Tuesday, September 18, 2018

ನನಗೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಕು




೧೯೫೬ನೆಯ ಇಸವಿಯಲ್ಲಿ ಕರ್ನಾಟಕ ಏಕೀಕರಣವಾದಾಗ, ಉತ್ತರ ಕರ್ನಾಟಕದ ಕನ್ನಡಿಗರು ಬಹಳ ಸಂಭ್ರಮಿಸಿದರು. ಆದರೆ ಇದೀಗ ಯಾಕಾದರೂ ಏಕೀಕರಣವಾಯಿತೊ ಎಂದು ದುಃಖಿಸುತ್ತಿದ್ದಾರೆ. ಇದಕ್ಕೆ ಅನೇಕ ಆರ್ಥಿಕ ಹಾಗು ರಾಜಕೀಯ ಕಾರಣಗಳು ಇದ್ದಿರಬಹುದು. ಆದರೆ ಉತ್ತರ ಕರ್ನಾಟಕದ ಕನ್ನಡಿಗರು ತಮ್ಮ ಕನ್ನಡ ಭಾಷೆ ಕಳೆದು ಹೋದದ್ದಕ್ಕಾಗಿ, ವಿರೂಪಗೊಂಡಿದ್ದಕ್ಕಾಗಿ ಹಳಹಳಿಸುತ್ತಿದ್ದಾರೆ ಎನ್ನುವುದೂ ಒಂದು ಮುಖ್ಯ ಕಾರಣವಾಗಿದೆ.

ಒಂದು ಕಾಲದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಸಾಹಿತಿಗಳು ಹಾಗು ರಾಜಕೀಯ ಮುಖಂಡರು ಹೋರಾಟ ನಡೆಸಿದರು. ಧಾರವಾಡದ ರಾ..ದೇಶಪಾಂಡೆಯವರುಸಿರಿಗನ್ನಡಂ ಗೆಲ್ಗೆಎನ್ನುವ ಘೋಷಣೆಯನ್ನು ಕೊಟ್ಟರುಹರಿದು ಹಂಚಿ ಹೋದ ಕನ್ನಡ ನಾಡಿನಲ್ಲಿ ಒಂದು ಭಾಗದ ಜನರ ಮಾತು ಮತ್ತೊಂದು ಭಾಗದವರಿಗೆ ಅರ್ಥವಾಗುವುದಿಲ್ಲವಲ್ಲ ಎಂದು ಕನ್ನಡಿಗರು ಅಚ್ಚರಿಪಟ್ಟಿಕೊಳ್ಳುತ್ತಿದ್ದರು. ಶ್ರೀರಂಗರು ಈ ವಿಪರ್ಯಾಸದ ಬಗೆಗೆ ಒಂದು ಪ್ರಹಸನವನ್ನೇ ಬರೆದರು!  

() ಸರಿ, ಕರ್ನಾಟಕ ಏಕೀಕರಣವಂತೂ ಆಯಿತು. ಇದೀಗ ಸಿರಿಗನ್ನಡದ ಬದಲಾಗಿ ಬರಗನ್ನಡವು ಕರ್ನಾಟಕದಲ್ಲಿ ಹರಡಿದೆ. ಏಕರೂಪ ಕನ್ನಡದ ಬದಲಾಗಿಏಕ ವಿರೂಪದಕನ್ನಡ ಎಲ್ಲೆಡೆಗೂ ವ್ಯಾಪಿಸಿದೆ. ಪಾಠಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಹಾಗು ವರ್ತಮಾನ ಪತ್ರಿಕೆಗಳಲ್ಲಿಏಕರೂಪ ಕನ್ನಡಎನ್ನುವ ನೆವದಲ್ಲಿ ವಿಜೃಂಭಿಸುತ್ತಿರುವ ಕನ್ನಡವು ಸಿರಿಗನ್ನಡವಲ್ಲ. ಅಥವಾ ಸಮಗ್ರ ಕರ್ನಾಟಕದ ಎಲ್ಲ ಪ್ರದೇಶಗಳ ಸಾರಸತ್ವವಾದ ಕನ್ನಡವೂ ಅಲ್ಲ. ನಿರ್ದಾಕ್ಷಿಣ್ಯದಿಂದ ಹೇಳಬೇಕೆಂದರೆ ಇದು ಮೈಸೂರು ಕನ್ನಡ. ತನ್ನೆಲ್ಲ ದೋಷಗಳ ಸಹಿತವಾಗಿ ಇತರ ಕರ್ನಾಟಕದ ಮೇಲೆ ಹೇರಲಾದ ಮೈಸೂರು ಕನ್ನಡ. ಆದರೆ ಕರ್ನಾಟಕವನ್ನು ಒಡೆಯುವದರಿಂದ ವಿರೂಪಕನ್ನಡವು ಸುರೂಪವಾಗುವುದೆ?  

ಹೌದು, ಏಕೆಂದರೆ ಏಕೀಕರಣದ ಸಮಯದಲ್ಲಿ ಇತರ ಕನ್ನಡಿಗರು ಮೈಸೂರು ಕನ್ನಡದ ದೋಷಗಳನ್ನು ಅವರಿಗೆ ತೋರಿಸಿದರೂ ಸಹ, ಮೈಸೂರಿಗರು ಹಠ ಸಾಧಿಸಿದರು. ಸ್ವಪ್ರಭುತ್ವದಲ್ಲಿದ್ದ ಮೈಸೂರಿಗರಿಗೆ ಪರಪ್ರಭುತ್ವದಲ್ಲಿದ್ದ ಇತರ ಕನ್ನಡಿಗರು ತಲೆ ಬಗ್ಗಿಸಬೇಕಾಯಿತು.

ಮೈಸೂರು ಕನ್ನಡವು ಸೊಗಸಾದ ಹಾಗು ಸೌಮ್ಯವಾದ ಕನ್ನಡ. ಇದು ನನಗೆ ತುಂಬ ಇಷ್ಟವಾದ ಕನ್ನಡ. ಆದರೆ ಇತರ ಕರ್ನಾಟಕದ ಮೇಲೆ ಹೇರಲಾದ ಈ ಕನ್ನಡದಲ್ಲಿ ಕೆಲವು ದೋಷಗಳಿವೆ. ಅನೇಕ ವರ್ಷಗಳಿಂದ ಈ ದೋಷಗಳೊಡನೆ ಬಾಳುತ್ತಿರುವ ಮೈಸೂರಿಗರು ಇವು ಸರಿಯಾದ ರೂಪಗಳು ಎನ್ನುವ ಭ್ರಮೆಯಲ್ಲಿದ್ದಾರೆ ಹಾಗು ಈ ದೋಷಗಳನ್ನು ಬಿಡಲು ಸಿದ್ಧರಿಲ್ಲಈ ಹೇಳಿಕೆಗೆ ಏನು ಸಮರ್ಥನೆ ಇದೆ ಎಂದು ಕೇಳುವಿರಾ? ಅದು  ಹೀಗಿದೆ: ಮೈಸೂರಿನವರ ಬರಹ ಹಾಗು ಉಚ್ಚಾರಗಳು ವ್ಯಾಕರಣವಿರೋಧಿಯಾಗಿದ್ದು ಇವನ್ನೇ ಸಮಗ್ರ ಕರ್ನಾಟಕದ ಮೇಲೆ ಹೇರಲಾಗಿದೆ. ಹುಬ್ಬೇರಿಸಬೇಡಿ, ಇದನ್ನು ವಿವರವಾಗಿ ಹೇಳುತ್ತೇನೆ:  

ಕನ್ನಡದಲ್ಲಿ, ಎನ್ನುವ ಅಕ್ಷರಗಳಿಂದ ಪ್ರಾರಂಭವಾಗುವ ಅಕ್ಷರಮಾಲೆಯಲ್ಲಿ ೧೪ ಸ್ವರಗಳು ಹಾಗು ಅಂ ಮತ್ತು ಅಃ ಎನ್ನುವ ಅನುಸ್ವಾರ ಹಾಗು ವಿಸರ್ಗಳಿವೆ ಎನ್ನುವುದನ್ನು ನಾವೆಲ್ಲರೂ ಎಷ್ಟೋ ವರ್ಷಗಳಿಂದ ಕಲಿತಿದ್ದೇವೆ. ಈ ಅಕ್ಷರಮಾಲೆಯಲ್ಲಿವನ್ನು ಉತ್ತರ ಕರ್ನಾಟಕದವರು ಹೇಗೆ ಉಚ್ಚರಿಸುತ್ತಾರೆ? ‘ಅರಸಎನ್ನುವ ಪದದಲ್ಲಿಯದ ಉಚ್ಚಾರದಂತೆ ಅಲ್ಲವೆ? ಹಳೆಯ ಮೈಸೂರಿಗರ ಮೇರೆಗೆಇದುಎನ್ನುವ ಸ್ವರದ ಹೃಸ್ವರೂಪವಂತೆ. ಆದುದರಿಂದ ಈ ಸ್ವರವನ್ನುಸ್ವರದ ಹೃಸ್ವದಂತೆ ಉಚ್ಚರಿಸಬೇಕಂತೆ! (--ಇದು ನನಗೆ ತಿಳಿಯಲೇ ಇಲ್ಲ--). ಅವರು ನೀಡುವ ಸಮರ್ಥನೆ ಏನೆಂದರೆ ಎಲ್ಲ ಸ್ವರಗಳಿಗೆ ಒಂದು ಹೃಸ್ವರೂಪ ಹಾಗು ಒಂದು ದೀರ್ಘರೂಪ ಇವೆ. ಉದಾಹರಣೆಗೆ ಇ ಮತ್ತು ಈ; ಉ ಮತ್ತು ಊ. ಆದುದರಿಂದ ಅ ಇದು ಆ ಎನ್ನುವ ಸ್ವರದ ಹೃಸ್ವರೂಪ. ಹೀಗಾಗಿಎನ್ನುವದನ್ನು ಎಂದಂತೆಯೇ ಆದರೆ ಹೃಸ್ವವಾಗಿ ಉಚ್ಚರಿಸಬೇಕು. (--ಇದು ನನಗೆ ಸಾಧ್ಯವಾಗಲೇ ಇಲ್ಲ--). ಈ ತರ್ಕಕ್ಕೆ ಜೋತು ಬಿದ್ದು ಅವರು ಅಕ್ಷರಮಾಲೆಯ ಸ್ವರಗಳ ಅಭ್ಯಾಸ ಮಾಡುವಾಗ, ‘ಸ್ವರವನ್ನು (=ಅರಸ ಪದದಲ್ಲಿಯ ರೀತಿಯಲ್ಲಿ) ಉಚ್ಚರಿಸದೇ,  ‘, , , …’ ಎಂದೇ ಹೇಳುತ್ತಾರೆ. ಹಾಗಿದ್ದರೆ, ‘ಅರಸಪದದಲ್ಲಿರುವಸ್ವರವನ್ನು ಹೇಗೆ ಉಚ್ಚರಿಸುತ್ತೀರಿ; ಅದುಸ್ವರದ ಹೃಸ್ವರೂಪ ಅಲ್ಲವಲ್ಲಎಂದು ಕೇಳಿದರೆ ಅವರಲ್ಲಿ ಉತ್ತರವಿಲ್ಲ! ಹಾಗಿದ್ದರೆ ಈ (ಅರಸ ಪದದಲ್ಲಿ ಇರುವಂತಹ ಅ ಸ್ವರಕ್ಕೆ) ಬೇರೊಂದು ಪ್ರತ್ಯೇಕ ಚಿಹ್ನೆಯನ್ನು ನಾವು ಹೊಸದಾಗಿಯಾದರೂ ರೂಪಿಸಬೇಕಲ್ಲವೆ

ಆ ಚಿಹ್ನೆಯನ್ನು a ಎಂದಿಟ್ಟುಕೊಳ್ಳಿರಿ. ಆವಾಗ ಕನ್ನಡ ವರ್ಣಮಾಲೆಯು, ..’ ಆಗುವ ಬದಲು  ‘a, , …’ ಎಂದಾಗುವುದು. ಹಾಗು ಅರಸ , ಅಡವಿ ಮೊದಲಾದ ಪದಗಳನ್ನು aರಸ, aಡವಿ ಎಂದು ಬರೆಯಬೇಕಾದೀತು. ಈ ಚಿಹ್ನೆಗಳ ವಿವರಣೆ ಹೀಗಿದೆ:
a = ‘ರಸದಲ್ಲಿಯ ಅ
= ಹೃಸ್ವ ಆ 
= ದೀರ್ಘ ಆ
(ವಿನೋದವೆಂದರೆ ಮೈಸೂರಿಗರು ಅಕ್ಷರಮಾಲೆಎನ್ನುವಾಗವನ್ನು aತರಹವೇ ಉಚ್ಚರಿಸುತ್ತಾರೆ! ಅದನ್ನೇ, .. ’ ಎನ್ನುವಾಗ, ‘, ಎನ್ನುತ್ತಾರೆ.)

ಈ ಮಾತು ಇನ್ನಿಷ್ಟು ಸ್ಪಷ್ಟವಾಗಬೇಕಾದರೆ ನಾವು ವ್ಯಂಜನಗಳ ಉದಾಹರಣೆಯನ್ನು ನೋಡಬೇಕಾಗುತ್ತದೆ: ‘ಕನಕಎನ್ನುವ ಪದವನ್ನು ತೆಗೆದುಕೊಳ್ಳಿರಿ. ಹಳೆಮೈಸೂರಿನಲ್ಲಿ ಕನಕಾಎನ್ನುವ ಹುಡುಗಿಯ ಹೆಸರನ್ನುಕನಕಎಂದು ಬರೆಯುತ್ತಾರೆ. ಈ ಪದದಲ್ಲಿ ಮೊದಲನೆಯವನ್ನುಕಣ್ಣುಎನ್ನುವ ಪದದಲ್ಲಿಯದಂತೆ ಉಚ್ಚರಿಸುತ್ತಾರೆ. (ಇದು ಸರಿಯಾದದ್ದು.) ಆದರೆ ಎರಡನೆಯವನ್ನುಕಾಗೆಎನ್ನುವ ಪದದಲ್ಲಿಯಕಾದಂತೆ ಉಚ್ಚರಿಸುತ್ತಾರೆ. ಇದು ತಪ್ಪು. ಏಕೆಂದರೆ ಒಂದೇ ಅಕ್ಷರಕ್ಕೆ ಎರಡು ಭಿನ್ನ ಉಚ್ಚಾರಗಳು! ಇದೆಂಥ ಅಕ್ಷರಮಾಲೆ, ಇದೆಂಥ ವ್ಯಾಕರಣ! ಮೈಸೂರು ಪ್ರದೇಶದಲ್ಲಿಯ ಕಾರಾಂತ ಹೆಣ್ಣು ಹೆಸರುಗಳ ಬರವಣಿಗೆ ಕೊನೆಗೊಳ್ಳುವುದು ಹೃಸ್ವಸ್ವರದಲ್ಲಿ, ಆದರೆ ಉಚ್ಚರಿತವಾಗುವುದು ದೀರ್ಘದಲ್ಲಿ! ಉದಾಹರಣೆಗೆ: ಬರೆಯುವುದು ಸರಸ; ಉಚ್ಚರಿಸುವುದು ಸರಸಾ! ಇದು ತಪ್ಪಲ್ಲವೆ? ಅಲ್ಲವೆಂದರೆ, ‘ಸರಸ ಸಂಭಾಷಣೆ’ ಎನ್ನುವ ವಾಕ್ಯವನ್ನು ‘ಸರಸಾ ಸಂಭಾಷಣೆ’ ಎಂದು ಹೇಳುತ್ತೀರಾ?

ನಮ್ಮ ಕನಕದಾಸರ ಹೆಸರಿನಲ್ಲಿಯಕನಕಭಾಗವನ್ನಷ್ಟೇ ತೆಗೆದುಕೊಳ್ಳಿರಿ. ಮೈಸೂರಿಗರಿಗೆ ಇದುಕನಕಾಎನ್ನುವ ಹೆಣ್ಣಿನ ಹೆಸರು. ಇದೀಗ ಕನಕದಾಸರ ಲಿಂಗಪರಿವರ್ತನೆಯಾದಂತಾಯಿತು. ವರ್ತಮಾನದ ನೈಜಜೀವನದಲ್ಲಿಯೂ ಇದೇ ರೀತಿಯ ಘಟನೆಯಾಗಿದೆ. ‘ನೇಮಿಚಂದ್ರಎಂದರೆ ಯಾರು ಹೇಳಿ? ಥಟ್ಟನೆ ನಿಮಗೆ ಹಳೆಗನ್ನಡದ ನೇಮಿಚಂದ್ರನ ನೆನಪಾದೀತು. ಇದು ಪುರುಷನ ಹೆಸರಲ್ಲವೆ? ತಾಳಿ, ತಾಳಿ…. ವರ್ತಮಾನ ಕಾಲದಲ್ಲಿನೇಮಿಚಂದ್ರ’  ಎನ್ನುವ ಲೇಖಕಿ ಇದ್ದಾರೆ. ಇವರುನೇಮಿಚಂದ್ರಾಆಗಬೇಕಿತ್ತು. ಆದರೆ ಮೈಸೂರಿಗರ ಪದ್ಧತಿಯಂತೆನೇಮಿಚಂದ್ರಆಗಿದ್ದಾರೆ. ಹಾಗಿದ್ದರೆ ಪುರುಷ ನೇಮಿಚಂದ್ರನನ್ನುನೇಮಿಚಂದ್ರ್ಎಂದೂ, ಪುರುಷ ಕನಕನನ್ನುಕನಕ್ಎಂದೂ ಬರೆಯಬೇಕೆ!?                            
(ಲೇಖಕಿ ನೇಮಿಚಂದ್ರಾರ ಹೆಸರನ್ನು ಬಳಸಿಕೊಳ್ಳುವುದು ಅನಿವಾರ್ಯವಾಯಿತು; ಅವರ ಕ್ಷಮೆ ಕೋರುತ್ತೇನೆ.)

ಈ ಅಧ್ವಾನವು ವ್ಯಕ್ತಿಗಳ ಹೆಸರಿಗಷ್ಟೇ ಸೀಮಿತವಾಗಿಲ್ಲ. ಒಂದು ವಿಚಿತ್ರ ಘಟನೆಯನ್ನು ಹೇಳುತ್ತೇನೆ, ಕೇಳಿ. ಧಾರವಾಡದಿಂದ ನವಿಲುಗುಂದಕ್ಕೆ ಹೋಗುವ ದಾರಿಯಲ್ಲಿ ಬ್ಯಾಹಟ್ಟಿ ಎನ್ನುವ ಪುಟ್ಟ ಊರೊಂದಿದೆ. ಇಲ್ಲಿಯ ಬಸ್ ನಿಲ್ದಾಣದ ಪಕ್ಕದ ಸರಕಾರಿ ಕಟ್ಟಡವೊಂದರ ಮೇಲೆ ಫಲಕವೊಂದನ್ನು ನೇಣು ಹಾಕಲಾಗಿದೆ: ಶಿಶುಪಾಲನ ಕಚೇರಿ’. 

ಇದನ್ನು ಓದಿದ ನಾನು ಒಂದು ಕ್ಷಣ ದಿಙ್ಮೂಢನಾದೆ. ‘ಶಿಶುಪಾಲನಎನ್ನುವ ಪದದ ಅರ್ಥಶಿಶುಪಾಲ ಎನ್ನುವವನಎಂದಾಗುವದಲ್ಲವೆ? ಮಹಾಭಾರತದ ಶಿಶುಪಾಲನು ಇಲ್ಲೇಕೆ ತನ್ನ ಕಚೇರಿಯನ್ನು ತೆರೆದಿದ್ದಾನೆ? ಧೈರ್ಯ ಮಾಡಿ ಅಲ್ಲಿಯ ಓರ್ವ ಸಿಬ್ಬಂದಿಯನ್ನು ಕೇಳಿಯೇ ಬಿಟ್ಟೆ. ಅವರುಇದು ಶಿಶುಪಾಲನು  ತೆಗೆದ ಕಚೇರಿ ಅಲ್ಲ; ಕರ್ನಾಟಕ ಸರಕಾರದವರುಶಿಶುಪಾಲನಾ ಕಚೇರಿಯನ್ನು ಇಲ್ಲಿ ತೆಗೆದಿದ್ದಾರೆಎಂದು ಹೇಳಿದರು. ‘ಹಾಗಿದ್ದರೆ, ಶಿಶುಪಾಲನಾ ಎಂದು ಬರೆಯಿಸುವ ಬದಲಾಗಿ ಶಿಶುಪಾಲನ ಎಂದೇಕೆ ಬರೆಯಿಸಿದ್ದೀರಿ?’ ಎಂದು ಅವರಿಗೆ ಕೇಳಿದೆ. ‘ಇದು ಸರಕಾರ ಕಳುಹಿಸಿಕೊಟ್ಟ ಫಲಕ. ಅವರು ಮೈಸೂರಿನ ಪದ್ಧತಿಯಂತೆ ಬರೆಯಿಸಿದ್ದಾರೆಎಂದು ಅಲ್ಲಿಯ ಸಿಬ್ಬಂದಿ ವಿವರಿಸಿದರು

ಏಕೀಕರಣದಿಂದಾಂತಹ ಏಕರೂಪತೆ ಅಥವಾ ವಿರೂಪತೆ ಇದು. ಈ ವಿರೂಪತೆ ಸರಕಾರದ ಫಲಕಗಳಿಗೆ, ಸರಕಾರೀ ಕಡತಗಳಿಗೆ ಹಾಗು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ ಎಂದಲ್ಲ. ನಮ್ಮ ವರ್ತಮಾನ ಪತ್ರಿಕೆಗಳೂ ಸಹ ಈ ಏಕರೂಪತೆಯನ್ನು ಹೃತ್ಪೂರ್ವಕವಾಗಿ ಅಪ್ಪಿಕೊಂಡು ಕನ್ನಡವನ್ನು ಕೊಲ್ಲುತ್ತಿವೆ. ಇತ್ತೀಚೆಗೆ ನಮ್ಮ ವರ್ತಮಾನ ಪತ್ರಿಕೆಗಳು ಅನೇಕ ಸ್ಥಳಗಳಿಂದ ಪ್ರಕಟವಾದರೂ ಸಹ, ಭಾಷಾರೂಪ ಮಾತ್ರ ಒಂದೇ ಆಗಿದೆ….ಅದು ಮೈಸೂರು ಭಾಷಾವಿರೂಪ

ಒಂದು ಉದಾಹರಣೆಯನ್ನು ಕೊಡುತ್ತೇನೆ. ಭಾರತಕ್ಕೆ ಪದಕವನ್ನು ಗೆದ್ದು ಕೊಟ್ಟಂತಹಹಿಮಾ ದಾಸ’, ವಿಜಯ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಪತ್ರಿಕೆಯ ವರದಿಯಲ್ಲಿಹಿಮದಾಸಆಗಿದ್ದಾಳೆ. ಹಿಮದಾಸ ಎಂದರೆ ಏನುಹಿಮದ ದಾಸ ಎಂದೆ? ಅದೇ ಪತ್ರಿಕೆಯಲ್ಲಿ ಪ್ರಕಟವಾದ  ಅನುಷ್ಕಾ ಶರ್ಮಾಳ ಸುದ್ದಿಯನ್ನು ಗಮನಿಸಿರಿ. ಸಸ್ಯಾಹಾರಿಯಾದ ಇವಳುಸಸ್ಯಹಾರಿಆಗಿದ್ದಾಳೆ. ಸಸ್ಯಾಹಾರಿ ಎಂದರೆಸಸ್ಯ+ ಆಹಾರಿ.’ ಅರ್ಥಾತ್ ಸಸ್ಯವನ್ನು ಆಹಾರವಾಗಿ ಸ್ವೀಕರಿಸುವವನು. ‘ಸಸ್ಯಹಾರಿಎಂದರೆ ಸಸ್ಯವನ್ನು ಹಾರದಂತೆ ಹಾಕಿಕೊಂಡಿರುವ ಪುರುಷ

ಇದು ಪತ್ರಕರ್ತರ ತಪ್ಪಲ್ಲ. ಇಂತಹ ತಪ್ಪು ಅಭ್ಯಾಸವು ಮೈಸೂರು ಪ್ರದೇಶದಲ್ಲಿ ದೀರ್ಘಕಾಲದಿಂದ ಬಳಕೆಯಲ್ಲಿ ಇರುವಂತೆ ಕಾಣುತ್ತದೆ. ಮುಮತಾಜ ಅಲಿ ಎನ್ನುವ ಸಜ್ಜನ ಮಂತ್ರಿಗಳೊಬ್ಬರು ಕರ್ನಾಟಕ ಸರಕಾರದಲ್ಲಿ ಇದ್ದದ್ದು ತಮಗೆ ಗೊತ್ತಿರಬಹುದು. ಅವರು ಕೆಲವು ವರ್ಷಗಳ ಹಿಂದೆ ಪತ್ರಿಕೆಗಳಿಗೆ ಬರೆದ ಪತ್ರವೊಂದರಲ್ಲಿಶಿಲಾನ್ಯಾಸಎನ್ನುವ ಪದದ ಬದಲಾಗಿಶಿಲನ್ಯಾಸಎಂದು ಬರೆದಿದ್ದರು. ಅವರೋ ಅಥವಾ ಮತ್ತೊಬ್ಬರೋ, ‘ಶುಭಾಶಯಗಳುಎನ್ನುವುದನ್ನುಶುಭಶಯಗಳುಎಂದು ಬರೆದಿದ್ದರು. ಅಂದರೆ ಕೊನೆಯಲ್ಲಿರುವ ಅಕ್ಷರವನ್ನಷ್ಟೇ ಅಲ್ಲ, ಮಧ್ಯದಲ್ಲಿರುವ ಅಕ್ಷರವನ್ನೂ ಸಹ ಮೈಸೂರಿಗರು ಹೃಸ್ವವಾಗಿ ಬರೆದು ದೀರ್ಘವಾಗಿ ಉಚ್ಚರಿಸುತ್ತಾರೆ. ಈ ತರ್ಕದ ಪ್ರಕಾರಆಧುನಿಕ ನಾರಿಪದವನ್ನು ಅವರು ಆಧುನಿಕ ನರಿಎಂದು ಬರೆಯಬೇಕು!   

ಇಲ್ಲಿಯವರೆಗೆ  ಉತ್ತರ ಕರ್ನಾಟಕದವರು ಈ ತಪ್ಪುಗಳನ್ನು ಬರಹದಲ್ಲಿ ಮಾತ್ರ ನೋಡುತ್ತಿದ್ದರು. ದೂರದರ್ಶನ ಬಂದ ಮೇಲೆ ಇಂತಹ ತಪ್ಪುಗಳನ್ನು ಆಲಿಸುವ  ದೌರ್ಭಾಗ್ಯ ಸಹ ನಮಗೆ ಒದಗಿ ಬಂದಿದೆ. ಚಂದನ ದೂರದರ್ಶನದಲ್ಲಿ ಡಾ. ಸೋಮೇಶ್ವರರು ನಡೆಯಿಸಿ ಕೊಡುವಥಟ್ಟಂತ ಹೇಳಿಕಾರ್ಯಕ್ರಮದಲ್ಲಿಅಂಕಪದವನ್ನು ಅವರುಅಂಕಾಎಂದೇ ಉಚ್ಚರಿಸುತ್ತಾರೆ. ‘ಅಂಕಪದದಲ್ಲಿಯವನ್ನುಕರಡಿಯಲ್ಲಿಯದಂತೆ ಉಚ್ಚರಿಸಬೇಕೇ ಹೊರತುಕಾಳಿಯಲ್ಲಿಯಕಾದಂತೆ ಅಲ್ಲ. ಈ ಅಭ್ಯಾಸವನ್ನು ಮುಂದುವರೆಸಿದರೆ ಏನಾಗುತ್ತದೆ? ‘ಅಂಕದ ಪರದೆಯು ಜಾರಿದ ಮೇಲೆ..’ ಎನ್ನುವ ಸಿನಿಮಾದ ಹಾಡನ್ನು ನಮ್ಮ ಅನೇಕ ಸಹೃದಯ ಓದುಗರು ಕೇಳಿರಬಹುದು. ಇದನ್ನುಆಂಕಾದಾ ಪಾರಾದೆಯು ಜಾರಿದಾ ಮೇಲೆ……’ಎಂದು ಹಾಡಬೇಕಾದೀತು! (ಈ ರಸಪ್ರಶ್ನೆ ಕಾರ್ಯಕ್ರಮ ತುಂಬ ಸೊಗಸಾಗಿದೆ. ನನ್ನ ಆಕ್ಷೇಪವುಅಂಕಾಕ್ಕೆ ಮಾತ್ರ.)

ಕನ್ನಡ ಹಾಗು ಸಂಸ್ಕೃತ ಭಾಷೆಗಳು ಅನ್ಯೋನ್ಯ ಭಾಷೆಗಳು. ಮೈಸೂರು ಕನ್ನಡಿಗರು ಸಂಸ್ಕೃತ ಶ್ಲೋಕಗಳನ್ನು ಓದುವದನ್ನು ಕೇಳಿ ನನಗೆ ಸಂಕಟವಾಗುತ್ತದೆ. ಉದಾಹರಣೆಗೆ, ‘ಅಗಚ್ಛತ್ಎನ್ನುವ ಪದವನ್ನುಅಗಚ್ಛತಎಂದು ಉಚ್ಚರಿಸಿದಾಗ ಎಂತಹ ವಿಪರ್ಯಾಸವಾಗುತ್ತದೆ!

ಕನ್ನಡ ಭಾಷೆಗೆ ಕೆಲವು ಹೊಸ ಚಿಹ್ನೆಗಳ ಅಗತ್ಯವಿದೆ. ಉದಾಹರಣೆಗೆ  ಅರ್ಧಚಂದ್ರದ  ಉಪಯೋಗ. John ಪದವನ್ನು ಕನ್ನಡದಲ್ಲಿ ಬರೆಯುವ ವಿಧಾನ. ಈ ಪದವನ್ನು ಮೈಸೂರಿಗರುಜಾನ್ಎಂದು ಬರೆಯುತ್ತಾರೆ. ಮಂಗಳೂರಿಗರುಜೋನ್ಎಂದು ಬರೆಯುತ್ತಾರೆ.  ಜಾನ್ ಎಂದಾಗ ಉಚ್ಚಾರ ತಪ್ಪುತ್ತದೆ. ಜೋನ್ ಎನ್ನುವುದು ಹುಡುಗಿಯ ಹೆಸರು! ಈ ಪದವನ್ನು ಏಕೀಕರಣಕ್ಕಿಂತ ಮೊದಲು ಹೇಗೆ ಬರೆಯುತ್ತಿದ್ದರು? ಹುಬ್ಬಳ್ಳಿಯಿಂದ ಪ್ರಕಟವಾಗುವ ಪತ್ರಿಕೆಗಳು ಈ ಪದವನ್ನು ಜಾನ್ ಎಂದು ಬರೆಯುತ್ತಿದ್ದವು. ಆದರೆ ಉತ್ತರ ಕರ್ನಾಟಕದ ಅರ್ಧಚಂದ್ರ ಚಿಹ್ನೆಯನ್ನು ಮೈಸೂರಿಗರು ಬಳಸುವುದು ಸಾಧ್ಯವೆ? ಇದು ಅವರಿಗೆ ಅವಮಾನವಲ್ಲವೆ? ಆದುದರಿಂದ ಈ ಅರ್ಧಚಂದ್ರ ಚಿಹ್ನೆಗೆ ಅರ್ಧಚಂದ್ರ ಪ್ರಯೋಗವಾಯಿತು!

() ಮೈಸೂರು ಕನ್ನಡಿಗರಲ್ಲಿ ಒಂದು ವಿಚಿತ್ರವಾದ ಸಿದ್ಧಾಂತವಿದೆ. ಇದನ್ನು ಅವರುಜಾಯಮಾನ ಸಿದ್ಧಾಂತಎಂದು ಹೇಳುತ್ತಾರೆ. ಈ ಸಿದ್ಧಾಂತದ ಮೇರೆಗೆ ದ್ರಾವಿಡ ಭಾಷೆಗಳಲ್ಲಿ ಮಹಾಪ್ರಾಣವಿಲ್ಲ. ಆದುದರಿಂದ ನಾವು ಮಹಾಪ್ರಾಣವಿರುವ ಪದಗಳನ್ನು ಅಲ್ಪಪ್ರಾಣವಾಗಿಯೇ ಉಚ್ಚರಿಸಬೇಕು. ಉದಾಹರಣೆಗೆ ನಮ್ಮ ರಾಷ್ಟ್ರಗೀತೆಯಲ್ಲಿರುವಭಾರತ ಭಾಗ್ಯ ವಿಧಾತಾಎನ್ನುವ ಸಾಲನ್ನು ಕನ್ನಡಿಗರುಬಾರತ ಬಾಗ್ಯ ವಿದಾತಾಎಂದೇ ಹಾಡಬೇಕು

(ಕನ್ನಡದ ಪ್ರಸಿದ್ಧ ಗಾಯಕರಾದ ಅಶ್ವತ್ಥರು ಒಮ್ಮೆ ಧಾರವಾಡಕ್ಕೆ ಬಂದಾಗ ಸಾರ್ವಜನಿಕ ಸಂಗೀತ ಶಿಬಿರವನ್ನು ಏರ್ಪಡಿಸಿದ್ದರು. ಅಶ್ವತ್ಥರುಬಾರತ ಬಾಗ್ಯ ವಿದಾತಾಎಂದು ಹಾಡಿದರೂ ಸಹ ಧಾರವಾಡದ ಜನರುಭಾರತ ಭಾಗ್ಯ ವಿಧಾತಾಎಂದೇ ಉಚ್ಚರಿಸುತ್ತಿದ್ದರು, ಅಪ್ರಯತ್ನವಾಗಿ. ಸಿಟ್ಟಿನಿಂದ ಅಶ್ವತ್ಥರು ಮತ್ತೆ ಮತ್ತೆ  ‘ಬಾರತ ಬಾಗ್ಯ ವಿದಾತಾಎಂದು ಪುನರುಚ್ಚರಿಸುತ್ತಿದ್ದರು. ಇಲ್ಲಿಯ ಜನ ಅಪ್ರಯತ್ನವಾಗಿ, ಮತ್ತೆ ಮತ್ತೆ ಭಾರತ ಭಾಗ್ಯ ವಿಧಾತಾಎಂದೇ ಹೇಳುತ್ತಿದ್ದರು. ಅಶ್ವತ್ಥರುಈ ಮುಠ್ಠಾಳರನ್ನು ತಿದ್ದುವುದು ಅಸಾಧ್ಯಎಂದು ತಿಳಿದರೇನೊ? ತಮ್ಮ ಪ್ರಯತ್ನದ ಕೈ ಬಿಟ್ಟರು.)

ಜಾಯಮಾನದ ಪ್ರಶ್ನೆಯನ್ನು ಎತ್ತಿದಾಗ, ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯದು ಎಂದು (ತಪ್ಪಾಗಿ) ಗ್ರಹಿಸಲಾದ ತಮಿಳು ಭಾಷೆಯನ್ನೇ ಪ್ರಮಾಣವೆಂದು ಹಿಡಿಯಲಾಗುತ್ತಿದೆ. ತಮಿಳಿನಲ್ಲಿ ಮಹಾಪ್ರಾಣವಿಲ್ಲ; ಆದುದರಿಂದ ಕನ್ನಡದಲ್ಲಿಯೂ ಅದು ಇರತಕ್ಕದ್ದಲ್ಲ. ತಮಿಳಿನಲ್ಲಿಕೃಪಾಎನ್ನುವ ಪದಕ್ಕೆಕಿರುಬಾಎನ್ನುತ್ತಾರೆ. ನಾವೂ ಹಾಗೆಯೇ ಅನ್ನೋಣವೆ, ಬರೆಯೋಣವೆ?  ‘ಗಾಂಧಿಗೆಕಾಂದಿಎನ್ನುತ್ತಾರೆ. ನಾವೂ ಹಾಗೆಯೆ ಅನ್ನೋಣವೆ, ಬರೆಯೋಣವೆ? ಕನ್ನಡದಲ್ಲಿ ಅಂಕೆಗಳಿಗೆ ಸ್ವಂತ ಚಿಹ್ನೆಗಳು ಇರುವಂತೆ  ತಮಿಳಿನಲ್ಲಿ ಇಲ್ಲ. ಆದುದರಿಂದ ಅವರು ರೋಮನ್ ಅಂಕೆಗಳನ್ನೇ ಬಳಸುತ್ತಾರೆ. ಮೈಸೂರು ಸಂಸ್ಥಾನದಲ್ಲಿ ತಮಿಳು ಅಧಿಕಾರಿಗಳ ಪ್ರಾಬಲ್ಯವಿದ್ದಾಗ, ಇಲ್ಲಿಯೂ ಸಹ ರೋಮನ್ ಅಂಕೆಗಳ ಬಳಕೆ ಪ್ರಾರಂಭವಾಯಿತು. ಇದೂ ಈಗಲೂ ಇರುವುದೇಕೆ  ಎನ್ನುವುದೆ ನನ್ನ ಅಳಲು.

ಓದುಗರೆ, ಭಾಷೆಯು ನಿಂತ ನೀರಲ್ಲ, ನಿಂತ ನೀರಾದರೆ ಅದು ಬೆಳೆಯಲಾರದು. ಸಾವಿರಾರು ವರ್ಷಗಳ ಹಿಂದೆ, ಕನ್ನಡದಲ್ಲಿ ಇಷ್ಟೆಲ್ಲ ಪದಗಳು ಹಾಗು ಉಚ್ಚಾರಗಳು ಇರಲೇ ಇಲ್ಲ. ಎಲ್ಲಾ ದ್ರಾವಿಡ ಭಾಷೆಗಳು ಇತರ ಅನೇಕ ಭಾಷೆಗಳಿಂದ ಆಮದಾದ ಉಚ್ಚಾರಗಳನ್ನು ಹಾಗು ಪದಗಳನ್ನು ಸ್ವೀಕರಿಸಿಯೇ ಬೆಳೆದಿವೆಉದಾಹರಣೆಗೆ ಲಿಂಗವೆನ್ನುವುದು ಆರ್ಯಭಾಷೆಯ ಪದವೂ ಅಲ್ಲ, ದ್ರಾವಿಡ ಭಾಷೆಯ ಪದವೂ ಅಲ್ಲ. ಇದು ಕೋಲ (Austro-Asiatic) ಜನಾಂಗದ ಭಾಷಾವರ್ಗಕ್ಕೆ ಸೇರಿದ ಪದವೆಂದು ಪ್ರಿಲಸ್ಕಿಯವರು ಪ್ರತಿಪಾದಿಸುತ್ತಾರೆ. (Bagachi P.C.: Pre-Aryan and Pre-Dravidian in India, p8).) ಇಲ್ಲಿಗೆ ಕನ್ನಡ ಹಾಗು ಇತರ ಭಾರತೀಯ ಭಾಷೆಗಳು ಎಲ್ಲೆಲ್ಲಿಂದ ಪದಗಳನ್ನು ಆಮದು ಮಾಡಿಕೊಂಡಿವೆ ಎಂದು ಅಚ್ಚರಿಯಾಗಲಿಕ್ಕಿಲ್ಲವೆ? ಅಷ್ಟೇ ಏಕೆ, ಕನ್ನಡ ಲಿಪಿಯು ಸಹ ಉತ್ತರಮೂಲದ ಬ್ರಾಹ್ಮೀ ಲಿಪಿಯ ಒಂದು ರೂಪವಷ್ಟೇ. ಇದನ್ನು ನಾವು ಬಿಸಾಕಿ ಬಿಟ್ಟು ಲಿಪಿಹೀನ ವಿಕಲಾಂಗರಾಗಬೇಕೆ?

ಒಂದು ಕಾಲಕ್ಕೆ ದ್ರಾವಿಡರು ಲಂಗೋಟಿಯನ್ನಷ್ಟೇ ಹಾಕಿಕೊಂಡು ತಿರುಗುತ್ತಿದ್ದರು ಎನ್ನುವ ಕಾರಣಕ್ಕಾಗಿ, ‘ಲಂಗೋಟಿಯೇ ಕನ್ನಡಿಗರ ಜಾಯಮಾನಎನ್ನಲಾದೀತೆ? ‘ಲಂಗೋಟಿ ಬಲು ದೊಡ್ಡದಣ್ಣಎಂದು ದಾಸರಂತೆ ಹಾಡುತ್ತ, ಅಮೇರಿಕಾದಲ್ಲಿ ನಡೆಯುವಅಕ್ಕಸಮ್ಮೇಲನಕ್ಕೆ ಕೇವಲ ಲಂಗೋಟಿಯನ್ನಷ್ಟೇ ಧರಿಸಿ ಹೋಗುತ್ತೀರಾ? ಹಾಗೆ ಹೋದರೆ ಕರ್ನಾಟಕಕ್ಕೆ ಇದ್ದಿರಬಹುದಾದ ಅಷ್ಟಿಷ್ಟು ಮಾನವೂ ಸಹ ಹಾರಿ ಹೋಗಲಿಕ್ಕಿಲ್ಲವೆ

ಜಾಯಮಾನಕ್ಕಿಂತ ಕಾಲಮಾನ ದೊಡ್ಡದು ಎನ್ನುವುದನ್ನು ಕನ್ನಡಿಗರು ಅರಿತುಕೊಳ್ಳಬೇಕು. ಅದಲ್ಲದೆ, ಮಹಾಪ್ರಾಣವು ಉತ್ತರ ಕರ್ನಾಟಕದ ಕನ್ನಡಿಗರಲ್ಲಿ (ಸರಿಯಾದ ಪದಗಳಲ್ಲಿ) ಈಗಾಗಲೇ ಬಳಕೆಯಲ್ಲಿದೆ. ಹಾಗಿದ್ದಾಗ ಅದನ್ನು ಸ್ವೀಕರಿಸಲು ಮೈಸೂರಿಗರಿಗೆ ಏನು ತೊಂದರೆ? ನಾನು ಊಹಿಸಬಲ್ಲೆ: ಇದು ಮೈಸೂರಿಗರ ದೀರ್ಘಕಾಲದ ಅಭ್ಯಾಸ ಬಲ. (ತಮಿಳಿನಿಂದ ಬಂದಂತಹ ಅಭ್ಯಾಸ.) ನನ್ನ ಮಾತಿಗೆ ಎದುರುವಾದಿಗಳು ಯಾವ ತಿರುಗೇಟು ಕೊಡಬಲ್ಲರು ಎನ್ನುವುದನ್ನೂ ನಾನು ಊಹಿಸಬಲ್ಲೆ. ಉತ್ತರ ಕರ್ನಾಟಕದಲ್ಲಿರುವ ಮಹಾಪ್ರಾಣವು ಮರಾಠಿಯ ಪ್ರಭಾವ ಅಲ್ಲವೇನು ಎಂದು ಎದುರುವಾದಿಗಳು ಕೇಳಿಯಾರು.

ಮರಾಠಿಯೇ ಕನ್ನಡದ ಕೂಸಾಗಿರುವಾಗ, ಅದರ ಪ್ರಭಾವವು ಕನ್ನಡದ ಮೇಲೆ ಹೇಗಾದೀತು? ಆದರೂ ಸಹ ತಪ್ಪು ತಿಳಿವಳಿಕೆಗಳು ಬೇರೂರಿರುತ್ತವೆ. ಒಂದು ಉದಾಹರಣೆ: ಮೈಸೂರು ಭಾಷಿಕರಗಡಿಯಾರಹಾಗು ಉತ್ತರ ಕರ್ನಾಟಕದವರಘಡಿಯಾರಇವೆರಡರಲ್ಲಿ ಯಾವುದು ಸರಿ? ರಾಜಪುರೋಹಿತ ಎನ್ನುವ ಭಾಷಾಪಂಡಿತರು ಹೇಳುವುದನ್ನು ಕೇಳಿ: ‘ಗಡಿಯಾರವೇ ಸರಿಯಾದ ಉಚ್ಚಾರ. ಉತ್ತರ ಕರ್ನಾಟಕದವರು ಇದನ್ನು ತಪ್ಪಾಗಿಘಡಿಯಾರಎಂದು ಉಚ್ಚರಿಸುತ್ತಾರೆ’. 

ಅಯ್ಯೊ, ಶಿವನೆ! ಸಂಸ್ಕೃತದಘಟೀಎನ್ನುವ ಪದವು ಹಿಂದಿಯಲ್ಲಿಘಡೀ’  ಎಂದಾಗಿದೆ. ಇದರಿಂದ ಹುಟ್ಟಿದ ಪದ: ಘಡಿಯಾರ. ಇದನ್ನು ಉತ್ತರ ಕನ್ನಡಿಗರುಘಡಿಯಾರಎಂದು ಸರಿಯಾಗಿಯೇ ಉಚ್ಚರಿಸುತ್ತಾರೆ. ರಾಜಪುರೋಹಿತರು ಉತ್ತರ ಕರ್ನಾಟಕದವರೇ. ಬಹುಶಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು ಇರಬಹುದು. ನಂತರ ಮೈಸೂರಿನಲ್ಲಿ ನೆಲೆಸಿದರು. ಇವರೂ ಸಹ ಸರಿಯಾದ ಉಚ್ಚಾರಕ್ಕೆ ಗುಂಡಿ ತೋಡುತ್ತಾರೆ ಎಂದರೆ ಇದೇನು ಕಾಲಮಾನದ ಮಹಿಮೆಯೊ, ಜಾಯಮಾನದ ಮಹಿಮೆಯೊ, ಅಥವಾ ಸ್ಥಳಮಹಿಮೆಯೊ?

() ಕಾಣೆಯಾದ ಹಾಗು ಕಾಣೆಯಾಗುತ್ತಿರುವ ಉತ್ತರ ಕರ್ನಾಟಕದ ಪದಗಳು:
ನಾನು ಓದಿದ ಹಳೆಯ ಪಠ್ಯ ಪುಸ್ತಕಗಳಲ್ಲಿ ಪೇರಲ ಹಣ್ಣು, ಚಿಕ್ಕು ಹಣ್ಣು ಇದ್ದವು. ಇದೀಗ ಕನ್ನಡ ಪಠ್ಯ ಪುಸ್ತಕಗಳಲ್ಲಿ ಕೇವಲ ಸೀಬೆ ಹಣ್ಣು ಅಥವಾ ಸಪೋಟಾ ಹಣ್ಣು ಸಿಗುತ್ತವೆ. ಮೊದಲೆಲ್ಲ ನಾವು ಪೇಟೆಗೆ ಹೋದಾಗ ಅವರೆಕಾಯಿ, ತಿಂಗಳವರೆಕಾಯಿ, ಚವಳಿಕಾಯಿ, ಡೊಣ್ಣಮೆಣಸಿನಕಾಯಿ, ಗಜ್ಜರಿ ಮುಂತಾದ ಕಾಯಿಪಲ್ಲೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ಈಗ ಕೇವಲ ಬೀನ್ಸ, ಫ್ರೆಂಚ್ ಬೀನ್ಸ, ಕ್ಯಾಪ್ಸಿಕಮ್, ಕ್ಯಾರಟ್ ಎನ್ನುವ ಅಪರಿಚಿತ ಪದಗಳೇ ಕಿವಿಯ ಮೇಲೆ ಬೀಳುತ್ತವೆ. ನಾನು ಕಾಯಿಪಲ್ಲೆ ತೆಗೆದುಕೊಳ್ಳುತ್ತಿರುವ ಅಂಗಡಿಯವನಿಗೆ, ‘ಯಾಕಪಾ, ಈಗೇನು ಇಂಗ್ಲೀಶ್ ಪಂಡಿತನಾಗೀಯಾ!’ ಎಂದು ಚೇಷ್ಟೆ ಮಾಡಿದೆ. ಆತ, ‘ಹಂಗೇನಿಲ್ರೀ, ಅವರಿಗೆ ನಮ್ಮ ಕನ್ನಡ ತಿಳಿಯೂದಿಲ್ಲಾಎಂದು ತಿಳಿ ಹೇಳಿದ! ಇದು ಏಕೀಕರಣದ ಪ್ರಭಾವ.

ನಾನು ಹಳೆಯ ಮೈಸೂರಿಗರನ್ನು ದೂರುತ್ತಿಲ್ಲ. ಕಾರಣಾಂತರಗಳಿಂದ ಕರ್ನಾಟಕದ ಅನೇಕ ಭಾಗಗಳಲ್ಲಿ ಕನ್ನಡವು ವಿಭಿನ್ನ ರೂಪಗಳನ್ನು ತಾಳಿದೆ. ಅವರಿಗೆ ಅವರದು ಸರಿ, ನಮಗೆ ನಮ್ಮದು ಸರಿ ಎನ್ನುವ ಜಗಳಾಟ ಸರಿಯಲ್ಲ. ನಾವು ಕೂಡಿ ಬಾಳಬೇಕೆ ಹೊರತು ಹೊಡೆದಾಡಿ ಬೇರೆಯಾಗಬಾರದು. ಆದರೆ ಉತ್ತರ ಕರ್ನಾಟಕದ ಕನ್ನಡವು ಕನ್ನಡವೇ ಅಲ್ಲ ಎನ್ನುವಂತೆ ಕಡೆಗಣಿಸಿದರೆ, ಸರಿಯಾದ ಕನ್ನಡವನ್ನು ವಿರೂಪಗೊಳಿಸಿದರೆ, ಕೇವಲ ಮೈಸೂರು ಕನ್ನಡವನ್ನು ಸಿಂಹಾಸನದ ಮೇಲೆ ಕೂಡಿಸಿದರೆ, ಎಲ್ಲಿಯವರೆಗೆ ನಾವು ಸಹಿಸಿಕೊಳ್ಳಲು ಸಾಧ್ಯ? ಆದುದರಿಂದ ಹಳೆಯ ಮೈಸೂರಿಗರಿಗೆ ನನ್ನ ಕಳಕಳಿಯ ವಿನಂತಿ ಹೀಗಿದೆ:

ಮೈಸೂರಿನವರದೇ ಸರಿ, ಆ ಕನ್ನಡವನ್ನೇ ಇತರರು ಅನುಸರಿಸಬೇಕು ಎನ್ನುವ ಭ್ರಾಂತಿಯನ್ನು ದಯವಿಟ್ಟು ಬಿಡಿ. ಜಾಯಮಾನ ಎನ್ನುವ ಕುತರ್ಕವನ್ನು ದೂರ ಮಾಡಿರಿ. ಸರಿಯಾದ ಕನ್ನಡವನ್ನು ನಿಷ್ಪಕ್ಷಪಾತವಾಗಿ ಗ್ರಹಿಸಿಕೊಳ್ಳಿರಿ. ನಾವೆಲ್ಲರೂ ಕೂಡಿಕೊಂಡುಸರಿಗನ್ನಡಮ್ ಗೆಲ್ಗೆಎನ್ನೋಣ. ಇದು ನಿಮಗೆ ತಪ್ಪೆನಿಸಿದರೆ, ಪ್ರೀತಿಯಿಂದಲೇ ಇಬ್ಭಾಗವಾಗೋಣ!

Wednesday, July 11, 2018

ಕನಸಿನೊಳಗೊಂದು ಕಣಸು......................ಬೇಂದ್ರೆ



                                 ಕನಸಿನೊಳಗೊಂದು ಕಣಸು

                                           ತಾಯಿ ಮಕ್ಕಳ ಸಂವಾದ
                             (ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ)

                                                            (೧)
“ ಯಾರು ನಿಂದವರಲ್ಲಿ ತಾಯೆ ” ಎಂದೆ.
            “ ಯಾರು ಕೇಳುವರೆನಗೆ, ಯಾಕೆ ತಂದೆ? “  
                  
(೨)
“ ಬೇಸರದ ದನಿಯೇಕೆ ಹೆಸರ ಹೇಳಲ್ಲ.”
            “ ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ.”
                       
(೩)
                   “ ನೀನಾರ ಮನೆಯವಳು ಮುತ್ತೈದೆ ಹೇಳು. ”
                                    “ನಾನಾರ ಮನೆಯವಳೊ ಬಯಲನ್ನೆ  ಕೇಳು.”

                    (೪)
“ ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ ? ”
            “ ಗುಪ್ತರಾದರೊ ಏನೊ ಇಷ್ಟರಲ್ಲೆ ! ”

                        (೫)
“ ಇರುವರೇ ಇದ್ದರೇ ಮಕ್ಕಳೆಂಬವರು ? ”
            “ ಇರುವರೆಂದರು ಕೂಡ ಯಾರು ನಂಬುವರು ? ”
                      
(೬)
                                    “ ಮನೆಯಿಲ್ಲವೇ ಇರಲು ಪರದೇಶಿಯೇನು? “
                                                “ ಮನೆಯೆ ಮುನಿದೆದ್ದಿರಲು ಯಾ ದೇಶವೇನು ? ”

(೭)
                        “ ನಿನ್ನ ಮಾತಿನಲಿಹುದು ಒಡಪಿನಂದ ! ”
                                    “ ನನ್ನ ಹತ್ತಿರದೊಂದೆ ಉಳಿದಿಹುದು ಕಂದ. ”  

                                                (೮)
                        “ ರಾಜಮುಖಿ ನಿನ್ನಲ್ಲಿ ರಾಜಕಳೆ ಇಹುದು ! ”
                                    “ ಸಾಜಮಾದರು ಪಕ್ಷವಿದು ವದ್ಯವಹುದು !”

                                                (೯)
                        “ ಯಾವುದಾದರು ನಾಡದೇವಿಯೇ ನೀನು ? ”
                                    “ ಭಾವುಕರ ಕಂಗಳಿಗೆ ದೇವಿಯೇ ನಾನು.”

                                                (೧೦)
                        “ ಈಗ ಬಂದಿಹುದೇಕೆ ಏನು ಬೆಸನ ? ”
                                    “ ಯೋಗವಿಲ್ಲದೆ ತಿಳಿಯದೆನ್ನ ವೆಸನ ! ”        
           
                                                (೧೧)
                        “ ಹಾದಿ ಯಾವುದು ಹೇಳು, ಯಾವ ಯೋಗ ? ”
                                    “ ಆದಿ ಅಂತವು ಇಲ್ಲದಂಥ ತ್ಯಾಗ ! ”

                                                (೧೨)
                        “ ಬೇಡಬಂದಿಹೆ ಏನು ಏನಾದರೊಂದು ? ”
                                    “ ಬೇಡಿದರೆ ಬೇಡಿದುದ ಕೊಡುವೆಯಾ ಇಂದು ? ”
                                               
(೧೩)
                        “ ಅಹುದು ಕೊಡುವೆನು ಎಂದು ನಾನೆನ್ನಬಹುದೇ ? ”
                                    “ ಬಹುದು-ಗಿಹುದಿನ ಶಂಕಿ ವೀರನಹುದೇ ? ”

                                                (೧೪)
                        “ ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ. ”          
                                    “ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ. ”       

                                                 (೧೫)
                        “ ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ.”
                                    “ ಬಲ್ಲವರು ದೈವವನು ಪರಿಕಿಸವರೊಮ್ಮೆ ! ”

                                                (೧೬)
                        “ ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ? ”
                                    “ಗಂಡುಸಾದರೆ ನಿನ್ನ ಬಲಿಕೊಡುವಿಯೇನು ? ”
                                               
                                  *          *            *

                                          (೧೭)
                        ಮನವು ನಡುಗಿತು ತನುವು ನವಿರಿಗೊಳಗಾಯ್ತು:
                                    ನೆನವು ನುಗ್ಗಿತು—ಹೊರಗೆ ಕಂಡೆ—ಬೆಳಗಾಯ್ತು.


ಬೇಂದ್ರೆಯವರ ಈ ಕವನದ ಹೆಸರು ‘ಕನಸಿನೊಳಗೊಂದು ಕಣಸು’. ಕಣಸು ಪದಕ್ಕೆ ನೋಟ, ದೃಶ್ಯ ಎನ್ನುವ ಅರ್ಥಗಳಿವೆ. ಇಲ್ಲಿ ಈ ಪದವನ್ನು ನಾವು ಕಾಣ್ಕೆ (=vision) ಎಂದು ಅರ್ಥೈಸಿಕೊಳ್ಳೋಣ. ಅಂದರೆ ಇದು ಪ್ರತಿನಿತ್ಯ ಬೀಳಬಹುದಾದ ಸಾಮಾನ್ಯ ಕನಸಲ್ಲ; ಬೇಂದ್ರೆಯವರ ಮನದಲ್ಲಿ (--ವಸ್ತುತಃ ಆ ಅವಧಿಯ ಎಲ್ಲ ಕನ್ನಡಪ್ರೇಮಿಗಳ ಮನದಲ್ಲಿ--) ಕನ್ನಡದ ಬಗೆಗೆ ಇರುವ ಚಡಪಡಿಕೆ ಹಾಗು ಅಭಿಲಾಷೆ.

ಬೇಂದ್ರೆಯವರು ಈ ಕವನವನ್ನು ರಚಿಸುವ ಸಂದರ್ಭದಲ್ಲಿ ಕನ್ನಡ ನಾಡು ನಾಲ್ಕು ತುಂಡುಗಳಲ್ಲಿ ಹರಿದು ಹಂಚಿ ಹೋಗಿತ್ತು. ಹಳೆಯ ಮೈಸೂರು ಸಂಸ್ಥಾನವೊಂದನ್ನು ಬಿಟ್ಟರೆ, ಮುಂಬಯಿ ಕರ್ನಾಟಕ, ಹೈದರಾಬಾದ ಕರ್ನಾಟಕ ಹಾಗು ಮದ್ರಾಸ ಕರ್ನಾಟಕಗಳಲ್ಲಿ ಕನ್ನಡಿಗರ ಸ್ಥಿತಿ ಶೋಚನೀಯವಾಗಿತ್ತು. ಮರಾಠಿ, ಉರ್ದು, ತೆಲಗು ಹಾಗು ತಮಿಳು ಭಾಷೆಗಳ ದೊಡ್ಡಾಟದಲ್ಲಿ ಕನ್ನಡ ಭಾಷೆಯು ತಲೆ ಬಗ್ಗಿಸಿಕೊಂಡು ಬಾಳಬೇಕಾಗಿತ್ತು.  ಕನ್ನಡವು ಇಂತಹ ಸ್ಥಿತಿಯಿಂದ ಹೊರಬರಬೇಕು, ತನ್ನ ಗತವೈಭವವನ್ನು ಮತ್ತೆ ಕಾಣಬೇಕು ಎನ್ನುವುದು ಆಲೂರು ವೆಂಕಟರಾಯರು, ಬೆಟಗೇರಿ ಕೃಷ್ಣಶರ್ಮರು, ಬೇಂದ್ರೆಯವರು, ಶ್ರೀರಂಗ ಮೊದಲಾದ ಕನ್ನಡಪ್ರೇಮಿಗಳ, ಕನ್ನಡ ಸಾಹಿತಿಗಳ ಕನಸಾಗಿತ್ತು, ಕಾಣ್ಕೆಯಾಗಿತ್ತು. ಈಗ ಬೇಂದ್ರೆಯವರ ಕನಸನ್ನಷ್ಟು ನೋಡೋಣ:

ಬೇಂದ್ರೆಯವರ ಮನೆಯ ಬಾಗಿಲಿನ ಹೊರಗೆ ಒಬ್ಬ ಗೌರವಸ್ಥ ಆದರೆ ಮಲಿನ ಬಟ್ಟೆಗಳನ್ನು ಧರಿಸಿದ ಓರ್ವ ಪ್ರೌಢ ಸ್ತ್ರೀಯನ್ನು ಬೇಂದ್ರೆಯವರು ಕಾಣುತ್ತಾರೆ.  ಇವಳು ಯಾರು ಎನ್ನುವುದು ಬೇಂದ್ರೆಯವರಿಗೆ ತಿಳಿಯದು. ಆದರೆ ‘ತಾಯಿ ಮಕ್ಕಳ ಸಂವಾದ’ ಎಂದು ಮೊದಲೇ  ಹೇಳಿ ಬಿಡುವ ಮೂಲಕ ಹಾಗು ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ ಎಂದು ಕಂಸಿನಲ್ಲಿ ಹೇಳುವ ಮೂಲಕ ಇವಳು ಕನ್ನಡ ತಾಯಿ ಎಂದು ಓದುಗರಿಗೆ ಬೇಂದ್ರೆಯವರು ಸ್ಪಷ್ಟಪಡಿಸುತ್ತಿದ್ದಾರೆ. ಹೀಗೇಕೆ ಎಂದು ಓದುಗರು ಕೇಳಬಹುದು. ಕನಸಿನಲ್ಲಿ ನಡೆದ ಈ ಸಂವಾದದಲ್ಲಿ ಬೇಂದ್ರೆಯವರು ಪ್ರತಿಯೊಂದು ನುಡಿಯಲ್ಲಿಯೂ ಕನ್ನಡ ಮಾತೆಯ ಚಿತ್ರವನ್ನು ಹಂತಹಂತವಾಗಿ ವಿಶಾಲಿಸುತ್ತ ಹೊರಟಿದ್ದಾರೆ. ಅವಳ ಸದ್ಯದ ಸ್ಥಿತಿ ಹಾಗು ಮೊದಲೊಮ್ಮೆ ಅವಳಿಗಿದ್ದ ಪ್ರತಿಷ್ಠಿಕೆಯನ್ನು ತೋರಿಸಲು, (ಕವಿಗೆ ತಿಳಿಯದ ಆದರೆ ಓದುಗರಿಗೆ ತಿಳಿದಿರುವ) ಈ ವಿಧಾನವು ಅನುಕೂಲಕರವಾದ ಸಾಧನವಾಗಿದೆ.

ಸರಿ, ಬೇಂದ್ರೆಯವರು ಆ ಸ್ತ್ರೀಯನ್ನು ನೋಡಿದರು. ಗೌರವ ಹುಟ್ಟುವಂತಹ ನಿಲುವು ಅವಳದು. ಇದೀಗ ಇವಳೇಕೆ ಇಲ್ಲಿ ಬಂದು ನಿಂತಿಹಳು ಎನ್ನುವ ಸಹಜ ಕುತೂಹಲದಿಂದ ಬೇಂದ್ರೆಯವರು ಆ ಸ್ತ್ರೀಗೆ ಗೌರವದಿಂದಲೇ ಕೇಳುತ್ತಾರೆ:
           “ ಯಾರು ನಿಂದವರಲ್ಲಿ ತಾಯೆ ” ಎಂದೆ.
ಇದೀಗ ಚಕಿತಳಾಗುವುದು ಆ ಸ್ತ್ರೀಯ ಸರದಿ. ತನ್ನನ್ನು ಮಾತನಾಡಿಸುವವರೆ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ, ತನ್ನನ್ನು ‘ತಾಯಿ’ ಎಂದು ಸಂಬೋಧಿಸಿ ಮಾತನಾಡುವ ಇವರು ಯಾರು ಎಂದು ಆ ಸ್ತ್ರೀ ಅಚ್ಚರಿ ಪಡುತ್ತಾಳೆ. ಹೀಗಾಗಿ ಅವಳು ಬೇಂದ್ರೆಯವರನ್ನೇ ಮರಳಿ ಕೇಳುತ್ತಾಳೆ:
“ ಯಾರು ಕೇಳುವರೆನಗೆ, ಯಾಕೆ ತಂದೆ? ” 

ಆದರೆ ‘ಈ ಸ್ತ್ರೀಯು ನಿರ್ಲಕ್ಷಿಸುವಂತಹ ವ್ಯಕ್ತಿಯಲ್ಲ. ಇವಳು ಚೆನ್ನಾಗಿ ಬಾಳಿದ ಗೌರವಸ್ಥ ಮನೆತನದ ಹೆಣ್ಣುಮಗಳು. ಏನೋ ಸಮಸ್ಯೆ ಬಂದುದರಿಂದ ಇದೀಗ ಇವಳು ಬೇಸರದಲ್ಲಿದ್ದಾಳೆ’ ಎನ್ನುವುದು ಬೇಂದ್ರೆಯವರ ಅನಿಸಿಕೆಯಾಗಿದೆ. ಆದುದರಿಂದ ಅವಳನ್ನು ಸಮಾಧಾನಪಡಿಸುತ್ತ ಅವರು ಮರುಪ್ರಶ್ನಿಸುತ್ತಾರೆ:
         “ ನೀನಾರ ಮನೆಯವಳು ಮುತ್ತೈದೆ ಹೇಳು. ”
ಇಲ್ಲಿ ನೋಡಿ. ಬೇಂದ್ರೆಯವರು ಅವಳಿಗೆ ‘ಮುತ್ತೈದೆ’  ಎಂದು ಸಂಬೋಧಿಸುತ್ತಿದ್ದಾರೆ. ‘ತಾಯೆ’ ಎಂದು ಮೊದಲಿಗೆ ಕರೆದಾಗ, ಅದು ಕೇವಲ ನಯ-ವಿನಯದ ಕರೆಯಾಗುತ್ತದೆಯೇ ಹೊರತು, ಗೌರವಸೂಚಕ ಸಂಬೋಧನೆಯಾಗುವುದಿಲ್ಲ. ‘ಮುತ್ತೈದೆ’ ಎನ್ನುವ ಪದವು ಒಬ್ಬ ಹೆಣ್ಣುಮಗಳ ಹಿರಿತನವನ್ನು ಸೂಚಿಸುವ ಪದವಾಗಿದೆ. 
ಈ ಪ್ರಶ್ನೆಗೆ ಅವಳ ಉತ್ತರವೇನು?
“ ನಾನಾರ ಮನೆಯವಳೊ ಬಯಲನ್ನೆ  ಕೇಳು.”
ಇದೊಂದು ಆಘಾತಕಾರಿ ಹಾ ಚಮತ್ಕಾರಿ ಉತ್ತರ. ಕವಿಯ ಸರಳ ಪ್ರಶ್ನೆಗೆ ಅವಳು ಸರಳ ಉತ್ತರ ಕೊಡುವುದಿಲ್ಲ. ವ್ಯಾವಹಾರಿಕವಾಗಿ ಅರ್ಥೈಸಿಕೊಳ್ಳುವದಾದರೆ, ಮನೆಯಿಲ್ಲದವರಿಗೆ ಬಯಲೇ ಒಂದ ಮನೆ. ಇದು ಸಾಮಾನ್ಯ ಊಹೆ. ಇದು ಕವಿಗೆ ಅವಳು ಕೊಡುವ ಕಠೋರವಾದ, ನಿರ್ದಾಕ್ಷಿಣ್ಯವಾದ  ಉತ್ತರ.

ಆದರೆ ಈ ಹೆಣ್ಣುಮಗಳ ಉತ್ತರ ಬಹಳ ಅರ್ಥಗರ್ಭಿತವಾಗಿದೆ. ‘ಬಯಲು’ ಅಂದರೆ ‘ನಾಡು’. ಈ ವಿಶಾಲವಾದ ನಾಡೆಲ್ಲವೂ ಅವಳ ಮನೆಯೇ. ಇದು ಶ್ಲೇಷಾತ್ಮಕ ಉತ್ತರ. ಆದುದರಿಂದಲೇ ಆ ಹೆಣ್ಣುಮಗಳು ಕವಿಗೆ ‘ಬಯಲನ್ನೆ ಕೇಳು’ ಎನ್ನುವ ತಪರಾಕಿಯನ್ನು ಸೌಮ್ಯವಾಗಿಯೇ ಕೊಡುತ್ತಾಳೆ! (ಅದನ್ನು ಬೇಂದ್ರೆಯ ಊಹಿಸಿರಬಹುದು. ಆದುದರಿಂದಲೇ ಅವರು ತಮ್ಮ ಮುಂದಿನೊಂದು ಪ್ರಶ್ನೆಯಲ್ಲಿ, ‘ಯಾವುದಾದರು ನಾಡದೇವಿಯೆ ನೀನು?’ ಎಂದು ಕೇಳಿದ್ದು.)

ಆಯಿತು ಬಿಡಿ. ಇವಳಿಗೆ ಮನೆ ಇದ್ದಂತಿಲ್ಲ. ಆದರೆ ಸಮಾನಶ್ರೇಣಿಯ, ಹಿರಿಕಿರಿಯರಾದ ಆಪ್ತೇಷ್ಟರು ಇವಳಿಗೆ ಇರಬಹುದಲ್ಲ? ಅವರು ಇವಳಿಗೆ ತಮ್ಮ ಮನೆಯಲ್ಲಿ ಆಶ್ರಯ ಕೊಡಬಹುದಲ್ಲ? ಆದುದರಿಂದ ಬೇಂದ್ರೆಯವರು ಮತ್ತೆ ಕೇಳುತ್ತಾರೆ:
          “ ಆಪ್ತರಿಲ್ಲವೆ ನಿನಗೆ ಇಷ್ಟರಿಲ್ಲೇ? ”
ಬೇಂದ್ರೆಯವರ ಕವನಗಳಲ್ಲಿ ಇರುವ ಕ್ರಮಬದ್ಧತೆಯನ್ನು ಗುರುತಿಸಿರಿ. ಈ ಮುತ್ತೈದೆ ತನ್ನ ಮನೆಯಿಂದ ಯಾವುದೋ ಕಾರಣಕ್ಕಾಗಿ ಹೊರಬಿದ್ದಿದ್ದಾಳೆ. ಆದರೆ ಇವಳಿಗೆ ತನ್ನ ತವರಿನಲ್ಲಿ ಅಥವಾ ಆಪ್ತೇಷ್ಟರಲ್ಲಿ ಸ್ವಾಗತ ಇರಬಹುದಲ್ಲವೆ? ಅವರು ಇವಳಿಗೆ ಆಶ್ರಯ ಕೊಡಬಹುದಲ್ಲವೆ? ಆದುದರಿಂದ ಬೇಂದ್ರೆಯವರು ಇವಳ ಆಪ್ತರ ಬಗೆಗೆ ಪ್ರಶ್ನಿಸಿದರು. ಈ ಆಪ್ತರು ಇಲ್ಲವಂತಲ್ಲ. ಆದರೆ ದುರ್ದಶೆ ಬಂದಾಗ ಆಪ್ತೇಷ್ಟರು ಕಣ್ಮರೆಯಾಗುವುದು ಸಹಜ!
“ ಗುಪ್ತರಾದರೊ ಏನೊ ಇಷ್ಟರಲ್ಲೆ! ”

ಆಪ್ತೇಷ್ಟರು ದೂರವಾದಾರು; ಆದರೆ ಮಕ್ಕಳು ಮಾತ್ರ ತಮ್ಮ ತಾಯಿಯ ಕೈ ಬಿಡಲಾರರು ಎನ್ನುವುದು ಸಾಮಾನ್ಯ ಕಲ್ಪನೆ. ಇದಕ್ಕೆ ಅಪವಾದಗಳೂ ಇವೆ. ಆದುದರಿಂದ ಬೇಂದ್ರೆಯವರು ಇನ್ನು ಅವಳ ಮಕ್ಕಳ ಬಗೆಗೆ ಸ್ವಲ್ಪ ಗಡುಚಾಗಿಯೇ ಕೇಳುತ್ತಾರೆ:
“ ಇರುವರೇ ಇದ್ದರೇ ಮಕ್ಕಳೆಂಬವರು ? ”
         
ತಾಯಿಗೆ ಮಕ್ಕಳೇ ದೊಡ್ಡ ಸಂಪತ್ತು. ಅವರು ಇದ್ದರೆ, ಈ ತಾಯಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದುದರಿಂದ ಬೇಂದ್ರೆಯವರು ಶಂಕಿಸುತ್ತಲೇ “ಇರುವರೇ ಇದ್ದರೇ ಮಕ್ಕಳೆಂಬವರು ?” ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಅವಳೊಂದು ಮತ್ತೊಂದು ಆಘಾತಕಾರೀ ಉತ್ತರವನ್ನೇ ಕೊಡುತ್ತಾಳೆ:
“ ಇರುವರೆಂದರು ಕೂಡ ಯಾರು ನಂಬುವರು ? ”
ಇವಳಿಗೆ ಮಕ್ಕಳಿದ್ದಾರೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ! ಅಪುತ್ರಾಯಾಃ ಗತಿರ್ನಾಸ್ತಿ!

ಪಾಪ, ಇವಳಿಗೆ ಬಂಧು ಬಳಗವಿಲ್ಲ; ಮಕ್ಕಳಿಲ್ಲ. ಈ ಅನಾಥೆ ಎಲ್ಲಿರಬೇಕು?  ಹಾಗಾಗಿ ಮತ್ತೊಂದು ಸಹಜವಾದ ಪ್ರಶ್ನೆ ಬೇಂದ್ರೆಯವರ ಮನದಲ್ಲಿ ಮೂಡುತ್ತದೆ:
“ ಮನೆಯಿಲ್ಲವೇ ಇರಲು ಪರದೇಶಿಯೇನು? ”
ಪರದೇಶಿ ಎನ್ನುವಲ್ಲಿಯ ಶ್ಲೇಷೆಯನ್ನು ಗಮನಿಸಿರಿ. ಪರದೇಶಿ ಪದಕ್ಕೆ ಅನಾಥ ಎನ್ನುವ ಅರ್ಥವಿರುವಂತೆಯೇ, ಬೇರೆ ನಾಡಿನವಳು ಎನ್ನುವ ಅರ್ಥವೂ ಇದೆ. ಎಂತಹ ಸಂಕಟದ ವಿಷಯ. ಕನ್ನಡ ಮಾತೆಯು ತನ್ನ ನಾಡಿನಲ್ಲಿಯೆ, ಬೇರೊಂದು ನಾಡಿನವಳು (alien) ಎನ್ನಿಸಿಕೊಳ್ಳಬೇಕೆ? ಕನ್ನಡ ನಾಡಿನಲ್ಲಿ ಕನ್ನಡಿಗರೇ ತಮ್ಮ ತಾಯಿನುಡಿಯನ್ನು ಮರೆತು ಇತರ ಭಾಷೆಗಳಿಗೆ ಮರುಳಾದದ್ದೇ ಇದಕ್ಕೆ ಕಾರಣವಾಗಿರಬಹುದು. (ಕನ್ನಡಿಗರು ಸತತವಾಗಿ ಪರಭಾಷಾಪ್ರಭುಗಳ ಅಡಿಯಲ್ಲಿ ಬದುಕಿದ್ದೂ ಇದಕ್ಕೆ ಕಾರಣವಾಗಿರಬಹುದು.) ಆ ಸ್ತ್ರೀಯು ತನ್ನ ಸಂಕಟವನ್ನು ಈ ರೀತಿ ತೋಡಿಕೊಳ್ಳುತ್ತಾಳೆ:
“ ಮನೆಯೆ ಮುನಿದೆದ್ದಿರಲು ಯಾ ದೇಶವೇನು ? ”
ತಾನು ಪರದೇಶಿಯಲ್ಲ. ಆದರೆ ತನ್ನ ಮನೆಯ ಮಕ್ಕಳೇ ತನಗೆ ಮುನಿದುಕೊಂಡಿದ್ದಾರೆ. ತಮ್ಮಾಯಿನುಡಿಯನ್ನು ಅವು ಮೆತಿದ್ದಾರೆ. ಆದುದರಿಂದ ತನಗೆ ತನ್ನ ಮನೆ ಎನ್ನುವದೊಂದು ಉಳಿದಿಲ್ಲ ಎನ್ನುವ ವ್ಯಥೆ ಇಲ್ಲಿ ಕಾಣುತ್ತದೆ.

ಇಲ್ಲಿಯವರೆಗಿನ ಆರು ನುಡಿಗಳಲ್ಲಿ ಕವಿಗೆ ಈ ಸ್ತ್ರೀಯ ಬಗೆಗೆ ಇರುವ ಕನಿಕರ ಮಾತ್ರ ಾಣುತ್ತದೆ. ಇನ್ನು ಮುಂದಿನ ಹತ್ತು ನುಡಿಗಳಲ್ಲಿ ಅವಳ ಬಗೆಗೆ ಕವಿಗೆ ಗೌರವ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದನ್ನು ಕಾಣಬಹುದು. ಅವಳ ಮಾತುಗಳಲ್ಲಿ ಏನೋ ಗೂಢವಿದೆ, ಇವಳು ಸಾಮಾನ್ಯ ಸ್ತ್ರೀ ಅಲ್ಲ; ಇವಳು ಸುಸಂಸ್ಕೃತೆ, ಚೆನ್ನಾಗಿ ಬಾಳಿದವಳು ಎನ್ನುವ ಭಾವನೆಯಿಂದ ಕವಿ ಮತ್ತೆ ಕೇಳುತ್ತಾನೆ:
“ ನಿನ್ನ ಮಾತಿನಲಿಹುದು ಒಡಪಿನಂದ ! ”
ಈ ಪ್ರಶ್ನೆಗೂ ಆ ಸ್ತ್ರೀ ಗೂಢವಾಗಿಯೇ ಉತ್ತರಿಸುತ್ತಾಳೆ. ಜೊತೆಗೆ ತನ್ನ ಸದ್ಯದ ಸ್ಥಿತಿಯನ್ನೂ ತಿಳಿಸುತ್ತಾಳೆ:
                                    “ ನನ್ನ ಹತ್ತಿರದೊಂದೆ ಉಳಿದಿಹುದು ಕಂದ. ”     
ಇವಳ ಬಗೆಗೆ ಕವಿಯಲ್ಲಿ ಗೌರವ ಹೆಚ್ಚುತ್ತಿರುವಂತೆಯೇ, ತನಗೆ ಅನುಕಂಪ ತೋರುತ್ತಿರುವ ಈ ಕವಿಯ ಬಗೆಗೆ ಆ ಸ್ತ್ರೀಯಲ್ಲೂ ಸಹ ವಾತ್ಸಲ್ಯಭಾವ ಉದಯಿಸುತ್ತದೆ. ಆದುದರಿಂದಲೇ ಅವಳು ಕವಿಗೆ ‘ಕಂದ’ ಎಂದು ಸಂಬೋಧಿಸುತ್ತಾಳೆ.

ತಾನು ಕೇಳಿದ ಪ್ರಶ್ನೆಗಳಿಗೆ, ಈ ಹೆಣ್ಣುಮಗಳು ಕೊಡುವ ಉತ್ತರಗಳ ಧಾಟಿಯನ್ನು ನೋಡಿದಾಗ, ಕವಿಗೆ ಒಂದು ಅರಿವು ದೃಢವಾಗುತ್ತಿದೆ, ಇವಳು ಒಂದು ಕಾಲದಲ್ಲಿ ಸಾಂಸ್ಕೃತಿಕವಾಗಿ ಹಾಗು ಸಾಮಾಜಿಕವಾಗಿ ಬಹು ದೊಡ್ಡ ಸ್ತರದಲ್ಲಿ ಇದ್ದವಳು ಎಂದು. ಆದುದರಿಂದಲೇ ಆತ ಉದ್ಗರಿಸುತ್ತಾನೆ:
“ ರಾಜಮುಖಿ ನಿನ್ನಲ್ಲಿ ರಾಜಕಳೆ ಇಹುದು !”
ಇದೇನೂ ಸುಳ್ಳಲ್ಲವಲ್ಲ! ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದಿಂದ ಆಳಿದ ಕರ್ನಾಟಕ ಚಕ್ರವರ್ತಿಗಳು ಇವರೆಲ್ಲ ಕನ್ನಡ ಧ್ವಜವನ್ನು ಮೆರೆಸಿದವರೇ ಅಲ್ಲವೆ? ಆದರೆ ಈಗಿನ ಪರಿಸ್ಥಿತಿ ಏನು? ಕನ್ನಡ ನಾಡಿನ ಶುಕ್ಲಪಕ್ಷ ಮುಗಿದಿದೆ. ಇದೀಗ ಕೃಷ್ಣಪಕ್ಷ. ಅದನ್ನೇ ಕನ್ನಡ ಾಜಾಜೇಶ್ವಿ ಹೀಗೆ ಹೇಳುತ್ತಾಳೆ:
“ ಸಾಜಮಾದರು ಪಕ್ಷವಿದು ವದ್ಯವಹುದು ! ”
ನ್ನಲ್ಿ ರಾಜೆ ಇರುವುದು ಸಾದದ್ದೆ. ಆದ ಇದೀಗ ಕೃಷ್ಣಪಕ್ಷ ಬಂದಿದೆ; ಇದೇನು ಸ್ಥಿರವಲ್ಲ. ಶುಕ್ಲಪಕ್ಷ ಮತ್ತೆ ಬರಲೇಬೇಕು. ಇದ ಕನ್ನಡ ತಾಯಿಯ ಆಸೆ, ಆಶಯ.

ಈ ಮಾತನ್ನು ಕೇಳುತ್ತಿದ್ದಂತೆಯೆ ಬೇಂದ್ರೆಯವರಿಗೆ ಸ್ಪಷ್ಟವಾದ ಅರಿವು ಮೂಡತೊಡಗಿದೆ. ಮೊದಲು, ರಾಜಮುಖಿ ಎಂದವರು ಇದೀಗ ಇವಳು ದೇವತಾಸ್ವರೂಪಳು ಎನ್ನುವ ಭಾಸವಾಗುತ್ತದೆ. ಆದುದರಿಂದ ಅವರು ಮತ್ತೆ ಕೇಳುತ್ತಾರೆ:
“ ಯಾವುದಾದರು ನಾಡದೇವಿಯೇ ನೀನು ? ”
ಆ ತಾಯಿ ‘ಹೌದು’ ಎನ್ನುವುದಿಲ್ಲ. ಯಾರು ತನ್ನ ತಾಯಿನಾಡು ಹಾಗು ತಾಯಿನುಡಿಯಲ್ಲಿ ಭಕ್ತಿಯನ್ನು ಇಡುತ್ತಾರೆಯೋ, ಯಾರ ಅಂತಂಗಲ್ಲಿ ಅಮೂರ್ತಳಾದ ತಾನು ಮೂರ್ತಸ್ವರೂಪಳಾಗುತ್ತೇನೆಯೊ, ಅಂಥವರಿಗೆ ಮಾತ್ರ ತಾನು ದೇವಿ ಎನ್ನುವ ಅಂತಃಸತ್ಯ ಅವಳಿಗೆ ತಿಳಿದಿದೆ. ಆದುದರಿಂದ ಅವಳು ಮತ್ತೊಂದು ಒಡಪನ್ನು ಹೇಳುತ್ತಾಳೆ:
                                    “ ಭಾವುಕರ ಕಂಗಳಿಗೆ ದೇವಿಯೇ ನಾನು.”
ೇಂದ್ರೆಯರ ಕಲ್ಪಾಶಕ್ತಿ ಎಷ್ಟೇ ಅಗಾಗಿದ್ದೂ, ಅದು ವಾಸ್ತೆಯಿಯನ್ನು ಅತಿಕ್ರಿಸುವುದಿಲ್ಲ ಎನ್ನುವುದಕ್ಕೆ ಈ ವಾಕ್ಯೇ ಸಾಕ್ಿಯಾಗಿದೆ. ಕನ್ನೇವಿ ಎನ್ನುವ ಓರ್ವೇವಿ ವಾಸ್ತಲ್ಲಿ ಇರುವೇ? ಆ ದೇವಿ ಇರುವುದು ಅವಕ್ತಂದಿರಲ್ಲಿ ಮಾತ್ರ. ಆದುದಿಂದ ‘ಭಾವುಕಂಗಿಗೆ ದೇವಿಯೇ ನಾನು’ ಎನ್ನುವುದು ಇಲ್ಲಿಯ ಉತ್ತ.

ಇಂತಹ ಉಚ್ಚ ಸ್ಥಿತಿಯಲ್ಲಿ ಇದ್ದಂತಹ, ರಾಜ್ಞಿಯಾಗಿದ್ದಂತಹ, ದೇವಿ ಎಂದೆನಿಸುವ ಹೆಣ್ಣುಮಗಳಿಗೆ ಇಂತಹ ಸಂತಾಪದ ಸ್ಥಿತಿ ಬಂದಿರುವದಾದರೂ ಏಕೆ? ಇದು ಬೇಂದ್ರೆಯವರ ಪ್ರಶ್ನೆ:
“ ಈಗ ಬಂದಿಹುದೇಕೆ ಏನು ಬೆಸನ ? ”
( ಈ ಮಾತಿನಲ್ಲಿಯ ಶ್ಲೇಷೆಯನ್ನು ಗಮನಿಸಿರಿ. ಬೆಸನ ಇದು ವ್ಯಸನದ ತದ್ಭವ. ಅದರಂತೆಯೇ, ‘ಏನು ಬೆಸನ’ ಎಂದರೆ, ‘ಏನನ್ನು ಆದೇಶಿಸುತ್ತಿರುವೆ? ’ ಎನ್ನುವ ಅರ್ಥವೂ ಬರುತ್ತದೆ.)

ಈ ಸರಳವಾದ ಪ್ರಶ್ನೆಗೆ ಸರಳವಾದ ಉತ್ತರ ಇಲ್ಲವಲ್ಲ! ಯಾರು ತನ್ನ ನಾಡನ್ನು, ನುಡಿಯನ್ನು ತಾನೇ ಎಂದು ತಿಳಿದು ಪ್ರೇಮಪರವಶನಾಗುತ್ತಾನೋ ಅವನಿಗೆ ಮಾತ್ರ ಈ ಸಮಸ್ಯೆ ಏನೆಂದು ಹೊಳೆದೀತು. ಇದು ಯೋಗಸಾಧನೆಯಿಂದ ಮಾತ್ರ ಸಾಧ್ಯ. ಯೋಗ ಎಂದರೆ ತನ್ನ ಧ್ಯೇಯವಸ್ತುವಿನೊಡನೆ ಅಭೇದವಾಗುವುದು. ಅದಕ್ಕಾಗಿಯೇ ಕನ್ನಡಮಾತೆ ತನ್ನ ಮಕ್ಕಳಿಗೆ ಹೇಳುವ ಮಾತು ಹೀಗಿದೆ:
                                    “ ಯೋಗವಿಲ್ಲದೆ ತಿಳಿಯದೆನ್ನ ವೆಸನ ! ” 
ನನ್ನೊಡನೆ ಒಂದಾಗು, ನನ್ನನ್ನು ಅರಿತುಕೊ. ಅಂದರೆ ನನ್ನ ವ್ಯಸನ ನಿನಗೆ ತಿಳಿದೀತು ಎನ್ನುವುದು ಕನ್ನಡ ನಾಡದೇವಿಯ ‘ಯೋಗ’ ಎನ್ನುವ ಮಾತಿನ ಮರ್ಮ.

ಸ್ವಾತಂತ್ರ್ಯ ಹೋರಾಟದ ಕಾಲವು ಆದರ್ಶದ ಕಾಲ. ಯಾವುದೇ ಹೋರಾಟಕ್ಕಾಗಲಿ, ಆಧ್ಯಾತ್ಮದ ಬೆಂಬಲ ಬೇಕೇ ಬೇಕು. ಆದುದರಿಂದಲೇ, ಲೋಕಮಾನ್ಯ ತಿಲಕರು ಮಂಡಾಲೆಯಲ್ಲಿ ಸೆರೆಮನೆಯಲ್ಲಿದ್ದಾಗ ಭಗವದ್ಗೀತೆಗೆ ವ್ಯಾಖ್ಯಾನ ರಚಿಸಿದರು, ಗಾಂಧೀಜಿಯವರು ಪ್ರಾರ್ಥನಾಸಭೆಗಳನ್ನು ಮಾಡುತ್ತಿದ್ದರು. ಅನೇಕ ತರುಣರು ಗೀತಾಪ್ರಣೀತ ಕರ್ಮಯೋಗವನ್ನು ಅನುಸರಿಸಿ ಹೋರಾಡಿದರು, ವಿಧಾಯಕ ಕಾರ್ಯಕ್ರಮಗಳನ್ನು ಕೈಗೊಂಡರು (ಉದಾಹರಣೆಗೆ: ವಿನೋಬಾ ಭಾವೆಯವರು ಗ್ರಾಮಸೇವೆಯನ್ನು ಪ್ರಾರಂಬಿಸಿದರು. ಕನ್ನಡ ನಾಡಿನಲ್ಲಿ ಹರ್ಡೇಕರ ಮಂಜಪ್ಪನವರು ‘ಹುಬ್ಬಳ್ಳಿ ಸೇವಾದಳ’ವನ್ನು ಸ್ಥಾಪಿಸಿದರು.  ರಂಗನಾಥ ದಿವಾಕರರು ‘ಕರ್ಮವೀರ’ ಪತ್ರಿಕೆಯನ್ನು ಪ್ರಾರಂಭಿಸಿದರು.) ಬೇಂದ್ರೆಯವರ ಅನೇಕ ಕವನಗಳಲ್ಲಿ ಯೋಗದ ಪ್ರಸ್ತಾಪ ಬರುತ್ತದೆ. (ಉದಾ: ಹರಕೆ, ಪುನರ್ಯೋಗಾರೂಢ, ತರುಣ ತಪಸ್ವಿ, ಹಂಪೀ-ವಿಜಯನಗರ ದರ್ಶನ ಇತ್ಯಾದಿ. )

ಈಗ ನಮ್ಮ ಕವಿಯು ತಾಯಿಯ ಆಣತಿಯನ್ನು ಅನುಸರಿಸಲು ಸಿದ್ಧನಾಗಿದ್ದಾನೆ. ತಾಯಿಯ ಕೈಂಕರ್ಯಕ್ಕಾಗಿ ಅವನು ಅನುಸರಿಸಬೇಕಾದ ಯೋಗ ಎಂತಹದು?
“ ಹಾದಿ ಯಾವುದು ಹೇಳು, ಯಾವ ಯೋಗ ?
 ಈ ಯೋಗವನ್ನು ಅನುಸರಿಸಬೇಕಾದವನು ತನ್ನ ಇಡೀ ಜೀವನವನ್ನೇ ಈ ಕಾಯಕಕ್ಕೆ ಮುಡುಪಿಡಬೇಕು. ತನ್ನ ಸರ್ವಸ್ವವನ್ನು ಇದಕ್ಕಾಗಿ ತ್ಯಾಗ ಮಾಡಬೇಕು. ತನ್ನ ಮಕ್ಕಳಿಂದ ಕನ್ನಡ ತಾಯಿ ಬಯಸುವ ಯೋಗವಿದು:
“ ಆದಿ ಅಂತವು ಇಲ್ಲದಂಥ ತ್ಯಾಗ ! ”

ಇಷ್ಟಾದರೂ ಕವಿಗೆ ತಾಯಿ ಬಯಸುವ ತ್ಯಾಗದ ಕಲ್ಪನೆ ಬಂದಿಲ್ಲ. ಈ ಹೆಣ್ಣುಮಗಳು ಕೇಳುವುದು ಅಂತಹ ದೊಡ್ಡ ವಸ್ತುವೇನಲ್ಲ; ಸರಳವಾಗಿ ಕೊಡಬಹುದು ಎನ್ನುವ ಭ್ರಮೆಯಲ್ಲಿಯೇ ಇದ್ದಾನೆ. ಆದುದರಿಂದ ಮತ್ತೆ ಅವಳನ್ನು ಕೇಳುತ್ತಾನೆ:
“ ಬೇಡಬಂದಿಹೆ ಏನು ಏನಾದರೊಂದು ? ”
ಆದರೆ ಕನ್ನಡ ತಾಯಿಯು ತನ್ನ ಮಕ್ಕಳಿಂದ ಅಪೇಕ್ಷಿಸುತ್ತಿರುವುದು ಸಣ್ಣ ವಸ್ತುವಲ್ಲ. ಇದನ್ನು ಕೊಡುವ ಶಕ್ತಿಯು ಎಲ್ಲರಲ್ಲಿಯೂ ಇಲ್ಲ ಎನ್ನುವುದು ಆವಳಿಗೆ ಗೊತ್ತಿದೆ. ಆದುದರಿಂದಲೇ ಇವನ ಮಾತನ್ನು ಖಚಿತೊಳಿಸಿಕೊಳ್ಳಲು ಅವಳು ಬಯಸುತ್ತಾಳೆ.
                                    “ ಬೇಡಿದರೆ ಬೇಡಿದುದ ಕೊಡುವೆಯಾ ಇಂದು ? ”

ಈ ಹೆಣ್ಣುಮಗಳು ಇಷ್ಟರವರೆಗೆ ಹೇಳುತ್ತಿರುವದನ್ನು ಕೇಳುತ್ತಿದ್ದ ಕವಿಯು ಅವಳ ವ್ಯಕ್ತಿತ್ವವು ತನ್ನ ಕಣ್ಣಳತೆಯನ್ನು ಮೀರುತ್ತಿರುವುದನ್ನು ಅನುಭವಿಸುತ್ತಿದ್ದಾನೆ. ಇವಳು ಏನು ಕೇಳಬಹುದು, ಅದನ್ನು ಕೊಡಲು ತನ್ನಿಂದ ಸಾಧ್ಯವಾದೀತೆ ಎನ್ನುವ ಶಂಕೆ ಅವನದು. ಆದುದರಿಂದಲೇ ಅವನು ನಿಶ್ಚಿತವಾದ ಉತ್ತರ ಕೊಡಲಾರ:
“ ಅಹುದು ಕೊಡುವೆನು ಎಂದು ನಾನೆನ್ನಬಹುದೇ ? ”
ಇಂತಹ ಅಳ್ಳಕತನವನ್ನು ಕಂಡ ಕನ್ನಡತಾಯಿ ಇವನನ್ನು ಛೇಡಿಸುತ್ತಾಳೆ:
                                    “ ಬಹುದು-ಗಿಹುದಿನ ಶಂಕಿ ವೀರನಹುದೇ ? ”

ಕವಿ ಈಗ ಸಾವಕಾಶವಾಗಿ ಬದಲಾಗುತ್ತಿದ್ದಾನೆ. ‘ನಾನೇನೊ ಸಿದ್ಧ; ಆದರೆ ನನಗೆ ಇನ್ನೂ ಸ್ವಲ್ಪ ಹಿಂಜರಿಕೆಯಿದೆ’ ಎನ್ನುವುದು ಅವನ ಸಮರ್ಥನೆ.
“ ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ. ”
ಕನ್ನಡ ತಾಯಿಯು ಇದೀಗ ತನ್ನ ಪುಕ್ಕ ಮಗನನ್ನು ಪುಸಲಾಯಿಸಲು ಹಾಗು ಅವನಿಗೆ ಧೈರ್ಯ ನೀಡಲು ಪ್ರಯತ್ನಿಸುತ್ತಾಳೆ:
                                    “ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ. ”
         
 ಕವಿಯ ಮನಸ್ಸು ಈಗ ವಿಚಲಿತವಾಗಿದೆ. ಒಮ್ಮೆ ಪ್ರಯತ್ನಿಸಿ ನೋಡಿ ಬಿಡೋಣ ಎನ್ನುವ ಹಂತಕ್ಕೆ ಅವನೀಗ ಬಂದಿದ್ದಾನೆ.
“ ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ.”
‘ಅಮ್ಮೆ’ ಎನ್ನುವ ಆತ್ಮೀಯ ಸಂಬೋಧನೆಯನ್ನು ಗಮನಿಸಿರಿ. ಮೊದಲು ‘ತಾಯೆ’ ಎನ್ನುವ ಸಾರ್ವತ್ರಿಕ ಸಂಬೋಧನೆಯಿಂದ ಮಾತನಾಡಿದ ಕವಿಯು, ಈಗ ‘ಅಮ್ಮೆ’ ಎಂದು  ಆತ್ಮೀಯವಾಗಿ ಸಂಬೋಧಿಸುತ್ತಿದ್ದಾನೆ.

ಈ ನಿಲುವನ್ನು ಆ ಹೆಣ್ಣುಮಗಳು ಪ್ರೋತ್ಸಾಹಿಸುತ್ತಾಳೆ. ಅವನಲ್ಲಿ ಧೈರ್ಯ ತುಂಬುವ ಉದ್ದೇಶದಿಂದ ಅವಳು ಹೇಳುತ್ತಾಳೆ:                                “ ಬಲ್ಲವರು ದೈವವನು ಪರಿಕಿಸವರೊಮ್ಮೆ ! ”
                                   
ಈ ಹೆಣ್ಣುಮಗಳು ಸಾಮಾನ್ಯಳಲ್ಲ; ಇವಳ ಬೇಡಿಕೆಯೂ ಸಾಮಾನ್ಯವಲ್ಲ ಎನ್ನುವ ಅರಿವು ಕವಿಗೆ ಇದೀಗ ಆಗಿದೆ. ಇವಳೊಬ್ಬ ದೇವಿ. ಈ ಉಗ್ರಕಾಳಿಯ ಎದುರಿಗೆ ತಾನು ನಿಂತಿದ್ದೇನೆ ಎನ್ನುವ ಭಾವನೆ ಅವನಲ್ಲಿ ಮೂಡಿದೆ. ಆದುದರಿಂದ ಆತನೂ ಸಹ ಅಸಾಮಾನ್ಯ ಧೈರ್ಯದಿಂದ ಅವಳಲ್ಲಿ ನಿವೇದಿಸುತ್ತಾನೆ:
                                    “ ಚಂಡಿ ಚಾಮುಂಡಿ ಪೇಳ್ ಬೇಕಾದುದೇನು ? ”
ಇವನ ನಿವೇದನೆಯನ್ನು ಆ ದೇವಿಯು ಸ್ವೀಕರಿಸುತ್ತಾಳೆ. ನಾಡ ಉದ್ಧಾರಕ್ಕಾಗಿ ಅವಳಿಗೆ ಬಲಿ ಬೇಕು! ಯಾವ ಬಲಿ ಬೇಕು ಅವಳಿಗೆ?                                     
“ ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು ? ”
ಕೇಳುತ್ತಿರುವವನ ನರಬಲಿ, ಆತ್ಮರ್ಪ!
…………………………………
                                   
“ ಮನವು ನಡುಗಿತು, ತನುವು ನಿಮಿರಿಗೊಳಗಾಯ್ತು:
                            ನೆನವು ನುಗ್ಗಿತು—ಹೊರಗೆ ಕಂಡೆ—ಬೆಳಗಾಯ್ತು.”

ದೇವಿಯ ಕೇಳಿಕೆಯನ್ನು ಕೇಳಿದ ಯಾರ ಮನಸ್ಸು ನಡುಗಲಿಕ್ಕಿಲ್ಲ? ಯಾರ ಮೈಮೇಲೆ ಮುಳ್ಳುಗಳು ಏಳಲಿಕ್ಕಿಲ್ಲ? ಸಹಜವಾಗಿಯೇ ಕವಿಗೂ ಇದೇ ಅನುಭವವಾಯಿತು. ಅವರಿಗೆ ಥಟ್ಟನೆ ಎಚ್ಚರವಾಯಿತು. ಕನಸಿನಲ್ಲಿ ನಡೆದದ್ದೆಲ್ಲ ಅವರ ನೆನಪಿನಲ್ಲಿ ಮತ್ತೆ ಮರುಕಳಿಸಿ ಅವರ ಮೈಮೇಲೆ ಮುಳ್ಳುಗಳು ಎದ್ದಂತೆನಿಸಿತು. ೆನು ‘ನುಗ್ಗಿತು’ ಎಂದು ಬೇಂದ್ರೆಯು ಹೇಳುತ್ತಾರೆ. ಅಂದಾಹ್ಯಸ್ಮೆಯು ಪ್ರಾಹೋಪಾದಿಯಲ್ಲಿ ಅವನ್ನಬ್ಬಿತು. ಇದೀಗ ಪೂರಾ ಎಚ್ಚರವಾಗಿ ಅವರು ಕಣ್ತೆರೆದು ನೋಡಿದರು; ಹೊಸ ದಿನ ಪ್ರಾರಂಭವಾಗಿದೆ, ಹೊರಗೆಲ್ಲ ಬೆಳಕು ತುಂಬಿದೆ. ತಮಗೆ ಕಂಡ ಕಾಣ್ಕೆಯನ್ನು ಕಾರ್ಯರೂಪಕ್ಕೆ ತರಲು ಅವರು ಇದೀಗ ಕೃತನಿಶ್ಚಯರಾಗಿದ್ದಾರೆ.
  .............................................................                            
ಬೇಂದ್ರೆಯವರ ಎಲ್ಲ ಕವನಗಳ ವಿಶಿಷ್ಟತೆ ಎಂದರೆ, ಅವುಗಳಲ್ಲಿ ಕಂಡು ಬರುವ ಕ್ರಮಬದ್ಧತೆ ಹಾಗು ಕಲ್ಪನಾಪ್ರವಾಹ. ಈ ಕವನದಲ್ಲಿಯೂ ಸಹ ಕನ್ನಡದೇವಿಯು ಕವಿಯ ಮನಸ್ಸಿನಲ್ಲಿ ಬೆಳೆಯುತ್ತ ಹೋಗುತ್ತಿರುವಲ್ಲಿ ಇರುವ ಕ್ರಮಬದ್ಧತೆಯನ್ನು ಹಾಗು ಕಲ್ಪನಾಪ್ರವಾಹವನ್ನು  ಗಮನಿಸಬೇಕು.  ಕೊನೆಯ ಸಾಲಿನಲ್ಲಿ ‘ಮನವು ನಡುಗಿತು, ತನುವು ನಿಮಿರಿಗೊಳಗಾಯ್ತು’ ಎನ್ನುವಲ್ಲಿ ಸಹ ಮನೋವಿಜ್ಞಾನದ ಕ್ರಮಬದ್ಧತೆ ಇದೆ. ಕವಿಯೂ ಸಹ ಬದಲಾಗುತ್ತ ಹೋಗುತ್ತಿರುವಲ್ಲಿ ಇರುವ ಕ್ರಮಬದ್ಧತೆಯೂ ಸಹ ಕಣ್ಣಿಗೆ ಕಾಣುವಂತಿದೆ. ಕವನದ ಹಂತಾನುಸಾರೀ ಬೆಳವಣಿಗೆಯೂ ಸಹ ಮೆಚ್ಚತಕ್ಕಂತಹದೇ.  ಕೊನೆಗೊಮ್ಮೆ ದೇವಿಯು ‘ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು? ’ಎಂದು ಥಟ್ಟನೆ ಉದ್ಗರಿಸುವಾಗ, ಓದುಗರಿಗೂ ಸಹ ವಜ್ರಾಘಾತದ ಅನುಭವವಾಗುತ್ತದೆ!

ಒಂದು ಕಾಲದ ಕನ್ನಡದ ಹಾಗು ಕನ್ನಡಿಗರ ಶೋಚನೀಯ ಸ್ಥಿತಿಯ ಬಗೆಗೆ ಅನೇಕರು ಪ್ರಬಂಧಗಳನ್ನು ಬರೆದಿರಬಹುದು. ಆದರೆ ಈ ಕವನವು ಸೃಷ್ಟಿಸುವ ಅನುಭವವನ್ನು ಹಾಗು ಉತ್ತೇಜಕ ಮನೋಸ್ಥಿತಿಯನ್ನು ಸೃಷ್ಟಿಸಲು ಯಾವುದೇ ಬೇರೊಂದು ಕೃತಿಗೆ ಸಾಧ್ಯವಾಗಿಲ್ಲ.

‘ಕನಸಿನೊಳಗೊಂದು ಕಣಸು’ ಕವನವು ‘ಗರಿ’ ಸಂಕಲನದಲ್ಲಿ ಪ್ರಕಟವಾಗಿದೆ.