನ್ನು ನೀವು ಕಲಿಸಬೇಕಾಗಿಲ್ಲ’ ಎನ್ನುವುದು ಈ ಹೋರಾಟಗಾರರ ಹಾಗು ಅವರನ್ನು ಬೆಂಬಲಿಸುವ ರಾಜಕಾರಣಿಗಳ ವಿತಂಡವಾದದ ಬೊಬ್ಬೆ! 

ವಾಸ್ತವದಲ್ಲಿ ‘ರಾಷ್ಟ್ರಭಕ್ತಿ’ ಎನ್ನುವುದು ಇರುವುದೇ ಇಲ್ಲ. ರಶಿಯಾದ ಖ್ಯಾತ ಪ್ರಾಣಿವರ್ತನಾ ವಿಜ್ಞಾನಿಯಾದ ಪಾವ್ಲೋವನು `ರಾಷ್ಟ್ರಭಕ್ತಿಯು ನಿರಂತರವಾದ ಪ್ರಯತ್ನಗಳ ಮೂಲಕ ಕಲಿಸಬೇಕಾದ ವರ್ತನೆಯಾಗಿದೆ’ ಎಂದಿದ್ದಾನೆ. (Patriotizm-operantnaya-reaktsiya = Patriotism is an operant conditioned reaction). 
ಖಂಡಿತವಾಗಿಯೂ ಇದು ಸತ್ಯ. ರಾಷ್ಟ್ರಭಕ್ತಿಯು ಕಲಿಕಾವರ್ತನೆಯಾಗಿದೆ. ಆದರೆ ಸ್ವಾರ್ಥವನ್ನು ಕಲಿಸಬೇಕಾಗಿಲ್ಲ. Selfishness is an instinct! 

ನಮ್ಮ ದೇಶ ಉಳಿದರೆ ತಾನೇ ನಾವೂ ಉಳಿಯುವುದು; ಆದುದರಿಂದ ನಾವು ದೇಶಭಕ್ತಿಯನ್ನು ನಮ್ಮ ಪ್ರಜೆಗಳಿಗೆ ಬಾಲ್ಯದಿಂದಲೇ ಒತ್ತಾಯದ ಪ್ರಯತ್ನಗಳ ಮೂಲಕ ಕಲಿಸಲೇಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ‘ಜೈಹಿಂದ್ ; ವಂದೇ ಮಾತರಮ್’ ಮೊದಲಾದ ಘೋಷಣೆಗಳು ಬೇಕಾಗುತ್ತವೆ. ಆದರೆ ನಮ್ಮವರೇ ಆದ ಕೆಲವು ಭಾರತೀಯರು ‘ಇದು ನಮ್ಮ ಧರ್ಮಾಚಾರದ ವಿರುದ್ಧ; ಆದುದರಿಂದ ನಾವು ‘ವಂದೇ ಮಾತರಮ್’ ಎನ್ನುವುದಿಲ್ಲ ಎನ್ನುವ ವಿಚಿತ್ರ ತರ್ಕವನ್ನು ಪ್ರತಿಪಾದಿಸುತ್ತಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೈನಿಕ ಶಿಕ್ಷಣ ಹಾಗು ಅಲ್ಪಕಾಲೀನ ಸೈನ್ಯವೃತ್ತಿ ಅಲ್ಲಿಯ ಯುವಕರಿಗೆ ಕಡ್ಡಾಯವಾಗಿದೆ ಎನ್ನುವುದು ಉದಾರಭಾರತದಲ್ಲಿ ವಾಸಿಸುತ್ತಿರುವ ನಮ್ಮವರಿಗೆ ತಿಳಿದಿಲ್ಲ!

ಅಣ್ಣಗಳಿರಾ, ನಮ್ಮ ದೇಶದ ವಿರೋಧಿಗಳಾದ ನಮ್ಮ ನೆರೆಹೊರೆಯವರು ನಮ್ಮ ನಾಶಕ್ಕೆ ಬೆಂಕಿಯನ್ನು ಉಗುಳುತ್ತ ನಿಂತುಕೊಂಡಿದ್ದಾರೆ. ಭಾರತವು ನಾಶವಾಗಿ ಹೋದರೆ, ಯಾವ ಭಾರತೀಯನೂ (-ಯಾವುದೇ ಧರ್ಮದವನಾಗಿರಲಿ-)
 ಉಳಿಯುವುದಿಲ್ಲ. ಯಾರಾದರೂ ಉಳಿದುಕೊಂಡರೆ, ಅವರು ನೆರೆಯ ದೇಶಗಳ ಗುಲಾಮರಾಗಿ, ಹಂದಿಗಳ ಕೊಟ್ಟಿಗೆಯಲ್ಲಿ ಬದುಕಬೇಕಾಗುತ್ತದೆ, ಅಷ್ಟೆ!

ಯೇಟ್ಸನ ಕವನವು ಭಾರತಕ್ಕೆ ಭವಿಷ್ಯವಾಣಿಯಾದೀತೆ?

Friday, January 17, 2020

ವಿಶ್ವವಾಣಿ ಪತ್ರಿಕೆಯ ಸಂಪಾದಕರಿಗೆ,

ವಿಶ್ವವಾಣಿ ಪತ್ರಿಕೆಯ ಸಂಪಾದಕರೆ,
ನಾನು ಮೆಚ್ಚುವ ದಿನಪತ್ರಿಕೆಗಳಲ್ಲಿವಿಶ್ವವಾಣಿಯೂ ಒಂದು. ಇದಕ್ಕೆ ಕಾರಣ ವಿಶ್ವವಾಣಿಯಲ್ಲಿ ಕಂಡು ಬರುವ ಜಾಣಹಾಸ್ಯ. ಇದು ಅನೇಕ ಸಲ ಯಾರ್ಯಾರೋ ವ್ಯಕ್ತಿಗಳ ಹುಳಕನ್ನು ಪ್ರದರ್ಶಿಸುವ ಸಲುವಾಗಿಯೂ ಬಳಕೆಯಾಗುತ್ತಿದೆ. ಅದರಲ್ಲೇನೂ ತಪ್ಪಿಲ್ಲ ಬಿಡಿ; ಆದರೆ ಇದು ವಿನಾಕಾರಣ ವ್ಯಕ್ತಿನಿಂದನೆಯಾಗಬಾರದಷ್ಟೆ? ಹಾಗಾದಾಗ ವಿಶ್ವವಾಣಿಗೆ ಪೀತಪತ್ರಿಕೆ ಎನ್ನುವ ಬಿರುದು ಬರಲಿಕ್ಕಿಲ್ಲವೆ? ೧೭--೨೦ರ ಪತ್ರಿಕೆಯನ್ನು ನೋಡಿದಾಗ ಇಂತಹ ಭಾವನೆಯೊಂದು ನನ್ನ ಮನದಲ್ಲಿ ಸುಳಿದು ಹೋಯಿತು.

ವಿಶ್ವವಾಣಿಯ ಮುಖಪುಟದಲ್ಲಿಯೇ ಸಲ ಒಂದುಸುದ್ದಿ+ಟೀಕೆಪ್ರಕಟವಾಗಿದೆ. ಅದು ಹೀಗಿದೆ:

ಸಮಾಚಾರಕ್ಕೆ ಕೊಡಲಾದ ಶೀರ್ಷಿಕೆಯೆ ನನ್ನಲ್ಲಿ ಅಸಹ್ಯವನ್ನು ಹುಟ್ಟಿಸಿತು. ‘ಅಲ್ಲಾಡಿಸ್ತೀರಿಪದದ ಅರ್ಥವೇನು? ……..ತಲೆಯನ್ನೆ?.... ಸುದ್ದಿಯ ತಿರುಳು ಇದಕ್ಕೆ ವಿರುದ್ಧವಾಗಿದೆ; ಹಾಗಾದರೆ ಇದು ಪೃಷ್ಠವನ್ನು ಸೂಚಿಸುತ್ತಿರಬಹುದೆಓದುಗನಾದ ನನಗಂತೂ ತಿಳಿಯದು. ಸಂಪಾದಕರೇ ಹೇಳಬೇಕು! ಇನ್ನೂ ಕೆಳಮಟ್ಟಕ್ಕೆ ಇಳಿದು ಕೇಳಬಹುದಾದರೆ ಇದು ನಾಯಿಯ ಬಾಲವನ್ನು ಸೂಚಿಸುತ್ತಿದೆಯೆ? ಆದರೆ ಇದು ಒಂದು ಗಂಭೀರ ಪತ್ರಿಕೆಯು ಮುಖಪುಟದಲ್ಲಿ ಕೊಡಬಹುದಾದ ಶೀರ್ಷಿಕೆಯಂತೆ ನನಗೆ ಅನಿಸುತ್ತಿಲ್ಲ. ಹಾಗಾದರೆ ಇದು ಬಹುಶಃ ಆಧುನಿಕ ಪತ್ರಿಕಾಕಾರರ ಅಪರಿಮಿತ ಭಾಷಾಸ್ವಾತಂತ್ರ್ಯವಿರಬಹುದೇನೊ?

ವರದಿಯನ್ನು ಬರೆದ ಶ್ರೀ ಜಯವೀರ ವಿಕ್ರಮ ಸಂಪತ್ ಗೌಡರು ಸುರೇಶಕುಮಾರರನ್ನುಸುರೇಶಕ್ರಮಎಂದು ಕರೆದಿದ್ದಾರೆ. ಏಕೆಂದರೆ ಮಂತ್ರಿಗಳು ಎಲ್ಲರ ಮೇಲೂ  ಕ್ರಮಜರುಗಿಸುತ್ತಾರಂತೆ! ಜಯವೀರ ವಿಕ್ರಮ ಸಂಪತ್ ಗೌಡರು ವರದಿ ಮಾಡಿದ ಘಟನೆಯಲ್ಲಿ , ಕುಣಿದು ಕುಪ್ಪಳಿಸಿದ ಶಿಕ್ಷಕಿಯರು ಯಾವುದೇ ಅಪರಾಧ ಮಾಡಿಲ್ಲವಂತೆ; ಅವರು ಅನುಸರಿಸಿದ ಹಾಡಿನಲ್ಲಿ ಯಾವುದೇ ಅಶ್ಲೀಲತೆ ಇಲ್ಲವಂತೆ; ಅಲ್ಲಲ್ಲಿ ಅಲ್ಪ ಸ್ವಲ್ಪ ಡಬಲ್ ಮೀನಿಂಗ್ ಇರಬಹುದಂತೆ! ಇಂತಹ ಕಾರ್ಯಕ್ರಮಗಳನ್ನು  ಸಾರ್ವಜನಿಕರು ತಮ್ಮ ಟೀವಿಯಲ್ಲಿ ನೋಡುವುದಿಲ್ಲವೆ? (ನೋಡಿಯೇ ನೋಡುತ್ತಾರೆ ಎಂದು ಗ್ರಹಿಸಿಕೊಳ್ಳಿರಿ!) ವಿದ್ಯಾರ್ಥಿಗಳು ಅಲ್ಲಿ ಕೆಟ್ಟಿಲ್ಲ ಅಂದರೆ ಇಲ್ಲಿಯೂ ಸಹ (ತಮ್ಮ ಶಿಕ್ಷಕಿಯರ ಕುಣಿತವನ್ನು ನೋಡಿಯೂ ಸಹ) ಕೆಡಲಾರರು ಎನ್ನುವುದು ಜಯವೀರ ವಿಕ್ರಮ ಸಂಪತ್ ಗೌಡರ ತರ್ಕ.

ವಿಶ್ವವಾಣಿಯ ಸಂಪಾದಕರೆ, ನೀವು ಇತ್ತೀಚೆಗೆ ರಸ್ತೆಯ ಮೇಲೆ ಓಡಾಡುತ್ತಿರುವ ಹದಿಹರೆಯದ ಹುಡುಗರ ಗುಂಪುಗಳನ್ನು ನೋಡಿರುವುರಾ? ಐದಾರು ಹುಡುಗರ ಗುಂಪಿನಲ್ಲಿ ಒಬ್ಬನ ಅಥವಾ ಇಬ್ಬರ ಕೈಗಳಲ್ಲಿ ಬೆಲೆ ಬಾಳುವ ಸ್ಮಾರ್ಟ ಫೋನ್ಹುಡುಗರೆಲ್ಲರೂ ಸ್ಮಾರ್ಟ ಫೋನ್ ನೋಡುತ್ತ ಹೊಲಸು ಹೊಲಸು ಮಾತುಗಳನ್ನು ಆಡುತ್ತ ನಡೆಯುತ್ತಿರುತ್ತಾರೆ. ಕೆಲವೊಮ್ಮೆ ಅವರು ಹೇಳುವ ಮಾತು ಹೀಗೂ ಇರುತ್ತದೆ: ‘, ನಾ ಆಕಿನ್ನ ಕರದೇನ್ಲೆ. ಆಕಿ ಇಂಥಲ್ಲಿ ಬರತೇನಂತ ಹೇಳ್ಯಾಲಲೆ.’ ನಮ್ಮ ಹುಡುಗರ ಸದ್ಯದ ನೈತಿಕ ಮಟ್ಟ ಇದು. ಗೌಡರೆ, ನೀವು ಇದನ್ನು ಸಮರ್ಥಿಸುತ್ತೀರಾ? ಇಂತಹ ಹುಡುಗರೆ ನಂತರದಲ್ಲಿ ಅಸಹಾಯಕ ಬಾಲಕಿ ಸಿಕ್ಕಾಗ ರೇಪ್ ಮಾಡುವವರು; ಸಂತ್ರಸ್ತೆ ತಮ್ಮ ಗುರುತು ಹೇಳಬಹುದೆನ್ನುವ ಹೆದರಿಕೆಯಲ್ಲಿ ಅವಳನ್ನು ಭೀಕರವಾಗಿ ಕೊಲೆ ಮಾಡುವವರು. ಇವರೇ ನಿರ್ಭಯಾಳ ಅತ್ಯಾಚಾರಿ ಹಾಗು ಕೊಲೆಗಾರರು. ಇವರಿಗೆ ಇಂತಹ ಶಿಕ್ಷಣವನ್ನು ಯಾರು ನೀಡುತ್ತಿದ್ದಾರೆ, ಗೌಡರೆ? ಅವರ ಪರಿಸರವೆ ಅಂದರೆ ಪಾಠಶಾಲೆಯೆ ಇದಕ್ಕೆ ಕಾರಣವಲ್ಲವೆ?

ನನ್ನ ನಿವಾಸದ ಸ್ವಲ್ಪ ಕೆಳಗೆ ಒಂದು ಹಣಮಪ್ಪನ ಸ್ವಲ್ಪ ದೊಡ್ಡ ಗುಡಿಯಿದೆ. ಅಲ್ಲಿ ರೈತರು ಹಾಗು ಕಾರ್ಮಿಕರು ಕೂತು, ಹರಟೆ ಹೊಡೆದು ಹೋಗುತ್ತಿರುತ್ತಾರೆ. ಕೆಲವು ದಿನಗಳ  ಹಿಂದೆ ಒಂದು ಸಾರ್ವಜನಿಕ ಪ್ರದರ್ಶನ ಅಲ್ಲಿ ನಡೆದಿತ್ತು. ಒಬ್ಬ ಪುಟ್ಟ ಹುಡುಗಿ ಹಾಗು ಒಬ್ಬ ಹದಿಹರೆಯದ ಹುಡುಗ , ಯಾವುದೋ ಸಿನಿಮಾ ಹಾಡಿಗೆ, ತಮ್ಮ ಮೈ ಕೈ ಕುಣಿಸುತ್ತ ಅಸಹ್ಯವಾಗಿ ಕುಣಿಯುತ್ತಿದ್ದಾರೆ. ಕೂಡಿದ ಸಾರ್ವಜನಿಕರಿಂದ ಸೀಟಿ ಹಾಗು ಚಪ್ಪಾಳೆಗಳ ಮೆಚ್ಚುಗೆ. ಇದಕ್ಕೆ ಕಾರಣವೆಂದರೆ ಯಾವ ಗುಡಿ ಗುಂಡಾರಗಳಲ್ಲಿ ಒಂದು ಕಾಲಕ್ಕೆ ಹಳ್ಳಿಗರುಸತ್ಯ ಹರಿಶ್ಚಂದ್ರನಂತಹ ಬಯಲಾಟಗಳನ್ನು ಆಡುತ್ತಿದ್ದರೊ, ಅಲ್ಲೀಗ ಅನೈತಿಕ ಕುಣಿತ ನಡೆಯುತ್ತಿದೆ. ಇಂತಹದನ್ನು ಹುಡುಗರು ಕಲಿಯುವುದು ಟೀವೀ ಹಾಗು ಸ್ಮಾರ್ಟಫೋನುಗಳಿಂದ. ಇದಕ್ಕೆ ಪ್ರೋತ್ಸಾಹ ಕೊಡುವವರು ನಮ್ಮ ಶಿಕ್ಷಕಿಯರು ಹಾಗು ಕೆಲವಾರು ಪತ್ರಕರ್ತರು.

ಭಲೇ ಜಯವೀರ ವಿಕ್ರಮ ಸಂಪತ್ ಗೌಡರೆ! ಸುರೇಶಕುಮಾರರು ನಮ್ಮೆಲ್ಲ ರಾಜಕಾರಣಿಗಳಲ್ಲಿಯೇ ಸಭ್ಯ ಹಾಗು ಸುಸಂಸ್ಕೃತ ಎಂದು ಹೆಸರಾದವರು. ನಾವು ಕಟ್ಟಬೇಕಾದ ಭಾರತವು ಸುಸಂಸ್ಕೃತವಾದ ಆಧುನಿಕ ಭಾರತ ಎಂದು ಅರಿತವರು. ಅವರ ಜೊತೆಗೆ ನೀವು ಕೈಕೂಡಿಸದಿದ್ದರೆ ಬೇಡ, ಅವರ  ಕಾಲೆಳೆಯದಿದ್ದರೆ ಸಾಕು!
-ಸುನಾಥ